Tag: ranchi

  • ಓರ್ವನ ಜೊತೆ ಮೂವರು ಮಹಿಳೆಯರನ್ನ ಬೆತ್ತಲೆ ಮಾಡಿ ಮೆರವಣಿಗೆ

    ಓರ್ವನ ಜೊತೆ ಮೂವರು ಮಹಿಳೆಯರನ್ನ ಬೆತ್ತಲೆ ಮಾಡಿ ಮೆರವಣಿಗೆ

    – 50 ಜನ ಸಮೂಹದಿಂದ ಹಲ್ಲೆ, ಮೆರವಣಿಗೆ

    ರಾಂಚಿ: ವಾಮಾಚಾರವನ್ನು ಅಭ್ಯಾಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸುಮಾರು 50 ಜನರ ಗುಂಪೊಂದು ಮೂವರು ಮಹಿಳೆಯರು ಮತ್ತು ಓರ್ವ ವ್ಯಕ್ತಿಯನ್ನು ಥಳಿಸಿದ್ದಾರೆ. ಅಲ್ಲದೇ ಬೆತ್ತಲು ಮಾಡಿ ಅವರನ್ನು ಹಳ್ಳಿಯಲ್ಲಿ ಮೆರವಣಿಗೆ ಮಾಡಿರುವ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ.

    ನಾಲ್ವರನ್ನು ಬಟ್ಟೆ ಇಲ್ಲದೆ ಮೆರವಣಿಗೆ ನಡೆಸಲಾಗಿದೆ. ನಾರಾಯಣಪುರ ಗ್ರಾಮದಲ್ಲಿ ಗುರುವಾರ ರಾತ್ರಿ ಸುಮಾರು 10 ಗಂಟೆಗೆ ಈ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಉಳಿದವರನ್ನು ಬಂಧಿಸಲು ಶೋಧಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಮಗೆ ಮಾಹಿತಿ ಬಂದ ಕೂಡಲೇ ಪೊಲೀಸರ ಒಂದು ತಂಡವನ್ನು ಗ್ರಾಮಕ್ಕೆ ಕಳುಹಿಸಲಾಯಿತು. ಈ ವೇಳೆ ಸುಮಾರು 50 ಜನರು ಸ್ಥಳದಲ್ಲಿದ್ದರು ಎಂದು ತಿಳಿದುಬಂದಿದೆ. ಇಬ್ಬರನ್ನು ಬಂಧಿಸಲಾಗಿದ್ದು, ಇತರರು ಓಡಿಹೋಗಿದ್ದಾರೆ. ಮೊದಲಿಗೆ ಪೊಲೀಸರು ಮಹಿಳೆಯರಿಗೆ ಮತ್ತು ಪುರುಷನಿಗೆ ಬಟ್ಟೆಗಳನ್ನು ನೀಡಿದ್ದಾರೆ. ನಂತರ ಇಬ್ಬರು ಆರೋಪಿಗಳಾದ ರವಿ ಕುಮಾರ್ ಮತ್ತು ವಾಸುದೇವ್‍ನನ್ನು ಸದರ್ ಪೊಲೀಸ್ ಠಾಣೆಗೆ ಕರೆ ತರಲಾಗಿದೆ ಎಂದು ಪೊಲೀಸ್ ಅಧಿಕಾರಿ ಬ್ರಾಹ್ಮಣ ತುಟ್ಟಿ ತಿಳಿಸಿದರು.

    ಗ್ರಾಮದ ನಿವಾಸಿ ಬಾಲಿ ರಾಜ್ವಾರ್ ಅವರ ಇಬ್ಬರು ಹೆಣ್ಣುಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ಹಿನ್ನೆಲೆ​ಯಲ್ಲಿ ಮಹಿಳೆಯರು ಮತ್ತು ಪುರುಷನನ್ನು ವಾಮಾಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮನೆಯಿಂದ ಹೊರಗೆ ಕರೆದುಕೊಂಡು ಬಂದು ಥಳಿಸಿದ್ದಾರೆ. ರಾಜ್ವಾರ್ ಕುಟುಂಬದ ವಿಕಾಸ್ ಕುಮಾರ್ ಸಾ, ಬಬ್ಲು ರಾಮ್, ರಜಾದ್ ಪಾಸ್ವಾನ್, ರವಿ ಕುಮಾರ್ ರಾಮ್ ಮತ್ತು ರಾಜು ರಾಮ್ ಸೇರಿದಂತೆ ಮೂವರು ಮಹಿಳೆಯರಿಗೆ ಥಳಿಸಿದ್ದಾರೆ. ನಂತರ ಗ್ರಾಮದಲ್ಲಿ ಬೆತ್ತಲಾಗಿದೆ ಮೆರವಣಿಗೆ ನಡೆಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ಕೆಲವು ಗ್ರಾಮಸ್ಥರು ಮಧ್ಯಪ್ರವೇಶಿಸಿ ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಅವರಿಗೆ ಬೆದರಿಕೆ ಹಾಕಿ ವಾಪಸ್ ಕಳುಹಿಸಿದ್ದಾರೆ. ಅಲ್ಲದೇ ನಾರಾಯಣಪುರದ ವಾರ್ಡ್ ಕೌನ್ಸಿಲರ್ ಬಂದು ಜನಸಮೂಹವನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಯಾರೂ ಅವರ ಮಾತನ್ನು ಕೇಳಲಿಲ್ಲ.

    ಈ ಘಟನೆಯಲ್ಲಿ ಸುಮಾರು 50 ಜನರು ಭಾಗಿಯಾಗಿದ್ದಾರೆ ಎಂಬ ಮಾಹಿತಿಯಿದೆ. ಸದ್ಯಕ್ಕೆ ಅವರಿಗಾಗಿ ಶೋಧ ನಡೆಯುತ್ತಿದೆ. ಯಾವುದೇ ಸಂದರ್ಭದಲ್ಲೂ ಅಪರಾಧಿಗಳನ್ನು ಬಿಡಲಾಗುವುದಿಲ್ಲ. ಪರಾರಿಯಾಗಿದ್ದವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಜೊತೆಗೆ ಈ ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸದರ್ ಪೊಲೀಸ್ ಠಾಣೆಯ ಉಸ್ತುವಾರಿ ರಾಜೀವ್ ಕುಮಾರ್ ತಿಳಿಸಿದ್ದಾರೆ.

  • ತಡರಾತ್ರಿ ಆಶ್ರಮಕ್ಕೆ ನುಗ್ಗಿದ ನಾಲ್ವರಿಂದ ಸಾಧ್ವಿ ಮೇಲೆ ಗ್ಯಾಂಗ್‍ರೇಪ್

    ತಡರಾತ್ರಿ ಆಶ್ರಮಕ್ಕೆ ನುಗ್ಗಿದ ನಾಲ್ವರಿಂದ ಸಾಧ್ವಿ ಮೇಲೆ ಗ್ಯಾಂಗ್‍ರೇಪ್

    – ಸಾಧುಗಳನ್ನ ರೂಮಿನಲ್ಲಿ ಲಾಕ್ ಮಾಡಿ ಸಾಮೂಹಿಕ ಅತ್ಯಾಚಾರ
    – ತಡೆಯಲು ಬಂದ ಸಾಧುಗೆ ಥಳಿತ

    ರಾಂಚಿ: ಸಾಧ್ವಿ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಜಾರ್ಖಂಡ್‍ನ ಗೊಡ್ಡಾ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಆಶ್ರಮವೊಂದರಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಪೊಲೀಸರು ಮಂಗಳವಾರ ನಾಲ್ವರು ಆರೋಪಿಗಳಲ್ಲಿ ಮೂವರನ್ನು ಬಂಧಿಸಿದ್ದಾರೆ.

    ಜಿಲ್ಲೆಯ ಆಶ್ರಮಕ್ಕೆ ಸೋಮವಾರ ತಡರಾತ್ರಿ ನಾಲ್ವರು ಆರೋಪಿಗಳು ಏಕಾಏಕಿ ಬಲವಂತವಾಗಿ ನುಗ್ಗಿದ್ದಾರೆ. ನಂತರ ಆಶ್ರಮದಲ್ಲಿದ್ದ ಸಾಧುಗಳನ್ನು ಒಂದು ರೂಮಿನಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದಾರೆ. ಈ ವೇಳೆ ಆಶ್ರಮದಲ್ಲಿದ್ದ 38 ವರ್ಷದ ಸಾಧ್ವಿ ಮೇಲೆ ನಾಲ್ವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ವೇಳೆ ಸಾಧ್ವಿ ಮೇಲಿನ ಅತ್ಯಾಚಾರವನ್ನು ಸಾಧುವೊಬ್ಬರು ತಡೆಯಲು ಬಂದಾಗ ಅವರನ್ನು ಆರೋಪಿಗಳು ಥಳಿಸಿದ್ದಾರೆ. ಸಂತ್ರಸ್ತೆ ಮಂಗಳವಾರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಅನ್ವಯ ಪೊಲೀಸರು ಎಫ್‍ಐಆರ್ ದಾಖಲಿಸಿದ್ದು, ಘಟನೆ ನಡೆದ ಸ್ಥಳಕ್ಕೆ ಹೋಗಿ ತನಿಖೆ ನಡೆಸಿದ್ದಾರೆ.

    ಸದ್ಯಕ್ಕೆ ನಾಲ್ವರು ಆರೋಪಿಗಳಲ್ಲಿ ಮೂವರನ್ನು ಬಂಧಿಸಿದ್ದು, ನಾಲ್ಕನೇ ಆರೋಪಿ ಪರಾರಿಯಾಗಿದ್ದಾನೆ. ಇದೀಗ ಆತನಿಗೆ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.

  • ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ – ಐಎಎಸ್ ಅಧಿಕಾರಿಗೆ ಪ್ರಶಂಸೆ

    ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ – ಐಎಎಸ್ ಅಧಿಕಾರಿಗೆ ಪ್ರಶಂಸೆ

    ರಾಂಚಿ: ಸಾಮಾನ್ಯವಾಗಿ ಉನ್ನತ ಉದ್ದೆಯಲ್ಲಿರುವವರು ಅನಾರೋಗ್ಯ ಉಂಟಾದರೆ ಖಾಸಗಿ ಆಸ್ಪತ್ರೆಗೆ ಹೋಗುವುದು ಅಧಿಕ. ಆದರೆ ಜಾರ್ಖಂಡ್‍ನ ಐಎಎಸ್ ಅಧಿಕಾರಿಯೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡುವ ಮೂಲಕ ಮಾದರಿಯಾಗಿದ್ದಾರೆ.

    ಜಾರ್ಖಂಡ್ ನ ಗೊಡ್ಡಾ ಪ್ರದೇಶದ ಮಹಿಳಾ ಐಎಎಸ್ ಅಧಿಕಾರಿ ಕಿರಣ್ ಕುಮಾರ್ ಪಾಸಿ ಅವರು ಸದರ್ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿರುವ ಐಎಎಸ್ ಅಧಿಕಾರಿಯನ್ನು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಪ್ರಶಂಸಿಸುತ್ತಿದ್ದಾರೆ.

    ಸಾಮಾನ್ಯ ಜನರು ಕೂಡ ಸರ್ಕಾರಿ ಆಸ್ಪತ್ರೆಗೆ ಹೋಗಲು ಯೋಚನೆ ಮಾಡುತ್ತಾರೆ. ಅಂತಹವರಿಗೆ ಐಎಎಸ್ ಅಧಿಕಾರಿ ಪಾಸಿ ಅವರು ಉತ್ತಮ ಉದಾಹರಣೆ ನೀಡಿದ್ದಾರೆ. ಇದೀಗ ಕಿರಣ್ ಕುಮಾರ್ ಪಾಸಿ ಮತ್ತು ಅವರ ಮಗುವಿನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಅವರು ಇಲ್ಲಿಗೆ ಬಂದಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಐಎಎಸ್ ಅಧಿಕಾರಿ ಮಾಡಿರುವ ಕೆಲಸದಿಂದ ಖಂಡಿತವಾಗಿಯೂ ಸರ್ಕಾರಿ ವ್ಯವಸ್ಥೆಯಲ್ಲಿ ವಿಶ್ವಾಸ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಸಿವಿಲ್ ಸರ್ಜನ್ ಎಸ್‍.ಪಿ ಮಿಶ್ರಾ ಹೇಳಿದ್ದಾರೆ.

    ಕಿರಣ್ ಕುಮಾರ್ ಪಾಸಿ ಮುಂದಿನ ಎರಡು ದಿನಗಳವರೆಗೆ ಆಸ್ಪತ್ರೆಯಲ್ಲಿ ಇರುತ್ತಾರೆ. ಅವರ ಯಶಸ್ವಿ ಹೆರಿಗೆಯ ನಂತರ ಅನೇಕ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಗೆ ಬಂದು ಅವರನ್ನು ಅಭಿನಂದಿಸಿದ್ದಾರೆ.

    ಹೆರಿಗೆಯ ನಂತರ ದಿಯೋಘರ್ ಡಿಸಿ ನ್ಯಾನ್ಸಿ ಸಹಯ್ ವೈಯಕ್ತಿಕವಾಗಿ ಸದರ್ ಆಸ್ಪತ್ರೆಗೆ ಬಂದಿದ್ದರು. ಅವರು ಕೂಡ ಕಿರಣ್ ಕುಮಾರ್ ಪಾಸಿ ಅವರನ್ನು ಶ್ಲಾಘಿಸಿದ್ದು, ನಿಮ್ಮಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಜನರಲ್ಲಿ ಆತ್ಮವಿಶ್ವಾಸ ತುಂಬುತ್ತದೆ ಎಂದು ಹೇಳಿದರು.

  • 15 ಮಂದಿ ಸ್ನೇಹಿತರ ಜೊತೆ ಸೇರ್ಕೊಂಡು ನಾದಿನಿ ಮೇಲೆ ಗ್ಯಾಂಗ್‍ರೇಪ್

    15 ಮಂದಿ ಸ್ನೇಹಿತರ ಜೊತೆ ಸೇರ್ಕೊಂಡು ನಾದಿನಿ ಮೇಲೆ ಗ್ಯಾಂಗ್‍ರೇಪ್

    – 15 ದಿನ ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರ
    – ವಿಷ ಕೊಟ್ಟು ರಸ್ತೆಗೆ ಎಸೆದ ಕಾಮುಕ

    ರಾಂಚಿ: ವ್ಯಕ್ತಿಯೊಬ್ಬ ನಾದಿನಿಯನ್ನು ತನ್ನ 15 ಮಂದಿ ಸ್ನೇಹಿತರ ಜೊತೆ ಸೇರಿಕೊಂಡು ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಸಂತ್ರಸ್ತೆಗೆ ವಿಷ ಕೊಟ್ಟು ಕೊಲೆ ಮಾಡಿರುವ ಅಮಾನವೀಯ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ.

    ಜಾರ್ಖಂಡ್‍ನ ಚಾನ್ಹೋ ಪೊಲೀಸ್ ಠಾಣಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸ್ವಂತ ನಾದಿನಿಯನ್ನು ಮನೆಯಲ್ಲಿ 15 ದಿನಗಳ ಕಾಲ ಕೂಡಿ ಹಾಕಿಕೊಂಡು 15 ಮಂದಿ ಸ್ನೇಹಿತರೊಂದಿಗೆ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ನಂತರ ಆಕೆಗೆ ವಿಷ ಕೊಟ್ಟು ರಸ್ತೆಗೆ ಎಸೆದಿದ್ದಾನೆ. ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಸಂತ್ರಸ್ತೆಯನ್ನು ರಕ್ಷಿಸಿ ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂತ್ರಸ್ತೆ ಮೃತಪಟ್ಟಿದ್ದಾಳೆ.

    ಸಂತ್ರಸ್ತೆ ಕುಟುಂಬದವರು ಈ ಕುರಿತು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಳಿಯ ಮತ್ತು ಆತನ ಸ್ನೇಹಿತರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಏನೋ ನೆಪ ಹೇಳಿ ಮನೆಯಿಂದ ಆಕೆಯನ್ನು ಹೊರಗಡೆ ಕರೆಸಿಕೊಂಡು ಅಪಹರಿಸಿದ್ದಾರೆ ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ.

    ಸಂತ್ರಸ್ತೆ ನಾಪತ್ತೆಯಾದಗಿನಿಂದ ಕುಟುಂಬದವರಿಗೆ ಆಕೆಯ ಬಗ್ಗೆ ತಿಳಿದಿರಲಿಲ್ಲ. ಬಾವನೇ ಆಕೆಯನ್ನು ಅಪಹರಿಸಿ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು 15 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ. ನಂತರ ವಿಷ ಕೊಟ್ಟು ರಸ್ತೆಗೆ ಎಸೆದಿದ್ದಾನೆ. ಗುರುವಾರ ಸಂಜೆ ಸಂತ್ರಸ್ತೆ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ಆಕೆಯನ್ನು ಸ್ಥಳೀಯರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಶೋಧಕಾರ್ಯ ಮಾಡುತ್ತಿದ್ದಾರೆ.

  • ಬ್ಯಾಟಿಂಗ್, ಕೀಪಿಂಗ್ ಆಯ್ತು ಈಗ ಪಿಚ್ ಕೆಲಸಕ್ಕೂ ಸೈ – ರೋಲರ್ ಓಡಿಸಿದ ಕ್ಯಾಪ್ಟನ್ ಕೂಲ್

    ಬ್ಯಾಟಿಂಗ್, ಕೀಪಿಂಗ್ ಆಯ್ತು ಈಗ ಪಿಚ್ ಕೆಲಸಕ್ಕೂ ಸೈ – ರೋಲರ್ ಓಡಿಸಿದ ಕ್ಯಾಪ್ಟನ್ ಕೂಲ್

    ರಾಂಚಿ: ಭಾರತ ತಂಡದ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ ಅವರು ಸ್ಟೇಡಿಯಂನಲ್ಲಿ ಪಿಚ್ ರೋಲರ್ ಡ್ರೈವ್ ಮಾಡಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

    2019 ವಿಶ್ವಕಪ್‍ನ ನಂತರ ಕ್ರಿಕೆಟ್‍ನಿಂದ ಕೊಂಚ ದೂರ ಉಳಿದಿರುವ ಧೋನಿ ಅವರು, ತನ್ನ ಹುಟ್ಟೂರು ರಾಂಚಿಯ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಿಚ್ ಅನ್ನು ಸಮತಟ್ಟಾಗಿಸಲು ಇರುವ ಪಿಚ್ ರೋಲರ್ ವಾಹನವನ್ನು ಓಡಿಸಿದ್ದಾರೆ. ಇದನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಧೋನಿ ಸರಳತೆಗೆ ಅವರ ಫ್ಯಾನ್ಸ್ ಫಿದಾ ಆಗಿದ್ದಾರೆ.

    ಧೋನಿ ಅವರ ಫ್ಯಾನ್ಸ್ ಪೇಜ್‍ವೊಂದು ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, 12 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಧೋನಿ ಅವರು, ಪಿಚ್ ರೋಲರ್ ಅನ್ನು ಹಿಂದಕ್ಕೆ ಮುಂದಕ್ಕೆ ಓಡಿಸಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿರುವ ಅವರ ಫ್ಯಾನ್ಸ್ ಪೇಜ್ ಒನ್ ಮ್ಯಾನ್ ಡಿಫರೆಂಟ್ ರೋಲ್ಸ್ ಎಂದು ಬರೆದುಕೊಂಡಿದ್ದಾರೆ. ಧೋನಿ ಅವರು ರಾಂಚಿ ಮೈದಾನದಲ್ಲಿ ದಿನ ಕಾಣಿಸಿಕೊಳ್ಳುತ್ತಿದ್ದು, ರಣಜಿ ಆಟಗಾರರ ಜೊತೆ ಅಭ್ಯಾಸ ಮಾಡುತ್ತಿದ್ದಾರೆ.

    ಮಾರ್ಚ್‍ನಲ್ಲಿ ಆರಂಭವಾಗುವ ಐಪಿಎಲ್ ಅಲ್ಲಿ ಧೋನಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಮಾತನಾಡಿದ್ದ ಚೆನ್ನೈ ತಂಡದ ಸಿಇಓ ವಿಶ್ವನಾಥನ್, ಧೋನಿ ಅವರು ಮಾರ್ಚ್ 3 ರಂದು ಚೆನ್ನೈಗೆ ಬರಲಿದ್ದಾರೆ. ನಂತರ ಅವರು ಮಾರ್ಚ್ ಮೂರರಿಂದ ಎಂ.ಎ ಚಿದಂಬರಂ ಮೈದಾನದಲ್ಲಿ ಸುರೇಶ್ ರೈನಾ ಅವರ ಜೊತೆಗೆ ಅಭ್ಯಾಸ ಮಾಡಲಿದ್ದಾರೆ. ಈ ಇಬ್ಬರನ್ನು ಬಿಟ್ಟರೆ ಬೇರೆ ಯಾವುದೇ ಅಂತರಾಷ್ಟ್ರೀಯ ಆಟಗಾರರು ಬರುತ್ತಿಲ್ಲ ಎಂದು ಮಾಹಿತಿ ನೀಡಿದ್ದರು.

    2019 ರ ವಿಶ್ವಕಪ್‍ನಲ್ಲಿ ಸೆಮಿಫೈನಲ್‍ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋತ ನಂತರ ಧೋನಿ ಅವರು ಕ್ರಿಕೆಟ್‍ನಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಮಾರ್ಚ್ ನಲ್ಲಿ ಆರಂಭವಾಗುತ್ತಿರುವ ಐಪಿಲ್‍ನಲ್ಲಿ ಅವರನ್ನು ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

  • ತವರು ಮನೆಗೆ ಹೋಗಲು ಬಿಡದ ಪತಿಯ ಮರ್ಮಾಂಗವನ್ನೇ ಕತ್ತರಿಸಿದ್ಲು

    ತವರು ಮನೆಗೆ ಹೋಗಲು ಬಿಡದ ಪತಿಯ ಮರ್ಮಾಂಗವನ್ನೇ ಕತ್ತರಿಸಿದ್ಲು

    – ಪರೀಕ್ಷೆ ಬರೆಯಲು ತವರು ಮನೆಗೆ ಹೋಗುತ್ತೇನೆ ಎಂದ ಪತ್ನಿ

    ರಾಂಚಿ: ತವರು ಮನೆಗೆ ಹೋಗಲು ಬಿಡಲಿಲ್ಲ ಎಂದು ಪತ್ನಿಯೊಬ್ಬಳು ತನ್ನ ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಘಟನೆ ಜಾರ್ಖಂಡ್‍ನ ಗಿರಿಹಿಡ್ ಜಿಲ್ಲೆಯಲ್ಲಿ ನಡೆದಿದೆ.

    ಪತ್ನಿ ತಾನು ತನ್ನ ತವರು ಮನೆಗೆ ಹೋಗುತ್ತೇನೆ ಎಂದು ಹಠ ಮಾಡುತ್ತಿದ್ದಳು. ಆದರೆ ಪತಿ ಆಕೆಗೆ ಅನುಮತಿ ನೀಡಲಿಲ್ಲ. ಇದರಿಂದ ಕೋಪಗೊಂಡ ಪತ್ನಿ ಬ್ಲೇಡ್‍ನಿಂದ ಆತನ ಮರ್ಮಾಂಗದ ಮೇಲೆ ಹಲ್ಲೆ ನಡೆಸಿದ್ದಾಳೆ.

    ಈ ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಪತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಆತನನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದರು. ಸದ್ಯ ಪತಿಯ ಆರೋಗ್ಯದ ಬಗ್ಗೆ ವೈದ್ಯರು ಪ್ರತಿಕ್ರಿಯಿಸಿ, ಮಹಿಳೆ ತನ್ನ ಪತಿಯ ಮರ್ಮಾಂಗವನ್ನು ಶೇ. 60ರಷ್ಟು ಕತ್ತರಿಸಿದ್ದಾಳೆ ಎಂದು ಹೇಳಿದ್ದಾರೆ.

    ಎರಡು ದಿನದ ಹಿಂದೆ ನನ್ನ ಪತ್ನಿ ತನ್ನ ತವರು ಮನೆಯಿಂದ ಹಿಂತಿರುಗಿದ್ದಳು. ಆದರೆ ಈಗ ಮತ್ತೆ ಹೋಗುತ್ತೇನೆ ಎಂದು ಹಠ ಮಾಡುತ್ತಿದ್ದಳು. ಈ ವಿಷಯಕ್ಕಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಆಕೆ ನನ್ನ ಖಾಸಗಿ ಅಂಗದ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ಪತಿ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾನೆ.

    ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಪತ್ನಿ, ನಾನು ಪರೀಕ್ಷೆ ಬರೆಯಬೇಕಿತ್ತು. ಹಾಗಾಗಿ ನಾನು ನನ್ನ ತವರು ಮನೆಗೆ ಹೋಗುತ್ತೇನೆ ಎಂದು ಹಠ ಮಾಡಿದ್ದೆ. ಆದರೆ ನನ್ನ ಪತಿ ನಿರಾಕರಿಸಿದ ಬಳಿಕ ನಾನು ಇಲ್ಲಿಯೇ ಇದ್ದೆ ಎಂದು ಹೇಳಿದ್ದಾಳೆ.

    ಈ ಬಗ್ಗೆ ಮಾತನಾಡಿದ ಬಾಗೋದರ್ ಪೊಲೀಸ್ ಠಾಣೆಯ ಉಸ್ತುವಾರಿ, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಚಾರಣೆ ವೇಳೆ ಪತ್ನಿ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ ಎಂದು ಪತಿ ಒಪ್ಪಿಕೊಂಡಿದ್ದಾನೆ. ಈ ಪ್ರಕರಣದ ಬಗ್ಗೆ ಮಹಿಳೆಯನ್ನು ಕೂಡ ವಿಚಾರಣೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

  • ಕೊಡಲಿಯಿಂದ ಹೊಡೆದು ಪತ್ನಿ, ಮಗ, ಮಗಳನ್ನ ಕೊಂದ ಪೊಲೀಸ್

    ಕೊಡಲಿಯಿಂದ ಹೊಡೆದು ಪತ್ನಿ, ಮಗ, ಮಗಳನ್ನ ಕೊಂದ ಪೊಲೀಸ್

    -ಪತ್ನಿ ಶವದ ಪಕ್ಕ ಕುಳಿತು ಸೋದರಿಗೆ ಫೋನ್ ಮಾಡ್ದ
    -ನಶೆಯ ಮತ್ತಿನಲ್ಲಿ ಮೂವರ ಬರ್ಬರ ಕೊಲೆ
    -ಕೊಲೆಯ ಬಳಿಕ ಆತ್ಮಹತ್ಯೆಗೆ ಯತ್ನ

    ರಾಂಚಿ: ವ್ಯಕ್ತಿಯೋರ್ವ ನಶೆಯ ಮತ್ತಿನಲ್ಲಿ ಕೊಡಲಿಯಿಂದ ಹೊಡೆದು ಪತ್ನಿ, ಮಗಳು ಮತ್ತು ಮಗನನ್ನು ಕೊಲೆಗೈದಿರುವ ಆಘಾತಕಾರಿ ಘಟನೆ ಜಾರ್ಖಂಡ್ ರಾಜ್ಯದ ಬಢಗಾಯಿ ಇಲಾಖೆಯ ಚಂದ್ರಗುಪ್ತ ನಗರದಲ್ಲಿ ನಡೆದಿದೆ.

    40 ವರ್ಷದ ಬ್ರಿಜೇಶ್ ತಿವಾರಿ ಕುಟುಂಬಸ್ಥರನ್ನು ಕೊಲೆಗೈದ ಪೊಲೀಸ್. ಬ್ರಿಜೇಶ್ ಪತ್ನಿ ರಿಂಕಿ ದೇವಿ (35), ಪುತ್ರಿ ಖುಷ್ಬೂ (15) ಮತ್ತು ಪುತ್ರ ಬಾದಲ್ (10) ಕೊಲೆಯಾದ ಕುಟುಂಬಸ್ಥರು. ಆರೋಪಿ ಬ್ರಿಜೇಶ್ ವಿಶೇಷ ತನಿಖಾದಳ ತಂಡದ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಮೂಲತಃ ಪಲಾಮೂ ಜಿಲ್ಲೆಯನಾದ ಬ್ರಿಜೇಶ್ ಕೆಲಸದ ನಿಮಿತ್ತ ಚಂದ್ರಗುಪ್ತ ನಗರದ ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದನು.

    ರಾತ್ರಿ ನಡೆದಿದ್ದೇನು?: ಶುಕ್ರವಾರ ರಾತ್ರಿ ಪಾನಮತ್ತನಾಗಿ ಬಂದ ಬ್ರಿಜೇಶ್ ಪತ್ನಿ ಜೊತೆ ಜಗಳ ಮಾಡಿದ್ದಾನೆ. ಕುಡಿದು ಬಂದಿದ್ದರಿಂದ ಪತ್ನಿ ಸಹಜವಾಗಿ ಗಂಡನ ಮೇಲೆ ಕೂಗಾಡಿದ್ದಾರೆ. ಕೋಪಗೊಂಡ ಬ್ರಿಜೇಶ್ ಮನೆಯಲ್ಲಿದ್ದ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ತಾಯಿಯ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದಂತೆ ಮಕ್ಕಳಾದ ಖುಷ್ಬೂ ಮತ್ತು ಬಾದಲ್ ಅಮ್ಮನ ರಕ್ಷಣೆಗೆ ಮುಂದಾಗಿದ್ದಾರೆ. ನಶೆಯಲ್ಲಿದ್ದ ಬ್ರಿಜೇಶ್ ಪತ್ನಿ ಜೊತೆ ಮಕ್ಕಳ ಮೇಲೆಯೂ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ.

    ಸೋದರಿಗೆ ಪೋನ್ ಮಾಡ್ದ: ಕೊಲೆಯ ಬಳಿಕ ಪತ್ನಿಯ ಶವದ ಪಕ್ಕ ಕುಳಿತು ರಾಂಚಿಯ ಪಂಡಾರದಲ್ಲಿರುವ ಸೋದರಿಗೆ ಬ್ರಿಜೇಶ್ ಫೋನ್ ಮಾಡಿದ್ದಾನೆ. ನಾನು ಮೂವರನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ವಿಷಯ ತಿಳಿಸಿದ್ದಾನೆ. ಸೋದರನ ಮಾತು ಕೇಳಿ ಭಯಗೊಂಡ ಸೋದರಿ ನೆರೆಹೊರೆಯವರೊಂದಿಗೆ ರಾತ್ರಿ ಸುಮಾರು 12 ಗಂಟೆಗೆ ಅಣ್ಣನ ಮನೆ ತಲುಪಿದ್ದಾರೆ. ಮನೆಗೆ ಬಂದು ಮೊದಲು ಮನೆಯ ಮಾಲೀಕನನ್ನು ಎಚ್ಚರಿಸಿ, ತನ್ನ ಸೋದರ ಅತ್ತಿಗೆಯೊಂದಿಗೆ ಜಗಳ ಮಾಡ್ತಿದ್ದಾನೆ ಎಂದು ಹೇಳಿ ಕರೆದುಕೊಂಡು ಹೋಗಿದ್ದಾರೆ. ಮನೆಯ ಬಾಗಿಲು ತೆಗೆದಾಗ ಬೆಡ್ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಿಂಕಿ ದೇವಿ ಮೃತದೇಹ ಕಾಣಿಸಿದೆ. ಶವದ ಪಕ್ಕದಲ್ಲಿಯೇ ಬ್ರಿಜೇಶ್ ಕುಳಿತಿದ್ದಾನೆ. ಬೆಡ್ ಕೆಳಗಡೆ ಮಕ್ಕಳಿಬ್ಬರ ಶವ ಕಾಣಿಸಿವೆ.

    ಕೊಲೆಯ ವಿಷಯ ಗೊತ್ತಾಗುತ್ತಿದ್ದಂತೆ ಮನೆಯ ಮಾಲೀಕ ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಇತ್ತ ಸೋದರಿ ಮತ್ತು ನೆರೆಹೊರೆಯವರು ಬರುತ್ತಿದ್ದಂತೆ ಬ್ರಿಜೇಶ್ ಮದ್ಯದ ಬಾಟಲಿ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಆತನನ್ನು ರಾಂಚಿಯ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸಾವಿನ ಸುತ್ತ ಅನುಮಾನ: ಆರೋಪಿ ಜಗಳ ವಿಕೋಪಕ್ಕೆ ತಿರುಗಿದಾಗ ಕೊಲೆ ಮಾಡಿದೆ ಎಂದು ಹೇಳಿಕೊಂಡಿದ್ದಾನೆ. ಆದ್ರೆ ಮನೆಯ ಮಾಲೀಕರ ಜಗಳ ನಡೆದಿರುವ ಬಗ್ಗೆ ಮಾಹಿತಿ ಇಲ್ಲ. ಇಬ್ಬರ ಮಧ್ಯೆ ಜಗಳ ನಡೆದಿದ್ದರೆ ಹತ್ತಿರದಲ್ಲಿದ್ದ ನಮಗೆ ಗಲಾಟೆ ಕೇಳಿಸಬೇಕಿತ್ತು. ಆ ರೀತಿಯ ಸದ್ದು ನಮಗೆ ಕೇಳಿಸಿಲ್ಲ ಎಂದು ಮನೆಯ ಮಾಲೀಕ ಹೇಳಿಕೆ ನೀಡಿದ್ದಾರೆ. ಆರೋಪಿ ಬ್ರಿಜೇಶ್ ಕೊಲೆಗೂ ಮುನ್ನ ಮತ್ತು ಬರುವ ಔಷಧಿ ನೀಡಿದ ಬಳಿಕ ಕೊಲೆ ಮಾಡಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಮೃತ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಶವ ಪರೀಕ್ಷೆಯಲ್ಲಿ ಕೊಲೆ ಹೇಗೆ ನಡೆದಿದೆ ಎಂಬುವುದು ತಿಳಿದು ಬರಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ‘ನೀನು ಕಳ್ಳಿ’ – ಪತ್ನಿಯನ್ನು ಕಿಚಾಯಿಸಿದ ಮಾಹಿ

    ‘ನೀನು ಕಳ್ಳಿ’ – ಪತ್ನಿಯನ್ನು ಕಿಚಾಯಿಸಿದ ಮಾಹಿ

    ರಾಂಚಿ: ಸೋಷಿಯಲ್ ಮೀಡಿಯಾದಲ್ಲಿ ಮಾಹಿ ದಂಪತಿ ದಿನೇ ದಿನೇ ಸಖತ್ ಆಕ್ಟಿವ್ ಆಗ್ತಿದ್ದಾರೆ. ಫನ್ನಿ ಫನ್ನಿ ಫೋಟೋಸ್ ವಿಡಿಯೋಗಳನ್ನು ಶೇರ್ ಮಾಡ್ತಾ ಮಸ್ತ್ ಎಂಜಾಯಿ ಮಾಡ್ತಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ತನ್ನ ಫಾಲೋವರ್ ಗಳನ್ನು ಹೆಚ್ಚಿಸಿಕೊಳ್ಳೋಕೆ ಸಾಕ್ಷಿ ನನ್ನ ವೀಡಿಯೋಗಳನ್ನ ಪೋಸ್ಟ್ ಮಾಡುತ್ತಿದ್ದಾರೆ. ಇಂತಹ ವೈರಲ್ ವಿಡಿಯೋವೊಂದರಲ್ಲಿ ಧೋನಿ ತಮ್ಮ ಪತ್ನಿಯನ್ನು, ‘ಸಾಕ್ಷಿ ಕಳ್ಳಿ’ ಅಂತ ಕಿಚಾಯಿಸಿ ಧೋನಿ ಕಾಲೆಳೆದಿದ್ದಾರೆ.

    ಧೋನಿ ಅವರ ಈ ಮಾತಿಗೆ ಪ್ರತಿಕ್ರಿಯೆ ನೀಡಿರುವ ಸಾಕ್ಷಿ, ನಾನು ನಿನ್ನ ಅರ್ಧಾಂಗಿ ರಾಜ, ಬೇಬಿ ಸ್ವೀಟಿ ಅಂತೆಲ್ಲಾ ಹೊಗಳಿ ಅಟ್ಟಕೇರಿಸಿದ್ದಾರೆ. ಅಲ್ಲದೇ ನಿಮ್ಮ ಫಾಲೋವರ್ಸ್ ಎಲ್ಲಾ ನನ್ನ ಸಿಕ್ಕಾಪಟ್ಟೆ ಇಷ್ಟ ಪಡ್ತಾರೆ ಗೊತ್ತಾ? ಯಾರಾದ್ರು ನಿಮ್ಮನ್ನು ನೋಡ್ಬೇಕು ಅಂದ್ರೆ ನನ್ನ ಅಕೌಂಟಿನಲ್ಲಿ ನೋಡ್ತಾರೆ. ನನ್ನ ಹೀರೋ ಧೋನಿ ಎಲ್ಲೋದ್ರು, ‘ಮಾಹಿ ಬಾಯಿ, ಧೋನಿ ತಲಾ’ ಅಂತೆಲ್ಲಾ ಕರೆಯುತ್ತಾರೆ. ಈ ವೀಡಿಯೋಗಳನ್ನ ನೋಡಿ ಖುಷಿ ಪಡ್ತಾರೆ ಎಂದಿದ್ದಾರೆ. ಇಬ್ಬರ ತಮಾಷೆಯ ವೀಡಿಯೋ ಈಗ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ.

  • ವಾರದಲ್ಲಿ ತಲಾ 3 ದಿನ ಪತಿಯೊಂದಿಗೆ ಇರಲು ಇಬ್ಬರು ಪತ್ನಿಯರ ಒಪ್ಪಂದ

    ವಾರದಲ್ಲಿ ತಲಾ 3 ದಿನ ಪತಿಯೊಂದಿಗೆ ಇರಲು ಇಬ್ಬರು ಪತ್ನಿಯರ ಒಪ್ಪಂದ

    – ಪತಿಗೆ ವಾರದಲ್ಲಿ ಒಂದು ದಿನದ ರಜೆ

    ರಾಂಚಿ: ಜಾರ್ಖಂಡ್ ರಾಜಧಾನಿ ರಾಂಚಿಯ ಸದರ್ ಪೊಲೀಸ್ ಠಾಣೆಯಲ್ಲಿ ಶನಿವಾರ ಒಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ಪತ್ನಿಯರು ಪತಿಯನ್ನು ವಾರದಲ್ಲಿ ಮೂರು ದಿನಗಳಂತೆ ವಿಭಜಿಸಿಕೊಂಡಿದ್ದಾರೆ.

    ರಾಂಚಿಯ ರಾಜೇಶ್ ಕುಮಾರ್ ಇಬ್ಬರು ಮಹಿಳೆಯರನ್ನು ಮದುವೆಯಾಗಿದ್ದ. ಹೀಗಾಗಿ ಪತಿ ರಾಜೇಶ್ ಇಬ್ಬರ ಬಳಿಯು ತಲಾ ಮೂರು ದಿನ ಇರುವುದಾಗಿ ಒಪ್ಪಂದ ಮಾಡಿಕೊಂಡಿದ್ದ. ಆದರೆ ಶನಿವಾರ ಆತನ ಎರಡನೇ ಪತ್ನಿ ಸದರ್ ಪೊಲೀಸ್ ಠಾಣೆಗೆ ಹೋಗಿ, ನನ್ನ ಪತಿ ಐದು ದಿನಗಳಿಂದ ಮನೆಗೆ ಬಂದಿಲ್ಲ. ಅವನು ತನ್ನ ಮೊದಲ ಪತ್ನಿಯೊಂದಿಗೆ ವಾಸಿಸುತ್ತಿದ್ದಾನೆ ಎಂದು ದೂರಿದ್ದಳು.

    ಮಹಿಳೆ ದೂರಿನಿಂದ ಪೊಲೀಸರು ಕೂಡ ತೊಂದರೆಗೆ ಸಿಲುಕಿದರು. ಹೀಗಾಗಿ ಪ್ರಕರಣ ದಾಖಲಿಸಿಕೊಳ್ಳದೆ ಪೊಲೀಸರು ಪತಿ ರಾಜೇಶ್ ಕುಮಾರ್ ನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ಈ ವೇಳೆ ಪತ್ನಿಯರ ವಾದ ಆಲಿಸಿದ ಪೊಲೀಸರು ಕಂಗಾಲಾದರು.

    ಪತಿಯೊಂದಿಗೆ ವಾಸಿಸಲು ತಲಾ ಮೂರು ದಿನವನ್ನು ವಿಂಗಡಿಸಿಕೊಂಡಿದ್ದೇವೆ. ಅದರಂತೆ ಪತಿಯು ವಾರದಲ್ಲಿ ಮೂರು ದಿನಗಳು ಮೊದಲ ಪತ್ನಿಯೊಂದಿಗೆ ಮತ್ತು ಮೂರು ದಿನ ಎರಡನೇ ಪತ್ನಿಯೊಂದಿಗೆ ಪತಿ ಇರಬೇಕು. ಜೊತೆಗೆ ವಾರದಲ್ಲಿ ಒಂದು ದಿನ ಆತನಿಗೆ ರಜೆ ನೀಡಲಾಗಿದೆ ಎಂದು ಪತ್ನಿಯರು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.

    ಆದರೆ, ಪತಿ ಮೊದಲ ಹೆಂಡತಿಯೊಂದಿಗೆ ಐದು ದಿನಗಳ ಕಾಲ ಇದ್ದರಿಂದ, ಎರಡನೇ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. ಇದನ್ನು ಆಲಿಸಿದ ಪೊಲೀಸರು ಹೊಂದಾಣಿಕೆಯಿಂದ ಬಾಳಿ ಎಂದು ಪೊಲೀಸರು ದಂಪತಿಗೆ ಹೇಳಿ ಕಳಿಸಿದ್ದಾರೆ.

  • ಸೇನೆಯಿಂದ ಪತಿಯ ಪಾರ್ಥಿವ ಶವ ಮನೆಗೆ ಬರುತ್ತಿದ್ದಂತೆ ಬಾವಿಗೆ ಹಾರಿ ಪತ್ನಿ ಆತ್ಮಹತ್ಯೆ

    ಸೇನೆಯಿಂದ ಪತಿಯ ಪಾರ್ಥಿವ ಶವ ಮನೆಗೆ ಬರುತ್ತಿದ್ದಂತೆ ಬಾವಿಗೆ ಹಾರಿ ಪತ್ನಿ ಆತ್ಮಹತ್ಯೆ

    ರಾಂಚಿ: ಸೇನೆಯಲ್ಲಿ ನಿಧನರಾದ ಪತಿಯ ಪಾರ್ಥಿವ ಶರೀರ ಮನೆಗೆ ಬರುತ್ತಿದ್ದಂತೆ ಪತ್ನಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಾರ್ಖಂಡಿನ ರಾಂಚಿಯಲ್ಲಿ ನಡೆದಿದೆ.

    ಭಜರಂಗ್ ಭಗತ್(29) ನಿಧನರಾದ ಯೋಧ. ಡಿಸೆಂಬರ್ 29ರಂದು ಯೋಧ ಹಾಸಿಗೆ ಮೇಲಿನಿಂದ ಬಿದ್ದು ನಿಧನರಾಗಿದ್ದು, ಅವರ ಪಾರ್ಥಿವ ಶರೀರವನ್ನು ಜನವರಿ 1ರಂದು ಅವರ ಗ್ರಾಮಕ್ಕೆ ತರಲಾಯಿತು. ಈ ವೇಳೆ ಪತ್ನಿ ಮನೀತ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಇಬ್ಬರ ಅಂತ್ಯಕ್ರಿಯೆಯನ್ನು ಒಟ್ಟಿಗೆ ಮಾಡಲಾಯಿತು.

    ಮನೀತ್ ಹಾಗೂ ಭಜರಂಗ್ ಎರಡು ವರ್ಷಗಳ ಹಿಂದೆ ಮದುವೆ ಆಗಿದ್ದರು. ಭಜರಂಗ್ ಅವರ ತಂದೆ ಈ ಮೊದಲೇ ನಿಧನರಾಗಿದ್ದಾರೆ. ಅಲ್ಲದೆ ಅವರಿಗೆ ಐವರು ಸಹೋದರಿಯರಿದ್ದು, ಐವರಿಗೂ ಮದುವೆ ಆಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಮನೀತ್ ಪೋಷಕರು, ಭಜರಂಗ್ ಅವರ ಸಹೋದರಿ ಹಾಗೂ ಭಾವ ಆತ್ಮಹತ್ಯೆಗೆ ಪ್ರೇರಿಸಿದ್ದಾರೆ. ಹಾಗಾಗಿ ಮನೀತ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಕ್ಕಳು ಆಗಿಲ್ಲ ಎಂದು ಭಜರಂಗ್ ಸಹೋದರಿ ಗೀತಾ ಟೀಕಿಸುತ್ತಿದ್ದಳು. ಇದರಿಂದ ಬೇಸರಗೊಂಡ ಮನೀತ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾಳೆ.

    2012ರಂದು ಭಜರಂಗ್ ಸೇನೆಗೆ ಸೇರಿದ್ದರು. ನಂತರ ಅವರಿಗೆ ನಾಗ್ಪುರದ ರೆಜಿಮೆಂಟಲ್ ಸೆಂಟರ್‍ನ ಯೂನಿಟ್ 17ರಲ್ಲಿ ಗಾರ್ಡ್ ಆಗಿ ನೇಮಿಸಲಾಗಿತ್ತು. ಕಳೆದ ಮೂರು ತಿಂಗಳ ಹಿಂದೆ ಅವರನ್ನು ಜಮ್ಮುವಿನಲ್ಲಿ ಪೋಸ್ಟ್ ಮಾಡಲಾಗಿತ್ತು. ಮಲಗಿದ್ದಾಗ ಹಾಸಿಗೆ ಮೇಲಿಂದ ಬಿದ್ದ ಪರಿಣಾಮ ಭಜರಂಗ್ ನಿಧನರಾಗಿದ್ದಾರೆ ಎಂದು ಯೂನಿಟ್‍ನ ಸಿಓ ಕರ್ನಲ್ ವಿಜಯ್ ಸಿಂಗ್ ಫೋನ್ ಮಾಡಿ ಕುಟುಂಬಸ್ಥರಿಗೆ ತಿಳಿಸಿದ್ದರು.

    ಈ ಬಗ್ಗೆ ಭಜರಂಗ್ ಕುಟುಂಬಸ್ಥರು ಮಾತನಾಡಿ, ಡಿಸೆಂಬರ್ 29ರ ರಾತ್ರಿ 10 ಗಂಟೆಗೆ ನಾವು ಭಜರಂಗ್ ಜೊತೆ ಮೊಬೈಲಿನಲ್ಲಿ ಮಾತನಾಡಿದ್ವಿ. ಮರುದಿನ ಬೆಳಗ್ಗೆ ಕರ್ನಲ್ ವಿಜಯ್ ಸಿಂಗ್ ಕರೆ ಮಾಡಿ ಹಾಸಿಗೆಯಿಂದ ಬಿದ್ದ ಪರಿಣಾಮ ಭಜರಂಗ್ ನಿಧನರಾಗಿದ್ದಾರೆ ಅಂತಾ ಹೇಳಿದ್ದರು ಎಂದು ಪ್ರತಿಕ್ರಿಯಿಸಿದ್ದಾರೆ.