Tag: Ratotsava

  • ನಿಷೇಧದ ನಡುವೆಯೂ ನಡೆದ ಅಂಬಾದೇವಿ ರಥೋತ್ಸವ

    ನಿಷೇಧದ ನಡುವೆಯೂ ನಡೆದ ಅಂಬಾದೇವಿ ರಥೋತ್ಸವ

    ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಅಂಬಾಮಠದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಂಬಾದೇವಿ ರಥೋತ್ಸವಕ್ಕೆ ಜನರು ಸೇರುವುದನ್ನು ನಿಷೇಧ ಹೇರಿದರೂ, ನಿಯಮ ಉಲ್ಲಂಘಿಸಿ ಜೋರಾಗಿ ನಡೆದಿದೆ.

    ಕೋವಿಡ್ ಹಿನ್ನೆಲೆ ಸಂಪ್ರದಾಯದಂತೆ ಸರಳವಾಗಿ ನಡೆಸಿದ್ದರೂ, ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದಾರೆ. ದೇವಾಲಯಕ್ಕೆ ಭಕ್ತರ ಆಗಮನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ನಿಷೇಧದ ನಡುವೆ ನಡೆದ ರಥೋತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವ ಸಂಭವ ಹಿನ್ನೆಲೆ ಮುಂಜಾನೆ 5 ಗಂಟೆಗೆ ರಥೋತ್ಸವವನ್ನು ನಡೆಸಲಾಗಿತ್ತು. ಆದರೂ ನೂರಾರು ಜನರು ಪಾಲ್ಗೊಂಡಿದ್ದಾರೆ.

    ಪ್ರತಿವರ್ಷ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಅಂಬಾದೇವಿ ಜಾತ್ರೆಯ ರಥೋತ್ಸವದಲ್ಲಿ ಭಾಗಿಯಾಗುತ್ತಿದ್ದರು. ಈ ಬಾರಿ ಕೋವಿಡ್ ನಿಯಮಾವಳಿ ಹಿನ್ನೆಲೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದಕ್ಕೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಸುತ್ತಮುತ್ತಲ ಗ್ರಾಮಸ್ಥರು ಮಾತ್ರ ರಥೋತ್ಸವದಲ್ಲಿ ಭಾಗವಹಿಸಿದ್ದಾರೆ. ಇದನ್ನೂ ಓದಿ: ಆರೋಗ್ಯ ಸಚಿವರ ತವರೂರಲ್ಲೇ ಕುರಿ ಸಂತೆ- ಸಾವಿರಾರು ಮಂದಿ ಜಮಾವಣೆ

  • ನಿಖಿಲ್ ಗೆಲುವಿಗಾಗಿ ರಥೋತ್ಸವದಲ್ಲಿ ಹರಕೆ ಹೊತ್ತ ಅಭಿಮಾನಿಗಳು

    ನಿಖಿಲ್ ಗೆಲುವಿಗಾಗಿ ರಥೋತ್ಸವದಲ್ಲಿ ಹರಕೆ ಹೊತ್ತ ಅಭಿಮಾನಿಗಳು

    ಮಂಡ್ಯ: ಲೋಕಸಭಾ ಚುನಾವಣೆಯ ಮೈತ್ರಿ ಪಕ್ಷದ ಸ್ಪರ್ಧಿ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಅವರ ಅಭಿಮಾನಿಗಳು ರಥೋತ್ಸವದ ಸಂದರ್ಭದಲ್ಲಿ ಹರಕೆ ಹೊತ್ತಿದ್ದಾರೆ.

    ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ 7 ಗ್ರಾಮಗಳು ಸೇರಿ ಆಚರಿಸುವ ಪಟ್ಟಲದಮ್ಮ ದೇವಿ ರಥೋತ್ಸವದಲ್ಲಿ ಅಭಿಮಾನಿಗಳು ಹರಕೆ ಹೊತ್ತಿದ್ದರು. ಈ ರಥೋತ್ಸವ ಶನಿವಾರ ರಾತ್ರಿ ನಡೆದಿದ್ದು, ಈ ವೇಳೆ ಅಭಿಮಾನಿಗಳು ತಮ್ಮ ಹರಕೆಯನ್ನು ತೀರಿಸಿದ್ದಾರೆ.

    ಅಭಿಮಾನಿಗಳು ರಥೋತ್ಸವದ ವೇಳೆ ಎಸೆಯುವ ಬಾಳೆಹಣ್ಣಿನ ಮೇಲೆ ‘ನಿಖಿಲ್ ಎಲ್ಲಿದ್ದಿಯಪ್ಪ, ಸಂಸತ್ ಹೋಗೋಕ್ಕೆ ರೆಡಿ ಆಗುತ್ತಿದ್ದೀನಿ’, ‘ಕರ್ನಾಟಕಕ್ಕೆ ಕುಮಾರಣ್ಣ, ಮಂಡ್ಯಕ್ಕೆ ನಿಖಿಲ್ ಅಣ್ಣ’ ಹಾಗೂ ‘ಮಂಡ್ಯದ ಹೆಮ್ಮೆಯ ಎಂಪಿ ನಿಖಿಲ್’ ಎಂದು ಬರೆದಿದ್ದರು.

    ನಾವು ಹರಕೆ ಹೊತ್ತಿದ್ದನು ನೆನಪು ಮಾಡಿಕೊಂಡು ಶ್ರದ್ಧೆಯಿಂದ ರಥದ ಮೇಲೆ ಎಸದರೆ ತಮ್ಮ ಹರಕೆ ಈಡೇರುತ್ತದೆ ಎಂಬ ಪ್ರತೀತಿ ಇದೆ. ಹೀಗಾಗಿ ಅಭಿಮಾನಿಗಳು ಈ ರೀತಿ ಬಾಳೆಹಣ್ಣಿನ ಮೇಲೆ ಬರೆದು, ರಥೋತ್ಸವದ ವೇಳೆ ರಥದ ಮೇಲೆ ಹರಕೆಯಿಟ್ಟು ಎಸೆದಿದ್ದಾರೆ.

  • ಲಕ್ಷಾಂತರ ಭಕ್ತರ ಸಮೂಹದಲ್ಲಿ ಜರುಗಿತು ನಂಜನಗೂಡಿನ ಪಂಚಮಹಾರಥೋತ್ಸವ

    ಲಕ್ಷಾಂತರ ಭಕ್ತರ ಸಮೂಹದಲ್ಲಿ ಜರುಗಿತು ನಂಜನಗೂಡಿನ ಪಂಚಮಹಾರಥೋತ್ಸವ

    ಮೈಸೂರು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ದೊಡ್ಡ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು. ಇನ್ನೆನ್ನು ಪಂಚಮಹಾರಥೋತ್ಸವಕ್ಕೆ ಶುಭ ಮೀನ ಲಗ್ನದಲ್ಲಿ ಚಾಲನೆ ಸಿಗಬೇಕಿತ್ತು. ಆದರೆ ಆ ವೇಳೆಗಾಗಲೇ ಮಹಾರಥದ ಹಗ್ಗ ತುಂಡಾಗಿರುವುದು ಕಂಡು ಬಂದು ಬರೋಬ್ಬರಿ 3 ಗಂಟೆಗಳ ಕಾಲ ತಡವಾಗಿ ರಥೋತ್ಸಕ್ಕೆ ಚಾಲನೆ ಸಿಕ್ಕಿತ್ತು.

    ನಂಜನಗೂಡು ರಥೋತ್ಸವದಲ್ಲಿ ಹಗ್ಗ ತುಂಡಾದ ಕಾರಣ ನಿಗದಿತ ಸಮಯಕ್ಕಿಂತ ತಡವಾಗಿ ರಥೋತ್ಸವ ನೆರವೇರಿದೆ. ಮಂಗಳವಾರ ಬೆಳಗ್ಗೆ 6.40ರಿಂದ 7ಗಂಟೆಯ ಮೀನ ಲಗ್ನದಲ್ಲಿ ರಥೋತ್ಸವ ಆರಂಭವಾಗಬೇಕಿತ್ತು. ರಥೋತ್ಸವಕ್ಕೂ ಮುನ್ನ ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಶ್ರೀಕಂಠೇಶ್ವರ ಸ್ವಾಮಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು.

    ರಥೋತ್ಸವ ಆರಂಭವಾಗುವ ಕೆಲವೇ ಕ್ಷಣಗಳ ಮುನ್ನ ಹಗ್ಗ ತುಂಡಾಗಿರುವುದನ್ನು ಗಮನಿಸಿದ ಭಕ್ತರು ಭಾರೀ ಅನಾಹುತವೊಂದನ್ನು ತಪ್ಪಿಸಿದ್ದರು. ಈ ವೇಳೆ ತಕ್ಷಣ ಕಾರ್ಯಪ್ರವೃತ್ತರಾದ ದೇಗುಲದ ಸಿಬ್ಬಂದಿ ತುಂಡಾದ ಹಗ್ಗಕ್ಕೆ ಬದಲಿ ವ್ಯವಸ್ಥೆಗೆ ಮುಂದಾದರು. ಆದರೂ ಮೂರು ಗಂಟೆಗಳ ಪ್ರಯತ್ನದಲ್ಲಿ ಮೂರು ಬಾರಿ ಹಗ್ಗ ತುಂಡಾಗಿ ರಥೋತ್ಸವ ವಿಳಂಬವಾಗಿ ನೆರವೇರಿತು.

    ಪದೇ ಪದೇ ಹಗ್ಗ ತುಂಡಾದ ಹಿನ್ನಲೆಯಲ್ಲಿ ಕ್ರೇನ್ ಹಾಗೂ ಜೆಸಿಬಿ ಸಹಾಯದಿಂದ ರಥವನ್ನು ಎಳೆಯಲಾಯಿತು. ನಂತರ ಗಣಪತಿ, ಸುಬ್ರಮಣ್ಯ, ಶ್ರೀಕಂಠೇಶ್ವರ, ಪಾರ್ವತಿ, ಚಂಡೀಕೇಶ್ವರ ರಥಗಳು ಕಂಠೇಶ್ವರ ಸ್ವಾಮಿಯ ರಥದ ಹಿಂದೆ ಸಾಗಿದವು.