Tag: rat

  • ಇಲಿ ತಿಂದು ಅರಗಿಸಿಕೊಳ್ಳಲಾಗದೇ ಒದ್ದಾಡಿದ ನಾಗರಹಾವು!

    ಇಲಿ ತಿಂದು ಅರಗಿಸಿಕೊಳ್ಳಲಾಗದೇ ಒದ್ದಾಡಿದ ನಾಗರಹಾವು!

    ದಾವಣಗೆರೆ: ಆಹಾರ ಹುಡುಕಿ ಬಂದ ನಾಗಪ್ಪ ಇಲಿ ತಿಂದು, ಬಳಿಕ ಜೀರ್ಣಿಸಿಕೊಳ್ಳಲು ಆಗದೆ ಸಂಕಟ ಅನುಭವಿಸಿದ ಘಟನೆ ದಾವಣಗೆರೆ ನಗರದ ಚಿಗಟೇರಿ ಜಿಲ್ಲಾಸ್ಪತ್ರೆ ಮುಂಭಾಗ ನಡೆದಿದೆ.

    ಆಸ್ಪತ್ರೆಯ ಬಳಿ ಇರುವ ಎಳನೀರು ಅಂಗಡಿಯಲ್ಲಿ ತೆಂಗಿನ ಕಾಯಿಗಳ ಮಧ್ಯೆ ನಾಗಪ್ಪ ದೊಡ್ಡ ಇಲಿಯೊಂದನ್ನು ತಿಂದಿದೆ. ಬಳಿಕ ಅರಗಿಸಿಕೊಳ್ಳಲಾಗದೇ ರಸ್ತೆ ಮಧ್ಯೆ ಬಂದು ತೊಂದರೆ ಅನುಭವಿಸಿದಂತಾಗಿದೆ. ಈ ವೇಳೆ ಅಲ್ಲಿದ್ದ ಜನ ನಾಗಪ್ಪನನ್ನು ಕಂಡು ಗಾಬರಿಗೊಂಡಿದ್ದಾರೆ.

    ಪೂರ್ಣ ಪ್ರಮಾಣದಲ್ಲಿ ಇಲಿಯನ್ನು ನುಂಗಿದ ನಾಗರ ಹಾವು ರಸ್ತೆಯಲ್ಲೇ ಒದ್ದಾಟ ಅನುಭವಿಸಿದೆ. ಹೊಟ್ಟೆಯ ಮಧ್ಯೆ ಭಾಗದ ತನಕ ಇಲಿಯನ್ನು ನುಂಗಿದ ನಾಗಪ್ಪ ಅರಗಿಸಿಕೊಳ್ಳಲಾಗದೇ ಇಲಿಯನ್ನು ಹೊರಗೆ ಉಗುಳಲು ಸರ್ಕಸ್ ನಡೆಸಿದೆ. ರಸ್ತೆ ಮಧ್ಯೆ ನಾಗಪ್ಪನ ಸುತ್ತ ಜನರು ಸುತ್ತುವರಿದಿದ್ದರು.

    ನಾಗಪ್ಪ ಸುಮ್ಮನೆ ಏನೂ ಮಾಡಲಾಗದ ಸ್ಥಿತಿಯಲ್ಲಿ ನರಳಾಟ ಅನುಭವಿಸಿದೆ. ಶತಾಯಗತಾಯ ಇಲಿಯನ್ನು ಹೊರ ಹಾಕಬೇಕೆಂದು ಸರ್ಕಸ್ ನಡೆಸಿ ಹೊರಳಾಡಿ ಕೊನೆಗೆ ಇಲಿಯನ್ನು ಹೊರಹಾಕಿ ನಿಟ್ಟುಸಿರು ಬಿಟ್ಟಿದೆ. ನಾಗಪ್ಪ ಈ ಸಂಕಟ ನೋಡಲಾಗದೇ ಅಲ್ಲಿದ್ದ ಜನ ಸ್ನೇಕ್ ರಮೇಶ್ ಅವರಿಗೆ ಕರೆ ಮಾಡಿದ್ದಾರೆ.

    ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ನೇಕ್ ರಮೇಶ್ ನಾಗರಹಾವನ್ನು ರಕ್ಷಿಸಿ, ಬಳಿಕ ಕೊಂಡಜ್ಜಿ ಕಾಡಿಗೆ ಬಿಟ್ಟಿದ್ದಾರೆ.

  • ಕಳೆದು ಹೋಗಿದ್ದ ಇಲಿಯನ್ನು ಹುಡುಕಿ ಕೊಟ್ಟ ಪೊಲೀಸರು!- ವಿಡಿಯೋ ವೈರಲ್

    ಕಳೆದು ಹೋಗಿದ್ದ ಇಲಿಯನ್ನು ಹುಡುಕಿ ಕೊಟ್ಟ ಪೊಲೀಸರು!- ವಿಡಿಯೋ ವೈರಲ್

    ಸಿಡ್ನಿ: ನಿರಾಶ್ರಿತ ವೃದ್ಧರೊಬ್ಬರ ಕಳೆದು ಹೋಗಿದ್ದ ಇಲಿಯನ್ನು ಪೊಲೀಸರು ಹುಡುಕಿ ಕೊಟ್ಟಿರುವ ಅಪರೂಪದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದು, ಸದ್ಯ ಪೊಲೀಸರು ಇಲಿಯನ್ನು ವೃದ್ಧರಿಗೆ ಒಪ್ಪಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಹೌದು. ಇದೇನಪ್ಪ ಕಳೆದು ಹೋಗಿರುವ ವಸ್ತು ಅಥವಾ ಮನುಷ್ಯರನ್ನು ಪೊಲೀಸರು ಪತ್ತೆ ಹಚ್ಚಿರುವ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಇಲಿಯನ್ನು ಪೊಲೀಸರು ಹುಡುಕಿ ಕೊಟ್ಟಿರೋದು ವಿಚಿತ್ರ ಅನಿಸಬಹುದು. ಆದ್ರೆ ಇದು ಸತ್ಯ. ಆಸ್ಟ್ರೇಲಿಯಾದಲ್ಲಿ ನಿರಾಶ್ರಿತ ವೃದ್ಧ ತನ್ನ ಜೊತೆಗೆ ಯಾರೂ ಇಲ್ಲವೆಂದು ಒಂದು ಇಲಿಯನ್ನು ಸಾಕಿದ್ದರು. ಅದಕ್ಕೆ ಲೂಸಿ ಎಂದು ನಾಮಕರಣ ಕೂಡ ಮಾಡಿ, ಪ್ರೀತಿಯಿಂದ ಸಾಕುತ್ತಿದ್ದರು. ಆದ್ರೆ ಆ ಇಲಿಯನ್ನು ಮಾಲೀಕ ಸಾರ್ವಜನಿಕ ಶೌಚಾಲಯಕ್ಕೆ ಹೋಗುವಾಗ ಹೊರಗೆ ಇಟ್ಟು ಹೋಗಿದ್ದರಂತೆ. ಆಗ ಅದನ್ನು ಯಾರೋ ಬೀದಿಲಿ ಬಿಟ್ಟು ಹೋಗಿದ್ದಾರೆಂದು ಭಾವಿಸಿ ಮಹಿಳೆಯೊಬ್ಬರು ಎತ್ತಿಕೊಂಡು ಹೋಗಿದ್ದಾರೆ.

    ಶೌಚಾಲಯದಿಂದ ಹೊರಕ್ಕೆ ಬಂದ ಬಳಿಕ ಪ್ರೀತಿಯ ಇಲಿ ಕಾಣದೇ ಈ ವೃದ್ಧ ಕಂಗಾಲಾಗಿದ್ದು, ಕಳೆದು ಹೋಗಿರುವ ಇಲಿಯನ್ನು ಹುಡುಕಿಕೊಡಿ ಎಂದು ಪೊಲೀಸರಿಗೆ ದೂರು ನೀಡಿದ್ದರು.

    ವೃದ್ಧರ ಅಳಲನ್ನು ನೋಡಲಾಗದೇ ನ್ಯೂ ಸೌಥ್ ವೇಲ್ಸ್ ಪೊಲೀಸರ ತಮ್ಮ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ಇಲಿ ಕಾಣೆಯಾಗಿದೆ ಎಂದು ಪ್ರಕಟಿಸಿದ್ದರು. ಕೊನೆಗೂ ಪೊಲೀಸರು ಇಲಿಯನ್ನು ಪತ್ತೆ ಹಚ್ಚಿ, ನಂತರ ವೃದ್ಧರಿಗೆ ಇಲಿಯನ್ನು ಒಪ್ಪಿಸಿ, ಆ ದೃಶ್ಯದ ವಿಡಿಯೋವನ್ನು ಫೇಸ್‍ಬುಕ್ ಖಾತೆಯಲ್ಲಿ ಪೊಲೀಸರು ಹಂಚಿಕೊಂಡಿದ್ದಾರೆ.

    ಈ ವಿಡಿಯೋ ಸದ್ಯ ನೆಟ್ಟಿಗರ ಮನ ಗೆದ್ದಿದ್ದು, 1 ಲಕ್ಷಕ್ಕಿಂತಲೂ ಹೆಚ್ಚು ಬಾರಿ ವಿಡಿಯೋ ವೀಕ್ಷಣೆಯಾಗಿದೆ. ಹಾಗೆಯೇ 10 ಸಾವಿರಕ್ಕೂ ಹೆಚ್ಚು ಕಮೆಂಟ್ಸ್ ಹಾಗೂ 8 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ. ಈ ಮೂಲಕ ಪೊಲೀಸರ ಈ ಪ್ರಾಮಾಣಿಕ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.

    https://www.facebook.com/nswpoliceforce/videos/2381018858800298/

  • ಕೊಲ್ಲಲು ಬಂದ ಬೆಕ್ಕನ್ನ ಅಟ್ಟಾಡಿಸಿದ ಇಲಿ-ವಿಡಿಯೋ ನೋಡಿ

    ಕೊಲ್ಲಲು ಬಂದ ಬೆಕ್ಕನ್ನ ಅಟ್ಟಾಡಿಸಿದ ಇಲಿ-ವಿಡಿಯೋ ನೋಡಿ

    ಲುಕ್ಸೆಂಬರ್ಗ್: ಬೆಕ್ಕು-ಇಲಿ ಎರಡೂ ಪ್ರಾಣಿಗಳು ಬದ್ಧವೈರಿಗಳು ಅಂತಾ ಎಲ್ಲರಿಗೂ ಗೊತ್ತು. ಈ ಎರಡು ಪ್ರಾಣಿಗಳಲ್ಲಿ ಬೆಕ್ಕು ಬಲಿಷ್ಠ ಅಂತಾ ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ. ಆದ್ರೆ ಲಕ್ಸೆಂಬರ್ಗ್ ನಲ್ಲಿ ಇಲಿಯೊಂದು ತನ್ನನ್ನು ಕೊಲ್ಲಲು ಬಂದ ಬೆಕ್ಕನ್ನು ಅಟ್ಟಾಡಿಸಿ ಓಡಿಸಿಕೊಂಡು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಲುಕ್ಸೆಂಬರ್ಗ್ ನಗರದ ಎಸ್ಕ್-ಸುರ್-ಅಲ್ಜೆಟ್ಟೆ ಎಂಬಲ್ಲಿ ಈ ಘಟನೆ ನಡೆದಿದ್ದು, ಇಲಿ ಮತ್ತು ಬೆಕ್ಕಿನ ಕಾದಾಟದ ದೃಶ್ಯಗಳನ್ನು ದಾರಿಹೋಕರೊಬ್ಬರು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದಿದ್ದಾರೆ. ನವೆಂಬರ್ 5ರಂದು ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿದ ನೆಟ್ಟಿಗರು ಆಶ್ವರ್ಯ ವ್ಯಕ್ತಪಡಿಸಿದ್ದಾರೆ.

    ವಿಡಿಯೋದಲ್ಲಿ ಏನಿದೆ..?
    ಕಟ್ಟಡದ ಕಿಟಕಿಯಿಂದ ಹೊರ ಬಂದ ಬೆಕ್ಕು ರಸ್ತೆಯನ್ನು ದಾಟುತ್ತಿತ್ತು. ರಸ್ತೆಯ ಮತ್ತೊಂದು ಬದಿಯಲ್ಲಿ ಇಲಿ ಇರೋದನ್ನು ಕಂಡ ಬೆಕ್ಕು ಭರ್ಜರಿ ಬೇಟೆ ಸಿಕ್ಕಿತೆಂದು ಅದರತ್ತ ಓಡಿಹೋಗಿದೆ. ಬೆಕ್ಕನ್ನು ನೋಡಿ ಸ್ವಲ್ಪವೂ ವಿಚಲಿತಗೊಳ್ಳದ ಇಲಿ ಅದರೊಡನೆ ಕಾದಾಟಕ್ಕೆ ಇಳಿದಿದೆ. ಇಲಿಯ ಧೈರ್ಯವನ್ನು ನೋಡಿ ಭಯಗೊಂಡ ಬೆಕ್ಕು ಅಲ್ಲಿಂದ ನಿಧಾನಕ್ಕೆ ಕಾಲ್ಕಿತ್ತಿದೆ.

    ಬೆಕ್ಕು ತನ್ನ ಬಾಲ ಮುದುರಿಕೊಂಡು ಹೋಗುತ್ತಿದ್ದರೂ ಇಲಿ ವೀರಾವೇಷದಿಂದ ಅದರ ಹಿಂದೆ ಹೋಗಿದೆ. ಇಲಿಯನ್ನು ಕಂಡ ಬೆಕ್ಕು ಮತ್ತೆ ಹೋರಾಟಕ್ಕೆ ಇಳಿದ್ರೂ ಪ್ರಯೋಜನವಾಗಿಲ್ಲ. ಕೊನೆಗೆ ಇದರೊಂದಿಗಿನ ಹೋರಾಟ ವ್ಯರ್ಥ ಎಂದು ಅರಿತ ಬೆಕ್ಕು ಪಲಾಯನ ಮಾಡಿದೆ.

    ನಾನು ರಸ್ತೆ ಮಾರ್ಗವಾಗಿ ತೆರಳುತ್ತಿರುವಾಗ ಬೆಕ್ಕು ರಸ್ತೆ ದಾಟುವುದನ್ನು ಕಂಡೆ. ಅದು ನೇರವಾಗಿ ಇಲಿಯ ಬಳಿ ತೆರಳುತ್ತಿದ್ದಂತೆ ನಾನು ವಿಡಿಯೋ ಮಾಡಲು ಪ್ರಾರಂಭಿಸಿದೆ. ಇಲಿ ಮತ್ತು ಬೆಕ್ಕಿನ ಕಾದಾಟ ನಿಜಕ್ಕೂ ರೋಚಕವಾಗಿತ್ತು ಎಂದು ವಿಡಿಯೋ ಚಿತ್ರೀಕರಿಸಿದ ಯುವಕ ಹೇಳಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=tbtx0xdy6kQ

  • ಸತ್ತ ಇಲಿಯನ್ನು ಮತ್ತೊಬ್ಬರ ಮನೆ ಮುಂದೆ ಎಸೆದು ಕೊಲೆಯಾದ!

    ಸತ್ತ ಇಲಿಯನ್ನು ಮತ್ತೊಬ್ಬರ ಮನೆ ಮುಂದೆ ಎಸೆದು ಕೊಲೆಯಾದ!

    ನವದೆಹಲಿ: ಸತ್ತಿರುವ ಇಲಿಯನ್ನು ಮನೆಯ ಮುಂದೆ ಎಸೆದಿದ್ದಕ್ಕೆ ವ್ಯಕ್ತಿಯೊಬ್ಬನನ್ನು ರಾಡ್‍ನಿಂತ ಹೊಡೆದು, ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.

    ದೆಹಲಿಯ ಕಿರಾರಿ ಪ್ರದೇಶದಲ್ಲಿ ಸೋಮವಾರ ಘಟನೆ ನಡೆದಿದ್ದು, ಹಲ್ಲೆಗೆ ಒಳಗಾಗಿದ್ದ 40 ವರ್ಷದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮೃತಪಟ್ಟಿದ್ದಾನೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

    ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಮೃತ ವ್ಯಕ್ತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ತಕ್ಷಣ ಆರೋಪಿಯ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ. ಆದರೆ ಆರೋಪಿಯನ್ನು ಇನ್ನೂ ವಶಕ್ಕೆ ಪಡೆದಿಲ್ಲ ಎಂದು ಪೊಲೀಸ್ ಉಪ ಆಯುಕ್ತ ಸೆಜು ಪಿ ಕುರುವಿಲ್ಲಾ ಸ್ಪಷ್ಟಣೆ ನೀಡಿದ್ದಾರೆ. ಇದನ್ನು ಓದಿ: ನಾಯಿಮರಿಯಿಂದಾಗಿ 40 ವರ್ಷದ ವ್ಯಕ್ತಿಯ ಪ್ರಾಣವೇ ಹೋಯ್ತು!

    ಈ ಹಿಂದೆ ಇಂತಹದ್ದೇ ಪ್ರಕರಣವೊಂದು ದೆಹಲಿಯಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ಕಾರ್ ಪಾರ್ಕ್ ಮಾಡುತ್ತಿದ್ದ ವೇಳೆ ನಾಯಿಯ ಮೇಲೆ ಹರಿಸಿದ್ದ. ಇದರಿಂದ ಕೋಪಗೊಂಡ ನಾಯಿಯ ಮಾಲೀಕ ವ್ಯಕ್ತಿಯನ್ನು ಥಳಿಸಿ, ಕೊಲೆ ಮಾಡಿದ್ದ. ಒಂದೇ ತಿಂಗಳಿನಲ್ಲಿ ಇಂತಹ ಎರಡು ಪ್ರಕರಣಗಳು ನಡೆದಿದ್ದು, ದೆಹಲಿ ಸಾರ್ವಜನಿಕರಲ್ಲಿ ಆತಂಕವನ್ನು ಉಂಟು ಮಾಡಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಐಸಿಯುನಲ್ಲಿ ಮೃತಪಟ್ಟ ವ್ಯಕ್ತಿಯ ದೇಹದ ಮೇಲೆ ಇಲಿ ಕಚ್ಚಿದ ಗುರುತುಗಳು ಪತ್ತೆ!

    ಐಸಿಯುನಲ್ಲಿ ಮೃತಪಟ್ಟ ವ್ಯಕ್ತಿಯ ದೇಹದ ಮೇಲೆ ಇಲಿ ಕಚ್ಚಿದ ಗುರುತುಗಳು ಪತ್ತೆ!

    ಭೋಪಾಲ್: ಮಧ್ಯಪ್ರದೇಶದ ದಾಮೋಹ್ ಜಿಲ್ಲಾಸ್ಪತ್ರೆಯಲ್ಲಿ ಐಸಿಯುನಲ್ಲಿ ಮೃತಪಟ್ಟಿದ್ದ 70 ವರ್ಷದ ವ್ಯಕ್ತಿಯ ದೇಹದಲ್ಲಿ ಇಲಿ ಕಚ್ಚಿದ ಗುರುತುಗಳು ಪತ್ತೆಯಾಗಿದೆ.

    ಸೋಮವಾರ ರಾತ್ರಿ ಸುಖಾ ಸಪ್ತಾರ ಹಳ್ಳಿಯ ವಿರೇಂದ್ರ ಚಾದರ್ ಅವರ ತಂದೆ ಜಗದೀಶ್ ಚಾದರ್(70) ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಸೋಮವಾರ ಐಸಿಯುನಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದು, ಮೃತದೇಹವನ್ನು ಪಡೆದುಕೊಳ್ಳುವಾಗ ಇಲಿ ಕಚ್ಚಿದ ಗುರುತುಗಳು ಪತ್ತೆಯಾಗಿದೆ.

    ಮಧ್ಯರಾತ್ರಿ 2 ಗಂಟೆಗೆ ತಂದೆ ಮೃತಪಟ್ಟಿದ್ದಾರೆ ಎಂದು ತಿಳಿಸಲಾಯಿತು. ಮೃತಪಟ್ಟ ದೇಹವನ್ನು ಪಡೆದುಕೊಳ್ಳುವಾಗ ದೇಹದ ಎಡಗಣ್ಣಿನ ಬಳಿ ಕೆಲವು ಗಂಭೀರ ಗುರುತುಗಳಾಗಿದ್ದವು ಮತ್ತು ಆ ಗಾಯಗಳಿಗೆ ಮುಲಾಮು ಹಾಕಲಾಗಿತ್ತು. ಅದನ್ನು ಕಂಡು ಏನಿದು ಎಂದು ಪ್ರಶ್ನಿಸಿದ್ದಾಗ ಸಿಬ್ಬಂದಿ ಇಲಿ ಕಚ್ಚಿದೆ ಎಂದು ಹೇಳಿದ್ದಾರೆ ಎಂಬುದಾಗಿ ವೀರೇಂದ್ರ ಚಾದರ್ ತಿಳಿಸಿದ್ದಾರೆ.

    ಸಿವಿಲ್ ಸರ್ಜನ್ ಡಾ. ಮಮ್ತಾ ಟಿಮೊರಿರವರು ಈ ಘಟನೆ ನನಗೆ ಬುಧವಾರ ಬೆಳಗ್ಗೆ ತಿಳಿದು ಬಂದಿದೆ. ಈ ಬಗ್ಗೆ ಯಾರೊಬ್ಬ ಸಿಬ್ಬಂದಿಯೂ ನನ್ನ ಗಮನಕ್ಕೆ ತಂದಿಲ್ಲ. ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿದ್ದು ತನಿಖೆಗೆ ಆದೇಶಿಸಿದ್ದೇನೆ. ಇಲಿಗಳನ್ನು ನಿಯಂತ್ರಿಸಲು ಈಗಾಗಲೇ ಇಂದೋರ್ ಮೂಲದ ಕ್ರೀಮಿನಾಶಕ ಕಂಪೆನಿಯನ್ನು ಸಂಪರ್ಕಿಸಿದ್ದೇನೆ ಎಂದು ತಿಳಿಸಿದರು.

    ಮಾನವ ಹಕ್ಕು ಕಾರ್ಯಕರ್ತ ಮನೋಜ್ ದಿವಾರಿಯಾ ಪ್ರತಿಕ್ರಿಯಿಸಿ, ಜಿಲ್ಲಾ ಆಸ್ಪತ್ರೆಗಳಲ್ಲಿ ಈ ರೀತಿಯ ಘಟನೆ ಇದೇ ಮೊದಲ ಬಾರಿ ಅಲ್ಲ ಈ ಹಿಂದೆಯೂ ಸಂಭವಿಸಿತ್ತು. ಆದರೆ ಈ ಬಗ್ಗೆ ಇನ್ನೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಹೇಳಿದ್ದಾರೆ. ಐಸಿಯು ನಲ್ಲಿ ಇಲಿಗಳು ಕಂಡುಬಂದಿರುವುದು ಗಂಭೀರವಾದ ವಿಷಯವಾಗಿದೆ. ಈ ಬಗ್ಗೆ ಉನ್ನತ ಮಟ್ಟದ ವಿಚಾರಣೆ ಮಾಡಲು ಆದೇಶಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮೂಷಿಕ ವರ್ಸಸ್ ನಾಗರಾಜ: ಇಬ್ಬರ ನಡುವಿನ ಫೈಟ್ ನಲ್ಲಿ ಗೆದ್ದಿದ್ಯಾರು? ವಿಡಿಯೋ ನೋಡಿ

    ಮೂಷಿಕ ವರ್ಸಸ್ ನಾಗರಾಜ: ಇಬ್ಬರ ನಡುವಿನ ಫೈಟ್ ನಲ್ಲಿ ಗೆದ್ದಿದ್ಯಾರು? ವಿಡಿಯೋ ನೋಡಿ

    ಬೀಜಿಂಗ್: ಹಾವು ಮತ್ತು ಮಂಗೂಸಿ ಒಂದನ್ನೊಂದು ಕಂಡರೆ ಒಂದಕ್ಕೆ ಆಗುವುದಿಲ್ಲ ಎಂದು ಸಾಕಷ್ಟು ಕಥೆಗಳಲ್ಲಿ ಕೇಳಿದ್ದೇವೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಮುಂಗೂಸಿ ಮತ್ತು ಹಾವುಗಳ ನಡುವೆಯ ರೋಚಕ ಕಾದಾಟವನ್ನು ನೋಡಿರುತ್ತೇವೆ. ಕಳೆದ ಒಂದು ವಾರದಿಂದ ಇಲಿ ಮತ್ತು ನಾಗರ ಹಾವಿನ ಮಧ್ಯೆ ಕಾದಾಟ ನಡೆದಿರುವ ವಿಡಿಯೋ ಫೇಸ್ ಬುಕ್, ಯೂಟ್ಯೂಬ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಹೌದು, ಜುಲೈ 2 ರಂದು ಚೀನಾದ ಪುನಿಂಗ್ ಎಂಬಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿ ಇಲಿ ತನ್ನ ಶಕ್ತಿ ಮೀರಿ ಹಾವಿನೊಂದಿಗೆ ಸೆಣಸಾಟ ನಡೆಸುವುದನ್ನು ಕಾಣಬಹುದಾಗಿದೆ. ಆದ್ರೆ ಹಾವು ತನ್ನ ಶತ್ರು ಇಲಿಯ ವಿರುದ್ಧ ಸೋಲು ಒಪ್ಪಿಕೊಂಡಂತೆ ಚಲನಾ ರಹಿತವಾಗಿ ಬಿದ್ದಿದೆ.

    ಇಲಿ ತನ್ನ ಬಾಯಿಯಿಂದ ಹಾವಿನ ಬಾಯಿಯನ್ನು ಕಚ್ಚುತ್ತಾ ಅತ್ತಿಂದಿತ್ತ ಎಳೆದಾಡುತ್ತಿದೆ. ಕೊನೆಗೆ ಹಾವಿನ ಬಾಯಿಯಿಂದ ಸ್ವಲ್ಪ ರಕ್ತ ಬಂದಿದೆ. ಇದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ. ಕೊನೆಗೆ ಇಲಿ ತನ್ನ ಛಲ ಬಿಡದೇ ಹಾವನ್ನು ಪೊದೆಯೊಳಗೆ ಎಳೆದುಕೊಂಡು ಹೋಗಲು ಪ್ರಯತ್ನಿಸಿದೆ. ಭಯಬೀತವಾದ ಹಾವು ಕೂಡಲೇ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಮಾಡಿದೆ. ಆದ್ರೆ ಇಲಿ ಹಾವನ್ನು ಪೊದೆಯೊಳಗೆ ಎಳೆದುಕೊಂಡು ಹೋಗಿದೆ.

    ಈ ವಿಡಿಯೋವನ್ನು ಚೀನಾದ ಫೇಸ್ ಬುಕ್ ಪೇಜಿನಲ್ಲಿ ಅಪ್ಲೋಡ್ ಮಾಡಲಾಗಿದ್ದು, 9,800 ಕ್ಕೂ ಅಧಿಕ ವ್ಯೂವ್ ಗಳನ್ನು ಪಡೆದಿದೆ. 2017ರಲ್ಲಿ ಎಸಿಯಿಂದ ಹೊರ ಬಂದ ಹಾವು ಮನೆಯಲ್ಲಿರುವ ಇಲಿಯನ್ನು ನುಂಗುವ ವಿಡಿಯೋ ವೈರಲ್ ಆಗಿತ್ತು. ಆದರೆ ಅದಕ್ಕೆ ತದ್ವಿರುದ್ಧವಾದ ವಿಡಿಯೋ ವೈರಲ್ ಆಗಿದೆ.

    https://www.facebook.com/pearvideocn/videos/1066984593460223/

  • ಸಾಫ್ಟ್ ಡ್ರಿಂಕ್ ಟಿನ್‍ನಲ್ಲಿ ನಲ್ಲಿ ಸತ್ತ ಇಲಿ ಕಂಡು ಹೌಹಾರಿದ ವ್ಯಕ್ತಿ!

    ಸಾಫ್ಟ್ ಡ್ರಿಂಕ್ ಟಿನ್‍ನಲ್ಲಿ ನಲ್ಲಿ ಸತ್ತ ಇಲಿ ಕಂಡು ಹೌಹಾರಿದ ವ್ಯಕ್ತಿ!

    ವಾಷಿಂಗ್ಟನ್: ತಂಪು ಪಾನೀಯ ಟಿನ್ ಒಳಗೆ ಸತ್ತ ಇಲಿಯೊಂದು ಪತ್ತೆಯಾಗಿದೆ ಎಂದು ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ.

    ಜೋಶ್ ಹೆನ್ಲೆ ಭಾನುವಾರ ರಾತ್ರಿ ಅರ್ಕಾನ್ಸಾಸ್ ನ ಪೆಟ್ರೋಲ್ ಬಂಕ್ ಬಳಿ ರೆಡ್ ಬುಲ್ ತಂಪು ಪಾನೀಯವನ್ನು ಖರೀದಿಸಿದ್ದಾರೆ. ಆದರೆ ಬಳಿಕ ಅವರು ಅದರಲ್ಲಿ ಸತ್ತ ಇಲಿ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

    ಹೆನ್ಲೆ ತಂಪು ಪಾನೀಯದಲ್ಲಿ ಪತ್ತೆಯಾದ ಇಲಿಯ ವಿಡಿಯೋವನ್ನು ತನ್ನ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಸತ್ತ ಇಲಿಯನ್ನು ತೋರಿಸಲು ಕತ್ತರಿಯಿಂದ ಟಿನ್‍ನ ಮಧ್ಯದಲ್ಲಿ ಕತ್ತರಿಸಿದ್ದಾರೆ.

    ನಾನು ಯಾವಾಗಲೂ ರೆಡ್ ಬುಲ್ ಕುಡಿಯುತ್ತೇನೆ. ಇದರಲ್ಲಿ ಕಾರ್ಖಾನೆಯ ತಪ್ಪಿದೆಯೋ ಅಥವಾ ಬೇರೆನೋ ನನಗೆ ತಿಳಿದಿಲ್ಲ. ಆದರೆ ಇದರೊಳಗೆ ಸತ್ತ ಇಲಿ ಇದೆ ಎಂದು ಹೇಳಿಕೊಂಡಿದ್ದಾರೆ. ಹೆನ್ಲೆ ತಂಪು ಪಾನೀಯವನ್ನು ಖರೀದಿಸಿದ ನಂತರ ಸಂಪೂರ್ಣ ಕುಡಿದು ಮುಗಿಸಿರಲಿಲ್ಲ. ರಾತ್ರಿ ಅದನ್ನು ತನ್ನ ಕಾರಿನಲ್ಲಿ ಬಿಟ್ಟು ಹೋಗಿದ್ದರು. ಮಾರನೇ ದಿನ ಕಾರಿನಲ್ಲಿದ್ದ ಪಾನೀಯವನ್ನು ಸುರಿಯಲು ಹೋದಾಗ ಏನೋ ಶಬ್ದ ಕೇಳಿದ್ದು, ಒಳಗೆ ಏನೋ ಇದೆ ಎಂದು ಗೊತ್ತಾಗಿತ್ತು. ನಂತರ ಟಿನ್‍ನ ಖಾಲಿಗೊಳಿಸಿ ನೋಡಿದಾಗ ಇಲಿ ಪತ್ತೆಯಾಗಿದೆ.

    ಹೊರಗಿನಿಂದ ಇಲಿ ಟಿನ್‍ನಲ್ಲಿ ಹೋಗಿರಲು ಸಾಧ್ಯವಿಲ್ಲ. ಯಾಕಂದ್ರೆ ಈ ಮುಂಚೆ ನನ್ನ ಕಾರಿನಲ್ಲಿ ಯಾವತ್ತೂ ಇಲಿಗಳನ್ನ ನೋಡಿಲ್ಲ ಎಂದು ಹೆನ್ಲೆ ಹೇಳಿದ್ದಾರೆ.

    ರೆಡ್ ಬುಲ್ ಅನ್ನು ಪರೀಕ್ಷಿಸಿ ಅದರಲ್ಲಿ ಸತ್ತ ಇಲಿಗಳು ಇರುತ್ತವೆ ಎಂದು ಹೇಳಿ ಜನರನ್ನು ಒತ್ತಾಯಿಸುತ್ತಿದ್ದಾರೆ. ವಿಡಿಯೋವನ್ನು ಪೋಸ್ಟ್ ಮಾಡಿದಾಗಿನಿಂದ 1,02,500 ಕ್ಕಿಂತ ಹೆಚ್ಚು ಬಾರಿ ಶೇರ್ ಆಗಿದೆ. ಜೊತೆಗೆ ಸುಮಾರು 3,000 ಕ್ಕೂ ಹೆಚ್ಚು ರಿಯಾಕ್ಷನ್ಸ್ ಬಂದಿದೆ.

    ಈ ಬಗ್ಗೆ ಪ್ರತಿಕ್ರಿಯೆಗಾಗಿ ರೆಡ್ ಬುಲ್ ಸಂಸ್ಥೆಯನ್ನ ಸಂಪರ್ಕಿಸಲಾಗಿದೆ ಎಂದು ವರದಿಯಾಗಿದೆ.

  • ಮುದ್ದಿನಿಂದ ಸಾಕಿದ ಇಲಿ ಸಾವನ್ನಪ್ಪಿದ್ದಕ್ಕೆ 12 ವರ್ಷದ ಬಾಲಕಿ ಆತ್ಮಹತ್ಯೆ!

    ಮುದ್ದಿನಿಂದ ಸಾಕಿದ ಇಲಿ ಸಾವನ್ನಪ್ಪಿದ್ದಕ್ಕೆ 12 ವರ್ಷದ ಬಾಲಕಿ ಆತ್ಮಹತ್ಯೆ!

    ಭೋಪಾಲ್: ಸಾಕಿದ ಮುದ್ದಿನ ಇಲಿ ಸಾವನ್ನಪ್ಪಿದ್ದಕ್ಕೆ ಮನನೊಂದು 12 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಅಯೋಧ್ಯಾ ನಗರದಲ್ಲಿ ನಡೆದಿದೆ.

    ಮಹೇಂದ್ರ ಸಿಂಗ್ ರಾಥೋರ್ ಅವರ ಪುತ್ರಿ ದಿವ್ಯಾಂಶಿ ರಾಥೋರ್ (12) ಆತ್ಮಹತ್ಯೆಗೆ ಶರಣಾದ ಬಾಲಕಿ. ಈಕೆ ಶನಿವಾರ ತಮ್ಮ ಸುರ್ಬಿ ವಿಹಾರ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ದಿವ್ಯಾಂಶಿಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಹೀಗಾಗಿ ಕೆಲ ದಿನಗಳ ಹಿಂದೆ ಆಕೆ ಬಿಳಿ ಇಲಿಯೊಂದನ್ನು ಖರೀದಿಸಿದ್ದಳು. ಅದರ ಜೊತೆಗೆ ಆಕೆಗೆ ವಿಶೇಷ ಅಕ್ಕರೆ ಬೆಳೆದಿತ್ತು. ಆದರೆ ಅದು ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದರಿಂದ ಬಾಲಕಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ಬಾಲಕಿ ಕುಟುಂಬದವರು ತಿಳಿಸಿದ್ದಾರೆ ಎಂದು ಪೊಲೀಸ್ ಬಾಲ್‍ಜೀತ್ ಸಿಂಗ್ ಹೇಳಿದ್ದಾರೆ.

    ಶುಕ್ರವಾರ ಸಾಕಿದ ಇಲಿ ಸಾವನ್ನಪ್ಪಿದೆ. ಬಾಲಕಿ ಸತ್ತ ಇಲಿಯನ್ನು ಬಿಸಾಡಲು ಬಿಡದೆ ಮನೆಯಲ್ಲೇ ಅದಕ್ಕೆ ಗೋರಿ ಮಾಡಿ ಹೂವಿನಿಂದ ಅಲಂಕರಿಸಿದ್ದಳು. ಆದರೆ ಇದ್ದಕ್ಕಿದ್ದಂತೆ ಶನಿವಾರ ಮಧ್ಯಾಹ್ನ ರೂಂಗೆ ಹೋಗಿ ಬಾಗಿಲ ಚಿಲಕ ಹಾಕಿಕೊಂಡಿದ್ದಾಳೆ. ನಂತರ ತಾಯಿ ಹೋಗಿ ಕರೆದರೂ ಬಾಗಿಲು ತೆಗೆಯಲಿಲ್ಲ. ಕೊನೆಗೆ ಮನೆಯವರು ಭಯಗೊಂಡು ನೆರೆಹೊರೆಯವರ ಸಹಾಯ ಪಡೆದು ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಈ ವೇಳೆ ಬಾಲಕಿ ಆಕೆಯ ದುಪ್ಪಟ್ಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ ಎಂದು ಸಿಂಗ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

  • ಹೊಸ ಆದಾಯದ ಮೂಲ ಕಂಡುಕೊಂಡ ಬಿಬಿಎಂಪಿ- ಹಂದಿ ಹಿಡಿಯಲು ಗುತ್ತಿಗೆ ನೀಡಿ 5 ಸಾವಿರ ರೂ. ಲಾಭ

    ಹೊಸ ಆದಾಯದ ಮೂಲ ಕಂಡುಕೊಂಡ ಬಿಬಿಎಂಪಿ- ಹಂದಿ ಹಿಡಿಯಲು ಗುತ್ತಿಗೆ ನೀಡಿ 5 ಸಾವಿರ ರೂ. ಲಾಭ

    ಬೆಂಗಳೂರು: ಆಸ್ತಿ ತೆರಿಗೆ, ಸರ್ಕಾರಗಳಿಂದ ಬರುವ ಅನುದಾನ, ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಮೂಲಕ ಸಾವಿರಾರು ಕೋಟಿ ಆದಾಯ ಗಳಿಸಿರುವ ಬಿಬಿಎಂಪಿಗೆ ಇದೀಗ ಹೊಸದೊಂದು ಆದಾಯದ ಮೂಲ ಸೇರ್ಪಡೆಗೊಂಡಿದೆ. ಅದೇ ಹಂದಿ ಮಾಂಸ ಮಾರಾಟ.

    ಹೌದು. ಹಂದಿ ಮಾಂಸ ಮಾರಾಟದ ಮೂಲಕ ಬಿಬಿಎಂಪಿ ಬೊಕ್ಕಸಕ್ಕೆ ಐದು ಸಾವಿರ ರೂಪಾಯಿ ಆದಾಯ ಬಂದಿದೆಯಂತೆ. ಬೆಂಗಳೂರಿನಲ್ಲಿರೋ ಇಲಿ ಹಿಡಿಯೋಕೆ, ನಾಯಿ ಹಿಡಿಯೋಕೆ ಕೋಟಿ ಕೋಟಿ ಖರ್ಚು ಮಾಡಿ ಬಿಬಿಎಂಪಿ ಹಣವನ್ನು ನಷ್ಟ ಮಾಡೋ ಅಧಿಕಾರಿಗಳು, ಇದೀಗ ಬೆಂಗಳೂರಿನಲ್ಲಿರೋ ಬಿಡಾಡಿ ಹಂದಿಗಳನ್ನು ಹಿಡಿಯೋ ಮೂಲಕ ಬಿಬಿಎಂಪಿಗೆ ಮತ್ತೊಂದು ಆದಾಯ ಮೂಲ ಹುಡುಕಿದ್ದಾರೆ.

    ಜನರಿಗೆ ತೊಂದರೆ ಕೊಡುವ ಬಿಡಾಡಿ ಹಂದಿಗಳನ್ನು ಹಿಡಿಯಲು ಬಿಬಿಎಂಪಿ ಗುತ್ತಿಗೆ ನೀಡಿತ್ತು. ಅದರಂತೆ ಈ ವರ್ಷದಲ್ಲಿ 36 ಹಂದಿಗಳನ್ನು ಹಿಡಿಯಲಾಗಿದೆ. ಆ ಎಲ್ಲ ಹಂದಿಗಳ ತೂಕ 460 ಕೆ.ಜಿ.ಗಳಾಗಿದ್ದು, ಪ್ರತಿ ಕೆ.ಜಿ.ಗೆ 45 ರೂ.ಗಳಂತೆ ಮಾರಾಟ ಮಾಡಲಾಗಿದೆ. ಹಂದಿ ಮಾರಾಟದಿಂದಾಗಿ ಬಿಬಿಎಂಪಿಗೆ 23,000 ರೂ. ಆದಾಯ ಬಂದಿದೆ. ಅದರಲ್ಲಿ ಹಂದಿ ಹಿಡಿದಿದಕ್ಕಾಗಿ ಪ್ರತಿ ಹಂದಿಗೆ 500 ರೂ.ಗಳಂತೆ ಗುತ್ತಿಗೆದಾರರಿಗೆ 18 ಸಾವಿರ ರೂ.ಗಳನ್ನು ಪಾವತಿಸಲಾಗಿದೆ. ಅದರಿಂದಾಗಿ ಬಿಬಿಎಂಪಿಗೆ 5 ಸಾವಿರ ರೂ. ಉಳಿದಿರೋದಾಗಿ ಅಧಿಕಾರಿಗಳು ಲೆಕ್ಕ ನೀಡಿದ್ದಾರೆ.

    2017-18ನೇ ಸಾಲಿನಲ್ಲಿ ಅಕ್ಟೋಬರ್ ತಿಂಗಳವರೆಗೆ ಹಂದಿಗಳ ಕಾಟಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಗೆ ಬಂದಿದ್ದ 36 ದೂರುಗಳು ಪೈಕಿ 15 ದೂರುಗಳನ್ನ ಅಟೆಂಡ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

  • ಊಟದಲ್ಲಿ ಇಲಿ ತ್ಯಾಜ್ಯ, ನುಸಿ, ಹುಳ- ಹುಬ್ಬಳ್ಳಿಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಪ್ರತಿಭಟನೆ

    ಊಟದಲ್ಲಿ ಇಲಿ ತ್ಯಾಜ್ಯ, ನುಸಿ, ಹುಳ- ಹುಬ್ಬಳ್ಳಿಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಪ್ರತಿಭಟನೆ

    ಹುಬ್ಬಳ್ಳಿ: ಇಲ್ಲಿನ ಬಿಸಿಎಮ್ ಹಾಸ್ಟೆಲ್ ನಲ್ಲಿ ಗುಣಮಟ್ಟದ ಆಹಾರ ನೀಡುತ್ತಿಲ್ಲವೆಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

    ಹುಬ್ಬಳ್ಳಿಯ ವಿದ್ಯಾನಗರದಲ್ಲಿರೋ ಬಿಸಿಎಮ್ ಹಾಸ್ಟೆಲ್ ನಲ್ಲಿ ನೀಡ್ತಾಯಿರೋ ಊಟದಲ್ಲಿ ಇಲಿಯ ತ್ಯಾಜ್ಯ, ನುಸಿ, ಹುಳುಗಳು ಬರ್ತಾಯಿದ್ದು, ಈ ಊಟ ಮಾಡಿದ ವಿದ್ಯಾರ್ಥಿಗಳು ಅನಾರೋಗ್ಯದಿಂದ ಬಳಲಿದ್ದಾರೆ. ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವಸತಿ ನಿಲಯದಲ್ಲಿದ್ದು, ಕಳಪೆ ಗುಣಮಟ್ಟದ ಆಹಾರ ನೀಡ್ತಾಯಿರೋ ಬಗ್ಗೆ ಮೇಲ್ವಿಚಾರಕರ ಗಮನಕ್ಕೆ ತಂದ್ರೂ ಪ್ರಯೋಜನವಾಗಿಲ್ಲ ಅಂತ ವಿದ್ಯಾರ್ಥಿಗಳು ದೂರಿದ್ದಾರೆ.

    ಇನ್ನು ಒಂದು ಹೊತ್ತಿಗೆ ಕೇವಲ ಎರಡು ಚಪಾತಿ ನೀಡುತ್ತಾರೆ. ಆದ್ರೆ ಅದು ನಮಗೆ ಸಾಕಾಗಲ್ಲಾ, ಒಂದು ಚಪಾತಿ ಹೆಚ್ಚಿಗೆ ಕೇಳಿದ್ರೂ ವಾರ್ಡನ್ ಬಾಯಿಂದ ಇಲ್ಲ ಸಲ್ಲದ ಬೈಗುಳಗಳನ್ನು ಕೇಳಬೇಕು ಎಂದು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಹೀಗಾಗಿ ಕಳೆದ ಮೂರು ದಿನಗಳಿಂದ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಊಟ ಮಾಡದೆ ಹೋರಾಟ ಮಾಡುತ್ತಿದ್ದಾರೆ. ಹಾಸ್ಟೆಲ್ ವಾರ್ಡನ್ ಹಾಗೂ ಸಿಬ್ಬಂದಿಗಳು ಸಹ ಕಿರುಕುಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.