Tag: Ranahedi

  • ರೈತರ ಪ್ರೀತಿ ಗಿಟ್ಟಿಸಿಕೊಂಡ ರಣಹೇಡಿ!

    ರೈತರ ಪ್ರೀತಿ ಗಿಟ್ಟಿಸಿಕೊಂಡ ರಣಹೇಡಿ!

    ನು ಕೆ ಶೆಟ್ಟಿಹಳ್ಳಿ ನಿರ್ದೇಶನದ ರಣಹೇಡಿ ಕಳೆದ ವಾರ ಬಿಡುಗಡೆಗೊಂಡಿತ್ತು. ಅನ್ನದಾತರ ಬದುಕಿನ ಕಥೆ ಎಂದ ಮೇಲೆ ಅದರತ್ತ ಒಂದು ಆಕರ್ಷಣೆ ಇದ್ದೇ ಇರುತ್ತದೆ. ಅಷ್ಟಕ್ಕೂ ಕನ್ನಡದ ಪ್ರೇಕ್ಷಕರೂ ಕೂಡ ಇಂತಹ ನೆಲದ ಕಂಪಿನ ಕಥೆಗಳಿಗಾಗಿ ಸದಾ ಕಾತರಿಸುತ್ತಿರುತ್ತಾರೆ. ಅದಕ್ಕೆ ತಕ್ಕುದಾದ ಕಥೆಯೊಂದಿಗೆ ಬಂದ ಈ ಚಿತ್ರಕ್ಕೆ ಮೊದಲ ದಿನವೇ ಪ್ರೇಕ್ಷಕರ ಪ್ರೀತಿ ಸಿಕ್ಕಿದೆ. ಆ ನಂತರದಲ್ಲಿ ದಿನ ಕಳೆದಂತೆ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಾ ಸಾಗಿ ಬಂದ ರಣಹೇಡಿ ಕ್ರಮೇಣ ರಾಜ್ಯದ ರೈತರ ಪ್ರೀತಿಯನ್ನೂ ಪಡೆದುಕೊಂಡಿದೆ. ಇದು ರಣಹೇಡಿಗೆ ಮತ್ತಷ್ಟು ಶಕ್ತಿ ತುಂಬಿದೆ. ಯಾವುದೇ ಚಿತ್ರದ ಗೆಲುವಿನಲ್ಲಿ ರೈತಾಪಿ ವರ್ಗದ ಪಾತ್ರ ಬಹಳಷ್ಟಿದೆ. ಅವರದ್ದೇ ಬದುಕು ಬವಣೆಯ ಕಥೆ ಹೊಂದಿರೋ ರಣಹೇಡಿಯನ್ನು ರಾಜ್ಯದ ರೈತರೆಲ್ಲರೂ ಮೆಚ್ಚಿ ಕೊಂಡಾಡುತ್ತಿದ್ದಾರೆ.

    ಸುರೇಶ್ ನಿರ್ಮಾಣದ ಈ ಚಿತ್ರದಲ್ಲಿ ರೈತ ಸಮುದಾಯದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಅದನ್ನು ಪಕ್ಕಾ ಕಮರ್ಷಿಯಲ್ ಹಾದಿಯಲ್ಲಿಯೇ ನಿರೂಪಿಸಲಾಗಿದೆ. ಹಳ್ಳಿ ಜೀವನ ಅಂದಮೇಲೆ ಅಲ್ಲಿ ದ್ವೇಷ, ಅಸೂಯೆ, ಜಗಳ, ಕಾದಾಟಗಳೆಲ್ಲ ಇದ್ದಿದ್ದೇ. ಅದೇ ರೀತಿ ಇಲ್ಲಿಯೂ ಎರಡು ಫೈಟಿಂಗುಗಳಿವೆ. ಆದರೆ ಅದಕ್ಕೆ ಯಾವುದೇ ಬಿಲ್ಡಪ್ಪುಗಳನ್ನು ಅಳವಡಿಸಲಾಗಿಲ್ಲ. ಆ ನೈಜತೆಯಲ್ಲಿಯೂ ಈ ಸಾಹಸ ಸನ್ನಿವೇಶಗಳು ಮಿರುಗುವಂತೆ ಕಟ್ಟಿ ಕೊಡಲಾಗಿದೆ. ಯಾವ ಸ್ಟಾರ್ ಸಿನಿಮಾಗಳಿಗೂ ಕಮ್ಮಿಯಿಲ್ಲದಂತೆ ಮೂಡಿ ಬಂದಿರುವ ಈ ಚಿತ್ರವನ್ನು ರಾಜ್ಯಾದ್ಯಂತ ಜನ ಮೆಚ್ಚಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚೆಚ್ಚು ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಿರುವ ಈ ಚಿತ್ರವೀಗ ಯಶಸ್ವೀ ಪ್ರದರ್ಶನ ಕಾಣುತ್ತಿದೆ.

    ಈ ಚಿತ್ರವನ್ನು ಕನ್ನಡ ಚಿತ್ರರಂಗದ ಸದಭಿರುಚಿಯ ನಿರ್ಮಾಪಕರಾದ ಸುರೇಶ್ ನಿರ್ಮಾಣ ಮಾಡಿದ್ದಾರೆ. ಇದು ರೈತರ ಕಥಾನಕ ಹೊಂದಿದ್ದರೂ ರಣಹೇಡಿ ಎಂಬ ಹೆಸರನ್ನು ಯಾಕಿಡಲಾಗಿದೆ ಅನ್ನೋ ಪ್ರಶ್ನೆ ಬಹುತೇಕರನ್ನು ಕಾಡುತ್ತಿತ್ತು. ಆದರೆ ರೈತ ರಣಹೇಡಿಯಲ್ಲ ಯೋಧ ಎಂಬಂತಹ ಕಥಾ ತಿರುಳನ್ನು ಈ ಸಿನಿಮಾ ಒಳಗೊಂಡಿದೆ ಎಂಬ ವಿಚಾರವೇ ರೈತ ಸಂಕುಲ ಇದರತ್ತ ಆಕರ್ಷಣೆಗೀಡಾಗಲು ಕಾರಣವಾಗಿದೆ. ಅಷ್ಟಕ್ಕೂ ರೈತರ ಬದುಕೇ ಒಂದು ಹೋರಾಟ. ಅದಕ್ಕೆ ತಕ್ಕುದಾಗಿಯೇ ಈ ಸಿನಿಮಾದಲ್ಲಿ ಮೈ ನವಿರೇಳಿಸುವಂತಹ ದೇಸೀ ಸಾಹಸ ಸನ್ನಿವೇಶಗಳೂ ಇವೆ. ಒಟ್ಟಾರೆಯಾಗಿ ಈ ಭಿನ್ನ ಹೂರಣವೇ ಜನರಿಗೆ ಹಿಡಿಸಿದೆ. ಇದರಿಂದಾಗಿಯೇ ಅಮೋಘ ಗೆಲುವು ರಣಹೇಡಿಯ ಕೈಹಿಡಿಯುವ ಸಾಧ್ಯತೆಗಳು ಮಿರುಗಲಾರಂಭಿಸಿವೆ.

  • ರಣಹೇಡಿ: ಕಥೆಗೆ ಮನಸೋತು ಕಾಸು ಹೂಡಿದ ಸುರೇಶ್ ಸಾಹಸ!

    ರಣಹೇಡಿ: ಕಥೆಗೆ ಮನಸೋತು ಕಾಸು ಹೂಡಿದ ಸುರೇಶ್ ಸಾಹಸ!

    ನ್ನಡ ಚಿತ್ರರಂಗದಲ್ಲಿ ಹೊಸ ಆಲೋಚನೆಯ ಪ್ರಕ್ರಿಯೆಗೆ ಯಾವ ಭಂಗವೂ ಇಲ್ಲ. ಆಗಾಗ ಸಿದ್ಧ ಸೂತ್ರದ ಚಿತ್ರಗಳ ಅಲೆಗೆದುರಾಗಿ ಇಂತಹ ಪ್ರಯೋಗಾತ್ಮಕ ಚಿತ್ರಗಳು ತೆರೆಗಾಣುತ್ತಿರುತ್ತವೆ. ಆದರೆ ಅದೆಷ್ಟೋ ಒಳ್ಳೆ ಕಥೆಗಳು, ಭಿನ್ನ ಆಲೋಚನೆಗಳು ಎಲ್ಲೆಲ್ಲೋ ಮಣ್ಣಾಗಿರುತ್ತವೆ. ಅದಕ್ಕೆ ಕಾರಣ ಅಭಿರುಚಿ ಹೊಂದಿರುವ, ವ್ಯವಹಾರವನ್ನು ಮೀರಿದ ಸಿನಿಮಾ ಪ್ರೇಮ ಹೊಂದಿರುವ ನಿರ್ಮಾಪಕರ ಕೊರತೆ. ಬಹುಶಃ ಸುರೇಶ್ ಅವರಂತಹ ಸದಭಿರುಚಿಯ ನಿರ್ಮಾಪಕರು ಸಿಗದಿದ್ದಿದ್ದರೆ ರಣಹೇಡಿ ಎಂಬ ಚಿತ್ರ ಕೂಡ ಎಲ್ಲಿಯೋ ಕಳೆದು ಹೋಗುತ್ತಿತ್ತು. ಈ ನೆಲದ ಕಂಪು ಹೊಂದಿರೋ ಈ ಕಥೆಯೂ ಕಣ್ಮರೆಯಾಗುತ್ತಿತ್ತು.

    ಸುರೇಶ್ ಈ ಹಿಂದೆಯೂ ಒಂದು ಸದಭಿರುಚಿಯ ಸಿನಿಮಾ ನಿರ್ಮಾಣ ಮಾಡಿದ್ದರು. ಹೆಚ್ಚಿನ ನಿರ್ಮಾಪಕರು ಪಕ್ಕಾ ಕಮರ್ಷಿಯಲ್ ವಿಧಾನದ ಸಿನಿಮಾಗಳತ್ತ ಮಾತ್ರವೇ ಆಕರ್ಷಿತರಾಗುತ್ತಾರೆ. ಆದರೆ ಸಮಾಜಮುಖಿಯಾದ, ಪ್ರೇಕ್ಷಕರಿಗೆ ದಾಟಿಕೊಳ್ಳಲೇ ಬೇಕಾದ ಕಥೆಯನ್ನೊಳಗೊಂಡಿರೋ ಸಿನಿಮಾಗಳತ್ತ ಒಲವು ಹೊಂದಿರುವವರು ಕಡಿಮೆಯೇ. ಆದರೆ ಸುರೇಶ್ ಅವರದ್ದು ಭಿನ್ನ ಅಭಿರುಚಿ. ವ್ಯಾಪಾರ-ವಹಿವಾಟುಗಳ ಪಾಡು ಏನೇ ಆದರೂ ತಾವು ನಿರ್ಮಾಣ ಮಾಡೋ ಸಿನಿಮಾಗಳು ಮಹತ್ವದ ಸಂದೇಶ ಕೊಡುವಂತಿರಬೇಕೆಂಬುದು ಸುರೇಶ್ ಅವರ ಅಭಿಲಾಷೆ. ಈ ಕಾರಣದಿಂದಲೇ ಮನು ಕೆ ಶೆಟ್ಟಿಹಳ್ಳಿಯವರ ಕಥೆಯನ್ನು ಮೆಚ್ಚಿಕೊಂಡು ರಣಹೇಡಿಯ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದಾರೆ.

    ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲಿನಂತೆ ಮೂಡಿ ಬಂದಿದೆ ಎಂಬ ಭರವಸೆ ಸುರೇಶ್ ಅವರಲ್ಲಿದೆ. ಅವರು ಈ ಕಥೆಯನ್ನು ಇಷ್ಟೊಂದು ಇಷ್ಟಪಟ್ಟು ನಿರ್ಮಾಣ ಮಾಡೋ ರಿಸ್ಕ್ ತೆಗೆದುಕೊಳ್ಳಲು ಕಾರಣವಾಗಿರೋದು ಅದರಲ್ಲಿರೋ ಮಣ್ಣಿನ ಘಮ. ಇಲ್ಲಿ ರೈತಾಪಿ ವರ್ಗದ ತಲ್ಲಣಗಳ ಕಥೆಯಿದೆ. ಹೊಲದಿಂದ ಮೊದಲ್ಗೊಂಡು ಆ ರೈತಾಪಿ ವರ್ಗದ ಜೀವನ ಪದ್ಧತಿ, ಮರೆಯಾಗುತ್ತಿರೋ ಅಮೂಲ್ಯ ಆಚರಣೆಗಳನ್ನು ಕೂಡ ಪುನರ್ ಸೃಷ್ಟಿಸಿ ಈ ಜನರೇಷನ್ನಿಗೆ ತಲುಪಿಸುವಲ್ಲಿಯೂ ರಣಹೇಡಿ ಮಹತ್ವದ ಪಾತ್ರ ವಹಿಸಲಿದೆ. ಈ ಎಲ್ಲ ಕಾರಣದಿಂದ ಮಹತ್ವದ್ದಾಗಿ ಗುರುತಿಸಿಕೊಂಡಿರುವ ಈ ಚಿತ್ರ ಇದೇ ತಿಂಗಳ 29ರಂದು ಬಿಡುಗಡೆಯಾಗಲಿದೆ.

  • ರಣಹೇಡಿಯ ಒಡಲಲ್ಲಿದೆ ರೈತ ಕಥನ!

    ರಣಹೇಡಿಯ ಒಡಲಲ್ಲಿದೆ ರೈತ ಕಥನ!

    ಮರ್ಷಿಯಲ್ ಹಾದಿಯ ಸಿನಿಮಾಗಳ ಅಬ್ಬರದ ನಡುವೆಯೇ ಆಗಾಗ ನೆಲದ ಘಮಲಿನ ಸಿನಿಮಾಗಳೂ ಕೂಡಾ ತಯಾರಾಗುತ್ತಿರುತ್ತವೆ. ಇದರಲ್ಲಿನ ಕ್ರಿಯಾಶೀಲತೆ, ಹೊಸತನಗಳೇ ಗೆಲುವಿನ ಹಾದಿ ತೋರಿಸುತ್ತವೆ. ಕಂಟೆಂಟು ಗಟ್ಟಿಯಾಗಿದ್ದರೆ ಎಂಥಾ ದೊಡ್ಡ ಚಿತ್ರಗಳ ಎದುರಾದರೂ ಪೈಪೋಟಿ ಕೊಟ್ಟು ಗೆಲ್ಲೋ ಕಸುವನ್ನು ಈಗಾಗಲೇ ಕನ್ನಡದ ಪ್ರೇಕ್ಷಕರು ಕರುಣಿಸಿದ್ದಾರೆ. ಆ ಬಲದಿಂದಲೇ ಪ್ರಯೋಗಾತ್ಮಕವಾದ, ಹೊಸ ಜಾಡಿನ ಸಿನಿಮಾಗಳು ಆಗಾಗ ರೂಪುಗೊಳ್ಳುತ್ತಿರುತ್ತವೆ. ಅದೇ ಸಾಲಿನಲ್ಲಿ ದಾಖಲಾಗುವಂತೆ ಮೂಡಿ ಬಂದಿರುವ ರಣಹೇಡಿ ಚಿತ್ರ ಇದೇ ತಿಂಗಳ 29ರಂದು ತೆರೆಗಾಣುತ್ತಿದೆ.

    ಮನು ಕೆ ಶೆಟ್ಟಿಹಳ್ಳಿ ನಿರ್ದೆಶನದಲ್ಲಿ ಮೂಡಿ ಬಂದಿರುವ ಈ ಚಿತ್ರವನ್ನು ಸುರೇಶ್ ನಿರ್ಮಾಣ ಮಾಡಿದ್ದಾರೆ. ಕರ್ಣಕುಮಾರ್ ಮತ್ತು ಐಶ್ವರ್ಯಾ ರಾವ್ ಇದರ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ನಟಿಸುತ್ತಾ ಪ್ರತಿಭಾವಂತ ನಟನಾಗಿ ಗುರುತಿಸಿಕೊಂಡಿರುವವರು ಕರ್ಣ ಕುಮಾರ್. ಅವರು ರಣಹೇಡಿ ಮೂಲಕ ನಾಯಕ ನಟನಾಗಿಯೂ ಹೊರ ಹೊಮ್ಮಿದ್ದಾರೆ. ಈ ಹಿಂದೆ ರವಿ ಹಿಸ್ಟರಿ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಐಶ್ವರ್ಯಾ ರಾವ್ ಇಲ್ಲಿಯೂ ನಾಯಕಿಯಾಗಿದ್ದಾರೆ. ಅವರದ್ದಿಲ್ಲಿ ಕೂಲಿಕಾರರ ಹೆಣ್ಣು ಮಗಳ ಡಿಗ್ಲಾಮ್ ಪಾತ್ರ. ಈ ದಿನಮಾನಕ್ಕೆ ತೀರಾ ಹೊಸತಾಗಿರೋ ಈ ಪಾತ್ರಕ್ಕಾಗಿ ಐಶ್ವರ್ಯಾ ಬಹಳಷ್ಟು ತಯಾರಿ ನಡೆಸಿಯೇ ನಟಿಸಿದ್ದಾರಂತೆ.

    ಇದು ಇವತ್ತಿನ ಸಂದರ್ಭದಲ್ಲಿ ಅತ್ಯಂತ ವಿಶಿಷ್ಟವಾದ ಕಥೆ ಹೊಂದಿರುವ ಚಿತ್ರ. ದೇಶದ ಬೆನ್ನೆಲುಬು ಅಂತೆಲ್ಲ ಕರೆಸಿಕೊಳ್ಳುವ ರೈತಾಪಿ ವರ್ಗದ ಕಷ್ಟ ಕಾರ್ಪಣ್ಯದೊಂದಿಗೇ ಒಂದು ಸಮೃದ್ಧ ಸಂಸ್ಕೃತಿಗೆ ಕನ್ನಡಿಯಾಗುವಂಥಾ ಕಥೆ ಇಲ್ಲಿದೆ. ಮಂಡ್ಯ ಸೀಮೆಯ ಹಳ್ಳಿಗಾಡಿನಲ್ಲಿಯೇ ಹುಟ್ಟಿ ಬೆಳೆದ ನಿರ್ದೇಶಕ ಮನು ಕೆ. ಶೆಟ್ಟಿಹಳ್ಳಿ ತಾನು ಕಂಡ ನೈಜ ಬದುಕಿನ ಚಿತ್ರಣವನ್ನೇ ಇಲ್ಲಿ ಬಿಚ್ಚಿಟ್ಟಿದ್ದಾರಂತೆ. ಇದರೊಂದಿಗೆ ಹಳ್ಳಿ ಬದುಕಿನ ಆಚಾರ ವಿಚಾರ, ಪೇಟೆಯ ಥಳುಕಿಗೆ ಬಲಿಯಾಗಿ ತಣ್ಣಗೆ ಮೂಲೆಗುಂಪಾಗುತ್ತಿರೋ ಆಚರಣೆಗಳತ್ತಲೂ ಇಲ್ಲಿ ಬೆಳಕು ಚೆಲ್ಲಲಾಗಿದೆಯಂತೆ. ಒಟ್ಟಾರೆಯಾಗಿ ರೈತರ ಬದುಕಿನ ಚಿತ್ರಣದೊಂದಿಗೆ ಹಳ್ಳಿ ಬದುಕಿನ ಚಿತ್ತಾರ ಮೂಡಿಸುವ ಅದ್ಭುತ ಕಥೆಯನ್ನು ರಣಹೇಡಿ ಒಳಗೊಂಡಿದೆ. ಅದೆಲ್ಲವೂ ಇದೇ ತಿಂಗಳ 29ರಂದು ನಿಮ್ಮ ಮುಂದೆ ಅನಾವರಣಗೊಳ್ಳಲಿವೆ.

    https://www.youtube.com/watch?v=kXf1qX9ay9w

  • ರವಿ ಹಿಸ್ಟರಿಯಲ್ಲಿ ಸಿಕ್ಕ ಕನ್ನಡದ ‘ಐಶ್ವರ್ಯ’!

    ರವಿ ಹಿಸ್ಟರಿಯಲ್ಲಿ ಸಿಕ್ಕ ಕನ್ನಡದ ‘ಐಶ್ವರ್ಯ’!

    ಬೆಂಗಳೂರು: ಒಂದು ಹೊಸಾ ಬಗೆಯ ಚಿತ್ರ ಹಲವಾರು ಹೊಸಾ ಪ್ರತಿಭೆಗಳನ್ನೂ ಪರಿಚಯಿಸುತ್ತೆ. ಇದೇ ವಾರ ಬಿಡುಗಡೆಯಾಗುತ್ತಿರೋ ಮಧುಚಂದ್ರ ನಿರ್ದೇಶನದ ರವಿ ಹಿಸ್ಟರಿ ಚಿತ್ರವೂ ಈ ಸಾಲಿನಲ್ಲಿ ಸೇರಿಕೊಳ್ಳುತ್ತೆ. ಈ ಸಿನಿಮಾದ ನಾಯಕಿಯಾಗಿ ನಟಿರುವ ಐಶ್ವರ್ಯಾ ರಾವ್ ಕೂಡಾ ಹೊಸಾ ಪ್ರತಿಭೆಯೇ. ಕಾಲೇಜು ದಿನಗಳಲ್ಲಿ ನೃತ್ಯದತ್ತ ಕದಲಿದ ಹೆಜ್ಜೆಗಳೇ ಐಶ್ವರ್ಯಾರನ್ನು ನಟಿಯಾಗಿ ರೂಪುಗೊಳ್ಳುವಂತೆ ಮಾಡಿದ್ದೊಂದು ಚೆಂದದ ಕಥೆ. ಅದನ್ನು ರವಿ ಹಿಸ್ಟರಿಯಲ್ಲಿನ ಪಾತ್ರವೇ ಮತ್ತಷ್ಟು ರೋಚಕವಾಗಿಸೋ ಭರವಸೆ ಐಶ್ವರ್ಯಾರದ್ದು.

    ಹೀಗೆ ರವಿಹಿಸ್ಟರಿಯ ನಾಯಕಿಯಾಗಿ ಎಂಟ್ರಿ ಕೊಡುತ್ತಿರೋ ಐಶ್ವರ್ಯಾ ಮೂಲವಿರೋದು ಉಡುಪಿಯಲ್ಲಿ. ಕನ್ನಡದ ಕವಯತ್ರಿ ಸುಜಾತಾ ಅವರ ಪುತ್ರಿಯಾದ ಐಶ್ವರ್ಯಾ ಬೆಳೆದದ್ದೆಲ್ಲ ಮೈಸೂರಿನಲ್ಲಿಯೇ. ಡಾಲಿ ಧನಂಜಯ್ ಥರದ ಪ್ರತಿಭೆಗಳು ಅರಳಿಕೊಂಡ ಸಂಸ್ಥೆಯಲ್ಲಿಯೇ ನಟನಾ ತರಬೇತಿಯನ್ನೂ ಪಡೆದುಕೊಂಡಿರೋ ಐಶ್ವರ್ಯಾ ಮೂಲತಃ ನೃತ್ಯಗಾರ್ತಿ. ಇವರ ಪಾಲಿಗೆ ರವಿ ಹಿಸ್ಟರಿಯ ನಾಯಕಿಯಾಗೋ ಅವಕಾಶ ಕೂಡಿ ಬಂದಿದ್ದೇ ಆಕಸ್ಮಿಕವಾಗಿ.

    ರವಿ ಹಿಸ್ಟರಿ ಚಿತ್ರಕ್ಕೆ ಐಶ್ವರ್ಯಾ ಆಡಿಷನ್ ಮೂಲಕವೇ ಆಯ್ಕೆಯಾಗಿದ್ದರು. ಚಿತ್ರೀಕರಣಕ್ಕೂ ಮುಂಚೆ ವರ್ಕ್ ಶಾಪ್ ಗೆ ಹಾಜರಾಗಿ ಅಲ್ಲಿ ಸಂಪೂರ್ಣ ತರಬೇತಿಯನ್ನೂ ಕೂಡಾ ಐಶ್ವರ್ಯಾ ಪಡೆದುಕೊಂಡಿದ್ದರು. ನಿರ್ದೇಶಕರು ಸೇರಿದಂತೆ ಎಲ್ಲರೂ ಪ್ರತೀ ಹಂತದಲ್ಲಿಯೂ ಆತ್ಮೀಯವಾಗಿಯೇ ತಿದ್ದುತ್ತಾ ಈ ಪಾತ್ರಕ್ಕೆ ಪರಿಣಾಮಕಾರಿಯಾಗಿ ಜೀವ ತುಂಬಲು ಸಹಕರಿಸಿದರೆಂಬ ಧನ್ಯತಾಭಾವ ಐಶ್ವರ್ಯಾಗಿದೆ.

    ಈ ಚಿತ್ರದಲ್ಲಿ ಐಶ್ವರ್ಯಾರದ್ದು ಕಾಲೇಜು ಹುಡುಗಿಯ ಪಾತ್ರ. ಇಂಜಿನಿಯರಿಂಗ್ ಓದುತ್ತಿರೋ ಹುಡುಗಿಯಾಗಿ ಅವರು ನಟಿಸಿದ್ದಾರೆ. ಪಕ್ಕಾ ಬೋಲ್ಡ್ ಶೇಡಿನ ಈ ಪಾತ್ರ ಯಾವುದೇ ಸನ್ನಿವೇಶಕ್ಕಾದರೂ ಹಿಂದೆ ಮುಂದೆ ನೋಡದೇ ರಿಯಾಕ್ಟ್ ಮಾಡುತ್ತೆ. ಎಂಥಾ ಸಂದರ್ಭವಿದ್ದರೂ ಮುನ್ನುಗ್ಗುತ್ತೆ. ಅಂಥಾದ್ದೊಂದು ಪಾತ್ರವನ್ನು ಎಂಜಾಯ್ ಮಾಡುತ್ತಲೇ ನಿಭಾಯಿಸಿರುವ ಐಶ್ವರ್ಯಾ ಈ ಮೂಲಕ ಮತ್ತಷ್ಟು ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುವ ನಿರೀಕ್ಷೆ ಹೊಂದಿದ್ದಾರೆ.

    ಸಾಮಾನ್ಯವಾಗಿ ಯಾರೇ ಹೆಣ್ಣುಮಕ್ಕಳು ನಟಿಯಾಗ ಬೇಕೆಂಬ ಆಸೆಯಿಟ್ಟುಕೊಂಡರೆ ಮೊದಲು ವಿರೋಧ ವ್ಯಕ್ತವಾಗೋದೇ ಮನೆ ಮಂದಿಯಿಂದ. ಆದರೆ ಈ ವಿಚಾರದಲ್ಲಿ ಐಶ್ವರ್ಯಾ ಅದೃಷ್ಟವಂತೆ. ಯಾಕೆಂದರೆ ಬಾಲ್ಯದಿಂದಲೂ ಮಗಳಿಗೆ ಅಪ್ಪಟ ಸಾಹಿತ್ಯಕ ವಾತಾವರಣವನ್ನು ಸೃಷ್ಟಿ ಮಾಡಿಕೊಟ್ಟಿದ್ದವರು ಅವರಮ್ಮ ಸುಜಾತ. ಸ್ವತಃ ಕವಯತ್ರಿ, ಕಥೆಗಾರ್ತಿಯೂ ಆಗಿರುವ ಸುಜಾತಾ ಅವರು ಚೌಕಟ್ಟುಗಳಾಚೆಗೆ ಆಲೋಚಿಸುತ್ತಾ ಬದುಕುವ ಕ್ರಮವನ್ನು ಮಗಳಿಗೂ ಕಲಿಸಿದ್ದರು. ಸ್ವತಃ ನಟಿಯಾಗಬೇಕೆಂದು ಆಸೆ ಹೊಂದಿದ್ದ ಸುಜಾತಾರಿಗೆ ಕೆಲ ಕಟ್ಟುಪಾಡುಗಳಿಂದ ಅದು ಸಾಧ್ಯವಾಗಿರಲಿಲ್ಲ. ಆದ್ದರಿಂದಲೇ ಮಗಳ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಇರಾದೆಯಿಂದಲೇ ಐಶ್ವರ್ಯಾರ ಆಸಕ್ತಿಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದ್ದರು.

    ಅಮ್ಮನ ಇಂಥಾ ಪ್ರೋತ್ಸಾಹದಿಂದಲೇ ಮರಿಮಲ್ಲಪ್ಪ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗಲೇ ಐಶ್ವರ್ಯಾ ನೃತ್ಯಪಟುವಾಗಿ ಹೊರಹೊಮ್ಮಿದ್ದರು. ಸಾಲ್ಸಾ, ಬೆಲ್ಲಿ ಡ್ಯಾನ್ಸ್ ಮುಂತಾದ ನೃತ್ಯ ಪ್ರಾಕಾರಗಳಲ್ಲಿ ಪಾರಂಗತೆಯಾಗಿರುವ ಐಶ್ವರ್ಯಾ ಇದುವರೆಗೂ ಐವತ್ತಕ್ಕೂ ಹೆಚ್ಚು ಯಶಸ್ವೀ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಕಾಲೇಜು ದಿನಗಳಲ್ಲಿಯೇ ಐಶ್ವರ್ಯಾ ನೃತ್ಯ ಪ್ರದರ್ಶನವೊಂದನ್ನು ನೋಡಿದವರೊಬ್ಬರು ಸಿನಿಮಾ ಆಫರ್ ಕೊಟ್ಟಿದ್ದರಂತೆ. ಐಶ್ವರ್ಯಾ ಮನೇಲಿ ಬಂದು ಮಾತಾಡಿ ಅಂದಾಗ ಅಮ್ಮ ಸುಜಾತಾರಿಗೂ ಕಥೆ ಹೇಳಿದ್ದರಂತೆ. ಆ ಮೂಲಕವೇ ಐಶ್ವರ್ಯಾ ನಟಿಯಾಗಿ ಪಾದಾರ್ಪಣೆ ಮಾಡಿದ್ದರು. ವಿಶೇಷವೆಂದರೆ, ರವಿ ಹಿಸ್ಟರಿಗಿಂತಲೂ ಮೊದಲೇ ಅವರು ಒಂದಷ್ಟು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ರಣಹೇಡಿ, ಬಡ್ಡಿ ಮಗಂದ್ ಲೈಫು, ಮೈಸೂರ್ ಡೈರೀಸ್ ಮುಂತಾದ ಚಿತ್ರಗಳಲ್ಲಿ ಐಶ್ವರ್ಯಾ ನಾಯಕಿಯಾಗಿದ್ದಾರೆ.

    ಆದರೆ ರವಿ ಹಿಸ್ಟರಿಯೇ ಅವರ ಮೊದಲ ಚಿತ್ರವಾಗಿ ದಾಖಲಾಗೋ ಲಕ್ಷಣಗಳಿವೆ. ರಣಹೇಡಿ ಮುಂತಾದ ಚಿತ್ರಗಳಲ್ಲಿ ಸವಾಲಿನ ಪಾತ್ರಗಳಲ್ಲಿ ನಟಿಸಿರೋ ಐಶ್ವರ್ಯಾಗೆ ಅಂಥಾ ಪಾತ್ರಗಳ ಮೂಲಕವೇ ಜನರ ಮನಸು ಗೆಲ್ಲೋ ಆಸೆ. ಈಗಾಗಲೇ ಅವರ ಮುಂದೆ ಸಾಲು ಸಾಲು ಅವಕಾಶಗಳಿವೆ. ಅದೆಲ್ಲವನ್ನೂ ಎಚ್ಚರದಿಂದಲೇ ಪರಾಮರ್ಶಿಸಿ ಒಪ್ಪಿಕೊಳ್ಳುತ್ತಿರೋ ಐಶ್ವರ್ಯಾ ಕನ್ನಡ ಚಿತ್ರರಂಗದ ಐಶ್ವರ್ಯದಂಥಾ ನಟಿಯಾಗೋ ಲಕ್ಷಣಗಳೇ ಹೆಚ್ಚಾಗಿವೆ.