Tag: Rana George

  • ಸಚಿವ ಜಾರ್ಜ್ ಪುತ್ರ ರಾಣಾಗೆ ರಿಲೀಫ್ – ನುಗು ಅಭಯಾರಣ್ಯ ರಸ್ತೆಯಲ್ಲಿ ರಾತ್ರಿ ಸಂಚಾರಕ್ಕೆ ಹೈಕೋರ್ಟ್ ಅಸ್ತು

    ಸಚಿವ ಜಾರ್ಜ್ ಪುತ್ರ ರಾಣಾಗೆ ರಿಲೀಫ್ – ನುಗು ಅಭಯಾರಣ್ಯ ರಸ್ತೆಯಲ್ಲಿ ರಾತ್ರಿ ಸಂಚಾರಕ್ಕೆ ಹೈಕೋರ್ಟ್ ಅಸ್ತು

    ಬೆಂಗಳೂರು: ರಾತ್ರಿ ಹೊತ್ತು ತಮ್ಮ ಜಮೀನಿಗೆ ನುಗು ವನ್ಯಜೀವಿ ಅಭಯಾರಣ್ಯದಲ್ಲಿನ ರಸ್ತೆ ಬಳಸಲು ಸಚಿವ ಕೆ.ಜೆ ಜಾರ್ಜ್ ಪುತ್ರ ರಾಣಾ ಜಾರ್ಜ್‌ಗೆ ಹೈಕೋರ್ಟ್‌ ಅನುಮತಿ ನೀಡಿದೆ.

    ರಾತ್ರಿ ಹೊತ್ತು ತಮ್ಮ ಜಮೀನಿಗೆ ತೆರಳಲು ಅಭಯಾರಣ್ಯದಲ್ಲಿ ಹಾದುಹೋಗಲು ಅನುಮತಿ ನೀಡುವಂತೆ ರಾಣಾ ಜಾರ್ಜ್ ಹೈಕೋರ್ಟ್‌ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ವನ್ಯಜೀವಿಗಳಿಗೆ ತೊಂದರೆಯಾಗದಂತೆ ಸಂಚಾರ ನಡೆಸುವಂತೆ ಆದೇಶಿಸಿದೆ.

    ರಾಣಾ ಜಾರ್ಜ್‌ ಅವರ ಜಮೀನು, ಹೆಚ್‌ಡಿ ಕೋಟೆಯ ಶಂಬುಗೌಡನಹಳ್ಳಿ ಮತ್ತು ಲಕ್ಕಸೋಗೆ ಗ್ರಾಮಗಳಲ್ಲಿದೆ. ಇಲ್ಲಿಗೆ ನುಗು ವನ್ಯಜೀವಿ ಅಭಯಾರಣ್ಯದ ರಸ್ತೆ ಮಾರ್ಗ ಮೂಲಕ ರಾತ್ರಿ-ಹಗಲು ಓಡಾಡಲು ಅನುಮತಿ ಕೋರಲಾಗಿತ್ತು. ರಾತ್ರಿ, ಹಗಲು ಸಂಚಾರಕ್ಕೆ ಅನುಮತಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

  • ಮತ್ತೊಮ್ಮೆ ತಂದೆಯ ಅಧಿಕಾರ ದುರುಪಯೋಗಪಡಿಸಲು ಮುಂದಾದ ಸಚಿವ ಕೆ.ಜೆ ಜಾರ್ಜ್ ಪುತ್ರ!

    ಮತ್ತೊಮ್ಮೆ ತಂದೆಯ ಅಧಿಕಾರ ದುರುಪಯೋಗಪಡಿಸಲು ಮುಂದಾದ ಸಚಿವ ಕೆ.ಜೆ ಜಾರ್ಜ್ ಪುತ್ರ!

    ಬೆಂಗಳೂರು: ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಪುತ್ರ ರಾಣಾ ಜಾರ್ಜ್, ತಮ್ಮ ತಂದೆಯ ಅಧಿಕಾರ ದುರುಪಯೋಗ ಮಾಡಿಕೊಳ್ಳಲು ಮುಂದಾಗಿದ್ದಾರೆ.

    ರಾಣಾ ಜಾರ್ಜ್ ಕಾಡಿನಲ್ಲಿ ಸುತ್ತಾಡಿಕೊಂಡು ಮಜಾ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದು, ಕಾಡಿನ ರಾಜನಾಗಿ ಮೆರದಾಡುತ್ತಿದ್ದ ವಿಚಾರ ಈ ಹಿಂದೆ ಸುದ್ದಿಯಾಗಿತ್ತು. ಇದೀಗ ಮತ್ತೆ ಅರಣ್ಯದೊಳಗೆ ತನ್ನ ರೇಂಜ್ ರೋವರ್ ಕಾರಿನಲ್ಲಿ ಸವಾರಿ ಮಾಡೋಕೆ ಅನುಮತಿ ಕೇಳಿದ್ದಾರೆ. ಜೊತೆಗೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಹೈ ಇನ್ ಪ್ಲ್ಯೂಯೆನ್ಸ್ ಮಾಡಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಬೆಂಗಳೂರಿಗೆ ಸಚಿವ ಕೆ.ಜೆ. ಜಾರ್ಜ್ ರಾಜನಾದ್ರೆ, ಮಗ ಕಾಡಿಗೆ ರಾಜ!

    ಸ್ವಂತ ವಾಹನದಲ್ಲಿ ಪರ್ಮನೆಂಟ್ ಆಗಿ ಸಂಚಾರ ಮಾಡಲು ಅನುಮತಿ ನೀಡಬೇಕು ಅಂತ ಅರಣ್ಯ ಇಲಾಖೆಗೆ ಕೋರಿರುವ ಪತತಿದೀಗ ಪಬ್ಲಿಕ್ ಟಿವಿಗೆ ಲಭಿಸಿದೆ. ಅರಣ್ಯ ಇಲಾಖೆಯ ಬೋರ್ಡ್ ಮೆಂಬರ್ ಆಗಿರುವ ರಾಣಾ, ಈ ಹಿಂದೆ ಸ್ನೇಹಿತರ ಜೊತೆ ಕಾಡಿನೊಳಗೆ ಹೋಗಿ ಎಣ್ಣೆ ಪಾರ್ಟಿ ಮಾಡಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

    ಇದಕ್ಕೂ ಮೊದಲು ಜಾರ್ಜ್ ಗೃಹಸಚಿವರಾಗಿದ್ದಾಗ ರಾಣಾ ತನ್ನ ತಂದೆ ಮಿನಿಸ್ಟರ್ ಅನ್ನೋ ದರ್ಪದಿಂದ ತನ್ನ ತಾಯಿ ಹಾಗೂ ಸ್ನೇಹಿತರೊಂದಿಗೆ ಬಂಡೀಪುರ ಅರಣ್ಯದೊಳಗೆ ಸ್ವಂತ ವಾಹನ ನುಗ್ಗಲು ಯತ್ನಿಸಿದ್ರು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಇವ್ರ ಮಾತಿಗೆ ಸೊಪ್ಪು ಹಾಕಿರಲಿಲ್ಲ. ಆ ವೇಳೆ ಅಧಿಕಾರಿಗಳ ಬಳಿ ಚಾಲೆಂಜ್ ಮಾಡಿದ್ದ ರಾಣಾ ಜಾರ್ಜ್, ನನ್ನನ್ನೇ ಬಿಡಲ್ಲ ಅಂತೀರಾ, ಮುದೊಂದು ದಿನ ನಿಮ್ಮ ಕಣ್ಣೆದುರೇ ನನ್ನ ವಾಹನದಲ್ಲಿ ಸವಾರಿ ಮಾಡ್ತೀನಿ ನೋಡ್ತಾ ಇರಿ ಅಂತಾ ತೊಡೆ ತಟ್ಟಿ ಬಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ಬೆಂಗಳೂರಿಗೆ ಸಚಿವ ಕೆ.ಜೆ. ಜಾರ್ಜ್ ರಾಜನಾದ್ರೆ, ಮಗ ಕಾಡಿಗೆ ರಾಜ!

    ಬೆಂಗಳೂರಿಗೆ ಸಚಿವ ಕೆ.ಜೆ. ಜಾರ್ಜ್ ರಾಜನಾದ್ರೆ, ಮಗ ಕಾಡಿಗೆ ರಾಜ!

    ಬೆಂಗಳೂರು: ಕಾಡಿನೊಳಗೆ ಸ್ವಂತ ವಾಹನದಲ್ಲಿ ಹೋಗಿ ಮೋಜು-ಮಸ್ತಿ ಮಾಡಿ ಸದ್ದು ಮಾಡಿದ್ದ ರಾಣಾ, ಈಗ ತನ್ನ ತಂದೆ ಬೆಂಗಳೂರು ಉಸ್ತುವಾರಿ ಸಚಿವ ಕೆಜೆ ಜಾರ್ಜ್ ಮೂಲಕ ಸಿಎಂಗೆ ಪ್ರಭಾವ ಬೀರಿ ಅರಣ್ಯ ಇಲಾಖೆಯಲ್ಲಿ  ಹೊಸ ಹುದ್ದೆಯನ್ನು ಸೃಷ್ಟಿಸಿದ್ದಾರೆ.

    ಹೌದು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನತಿ ಶ್ರೀಧರ್ ದಕ್ಷ ಅಧಿಕಾರಿಯಾಗಿದ್ದು ಜಾರ್ಜ್ ಮಗ ರಾಣಾ ಹಸ್ತಕ್ಷೇಪ ಮಾಡಿದರೆ ಸಹಿಸುತ್ತಿರಲಿಲ್ಲ. ಇದು ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾಗಿರುವ ರಾಣಾರನ್ನ ಕೆರಳಿಸಿದೆ. ಈಗ ಪುನತಿ ಶ್ರೀಧರ್ ಕೈಕೆಳಗೆ ಕೆಲಸ ಮಾಡುತ್ತಿದ್ದ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಈಗ ಪುನತಿ ಶ್ರೀಧರ್‍ಗಿಂತ ಉನ್ನತ ಶ್ರೇಣಿಯ ವನ್ಯಜೀವಿ ಪರಿಪಾಲಕ ಸೃಷ್ಟಿ ಮಾಡಿ ಅರಣ್ಯ ಇಲಾಖೆಯೊಳಗೆ ಡರ್ಟಿ ಪಾಲಿಟಿಕ್ಸ್ ನಡೆಸಿದ್ದಾರೆ.

    ತನ್ನ ಮೋಜು ಮಸ್ತಿಗಾಗಿ ಕಾಡಿನೊಳಗೆ ಹೋಗಿ ಕುಡಿದು ಮಜಾ ಮಾಡುವುದಕ್ಕೆ ರಾಣಾ ಅರಣ್ಯ ಇಲಾಖೆಯನ್ನು ಬಲಿಕೊಡುತ್ತಿರುವುದು ಎಷ್ಟು ಸರಿ ಇನ್ನುವ ಪ್ರಶ್ನೆ ಹಿಂದೆಯೇ ಎದ್ದಿತ್ತು. ಈಗ ತನಗೆ ಬೇಕಾದವರನ್ನು ಆಯಕಟ್ಟಿನ ಸ್ಥಳಕ್ಕೆ ನೇಮಿಸುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

    ಆರೋಪ ಮಾಡಬೇಡಿ: ನನ್ನ ಮಗ ಅರಣ್ಯ ಇಲಾಖೆಯಲ್ಲಿ ಯಾರನ್ನು ವರ್ಗಾವಣೆ ಮಾಡುವ ಇಲ್ಲವೇ ಉನ್ನತ ಹುದ್ದೆ ನೀಡುವಂತ ಸ್ಥಾನದಲ್ಲಿ ಇಲ್ಲ. ಹಾಗೇನಾದರೂ ನಿಯಮ ಮೀರಿ ಯಾರಿಗಾದರು ಉನ್ನತ ಹುದ್ದೆ ನೀಡಿದರೆ ಸಿಎಂ ಹಾಗೂ ಅರಣ್ಯ ಸಚಿವರನ್ನು ಕೇಳಿ. ನನ್ನ ಮಗನ ಮೇಲೆ ಸುಳ್ಳು ಆರೋಪ ಮಾಡುವುದು ಬೇಡ. ನನ್ನ ಮಗನ ವಿರುದ್ಧ ದಾಖಲೆಗಳಿದ್ದರೆ ಕೊಡಿ ಎಂದು ಬೆಂಗಳೂರಿನಲ್ಲಿ ಸಚಿವ ಕೆಜೆ ಜಾರ್ಜ್ ಪ್ರತಿಕ್ರಿಯಿಸಿದ್ದಾರೆ.