Tag: ranaji

  • ಮಗು ಕಳೆದುಕೊಂಡ ದುಃಖದಲ್ಲೇ ರಣಜಿ ಆಡುತ್ತಿದ್ದ ವಿಷ್ಣು ಸೋಲಂಕಿಗೆ ಮತ್ತೊಂದು ಆಘಾತ

    ಮಗು ಕಳೆದುಕೊಂಡ ದುಃಖದಲ್ಲೇ ರಣಜಿ ಆಡುತ್ತಿದ್ದ ವಿಷ್ಣು ಸೋಲಂಕಿಗೆ ಮತ್ತೊಂದು ಆಘಾತ

    ನವದೆಹಲಿ: ಕೆಲ ದಿನಗಳ ಹಿಂದಷ್ಟೇ ಮಗುವನ್ನು ಕಳೆದುಕೊಂಡು ನೋವಿನಲ್ಲಿದ್ದ ರಣಜಿ ಆಟಗಾರ ವಿಷ್ಣು ಸೋಲಂಕಿಗೆ ಮತ್ತೊಂದು ಆಘಾತವಾಗಿದ್ದು, ರಣಜಿ ಆಡುತ್ತಿದ್ದ ವೇಳೆ ತಂದೆಯನ್ನು ಕಳೆದುಕೊಂಡಿದ್ದಾರೆ.

    ಸೋಲಂಕಿ ಅವರ ತಂದೆ ಕಳೆದ 2 ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ. ಅವರ ಶವವನ್ನು ಹೆಚ್ಚು ಕಾಲ ಶವಗಾರದಲ್ಲಿ ಇಡಲು ಸಾಧ್ಯವಾಗದಿದ್ದರಿಂದ ಅಂತ್ಯಸಂಸ್ಕಾರವನ್ನು ಸೋಲಂಕಿ ಅಣ್ಣ ಮಾಡಿದರು.

    ಕಟಕ್‍ನ ವಿಕಾಸ್ ಕ್ರಿಕೆಟ್ ಮೈದಾನದಲ್ಲಿ ಉತ್ತಮ ಫೀಲ್ಡಿಂಗ್ ಪ್ರಯತ್ನದಲ್ಲಿದ್ದರು. ಈ ಸಮಯದಲ್ಲಿ ಸೋಲಂಕಿಗೆ ಬರೋಡಾ ತಂಡದ ಮ್ಯಾನೇಜರ್ ಧಮೇರ್ಂದ್ರ ಅರೋಥೆ ಈ ಬಗ್ಗೆ ಮಾಹಿತಿ ನೀಡಿದರು. ಬರೋಡಾ ನಾಯಕ ಕೇದಾರ್ ದೇವಧರ್ ಮಾತನಾಡಿ, ಸೋಲಂಕಿ ತಂದೆಯ ನಿಧನದ ಬಗ್ಗೆ ಪಂದ್ಯದ ವೇಳೆ ನಮಗೆ ತಿಳಿಯಿತು. ವಿಷ್ಣು ಅವರು ತಮ್ಮ ತಂದೆಯ ಅಂತ್ಯಕ್ರಿಯೆಯನ್ನು ಡ್ರೆಸ್ಸಿಂಗ್ ಕೋಣೆಯ ಒಂದು ಮೂಲೆಯಲ್ಲಿ ವೀಡಿಯೋ ಕರೆಯಲ್ಲಿ ನೋಡಿದರು. ಇದು ಅವರಿಗೆ ನಿಜವಾಗಿಯೂ ಕಠಿಣವಾಗಿತ್ತು. ಆದರೆ ಅವರು ತೋರಿಸಿದ ಧೈರ್ಯವು ಗಮನಾರ್ಹವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಗನ್ ಹಿಡಿದು ದೇಶ ರಕ್ಷಣೆಗೆ ನಿಂತ ಮಿಸ್ ಉಕ್ರೇನ್

    ಕಳೆದ ಕೆಲವೇ ದಿನಗಳ ಹಿಂದಷ್ಟೇ ವಿಷ್ಣು ಸೋಲಂಕಿ ಅವರು ತಮ್ಮ ಹೆಣ್ಣು ಮಗುವನ್ನು ಕಳೆದುಕೊಂಡಿದ್ದರು. ಈ ನೋವಿನಲ್ಲಿಯೇ ಅವರು ಮೈದಾನಕ್ಕೆ ಬಂದಿದ್ದರು. ಆದರೆ ತನ್ನೆಲ್ಲಾ ನೋವನ್ನು ಮರೆತು ಬ್ಯಾಟ್ ಮಾಡಿದ ಅವರು 2ನೇ ದಿನ ಎಲ್ಲರ ಗಮನ ಸೆಳೆದರು. 165 ಎಸೆತಗಳಲ್ಲಿ 103ರನ್ ಗಳಿಸಿದ್ದರು. ಇದನ್ನೂ ಓದಿ: ಮೋದಿ ಜೀ, ಯೋಗಿ ಜೀ ಯಾರಿದ್ದೀರಿ..? ಪ್ಲೀಸ್ ನಮ್ಮನ್ನು ಕಾಪಾಡಿ- ಯುಪಿ ವಿದ್ಯಾರ್ಥಿನಿ ಅಳಲು

  • ಮಲೆನಾಡಿನಲ್ಲಿ ನಾಳೆಯಿಂದ ರಣಜಿ ಕಾಳಗ – ಕರ್ನಾಟಕ ಹಾಗೂ ಮಧ್ಯಪ್ರದೇಶ ನಡುವೆ ಪಂದ್ಯ

    ಮಲೆನಾಡಿನಲ್ಲಿ ನಾಳೆಯಿಂದ ರಣಜಿ ಕಾಳಗ – ಕರ್ನಾಟಕ ಹಾಗೂ ಮಧ್ಯಪ್ರದೇಶ ನಡುವೆ ಪಂದ್ಯ

    ಶಿವಮೊಗ್ಗ: ಮಂಗಳವಾರದಿಂದ ಮಲೆನಾಡಿನಲ್ಲಿ ಕರ್ನಾಟಕ ಹಾಗೂ ಮಧ್ಯಪ್ರದೇಶ ತಂಡದ ನಡುವೆ ರಣಜಿ ಕಾಳಗ ನಡೆಯಲಿದೆ. ಈಗಾಗಲೇ ಎರಡು ತಂಡಗಳು ನಗರಕ್ಕೆ ಆಗಮಿಸಿದ್ದು, ನಗರದ ಕೆಎಸ್‍ಸಿಎ ಕ್ರೀಡಾಂಗಣದಲ್ಲಿ ಅಭ್ಯಾಸ ಪಂದ್ಯದಲ್ಲಿ ನಿರತವಾಗಿವೆ.

    ಇದುವರೆಗೆ ಆಡಿರುವ ಆರು ಪಂದ್ಯದಲ್ಲಿ ಸೋಲಿಲ್ಲದ ಸರದಾರನಾಗಿ ಮುನ್ನಡೆಯುತ್ತಿರುವ ಕರ್ನಾಟಕ ತಂಡ ಫೆ.4 ರಿಂದ 7ರವರೆಗೆ ನಡೆಯಲಿರುವ ಮಧ್ಯಪ್ರದೇಶ ವಿರುದ್ಧದ ಪಂದ್ಯವನ್ನು ಗೆದ್ದು ನಾಕೌಟ್ ಹಾದಿಯನ್ನು ಸುಗಮವಾಗಿಸಿಕೊಳ್ಳುವ ಕಾತರದಲ್ಲಿದೆ.

    ರಣಜಿ ಸರಣಿಯಲ್ಲಿ ಆಡಿರುವ ಆರು ಪಂದ್ಯದಲ್ಲಿ ಕರ್ನಾಟಕ ತಂಡ ತಲಾ ಮೂರು ಗೆಲುವು ಹಾಗೂ ಡ್ರಾ ಸಾಧಿಸಿದೆ. ನಾಲ್ಕು ಪಂದ್ಯದಲ್ಲಿ ಡ್ರಾ ಸಾಧಿಸಿ, ಎರಡು ಪಂದ್ಯದಲ್ಲಿ ಸೋಲಿನ ರುಚಿ ಅನುಭವಿಸಿರುವ ಮಧ್ಯಪ್ರದೇಶ ತಂಡ ಕರ್ನಾಟಕ ತಂಡಕ್ಕೆ ಎದುರಾಳಿಯಾಗಲಿದ್ದು, ಪಂದ್ಯದಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.

    ಈಗಾಗಲೇ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕರ್ನಾಟಕ, 17ನೇ ಸ್ಥಾನದಲ್ಲಿರುವ ಮಧ್ಯಪ್ರದೇಶವನ್ನು ಮತ್ತೊಮ್ಮೆ ಸೋಲಿಸಿ ನಾಕೌಟ್ ಹಾದಿಯನ್ನು ಸುಗಮಗೊಳಿಸಿಕೊಳ್ಳಲು ಕರುಣ್ ನಾಯರ್ ನಾಯಕತ್ವದಲ್ಲಿ ಸಿದ್ಧವಾಗಿದೆ. ಇತ್ತ ಈ ಸರಣಿಯಲ್ಲಿ ಒಂದೂ ಗೆಲುವು ಕಾಣದೇ ಕಂಗೆಟ್ಟಿರುವ ಮಧ್ಯಪ್ರದೇಶ ಈ ಪಂದ್ಯದಲ್ಲಿ ಶತಾಯಗತಾಯ ಗೆಲ್ಲಲ್ಲೇಬೇಕಾದ ಗುರಿ ಹೊಂದಿದೆ. ನಾಳೆಯ ಪಂದ್ಯ ರೋಚಕ ಹಣಾಹಣಿಯ ನಿರೀಕ್ಷೆಯಲ್ಲಿದ್ದಾರೆ ಕ್ರಿಕೆಟ್ ಪ್ರೇಮಿಗಳು.

    ಕರ್ನಾಟಕ ತಂಡದಲ್ಲಿ ಕರುಣ್ ನಾಯರ್ (ನಾಯಕ), ದೇವದತ್ತ್ ಪಡಿಕ್ಕಲ್, ಆರ್. ಸಮರ್ಥ್, ರೋಹನ್ ಕದಂ, ಪವನ್ ದೇಶಪಾಂಡೆ, ಶ್ರೇಯಸ್ ಗೋಪಾಲ್, ಸಮರ್ಥ್ ಶ್ರೀನಿವಾಸ್, ಬಿ.ಆರ್ ಶರತ್, ಮಿಥುನ್, ಕೌಶಿಕ್, ರೋಹಿತ್ ಮೊರೆ, ಪ್ರತೀಕ್ ಜೈನ್, ಕೆ.ವಿ ಸಿದ್ದಾರ್ಥ್, ಪ್ರವೀಣ್ ದುಬೆ ಹಾಗೂ ಕೆ. ಗೌತಮ್ ಆಟಗಾರರು ಇದ್ದಾರೆ.

    ಮಧ್ಯಪ್ರದೇಶ ತಂಡದಲ್ಲಿ ಶುಭಂ ಶರ್ಮ (ನಾಯಕ), ಯಶ್ ದುಬೆ, ಅಮೀಜ್ ಖಾನ್, ಗೌತಮ್ ರಘುವಂಶಿ, ಅಜೆಯ್ ರೊಹೆರಾ, ಆನಂದ್ ಸಿಂಗ್ ಬೈಸ್, ರಜತ್ ಪಡಿದರ್, ಆದಿತ್ಯ ಶ್ರೀವತ್ಸ, ಕುಮಾರ್ ಕಾರ್ತಿಕೇಯ ಸಿಂಗ್, ಮಿಹಿರ್ ಹಿರ್ವಾನಿ, ಗೌರವ್ ಯಾದವ್, ರವಿ ಯಾದವ್, ವೆಂಕಟೇಶ ಅಯ್ಯರ್, ಕುಲದೀಪ್ ಸೇನ್ ಹಾಗೂ ಹಿಮಾಂಶು ಮಂತ್ರಿ ಇದ್ದಾರೆ.