Tag: Rangayana Raghu

  • ಈ ವಾರ ಜಾಕ್ ಮಾಮನಾಗಿ ಬರ್ತಿದ್ದಾರೆ ರಂಗಾಯಣ ರಘು

    ಈ ವಾರ ಜಾಕ್ ಮಾಮನಾಗಿ ಬರ್ತಿದ್ದಾರೆ ರಂಗಾಯಣ ರಘು

    ನಿದು ಜಾಕ್ ಮಾಮಾ ಅಂತ ಯೋಚನೆ ಮಾಡುತ್ತಾ ಇದ್ದೀರಾ. ಇಂಥ ಡಿಫರೆಂಟ್ ಹೆಸರು ಕೇಳಿದರೆ ಆಶ್ಚರ್ಯ ಹುಟ್ಟಲಿಲ್ಲ ಎಂದರೆ ಹೇಗೆ ಹೇಳಿ. ಜಾಕ್ ಮಾಮಾ ಅಂತ ಖುಷಿಯಲ್ಲಿ ಎಲ್ಲರ ನಾಲಿಗೆ ಮೇಲೆ ಓಡಾಡುವ ಪಾತ್ರ ಮಾಡಿರುವುದು ನಮ್ಮ ರಂಗಾಯಣ ರಘು. ಇವರು ಇದ್ದಾರೆ ಎಂದರೆ ನಗು, ಮನರಂಜನೆ, ಸಂದೇಶ, ಸಿನಿಮಾವಂತು ಖಂಡಿತ ಎಲ್ಲರ ಮನಸ್ಸಲ್ಲೂ ಉಳಿದುಕೊಳ್ಳುವಂತ ಸನ್ನಿವೇಶ ಹುಟ್ಟಿಕೊಂಡಿರುತ್ತದೆ ಎಂಬುದು ಗ್ಯಾರಂಟಿ.

    ಅಂದಿನಿಂದ ಇಂದಿನವರೆಗೂ ನಗಿಸಿಕೊಂಡು ಬಂದಿರುವ ಪರಿಪೂರ್ಣ ನಟ ರಂಗಾಯಣ ರಘು ಅವರು ವೀಲ್‌ಚೇರ್ ರೋಮಿಯೋ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅದೇ ಜಾಕ್ ಮಾಮಾ. ತನ್ನ ವಿಶಿಷ್ಟ ನಟನೆಯಿಂದಲೂ ಎಲ್ಲರನ್ನು ಸೆಳೆದಿರುವ ನಟ, ವೀಲ್‌ಚೇರ್ ರೋಮಿಯೋ ಮೂಲಕವೂ ವಿಭಿನ್ನವಾಗಿ ಎಲ್ಲರ ಮನಸ್ಸಲ್ಲೂ ಉಳಿದುಕೊಳ್ಳಲಿದ್ದಾರೆ. ಇದೇ 27ಕ್ಕೆ ಸಿನಿಮಾ ತೆರೆಗೆ ಬರಲಿದೆ. ಜಾಕ್ ಮಾಮಾ ಹೆಸರೇ ಇಷ್ಟೊಂದು ಚೆನ್ನಾಗಿರುವಾಗ ಪಾತ್ರ ಇನ್ನೆಷ್ಟು ಪರಿಣಾಮಕಾರಿಯಾಗಿ ಕಾಡುತ್ತದೆ ಎಂಬ ಕ್ಯೂರಿಯಾಸಿಟಿ ಹುಟ್ಟಿಕೊಂಡಿದೆ. ಇದನ್ನೂ ಓದಿ: ನಯನತಾರಾಗೆ ಲೋಕಲ್ ಫುಡ್ ತಿನ್ನಿಸಿದ ಭಾವಿಪತಿ ವಿಘ್ನೇಶ್ 

    ಸಿನಿಮಾ ಎಂದು ಬಂದಾಗ ಕಥೆ ಬರೆಯುವಾಗ ಕಲಾವಿದರು ಕಣ್ಣ ಮುಂದೆ ಬರುತ್ತಾರೆ. ಈ ಪಾತ್ರಕ್ಕೆ ಇವರೇ ಸೂಕ್ತ ಎಂಬುದು ನಿರ್ದೇಶಕರ ತಲೆಯಲ್ಲಿ ಅಚ್ಚೊತ್ತಿ ಕುಳಿತು ಬಿಟ್ಟಿದೆ. ಹಾಗೆಯೇ ನಿರ್ದೇಶಕರ ಮನಸ್ಸಿನ ಕನ್ನಡಿಯಲ್ಲಿ ರಂಗಾಯಣ ರಘು ಅವರ ಭಾವಚಿತ್ರ ಹಾಗೇ ಕಂಗೊಳಿಸುತ್ತಿತ್ತು. ವೀಲ್ ಚೇರ್ ರೋಮಿಯೋ ಸಿನಿಮಾದಲ್ಲಿ ಈ ಪಾತ್ರಕ್ಕೆ ಅವರೇ ಸೂಕ್ತ ಎಂಬುದು ಫಿಕ್ಸ್ ಆಗಿತ್ತು. ಹೀಗಾಗಿ ಅವರನ್ನೇ ಆ ಪಾತ್ರಕ್ಕೆ ಅಪ್ರೋಚ್ ಮಾಡಿ, ನಿರೀಕ್ಷೆಗೆ ತಕ್ಕಂತೆ ಎಕ್ಸಿಕ್ಯೂಟ್ ಮಾಡಲಾಗಿದೆ.

    Wheel Chair Romeo

    ನಟನೆಯನ್ನೇ ಕರಗತ ಮಾಡಿಕೊಂಡಿರುವ ರಂಗಾಯಣ ರಘು ಅವರು ಅದ್ಭುತವಾಗಿ ನಟಿಸಿದ್ದಾರೆ. ಅವರ ಪಾತ್ರ ಎಂಥದ್ದು, ಜಾಕ್ ಮಾಮಾ ಏನು ಮಾಡಲಿದ್ದಾರೆ ಎಂಬುದನ್ನು ಇದೇ ತಿಂಗಳ 27ಕ್ಕೆ ಆನಾವರಣಗೊಳ್ಳಲಿದೆ. ಟೈಟಲ್‍ಗೆ ತಕ್ಕಂತೆ ವೀಲ್ ಚೇರ್ ಮೇಲೆ ನಾಯಕ ನಟನ ಪಾತ್ರ ಸಾಗುತ್ತೆ. ಕಿರುತೆರೆ ನಟ ರಾಮ್ ಚೇತನ್ ವೀಲ್ ಚೇರ್ ರೋಮಿಯೋ ಆಗಿ ಕಾಣಿಸಿಕೊಂಡಿದ್ದಾರೆ. ವೇಶ್ಯಾ ವೃತ್ತಿಯಲ್ಲಿ ಸಾಗುವ ನಾಯಕಿ ಪಾತ್ರವನ್ನು ಮಯೂರಿ ನಿಭಾಯಿಸಿದ್ದಾರೆ.

    ಬಿ.ಜೆ.ಭರತ್ ಅವರ ಸಂಗೀತ, ಗುರುಕಶ್ಯಪ್ ಸಂಭಾಷಣೆ, ಸಂತೋಷ್ ಪಾಂಡಿ ಕ್ಯಾಮೆರಾ ವರ್ಕ್, ವಿ.ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ ಸಾಹಿತ್ಯ ಕೃಷಿ ಚಿತ್ರಕ್ಕಿದೆ. ಸುಚೇಂದ್ರ ಪ್ರಸಾದ್, ತಬಲನಾಣಿ, ರಂಗಾಯಣ ರಘು ಚಿತ್ರ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಅಗಸ್ತ್ಯ ಕ್ರಿಯೇಷನ್ಸ್ ಬ್ಯಾನರ್ ನಡಿ ವೆಂಕಟಾಚಲಯ್ಯ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇದನ್ನೂ ಓದಿ: ಮೇ 26 ರಿಂದ ಮಸೀದಿ ಪರ ಅರ್ಜಿ ವಿಚಾರಣೆ, ಯಥಾಸ್ಥಿತಿ ಕಾಯ್ದುಕೊಳ್ಳಿ: ಕೋರ್ಟ್ ಆದೇಶ 

  • ಅಜ್ಞಾತವಾಸಿಯಾದ ರಂಗಾಯಣ ರಘು ಮತ್ತು ಪಾವನಾ

    ಅಜ್ಞಾತವಾಸಿಯಾದ ರಂಗಾಯಣ ರಘು ಮತ್ತು ಪಾವನಾ

    ‘ಗೋಧಿಬಣ್ಣ‌ ಸಾಧಾರಣ ಮೈಕಟ್ಟು’ ಚಿತ್ರ ಖ್ಯಾತಿಯ ಹೇಮಂತ್ ರಾವ್ ನಿರ್ಮಾಣದಲ್ಲಿ ಹೊಸ ಸಿನಿಮಾವೊಂದು ಮೂಡಿ ಬರುತ್ತಿದ್ದು, ಈ ಚಿತ್ರಕ್ಕೆ  ಗುಲ್ಟು  ಚಿತ್ರ ಖ್ಯಾತಿಯ ಜನಾರ್ದನ್ ಚಿಕ್ಕಣ್ಣ ನಿರ್ದೇಶನ ಮಾಡುತ್ತಿದ್ದಾರೆ. ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರಕ್ಕೆ ಅಜ್ಞಾತವಾಸಿ ಎಂದು ಹೆಸರಿಡಲಾಗಿದೆ. ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ರಂಗಾಯಣ ರಘು ಅವರೊಂದಿಗೆ ಈ ಚಿತ್ರದಲ್ಲಿ ಪಾವನ ಗೌಡ ಹಾಗೂ ಸಿದ್ದು ಮೂಲಿಮನಿ ಸಹ ಅಭಿನಯಿಸುತ್ತಿದ್ದಾರೆ. ಇದನ್ನೂ ಓದಿ : ಲಾಕಪ್ ನಲ್ಲಿ ಗಳಗಳನೆ ಅತ್ತ ಪೂನಂ: ಈ ನಟಿಗೆ ಅದೆಂಥ ಅವಮಾನ?

    ನನ್ನ ಗುರುಗಳಾದ ಕೃಷ್ಣರಾಜ್ ಅವರು ಕಥೆ ಬರೆದಿದ್ದಾರೆ. 1997 ರಲ್ಲಿ ಮಲೆನಾಡಿನಲ್ಲಿ ನಡೆದ ಕೊಲೆಯೊಂದರ ಸುತ್ತ ಈ ಕಥೆ ಹೆಣೆಯಲಾಗಿದೆ. ಅವರು ಕಥೆ ಹೇಳಿದ ರೀತಿ ತುಂಬಾ ಹಿಡಿಸಿತು.  ನನಗೆ ತಿಳಿದ ಹಾಗೆ ಇದೊಂದು ಕನ್ನಡದಲ್ಲಿ ಈವರೆಗೂ ಬಂದಿರದ ಮರ್ಡರ್ ಮಿಸ್ಟರಿ ಅನ್ನಬಹುದು. ಆನಂತರ ಹೇಮಂತ್ ರಾವ್ ಅವರನ್ನು ಭೇಟಿಯಾಗಿ ಕಥೆ ಹೇಳಿದಾಗ ಕೇವಲ ಅರ್ಧಗಂಟೆಯಲ್ಲಿ ನಿರ್ಮಾಣಕ್ಕೆ ಒಪ್ಪಿಕೊಂಡರು. ರಂಗಾಯಣ ರಘು ಸರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ದು ಮೂಲಿಮನಿ, ಪಾವನ ಗೌಡ ಅವರ ಪಾತ್ರ ಕೂಡ ಜನಮನಸೂರೆಗೊಳ್ಳಲಿದೆ.  ಅದ್ವೈತ ಛಾಯಾಗ್ರಹಕರಾಗಿ ಹಾಗೂ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನೆರಡು ದಿನಗಳಲ್ಲಿ ಚಿತ್ರೀಕರಣ ಆರಂಭಿಸುವುದಾಗಿ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ತಿಳಿಸಿದರು.‌ ಇದನ್ನೂ ಓದಿ : ಪುನೀತ್ ಬ್ಯಾನರ್ ಗಾಗಿ ನಡೆಯಿತು ಮಾರಾಮಾರಿ : ರಾಡ್ ಹಿಡಿದುಕೊಂಡು ಗಲಾಟೆ

    ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ರಂಗಾಯಣ ರಘು ಅವರ ಅಭಿನಯವನ್ನು ನೋಡಲು ನಾನು ನಿರ್ಮಾಪಕನಿಗಿಂತ ಹೆಚ್ಚಾಗಿ ಅಭಿಮಾನಿಯಾಗಿ ಕಾಯುತ್ತಿದ್ದೇನೆ.  “ಕವಲುದಾರಿ” ಸಿನಿಮಾ ಸಂದರ್ಭದಲ್ಲಿ ಪುನೀತ್ ಸರ್ ರಂಗಾಯಣ ರಘು ಬಗ್ಗೆ ಹೇಳಿದ ಮಾತು ಇನ್ನೂ ಕಿವಿಯಲ್ಲೇ ಇದೆ.‌ ಈ ಚಿತ್ರ ನಿರ್ಮಾಣಕ್ಕೆ ಅವರೆ ಸ್ಪೂರ್ತಿ ಎನ್ನಬಹುದು ಎಂದರು ನಿರ್ಮಾಪಕ ಹೇಮಂತ್ ರಾವ್. ಇದನ್ನೂ ಓದಿ : ಕೆಜಿಎಫ್ 2 : ನಾಲ್ಕೇ ದಿನಕ್ಕೆ 550 ಕೋಟಿ ಬಾಚಿದ ರಾಕಿಭಾಯ್

    ನಾನು ಟಿವಿ ಜ್ಯೋತಿಷಿಗಳಿಗಿಂತ ಹೆಚ್ಚಾಗಿ ಜನಾರ್ದನ ಚಿಕ್ಕಣ್ಣ ಅವರನ್ನು ನಂಬುತ್ತೇನೆ. ಏಕೆಂದರೆ “ಗುಲ್ಟು” ಚಿತ್ರದಲ್ಲಿ ಅವರು ಹೇಳಿದ್ದ ಒಂದು ಹಗರಣದ ವಿಷಯ ನಂತರ ನಿಜವಾಯಿತು. ಹೇಮಂತ್ ರಾವ್ ಕೂಡ ಹಾಗೆ ಈ ಯುವ ನಿರ್ದೇಶಕರ ಯೋಚನಾಶೈಲಿಯೇ ಬೇರೆ. ನನಗೆ ಉತ್ತಮ ಪಾತ್ರ ನೀಡಿದ್ದಾರೆ‌. ಇಡೀತಂಡಕ್ಕೆ ಒಳ್ಳೆಯದಾಗಲಿ ಎಂದು ರಂಗಾಯಣ ರಘು ಹಾರೈಸಿದರು. ಇದನ್ನೂ ಓದಿ : ಕ್ಷಮಿಸಿ ಬಿಡು ಬಸವಣ್ಣ : ವಿಡಿಯೋ ರಿಲೀಸ್ ಮಾಡಿದ ಹಂಸಲೇಖ

    ಚಿತ್ರದಲ್ಲಿ ನಟಿಸುತ್ತಿರುವ ಪಾವನ ಗೌಡ, ಸಿದ್ದು ಮೂಲಿಮನಿ‌ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತದ ಕುರಿತು ಹಾಗೂ ಅದ್ವೈತ ಛಾಯಾಗ್ರಹಣದ ಬಗ್ಗೆ ಮಾತನಾಡಿದರು.

  • ಚಂದನವನ ವಿಮರ್ಶಕರ ಪ್ರಶಸ್ತಿ: ರಾಜ್ ಬಿ ಶೆಟ್ಟಿ ಅತ್ಯುತ್ತಮ ನಟ, ಗಾನವಿ ಲಕ್ಷ್ಮಣ್ ನಟಿ, ಉಳಿದ ಪ್ರಶಸ್ತಿ ವಿವರ

    ಚಂದನವನ ವಿಮರ್ಶಕರ ಪ್ರಶಸ್ತಿ: ರಾಜ್ ಬಿ ಶೆಟ್ಟಿ ಅತ್ಯುತ್ತಮ ನಟ, ಗಾನವಿ ಲಕ್ಷ್ಮಣ್ ನಟಿ, ಉಳಿದ ಪ್ರಶಸ್ತಿ ವಿವರ

    ಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಅವರು 3ನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ 2022 ರಲ್ಲಿ ತಮ್ಮ ಗರುಡ ಗಮನ ವೃಷಬ ವಾಹನ ಚಿತ್ರಕ್ಕಾಗಿ ಪ್ರಶಸ್ತಿಗಳ ಬೇಟೆಯಾಡಿದ್ದಾರೆ. ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ ಮತ್ತು ಅತ್ಯುತ್ತಮ ಚಿತ್ರಕಥೆಗಾಗಿ ಮೂರು ವೈಯಕ್ತಿಕ ಪ್ರಶಸ್ತಿಗಳನ್ನು ಗಳಿಸಿ ಇತಿಹಾಸ ಸೃಷ್ಟಿಸಿದ್ದಾರೆ.

    ಹೀರೋ ಚಿತ್ರದಲ್ಲಿನ ಅಭಿನಯಕ್ಕಾಗಿ ನಟಿಸಿದ ಮೊದಲ ಚಿತ್ರಕ್ಕೆ ನಟಿ ಗಾನವಿ ಲಕ್ಷ್ಮಣ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆಯುವುದರ ಮೂಲಕ ಸಂಭ್ರಮಿಸಿದ್ದಾರೆ. ಮೂರು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದ ಪುಗ್ಸಟ್ಟೆ ಲೈಫ್ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರೆತಿದ್ದು, ಮೊದಲ ಸಿನಿಮಾದ ನಿರ್ದೇಶನಕಕ್ಕಾಗಿ ನಿರ್ದೇಶಕ ಅರವಿಂದ್ ಕುಪ್ಲಿಕರ್ ಅವರು ಪುಕ್ಸಟ್ಟೆ ಲೈಫು ಚಿತ್ರಕ್ಕಾಗಿ ಪ್ರಶಸ್ತಿ ಪಡೆದದ್ದು ವಿಶೇಷ. ಇದನ್ನೂ ಓದಿ : ಕಾಂಗ್ರೆಸ್ ಅವಧಿಯಲ್ಲಿ ನಡೆದ ಭಯೋತ್ಪಾದನೆ ತಿಳಿಯಲು ‘ದಿ ಕಾಶ್ಮೀರ್ ಫೈಲ್ಸ್’ ನೋಡಿ: ಅಮಿತ್ ಶಾ

    ಪ್ರವೀಣ್ ಶ್ರೀಯಾನ್ ಅತ್ಯುತ್ತಮ ಸಂಕಲನ ಪ್ರಶಸ್ತಿಯನ್ನು ಗೆಲ್ಲುವ ಮೂಲಕ GGVV ಗಾಗಿ ನಾಲ್ಕನೇ ಪ್ರಶಸ್ತಿ ಗಳಿಸಿದರು. ತರುಣ್ ಸುಧೀರ್ ನಿರ್ದೇಶನದ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದೆ. (ಅತ್ಯುತ್ತಮ ಸಂಗೀತ ಸಂಯೋಜಕ – ಅರ್ಜುನ್ ಜನ್ಯ, ಅತ್ಯುತ್ತಮ ಗೀತರಚನೆಕಾರ – ಕಣ್ಣು ಹೊಡೆಯಾಕೆ ಹಾಡಿಗೆ ಯೋಗರಾಜ್ ಭಟ್, ಸುಧಾಕರ್ ಎಸ್ ರಾಜ್ ಅತ್ಯುತ್ತಮ ಛಾಯಾಗ್ರಹಣ ಮತ್ತು ಭೂಷಣ್ ಅತ್ಯುತ್ತಮ ನೃತ್ಯ ಸಂಯೋಜನೆ)ಈ ನಾಲ್ಕು ಪ್ರಶಸ್ತಿಗಳು ರಾಬರ್ಟ್ ಚಿತ್ರಕ್ಕಾಗಿ ಬಂದಿದ್ದು ಮತ್ತೊಂದು ವಿಶೇಷ.

    ಎ.ಹರ್ಷ ನಿರ್ದೇಶನದ ಭಜರಂಗಿ 2 ಮತ್ತು ದುನಿಯಾ ವಿಜಯ್ ನಿರ್ದೇಶನದ ಚೊಚ್ಚಲು ಸಿನಿಮಾ ಸಲಗ ಮತ್ತು ಧನಂಜಯ್ ನಟನೆಯ ಬಡವ ರಾಸ್ಕಲ್ ತಲಾ ಮೂರು ಪ್ರಶಸ್ತಿ ಗಳಿಸಿವೆ. ಭಜರಂಗಿ 2 ಸಿನಿಮಾ ತಾಂತ್ರಿಕ ವಿಭಾಗಗಳಲ್ಲಿ ಅತ್ಯುತ್ತಮ VFX (ಶಿಬೀಶ್ ಮತ್ತು ಇಳಂಗೋವ್), ಅತ್ಯುತ್ತಮ ಸಾಹಸ ನಿರ್ದೇಶಕ (ರವಿ ವರ್ಮ) ಮತ್ತು ಅತ್ಯುತ್ತಮ ಕಲಾ ನಿರ್ದೇಶನ (ರವಿ ಸಂತೆಹೈಕ್ಲು) ಪ್ರಶಸ್ತಿ ಪಡೆದಿದೆ. ಇದನ್ನೂ ಓದಿ: ಫ್ಯಾನ್ಸ್ ಜೊತೆ ‘ಜೇಮ್ಸ್’ ವೀಕ್ಷಿಸಿದ ಶಿವಣ್ಣ ದಂಪತಿ – ಏನ್ ಹೇಳಲಿ ನನ್ನ ತಮ್ಮನ ಆ್ಯಕ್ಟಿಂಗ್ ಬಗ್ಗೆ

    ಬಡವ ರಾಸ್ಕಲ್ ಚಿತ್ರವು ಅತ್ಯುತ್ತಮ ಪೋಷಕ ನಟಿ ಸ್ಪರ್ಶ ರೇಖಾ  ಮತ್ತು ಅತ್ಯತ್ತಮ ಪೋಷಕ ನಟ ರಂಗಾಯಣ ರಘು ಹಾಗೂ ಇದೇ ಚಿತ್ರಕ್ಕಾಗಿ ವಾಸುಕಿ ವೈಭವ್ ಅತ್ಯುತ್ತಮ ಗಾಯಕಿ ಪ್ರಶಸ್ತಿಯನ್ನೂ ಪಡೆದರು. ನಟ ದುನಿಯಾ ವಿಜಯ್ ಅವರ ಚೊಚ್ಚಲ ನಿರ್ದೇಶನದ ಚಿತ್ರಕ್ಕಾಗಿ ಅತ್ಯುತ್ತಮ ಸಂಭಾಷಣೆ (ಮಾಸ್ತಿ), ಅತ್ಯುತ್ತಮ ಬಿಜಿಎಂ (ಚರಣ್ ರಾಜ್) ಮತ್ತು ಅತ್ಯುತ್ತಮ ಗಾಯಕಿಯಾಗಿ ಗಿರಿಜಾ ಅವರಿಗೆ ಪ್ರಶಸ್ತಿ ಬಂದಿವೆ.

    ಡಾ.ರಾಘವೇಂದ್ರ ಬಿಎಸ್ ಅವರು ಪ್ರೇಮಂ ಪೂಜ್ಯಂ ಚಿತ್ರಕ್ಕಾಗಿ ಅತ್ಯುತ್ತಮ ಚೊಚ್ಚಲ ನಿರ್ದೇಶನ ಪ್ರಶಸ್ತಿ ಪಡೆದರೆ, ಅರ್ಜುನ್ ಗೌಡ ಚಿತ್ರದ ಹಾಡಿಗೆ ರಾಘವೇಂದ್ರ ಕಾಮತ್ ಅವರು ಅತ್ಯುತ್ತಮ ಸಾಹಿತ್ಯ ಪ್ರಶಸ್ತಿಯನ್ನು ಯೋಗರಾಜ್ ಭಟ್ ಜತೆ ಹಂಚಿಕೊಂಡಿದ್ದಾರೆ. ಅತ್ಯುತ್ತಮ ಬಾಲ ನಟ ಪ್ರಶಸ್ತಿ ಅಕ್ಷಿ ಸಿನಿಮಾ ನಟನೆಗಾಗಿ ಮಾಸ್ಟರ್ ಮಿಥುನ್ ಪಡೆದುಕೊಂಡಿದ್ದಾರೆ. ಇದನ್ನು ಓದಿ : ಮತ್ತೆ ನಟನೆಗೆ ಮರಳಿದ ಮಾಲಾಶ್ರೀ

    ಶನಿವಾರ ಸಂಜೆ ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. 2021 ರಲ್ಲಿ ಬಿಡುಗಡೆಯಾದ ಚಲನಚಿತ್ರಗಳಿಗಾಗಿ ಒಟ್ಟು 23 ಸಿನಿಮಾ ತಾರೆಯರು 21 ವಿಭಾಗಗಳಲ್ಲಿದ್ದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ಚಲನಚಿತ್ರ ವಿಮರ್ಶಕರು ಮತ್ತು ಪತ್ರಕರ್ತರು ನಾಮನಿರ್ದೇಶನ ಮೂಲಕ ಪ್ರಶಸ್ತಿಗಳನ್ನು ಆಯ್ಕೆ ಮಾಡಿದ್ದರೆ, ಬಿಬಿಎಂಪಿಯ ಸ್ವಚ್ಛ ಬೆಂಗಳೂರು ಅಭಿಯಾನವನ್ನು ಪ್ರಶಸ್ತಿ ಸಮಾರಂಭದ ವಿಷಯವಾಗಿ ಅಳವಡಿಸಿಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸಿನಿಮಾ ರಂಗದ ಸಾಕಷ್ಟು ತಾರೆಯರು, ಗಣ್ಯರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    3ನೇ ಚಂದನವನ ಫಿಲ್ಮ್ಸ್ ಕ್ರಿಟಿಕ್ಸ್ ಅಕಾಡಮಿ ಪ್ರಶಸ್ತಿ ವಿಜೇತರು ಪಟ್ಟಿ – 2022

    1. ಅತ್ಯುತ್ತಮ ಚಿತ್ರ

    ಪುಗ್ಸಟ್ಟೆ ಲೈಫ್

    1. ಅತ್ಯುತ್ತಮ ನಿರ್ದೇಶಕ

    ರಾಜ್ .ಬಿ. ಶೆಟ್ಟಿ (ಗರುಡ ಗಮನ ವೃಷಭ ವಾಹನ)

    1. ಅತ್ಯುತ್ತಮ ನಟ

    ರಾಜ್. ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ)

    1. ಅತ್ಯುತ್ತಮ ನಟಿ

    ಗಾನವಿ ಲಕ್ಷ್ಮಣ್ (ಹೀರೋ)

    1. ಅತ್ಯುತ್ತಮ ಚಿತ್ರಕಥೆ

    ಗರುಡ ಗಮನ ವೃಷಭ ವಾಹನ

    1. ಅತ್ಯುತ್ತಮ ಪೋಷಕ ನಟ

    ರಂಗಾಯಣ ರಘು (ಬಡವ ರಾಸ್ಕಲ್)

    1. ಅತ್ಯುತ್ತಮ ಪೋಷಕ ನಟಿ

    ಸ್ಪರ್ಷ ರೇಖಾ (ಬಡವ ರಾಸ್ಕಲ್)

    1. ಅತ್ಯುತ್ತಮ ಬಾಲ ಕಲಾವಿದ

    ಮಾಸ್ಟರ್ ಮಿಥುನ್ (ಅಕ್ಷಿ)

    1. ಅತ್ಯುತ್ತಮ ಸಂಗೀತ ನಿರ್ದೇಶಕ

    ಅರ್ಜುನ್ ಜನ್ಯ (ರಾಬರ್ಟ್)

    1. ಅತ್ಯುತ್ತಮ ಹಿನ್ನೆಲೆ ಸಂಗೀತ

    ಚರಣ್ ರಾಜ್ (ಸಲಗ)

    1. ಅತ್ಯುತ್ತಮ ಗೀತ ಸಾಹಿತ್ಯ

    ಯೋಗರಾಜ್ ಭಟ್ (ಕಣ್ಣು ಹೊಡಿಯಾಕೆ, ರಾಬರ್ಟ್) and ರಾಘವೇಂದ್ರ ಕಾಮತ್ (ಕನವರಿಕೆ.. ಅರ್ಜುನ್ ಗೌಡ)

    1. ಅತ್ಯುತ್ತಮ ಗಾಯಕ

    ವಾಸುಕಿ ವೈಭವ್ (ಆಗಾಗ ನೆನಪಾಗುತ್ತಿದೆ, ಬಡವ ರಾಸ್ಕಲ್)

    1. ಅತ್ಯುತ್ತಮ ಗಾಯಕಿ

    ಗಿರಿಜಾ ಸಿದ್ದಿ (ಟಿನಿಂಗ್ ಮಿನಿಂಗ್, ಸಲಗ)

    1. ಅತ್ಯುತ್ತಮ ಛಾಯಾಗ್ರಹಣ

    ಸುಧಾಕರ್ ರಾಜ್ (ರಾಬರ್ಟ್)

    1. ಅತ್ಯುತ್ತಮ ಸಂಭಾಷಣೆ

    ಮಾಸ್ತಿ (ಸಲಗ)

    1. ಅತ್ಯುತ್ತಮ ಸಂಕಲನ

    ಪ್ರವೀಣ್ ಶ್ರೀಯಾನ್ (ಗರುಡ ಗಮನ ವೃಷಭ ವಾಹನ)

    1. ಅತ್ಯುತ್ತಮ ಕಲಾ ನಿರ್ದೇಶನ

    ರವಿ ಸಂತೆಹೈಕ್ಳು (ಭಜರಂಗಿ 2)

    1. ಅತ್ಯುತ್ತಮ ನೃತ್ಯ ನಿರ್ದೇಶಕ

    ಭೂಷಣ್ (ರಾಬರ್ಟ್)

    1. ಅತ್ಯುತ್ತಮ ಸಾಹಸ ನಿರ್ದೇಶಕ

    ರವಿ ವರ್ಮಾ (ಭಜರಂಗಿ 2)

    1. ಅತ್ಯುತ್ತಮ ವಿಎಫ್ಎಕ್ಸ್

    ಶಿಬೀಶ್ and ಏಲಂಗೋ

    ಭಜರಂಗಿ 2

    1. ಅತ್ಯುತ್ತಮ ಚೊಚ್ಚಲ ಚಿತ್ರ

    ಪ್ರೇಮಮ್ ಪೂಜ್ಯಮ್

  • ಮತ್ತೆ ನಟನೆಗೆ ಮರಳಿದ ಮಾಲಾಶ್ರೀ

    ಮತ್ತೆ ನಟನೆಗೆ ಮರಳಿದ ಮಾಲಾಶ್ರೀ

    ದು ವರ್ಷಗಳ ನಂತರ ಕನಸಿನ ರಾಣಿ ಮಾಲಾಶ್ರೀ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಪತಿ ರಾಮು ನಿಧನದ ನಂತರ ಕುಗ್ಗಿ ಹೋಗಿದ್ದ ಅವರು ಈಗ ಅದೇ ನೋವಿನಲ್ಲೇ ಮತ್ತೆ ನಟನೆಯತ್ತ ಮರಳಿದ್ದಾರೆ. 2017ರಲ್ಲಿ ಬಿಡುಗಡೆಗೊಂಡ ’ಉಪ್ಪು ಹುಳಿ ಖಾರ’ ದಲ್ಲಿ ಮಾಲಾಶ್ರೀ ನಟಿಸಿ, ಗ್ಯಾಪ್ ತೆಗೆದುಕೊಂಡಿದ್ದರು. ಈಗ ಹೆಸರಿಡದ ಹೊಸ ಚಿತ್ರಕ್ಕೆ ಸಹಿ ಹಾಕಿದ್ದು, ಎರಡನೇ ಬಾರಿ ಅವರು ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇದನ್ನೂ ಓದಿ : ಕಾಂಗ್ರೆಸ್ ಅವಧಿಯಲ್ಲಿ ನಡೆದ ಭಯೋತ್ಪಾದನೆ ತಿಳಿಯಲು ‘ದಿ ಕಾಶ್ಮೀರ್ ಫೈಲ್ಸ್’ ನೋಡಿ: ಅಮಿತ್ ಶಾ

    ಸಿನಿಮಾದ ಕಥೆಯೇ ವಿಭಿನ್ನವಾಗಿದೆ ಎಂದಿದ್ದಾರೆ ನಿರ್ದೇಶಕರು. ಸಿನಿಮಾ ಕಥೆಯಲ್ಲಿ ಹದಿನೈದು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಂತರ ಮರಳಿರುತ್ತಾರೆ. ಕರೋನ ಮತ್ತು ಲಾಕ್‌ಡೌನ್ ಅವಧಿಯಲ್ಲಿ ನಡೆದಂತ ನೈಜ ಘಟನೆಗಳನ್ನು ತೆಗೆದುಕೊಂಡು ಅದಕ್ಕೆ ಆಕ್ಷನ್ ಥ್ರಿಲ್ಲರ್ ಜತೆಗೆ ಸೆಂಟಿಮೆಂಟ್ ಅಂಶಗಳನ್ನು  ಸೇರಿಸಿ ಸಿನಿಮಾ ಮಾಡುತ್ತಿದ್ದಾರಂತೆ ನಿರ್ದೇಶಕರು. ಬಹುತೇಕ ಸನ್ನಿವೇಶಗಳು ಆಸ್ಪತ್ರೆಯಲ್ಲಿ ನಡೆಯುತ್ತದೆ. ಹಾಡುಗಳಿಗೆ ಅವಕಾಶವಿರುವುದಿಲ್ಲ. ಆದರೂ ಹಿನ್ನಲೆ ಸಂಗೀತಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ಇದನ್ನೂ ಓದಿ: ಫ್ಯಾನ್ಸ್ ಜೊತೆ ‘ಜೇಮ್ಸ್’ ವೀಕ್ಷಿಸಿದ ಶಿವಣ್ಣ ದಂಪತಿ – ಏನ್ ಹೇಳಲಿ ನನ್ನ ತಮ್ಮನ ಆ್ಯಕ್ಟಿಂಗ್ ಬಗ್ಗೆ

    ರವೀಂದ್ರ ವೆಂಶಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಈ ಸಿನಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಿ.ಎಸ್.ಚಂದ್ರಶೇಖರ್ ಅವರ ಸ್ವರ್ಣಗಂಗ ಫಿಲಿಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ತಾರಗಣದಲ್ಲಿ ವೈದ್ಯರಾಗಿ ಪ್ರಮೋದ್‌ಶೆಟ್ಟಿ, ಪೋಲೀಸ್ ಆಗಿ ರಂಗಾಯಣರಘು, ಸಾಧುಕೋಕಿಲ, ಬಿಗ್‌ಬಾಸ್ ವಿಜೇತ ಮಂಜುಪಾವಗಡ, ಕುರಿರಂಗ, ಅಶ್ವಿನ್, ವರ್ದನ್ ಇದ್ದಾರೆ. ಸದ್ದಿಲ್ಲದೇ ಮೊದಲನೇ ಹಂತದ ಚಿತ್ರೀಕರಣ ಮುಗಿದಿದ್ದು, ಎರಡನೇ ಹಂತವನ್ನು ಯುಗಾದಿ ತರುವಾಯ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ.

  • ಪಾರ್ವತಮ್ಮ ರಾಜ್ ಕುಮಾರ್ ಮತ್ತು ಬೆಳ್ಳಿ ಬಟ್ಟಲು ಸ್ಟೋರಿ ಹೇಳಿದ ರಂಗಾಯಣ ರಘು

    ಪಾರ್ವತಮ್ಮ ರಾಜ್ ಕುಮಾರ್ ಮತ್ತು ಬೆಳ್ಳಿ ಬಟ್ಟಲು ಸ್ಟೋರಿ ಹೇಳಿದ ರಂಗಾಯಣ ರಘು

    ಡಾಲಿ ಧನಂಜಯ್ ನಟನೆಯ ‘ಬಡವ ರಾಸ್ಕಲ್’ ಸಿನಿಮಾ ಐವತ್ತನೇ ದಿನ ಪೂರೈಸಿದೆ. ಈ ಖುಷಿಯನ್ನು ಹಂಚಿಕೊಳ್ಳಲು ಚಿತ್ರತಂಡ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ನಟ ರಂಗಾಯಘ ರಘು, ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ನೀಡಿದ ಬೆಳ್ಳಿ ಬಟ್ಟಲು ಘಟನೆಯನ್ನು ಹೇಳಿ ಭಾವುಕರಾದರು.
    “ಈ ಹಿಂದೆ ಪಾರ್ವತಮ್ಮ ರಾಜಕುಮಾರ್ ಅವರು ಈ ರೀತಿಯ ಸಮಾರಂಭ ಆಯೋಜಿಸಿ, ಎಲ್ಲರಿಗೂ ಬೆಳ್ಳಿಯ ಲೋಟ ನೀಡುತ್ತಿದ್ದರು. ನನ್ನ ಬಳಿ ಅವರು ನೀಡಿರುವ ಮೂರು ಬೆಳ್ಳಿಯ ಲೋಟಗಳಿವೆ. ಇತ್ತೀಚಿಗೆ ಇಂತಹ ಸಮಾರಂಭ ಕಡಿಮೆಯಾಗಿತ್ತು‌.‌ ಧನಂಜಯ್ ಮತ್ತೆ ಆರಂಭ ಮಾಡಿದ್ದಾರೆ ಒಳ್ಳೆಯದಾಗಲಿ” ಎಂದರು ರಂಗಾಯಣ ರಘು. ಇದನ್ನೂ ಓದಿ : ರಾಮ್ ಪೋತಿನೇನಿ ಸಿನಿಮಾಗೆ ಅಖಂಡ ಡೈರೆಕ್ಟರ್ ನಿರ್ದೇಶನ

    ಕೇವಲ ನಟರಾಗಿ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದ ಡಾಲಿ ಧನಂಜಯ, “ಬಡವ ರಾಸ್ಕಲ್” ಚಿತ್ರದಿಂದ ನಿರ್ಮಾಪಕರಾದರು. ಈ ಸಂಭ್ರಮಕ್ಕಾಗಿ ಅವರು ಈ ಸಿನಿಮಾದಲ್ಲಿ ದುಡಿದ ಕಾರ್ಮಿಕರು, ತಂತ್ರಜ್ಞರು, ಕಲಾವಿದರು, ಪ್ರದರ್ಶಕರು, ಸ್ನೇಹಿತರು ಹೀಗೆ ಸುಮಾರು 220 ಕ್ಕೂ ಅಧಿಕ ಜನರಿಗೆ ಸ್ಮರಣಿಕೆ ಹಾಗೂ ಬೆಳ್ಳಿನಾಣ್ಯ ನೀಡಿ ಸತ್ಕರಿಸಿದರು.  ಇದನ್ನೂ ಓದಿ : ಹಿರಿಯ ನಟ ರಾಜೇಶ್ ಅವರ ಅಪರೂಪದ ಫೋಟೋಗಳು


    ಈ ಸಂದರ್ಭದಲ್ಲಿ ಮಾತನಾಡಿದ ಧನಂಜಯ್, “ನಾನು ಈ ಸಿನಿಮಾವನ್ನು ಹಳೆಯ ನಿರ್ಮಾಪಕರಿಂದ ಪಡೆದುಕೊಳ್ಳಲು ಸ್ವಲ್ಪ ಹೆಚ್ಚಿನ ಹಣ ಬೇಕಿತ್ತು.‌ ಸುಮ್ಮನೆ ಕೆಲವು ಸ್ನೇಹಿತರಿಗೆ ಫೋನ್ ಮಾಡಿದೆ.‌ ಎಲ್ಲರೂ ಏನು ಅಪೇಕ್ಷೆ ಇಲ್ಲದೆ ಸಹಾಯ ಮಾಡಿದ್ದಾರೆ. ಇನ್ನೂ ನಾನು ಹಿಂದಿರುಗಿಸಿಲ್ಲ.‌ ಸದ್ಯದಲ್ಲೇ ಕೊಡುತ್ತೇನೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯಿಂದ ಹೊಸ ‌ಪ್ರತಿಭೆಗಳಿಗೆ ಅವಕಾಶ ಕೊಡುವ ಯೋಚನೆಯಿದೆ” ಎಂದರು. ಇದನ್ನೂ ಓದಿ : ರಾಜೇಶ್ ನಟನೆಯ ಸೂಪರ್ ಹಿಟ್ ಹಾಡುಗಳಿವು


    ಈ ಸಮಾರಂಭಕ್ಕೆ ವಸಿಷ್ಠ ಸಿಂಹ ಅತಿಥಿಯಾಗಿ ಆಗಮಿಸಿದ್ದರೆ, ನಿರ್ದೇಶಕ ಶಂಕರ್ ಗುರು, ನಾಯಕಿ ಅಮೃತ ಅಯ್ಯಂಗಾರ್, ನಟ ನಾಗಭೂಷಣ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮುಂತಾದ ಚಿತ್ರತಂಡದ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
    ನಿರ್ಮಾಪಕರಾದ ಕರಿಸುಬ್ಬು, ಸುಧೀಂದ್ರ, ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಮುಂತಾದ ಗಣ್ಯರು ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಅಂದಹಾಗೆ ಈ ಚಿತ್ರ‌ ಸದ್ಯದಲ್ಲೇ ತೆಲುಗಿನಲ್ಲೂ ತೆರೆ ಕಾಣಲಿದೆ ಎನ್ನುವುದು ವಿಶೇಷ.

  • ಪುನೀತ್ ಅಗಲಿಕೆಯ ಶೋಕ ನಿರಂತರವಾಗಿರುತ್ತದೆ: ರಂಗಾಯಣ ರಘು

    ಪುನೀತ್ ಅಗಲಿಕೆಯ ಶೋಕ ನಿರಂತರವಾಗಿರುತ್ತದೆ: ರಂಗಾಯಣ ರಘು

    ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅವರಿಗೆ 11 ದಿನದ ಕಾರ್ಯವನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ. ಈ ವೇಳೆ ಕಡ್ಡಿಪುಡಿ ಚಂದ್ರು, ರಂಗಾಯಣ ರಘು, ರವಿಶಂಕರ್ ಗೌಡ ಅವರ ಅಪ್ಪು ಸಮಾಧಿಯ ದರ್ಶನವನ್ನು ಪಡೆದುಕೊಂಡಿದ್ದಾರೆ. ಸಮಾಧಿಗೆ ಭೇಟಿ ಕೊಟ್ಟು ಪೂಜಿಸಿ, ಸ್ವಲ್ಪ ಸಮಯ ಇಲ್ಲೇ ಕುಳಿತ ನಟರು ಅಪ್ಪು ನೆನಪುಗಳನ್ನು ಮಾಧ್ಯಮದವರ ಜೊತೆಗೆ ಮೆಲಕು ಹಾಕಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ನಟರಾದ ರಂಗಾಯಣ ರಘು , ರವಿಶಂಕರ್ ಗೌಡ , ಕಡ್ಡಿಪುಡಿ ಚಂದ್ರು ಅಪ್ಪು ಜೊತೆಗೆ ಇರುವ ಬಾಂಧವ್ಯ ಮತ್ತು ಅವರೊಂದಿಗೆ ಇರುವ ಒಡನಾಟವನ್ನು ನೆನೆದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆ ಮಾಡ್ಕೊಂಡ ಅಪ್ಪು ಅಭಿಮಾನಿ ಮನೆಗೆ ರಾಘಣ್ಣ ಭೇಟಿ, ಸಾಂತ್ವನ

    ಪುನೀತ್ ಅಗಲಿಕೆಯ ಶೋಕ ನಿರಂತರವಾಗಿರುತ್ತದೆ. ಕುಟುಂಬವನ್ನ ದೇವರೇ ಕಾಪಾಡಬೇಕು. ಅಶ್ವಿನಿಯವರ ದುಃಖ ನೋಡಿದರೆ ತುಂಬಾ ಕಷ್ಟ ಆಗುತ್ತದೆ ರಂಗಾಯಣ ರಘು ಎಂದು ಹೇಳುತ್ತಾ ದುಃಖಿತರಾಗಿದ್ದಾರೆ. ಇದನ್ನೂ ಓದಿ: ರಾಜ್ಯದ ಎಲ್ಲ ಥಿಯೇಟರ್‌‌ಗಳಲ್ಲಿ ಏಕಕಾಲಕ್ಕೆ ಅಪ್ಪುಗೆ ಶ್ರದ್ಧಾಂಜಲಿ

    Puneeth Rajkumar

    ಕಡ್ಡಿಪುಡಿ ಚಂದ್ರು ಮಾತನಾಡಿ, ನನಗೆ ಅಪ್ಪು ಜೊತೆ ಸಿನಿಮಾ ಹೊರತಾಗಿಯೂ ಕುಟುಂಬದ ಜೊತೆಗೆ ಬಹಳ ನಂಟಿದೆ. ಎಂಥಾ ಅದ್ಭುತ ಕಲಾವಿದನನ್ನ ನಾವು ಕಳೆದುಕೊಂಡುಬಿಟ್ವಿ. ಅವರೊಂದಿಗೆ ಕಳೆದಿರುವ ಸಾಕಷ್ಟು ನೆನಪುಗಳಿವೆ ಎಂದು ಹೇಳುತ್ತಾ ಕಣ್ಣಂಚಲಿ ನೀರು ತುಂಬಿಕೊಂಡಿದ್ದಾರೆ.

    ನಾನು ಅವರೊಂದಿಗೆ ಕಳೆದ ನೆನಪುಗಳಿಗೆ ಲೆಕ್ಕವಿಲ್ಲ. ನಾನು ಅವರನ್ನು ಚಿಕ್ಕಯಜಮಾನ್ರೆ ಎಂದು ಕರೆಯುತ್ತಿದೆ. ಅವರು ಗುಣಗಾನ ಮಾತಲ್ಲಿ ಹೇಳಲಾಗುವುದಿಲ್ಲ ಎಂದು ರವಿಶಂಕರ್ ಗೌಡ ಹೇಳಿ ಅಪ್ಪು ಅವರನ್ನುಕಳೆದು ಕೊಂಡಿರುವ ಬೇಸರವನ್ನು ತೋಡಿಕೊಂಡಿದ್ದಾರೆ.

  • ನಗಿಸುತ್ತಲೇ ನೈಜತೆಯನ್ನು ಹೇಳಿ ಕಣ್ಣಂಚಲಿ ನೀರು ತರಿಸುವ ‘ಪುಕ್ಸಟ್ಟೆ ಲೈಫು’

    ನಗಿಸುತ್ತಲೇ ನೈಜತೆಯನ್ನು ಹೇಳಿ ಕಣ್ಣಂಚಲಿ ನೀರು ತರಿಸುವ ‘ಪುಕ್ಸಟ್ಟೆ ಲೈಫು’

    ಚಿತ್ರ: ಪುಕ್ಸಟ್ಟೆ ಲೈಫು
    ನಿರ್ದೇಶನ : ಅರವಿಂದ್ ಕುಪ್ಳೀಕರ್
    ನಿರ್ಮಾಣ : ಸರ್ವಸ್ವ ಪ್ರೊಡಕ್ಷನ್ಸ್
    ಸಂಗೀತ : ವಾಸು ದೀಕ್ಷಿತ್
    ಹಿನ್ನೆಲೆ ಸಂಗೀತ : ಪೂರ್ಣಚಂದ್ರ ತೇಜಸ್ವಿ
    ಛಾಯಾಗ್ರಹಣ : ಅಧ್ವೈತ್ ಗುರುಮೂರ್ತಿ
    ತಾರಾಗಣ: ಸಂಚಾರಿ ವಿಜಯ್, ಅಚ್ಯುತ್ ಕುಮಾರ್, ರಂಗಾಯಣ ರಘು, ಮಾತಂಗಿ ಪ್ರಸನಾ, ಇತರರು.

    ಪ್ರೇಕ್ಷಕ ವಲಯದಲ್ಲಿ ಹಾಗೂ ಚಿತ್ರರಂಗದಲ್ಲಿ ಬಹು ನಿರೀಕ್ಷೆ ಹುಟ್ಟುಹಾಕಿದ್ದ ‘ಪುಕ್ಸಟ್ಟೆ ಲೈಫು’ ಇಂದು ಚಿತ್ರಮಂದಿರಕ್ಕೆ ಕಾಲಿಟ್ಟಿದೆ. ನಿರೀಕ್ಷೆಯಂತೆ‌ ಚಿತ್ರ ಮೊದಲ ದಿನ ಎಲ್ಲಾ ಕಡೆಗಳಲ್ಲೂ ಉತ್ತಮ ಓಪನಿಂಗ್ ಪಡೆದುಕೊಂಡಿದೆ.

    ನಾಯಕ ಶಹಜಾನ್ ಬೀಗ ರಿಪೇರಿ‌ ಮಾಡುವ ಪ್ರಾಮಾಣಿಕ ಮುಸ್ಲಿಂ ಯುವಕ. ಅಪ್ಪನಿಲ್ಲದ‌ ಮನೆಗೆ ತಾನೇ ಆಧಾರ ಸ್ತಂಭ. ಎಲ್ಲರನ್ನೂ ಪ್ರೀತಿಯಿಂದ ಆದರಿಸುವ ವ್ಯಕ್ತಿತ್ವ ಆತನದು. ಇರೋದ್ರಲ್ಲಿ ಸುಖ ಕಾಣುತ್ತಿದ್ದ ಆತನಿಗೆ ಪಕ್ಕದ‌ ಮನೆಯ ಹುಡುಗಿ ಶಾರದಾಳ ಮೇಲೆ ಒಲವು. ಮನೆಯ ಜವಾಬ್ದಾರಿ, ಶಾರದಾಳ ಜೊತೆಗಿನ ಪ್ರೀತಿಯ ಸುತ್ತಾಟ.. ಹೀಗೆ ಆತನ ದಿನಗಳು ಖುಷಿಯಿಂದ ಕೂಡಿತ್ತು. ಹೀಗಿರುವಾಗ ಅಚಾನಕ್ ಆಗಿ ಶಹಜಾನ್ ಸ್ವತಃ ತಾವೇ ನುಂಗುಬಾಕರಾಗಿದ್ದ ಪೊಲೀಸರ ಕೈಗೆ‌ ಸಿಕ್ಕಿಹಾಕಿಕೊಳ್ಳುತ್ತಾನೆ. ಮುಂದೆ ಅವರು ಮಾಡುವ ಎಲ್ಲಾ ಅಪರಾಧ, ದೋಚುವ ಕೆಲಸಕ್ಕೆ ಶಹಜಾನ್ ಅಮಾಯಕ ದಾಳವಾಗಿ ಬಳಕೆಯಾಗುತ್ತಾನೆ. ಇದೇನಾಯ್ತು ಎನ್ನುವಾಗಲೇ ಶಹಜಾನ್ ಇದಕ್ಕಿದ್ದಂತೆ ಕಣ್ಮರೆಯಾಗುತ್ತಾನೆ. ಇದರ‌ ಜೊತೆಗೆ ಸೀಟಿನ ಅಂಚಿಗೆ ಕೂರಿಸೋ ಟ್ವಿಸ್ಟ್‌ಗಳು, ಒಂದಿಷ್ಟು ನಗು ತರಿಸೋ ಕಾಮಿಡಿ, ಗಂಭೀರಗೊಳಿಸುವ ಕೆಲ ವಿಚಾರಗಳ ಜೊತೆ‌ ಕಥೆ ಸಾಗುತ್ತೆ.

    ಪ್ರಾಮಾಣಿಕ ಹುಡುಗ ಶಹಜಾನ್ ಪೊಲೀಸರ ಕೈಗೆ ಸಿಕ್ಕಿದ್ದು ಹೇಗೆ, ಇಷ್ಟೆಲ್ಲ ಘಟನೆ ನಂತರ ಆತ ಹೇಗೆ ಪಾರಾಗುತ್ತಾನೆ, ಇದಕ್ಕಿದ್ದಂತೆ ಯಾಕೆ ಕಣ್ಮರೆಯಾಗುತ್ತಾನೆ, ಮುಂದೇನಾಗುತ್ತೆ ಎನ್ನುವುದೇ ಸಸ್ಪೆನ್ಸ್.

    ಹೊಸ ಅಲೆಯ ಸಿನಿಮಾಗಳು ಬರುತ್ತಿವೆ ಎಂದು ಮಾತನಾಡುತ್ತಿರುತ್ತೇವೆ. ಆದ್ರೆ ಇಲ್ಲಿ ‘ಪುಕ್ಸಟ್ಟೆ ಲೈಫು’ ಹೊಸ ಅಲೆಯನ್ನು ಸೃಷ್ಟಿಸಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಅಂತಹ ಅದ್ಭುತ ಕಥಾ ಹೂರಣವನ್ನು ಸಿನಿಮಾ ಹೊಂದಿದೆ. ಬಹುಶಃ ಪ್ರೇಕ್ಷಕರಿಗೂ ಈ ಸಿನಿಮಾ ಬೇರೆಯದ್ದೇ ರೀತಿಯ ಫೀಲ್ ನೀಡಿರೋದ್ರಲ್ಲಿ ಡೌಟೇ ಇಲ್ಲ. ಇದನ್ನೂ ಓದಿ: ರಾಯನ್‍ಗೆ 11 ತಿಂಗಳು- ಕ್ಯೂಟ್ ವೀಡಿಯೋ ಹಂಚಿಕೊಂಡ ಮೇಘನಾ

    ಸಿನಿಮಾ ನೋಡಿದ ಮೇಲೆ ಕನ್ನಡಕ್ಕೊಬ್ಬ ಅದ್ಭುತ ಹಾಗೂ ಪ್ರತಿಭಾವಂತ ‌ನಿರ್ದೇಶಕ ಸಿಕ್ಕಿದ್ರು ಎನ್ನುವ ಭಾವ‌ ಹೊಮ್ಮದೇ ಇರದು. ಕಥೆಯ ಮೇಲಿನ ನಿರ್ದೇಶಕರ ಹಿಡಿತ, ಪ್ರತಿ ಕಲಾವಿದರಿಗೂ ನೀಡಿದ ಪಾತ್ರ, ಎಲ್ಲೆ ಮೀರದ ಅಭಿನಯ‌ ಮತ್ತು ಡೈಲಾಗ್ ಪ್ರತಿಯೊಂದು ಕುಸುರಿ ಕೆಲಸವೂ ನಿರ್ದೇಶಕ ಅರವಿಂದ್ ಕುಪ್ಳೀಕರ್ ಪ್ರತಿಭೆಗೆ‌ ಹಿಡಿದ ಕನ್ನಡಿ.

    ಚಿತ್ರದ ಕಥೆ ಹೇಗೆ ಗಟ್ಟಿತನ ಹೊಂದಿದೆಯೋ ಅದಕ್ಕೆ ಆಯ್ಕೆ ಮಾಡಿಕೊಂಡ ಕಲಾವಿದರು ಅಷ್ಟೇ ಪ್ರತಿಭಾವಂತರೂ. ಮೇಲಾಗಿ ಎಲ್ಲರೂ ರಂಗಭೂಮಿ ಹಿನ್ನೆಲೆಯುಳ್ಳವರೇ. ಹಾಗಾಗಿ ಸಿನಿಮಾವನ್ನು ನೈಜವಾಗಿ ತೆರೆ ಮೇಲೆ ಕಟ್ಟಿಕೊಡಲು ಇದು ಒಂದು ಮುಖ್ಯ ಕಾರಣ. ಪ್ರತಿಯೊಬ್ಬರದ್ದು ತಮ್ಮ ಪ್ರತಿಭೆಯನ್ನು ತಾವೇ ಒರೆಗೆ ಹಚ್ಚಿ ನೋಡುವಂತ ಅಭಿನಯ. ಯಾರ ನಟನೆಯೂ ಸುಮಾರಾಗಿತ್ತು ಎನ್ನುವ ಮಾತೇ ಬಾರದ ಹಾಗೆ ಪ್ರತಿ ಪಾತ್ರವೂ ಜೀವ ತುಂಬಿ ನಟಿಸಿವೆ.

    ಸಂಚಾರಿ ವಿಜಯ್ ಮುಸ್ಲಿಂ ಯುವಕನ ಪಾತ್ರಕ್ಕೆ ತುಂಬಿದ ಜೀವ ಅವರನ್ನು ಬಿಟ್ಟು ಇನ್ನಾರು ಮಾಡಲಾರರೇನೋ ಎನ್ನುವಂತಿದೆ. ನಟ ದೈತ್ಯ ಪ್ರತಿಭೆಗಳಾದ ಅಚ್ಯುತ್ ಕುಮಾರ್, ರಂಗಾಯಣ ರಘು ಅಭಿನಯಕ್ಕೆ ಸರಿಸಾಟಿ ಇಲ್ಲದಂತೆ ನಟಿಸಿದ್ದಾರೆ. ಇಬ್ಬರ ನಟನಾ ತಾಕತ್ತು ತೆರೆ ಮೇಲೆ ಕಣ್ಣಿಗೆ ಹಬ್ಬ ನೀಡುತ್ತದೆ. ನಾಯಕಿ ಮಾತಂಗಿ ಪ್ರಸನ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದು, ನೈಜ ಅಭಿನಯದ ಮೂಲಕ ಎಲ್ಲರನ್ನು ಸೆಳೆಯುತ್ತಾರೆ.

    ವಾಸು ದೀಕ್ಷಿತ್ ಸಂಗೀತ ಚಿತ್ರಕ್ಕೆ ಪೂರಕವಾಗಿದ್ದು ಮನಸ್ಸಿಗೂ ಹತ್ತಿರವೆನಿಸುತ್ತೆ. ಪೂರ್ಣಚಂದ್ರ ತೇಜಸ್ವಿ ಹಿನ್ನೆಲೆ ಸಂಗೀತ ನಿರ್ದೇಶಕರ ವಿಷನ್ ಹಾಗೂ ಕ್ಯಾಮೆರಾ ಕೆಲಸ ಇವೆರಡಕ್ಕೂ ಪರಿಪೂರ್ಣತೆ ನೀಡಿದೆ.

    ನಗುವಿನ ಹೂರಣ, ಗಂಭೀರತೆಯ ಲೇಪನ, ಒಂದೊಳ್ಳೆ ಸಂದೇಶ ಜೊತೆಗೆ ಒಂದೊಳ್ಳೆ ಅನುಭವ ನೀಡುತ್ತಾ, ಸಂಚಾರಿ ವಿಜಯ್ ಇರಬಾರದಿತ್ತಾ ಎನಿಸಿ ಕಣ್ಣಂಚಲಿ ನೀರು‌ ತರಿಸುತ್ತಾ ಕಾಡುವ ಸಿನಿಮಾ ‘ಪುಕ್ಸಟ್ಟೆ ಲೈಫು’.

    ಪಬ್ಲಿಕ್ ರೇಟಿಂಗ್: 4/5

  • ಶಿಲ್ಪಾ ಮುಡ್ಬಿ ದನಿಯಲ್ಲಿ ಮ್ಯಾಜಿಕ್ ಕ್ರಿಯೇಟ್ ಮಾಡಿದ ಪುಗ್ಸಟ್ಟೆ ಲೈಫು ಸಾಂಗ್ -‘ಖಾಲಿ ಖಾಲಿ’ ಹಾಡು ವೈರಲ್

    ಶಿಲ್ಪಾ ಮುಡ್ಬಿ ದನಿಯಲ್ಲಿ ಮ್ಯಾಜಿಕ್ ಕ್ರಿಯೇಟ್ ಮಾಡಿದ ಪುಗ್ಸಟ್ಟೆ ಲೈಫು ಸಾಂಗ್ -‘ಖಾಲಿ ಖಾಲಿ’ ಹಾಡು ವೈರಲ್

    ಬೆಂಗಳೂರು: ಬಿಡುಗಡೆಯ ಸನಿಹದಲ್ಲಿರುವ ಸಂಚಾರಿ ವಿಜಯ್ ಅಭಿನಯದ ಚಿತ್ರ ‘ಪುಗ್ಸಟ್ಟೆ ಲೈಫು’ ಒಂದೊಂದೇ ಸ್ಯಾಂಪಲ್ ಗಳ ಮೂಲಕ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಿದೆ ಚಿತ್ರತಂಡ. ಇಂಟ್ರಸ್ಟಿಂಗ್ ಟ್ರೇಲರ್ ಪ್ರೇಕ್ಷಕರ ಭರಪೂರ ಮೆಚ್ಚುಗೆಗೆ ಪಾತ್ರವಾದ ಬೆನ್ನಲ್ಲೆ ಚಿತ್ರದ ಒಂದೊಂದೇ ಹಾಡುಗಳು ಕೂಡ ಕೇಳುಗರ ಮನಸ್ಸಿಗೆ ಹತ್ತಿರವಾಗುತ್ತಿವೆ. ಇದರ ಬೆನ್ನಲ್ಲೇ ಚಿತ್ರದ ಮತ್ತೊಂದು ಮೀನಿಂಗ್ ಫುಲ್ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

    ಚಿತ್ರದ ‘ಖಾಲಿ ಖಾಲಿಯಾಗಿದೆ’ ಹಾಡಿನ ಲಿರಿಕಲ್ ವೀಡಿಯೋ ಸಾಂಗ್ ಇಂದು ಬಿಡುಗಡೆಯಾಗಿದೆ. ಕೆ.ಕಲ್ಯಾಣ್ ಅರ್ಥಗರ್ಭಿತ ಮನಮುಟ್ಟುವ ಸಾಹಿತ್ಯ ಈ ಹಾಡಿಗಿದೆ. ವಾಸು ದೀಕ್ಷಿತ್ ಸಂಗೀತ ಸಂಯೋಜನೆ ಕೂಡ ಅಷ್ಟೇ ಸೊಗಸಾಗಿದ್ದು, ಖ್ಯಾತ ಜನಪದ ಗಾಯಕಿ ಶಿಲ್ಪಾ ಮುಡ್ಬಿ ದನಿ ಮ್ಯಾಜಿಕ್ ಕ್ರಿಯೇಟ್ ಮಾಡಿದೆ. ಸದ್ಯಕ್ಕಂತು ಈ ಹಾಡನ್ನು ಎಲ್ಲರೂ ರಿಪೀಟ್ ಮೂಡ್ ನಲ್ಲಿ ಕೇಳೋಕೆ ಶುರುವಿಟ್ಟಿದ್ದಾರೆ. ಇದನ್ನೂ ಓದಿ: ಫೋರ್ ವಾಲ್ಸ್’ ಚಿತ್ರದ ಮೊದಲ ಹಾಡು ರಿಲೀಸ್ – ಪ್ರೀತಿ ನಿವೇದನೆಯಲ್ಲಿ ಬ್ಯುಸಿಯಾದ ಅಚ್ಯುತ್ ಕುಮಾರ್

    ಅರವಿಂದ್ ಕುಪ್ಳೀಕರ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಡಾರ್ಕ್ ಹ್ಯೂಮರ್ ಕಥಾಹಂದರದ ಚಿತ್ರ ‘ಪುಗ್ಸಟ್ಟೆ ಲೈಫು’. ಚಿತ್ರದಲ್ಲಿ ಸಂಚಾರಿ ವಿಜಯ್ ಮತ್ತೊಮ್ಮೆ ಹೊಸ ಅವತಾರವೆತ್ತಿದ್ದು, ಮುಸ್ಲಿಂ ಯುವಕನಾಗಿ ಬೀಗ ರಿಪೇರಿ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಳ ಮಧ್ಯಮ ವರ್ಗದ ಯುವಕನೊಬ್ಬ ಹಣದ ಹಿಂದೆ ಬಿದ್ದರೆ ಎದುರಾಗಬಹುದುದಾದ ಸಮಸ್ಯೆಗಳು, ಅಧಿಕಾರದಲ್ಲಿರುವವರು ಅಮಾಯಕರನ್ನು ತಮ್ಮ ಕೆಲಸಕ್ಕಾಗಿ ಬಳಸಿಕೊಳ್ಳುವ ರೀತಿ ಇವೆಲ್ಲವನ್ನು ಸಿನಿಮ್ಯಾಟಿಕ್ ಆಗಿ ಒಂದೊಳ್ಳೆ ಸಂದೇಶವನ್ನಿಟ್ಟಿಕೊಂಡು ಸಿನಿಮಾ ಹೆಣೆದಿದ್ದಾರೆ ನಿರ್ದೇಶಕರು. ಇದನ್ನೂ ಓದಿ: ಕೊನೆಗೂ ತನ್ನ ಆಸೆ ನೆರವೇರಿಸಿಕೊಂಡ ವಿಜಯ್ ದೇವರಕೊಂಡ

    ಚಿತ್ರದಲ್ಲಿ ಭರತ ನಾಟ್ಯ ಕಲಾವಿದೆ ಮಾತಂಗಿ ಪ್ರಸನಾ ನಾಯಕನಟಿಯಾಗಿ ಲಾಯರ್ ಪಾತ್ರದಲ್ಲಿ ನಟಿಸಿದ್ದು, ಅಚ್ಯುತ್ ಕುಮಾರ್, ರಂಗಾಯಣ ರಘು ತಾರಾಬಳಗದಲ್ಲಿದ್ದಾರೆ. ಬಹುತೇಕ ಎಲ್ಲಾ ಕಲಾವಿದರು ರಂಗಭೂಮಿ ಹಿನ್ನೆಲೆಯುಳ್ಳವರೇ ನಟಿಸಿರೋದು ಈ ಚಿತ್ರದ ವಿಶೇಷ ಸಂಗತಿ. ಸರ್ವಸ್ವ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗಿದ್ದು, ಅಧ್ವೈತ್ ಗುರುಮೂರ್ತಿ ಕ್ಯಾಮೆರಾ ನಿರ್ದೇಶನ, ಪೂರ್ಣಚಂದ್ರ ತೇಜಸ್ವಿ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

    ಚಿತ್ರದ ಟ್ರೇಲರ್, ಹಾಡುಗಳಿಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ದೊರಕ್ಕಿದ್ದು, ಚಿತ್ರರಂಗದ ಗಣ್ಯರು ಕೂಡ ಸಿನಿಮಾ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರ ಸೆಪ್ಟೆಂಬರ್ 24ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಇದನ್ನೂ ಓದಿ: ಪ್ರಭಾಸ್, ದೀಪಿಕಾ ಪಡುಕೋಣೆಯ ಪ್ರಾಜೆಕ್ಟ್ ಕೆ ಚಿತ್ರೀಕರಣ ಆರಂಭ ಯಾವಾಗ?

  • ‘ಪುಕ್ಸಟ್ಟೆ ಲೈಫು’ ಚಿತ್ರದ ಟ್ರೇಲರ್ ಔಟ್ – ಸಂಚಾರಿ ವಿಜಯ್ ಹೊಸ ಅವತಾರ ಕಂಡು ಬೆರಗಾದ ಚಿತ್ರರಸಿಕರು

    ‘ಪುಕ್ಸಟ್ಟೆ ಲೈಫು’ ಚಿತ್ರದ ಟ್ರೇಲರ್ ಔಟ್ – ಸಂಚಾರಿ ವಿಜಯ್ ಹೊಸ ಅವತಾರ ಕಂಡು ಬೆರಗಾದ ಚಿತ್ರರಸಿಕರು

    ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ನಟನೆಯ ಬಹು ನಿರೀಕ್ಷಿತ ಚಿತ್ರ ‘ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ’. ಅರವಿಂದ್ ಕುಪ್ಳಿಕರ್ ನಿರ್ದೇಶನವಿರುವ ಚಿತ್ರದ ಇಂಟ್ರಸ್ಟಿಂಗ್ ಟ್ರೇಲರ್ ಇಂದು ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಎಂದಿನಂತೆ ಈ ಚಿತ್ರದಲ್ಲೂ ಹೊಸ ಪಾತ್ರಕ್ಕೆ ಸಂಚಾರಿ ವಿಜಯ್ ಜೀವ ತುಂಬಿದ್ದು, ಬೀಗ ರಿಪೇರಿ ಮಾಡುವ ಮುಸ್ಲಿಂ ಯುವಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ.

    ಟ್ರೇಲರ್ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟುಹಾಕಿದೆ. ಸಂಚಾರಿ ವಿಜಯ್ ಪೊಲೀಸ್ ಜೊತೆ ಸೇರಿ ಕಳ್ಳತನಕ್ಕೆ ಇಳಿಯುವ ದೃಶ್ಯ ಟ್ರೇಲರ್ ನಲ್ಲಿದೆ. ಪೊಲೀಸ್ ಇನ್‍ಸ್ಪೆಕ್ಟರ್ ಪಾತ್ರದಲ್ಲಿ ಅಭಿನಯಿಸಿರುವ ಅಚ್ಯುತ್ ಕುಮಾರ್ ಕೂಡ ಕಳ್ಳತನದ ದಾರಿ ಹಿಡಿಯುವ ದೃಶ್ಯಗಳು ಕ್ಯೂರಿಯಾಸಿಟಿಯನ್ನು ಹೆಚ್ಚಿಸಿದ್ದು, ಚಿತ್ರದಲ್ಲೇನೋ ಹೊಸತನವಿದೆ ಎನ್ನುವುದು ಖಾತ್ರಿಯಾಗಿದೆ. ಸಿಸಿಬಿ ಅಧಿಕಾರಿಯಾಗಿ ರಂಗಾಯಣ ರಘು ಪಾತ್ರವನ್ನು ರಿವೀಲ್ ಮಾಡಲಾಗಿದೆ. ಒಟ್ನಲ್ಲಿ, ಒಂದಿಷ್ಟು ಸಂಗತಿಗಳು ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿದ್ದು ‘ಪುಕ್ಸಟ್ಟೆ ಲೈಫು’ ಪ್ರಪಂಚದಲ್ಲಿ ನಿರ್ದೇಶಕರು ಏನೇನು ಸೃಷ್ಟಿಸಿದ್ದಾರೆ ಅನ್ನೋದಕ್ಕೆ ಸಿನಿಮಾ ಬಿಡುಗಡೆಯವರೆಗೆ ಕಾಯಲೇಬೇಕು.

    ಮಧ್ಯಮ ವರ್ಗದ ವ್ಯಕ್ತಿ ಹಣದ ಹಿಂದೆ ಬಿದ್ದರೆ ಯಾವೆಲ್ಲ ರೀತಿಯ ಸಮಸ್ಯೆಗಳು ಶುರುವಾಗಬಹುದು ಎನ್ನುವುದು ಚಿತ್ರದ ಒನ್ ಲೈನ್ ಕಹಾನಿ. ವಿಜಯ್ ಕೆಳ ಮಧ್ಯಮ ವರ್ಗದ ಮುಸ್ಲಿಂ ಹುಡುಗನಾಗಿ ಬೀಗ ರಿಪೇರಿ ಮಾಡುವ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ವಿಜಯ್ ಹೊಸ ಅವತಾರವನ್ನು ತೆರೆ ಮೇಲೆ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾಯುತ್ತಿದ್ದಾರೆ. ರಂಗಭೂಮಿ ಕಲಾವಿದರಾದ ಅರವಿಂದ ಕುಪ್ಳಿಕರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಮೊದಲ ಸಿನಿಮಾ ಇದು. ಡಾರ್ಕ್ ಹ್ಯೂಮರ್ ಕಥಾಹಂದರ ಒಳಗೊಂಡಿರುವ ಈ ಚಿತ್ರ ಸೆಪ್ಟೆಂಬರ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

    ಮಾತಂಗಿ ಪ್ರಸನಾ ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ರಂಗಾಯಣ ರಘು ಸೇರಿದಂತೆ ಹಲವು ರಂಗಭೂಮಿ ಕಲಾವಿದರು ತಾರಾಬಳಗದಲ್ಲಿದ್ದಾರೆ. ಅಧ್ವೈತ್ ಗುರುಮೂರ್ತಿ ಕ್ಯಾಮೆರಾ ವರ್ಕ್, ವಾಸು ದೀಕ್ಷಿತ್ ಸಂಗೀತ ಸಂಯೋಜನೆ, ಪೂರ್ಣಚಂದ್ರ ತೇಜಸ್ವಿ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಸರ್ವಸ್ವ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಾಗರಾಜ್ ಸೋಮಯಾಜಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ: ಸಂಚಾರಿ ವಿಜಯ್‍ಗೆ ಅಮೆರಿಕದ ಥಿಯೇಟರ್ ನಿಂದ ಗೌರವ

  • ರಾಜಕೀಯ ಕನಸು ಕಂಡಿದ್ದ ಬುಲೆಟ್ ಪ್ರಕಾಶ್: ರಂಗಾಯಣ ರಘು

    ರಾಜಕೀಯ ಕನಸು ಕಂಡಿದ್ದ ಬುಲೆಟ್ ಪ್ರಕಾಶ್: ರಂಗಾಯಣ ರಘು

    – ಪ್ರಕಾಶ್‍ಗೆ ಸ್ನೇಹ ಸಾಗರವೇ ಇದೆ

    ಬೆಂಗಳೂರು: ಗೆಳೆಯ ಬುಲೆಟ್ ಪ್ರಕಾಶ್ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ನೋವು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬಸ್ಥರಿಗೆ ದೇವರು ನೀಡಲಿ ಎಂದು ಹಾಸ್ಯ ನಟ ರಂಗಾಯಣ ರಘು ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನಾನು ಹಾಗೂ ಬುಲೆಟ್ ಪ್ರಕಾಶ್ ಹೋಗೋ ಬಾರೋ ಫ್ರೆಂಡ್ಸ್. ಅವರಿಗೆ ನಾನಷ್ಟೇ ಅಲ್ಲ ದೊಡ್ಡ ಸಂಖ್ಯೆಯ ಸ್ನೇಹ ಬಳಗವೇ ಇದೆ. ಪ್ರಕಾಶ್ ಅವರ ಏರಿಯಾದಲ್ಲಿ ಅನೇಕ ಸ್ನೇಹಿತರಿದ್ದಾರೆ. ಎಲ್ಲರೊಂದಿಗೂ ಹಾಸ್ಯವಾಗಿ, ನಗು ಮುಖದಿಂದ ಇರುತ್ತಿದ್ದರು. ಎಲ್ಲವನ್ನೂ ತಮಾಷೆಯಾಗಿ ತೆಗೆದುಕೊಳ್ಳುತ್ತಿದ್ದ ಎಂದು ನೆನೆದರು.

    ನೇರ ನುಡಿಯ ಗೆಳೆಯ ಪ್ರಕಾಶ್ ರಾಜಕೀಯ ಕನಸು ಕಂಡಿದ್ದ. ಅದರಂತೆ ಸಿದ್ಧತೆ ಕೂಡ ನಡೆಸಿದ್ದ. ಆದರೆ ಪ್ರಕಾಶ್ ಚಿಕ್ಕ ವಯಸ್ಸಿನಲ್ಲಿಯೇ ನಮ್ಮನ್ನ ಅಗಲಿದ್ದು ಭಾರೀ ನೋವು ತಂದಿದೆ. ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ ಎಂದು ರಂಗಾಯಣ ರಘು ಹೇಳಿದರು.