Tag: Rath

  • ರಥದ ಚಕ್ರದಡಿ ಸಿಲುಕಿ ಗಾಯಗೊಂಡಿದ್ದ ಭಕ್ತ ಸಾವು

    ರಥದ ಚಕ್ರದಡಿ ಸಿಲುಕಿ ಗಾಯಗೊಂಡಿದ್ದ ಭಕ್ತ ಸಾವು

    ಯಾದಗಿರಿ: ರಥದ ಚಕ್ರದಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಭಕ್ತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ ಮಾರ್ಚ್ 5ರಂದು ಗ್ರಾಮ ದೇವತೆ ರಥೋತ್ಸವದ ವೇಳೆ ಭಕ್ತ ರಮೇಶ್ ಎಂಬವರು ರಥದ ಚಕ್ರದಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು.

    ರಥಕ್ಕೆ ಮೇಕೆ ಬಲಿ ಕೊಡುವ ವೇಳೆ ನಡೆದ ಈ ಅವಘಡದಲ್ಲಿ ರಮೇಶ್ ಗಂಭೀರವಾಗಿ ಗಾಯಗೊಂಡಿದ್ದರು. ಭಕ್ತ ರಮೇಶ್ ರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ವಾರ ಜೀವನ್ಮರಣ ಜೊತೆಗೆ ಹೋರಾಡಿದ ರಮೇಶ್ ಇಂದು ಮೃತಪಟ್ಟಿದ್ದಾರೆ.

    ಹುಣಸಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಪೊಲೀಸರ ನಿರ್ಲಕ್ಷ್ಯ ಕಾರಣ ಎನ್ನಲಾಗುತ್ತಿದೆ. ಜಾತ್ರೆಯಲ್ಲಿ ಪ್ರಾಣಿಬಲಿ ನಿಷೇಧವಿದ್ದರು ಭಕ್ತರು ಪ್ರಾಣಿ ವಧೆ ನಡೆಸಿದ್ದಾರೆ. ರಥೋತ್ಸವದ ವೇಳೆಯಲ್ಲಿ ಸೂಕ್ತ ಬಂದೋಬಸ್ತ್ ಪೊಲೀಸರು ನೀಡದ ಹಿನ್ನೆಲೆ ಈ ಅವಘಡ ನಡೆದೆ ಎನ್ನುವುದು ಎಂದು ಸ್ಥಳೀಯರು ಆರೋಪಿಸಿದ್ದಾರೆ.

  • ವಿಜೃಂಭಣೆಯಿಂದ ನೆರವೇರಿತು ಶ್ರೀ ತ್ರಿಪುರ ಸುಂದರಿ ಅಮ್ಮನ ಜಾತ್ರೆ

    ವಿಜೃಂಭಣೆಯಿಂದ ನೆರವೇರಿತು ಶ್ರೀ ತ್ರಿಪುರ ಸುಂದರಿ ಅಮ್ಮನ ಜಾತ್ರೆ

    ಮೈಸೂರು: ಜಿಲ್ಲೆಯ ಟಿ. ನರಸೀಪುರದ ಮೂಗೂರಿನಲ್ಲಿ ಶ್ರೀ ತ್ರಿಪುರ ಸುಂದರಿ ಅಮ್ಮನ ಜಾತ್ರೆ ವಿಜೃಂಭಣೆಯಿಂದ ನೆರವೇರಿದೆ.

    ಅಪಾರ ಸಂಖ್ಯೆ ಭಕ್ತರ ಸಮ್ಮುಖದಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವ ನಡೆದಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಆಗಮಿಸಿ ಭಕ್ತಿಯಿಂದ ರಥವನ್ನು ಎಳೆದಿದ್ದಾರೆ. ರಥಕ್ಕೆ ವಿವಿಧ ಫಲಪುಷ್ಪದಿಂದ ಅಲಂಕಾರ ಮಾಡಲಾಗಿತ್ತು. ಬರಿ ಹೂವುಗಳಿಂದ ಮಾತ್ರವಲ್ಲದೇ ಬಾಳೆ ಹಣ್ಣು, ಬಾಳೆ ಕಾಯಿಯ ಗೊನೆಯನ್ನು ರಥಕ್ಕೆ ಅಲಂಕಾರಕ್ಕಾಗಿ ಕಟ್ಟಿದ್ದರು.

    ಭಕ್ತಿ ಭಾವದಲ್ಲಿ ಮಿಂದೆಳೆಬೇಕಿದ್ದ ಭಕ್ತರು ಬಹಳ ಆತಂಕದಲ್ಲೇ ರಥ ಎಳೆದಿದ್ದಾರೆ. ತ್ರಿಪುರ ಸುಂದರಿ ಜಾತ್ರೆಯ ರಥದ ಚಕ್ರಗಳು ಸಂಪೂರ್ಣ ಶಿಥಿಲಗೊಂಡಿದ್ದವು. ರಥದ ಚಕ್ರದಲ್ಲಿ ಬಿರುಕು ಕಾಣಿಸಿಕೊಂಡಿದ್ದರ ಬಗ್ಗೆ ತಾಲೂಕು ಹಾಗೂ ಜಿಲ್ಲಾಡಳಿತ ಗಮನಕ್ಕೆ ತಂದಿದ್ದರೂ ಚಕ್ರಗಳನ್ನ ಸರಿಪಡಿಸದೇ ಅಧಿಕಾರಿಗಳು ರಥೋತ್ಸವ ಮುಗಿಸಿದ್ದಾರೆ.

    ಬಳ್ಳಾರಿಯ ಕೊಟ್ಟೂರು ಜಾತ್ರಾ ಸಂದರ್ಭದಲ್ಲಿ ರಥದ ಚಕ್ರ ಕುಸಿದಿತ್ತು. ಅದೇ ರೀತಿಯಾಗಿ ಇಲ್ಲೂ ಅವಘಡ ಸಂಭವಿಸಿಬೇಕೇ? ಯಾಕೆ ಅಧಿಕಾರಿಗಳು ಇನ್ನೂ ಈ ವಿಚಾರದ ಬಗ್ಗೆ ಎಚ್ಚೆತ್ತುಕೊಳ್ಳುವುದಿಲ್ಲ ಎಂದು ಭಕ್ತರು ಪ್ರಶ್ನಿಸಿ ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಹತ್ತಾರು ವರ್ಷಗಳಿಂದ ರಥದ ಚಕ್ರಗಳಿಗೆ ಕಾಯಕಲ್ಪ ಸಿಕ್ಕಿಲ್ಲ. ಯಾವ ಕ್ಷಣದಲ್ಲಾದರೂ ರಥ ಉರುಳುವ ಅಪಾಯ ಇತ್ತು. ಆದರೆ ಸದ್ಯ ಯಾವುದೇ ಅನಾಹುತ ಆಗದೇ ರಥೋತ್ಸವ ಯಶಸ್ವಿಯಾಗಿ ನೆರವೇರಿದ್ದು ಭಕ್ತರಿಗೆ ಸಂತಸ ನೀಡಿದೆ.