Tag: Ramya Shetty

  • ಮದ್ಯ ಇಟ್ಟುಕೊಳ್ಳಲು ಮಠ ಬಾರ್ ಆಂಡ್ ರೆಸ್ಟೋರೆಂಟ್ ಅಲ್ಲ: ಶಿರೂರು ಶ್ರೀ ಬೆನ್ನಿಗೆ ನಿಂತ ಬಾರ್ಕೂರು ಶ್ರೀ

    ಮದ್ಯ ಇಟ್ಟುಕೊಳ್ಳಲು ಮಠ ಬಾರ್ ಆಂಡ್ ರೆಸ್ಟೋರೆಂಟ್ ಅಲ್ಲ: ಶಿರೂರು ಶ್ರೀ ಬೆನ್ನಿಗೆ ನಿಂತ ಬಾರ್ಕೂರು ಶ್ರೀ

    ಕಾರವಾರ: ಉಡುಪಿಯ ಶಿರೂರು ಶ್ರೀ ಮೃತಪಟ್ಟ ಐದು ದಿನಗಳಲ್ಲಿ ಮಠದಲ್ಲಿ ನಾಲ್ಕೂವರೆ ಲಕ್ಷ ರೂ. ಮದ್ಯ ಸಿಕ್ಕಿದೆ ಎಂಬುದು ಅಸಂಬದ್ಧ. ನಾಲ್ಕೂವರೆ ಲಕ್ಷದಷ್ಟು ಮದ್ಯ ಇಟ್ಟುಕೊಳ್ಳಲು ಅದೇನು ಬಾರ್ ಆಂಡ್ ರೆಸ್ಟೋರೆಂಟ್ ಅಲ್ಲ. ಇದು ಸಾಧ್ಯವೇ ಇಲ್ಲ ಅಂತ ಬಾರ್ಕೂರು ಮಠದ ಪೀಠಾಧಿಪತಿ ಸಂತೋಷ್ ಗುರೂಜಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

    ಅಂಕೋಲದ ಬಾಸ್ಗೋಡಿನಲ್ಲಿ ಪಹರೆ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉಡುಪಿಯ ಶಿರೂರು ಶ್ರೀ ವಿಧಿವಶರಾದ ಮೇಲೆ ಅವರ ಮೇಲೆ ಇರುವ ಹಗೆತನ ಕಡಿಮೆಯಾಗಿಲ್ಲ. ಶ್ರೀಗಳು ಸತ್ತಮೇಲೂ ಆರೋಪ ನಡೆಯುತ್ತಿದೆ ಎಂದರೆ ಅವರು ಸಾಯುವ ಮುಂಚೆ ಬೇರೆ ಶಕ್ತಿ ಕೆಲಸ ಮಾಡಿದೆ. ಯಾವ ಮಠದವರೂ ಮಾಡಿದ್ದಾರೋ ಅಥವಾ ಬೇರೆಯವರು ಮಾಡಿದ್ದಾರೋ ಗೊತ್ತಿಲ್ಲ. ಒಂದು ಸಮುದಾಯದವರಿಗೆ ಗುರುಗಳಾಗಿರುವ ಸ್ವಾಮೀಜಿ ಅವರ ಹತ್ಯೆಯಾಗಿದೆ. ಪೊಲೀಸರಿಗೆ ಅಷ್ಟ ಮಠಗಳು ಸಹಕಾರ ನೀಡಬೇಕೇ ವಿನಾಃ ಬೇರೆ ರೀತಿ ಮಾಡಬಾರದು ಅಂತ ಹಳಿದ್ರು.

    ರಮ್ಯ ಶಟ್ಟಿಯನ್ನು ಅಪರಾಧಿ ಎಂದು ಬಿಂಬಿತ ಮಾಡಲಾಗಿದೆ. ಆಕೆ ಆರೀತಿ ಇಲ್ಲ. ಆಕೆ ಒಂದು ಹೆಣ್ಣುಮಗಳಾಗಿ ಹೇಳಬೇಕೆಂದರೆ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನ ಕುತ್ತಿಗೆ ಕೊಯ್ದು ಹಾಕುವಷ್ಟು ದಡ್ಡಿಯಲ್ಲ. ಮಠದಲ್ಲಿ ನಾಲ್ಕೂವರೆ ಲಕ್ಷದಷ್ಟು ಮದ್ಯ ಇಟ್ಟುಕೊಳ್ಳಲು ಅದೇನು ಬಾರ್ ಆಂಡ್ ರೆಸ್ಟೋರೆಂಟ್ ಅಲ್ಲ. ಇದು ಸಾಧ್ಯವೇ ಇಲ್ಲ. ಗಡಿಬಿಡಿಯಲ್ಲಿ ಎಲ್ಲರೂ ತಂದು ಅಲ್ಲಿ ಇಟ್ಟಿದ್ದಾರೆ. ಎಲ್ಲರೂ ಅಲ್ಲಿ ಬಾಟಲಿ ಇಡಲು ಹೋಗಿ ಅಸಂಬದ್ಧವಾಗಿದೆ. ಮಠದಲ್ಲಿ ತುಳಸಿದಳ ಬೀಳಿಸುವುದಕ್ಕಿಂತ ಹೆಚ್ಚಾಗಿ ಬಾಟಲಿ ಬೀಳಿಸಿದ್ದು, ಅವರನ್ನು ದೂಷಣೆ ಮಾಡುವುದಕ್ಕಿಂತ ಹೆಚ್ಚಾಗಿ ಹಿಂದೂ ಧರ್ಮದ ಮೇಲೆ ಬಿದ್ದಿರುವ ಆಘಾತ ಎಂದು ಟೀಕಿಸಿದ್ರು.

    ಪೇಜಾವರ ಶ್ರೀ ವಿರುದ್ಧ ಕಿಡಿ:
    ಪೇಜಾವರ ಶ್ರೀಗಳು ಶಿರೂರು ಶ್ರೀಗಳನ್ನು ಸ್ವಾಮಿಗಳೇ ಅಲ್ಲ ಎಂದಿದ್ದಾರೆ. ಮೊನ್ನೆ ನಡೆದ ಪರ್ಯಾಯದಲ್ಲಿ ಅವರನ್ನು ಯಾಕೆ ಕೂರಿಸಿದ್ದರು? 43 ವರ್ಷ ಪೀಠದಲ್ಲಿ ಶಿರೂರು ಶ್ರೀಗಳಿದ್ದರು ಇಲ್ಲಿವರೆಗೆ ಯಾಕೆ ಪೇಜಾವರ ಶ್ರೀಗಳು ಹೇಳಲಿಲ್ಲ. ಎಲ್ಲರೂ ಒಂದಲ್ಲ ಒಂದು ದಿನ ತಪ್ಪು ಮಾಡಿರಬಹುದು. ಆದರೇ ವಿಧಿವಶರಾದ ಮೇಲೆ ಎತ್ತಿ ಆಡುವುದು ಸೌಜನ್ಯವಲ್ಲ. ಶಿರೂರು ಶ್ರೀಗಳನ್ನು ಮುಂಚೆಯೇ ಸರಿಮಾಡಬೇಕಿತ್ತು. ಪೀಠದಿಂದ ಇಳಿಸಬೇಕಿತ್ತು. ಒತ್ತಡ ಹೇರಬೇಕಿತ್ತು. ಆಜ್ಞೆ ಹೊರಡಿಸಬಹುದಿತ್ತು. ಆದರೇ ಈಗ ಸನ್ಯಾಸಿಯಲ್ಲ ಎನ್ನುವುದು ಸರಿಯಲ್ಲ ಅಂದು ಪೇಜಾವರ ಶ್ರೀ ವಿರುದ್ಧ ಕಿಡಿಕಾರಿದ್ರು.

    ಕುಡುಕ ಅಂದ ಇತಿಹಾಸವೇ ಇಲ್ಲ:
    ಇಲ್ಲಿಯವರೆಗೆ ಅವರು ಬದುಕಿದ್ದಾಗ ಶಿರೂರು ಶ್ರೀ ಕುಡುಕ ಎಂದು ಹೇಳಿದ ಇತಿಹಾಸ ಉಡುಪಿಯಲ್ಲಿಲ್ಲ. ಶಿರೂರು ಶ್ರೀಗಳಿಗೆ ಆರೋಗ್ಯ ಸರಿಯಿಲ್ಲದ ಕಾರಣ ಪಟ್ಟದ ದೇವರನ್ನು ಬೇರೊಬ್ಬ ಸ್ವಾಮೀಜಿಗೆ ಕೊಟ್ಟದ್ದು ನಿಜ. ಆದರೇ ಮರಳಿ ನೀಡದ್ದಕ್ಕೆ ವಕೀಲ ರವಿ ಕಿರಣ್ ಮುರಡೇಶ್ವ ರನ್ನು ಭೇಟಿ ಮಾಡಿ ಕೇಸ್ ಹಾಕಲು ತೀರ್ಮಾನ ಆಗಿತ್ತು. ಅದು ಮಠಾಧೀಶರಿಗೆ ಸರಿಬರಲಿಲ್ಲ ಅಂತ ಹೇಳಿದ ಅವರು, ಶಿರೂರು ಮಠಕ್ಕೆ ಬಾಲ ಸನ್ಯಾಸಿಗಳನ್ನು ಪೀಠಾಧಿಪತಿ ಮಾಡುವ ಬದಲು ವಯಸ್ಕರನ್ನು ಪೀಠಾಧಿಪತಿ ಮಾಡುವ ಕುರಿತು ಪೇಜಾವರ ಶ್ರೀಗಳ ಮಾತಿಗೆ ಸಹಮತ ವ್ಯಕ್ತಪಡಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಶಿರೂರು ಶ್ರೀ ಕೇಸ್ – ಉಡುಪಿ ವ್ಯಕ್ತಿ ವಶಕ್ಕೆ, ಆಪ್ತೆ ರಮ್ಯಾ  ಶೆಟ್ಟಿ ಎಲ್ಲಿದ್ದಾಳೆ?

    ಶಿರೂರು ಶ್ರೀ ಕೇಸ್ – ಉಡುಪಿ ವ್ಯಕ್ತಿ ವಶಕ್ಕೆ, ಆಪ್ತೆ ರಮ್ಯಾ ಶೆಟ್ಟಿ ಎಲ್ಲಿದ್ದಾಳೆ?

    ಉಡುಪಿ: ಶಿರೂರು ಶ್ರೀ ಅನುಮಾನಾಸ್ಪದ ಸಾವಿನ ಪ್ರಕರಣದ ಕೇಳಿಬಂದಿದ್ದ ಶ್ರೀಗಳ ಆಪ್ತೆ ರಮ್ಯಾ ಶೆಟ್ಟಿ ಎಲ್ಲಿದ್ದಾಳೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

    ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಉಡುಪಿಯ ಕೊರಂಗ್ರಪಾಡಿಯ ಮನೆಯಲ್ಲಿ ವಾಸವಿದ್ದ ರಮ್ಯಾ ಶೆಟ್ಟಿ ನಾಪತ್ತೆ ಆಗಿದ್ದಾರೆ. ಮನೆಗೆ ಬೀಗ ಹಾಕಲಾಗಿದ್ದು, ಪೊಲೀಸ್ ವಶದಲ್ಲಿಯೂ ರಮ್ಯಾ ಇಲ್ಲ ಅಂತಾ ಐಜಿಪಿ ಮತ್ತು ಎಸ್.ಪಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ರಮ್ಯಾ ಶೆಟ್ಟಿ ಎಲ್ಲಿದ್ದಾಳೆ ಎನ್ನುವುದು ಇನ್ನೂ ನಿಗೂಢವಾಗಿದೆ.

    ಇಕ್ಬಾಲ್ ಮನ್ಸೂರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಕ್ಬಾಲ್ ಉಡುಪಿಯ ಕಾಪು ಮಜೂರು ನಿವಾಸಿಯಾಗಿದ್ದು, ರಮ್ಯಾ ಶೆಟ್ಟಿಯ ಗೆಳೆಯ ಎನ್ನಲಾಗಿದೆ. ಇಬ್ಬರು ನಿಕಟ ಸಂಪರ್ಕ ಹೊಂದಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಇದನ್ನು ಓದಿ: ರಾಮ ವಿಠಲ ದೇವರಿಗೆ ಪೇಜಾವರಶ್ರೀ ನೃತ್ಯ ಸೇವೆ

    ಮುಂಬೈನಲ್ಲಿ ರಮ್ಯಾಗೆ ಇಕ್ಬಾಲ್ ಮನ್ಸೂರ್ ಪರಿಚಯವಾಗಿದ್ದು, ಶಿರೂರು ಸ್ವಾಮೀಜಿ ಸಾವಿನ ನಂತರ ರಮ್ಯಾ ಇಕ್ಬಾಲ್ ಜೊತೆ ಓಡಿ ಹೋಗಲು ಯತ್ನಿಸಿದ್ದಳೇ ಎನ್ನುವ ಪ್ರಶ್ನೆ ಎದ್ದಿದೆ.

    ಇಕ್ಬಾಲ್ ಸಂಬಂಧಿಕರು ರಮ್ಯಾಗೆ ಬುರ್ಕಾ ತೊಡಿಸಿ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ ಅಳದಂಗಡಿಯಲ್ಲಿ ಆ ಗುಂಪು ಸಿಕ್ಕಿಹಾಕಿಕೊಂಡಿತ್ತು. ನಂತರ ಇಬ್ಬರನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.

  • ಶಿರೂರು ಸ್ವಾಮೀಜಿ ಬಳಿಯಿದ್ದ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ನಾಪತ್ತೆ!

    ಶಿರೂರು ಸ್ವಾಮೀಜಿ ಬಳಿಯಿದ್ದ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ನಾಪತ್ತೆ!

    ಉಡುಪಿ: ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಶ್ರೀ ಶಂಕಾಸ್ಪದ ಸಾವು ಹಿನ್ನೆಲೆಯಲ್ಲಿ ಅವರ ಚಿನ್ನ ಕದ್ದವರ್ಯಾರು ಅನ್ನುವ ಸಂಶಯ ಶುರುವಾಗಿದೆ.

    ಸ್ವಾಮೀಜಿ ಬಳಿಯಿದ್ದ ಒಂದು ಕೋಟಿ ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿದೆ. ಸ್ವಾಮೀಜಿ ಬಳಿ ಸುಮಾರು 4 ಕೆ.ಜಿ ಚಿನ್ನಾಭರಣವಿದ್ದು, ಚಿನ್ನದ ಮೇಲೆ ಅವರಿಗೆ ಅತಿಯಾದ ವ್ಯಾಮೋಹವಿತ್ತು. ಶಿರೂರು ಶ್ರೀ 5 ಕಡಗಗಳು, ಚಿನ್ನದ ಮಾಲೆಗಳು, ತುಳಸಿ ಮಾಲೆ ಧರಿಸುತ್ತಿದ್ದರು. ನಾಲ್ಕೈದು ಉಂಗುರಗಳನ್ನು ತೊಡುತ್ತಿದ್ದರು. ಇದೀಗ ಸ್ವಾಮೀಜಿ ಆಸ್ಪತ್ರೆ ಸೇರಿದಾಗ ಬಂಗಾರ ಕಳ್ಳತನವಾಗಿರುವ ಶಂಕೆಯಿದೆ.

    ಚಿನ್ನ ಎಗರಿಸಿದ್ದು ರಮ್ಯಾ ಶೆಟ್ಟಿಯಾ ಎನ್ನುವ ಸಂಶಯವಿದೆ. ಯಾಕಂದ್ರೆ ರಮ್ಯಾ ಶ್ರೀಗಳ ಚಿನ್ನದ ಮೇಲೆ ವ್ಯಾಮೋಹಿತಳಾಗಿದ್ದಳು. ಫೋಟೋ ತೆಗೆಸಿಕೊಂಡಿದ್ದಳು. ಮಠದ, ಶ್ರೀಗಳ ಆಪ್ತರ ಮೇಲೂ ಸಂಶಯವಿದೆ. ಶಿರೂರು ಸ್ವಾಮೀಜಿ ನಡೆದುಕೊಂಡು ಹೋಗುವಾಗ ಬಂಗಾರದ ಭಾರಕ್ಕೆ ಅವರು ಕುಸಿದು ಹೋಗುತ್ತಾರಾ ಅನ್ನುವಷ್ಟು ಚಿನ್ನ ಅವರ ಕೊರಳಲ್ಲಿ ಇತ್ತು.

    ಮಠದಲ್ಲೇ ಆಭರಣ ಬಿಟ್ಟಿದ್ದ ಸ್ವಾಮೀಜಿ:
    ಸಾವಿಗೂ ಕೆಲ ದಿನಗಳ ಹಿಂದೆ ಸ್ವಾಮೀಜಿಯವರು ತನ್ನ ಬಳಿ 3 ಕೆ.ಜಿ ಚಿನ್ನ ಇದೆ ಅಂತ ಮಾಧ್ಯಮಗಳಿಗೆ ತಿಳಿಸಿದ್ದರು. 3 ಕೆ.ಜಿ ಚಿನ್ನವಾದರೆ ಈವಾಗಿನ ಮಾರುಕಟ್ಟೆಯಲ್ಲಿ ಸರಿಸುಮಾರು 75 ಲಕ್ಷ ರೂ. ಗೂ ಅಧಿಕವಾಗುತ್ತದೆ. ಸ್ವಾಮೀಜಿ ಅವರು ತಮ್ಮ ಕುತ್ತಿಗೆ ಮತ್ತು ಕೈಗಳಲ್ಲಿ ಸುಮಾರು 1 ಕೆ.ಜಿಯಷ್ಟು ಚಿನ್ನಭಾರಣಗಳನ್ನು ಧರಿಸುತ್ತಿದ್ದರು. ಅಂದ್ರೆ ಸರಿ ಸುಮಾರು 10ರಿಂದ 20 ಲಕ್ಷ ರೂ. ಮೌಲ್ಯದಷ್ಟು ಚಿನ್ನಾಭರಣಗಳನ್ನು ಪ್ರತೀ ದಿನ ತೊಡುತ್ತಿದ್ದರು. ಈ ಆಭರಣಗಳು ಪುರಾತನ ಕಾಲದ್ದಾಗಿದೆ. ಆದ್ದರಿಂದ ಅವುಗಳಿಗೆ ಮಾರುಕಟ್ಟೆ ಬೆಲೆಗಿಂತಲೂ ಅಧಿಕ ಕೋಟ್ಯಂತರ ಬೆಲೆ ಇದೆ ಅಂತ ಚಿನ್ನಾಭರಣ ತಜ್ಞರೊಬ್ಬರು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಸ್ವಾಮೀಜಿ ಮಣಿಪಾಲದ ಆಸ್ಪತ್ರೆಗೆ ಸೇರುವಾಗ ಅವರ ಮೈಮೇಲೆ ಚಿನ್ನಾಭರಣಗಳು ಇರಲಿಲ್ಲ. ಎಲ್ಲವನ್ನೂ ಮೂಲ ಮಠದಲ್ಲೇ ತೆಗೆದಿಟ್ಟು ಹೋಗಿದ್ದರು. ಆದ್ರೆ ಇದೀಗ ಅವುಗಳು ಏನಾಗಿದೆ? ಯಾರ ಕೈಯಲ್ಲಿವೆ ಅನ್ನೋದೇ ನಿಗೂಢವಾಗಿದ್ದು, ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

    ಮಹಿಳೆ ಲೂಟಿ ಆರೋಪ:
    ಸುಮಾರು 2 ವರ್ಷಗಳ ಹಿಂದಿನಿಂದ ಸ್ವಾಮೀಜಿಯವರಿಗೆ ಈ ಚಿನ್ನಾಭರಣಗಳನ್ನು ಧರಿಸಿಕೊಳ್ಳುವ ಖಯಾಲಿ ಆರಂಭವಾಗಿದೆ. ಅಂದ್ರೆ ಅವರ ಆಪ್ತ ಮಹಿಳೆಯೊಬ್ಬರು ಮಠಕ್ಕೆ ಸೇರಿಕೊಂಡ ಬಳಿಕ ಸ್ವಾಮೀಜಿ ಆಭರಣ ಧರಿಸಲು ಆರಂಭಿಸಿದ್ದಾರೆ. ಮೂಲತಃ ಸುಳ್ಯದವಳಾಗಿದ್ದರೂ ಆಕೆ ಮದುವೆಯಾಗಿ ಮುಂಬೈನಲ್ಲಿದ್ದವಳಾಗಿದ್ದಳು. ಹೀಗಾಗಿ ಆಕೆ ಚಿನ್ನದ ವ್ಯಾಪಾರಿಗಳನ್ನು ಮಠಕ್ಕೆ ಕರೆಸುತ್ತಿದ್ದು, ಅವರು 3-4 ತಿಂಗಳಿಗೊಮ್ಮೆ ತಮ್ಮೊಂದಿಗೆ ವೈವಿಧ್ಯಮಯ ಆ್ಯಂಟಿಕ್ ಆಭರಣಗಳನ್ನು ತರುತ್ತಿದ್ದರು. ಈ ವೇಳೆ ಆಕೆ ಆಭರಣಗಳನ್ನು ಆಯ್ಕೆ ಮಾಡುತ್ತಿದ್ದಳು, ಇನ್ನ ಸ್ವಾಮೀಜಿ ಹಣ ನೀಡುತ್ತಿದ್ದರು. ಈ ಆಭರಣಗಳನ್ನು ಆಕೆ ಮತ್ತು ಸ್ವಾಮೀಜಿ ಇಬ್ಬರೂ ಧರಿಸುತ್ತಿದ್ದರು. ಈ ಮೂಲಕ ಆಕೆ ಸ್ವಾಮೀಜಿ ಕೈಯಿಂದ ಲೂಟಿ ಮಾಡುತ್ತಿದ್ದಳು ಅಂತ ಮಠದ ಹಿಂದಿನ ಉಸ್ತುವಾರಿ ಸುನಿಲ್ ಕುಮಾರ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

    ಡಿವಿಆರ್ ಗಾಗಿ ನದಿಯಲ್ಲಿ ಶೋಧ:
    ಶಿರೂರು ಮೂಲಮಠದ ಎದುರುಗಡೆ ಸಿಸಿಟಿವಿ ಇತ್ತು. ಸ್ವಾಮೀಜಿ ಅವರ ನಿಧನದ ಬಳಿಕ ಈ ಸಿಸಿಟಿವಿಯ ಡಿವಿಆರ್ ನಾಪತ್ತೆಯಾಗಿತ್ತು. ಹೀಗಾಗಿ ಎರಡು ದಿನದಿಂದ ಡಿವಿಆರ್ ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಸದ್ಯ ಡಿವಿಆರ್ ಗಾಗಿ ಇಂದು ಹಿರಿಯಡ್ಕ ಸಮೀಪ ಸ್ವರ್ಣಾ ನದಿಯಲ್ಲಿ ಹುಡುಕಾಟ ನಡೆಸಲಾಗಿತ್ತು.

    ಶೀರೂರು ಮೂಲ ಮಠದ ಪಕ್ಕದಲ್ಲಿ ಸ್ವರ್ಣಾ ನದಿ ಇದೆ. ದೋಣಿ, ತೆಪ್ಪ ಬಳಸಿ ಡಿವಿಆರ್ ಗಾಗಿ ಹುಡುಕಾಟ ನಡಸಲಾಗಿದೆ. ಅಲ್ಲದೇ ಮುಳುಗು ತಜ್ಞರಿಂದ ಆಯಸ್ಕಾಂತ ಮುಳುಗಿಸಿ ಕಬ್ಬಿಣದ ಡಿವಿಆರ್ ಮೇಲಕ್ಕೆಳೆಯಲು ಪ್ರಯತ್ನ ಮಾಡಲಾಗಿದೆ. ಆದ್ರೆ ಡಿವಿಆರ್ ನೀರಿಗೆಸೆದವರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ.

  • ಶಿರೂರು ಶ್ರೀ, ರಮ್ಯಾ ಶೆಟ್ಟಿಯ ನಡುವಿನ ಸಂಬಂಧವೇನು? ಮಠದ ಮಾಜಿ ಮ್ಯಾನೇಜರ್ ಸ್ಫೋಟಕ ಹೇಳಿಕೆ

    ಶಿರೂರು ಶ್ರೀ, ರಮ್ಯಾ ಶೆಟ್ಟಿಯ ನಡುವಿನ ಸಂಬಂಧವೇನು? ಮಠದ ಮಾಜಿ ಮ್ಯಾನೇಜರ್ ಸ್ಫೋಟಕ ಹೇಳಿಕೆ

    ಹಾಸನ: ಶಿರೂರು ಮಠದ ಲಕ್ಷ್ಮೀವರ ಸ್ವಾಮೀಜಿಗಳ ನಿಧನಕ್ಕೆ ಸಂಬಂಧಿಸಿದಂತೆ ಕ್ಷಣ ಕ್ಷಣಕ್ಕೂ ಸ್ಫೋಟಕ ವಿಚಾರಗಳು ಹೊರ ಬರುತ್ತಿವೆ. ಶಿರೂರು ಶ್ರೀಗಳದ್ದು ಕೊಲೆಯಾಗಿದೆ ಅಂತಾದ್ರೆ ಅದಕ್ಕೆ ಕಾರಣ ರಮ್ಯಾ ಶೆಟ್ಟಿ ಎಂದು ಮಠದ ಮಾಜಿ ಮ್ಯಾನೇಜರ್ ಸುನಿಲ್ ಕುಮಾರ್ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.

    ಶ್ರೀಗಳಿಗೆ ಮತ್ತು ಮಠಕ್ಕೆ ಸೇರಿದಂತೆ ತರಕಾರಿ, ಆಹಾರ ಪದಾರ್ಥಗಳನ್ನು ರಮ್ಯಾ ತರುತ್ತಿದ್ದರು. ರಮ್ಯಾ ಮಠದ ಭಕ್ತೆಯಾಗಿದ್ದರೆ ಪೂಜಾ ಕಾರ್ಯದಲ್ಲಿ ಭಾಗಿಯಾಗಿ ಹೋಗಬೇಕಿತ್ತು. ರಮ್ಯಾ ಸ್ವಾಮೀಜಿ ಬಳಿ ಒಬ್ಬಂಟಿಯಾಗಿ ರಾತ್ರಿ ವೇಳೆ ಮಠದಲ್ಲಿ ಇರುತ್ತಿದ್ದರು. ಸ್ವಾಮೀಜಿಗಳ ಕೋಣೆಗೆ ಯಾರು ಹೋಗುತ್ತಿರಲಿಲ್ಲ, ಆದ್ರೆ ರಮ್ಯಾ ಹೋಗ್ತಿದ್ರು. ಮಠಕ್ಕೆ ಸೇರಿದ ನಂತರ ರಮ್ಯಾ ಮೈತುಂಬ ಬಂಗಾರ, ಕಾರು ಸೇರಿ 2 ಮನೆ ಸೇರಿ ಆಸ್ತಿ ಹೆಚ್ಚಾಯಿತು ಎಂದು ಆರೋಪಿಸಿದರು.

    ರಮ್ಯಾ ಶೆಟ್ಟಿ ಮಠಕ್ಕೆ ಬರೋ ಮುನ್ನ ಎಲ್ಲವೂ ಚೆನ್ನಾಗಿತ್ತು. ಒಂಬತ್ತು ವರ್ಷ ನಾನು ಮತ್ತು ನನ್ನ ಕುಟುಂಬದಲ್ಲಿಯೇ ವಾಸವಾಗಿದ್ದೇವು. ಸ್ವಾಮೀಜಿಗಳು ಎಲ್ಲರನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದರು. ಆದ್ರೆ ರಮ್ಯಾ ಶೆಟ್ಟಿ ಆಗಮನದ ಬಳಿಕ ಮಠದ ವಾತಾವರಣವೇ ಬದಲಾಯಿತು. ಕೆಲವೇ ದಿನಗಳಲ್ಲಿಯೇ ಇಡೀ ಮಠವನ್ನೇ ರಮ್ಯಾ ತನ್ನ ಸ್ವಾಧೀನಕ್ಕೆ ಪಡೆದುಕೊಂಡಳು. ಮಠದ ಬ್ಯಾಂಕ್ ವ್ಯವಹಾರ ಸೇರಿದಂತೆ ಎಲ್ಲ ಕೆಲಸಗಳನ್ನು ರಮ್ಯಾ ನೋಡಿಕೊಳ್ಳುತ್ತಿದ್ದಳು. ರಮ್ಯಾ ಸೂಚಿಸಿದವರನ್ನೆ ಮಠದ ಕಾರ್ಯಗಳಿಗೆ ನೇಮಿಸಿಕೊಳ್ಳಲಾಗುತ್ತಿತ್ತು ರಹಸ್ಯ ವಿಚಾರಗಳನ್ನು ಸುನಿಲ್ ವಿವರಿಸಿದರು.

    ಶಿಶೂರು ಸ್ವಾಮೀಜಿ ಆರೋಗ್ಯವಾಗಿದ್ದರು, ಉತ್ತಮ ಯೋಗ ಹಾಗೂ ಈಜು ಪಟುವಾಗಿದ್ದರು. 55ನೇ ವಯಸ್ಸಿನಲ್ಲಿ ಸ್ವಾಮೀಜಿಗಳು ಸಾವನ್ನಪ್ಪಿದ್ದಾರೆ ಎಂದರೆ ಅದಕ್ಕೆ ರಮ್ಯಾ ಕಾರಣ. ಮಠದಲ್ಲಿ ಸ್ವಾಮೀಜಿಗಳಿಗಿಂತ ರಮ್ಯಾ ಮಾತು ನಡೆಯುತ್ತಿತ್ತು. ರಮ್ಯಾ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಪೆÇಲೀಸ್ ಗೆ ದೂರು ನೀಡಿ ಕಿರುಕುಳ ನೀಡಿ ಮಠದಿಂದ ಹೊರ ಹಾಕಿದಳು. ಮಠದಲ್ಲಿರುವ ಸಿಸಿ ಟಿವಿ ಪರೀಕ್ಷಿಸಿದರೆ ಸತ್ಯಾಂಶ ತಿಳಿಯಲಿದೆ. ರಮ್ಯಾ ವಿರುದ್ಧ ಉಡುಪಿ ಜನ ಹೋರಾಟ ಮಾಡಬೇಕು. ಆಕೆಯ ವಿರುದ್ಧ ಕಾನೂನು ಕ್ರಮ ಆಗಬೇಕು. ಸೂಕ್ತ ತನಿಖೆ ನಡೆಸಿ ರಮ್ಯಾ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸುನಿಲ್ ಆಗ್ರಹಿಸಿದರು.