Tag: Ranji final

  • Ranji Trophy | 74 ವರ್ಷಗಳ ಬಳಿಕ ಮೈಲುಗಲ್ಲು – ಹೆಲ್ಮೆಟ್‌ನಿಂದ ರಣಜಿ ಫೈನಲ್‌ ತಲುಪಿದ ಕೇರಳ!

    Ranji Trophy | 74 ವರ್ಷಗಳ ಬಳಿಕ ಮೈಲುಗಲ್ಲು – ಹೆಲ್ಮೆಟ್‌ನಿಂದ ರಣಜಿ ಫೈನಲ್‌ ತಲುಪಿದ ಕೇರಳ!

    – 2 ರನ್‌ ಹಿನ್ನಡೆಯಿಂದ ಗುಜರಾತ್‌ಗೆ ನಿರಾಸೆ – ಸೆಮಿಸ್‌ ಪಂದ್ಯ ಡ್ರಾನಲ್ಲಿ ಅಂತ್ಯ

    ಅಹಮದಾಬಾದ್: ರಣಜಿ ಟ್ರೋಫಿ (Ranji Trophy) ಸೆಮಿ ಫೈನಲ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 2 ರನ್‌ಗಳ ಮುನ್ನಡೆ ಸಾಧಿಸಿದ ಕೇರಳ ತಂಡ (Kerala Team) 74 ವರ್ಷಗಳ ನಂತರ ಫೈನಲ್‌ ತಲುಪಿದ ಸಾಧನೆ ಮಾಡಿದೆ. ಕೊನೇ ಕ್ಷಣದಲ್ಲಿ ಹೆಲ್ಮೆಟ್‌ ಸಹಾಯದಿಂದ ಸಿಕ್ಕ ಕ್ಯಾಚ್‌ ಕೇರಳ ತಂಡವನ್ನು ಫೈನಲ್‌ ತಲುಪುವಂತೆ ಮಾಡಿದೆ. ಆದ್ರೆ 2 ರನ್‌ಗಳ ಹಿನ್ನಡೆಯಿಂದಾಗಿ ಗುಜರಾತ್‌ ತಂಡದ (Gujarat team) ಫೈನಲ್‌ ಕನಸು ಭಗ್ನವಾಗಿದೆ.

    ಇನ್ನಿಂಗ್ಸ್‌ ಕೊನೆಯಲ್ಲಿ ಏನಾಯ್ತು?
    ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಸೆಮಿ ಫೈನಲ್‌ ಪಂದ್ಯ ನಡೆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಕೇರಳ ತಂಡ 187 ಓವರ್‌ಗಳಲ್ಲಿ 457 ರನ್ ಗಳಿಸಿತ್ತು. 174.3 ಓವರ್‌ಗಳಲ್ಲಿ 455 ರನ್‌ ಗಳಿಸಿದ್ದ ಗುಜರಾತ್‌ 9 ವಿಕೆಟ್‌ ಕಳೆದುಕೊಂಡಿತ್ತು. ಆದ್ರೆ ಇನ್ನಿಂಗ್ಸ್‌ ಮುನ್ನಡೆ ಕಾಯ್ದುಕೊಳ್ಳಲು ಕೇವಲ 2 ರನ್‌ ಬೇಕಿತ್ತು. ಇತ್ತ ಆದಿತ್ಯ ಸರ್ವತೇ ಬೌಲಿಂಗ್‌ನಲ್ಲಿದ್ದರೆ, ಬ್ಯಾಟರ್‌ ಅರ್ಜಾನ್ ನಾಗ್ವಾಸ್ವಾಲ್ಲಾ ಕ್ರೀಸ್‌ನಲ್ಲಿದ್ದರು. 175ನೇ ಓವರ್‌ನ 4ನೇ ಎಸೆತವನ್ನು ಬೌಂಡರಿ ಬಾರಿಸಲು ಅರ್ಜಾನ್‌ ಯತ್ನಿಸಿದರು. ಈ ವೇಳೆ ಮುಂಭಾಗದಲ್ಲಿದ್ದ ಶಾರ್ಟ್‌ ಲೆಗ್‌ ಫೀಲ್ಡರ್‌ನ ಹೆಲ್ಮೆಟ್‌ಗೆ ಬಡಿದ ಚಂಡು ನೇರವಾಗಿ ಸ್ಲಿಪ್‌ ಫೀಲ್ಡರ್‌ ಕೈ ಸೇರಿತು. ಅಂತಿಮವಾಗಿ ಗುಜರಾತ್‌ 174.4 ಓವರ್‌ಗಳಲ್ಲಿ ಆಲೌಟ್‌ ಆಗಿ ಫೈನಲ್‌ನಿಂದ ಹೊರಗುಳಿಯಿತು.

    ಸೆಮಿಸ್‌ನ 5ನೇ ದಿನವಾದ ಇಂದು ಉಭಯ ತಂಡಗಳಿಗೆ 2ನೇ ಇನ್ನಿಂಗ್ಸ್ ಬಾಕಿಯಿತ್ತು. ತನ್ನ ಸರದಿಯ 2ನೇ ಇನ್ನಿಂಗ್ಸ್‌ ಆರಂಭಿಸಿದ ಕೇರಳ ದಿನದ ಅಂತ್ಯಕ್ಕೆ 46 ಓವರ್‌ಗಳಲ್ಲಿ 4 ವಿಕೆಟ್‌ಗೆ 114 ರನ್‌ ಗಳಿಸಿತ್ತು. ಗುಜರಾತ್‌ಗೆ ಬ್ಯಾಟಿಂಗ್‌ ಮಾಡಲು ಅವಕಾಶ ಸಿಗದೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಹಾಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 2 ರನ್‌ಗಳ ಮುನ್ನಡೆ ಸಾಧಿಸಿದ ಕೇರಳ ತಂಡ ರಣಜಿ ಫೈನಲ್‌ ಪ್ರವೇಶಿಸಿತು.

    ಸೆಮಿಸ್‌ ಫಲಿತಾಂಶ ನಿರ್ಧಾರವಾಗಿದ್ದು ಹೇಗೆ?
    ಸಹಜವಾಗಿ ರೌಂಡ್ ರಾಬಿನ್ (ಲೀಗ್ ಸುತ್ತಿನ ಪಂದ್ಯ) ಪಂದ್ಯಗಳು 4 ದಿನ ನಡೆಯುತ್ತದೆ. ನಾಕೌಟ್ ಪಂದ್ಯಗಳು ಮಾತ್ರ ಟೆಸ್ಟ್ ಕ್ರಿಕೆಟ್‌ನಂತೆ 5 ದಿನ ಇರಲಿದೆ. ನಾಕೌಟ್ ಪಂದ್ಯದಲ್ಲಿ ಫಲಿತಾಂಶ ಹೊರಬೀಳದಿದ್ದರೆ, ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ ತಂಡವನ್ನು ವಿಜಯಿ ಎಂದು ಘೋಷಣೆ ಮಾಡಲಾಗುತ್ತದೆ. ಹಾಗೆಯೇ ಮೊದಲ ಇನ್ನಿಂಗ್ಸ್‌ನಲ್ಲಿ 2 ರನ್ ಮುನ್ನಡೆ ಸಾಧಿಸಿದ ಕೇರಳ ತಂಡ ಫೈನಲ್ ತಲುಪಲಿದೆ.

  • ಕರ್ನಾಟಕದ ರಣಜಿ ಕನಸು ಭಗ್ನ- 13 ವರ್ಷದ ಬಳಿಕ ಫೈನಲ್ ಪ್ರವೇಶಿಸಿದ ಬಂಗಾಳ

    ಕರ್ನಾಟಕದ ರಣಜಿ ಕನಸು ಭಗ್ನ- 13 ವರ್ಷದ ಬಳಿಕ ಫೈನಲ್ ಪ್ರವೇಶಿಸಿದ ಬಂಗಾಳ

    ಕೋಲ್ಕತ್ತಾ: ರಣಜಿ ಕ್ರಿಕೆಟ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಟೂರ್ನಿ ಆರಂಭಿಸಿದ ಕರ್ನಾಟಕ ತಂಡದ ಕಪ್ ಗೆಲ್ಲುವ ಕನಸು ಭಗ್ನಗೊಂಡಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ಬಂಗಾಳ 174 ರನ್ ಅಂತರದಿಂದ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿದೆ.

    ಕರ್ನಾಟಕದ ತಂಡದ ವಿರುದ್ಧ ಜಯದೊಂದಿಗೆ ಬಂಗಾಳ 2006-07ರ ಟೂರ್ನಿಯ ಬಳಿಕ ಇದೇ ಮೊದಲ ಬಾರಿಗೆ ರಣಜಿ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶ ಮಾಡಿದೆ. ಇತ್ತ ಲೀಗ್ ಹಾಗೂ ಕ್ವಾರ್ಟರ್ ಫೈನಲಿನಲ್ಲಿ ಉತ್ತಮ ಪ್ರದರ್ಶನ ತೋರಿದರೂ ಸತತ ಮೂರನೇ ಬಾರಿಗೆ ಸೆಮಿಫೈನಲ್ ಹಂತದಲ್ಲಿ ಕರ್ನಾಟಕ ಟೂರ್ನಿಯಿಂದ ಹೊರಬಿದ್ದಿದೆ.

    3 ವಿಕೆಟ್ ನಷ್ಟಕ್ಕೆ 98 ರನ್ ಗಳಿಂದ 4ನೇ ದಿನದಾಟ ಆರಂಭ ಮಾಡಿದ ಕರ್ನಾಟಕ ತಂಡ ಬಂಗಾಳ ವೇಗದ ಬೌಲರ್, ಮಜುಂದರ್ ದಾಳಿಗೆ ಸಿಲುಕಿದ ತಂಡ 55.3 ಓವರ್ ಗಳಲ್ಲಿ 177 ರನ್‍ಗಳಿಗೆ ಆಲೌಟ್ ಆಗುವ ಮೂಲಕ ಟೂರ್ನಿಯಿಂದ ಹೊರ ನಡೆಯಿತು. ತಂಡಕ್ಕೆ ಆಸೆಯಾಗುವ ನಿರೀಕ್ಷೆಯೊಂದಿಗೆ ಆಗಮಿಸಿದ ಕೆಎಲ್ ರಾಹುಲ್ ಶೂನ್ಯ ಸಾಧನೆಯೊಂದಿಗೆ ನಿರಾಸೆ ಮೂಡಿಸಿದರೆ, ದೇವ್‍ದತ್ತ್ ಪಡಿಕ್ಕಲ್ ಪಾತ್ರ 129 ಎಸೆತಗಳಲ್ಲಿ 62 ಸಿಡಿಸಿ ಹೋರಾಟ ತೋರಿದರು. ಉಳಿದಂತೆ ಅಂತಿಮ ಹಂತದಲ್ಲಿ ಅಭಿಮನ್ಯು ಮಿಥುನ್ 30 ಎಸೆತಗಳಲ್ಲಿ 38 ರನ್ ಗಳಿಸಿದ್ದು ತಂಡದ 2ನೇ ಇನ್ನಿಂಗ್ಸ್‍ನಲ್ಲಿ ಗಳಿಸಿದ 2ನೇ ಅತ್ಯಧಿಕ ಮೊತ್ತವಾಗಿದೆ.

    ಪಂದ್ಯದ ಆರಂಭದಲ್ಲಿ ಗೆಲುವಿನ ನಿರೀಕ್ಷೆ ಮೂಡಿಸಿದ್ದ ಕರ್ನಾಟಕ ತಂಡದ ಆಟಗಾರರು ಟಾಸ್ ಗೆದ್ದ ಬಂಗಾಳ ತಂಡದವನ್ನು ಮೊದಲ ದಿನದಾಟದಲ್ಲೇ 67 ರನ್‍ಗಳಿಗೆ 6 ವಿಕೆಟ್ ಗಳಿಸಿ ಮಿಂಚಿದ್ದರು. ಆದರೆ ಅನುಸ್ತೂಪ್ ಮುಜುಮ್ದಾರ್ ಅಜೇಯ ಶತಕ (149 ರನ್) ಬಂಗಾಳ ತಂಡವನ್ನು ಸೋಲಿನಿಂದ ದೂರ ಮಾಡಿತ್ತು. ಪರಿಣಾಮ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

    ಟೂರ್ನಿಯಲ್ಲಿ ತಮಿಳುನಾಡು ತಂಡದ ವಿರುದ್ಧ 26 ರನ್ ಅಂತರದ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದ ಕರ್ನಾಟಕ ತಂಡ ಆ ಬಳಿಕ ಉತ್ತರ ಪ್ರದೇಶ, ಹಿಮಾಚಲ ಪ್ರದೇಶದ ಪಂದ್ಯಗಳಲ್ಲಿ ಡ್ರಾ ಫಲಿತಾಂಶ ಪಡೆದಿತ್ತು. ಆದರೆ ಕ್ವಾಟರ್ ಫೈನಲಿನಲ್ಲಿ ಜಮ್ಮು ಕಾಶ್ಮೀರದ ವಿರುದ್ಧ 167 ರನ್ ಗಳಿಂದ ಗೆಲು ಸಾಧಿಸಿ ಸೆಮಿ ಪ್ರವೇಶಿಸಿತ್ತು.

    ಸಂಕ್ಷಿಪ್ತ ಸ್ಕೋರ್: ಬಂಗಾಳ ಮೊದಲ ಇನ್ನಿಂಗ್ಸ್- 321/10
    ಕರ್ನಾಟಕ ಮೊದಲ ಇನ್ನಿಂಗ್ಸ್- 122/10
    ಬಂಗಾಳ 2ನೇ ಇನ್ನಿಂಗ್ಸ್- 161/10
    ಕರ್ನಾಟಕ 2ನೇ ಇನ್ನಿಂಗ್- 177/10
    ಫಲಿತಾಂಶ: ಬಂಗಾಳಕ್ಕೆ 174 ರನ್ ಗೆಲುವು
    ಪಂದ್ಯ ಶ್ರೇಷ್ಠ ಪ್ರಶಸ್ತಿ: ಅನುಸ್ತೂಪ್ ಮಜುಂದಾರ್