Tag: ravi belagere

  • ಪಂಚಭೂತಗಳಲ್ಲಿ ರವಿ ಬೆಳಗೆರೆ ಲೀನ- ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ

    ಪಂಚಭೂತಗಳಲ್ಲಿ ರವಿ ಬೆಳಗೆರೆ ಲೀನ- ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ

    ಬೆಂಗಳೂರು: ಹೃದಯಾಘಾತದಿಂದ ಇಂದು ಸಾವನ್ನಪ್ಪಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರ ಅಂತ್ಯಕ್ರಿಯೆ ಬನಶಂಕರಿ ಚಿತಾಗಾರದಲ್ಲಿ ನಡೆಯಿತು.

    ಮಗ ಕರ್ಣ ಮತ್ತು ಹಿಮವಂತ್, ರವಿ ಬೆಳಗೆರೆ ಅವರ ಅಂತಿಮ ಕಾರ್ಯವನ್ನು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿಸಿದರು. ತೇಗ, ಮಾವು, ಸಾರ್ವೆ ಸೇರಿದಂತೆ ವಿವಿಧ 1 ಟನ್‍ಗೂ ಹೆಚ್ಚು ಮರದ ಸೌದೆಗಳನ್ನು ಅಂತ್ಯ ಸಂಸ್ಕಾರದ ವೇಳೆ ಬಳಕೆ ಮಾಡಲಾಗಿತ್ತು. ಶಿವರಾಂ ಅವರು ಅಂತ್ಯ ಸಂಸ್ಕಾರದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು.

    ನಿನ್ನೆ ಮಧ್ಯರಾತ್ರಿ ಸುಮಾರು 12.15ರ ವೇಳೆಗೆ ರವಿಬೆಳಗೆರೆ ಅವರಿಗೆ ತೀವ್ರ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆಗೆ ಸಾವನ್ನಪ್ಪಿದ್ದಾಗಿ ವೈದ್ಯರು ದೃಢಪಡಿಸಿದ್ದರು. ಬಳಿಕ ಅವರ ಪ್ರಾರ್ಥಿವ ಶರೀರವನ್ನು ಕನಕಪುರ ರಸ್ತೆಯ ಕರಿಷ್ಮಾ ಹಿಲ್ಸ್ ಮನೆಗೆ ತರಲಾಗಿತ್ತು. ಮನೆಯಲ್ಲಿ ಕುಟುಂಬ ಅಪ್ತರು, ಸಂಬಂಧಿಗಳು ಅಂತಿಮ ದರ್ಶನ ಪಡೆದರು. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ಪದ್ಮನಾಭ ನಗರದಲ್ಲಿರೋ ಪ್ರಾರ್ಥನಾ ಸ್ಕೂಲ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆ ಬಳಿಕ ಅಂತಿಮ ವಿಧಿವಿಧಾನದ ಕಾರ್ಯಗಳಿಗೆ ಅವಕಾಶ ಮಾಡಿಕೊಡಲಾಗಿತ್ತು.

    ರವಿ ಬೆಳಗೆರೆ ಅವರ ಪ್ರಾರ್ಥಿವ ಶರೀರದ ದರ್ಶನ ಪಡೆಯಲು ಹಲವು ನಟ-ನಟಿಯರು ಸೇರಿದಂತೆ ಗಣ್ಯರು ಆಗಮಿಸಿದ್ದರು. ಬಿಗ್ ಬಾಸ್ ಸ್ಪರ್ಧಿಗಳಾದ ಚಂದನ, ಭೂಮಿ ಶೆಟ್ಟಿ, ದೀಪಿಕಾ ದಾಸ್, ನಿರ್ದೇಶಕ ಯೋಗರಾಜ್ ಭಟ್, ಹಿರಿಯ ನಟಿ ಲೀಲಾವತಿ, ನಟ ವಿನೋದ್ ರಾಜ್, ಸಚಿವ ಆರ್.ಅಶೋಕ್, ಎಚ್ ವಿಶ್ವನಾಥ್, ಸಾರಾ ಗೋವಿಂದು ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.

  • ನನಗೆ ಸಂಬಳ ಕೊಡುವ ಒಡೆಯನಂತಿರ್ಲಿಲ್ಲ, ಗೆಳೆಯನ ರೀತಿ ಇದ್ರು: ಸೆಕ್ಯೂರಿಟಿ ಕಣ್ಣೀರು

    ನನಗೆ ಸಂಬಳ ಕೊಡುವ ಒಡೆಯನಂತಿರ್ಲಿಲ್ಲ, ಗೆಳೆಯನ ರೀತಿ ಇದ್ರು: ಸೆಕ್ಯೂರಿಟಿ ಕಣ್ಣೀರು

    ಬೆಂಗಳೂರು: ರವಿ ಬೆಳಗೆರೆಯವರು ನನಗೆ ಸಂಬಳ ಕೊಡುವ ಒಡೆಯನ ರೀತಿ ಇರಲಿಲ್ಲ. ಅವರು ನನ್ನನ್ನು ಗೆಳೆಯನಂತೆ ನೋಡಿಕೊಂಡರು ಎಂದು ಮನೆಯ ಸೆಕ್ಯೂರಿಟಿ ಕಣ್ಣೀರು ಹಾಕಿದ್ದಾರೆ.

    ‘ಅಕ್ಷರ ಮಾಂತ್ರಿಕ’ನ ನಿಧನ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರವಿ ಅವರು ನನ್ನ ಹೆಗಲ ಮೇಲೆ ಕೈ ಹಾಕಿ ಪ್ರೀತಿಯಿಂದ ನೋಡಿಕೊಳ್ತಾ ಇದ್ದರು. ಮನೆಯಲ್ಲಿ ಒಟ್ಟು ಮೂರು ನಾಯಿಗಳು ಇವೆ. ಇನ್ನು ಕಚೇರಿಯಲ್ಲಿ ಒಟ್ಟು 10 ನಾಯಿಗಳನ್ನು ಸಾಕಿಕೊಂಡಿದ್ದರು ಎಂದು ತಿಳಿಸಿದರು. ಇದೇ ವೇಳೆ ಸೆಕ್ಯೂರಿಟಿ ಪತ್ನಿ ಭಾವುಕರಾಗಿ, ಹಾರ್ಟ್ ಅಪರೇಷನ್, ಮಗಳ ಮದುವೆ ಹೀಗೆ ಎಲ್ಲದಕ್ಕೂ ಅವರು ಸಹಾಯ ಮಾಡಿದ್ದರು. ನಮ್ಮ ಪಾಲಿನ ದೇವರು ಅಂತ ಹೇಳಿ ಗಳಗಳನೇ ಅತ್ತುಬಿಟ್ಟರು. ಇದನ್ನೂ ಓದಿ: ಸಾವು ಬಂದು ಕರೆದಾಗ ಅತ್ಲಾಗೆ ನೋಡೋಣ ನಡಿ ಅಂತ ಹೊರಟುಬಿಟ್ಟಿದ್ದಾರೆನೋ: ಯೋಗರಾಜ್ ಭಟ್

    ರವಿ ಬೆಳಗೆಯವರು ಇಂದು ಬೆಳಗ್ಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ದಿಢೀರ್ ನಿಧನಕ್ಕೆ ಗಣ್ಯರು, ಅಭಿಮಾನಿಗಳು ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ. ಪತಿಯ ಶರೀರದ ಮುಂಭಾಗ ಎರಡನೆ ಪತ್ನಿ ಯಶೋಮತಿ ಕಣ್ಣೀರು ಹಾಕಿದ್ದಾರೆ. ಇತ್ತ ಅಪ್ಪನ ಪ್ರಾರ್ಥಿವ ಶರೀರದೆದುರು ಮಗಳು ಭಾವನಾ ಬೆಳಗೆರೆ ಕಣ್ಣೀರು ಹಾಕಿದ್ದಾರೆ. ಅಪ್ಪನ ಪ್ರಾರ್ಥೀವ ಶರೀರವನ್ನು ತಬ್ಬಿಕೊಂಡು ಅಪ್ಪಾ.. ಎಂದು ರೋಧಿಸಿದ್ದಾರೆ. ಇದನ್ನೂ ಓದಿ: ನಿಮ್ಮನ್ನು ಮಿಸ್ ಮಾಡಿಕೊಳ್ತೇವೆ- ಅಕ್ಷರ ಮಾಂತ್ರಿಕ ನಿಧನಕ್ಕೆ ಸುದೀಪ್ ಸಂತಾಪ

    ಅಂತಿಯ ವಿದಾಯಯದ ಸಮಯಲ್ಲೂ ಬೆಳಗೆರೆಗೆ ಇಷ್ಟವಾಗಿದ್ದ ಹಿಂದಿ ಗಝಲ್ಸ್ ಅನ್ನು ಮನೆಯವರು ಹಾಕಿದ್ದಾರೆ. ಒಟ್ಟಿನಲ್ಲಿ ರವಿ ನಿಧನದ ಹಿನ್ನೆಲೆಯಲ್ಲಿ ಬೆಳಗೆರೆ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಮೃತದೇಹವನ್ನು ಪ್ರಾರ್ಥನಾ ಶಾಲೆಯ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಸಂಜೆ ಸಂಜೆ 4 ಗಂಟೆ ಒಳಗೆ ಬನಶಕಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಇದನ್ನೂ ಓದಿ: ಅಮ್ಮ ಅಂತ ಕರೀತಿದ್ರಿ, ನಿಮ್ಮ ಹೆಸರು ಅಮರವಾಗಲಿ: ಲೀಲಾವತಿ ಕಣ್ಣೀರು

  • ನಿಮ್ಮನ್ನು ಮಿಸ್ ಮಾಡಿಕೊಳ್ತೇವೆ- ಅಕ್ಷರ ಮಾಂತ್ರಿಕ ನಿಧನಕ್ಕೆ ಸುದೀಪ್ ಸಂತಾಪ

    ನಿಮ್ಮನ್ನು ಮಿಸ್ ಮಾಡಿಕೊಳ್ತೇವೆ- ಅಕ್ಷರ ಮಾಂತ್ರಿಕ ನಿಧನಕ್ಕೆ ಸುದೀಪ್ ಸಂತಾಪ

    ಬೆಂಗಳೂರು: ಹಿರಿಯ ಪತ್ರಕರ್ತ, ಖ್ಯಾತ ಲೇಖಕ ರವಿ ಬೆಳಗೆರೆ ಅವರ ನಿಧನಕ್ಕೆ ನಟ ಕಿಚ್ಚ ಸುದೀಪ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

    ರವಿ ಬೆಳಗೆರೆ ಅವರೊಂದಿಗಿನ ನೆನಪುಗಳನ್ನು ಮೆಲುಕು ಹಾಕಿರುವ ನಟ ಸುದೀಪ್, ಬಿಸ್‍ಬಾಸ್ ಕಾರ್ಯಕ್ರಮದ ಸಂದರ್ಭದ ಎರಡು ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ವೇದಿಕೆಯಲ್ಲಿದ್ದ ಈ ಫೋಟೋದಲ್ಲಿ ನಾನು ಅವರನ್ನು ಕೊನೆಯದಾಗಿ ನೋಡಿದ್ದೆ. ಉಳಿದ ಸ್ಪರ್ಧಿಗಳು ಖಂಡಿತ ಈ ಕ್ಷಣವನ್ನು ತಮ್ಮ ಜೀವನದಲ್ಲಿ ನೆನಪಿಟ್ಟುಕೊಳ್ಳುತ್ತಾರೆ. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಅವರ ಕುಟುಂಬಕ್ಕೆ ನನ್ನ ಸಂತಾಪ, ಅವರ ಆತ್ಮ ಶಾಂತಿಯಿಂದ ವಿಶ್ರಾಂತಿ ಪಡೆಯಬೇಕೆಂದು ಪ್ರಾರ್ಥನೆ ಮಾಡುವುದಾಗಿ ಸುದೀಪ್ ಟ್ವೀಟ್ ಮಾಡಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ‘ಅಕ್ಷರ ರಾಕ್ಷಸ’ ಪತ್ರಕರ್ತ ರವಿ ಬೆಳಗೆರೆ ನಿಧನಕ್ಕೆ ಸಿಎಂ ಸಂತಾಪ

    ಇದಕ್ಕೂ ಮುನ್ನ ರವಿ ಬೆಳಗೆರೆ ಅವರ ನಿಧನಕ್ಕೆ ಸಂತಾಪ ಸೂಚಿಸಿದ ನಟಿ ದೀಪಿಕಾ ದಾಸ್, ಹೊರ ಜಗತ್ತಿನಲ್ಲಿ ರವಿ ಬೆಳಗೆರೆ ಅವರ ಬಗ್ಗೆ ಒಂದು ಅಭಿಪ್ರಾಯವಿತ್ತು. ಆದರೆ ಬಿಗ್‍ಬಾಸ್ ಮನೆಯಲ್ಲಿ ಆ ರೀತಿ ಇರಲಿಲ್ಲ. ಎಲ್ಲರನ್ನೂ ನಗಿಸ್ತಾ ಇದ್ದರು. ಅವರೊಂದಿಗೆ ಇದ್ದಾಗ ಸಮಯ ಹೋಗಿದ್ದೇ ಗೊತ್ತಾಗ್ತಾ ಇರಲಿಲ್ಲ. ಅವರೊಂದಿಗೆ ಕಳೆದ ಸಮಯ ಜೀವನ ಪರ್ಯಂತ ನೆನಪಿರುತ್ತದೆ ಎಂದು ಹೇಳಿ ಭಾವುಕರಾಗಿದ್ದರು. ಇದನ್ನೂ ಓದಿ: ನನಗೇನಾಗುತ್ತೆ, ಎಷ್ಟೋ ವರ್ಷ ಬದುಕಿರುತ್ತೇನೆ ಕಣ್ರೋ ಅಂದಿದ್ರು- ದೀಪಿಕಾ ದಾಸ್ ಕಣ್ಣೀರು

    ಖ್ಯಾತ ಬರಹಗಾರ, ಪತ್ರಕರ್ತ ರವಿ ಬೆಳಗೆರೆ ಅವರು ಇಂದು ಬೆಳಗ್ಗೆ ಬೆಂಗಳೂರಿನ ಕನಕಪುರ ರಸ್ತೆಯ ಕರಿಷ್ಮಾ ಹಿಲ್ಸ್ ಮನೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ತನ್ನ ಬರಹದಿಂದಲೇ ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ರವಿ ಅವರ ಮೃತದೇಹವನ್ನು ಬೆಳಗ್ಗೆ 9 ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಬೆಂಗಳೂರಿನ ಪದ್ಮನಾಭನಗರದಲ್ಲಿರೋ ಪ್ರಾರ್ಥನಾ ಶಾಲೆಯ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದನ್ನೂ ಓದಿ: ಸಾವು ಬಂದು ಕರೆದಾಗ ಅತ್ಲಾಗೆ ನೋಡೋಣ ನಡಿ ಅಂತ ಹೊರಟುಬಿಟ್ಟಿದ್ದಾರೆನೋ: ಯೋಗರಾಜ್ ಭಟ್

    ಉಳಿದಂತೆ ಬಿಗ್‍ಬಾಸ್ ಸೀಸನ್ 7ರ ಕಾರ್ಯಕ್ರಮದಲ್ಲಿ ರವಿ ಬೆಳಗೆರೆ ಅವರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ತಮ್ಮ ತಾಯಿಯನ್ನು ನೆನಪು ಮಾಡಿಕೊಂಡಿದ್ದ ರವಿ ಬೆಳಗೆರೆ ಅವರು, ನಾನು ಅಮ್ಮನ ಮಗ. ನನಗೆ ಯಾರು ತಂದೆ ಎಂದು ಗೊತ್ತಿಲ್ಲ. ಆದ್ದರಿಂದ ನನಗೆ ಎಲ್ಲವೂ ಅಮ್ಮನೇ. ಅವರನ್ನು ಜೀವನದಲ್ಲಿ ಹೇಗೆ ರಕ್ಷಣೆ ಮಾಡಿದೆ. ಈಗ ಜೀವನದಲ್ಲಿ ಎಲ್ಲ ಇದ್ದರೂ ಅಮ್ಮ ಇಲ್ಲ ಎಂದು ಹೇಳಿ ಕಣ್ಣೀರಿಟ್ಟಿದ್ದರು. ಇದಾದ ಬಳಿಕ ಬಿಗ್‍ಬಾಸ್ ಮನೆಯಿಂದ ಹೊರಬರುವ ವೇಳೆ ವೇದಿಕೆಯಲ್ಲಿ ಸುದೀಪ್ ಅವರನ್ನು ಹಾಡಿ ಹೊಗಳಿದ್ದರು. ಕನ್ನಡದ ಅಮಿತಾಬ್ ಬಚ್ಚನ್ ಎಂದು ಕರೆದಿದ್ದರು. ಇದನ್ನೂ ಓದಿ: ಖುಷಿಯಿಂದ ಹೋಗಿ ಬನ್ನಿ ರವಿ ಸರ್: ಭೂಮಿ ಶೆಟ್ಟಿ

  • ಖುಷಿಯಿಂದ ಹೋಗಿ ಬನ್ನಿ ರವಿ ಸರ್: ಭೂಮಿ ಶೆಟ್ಟಿ

    ಖುಷಿಯಿಂದ ಹೋಗಿ ಬನ್ನಿ ರವಿ ಸರ್: ಭೂಮಿ ಶೆಟ್ಟಿ

    – ಅಪ್ಪನ ಸ್ಥಾನ ತುಂಬಿದ್ರು ಅಂದ್ರು ಚಂದನಾ

    ಬೆಂಗಳೂರು: ರವಿ ಸರ್ ನಾವು ನಿಮ್ಮನ್ನು ತುಂಬಾನೇ ಇಷ್ಟಪಡುತ್ತೇವೆ. ಖುಷಿಯಿಂದ ಹೋಗಿ ಬನ್ನಿ ಸರ್ ಎಂದು ಬಿಗ್ ಬಾಸ್ ಸ್ಪರ್ಧಿ ಭೂಮಿ ಶೆಟ್ಟಿ ಸಂತಾಪ ಸೂಚಿಸಿದ್ದಾರೆ.

    ರವಿ ಬೆಳಗೆರೆ ನಿಧನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರವಿ ಸರ್ ನಮ್ಮಿಂದ ದೂರ ಹೋಗಿರಬಹುದು. ಆದರೆ ಪುಸ್ತಕಗಳಲ್ಲಿ ಹಾಗೂ ನಮ್ಮಲ್ಲಿ ಅವರು ಯಾವತ್ತೂ ಅಮರರಾಗಿರುತ್ತಾರೆ. ಅವರು ಜೊತೆ ಬಿಗ್ ಬಾಸ್ ಮನೆಯಲ್ಲಿ ಕಳೆದ ಒಂದು ವಾರ ಅದು ಜೀವನಪರ್ಯಂತ ಅನುಭವವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನನಗೇನಾಗುತ್ತೆ, ಎಷ್ಟೋ ವರ್ಷ ಬದುಕಿರುತ್ತೇನೆ ಕಣ್ರೋ ಅಂದಿದ್ರು- ದೀಪಿಕಾ ದಾಸ್ ಕಣ್ಣೀರು

    ಒಂದು ಒಳ್ಳೆಯ ಮೆಮೊರಿ ಕೂಡ ಆಗಿದೆ. ಕೊನೆಗೆ ಉಳಿಯೋದು ಬರೀ ನೆನಪು ಮಾತ್ರ ಅಂತಾರಲ್ವ. ಅದು ಯಾವತ್ತಿಗೂ ನಿಜವಾದ ಮಾತು. ಬೇಜಾರಾಗುತ್ತದೆ, ಆದರೆ ರವಿ ಸರ್ ನಾವು ನಿಮ್ಮನ್ನು ತುಂಬಾನೇ ಇಷ್ಟಪಡುತ್ತೇವೆ. ಖುಷಿಯಿಂದ ಹೋಗಿ ಬನ್ನಿ ಸರ್ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಚಂದನ ಅನಂತಕೃಷ್ಣ ಮಾತನಾಡಿ, ರವಿ ಸರ್ ನಿಧನದ ಬಗ್ಗೆ ಬೆಳಗ್ಗೆ ಗೊತ್ತಾಯ್ತು. ಬಿಗ್ ಬಾಸ್ ಮನೆಯಲ್ಲಿ ಅವರೊಂದಿಗೆ ಕಳೆದ ದಿನಗಳು ನಿಜಕ್ಕೂ ಮರೆಯಲಾದರಂತಹ ದಿನಗಳಾಗಿವೆ. ಅವರಿಂದ ತುಂಬಾ ಕಲಿತಿದ್ದೇವೆ. ಅಲ್ಲದೆ ಸ್ಫೂರ್ತಿ ಪಡೆದವು. ಆ ಒಂದು ವಾರ ಹೇಗೆ ಹೋಯಿತು ಅಂತಾನೇ ನಮಗೆ ಗೊತ್ತಾಗಿಲ್ಲ. ನಾವು ಅದೃಷ್ಟವಂತರು. ಅಲ್ಲಿ ಅವರು ನಮಗೆ ಅಪ್ಪನ ಸ್ಥಾನ ತುಂಬಿದ್ರು ಎಂದು ಭಾವುಕರಾದ್ರು.

    ಡಯಾಬಿಟಿಸ್ ಹಾಗೂ ಕಾಲುಗಳ ನೋವಿನಿಂದ ಬಳಲುತ್ತಿದ್ದ ರವಿ ಬೆಳಗೆರೆ ಅವರು ಇಂದು ಬೆಳಗ್ಗಿನ ಜಾವ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಈಗಾಗಲೇ ಅವರ ಮೃತದೇಹವನ್ನು ಪ್ರಾರ್ಥನಾ ಶಾಲೆಯ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಸಂಜೆ ಸಂಜೆ 4 ಗಂಟೆ ಒಳಗೆ ಬನಶಕಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಇದನ್ನೂ ಓದಿ: ಸಾವು ಬಂದು ಕರೆದಾಗ ಅತ್ಲಾಗೆ ನೋಡೋಣ ನಡಿ ಅಂತ ಹೊರಟುಬಿಟ್ಟಿದ್ದಾರೆನೋ: ಯೋಗರಾಜ್ ಭಟ್

  • ನನ್ನ ಮಗನ ಅಗಲಿಕೆ ಸಹಿಸಲಾಗ್ತಿಲ್ಲ: ರವಿ ನಿಧನಕ್ಕೆ ವಿಜಯಮ್ಮ ಕಂಬನಿ

    ನನ್ನ ಮಗನ ಅಗಲಿಕೆ ಸಹಿಸಲಾಗ್ತಿಲ್ಲ: ರವಿ ನಿಧನಕ್ಕೆ ವಿಜಯಮ್ಮ ಕಂಬನಿ

    – ಆರ್.ಟಿ ವಿಠ್ಠಲಮೂರ್ತಿ ಸಂತಾಪ

    ಬೆಂಗಳೂರು: ‘ಹಾಯ್ ಬೆಂಗಳೂರು’ ಹಾಗೂ ‘ಓ ಮನಸೇ’ ಪತ್ರಿಕೆಯ ಸಂಪಾದಕ ರವಿ ಬೆಳಗ್ಗೆ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅವನು ನನ್ನ ಮಗ. ಅವನ ಅಗಲಿಕೆ ನನಗೆ ಸಹಿಸಲಾಗುತ್ತಿಲ್ಲ ಎಂದು ಹಿರಿಯ ಪತ್ರಕರ್ತೆ, ಸಾಹಿತಿ ವಿಜಯಮ್ಮ ಕಂಬನಿ ಮಿಡಿದಿದ್ದಾರೆ.

    ಅವನು ಮೆಲೊಡಿ ಶಬ್ದಕ್ಕೆ ಅರ್ಥ ತುಂಬುತ್ತಿದ್ದ. ನಿತ್ಯ ಒಂದೊಂದು ಮಧುರ ಗಾನದ ವಿಡಿಯೋ, ಆಡಿಯೋ ಕಳಿಸುವ ಮೂಲಕ ಅಮ್ಮಾ ಇನ್ನೂ ಮಲಗಿಲ್ಲವೆ? ಇಷ್ಟು ನಿದ್ದೆಗೆಡ ಬೇಡ ಎಂದು ಆರೋಗ್ಯ ಜೋಪಾನ, ಎಲ್ಲಿಯೂ ಹೋಗಬೇಡ. ಇವತ್ತು ಶುಗರ್, ಬಿಪಿ ಎಷ್ಟಿದೆ ಅಂತೆಲ್ಲ ಕೇಳುತ್ತಾ ನನ್ನ ಬೆಳಗನ್ನು ಆವರಿಸುತ್ತಿದ್ದ. ರವೀ ರವೀ ಅಂತ ಪ್ರಶ್ನಾರ್ಥಕ ಚಿಹ್ನೆ ಹಾಕಿ ಕಣ್ಣೀರಾಕಿದ್ದಾರೆ. ಇದನ್ನೂ ಓದಿ: ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆದ ಮಾಂತ್ರಿಕನ ಬೆರಳುಗಳು ನಿಶ್ಚಲವಾಗಿವೆ: ಟಿ. ಗುರುರಾಜ್

    ಹಿರಿಯ ಪತ್ರಕರ್ತ ಆರ್.ಟಿ ವಿಠ್ಠಲಮೂರ್ತಿ ಕೂಡ ಸಂತಾಪ ಸೂಚಿಸಿದ್ದು, ನನ್ನ ಬದುಕಿಗೆ ಅಣ್ಣನಾಗಿ ಸಿಕ್ಕ ಪತ್ರಕರ್ತ ರವಿ ಬೆಳಗೆರೆ ತೀರಿಕೊಂಡಿದ್ದಾರೆ. ಹಾಯ್ ಬೆಂಗಳೂರು ಪತ್ರಿಕೆಯ ಮೂಲಕ ನಾಡಿನಲ್ಲಿ ಸಂಚಲನವೆಬ್ಬಿಸಿದ ರವಿ ಬೆಳಗೆರೆ ಅವರ ನಿರ್ಗಮನ ನನಗೆ ಘಾಸಿಯುಂಟು ಮಾಡಿದೆ. ಹೇಳಿದರೆ ಬರೋಬ್ಬರಿ ಇಪ್ಪತ್ತಾರು ವರ್ಷಗಳ ಭಾಂದವ್ಯ. ಅವರು ಹಾಯ್ ಬೆಂಗಳೂರು ಆರಂಭಿಸಿದಾಗ ಜೊತೆಗಿದ್ದವರು. ನಾನು, ಸೀತಾನದಿ ಸುರೇಂದ್ರ ಈ ಪೈಕಿ ಸುರೇಂದ್ರ ಪತ್ರಿಕೆ ಆರಂಭವಾದ ಆರು ತಿಂಗಳಲ್ಲಿ ತೀರಿಕೊಂಡರು. ಆಗೆಲ್ಲ ಉಳಿದವರು ನಾವಿಬ್ಬರು ವಿಠ್ಠಲಮೂರ್ತಿ, ಕಷ್ಟಪಟ್ಟು ತೇರು (ಪತ್ರಿಕೆ) ಎಳೆದು ಬಿಡೋಣ ಎಂದು ಬೆಳಗೆರೆಯವರು ಹೇಳಿದ್ದರು. ಇದನ್ನೂ ಓದಿ: ನನಗೇನಾಗುತ್ತೆ, ಎಷ್ಟೋ ವರ್ಷ ಬದುಕಿರುತ್ತೇನೆ ಕಣ್ರೋ ಅಂದಿದ್ರು- ದೀಪಿಕಾ ದಾಸ್ ಕಣ್ಣೀರು

    ತೇರು ಅಪೂರ್ವವಾಗಿ ಮುಂದಕ್ಕೆ ಹೋಯಿತು. ಮುಂದೆ ಭಾರತ-ಪಾಕಿಸ್ತಾನದ ನಡುವೆ ಯುದ್ಧವಾದಾಗ ನಾವಿಬ್ಬರೂ ಯುದ್ಧಪೀಡಿತ ಕಾಶ್ಮೀರದ ನೆಲಕ್ಕೆ ಕಾಲಿಟ್ಟೆವು. ನಂತರ ಗುಜರಾತ್ ನ ಭೂಕಂಪಪೋಡಿತ ಪ್ರದೇಶಗಳಿಗೆ ಹೇಳಿದರೆ ನೂರಾರು ನೆನಪುಗಳು. ಈಗ ಅವರೇ ನಿರ್ಗಮಿಸಿದ್ದಾರೆ. ಮನಸ್ಸು ಕಲ್ಲವಿಲಗೊಂಡಿದೆ. ಅವರಾತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಸಾವು ಬಂದು ಕರೆದಾಗ ಅತ್ಲಾಗೆ ನೋಡೋಣ ನಡಿ ಅಂತ ಹೊರಟುಬಿಟ್ಟಿದ್ದಾರೆನೋ: ಯೋಗರಾಜ್ ಭಟ್

  • ‘ಅಕ್ಷರ ರಾಕ್ಷಸ’ ಪತ್ರಕರ್ತ ರವಿ ಬೆಳಗೆರೆ ನಿಧನಕ್ಕೆ ಸಿಎಂ ಸಂತಾಪ

    ‘ಅಕ್ಷರ ರಾಕ್ಷಸ’ ಪತ್ರಕರ್ತ ರವಿ ಬೆಳಗೆರೆ ನಿಧನಕ್ಕೆ ಸಿಎಂ ಸಂತಾಪ

    ಬೆಂಗಳೂರು: ತಮ್ಮ ಬರಹಗಳ ಮೂಲಕ ಕನ್ನಡಿಗರಿಗೆ ಓದಿನ ಹುಚ್ಚು ಹತ್ತಿಸಿದ್ದ ಅಕ್ಷರ ರಾಕ್ಷಸ ಖ್ಯಾತಿಯ ರವಿ ಬೆಳಗೆರೆ ಅವರ ನಿಧನಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ, ಸಚಿವ ಸುಧಾಕರ್ ಅವರು ಸಂತಾಪ ಸೂಚಿಸಿದ್ದಾರೆ.

    ಟ್ವೀಟ್ ಮಾಡಿರುವ ಸಿಎಂ ಬಿಎಸ್‍ವೈ, ಪತ್ರಕರ್ತ, ಬರಹಗಾರ ರವಿ ಬೆಳಗೆರೆ ನಿಧನರಾದ ಸುದ್ದಿ ತಿಳಿದು ದುಃಖವಾಗಿದೆ. ಪತ್ರಕರ್ತರಾಗಿ, ಲೇಖಕರಾಗಿ, ನಿರೂಪಕರಾಗಿ ಜನಪ್ರಿಯತೆ ಗಳಿಸಿದ್ದ ಅವರು, ಶಿಕ್ಷಣ ಸಂಸ್ಥೆಯನ್ನೂ ನಡೆಸುತ್ತಿದ್ದರು. ಅವರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಕುಟುಂಬದವರಿಗೆ, ಅಭಿಮಾನಿಗಳಿಗೆ, ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಾನು ನಿಮ್ಮ ಜೊತೆ ಇದ್ದೀನಿ ಕಣೋ ಅಂದಿದ್ರು: ರವಿ ಪುತ್ರ ಕಣ್ಣೀರು

    ಸಚಿವ ಸುಧಾಕರ್ ಟ್ವೀಟ್ ಮಾಡಿ, ಖ್ಯಾತ ಲೇಖಕರು, ಹಿರಿಯ ಪತ್ರಕರ್ತರಾದ ರವಿ ಬೆಳೆಗೆರೆ ಅವರ ನಿಧನದಿಂದ ಕನ್ನಡ ಮಾಧ್ಯಮ ಲೋಕ ಬಡವಾಗಿದೆ. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಪಾತ್ರರಾಗಿದ್ದ ಬೆಳೆಗೆರೆ ಅವರು ತಮ್ಮ ನೇರೆ-ನಿಷ್ಠುರ ಬರವಣಿಗೆಯಿಂದ ಅಪಾರ ಓದುಗ ಬಳಗವನ್ನು ಹೊಂದಿದ್ದರು. , ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬ ಸದಸ್ಯರಿಗೆ, ಅಭಿಮಾನಿಗಳಿಗೆ ಈ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಸಾವು ಬಂದು ಕರೆದಾಗ ಅತ್ಲಾಗೆ ನೋಡೋಣ ನಡಿ ಅಂತ ಹೊರಟುಬಿಟ್ಟಿದ್ದಾರೆನೋ: ಯೋಗರಾಜ್ ಭಟ್

  • ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆದ ಮಾಂತ್ರಿಕನ ಬೆರಳುಗಳು ನಿಶ್ಚಲವಾಗಿವೆ: ಟಿ. ಗುರುರಾಜ್

    ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆದ ಮಾಂತ್ರಿಕನ ಬೆರಳುಗಳು ನಿಶ್ಚಲವಾಗಿವೆ: ಟಿ. ಗುರುರಾಜ್

    – ಕಳೆದ ದಿನಗಳೆಲ್ಲ ಕಣ್ಣೆದುರು ಮೆರವಣಿಗೆ ನಡೆಸುತ್ತಿವೆ

    ಬೆಂಗಳೂರು: ಅಕ್ಷರ ಮಾಂತ್ರಿ ರವಿ ಬೆಳಗೆರೆ ಇಂದು ಬೆಳಗ್ಗಿನ ಜಾವ ತಮ್ಮ ನಿವಾದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಇದೀಗ ಬಾರದ ಲೋಕಕ್ಕೆ ತೆರಳಿದ ‘ಗಾಡ್ ಫಾದರ್’ ಬಗ್ಗೆ ಮೆಲುಕು ಹಾಕುತ್ತಾ ಹಿರಿಯ ಪತ್ರಕರ್ತ ಟಿ. ಗುರುರಾಜ್ ಕಂಬನಿ ಮಿಡಿದಿದ್ದಾರೆ.

    ಹೊಳೆನರಸೀಪುರದ ಜಗುಲಿ, ದೇವಸ್ಥಾನದ ಮೆಟ್ಟಿಲು, ಹೇಮಾವತಿಯ ದಂಡೆ, ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯ ಸಂಯುಕ್ತ ಕರ್ನಾಟಕ, ಚಂದ್ರಕಾಂತ ನಗರದ ಚಾಳ್, ಬೆಂಗಳೂರಿನ ಕರ್ಮವೀರ ಕಚೇರಿ, ಪದ್ಮನಾಭ ನಗರದ ಪುಟ್ಟ ಮಹಡಿ ಮನೆ, ಹಾಯ್ ಬೆಂಗಳೂರಿನ ಆಫೀಸು, ಅಗಾಧವಾದ ಓದು, ಕೇಳಿಸಿಕೊಳ್ಳುವ ತನ್ಮಯತೆ, ಲೀಲಾಜಾಲ ಬರೆವಣಿಗೆ, ಲೆಕ್ಕವಿಡದಷ್ಟು ಐಲು – ತಿಕ್ಕಲು, ಕುಡಿತ, ಸಿಗರೇಟು, ಸೆಕ್ಸು, ಹೊಕ್ಕಳ ಬಳ್ಳಿಯಿಂದ ಹುಟ್ಟುತ್ತಿದ್ದ ಆ ಮಾತು…… ಒಹ್, ಅವೆಷ್ಟು ನೆನಪುಗಳ ಸಾಲು! ರವಿ ಬೆಳಗೆರೆ ಎಂಬ ಅಕ್ಷರ ಮಾಂತ್ರಿಕ ಜೊತೆಗಿಲ್ಲ ಎಂಬುದೇ ಒಂದು ಮಹಾನೋವು. ಇದನ್ನೂ ಓದಿ: ಬಳ್ಳಾರಿ ಟು ಬೆಂಗಳೂರು – ರವಿ ಬೆಳಗೆರೆ ಜೀವನ ಪಯಣ ಹೇಗಿತ್ತು..?

    ಬರೆದರೆ ಹೊರೆಯಾಗುವಷ್ಟು ನೋವಿನ ಸ್ಟಾಕುಗಳಿವೆ, ಸ್ನೇಹ, ಪ್ರೀತಿ, ವಿಶ್ವಾಸದ ಒಟ್ಟಿಗೆ ಜಗಳ-ಕೊಲ್ಲುವಷ್ಟು ದ್ವೇಷವಿದ್ದರೂ, ಹಗೆತನ ಹೊಗೆಯಾಡದಂತೆ ಕಳೆದ ದಿನಗಳೆಲ್ಲ ಕಣ್ಣೆದುರು ಮೆರವಣಿಗೆ ನಡೆಸುತ್ತಿವೆ. ಏನೇ ಇರಲಿ ಅದ್ಭುತ ಪ್ರತಿಭೆ ಮತ್ತು ಅಸಂಖ್ಯಾತ ಪ್ರಕ್ಷುಬ್ಧತೆಗಳನ್ನು ಒಡಲೊಳಗಿಟ್ಟುಕೊಂಡು ತಣ್ಣಗೆ ನಗು-ನಗುತ್ತಾ ನಡೆದಾಡುತ್ತದ್ದ ರವಿ ಬೆಳಗೆರೆ ಎಂಬ ಅದ್ಭುತದ ಹೆಜ್ಜೆಗಳಿಗೀಗ ಪೂರ್ಣ ವಿರಾಮ. ಅದೆಷ್ಟೇ ವಾದ-ವಿವಾದಗಳಿರಲಿ, ಕನ್ನಡ ಪತ್ರಿಕೋದ್ಯಮಕ್ಕೊಂದು ಹೊಸ ಭಾಷ್ಯ ಬರೆದ ಮಾಂತ್ರಿಕನ ಬೆರಳುಗಳು ನಿಶ್ಚಲವಾಗಿವೆ. ಯಾರು ಬೇಡವೆಂದರೂ, ನೀವು ಹೊರಟಾಗಿದೆ. ನಿಮ್ಮೆಡೆಗಿನ ಕಡುಕೋಪ-ಕಡುಪ್ರೀತಿಗಳೆರಡೂ ನನ್ನ ಕೊನೆಯುಸಿರಿನವರೆಗೂ ಜೀವಂತವಾಗಿರುತ್ತವೆ. ಇದನ್ನೂ ಓದಿ: ರವಿ ಬೆಳಗೆರೆ ಅಸ್ತಂಗತ – ಒಡನಾಟ ಹಂಚಿಕೊಂಡ ಆಪ್ತರು

    ರವಿಯನ್ನು ಸಹಿಸಿಕೊಂಡು, ಸಲಹಿದ ಭೂಮಿ ತೂಕದ ಲಲಿತಾ ಮೇಡಂ ಅವರ ಸಂಕಟ ಊಹಿಸಿಕೊಳ್ಳುವುದಕ್ಕೂ ಅಸಾಧ್ಯ. ಬೆಳಗೆರೆಯ ಬದುಕು ಅವರು, ಅವರಿಂದಾಗಿ ಮಾತ್ರವೇ ರವಿ, ಈವರೆಗೆ ಉಳಿದದ್ದು. ಅವರ ಕಣ್ಣೇರು ಆದಷ್ಟು ಬೇಗ ಕರಗಿಹೋಗಲಿ. ಯಾರು ಅತ್ತರೂ-ಸತ್ತರೂ ನೆನಪುಗಳು ಸಾಯುವುದಿಲ್ಲ. ನೀವು ಇಲ್ಲೇ ಅಕ್ಕ – ಪಕ್ಕವೇ ಇದ್ದೀರಿ. ಬೈ ರವಿ ಎಂದು ಗುರುರಾಜ್ ಕಣ್ಣೀರಿನ ವಿದಾಯ ತಿಳಿಸಿದ್ದಾರೆ.  ಇದನ್ನೂ ಓದಿ: ಸಾವು ಬಂದು ಕರೆದಾಗ ಅತ್ಲಾಗೆ ನೋಡೋಣ ನಡಿ ಅಂತ ಹೊರಟುಬಿಟ್ಟಿದ್ದಾರೆನೋ: ಯೋಗರಾಜ್ ಭಟ್ 

  • ನನಗೇನಾಗುತ್ತೆ, ಎಷ್ಟೋ ವರ್ಷ ಬದುಕಿರುತ್ತೇನೆ ಕಣ್ರೋ ಅಂದಿದ್ರು- ದೀಪಿಕಾ ದಾಸ್ ಕಣ್ಣೀರು

    ನನಗೇನಾಗುತ್ತೆ, ಎಷ್ಟೋ ವರ್ಷ ಬದುಕಿರುತ್ತೇನೆ ಕಣ್ರೋ ಅಂದಿದ್ರು- ದೀಪಿಕಾ ದಾಸ್ ಕಣ್ಣೀರು

    ಬೆಂಗಳೂರು: ಬೆಳಗ್ಗೆ ಸಡನ್ ಆಗಿ ಫೋನ್ ಬಂತು. ಆ ಸುದ್ದಿಯೊಂದಿಗೆ ನಾನು ಎದ್ದು ಬಂದೆ. ಮನೆಯವರನ್ನೇ ಕಳೆದುಕೊಂಡಿರೋ ಭಾವ ಉಂಟಾಗುತ್ತಿದೆ ಎಂದು ನಟಿ, ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ಅವರು ಪತ್ರಕರ್ತ ರವಿ ಬೆಳಗೆರೆ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ದೀಪಿಕಾ ದಾಸ್, ಪ್ರತಿಯೊಂದು ಅಂಶವನ್ನು ಅವರು ನೆನಪಿಟ್ಟುಕೊಳ್ಳುತ್ತಿದ್ದರು. ಅವರನ್ನು ನೋಡಿದರೆ ಅನಾರೋಗ್ಯವಿತ್ತು ಎಂದು ಕಾಣುತ್ತಿತ್ತು. ಆದರೆ ನಾನು ಇನ್ನು ತುಂಬಾ ವರ್ಷ ಬದುಕುತ್ತೇನೆ ಎಂದು ಹೇಳುತ್ತಿದ್ದರು. ಆದರೆ ಈಗ ನನಗೆ ಅವರ ಬಗ್ಗೆ ಮಾತನಾಡಲು ಕೂಡ ಆಗುತ್ತಿಲ್ಲ ಎಂದು ಕಣ್ಣೀರಿಟ್ಟರು. ಇದನ್ನೂ ಓದಿ: ನಾನು ನಿಮ್ಮ ಜೊತೆ ಇದ್ದೀನಿ ಕಣೋ ಅಂದಿದ್ರು: ರವಿ ಪುತ್ರ ಕಣ್ಣೀರು

    ಅವರನ್ನು ಬಿಗ್‍ಬಾಸ್ ಮನೆಯಿಂದ ಹೊರಗಡೆ ಕಳುಹಿಸಿಕೊಳ್ಳಲು ಇಷ್ಟವಿರಲಿಲ್ಲ. ಆದರೆ ಈಗ ಅವರು ಪ್ರಪಂಚದಿಂದಲೇ ದೂರ ಹೋಗಿದ್ದಾರೆ. ಬಿಗ್‍ಬಾಸ್‍ನಲ್ಲಿದ್ದ ಎಲ್ಲಾ ಸ್ಪರ್ಧಿಗಳಿಗೂ ಅವರು ತಂದೆಯಾಗಿ ಮಾರ್ಗದರ್ಶನ ನೀಡಿದ್ದರು. ಅವರ ಜೀವನ ಸಾಕಷ್ಟು ವಿಚಾರ, ತಾಯಿ, ಬರವಣಿಗೆ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ಅವರು ಹೇಳುತ್ತಿದ್ದ ಪ್ರತಿಯೊಂದು ಮಾತು ಕೂಡ ನನಗೆ ನೆನಪಿದೆ. ಈಗ ಎಲ್ಲವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದರು. ಇದನ್ನೂ ಓದಿ: ಸಾವು ಬಂದು ಕರೆದಾಗ ಅತ್ಲಾಗೆ ನೋಡೋಣ ನಡಿ ಅಂತ ಹೊರಟುಬಿಟ್ಟಿದ್ದಾರೆನೋ: ಯೋಗರಾಜ್ ಭಟ್

  • ಸಾವು ಬಂದು ಕರೆದಾಗ ಅತ್ಲಾಗೆ ನೋಡೋಣ ನಡಿ ಅಂತ ಹೊರಟುಬಿಟ್ಟಿದ್ದಾರೆನೋ: ಯೋಗರಾಜ್ ಭಟ್

    ಸಾವು ಬಂದು ಕರೆದಾಗ ಅತ್ಲಾಗೆ ನೋಡೋಣ ನಡಿ ಅಂತ ಹೊರಟುಬಿಟ್ಟಿದ್ದಾರೆನೋ: ಯೋಗರಾಜ್ ಭಟ್

    – ಇದು ಸಾವಲ್ಲ, ಅವ್ರ ಮರುಹುಟ್ಟು

    ಬೆಂಗಳೂರು: ನಿನ್ನೆ ಮೊನ್ನೆವರೆಗೂ ಫೋನ್‍ನಲ್ಲಿ ರವಿ ಬೆಳಗೆರೆಯೊಂದಿಗೆ ನನ್ನ ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ದೆ. ಅವರಿಗೆ ಅನಾರೋಗ್ಯ ಕಾಡುತ್ತಲೇ ಇತ್ತು. ಸಾವು ಬಂದು ಕರೆದಾಗ ಅತ್ಲಾಗೆ ನೋಡೋಣ ನಡಿ ಅಂತ ಹೊರಟುಬಿಟ್ಟಿದ್ದಾರೆನೋ ಅನ್ನಿಸುತ್ತಿದೆ ಎಂದು ನಿದೇರ್ಶಕ ಯೋಗರಾಜ್ ಭಟ್ ಸಂತಾಸ ಸೂಚಿಸಿದ್ದಾರೆ.

    ರವಿಬೆಳಗೆರೆಯ ಅವರ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಯೋಗರಾಜ್ ಭಟ್, ಕನ್ನಡ ಅಭಿಮಾನಿಯಾಗಿ ಇದು ರವಿ ಬೆಳಗೆರೆ ಅವರ ಸಾವಲ್ಲ, ಅವರ ಹುಟ್ಟು. ಅವರ ನೆನಪು, ಬರಹಗಳೊಂದಿಗೆ ನಮ್ಮೊಂದಿಗೆ ಇದ್ದಾರೆ. ಅವರು ಸಂಗೀತ ಪ್ರಿಯರು, ನನ್ನದು ಅವರದ್ದು ಅದ್ಭುತ ಸ್ನೇಹ. ನನ್ನ ಸಿನಿಮಾ, ಹಾಡುಳ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದರು. ತುಂಬು ಜೀವನವನ್ನು ನಡೆಸಿದ್ದು, ಧೈರ್ಯಕ್ಕೆ ಮತ್ತೊಂದು ಹೆಸರು. ಧೀಮಂತ ಪತ್ರಕರ್ತ ಎಂದರು.

    ರವಿಬೆಳಗೆರೆ ಅವರು ನಾನು ಬಯಲುಸೀಮೆ ಶೈಲಿಯಲ್ಲಿ ಮಾತನಾಡುತ್ತಿದ್ದೆವು. ಹಿಂದಿ, ಉರ್ದು ಗೊತ್ತಿದ್ದರಿಂದ ನಮ್ಮೊಂದಿಗೆ ಈ ಬಗ್ಗೆಯೂ ಮಾತನಾಡುತ್ತಿದ್ದೆವು. ಅಷ್ಟು ದೊಡ್ಡ ಸಂಗೀತ ಅಭಿಮಾನಿಗೆ ನನ್ನ ಹಾಡು ಇಷ್ಟ ಆಗಿದ್ದು ಆನಂದದ ವಿಷಯ. ಎಲ್ಲಾ ಕಲೆಗಳನ್ನು ಮೋಹಿಸಿ ಬದುಕಿದ ಜೀವ ಅವರದ್ದು. ಕಳೆದ ವರ್ಷ ಕರಾವಳಿಯಲ್ಲಿ ನನಗೆ ಪ್ರಶಸ್ತಿಯನ್ನು ನೀಡಿದ್ದರು. ಈಗ ಹೋಗಿ ಬನ್ನಿ ಅಂತ ಅನ್ನೋದು ಬಿಟ್ಟರೆ ಬೇರೆನಿಲ್ಲ ಎಂದು ಹೇಳಿದರು.

  • ಮರೆಯಾದ ಮರೆಯಲಾಗದ ಪತ್ರಕರ್ತ – ರವಿ ನಿಧನಕ್ಕೆ ಸುರೇಶ್ ಕುಮಾರ್ ಸಂತಾಪ

    ಮರೆಯಾದ ಮರೆಯಲಾಗದ ಪತ್ರಕರ್ತ – ರವಿ ನಿಧನಕ್ಕೆ ಸುರೇಶ್ ಕುಮಾರ್ ಸಂತಾಪ

    ಬೆಂಗಳೂರು: ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಅವರು ಇಂದು ಬೆಳಗ್ಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರ ನಿಧನಕ್ಕೆ ಎಲ್ಲರೂ ಸಂತಾಪ ಸೂಚಿಸುತ್ತಿದ್ದಾರೆ. ಹಾಗೆಯೇ ಸಚಿವ ಸುರೇಶ್ ಕುಮಾರ್ ಕೂಡ ಫೇಸ್ ಬುಕ್ ನಲ್ಲಿ ಬರೆದುಕೊಳ್ಳುವ ಮೂಲಕ ಖ್ಯಾತ ಬರಹಗಾರರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

    ರವಿ ಬೆಳಗೆರೆ ಕರ್ನಾಟಕದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಳೆದ ಎರಡೂವರೆ ದಶಕಗಳಿಂದ ಕೇಳಿಬಂದ ದೊಡ್ಡ ಹೆಸರು. ಅತ್ಯಂತ ಮೇಧಾವಿ ಬರಹಗಾರ. ಬರೆಯಲಿಕ್ಕೆ ಕೂತರೆ ಅವರದ್ದು ದೈತ್ಯ ಶಕ್ತಿ. ಬಹಳ ನಿರ್ಭಿಡೆ ವ್ಯಕ್ತಿತ್ವ.

    “ಹಾಯ್ ಬೆಂಗಳೂರು” ಎಂಬ ಹೆಸರಿನ ಪತ್ರಿಕೆಯ ಮೂಲಕ ಬಹಳ ಒಳ್ಳೆಯ ಹೆಸರು ಮತ್ತು ಸ್ವಲ್ಪ ನಕಾರಾತ್ಮಕ ಹೆಸರನ್ನೂ ಸಹ ಗಳಿಸಿದ ಓರ್ವ ಪತ್ರಕರ್ತ. ಒಂದು ಶಾಲೆಯನ್ನು ಹೀಗೂ ಕಟ್ಟಬಹುದು, ಹೀಗೂ ನಡೆಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ಅವರ “ಪ್ರಾರ್ಥನಾ ಶಾಲೆ”.

    ನನಗಿನ್ನೂ ಚೆನ್ನಾಗಿ ನೆನಪಿದೆ. ಹಾಯ್ ಬೆಂಗಳೂರು ಮೊದಲ ಸಂಚಿಕೆ ಪ್ರಕಟವಾಗುವ ಮುನ್ನ ರವಿ ನನ್ನ ಮನೆಗೆ ಬಂದು ಬಿಬಿಎಂಪಿ ಕಾರ್ಯವೈಖರಿಯ ಬಗ್ಗೆ ನಡೆಯುವ ಲಾಬಿಗಳ ಬಗ್ಗೆ ಸಂಪೂರ್ಣ ವಿಷಯ ತಿಳಿದುಕೊಂಡು ಹೋಗಿ ಅದ್ಭುತವಾದ ಒಂದು ಮುಖ ಲೇಖನ ಬರೆದಿದ್ದರು.

    ಇತ್ತೀಚಿನ ಕೆಲವು ವರ್ಷಗಳಿಂದ ಅವರ ಆರೋಗ್ಯ ಕುಸಿಯುತ್ತಾ ಬಂದಿತ್ತು. ರವಿ ಬೆಳಗೆರೆ ನಾವ್ಯಾರೂ ಮರೆಯಲಾಗದ ಪತ್ರಕರ್ತ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಸಚಿವರು ಸಂತಾಪ ಸೂಚಿಸಿದ್ದಾರೆ.