Tag: ranchi

  • ಸಿಕ್ಸರ್‌ನೊಂದಿಗೆ ಶತಕ, ದ್ವಿಶತಕ ಸಿಡಿಸಿ ದಾಖಲೆ ಬರೆದ ರೋಹಿತ್

    ಸಿಕ್ಸರ್‌ನೊಂದಿಗೆ ಶತಕ, ದ್ವಿಶತಕ ಸಿಡಿಸಿ ದಾಖಲೆ ಬರೆದ ರೋಹಿತ್

    – ದಕ್ಷಿಣ ಆಫ್ರಿಕಾ ವಿರುದ್ಧ ಹಿಟ್ ಮ್ಯಾನ್ 500ಪ್ಲಸ್ ರನ್
    – ಡಾನ್ ಬ್ರಾಡ್ಮನ್ ದಾಖಲೆ ಉಡೀಸ್

    ರಾಂಚಿ: ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಟೆಸ್ಟ್ ಮಾದರಿಯಲ್ಲಿ ಮೊದಲ ದ್ವಿಶತಕದ ಸಾಧನೆ ಮಾಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‍ನಲ್ಲಿ ದ್ವಿಶತಕ ಸಿಡಿಸಿದ್ದಾರೆ.

    ಪಂದ್ಯದ ಮೊದಲ ದಿನದಾಟದಲ್ಲಿ ಶತಕ ಸಿಡಿಸಿದ್ದ ರೋಹಿತ್ ಇಂದು ಅದನ್ನು ದ್ವಿಶತಕವಾಗಿ ಪರಿವರ್ತಿಸಲು ಯಶಸ್ವಿಯಾದರು. ಅಲ್ಲದೇ ಶತಕವನ್ನು ಸಿಕ್ಸರ್ ಬಾರಿಸುವ ಪೂರೈಸಿದ್ದ ಹಿಟ್ ಮ್ಯಾನ್ ಇಂದು ದ್ವಿಶತಕವನ್ನು ಸಿಕ್ಸರ್ ಸಿಡಿಸಿಯೇ ಪೂರೈಸಿದ್ದು ವಿಶೇಷವಾಗಿತ್ತು. ಈ ಮೂಲಕ ಭಾರತದ ಪರ ಸಿಕ್ಸರ್ ಸಿಡಿಸಿ ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 249 ಎಸೆತಗಳಲ್ಲಿ 28 ಬೌಂಡರಿ, 6 ಸಿಕ್ಸರ್ ಗಳ ನೆರವಿನಿಂದ ರೋಹಿತ್ ದ್ವಿಶತಕ ಸಿಡಿಸಿದ್ದು, ಆ ಮೂಲಕ ಏಕದಿನ ಹಾಗೂ ಟೆಸ್ಟ್ ಎರಡೂ ಮಾದರಿಯಲ್ಲಿ ದ್ವಿಶತಕ ಸಿಡಿಸಿದ ಸಾಧನೆ ಮಾಡಿದರು.

    224 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು 2ನೇ ದಿನದಾಟ ಆರಂಭಿಸಿದ ಭಾರತ ಪರ 115 ರನ್ ಗಳಿಸಿ ರಹಾನೆ ಔಟಾದರು. ಆ ಬಳಿಕ ರವೀಂದ್ರ ಜಡೇಜಾರನ್ನು ಕೂಡಿಕೊಂಡ ರೋಹಿತ್ ಬಿರುಸಿನ ಆಟ ಪ್ರದರ್ಶಿಸಿದರು. 199 ರನ್ ಗಳಿಸಿದ್ದ ವೇಳೆ ರೋಹಿತ್ ಔಟಾಗುವ ಪ್ರಮಾದದಿಂದ ತಪ್ಪಿಸಿಕೊಂಡರು. ವಿರಾಮ ಬಳಿಕ ಆರಂಭವಾದ ಆಟದಲ್ಲಿ ದ್ವಿಶತಕ ಸಾಧನೆ ಮಾಡಿ 255 ಎಸೆತಗಳಲ್ಲಿ 212 ರನ್ ಗಳಿಸಿ 5ನೇಯವರಾಗಿ ಔಟಾದರು. ಅಂದಹಾಗೇ ರೋಹಿತ್ ಶರ್ಮಾ ತಮ್ಮ 6 ಟೆಸ್ಟ್ ಶತಕಗಳನ್ನು ತವರು ನೆಲದಲ್ಲಿಯೇ ಗಳಿಸಿದ್ದಾರೆ.

    500 ಪ್ಲಸ್ ರನ್: ದಕ್ಷಿಣ ಆಫ್ರಿಕಾ ವಿರುದ್ಧ ಟೂರ್ನಿಯಲ್ಲಿ ರೋಹಿತ್ 500 ಪ್ಲಸ್ ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಭಾರತ ಪರ ಒಂದು ಟೂರ್ನಿಯಲ್ಲಿ 500 ಪ್ಲಸ್ ರನ್ ಗಳಿಸಿದ 5ನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಈ ಹಿಂದೆ ಭಾರತದ ಪರ ಸುನೀಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್, ವಿನೂ ಮಂಕಡ್, ಬುಧಿ ಕುಂದೇರನ್ ಈ ಸಾಧನೆಯನ್ನು ಮಾಡಿದ್ದ ಆರಂಭಿಕ ಆಟಗಾರಾಗಿದ್ದಾರೆ. 2005 ರಲ್ಲಿ ವೀರೇಂದ್ರ ಸೆಹ್ವಾಗ್ ಪಾಕಿಸ್ತಾನ ವಿರುದ್ಧ 500 ರನ್ ಗಳಿಸಿ ಈ ಸಾಧನೆ ಮಾಡಿದ್ದರು.

    99.84 ಸರಾಸರಿ: ತವರು ನೆಲದಲ್ಲಿ ನಡೆದ ಟೆಸ್ಟ್ ಟೂರ್ನಿಯಲ್ಲಿ ರೋಹಿತ್ ಶರ್ಮಾ 99.84ರ ಸರಾಸರಿಯಲ್ಲಿ ರನ್ ಗಳಿಸಿದ್ದು, ಈ ಹಿಂದೆ ದಿಗ್ಗಜ ಆಟಗಾರ ಡಾನ್ ಬ್ರಾಡ್ಮನ್ ಆಸೀಸ್ ತವರು ನೆಲದಲ್ಲಿ ಸಿಡಿಸಿದ್ದ ಸರಾಸರಿ ರನ್ ದಾಖಲೆಯನ್ನು ಮುರಿದರು. ಬ್ರಾಡ್ಮನ್ 98.22 ಸರಾಸರಿಯಲ್ಲಿ ರನ್ ಗಳಿಸಿದ್ದರು.

    ಟೆಸ್ಟ್ ಮಾದರಿಯಲ್ಲಿ ರೋಹಿತ್ ರನ್ ಗಳಿಸುವ ಕುರಿತು ಹೆಚ್ಚಿನ ಸಮಯ ಚಿಂತನೆ ನಡೆಸಿ ರೋಹಿತ್‍ಗೆ ಆರಂಭಿಕ ಸ್ಥಾನ ನೀಡಲಾಗಿತ್ತು. ತಮ್ಮ ವಿರುದ್ಧ ಕೇಳಿ ಬಂದ ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರಿಸಿರುವ ರೋಹಿತ್ ಮೊದಲ ಟೆಸ್ಟ್ ಪಂದ್ಯದ 2 ಇನ್ನಿಂಗ್ಸ್ ಗಳಲ್ಲಿ ಶತಕ ಸಾಧನೆ ಮಾಡಿ ತಿರುಗೇಟು ನೀಡಿದ್ದರು. ಸದ್ಯ ಅಂತಿಮ ಪಂದ್ಯದಲ್ಲೂ ದ್ವಿಶತಕ ಸಾಧನೆ ಮಾಡುವ ಮೂಲಕ ಆಯ್ಕೆ ಸಮಿತಿಗೆ ಖಡಕ್ ಸಂದೇಶವನ್ನು ನೀಡಿದ್ದಾರೆ.

  • ಬರೋಬ್ಬರಿ 3 ವರ್ಷಗಳ ಬಳಿಕ ತವರಿನಲ್ಲಿ ಶತಕ ಸಿಡಿಸಿದ ರಹಾನೆ

    ಬರೋಬ್ಬರಿ 3 ವರ್ಷಗಳ ಬಳಿಕ ತವರಿನಲ್ಲಿ ಶತಕ ಸಿಡಿಸಿದ ರಹಾನೆ

    ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಉಪನಾಯಕ ರಹಾನೆ ಶತಕ ಸಿಡಿಸಿದ್ದಾರೆ. 169 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್ ನೆರವಿನಿಂದ ರಹಾನೆ ಶತಕ ಪೂರ್ಣಗೊಳಿಸಿದರು.

    ನಿನ್ನೆಯ ಆಟದಲ್ಲಿ ಅರ್ಧ ಶತಕ (83 ರನ್)ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ರಹಾನೆ, ಇಂದು ರೋಹಿತ್ ಶರ್ಮಾ ಅವರೊಂದಿಗೆ ಕೂಡಿ ಇನ್ನಿಂಗ್ಸ್ ಮುಂದುವರಿಸಿದರು. ರಹಾನೆ ತವರಿನಲ್ಲಿ ಗಳಿಸಿದ 4ನೇ ಶತಕ ಇದಾಗಿದ್ದು, ಟೆಸ್ಟ್ ವೃತ್ತಿ ಜೀವನದ 11ನೇ ಶತಕವನ್ನು ಪೂರೈಸಿದ್ದಾರೆ. 2016 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂದೋರ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ರಹಾನೆ ಶತಕ ಸಿಡಿಸಿದ್ದರು. ಆ ಬಳಿಕ 16 ಟೆಸ್ಟ್ ಪಂದ್ಯ ಆಡಿದ್ದರೂ ರಹಾನೆ ಶತಕ ಗಳಿಸಲು ವಿಫಲರಾಗಿದ್ದರು.

    ಅಂದಹಾಗೇ ವೆಸ್ಟ್ ಇಂಡೀಸ್ ಸರಣಿಯಲ್ಲಿ ಶತಕ ಗಳಿಸಿದ್ದ ರಹಾನೆ 2 ವರ್ಷಗಳ ಬಳಿಕ ಶತಕ ಸಾಧನೆ ಮಾಡಿದ್ದರು. 2 ವರ್ಷದ ಅವಧಿಯಲ್ಲಿ ರಹಾನೆ 29 ಇನ್ನಿಂಗ್ಸ್ ಆಡಿದ್ದರೂ ಯಾವುದೇ ಶತಕ ಗಳಿಸಿರಲಿಲ್ಲ.

    ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದು, ರಹಾನೆ ತಾಳ್ಮೆಯ ಬ್ಯಾಟಿಂಗ್ ಮೂಲಕ ಉತ್ತಮ ಸಾಥ್ ನೀಡಿ ಪಂದ್ಯದಲ್ಲಿ ತಂಡ ಮೇಲುಗೈ ಸಾಧಿಸಲು ಕಾರಣರಾದರು. 39 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸಿದ್ದ ತಂಡಕ್ಕೆ ಆಸರೆಯಾದ ಈ ಜೋಡಿ 4ನೇ ವಿಕೆಟ್‍ಗೆ 265 ಎಸೆತಗಳಲ್ಲಿ 267 ರನ್ ಗಳ ಜೊತೆಯಾಟ ನೀಡಿದೆ. 115 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ರಹಾನೆ ಜಾರ್ಜ್ ಲಿಂಡೆ ಬೌಲಿಂಗ್‍ನಲ್ಲಿ ಔಟಾಗುವ ಮೂಲಕ ನಿರ್ಗಮಿಸಿದರು.

  • ಕಳೆದ 2 ವರ್ಷದಿಂದ ಕೊಹ್ಲಿಗೆ ಡಿಆರ್‌ಎಸ್ ಫೀವರ್

    ಕಳೆದ 2 ವರ್ಷದಿಂದ ಕೊಹ್ಲಿಗೆ ಡಿಆರ್‌ಎಸ್ ಫೀವರ್

    ರಾಂಚಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ (ಡಿಆರ್‌ಎಸ್)ಯನ್ನು ಸೂಕ್ತ ಸಮಯದಲ್ಲಿ ಬಳಕೆ ಮಾಡಿಕೊಳ್ಳಲು ಕಳೆದ 2 ವರ್ಷಗಳಿಂದ ವಿಫಲರಾಗಿದ್ದು, ಇಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಅಂತಿಮ ಟೆಸ್ಟ್ ಪಂದ್ಯದ ವೇಳೆಯೂ ಡಿಆರ್ ಎಸ್ ಪಡೆದು ನಿರಾಸೆ ಅನುಭವಿಸಿದ್ದಾರೆ.

    ಟೆಸ್ಟ್ ಕ್ರಿಕೆಟ್‍ನಲ್ಲಿ ಒಬ್ಬ ಬ್ಯಾಟ್ಸ್ ಮನ್ ಆಗಿ ಕಳೆದ 2 ವರ್ಷಗಳಿಂದ ಇದುವರೆಗೂ ಕೊಹ್ಲಿ ಪಡೆದ ಎಲ್ಲಾ ಡಿಆರ್‌ಎಸ್ ಮನವಿಗಳಲ್ಲಿ ನಿರಾಸೆ ಎದುರಿಸಿದ್ದಾರೆ. 2017 ರಲ್ಲಿ ನಡೆದ ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಆರಂಭವಾದ ಈ ನಡೆ ಇಂದಿಗೂ ಮುಂದುವರಿದಿದ್ದು, ಸತತ 9 ಬಾರಿ ಕೊಹ್ಲಿ ಡಿಆರ್‌ಎಸ್ ಪಡೆದು ನಿರಾಸೆ ಅನುಭವಿಸಿದ್ದಾರೆ.

    ಇಂದಿನ ಪಂದ್ಯದಲ್ಲಿ ಮಯಾಂಕ್ ಹಾಗೂ ಪೂಜಾರ ಬಹುಬೇಗ ಔಟಾದ ಹಿನ್ನೆಲೆಯಲ್ಲಿ ತಂಡ ಸಂಕಷ್ಟ ಎದುರಿಸಿತ್ತು. ಈ ಸಂದರ್ಭದಲ್ಲಿ ಬ್ಯಾಟಿಂಗ್ ಇಳಿದ ಕೊಹ್ಲಿ, ಬಿರುಸಿನ 2 ಬೌಂಡರಿ ಸಿಡಿಸಿ ಗಮನ ಸೆಳೆದರು. ಆದರೆ ದಕ್ಷಿಣ ಆಫ್ರಿಕಾ ವೇಗದ ಬೌಲರ್ ಅನ್ರಿಕ್ ನಾಟ್ರ್ಜೆ ಎಸೆದ 16ನೇ ಓವರಿನಲ್ಲಿ ಕೊಹ್ಲಿ ಎಲ್‍ಬಿ ಬಲೆಗೆ ಬಿದ್ದರು. ಇದನ್ನು ಆನ್ ಫೀಲ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಆದರೆ ಅಂಪೈರ್ ತೀರ್ಮಾನವನ್ನು ಪ್ರಶ್ನಿಸಿದ ಕೊಹ್ಲಿ ಡಿಆರ್‌ಎಸ್ ಪಡೆದರು.

    ರೋಹಿತ್ ಶರ್ಮಾರ ಸಲಹೆಯೊಂದಿಗೆ ಕೊಹ್ಲಿ ಡಿಆರ್‌ಎಸ್ ಪಡೆದರು ಕೂಡ ಚೆಂಡು ಲೆಗ್ ಸ್ಟಂಪ್‍ಗೆ ತಾಗಿ ಮುಂದೇ ಸಾಗುತ್ತಿರುವಂತೆ ಕಂಡು ಬಂತು ರಿವ್ಯೂನಲ್ಲಿ ಕಂಡು ಬಂತು. ಪರಿಣಾಮ ಥರ್ಡ್ ಅಂಪೈರ್, ಆನ್ ಫೀಲ್ಡ್ ಅಂಪೈರ್ ನಿರ್ಧಾರವನ್ನೇ ಅಂತಿಮಗೊಳಿಸಿದರು. ಇದರೊಂದಿಗೆ ಕೊಹ್ಲಿ 22 ಎಸೆತಗಳಲ್ಲಿ 12 ರನ್ ಗಳಿಸಿ ನಿರ್ಗಮಿಸಿದರು. ಆದರೆ ಕೊಹ್ಲಿ ಔಟಾಗುತ್ತಿದಂತೆ ಅಭಿಮಾನಿಗಳು ಡಿಆರ್‌ಎಸ್ ನಿಮಯಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದು, ಅಂಪೈರ್ ತೀರ್ಮಾನವನ್ನು ಅಂತಿಮಗೊಳಿಸುವ ನಿಯಮಗಳನ್ನು ಬದಲಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಹಿಂದೆಯೂ ಕೂಡ ಕೊಹ್ಲಿ ಡಿಆರ್‌ಎಸ್ ನಿಯಮಗಳ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇತ್ತ ತಂಡದ ನಾಯಕರಾಗಿ ಡಿಆರ್‌ಎಸ್ ಪಡೆಯುವಲ್ಲಿ ಕೊಹ್ಲಿ ಸರಿ ಎನಿಸುತ್ತಿದ್ದರು, ಬ್ಯಾಟ್ಸ್ ಮನ್ ಆಗಿ ನಿರಾಸೆ ಅನುಭವಿಸುತ್ತಿದ್ದಾರೆ.

    https://twitter.com/IManish311/status/1185515629492617216

  • ಶತಕದೊಂದಿಗೆ ವಿಶ್ವದಾಖಲೆ ಬರೆದ ‘ಹಿಟ್ ಮ್ಯಾನ್’

    ಶತಕದೊಂದಿಗೆ ವಿಶ್ವದಾಖಲೆ ಬರೆದ ‘ಹಿಟ್ ಮ್ಯಾನ್’

    ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದಿದ್ದ ರೋಹಿತ್ ಶರ್ಮಾ ಟೆಸ್ಟ್ ನ 2 ಇನ್ನಿಂಗ್ಸ್ ಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಸದ್ಯ ರಾಂಚಿಯಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲೂ ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದಾರೆ.

    ಟೀಂ ಇಂಡಿಯಾಗೆ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ, ಸರಣಿಯಲ್ಲಿ 3ನೇ ಹಾಗೂ ಟೆಸ್ಟ್ ವೃತ್ತಿ ಜೀವನದ 6ನೇ ಶತಕ ಸಿಡಿಸಿದ್ದರು. 130 ಎಸೆತಗಳಲ್ಲೇ ರೋಹಿತ್ ಶತಕ ಸಿಡಿಸಿದ್ದು ವಿಶೇಷವಾಗಿದ್ದು, ಒಟ್ಟಾರೆ 164 ಎಸೆತ ಎದುರಿಸಿ 14 ಬೌಂಡರಿ, 4 ಸಿಕ್ಸರ್ ಗಳೊಂದಿಗೆ 117 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ಸಿಕ್ಸರ್ ವಿಶ್ವದಾಖಲೆ: ರೋಹಿತ್ ಶರ್ಮಾ ಪಂದ್ಯದ ಮೊದಲ ದಿನದಾಟದ ವೇಳೆ 4 ಶತಕಗಳನ್ನು ಸಿಡಿಸಿದ್ದು, ಆ ಮೂಲಕ ಟೆಸ್ಟ್ ಟೂರ್ನಿಯೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ವಿಶ್ವದಾಖಲೆ ಬರೆದರು. ಇದುವರೆಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೂರ್ನಿಯಲ್ಲಿ ರೋಹಿತ್ 17 ಸಿಕ್ಸರ್ ಸಿಡಿಸಿದ್ದಾರೆ. 2018 ಬಾಂಗ್ಲಾ ವಿರುದ್ಧ ಶಿಮ್ರಾನ್ ಹೆಟ್ಮಾಯರ್ 15 ಸಿಕ್ಸರ್ ಸಿಡಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಉಳಿದಂತೆ ವಾಸೀಂ ರಾಜಾ 1977ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 14 ಸಿಕ್ಸರ್, ಆಂಡ್ರ್ಯೂ ಫ್ಲಿಂಟಾಫ್ ದಕ್ಷಿಣ ಆಫ್ರಿಕಾ ವಿರುದ್ಧ ಹಾಗೂ ಮ್ಯಾಥ್ಯೂವ್ ಹೇಡನ್ ಜಿಂಬಾಂಬೆ ವಿರುದ್ಧ 14 ಸಿಕ್ಸರ್ ಸಿಡಿಸಿದ್ದರು. ಭಾರತದ ಪರ 2010-11ರ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಹರ್ಭಜನ್ ಸಿಂಗ್ 14 ಸಿಕ್ಸರ್ ಸಿಡಿಸಿದ್ದರು.

    ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಪರ ಮಯಾಂಕ್ 10 ರನ್, ಪೂಜಾರಾ ಡಕೌಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ದರು. ಆ ಬಳಿಕ ಬಂದ ನಾಯಕ ಕೊಹ್ಲಿ ಕೂಡ 12 ರನ್ ಗಳಿಸಿ ಔಟಾಗುವುದರೊಂದಿಗೆ ತಂಡ 39 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ತಂಡಕ್ಕೆ ಆಸರೆಯಾಗಿ ನಿಂತ ಈ ಇಬ್ಬರ ಜೋಡಿ ಮುರಿಯದ 4ನೇ ವಿಕೆಟ್‍ಗೆ 185 ರನ್ ಗಳಿಸಿದೆ. ರಹಾನೆ 135 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ನೊಂದಿಗೆ 83 ರನ್ ಗಳಿಸಿದ್ದಾರೆ.

  • ರಾಂಚಿ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ ಧೋನಿ

    ರಾಂಚಿ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ ಧೋನಿ

    ರಾಂಚಿ: ವಿಶ್ವಕಪ್ ಟೂರ್ನಿಯ ಬಳಿಕ ಕ್ರಿಕೆಟ್‍ನಿಂದ ವಿಶ್ರಾಂತಿ ಪಡೆದಿದ್ದ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ, ಶನಿವಾರ ರಾಂಚಿಯಲ್ಲಿ ಆರಂಭವಾಗಲಿರುವ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಸದಸ್ಯರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

    ಧೋನಿ ತವರು ನೆಲ ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3 ಟೆಸ್ಟ್ ಪಂದ್ಯಗಳ ಟೂರ್ನಿಯ ಅಂತಿಮ ಪಂದ್ಯ ಶನಿವಾರದಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಧೋನಿ ಕ್ರೀಡಾಂಗಣಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ ಎಂದು ಧೋನಿ ಬಾಲ್ಯದ ಗೆಳೆಯ, ಮ್ಯಾನೇಜರ್ ಮಿಹಿರ್ ದಿವಾಕರ್ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.

    ಜಾರ್ಖಂಡ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಫಿಸ್ ಖಾನ್ ಧೋನಿ ಅವರ ಕುಟುಂಬಕ್ಕೆ ವೈಯಕ್ತಿಕ ಆಹ್ವಾನ ನೀಡಿದ್ದು, ಧೋನಿ ತವರಿನ ಕ್ರೀಡಾಂಗಣ ಆಗಿರುವುದರಿಂದ ಅವರಿಗೆ ಆಹ್ವಾನ ನೀಡಲಾಗಿದೆ ಎಂದಿದ್ದಾರೆ. ಧೋನಿ ರಾಂಚಿಯಿಂದ 30 ಕಿಲೋ ಮೀಟರ್ ದೂರ ಇರುವ ನಿವಾಸದಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.

    ವಿಶ್ವಕಪ್ ಬಳಿಕ ಧೋನಿ ನಿವೃತ್ತಿಯ ಕುರಿತು ಭಾರೀ ಚರ್ಚೆಗಳು ನಡೆದಿದ್ದು, ಬಿಸಿಸಿಐ ಬಾಂಗ್ಲಾದೇಶದ ಟೂರ್ನಿಗೂ ಅವರನ್ನು ಆಯ್ಕೆ ಮಾಡಿಲ್ಲ. ಪರಿಣಾಮ ಅವರು ಮುಂದಿನ ಅವಧಿಯಲ್ಲಿ ಟೀಂ ಇಂಡಿಯಾ ಪರ ಧೋನಿ ಆಡುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಆದರೆ ಧೋನಿ ಆಪ್ತ ವಲಯದಲ್ಲಿರುವ ದಿವಾಕರ್ ಕೂಡ, ನಿವೃತ್ತಿಯ ಬಗ್ಗೆ ಇದುವರೆಗೂ ಯಾವುದೇ ಮಾತುಕತೆ ನಡೆದಿಲ್ಲ ಎಂದಿದ್ದಾರೆ. ಅಲ್ಲದೇ ಧೋನಿರ ತೀರ್ಮಾನಗಳ ಬಗ್ಗೆ ಭವಿಷ್ಯ ನುಡಿಯುವುದು ಕಷ್ಟಸಾಧ್ಯ ಎಂದು ಹೇಳಿದ್ದಾರೆ. ಅಂದಹಾಗೇ ಧೋನಿ ಟೆಸ್ಟ್ ಕ್ರಿಕೆಟ್‍ಗೆ 2014 ರಲ್ಲಿ ನಿವೃತ್ತಿ ಘೋಷಿಸಿದ್ದು, ಸಮೀತ ಓವರ್ ಗಳ ಕ್ರಿಕೆಟ್‍ನಲ್ಲಿ ಮಾತ್ರ ಮುಂದುವರಿದಿದ್ದರು.

    ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ 2-0 ಅಂತರದಲ್ಲಿ ವಶಕ್ಕೆ ಪಡೆದಿದ್ದು, ರಾಂಚಿ ಪಂದ್ಯವನ್ನು ಗೆಲ್ಲುವ ಮೂಲಕ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ನಂ.1 ಪಟ್ಟದಲ್ಲಿ ಮುಂದುವರಿಯುವ ಚಿಂತನೆಯಲ್ಲಿದೆ.

  • ಹೊಟ್ಟೆನೋವೆಂದು ಬಂದ ಯುವಕರಿಗೆ ಪ್ರಗ್ನೆನ್ಸಿ ಟೆಸ್ಟ್ ಮಾಡಿಸೆಂದ ವೈದ್ಯ

    ಹೊಟ್ಟೆನೋವೆಂದು ಬಂದ ಯುವಕರಿಗೆ ಪ್ರಗ್ನೆನ್ಸಿ ಟೆಸ್ಟ್ ಮಾಡಿಸೆಂದ ವೈದ್ಯ

    ರಾಂಚಿ: ಹೊಟ್ಟೆನೋವೆಂದು ಆಸ್ಪತ್ರೆಗೆ ಬಂದಿದ್ದ ಇಬ್ಬರು ಯುವಕರಿಗೆ ಚಿಕಿತ್ಸೆ ಕೊಡಬೇಕಾಗಿದ್ದ ವೈದ್ಯ ಸರಿಯಾಗಿ ತಪಾಸಣೆ ಮಾಡದೇ, ಪ್ರಗ್ನೆನ್ಸಿ ಟೆಸ್ಟ್ ಮಾಡಿಸಿಕೊಂಡು ಬನ್ನಿ ಎಂದು ಬರೆದು ಕೊಟ್ಟಿರುವ ಆರೋಪ ಕೇಳಿಬಂದಿದ್ದು, ಈಗ ಬಾರಿ ಚರ್ಚೆಯಾಗುತ್ತಿದೆ.

    ಜಾರ್ಖಂಡಿನ ಚತ್ರ್ ಜಿಲ್ಲೆಯ ಸಿಮಾರಿಯಾದ ರೆಫರೆಲ್ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಅಕ್ಟೋಬರ್ 1 ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಮುಕೇಶ್ ವಿರುದ್ಧ ಯುವಕರಿಗೆ ಪ್ರಗ್ನೆನ್ಸಿ ಟೆಸ್ಟ್ ಮಾಡಿಸಿ ಎಂದು ಹೇಳಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

    ಗೋಪಾಲ್ ಗಂಜು(22) ಹಾಗೂ ಕಾಮೇಶ್ವರ ಗಂಜು(26) ಅವರಿಗೆ ವೈದ್ಯ ಪ್ರಗ್ನೆನ್ಸಿ ಟೆಸ್ಟ್ ಮಾಡಿಸಿಕೊಂಡು ಬನ್ನಿ ಎಂದಿದ್ದಾರೆ ಎನ್ನಲಾಗಿದೆ. ಇಬ್ಬರು ಯುವಕರು ಹಲವು ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಆದ್ದರಿಂದ ಯುವಕರನ್ನು ಅವರ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ಮುಕೇಶ್ ಅವರಿಬ್ಬರಿಗೂ ಕಾಟಾಚಾರಕ್ಕೆ ತಪಾಸಣೆ ಮಾಡಿ, ಎಚ್‍ಐವಿ, ಎಚ್‍ಬಿಎ, ಎಚ್‍ಸಿವಿ, ಸಿಬಿಸಿ, ಎಚ್‍ಎಚ್2 ಮತ್ತು ಎಎನ್‍ಸಿ ಪರೀಕ್ಷೆ ಮಾಡಿಕೊಂಡು ಬನ್ನಿ ಎಂದು ಚೀಟಿ ಬರೆದು ಕೊಟ್ಟಿದ್ದರು. ಜೊತೆಗೆ ಪ್ರಗ್ನೆನ್ಸಿ ಪರೀಕ್ಷೆ ಕೂಡ ಮಾಡಿಸಿಕೊಂಡು ಬರಲು ಬರೆದಿದ್ದಾರೆ.

    ಇವರಿಬ್ಬರು ವೈದ್ಯರು ಬರೆದುಕೊಟ್ಟಿದ್ದ ಚೀಟಿಯನ್ನು ಹಿಡಿದುಕೊಂಡು ಲ್ಯಾಬ್‍ಗೆ ಹೋದಾಗ ಅಲ್ಲಿನ ಸಿಬ್ಬಂದಿ ಚೀಟಿ ನೋಡಿ ದಂಗಾಗಿದ್ದಾರೆ. ಪ್ರಗ್ನೆನ್ಸಿ ಪರೀಕ್ಷೆ ನಿಮಗಲ್ಲ ಮಹಿಳೆಯರಿಗೆ ಮಾಡುವುದು ಎಂದು ತಿಳಿಸಿದ್ದಾರೆ. ಬಳಿಕ ಯುವಕರು ಯಾವ ಪರೀಕ್ಷೆಯನ್ನೂ ಕೂಡ ಮಾಡಿಸದೆ ಮನೆಗೆ ವಾಪಸ್ ಬಂದಿದ್ದಾರೆ.

    ನಂತರ ನಡೆದ ಘಟನೆ ಬಗ್ಗೆ ನಮ್ಮ ಊರಿನಲ್ಲಿ ಹೇಳಿದ್ದಾರೆ. ಈ ಸುದ್ದಿ ಒಬ್ಬರ ಬಾಯಿಂದ ಇನ್ನೊಬ್ಬರಿಗೆ ತಿಳಿದು ಇಡೀ ಜಾರ್ಖಂಡಿನಲ್ಲೇ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಆದ್ರೆ ವೈದ್ಯ ಮಾತ್ರ ಇದು ಸುಳ್ಳುಸುದ್ದಿ. ನನ್ನ ಹೆಸರನ್ನು ಹಾಳು ಮಾಡಲು ಈ ರೀತಿ ಆರೋಪ ಮಾಡುತ್ತಿದ್ದಾರೆ. ಇದೊಂದು ಪಿತೂರಿ, ನಾನು ತಪ್ಪು ಮಾಡಿಲ್ಲ ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ.

  • ದನದ ಮಾಂಸ ಮಾರಾಟಗಾರರ ಮೇಲೆ ಹಲ್ಲೆ – ಓರ್ವ ಸಾವು, ಇಬ್ಬರು ಗಂಭೀರ

    ದನದ ಮಾಂಸ ಮಾರಾಟಗಾರರ ಮೇಲೆ ಹಲ್ಲೆ – ಓರ್ವ ಸಾವು, ಇಬ್ಬರು ಗಂಭೀರ

    ರಾಂಚಿ: ದನದ ಮಾಂಸ ಮಾರಾಟ ಮಾಡುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸ್ಥಳೀಯ ಯವಕರು ಹಲ್ಲೆ ಮಾಡಿದ್ದು, ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಈ ಘಟನೆ ಜಾರ್ಖಂಡ್‍ನ ಖುಂಟಿ ಜಿಲ್ಲೆಯಲ್ಲಿ ಸೋಮವಾರ ನಡೆದಿದ್ದು, ಘಟನೆಯಲ್ಲಿ ಕಲಾಂತಸ್ ಬಾರ್ಲಾ ಸಾವನ್ನಪ್ಪಿದ್ದಾನೆ. ಫಾಗು ಕಚಪಾಂಡ್ ಮತ್ತು ಫಿಲಿಪ್ ಹಹೋರಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮೂವರನ್ನು ಬುಡಕಟ್ಟು ಕ್ರಿಶ್ಚಿಯನ್ನರು ಎಂದು ಗುರುತಿಸಲಾಗಿದೆ.

    ಖುಂಟಿ ಜಿಲ್ಲೆಯಾ ಜಲ್ತಾಂಡಾದ ಸುವಾರಿ ಎಂಬ ಗ್ರಾಮದಲ್ಲಿ ನಿಷೇಧಿತ ಗೋಮಾಂಸ ಮಾರಾಟ ಮಾಡುತ್ತಿದ್ದಾರೆ ಎಂದು ವಾಟ್ಸಾಪ್‍ನಲ್ಲಿ ಸುದ್ದಿ ಆಗಿದೆ. ಈ ಸುದ್ದಿಯನ್ನೇ ಬೆನ್ನಟ್ಟಿದ ಸುತ್ತಮುತ್ತಲ ಊರಿನ ಯುವಕರ ಗುಂಪು ಈ ಮೂವರ ಮೇಲೆ ಹಲ್ಲೆ ಮಾಡಿದೆ. ಇವರಿಂದ ತಪ್ಪಿಸಿಕೊಳ್ಳಲು ಓಡಿಹೋಗುತ್ತಿದ್ದ ಮೂವರನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಪೊಲೀಸ್ ಅಧಿಕಾರಿಯೊಬ್ಬರು, ಈ ವಿಚಾರದ ಬಗ್ಗೆ ನಮಗೆ ಹೆಚ್ಚು ಮಾಹಿತಿಯಿಲ್ಲ. ಈಗಾಲೇ ತನಿಖೆ ಪ್ರಾರಂಭ ಮಾಡಿದ್ದೇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಯಾರನ್ನೂ ಬಂಧಿಸಿಲ್ಲ. ಆದರೆ ಕೆಲ ವ್ಯಕ್ತಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.

    ಕಳೆದ ಏಪ್ರಿಲ್ ಇದೇ ರೀತಿಯ ಘಟನೆ ನಡೆದಿದ್ದು, ಈ ಘಟನೆಯಲ್ಲಿ ಗುಮ್ಲಾ ಜಿರ್ಮೋ ಗ್ರಾಮದ ಬುಡಕಟ್ಟು ಕ್ರಿಶ್ಚಿಯನ್ ಯುವಕ ಪ್ರಕಾಶ್ ಲಕ್ರಾ ಎಂಬವರನ್ನು ಸತ್ತ ಎತ್ತುಗಳ ಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾನೆ ಎಂದು ಹಲ್ಲೆ ನಡೆದು ಮೃತಪಟ್ಟಿದ್ದ.

  • 42 ವರ್ಷದಲ್ಲಿ ಕಟ್ಟಿದ ಕಾಲುವೆ 24 ಗಂಟೆಯೊಳಗೇ ಒಡೆದುಹೋಯ್ತು

    42 ವರ್ಷದಲ್ಲಿ ಕಟ್ಟಿದ ಕಾಲುವೆ 24 ಗಂಟೆಯೊಳಗೇ ಒಡೆದುಹೋಯ್ತು

    – 2500 ಕೋಟಿ ರೂ. ಖರ್ಚು ಮಾಡಿ ಕಾಲುವೆ ನಿರ್ಮಾಣ

    ರಾಂಚಿ: 42 ವರ್ಷ ಸಮಯ ತೆಗೆದುಕೊಂದು ನಿರ್ಮಾಣವಾಗಿದ್ದ ಕಾಲುವೆ ಉದ್ಘಾಟನೆಯಾದ 24 ಗಂಟೆಯೊಳಗೆ ಕೊಚ್ಚಿಕೊಂಡು ಹೋಗಿರುವ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ.

    ಜಾರ್ಖಂಡ್‍ನ ಗಿರಿದಿಹ್, ಹಝಾರಿಬಾಘ್ ಮತ್ತು ಬಕಾರೋ ಜಿಲ್ಲೆಗಳ 85 ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಸಲುವಾಗಿ ಈ ಕಾಲುವೆಯನ್ನು ನಿರ್ಮಿಸಲಾಗಿತ್ತು. ಇದನ್ನು ನಿರ್ಮಿಸಲು ಬರೋಬ್ಬರಿ 42 ವರ್ಷಗಳು ಬೇಕಾಯಿತು. ಆದರೆ, ಉದ್ಘಾಟನೆಯಾದ ಕೇವಲ 24 ಗಂಟೆಯೊಳಗೇ ಅದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಈ ಕಾಲುವೆ 404.17 ಕಿ.ಮೀ ಉದ್ದವಿದ್ದು, 2,500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು.

    ಮುಖ್ಯಮಂತ್ರಿ ರಘುಬರ್ ದಾಸ್ ಅವರು ಈ ಕಾಲುವೆಯನ್ನು ಗುರುವಾರ ಸಾರ್ವಜನಿಕರಿಗೆ ಮುಕ್ತ ಮಾಡಿದ್ದರು. ಅವರು ಉದ್ಘಾಟನೆ ಮಾಡಿ ಹೋದ ಕೇವಲ 24 ಗಂಟೆಯೊಳಗೆ ಕಾಲುವೆಯಲ್ಲಿ ಬಿರುಕು ಕಾಣಿಸಿಕೊಂಡು ಒಡೆದು ಹೋಗಿದೆ. ಇದರಿಂದ ಕಾಲುವೆಯ ಸುತ್ತಮುತ್ತಲಿನ ಗ್ರಾಮಗಳು ಜಲಾವೃತಗೊಂಡಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಘಟನೆ ಸಂಭವಿಸಿದ ಬಳಿಕ ಸ್ಥಳೀಯರು ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಕಾಲುವೆಯ ದುರಸ್ಥಿ ಕಾರ್ಯ ನಡೆಯುತ್ತಿದೆ.

    1978ರಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗಿತ್ತು. ಆದರೆ ನಿಧಾನಗತಿಯಲ್ಲಿ ಸಾಗಿದ ಕಾಮಗಾರಿ ಅಂತಿಮವಾಗಿ ನಿರ್ಮಾಣ ವೆಚ್ಚ 2,500 ಕೋಟಿ ರೂಪಾಯಿಗೆ ತಲುಪಿತ್ತು. ಆದರೆ ಕಾಲುವೆ ನಿರ್ಮಾಣ ಮಾಡಲು ತಗುಲಿದ ಹಣವಷ್ಟೂ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

    1978ರಲ್ಲಿ ಬಿಹಾರದ ಮಾಜಿ ರಾಜ್ಯಪಾಲ ಜಗನ್ನಾಥ್ ಕೌಶಲ್ ಅವರು ಈ ಕಾಲುವೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. ಆದರೆ ಸರ್ಕಾರಗಳ ಬದಲಾವಣೆ ಜೊತೆಗೆ ಇನ್ನಿತರ ಕಾರಣಗಳಿಂದ ಕಾಲುವೆ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು. ಬಳಿಕ 2003ರಲ್ಲಿ ಜಾರ್ಖಂಡ್ ಸಿಎಂ ಅರ್ಜುನ್ ಮುಂಡ ಅವರು ಮತ್ತೆ ಕಾಲುವೆ ನಿರ್ಮಾಣ ಕಾರ್ಯವನ್ನು ಪುನಾರಂಭಿಸಿದರು. ಆಗಲೂ ಕೂಡ ಕೆಲಸ ನಿಧಾನವಾಗಿ ಮತ್ತೆ ಸ್ಥಗಿತವಾಯ್ತು.

    ನಂತರ 2012ರಲ್ಲಿ ಮತ್ತೆ ಟೆಂಡರ್ ಕರೆದು ಈ ಯೋಜನೆಯನ್ನು ಮುಂಬೈ ಮೂಲದ ನಿರ್ಮಾಣ ಕಂಪನಿಗೆ ನೀಡಲಾಗಿತ್ತು. ಈ ಕಂಪನಿ ಕೊನೆಗೆ ಕಾಲುವೆ ನಿರ್ಮಾಣ ಕಾರ್ಯವನ್ನು ಪೂರ್ತಿಗೊಳಿಸಿತು. ಆದರೆ 42 ವರ್ಷ ಸಮಯದಲ್ಲಿ ನಿರ್ಮಾಣವಾದ ಕಾಲುವೆ ಕೇವಲ 24 ಗಂಟೆಯೊಳಗೆ ಕೊಚ್ಚಿಹೋಗಿದೆ.

    ಜಲಸಂಪನ್ಮೂಲ ಇಲಾಖೆ ಮೊದಲು ಈ ಕಾಲುವೆಯಲ್ಲಿ ಪ್ರತಿನಿತ್ಯ 800 ಕ್ಯೂಸೆಕ್ ನೀರನ್ನು ಹರಿಸಲು ನಿರ್ಧರಿಸಿತ್ತು. ಬಳಿಕ ಅವಶ್ಯಕತೆಗೆ ಅನುಗುಣವಾಗಿ 1700 ಕ್ಯೂಸೆಕ್ಸ್ ನೀರನ್ನು ಬಿಡಲು ಯೋಜನೆ ಹೂಡಿತ್ತು ಎನ್ನಲಾಗಿದೆ. ಕಳಪೆ ಗುಣಮಟ್ಟದ ಸಾಮಾಗ್ರಿ ಬಳಸಿ ಕಾಲುವೆ ನಿರ್ಮಾಣ ಮಾಡಿದ್ದಕ್ಕೆ ಹೀಗೆ ಕೊಚ್ಚಿಕೊಂಡು ಹೋಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಮತ್ತು ನಿರ್ಮಾಣ ಕಂಪನಿ ಮಾತ್ರ ಕಾಲುವೆಯಲ್ಲಿ ಹೆಗ್ಗಣ ಅಥವಾ ಇಲಿಗಳು ಕೊರೆದು, ಹೊಂಡಗಳಾಗಿ ಈ ಅನಾಹುತ ಸಂಭವಿಸಿದೆ ಎಂದು ಆರೋಪವನ್ನು ತಳ್ಳಿಹಾಕಿವೆ.

  • ತನ್ನ ಸೆಕ್ಸ್ ವಿಡಿಯೋ ನೋಡಿ ಬೈದಿದ್ದಕ್ಕೆ ತಂದೆಯ ವಿರುದ್ಧವೇ ದೂರು ನೀಡಿದ್ಳು

    ತನ್ನ ಸೆಕ್ಸ್ ವಿಡಿಯೋ ನೋಡಿ ಬೈದಿದ್ದಕ್ಕೆ ತಂದೆಯ ವಿರುದ್ಧವೇ ದೂರು ನೀಡಿದ್ಳು

    ರಾಂಚಿ: ತಂದೆ ತನ್ನ ಮಗಳ ಮೊಬೈಲಿನಲ್ಲಿ ಯುವಕನ ಜೊತೆ ದೈಹಿಕ ಸಂಬಂಧ ಬೆಳೆಸಿದ ವಿಡಿಯೋ ನೋಡಿ ಬೈದಿದ್ದಾರೆ. ಇದರಿಂದ ಕೋಪಗೊಂಡ ಮಗಳು ತಂದೆಯ ವಿರುದ್ಧವೇ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ದಾಖಲಿಸಿದ ಘಟನೆ ಜಾರ್ಖಂಡ್‍ನ ರಾಂಚಿಯಲ್ಲಿ ನಡೆದಿದೆ.

    ತಂದೆ ಬೈದಿದ್ದಕ್ಕೆ ಯುವತಿ ರಾತ್ರಿ ಮನೆಯಿಂದ ಮಹಿಳಾ ಪೊಲೀಸ್ ಠಾಣೆಗೆ ಓಡಿ ಹೋಗಿದ್ದಾಳೆ. ಅಲ್ಲದೆ ತನ್ನ ತಂದೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಅವರನ್ನು ಜೈಲಿಗೆ ಕಳುಹಿಸುವಂತೆ ಮನವಿ ಮಾಡಿಕೊಂಡಿದ್ದಾಳೆ. ಯುವತಿಯ ಆರೋಪ ಕೇಳಿ ಪೊಲೀಸರು ದೂರು ನೀಡಲು ಹೇಳಿದಾಗ ಆಕೆ ಹಿಂದೇಟು ಹಾಕಿದ್ದಾಳೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಮಹಿಳಾ ಪೊಲೀಸ್ ಠಾಣೆ ಉಸ್ತುವಾರಿ ವಿಂದ್ಯಾವಾಸಿನಿ ಸಿನ್ಹಾ, ಯುವತಿ ವಿವಿಧ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಳು. ಆಕೆಯ ಮಾತಿನಲ್ಲಿ ಎಷ್ಟು ಸತ್ಯ ಇದೆ ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಿದ್ದೇವೆ. ಯುವತಿ ಪೊಲೀಸ್ ಠಾಣೆಯಲ್ಲಿ ಎರಡು ದಿನ ಸಮಯ ತೆಗೆದುಕೊಂಡು ತನ್ನ ಚಿಕ್ಕಪ್ಪನ ಜೊತೆ ಮನೆಗೆ ಹಿಂತಿರುಗಿದ್ದಳು. ಇದಾದ ಬಳಿಕ ಮಂಗಳವಾರ ತಡರಾತ್ರಿ ಆಕೆ, ಮತ್ತೆ ಪೊಲೀಸ್ ಠಾಣೆಗೆ ಬಂದು ತಂದೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಎಫ್‍ಐಆರ್ ದಾಖಲಿಸಿದ್ದಾಳೆ.

    ಪ್ರಿಯಕರನ ಜೊತೆಗಿನ ವಿಡಿಯೋ ರೆಕಾರ್ಡ್:
    ಸುಮಾರು ನಾಲ್ಕೈದು ತಿಂಗಳ ಹಿಂದೆ ಯುವತಿಯ ಮೊಬೈಲ್ ಹಾಳಾಗಿತ್ತು. ಅದನ್ನು ಸರಿಪಡಿಸಲು ಯುವತಿ ತಂದೆಗೆ ಕೊಟ್ಟಿದ್ದಾಳೆ. ತಂದೆ ಆ ಮೊಬೈಲ್ ರಿಪೇರಿ ಮಾಡಿದ ಬಳಿಕ ಅದನ್ನು ಪರಿಶೀಲಿಸಲು ಮಗಳ ಬಳಿ ಪಾಸ್‍ವರ್ಡ್ ಕೇಳಿದ್ದಾರೆ. ಹೀಗೆ ತಂದೆ ಪಾಸ್‍ವರ್ಡ್ ಹಾಕಿ ಗ್ಯಾಲರಿ ನೋಡಿದಾಗ ಮಗಳು ತನ್ನ ಪ್ರಿಯಕರನ ಜೊತೆ ದೈಹಿಕ ಸಂಪರ್ಕ ಬೆಳೆಸಿದ ವಿಡಿಯೋ ಕಂಡುಬಂದಿದೆ.

    ಈ ವಿಡಿಯೋ ನೋಡಿದ ತಂದೆ, ಮಗಳ ವಿರುದ್ಧ ರೊಚ್ಚಿಗೆದ್ದು ಮನೆಯಿಂದ ಹೊರ ಹೋಗದಂತೆ ಸೂಚಿಸಿದ್ದಾರೆ. ಅಲ್ಲದೆ ಯುವತಿಯ ತಾಯಿ ಕೂಡ ಆಕೆಯನ್ನು ಮನೆಯಿಂದ ಹೊರಹೋಗಲು ಬಿಡುತ್ತಿರಲಿಲ್ಲ. ಹೀಗಾಗಿ ಯುವತಿ ತಾಯಿಯ ವಿರುದ್ಧ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾಳೆ.

    ಒಬ್ಬಳೇ ಮಗಳು:
    ಒಬ್ಬಳೇ ಮಗಳಾಗಿರುವ ಯುವತಿ ಬಿಎಡ್ ಓದಿದ್ದಾಳೆ. ಯಾವುದೋ ಕೆಲಸದ ಮೇಲೆ ಕಾಲೇಜಿಗೆ ಹೋಗಿದ್ದಾಗ ಸ್ನೇಹಿತರ ಬಳಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾಳೆ. ಆಗ ಆಕೆಯ ಸ್ನೇಹಿತರು ಅವಳನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಯುವತಿ ಪೊಲೀಸ್ ಠಾಣೆಗೆ ಹೋದ ವಿಷಯವನ್ನು ತಿಳಿದು ಆಕೆಯ ಕುಟುಂಬದವರು ಕೂಡ ಅಲ್ಲಿಗೆ ತಲುಪಿ ಆಕೆ ಜೊತೆ ಮಾತನಾಡಿದ್ದರು. ಆದರೆ ಈ ಪ್ರಕರಣದ ಬಗ್ಗೆ ಪೊಲೀಸರು ಏನೂ ಮಾತನಾಡುತ್ತಿಲ್ಲ. ಪೊಲೀಸರು ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಲಖಿತ ದೂರು ನೀಡಿದರೆ, ಹಾಗೂ ಆಕೆಯ ಆರೋಪ ತನಿಖೆ ವೇಳೆ ಸಾಬೀತಾದಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.

    ಜೈಲಿಗೆ ಕಳುಹಿಸಲು ಹಠ:
    ತನ್ನ ತಂದೆಯ ಜೊತೆ ವಾಸಿಸಲು ಇಷ್ಟವಿಲ್ಲ ಎಂದು ಯುವತಿ ಹೇಳಿದ್ದಾಳೆ. ಈ ವೇಳೆ ಯುವತಿಯ ಚಿಕ್ಕಪ್ಪ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ತಿಳಿಸಿದ್ದಾರೆ. ಅಲ್ಲದೆ ಯುವತಿ ತನ್ನ ತಂದೆಯನ್ನು ಜೈಲಿಗೆ ಕಳುಹಿಸಲೇಬೇಕು ಎಂದು ಹಠ ಹಿಡಿದಿದ್ದಾಳೆ.

  • ಹೊಟ್ಟೆ ನೋವು ಎಂದ ಮಹಿಳೆಗೆ ಕಾಂಡೋಮ್ ಬರೆದು ಕೊಟ್ಟ ವೈದ್ಯ

    ಹೊಟ್ಟೆ ನೋವು ಎಂದ ಮಹಿಳೆಗೆ ಕಾಂಡೋಮ್ ಬರೆದು ಕೊಟ್ಟ ವೈದ್ಯ

    ರಾಂಚಿ: ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದ ಮಹಿಳೆಗೆ ವೈದ್ಯ ಕಾಂಡೋಮ್ ಬರೆದು ಕೊಟ್ಟ ಘಟನೆಯೊಂದು ಜಾರ್ಖಂಡಿನ ರಾಂಚಿಯಲ್ಲಿ ನಡೆದಿದೆ.

    ಅಸ್ರಾಫ್ ಕಾಂಡೋಮ್ ಬರೆದು ಕೊಟ್ಟ ವೈದ್ಯ. ಜುಲೈ 23ರಂದು ಮಹಿಳೆ ಹೊಟ್ಟೆ ನೋವು ಎಂದು ರಾಂಚಿಯ ಪಶ್ಚಿಮ ಸಿಂಗ್‍ಬೂಮ್ ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು. ಅಸ್ರಾಫ್ ಇದೇ ಆಸ್ಪತ್ರೆಯಲ್ಲೇ ಕಾಂಟ್ರ್ಯಾಕ್ಟ್ ವೈದ್ಯನಾಗಿ ಕೆಲಸ ಮಾಡುತ್ತಿದ್ದು, ಮಹಿಳೆಗೆ ಪ್ರಿಸ್ಕ್ರಿಪ್ಷನ್ ಪತ್ರದಲ್ಲಿ (ಔಷಧಿ ಚೀಟಿ) ಕಾಂಡೋಮ್ ಬರೆದುಕೊಟ್ಟಿದ್ದಾನೆ.

    ಮಹಿಳೆ ವೈದ್ಯರು ಕೊಟ್ಟ ಪ್ರಿಸ್ಕ್ರಿಪ್ಷನ್ ಪತ್ರವನ್ನು ಮೆಡಿಕಲ್ ಶಾಪ್‍ಗೆ ತೆಗೆದುಕೊಂಡು ಹೋಗಿದ್ದರು. ಈ ವೇಳೆ ಅಂಗಡಿಯಲ್ಲಿ ಇದ್ದ ವ್ಯಕ್ತಿ ಇದು ಮಾತ್ರೆ ಅಲ್ಲ ಕಾಂಡೋಮ್ ಎಂದು ತಿಳಿಸಿದ್ದಾನೆ. ಈ ವಿಷಯ ತಿಳಿದ ತಕ್ಷಣ ಮಹಿಳೆ ಆಸ್ಪತ್ರೆಯ ಹಿರಿಯ ವೈದ್ಯರಿಗೆ ದೂರು ನೀಡಿದ್ದಾರೆ.

    ಜಾರ್ಖಂಡ್ ಮುಕ್ತಿ ಮೋರ್ಚಾ ಶಾಸಕ ಕುನಾಲ್ ಸಾರಂಗಿ ಅವರು ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಈ ಬಗ್ಗೆ ಈಗಾಗಲೇ ದೂರು ದಾಖಲಾಗಿದ್ದು, ದೂರಿನ ಆಧಾರದ ಮೇಲೆ ಈ ಬಗ್ಗೆ ತನಿಖೆ ಮಾಡಲು ಒಬ್ಬ ಮನೋವೈದ್ಯರೊಂದಿಗೆ ವೈದಕೀಯ ತಂಡವನ್ನು ರಚಿಸಲಾಗಿದ್ದು, ಭಾನುವಾರದಿಂದ ತನಿಖೆ ಶುರುವಾಗಿದೆ.

    ಈ ಬಗ್ಗೆ ಆಸ್ಪತ್ರೆಯ ಉಸ್ತುವಾರಿ ಶಂಕರ್ ಮಾಧ್ಯಮಗಳೊಂದಿಗೆ ಮಾತನಾಡಿ, ಮಹಿಳೆ ದೂರಿನ ಆಧಾರದ ಮೇಲೆ ವೈದ್ಯಕೀಯ ತಂಡವನ್ನು ರಚಿಸಿ ತನಿಖೆ ಶುರುವಾಗಿದೆ ಎಂದು ತಿಳಿಸಿದ್ದರು. ತನಿಖೆ ವೇಳೆ ವೈದ್ಯ ತನ್ನ ಮೇಲೆ ಕೇಳಿಬಂದ ಆರೋಪಗಳನ್ನು ನಿರಾಕರಿಸಿದ್ದಾನೆ.