Tag: Ramesh Kumar

  • ರೈತನಾಗಿ ಹೊಸ ವ್ಯಾಪಾರ ಆರಂಭಿಸಿದ ರಮೇಶ್ ಕುಮಾರ್

    ರೈತನಾಗಿ ಹೊಸ ವ್ಯಾಪಾರ ಆರಂಭಿಸಿದ ರಮೇಶ್ ಕುಮಾರ್

    – ಆಂಧ್ರ ಪ್ರದೇಶದ ಕುರಿ ಸಂತೆಗೆ ಮಾಜಿ ಸ್ಪೀಕರ್ ಭೇಟಿ

    ಕೋಲಾರ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ಹಾಗೂ 17 ಶಾಸಕರನ್ನು ಅನರ್ಹಗೊಳಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ರೈತನಾಗಿ ಹೊಸ ವ್ಯಾಪಾರ ಶುರು ಮಾಡಿದ್ದಾರೆ.

    ಕೋಲಾರ ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಕೆ.ಆರ್.ರಮೇಶ್ ಕುಮಾರ್ ಅವರು ಕೊಂಚ ರಾಜಕೀಯದಿಂದ ರಿಲ್ಯಾಕ್ಸ್ ಆಗಿದ್ದಾರೆ. ರಾಜಕೀಯದಿಂದ ಅಂತರ ಕಾಯ್ದುಕೊಂಡಿರುವ ಅವರು ಕುರಿ ಸಾಕಾಣಿಕೆ ಸೇರಿದಂತೆ ವ್ಯವಸಾಯದ ಕಡೆ ಗಮನ ಕೊಡಲು ಮುಂದಾಗಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲೂಕಿನ ಅಂಗಾಲ ಕುರಿ ಸಂತೆಯಲ್ಲಿ ವ್ಯಾಪಾರ ಮಾಡುವ ಮೂಲಕ ರೈತರಾಗಿದ್ದಾರೆ.

    ರಮೇಶ್ ಕುಮಾರ್ ಅವರು ಸಂತೆಯಲ್ಲಿನ ಓಡಾಟ, ವ್ಯಾಪರದ ದೃಶ್ಯವನ್ನು ಬೆರೆ ಬೆಂಬಲಿಗರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರೈತರ ಗೆಟಪ್‍ನಲ್ಲಿ ರಮೇಶ್ ಕುಮಾರ್ ಅವರು ತಲೆಗೆ ಟವೆಲ್ ಸುತ್ತಿಕೊಂಡು ಸಾಮಾನ್ಯರಂತೆ ಸಂತೆಯಲ್ಲಿ ಕುರಿ ಖರೀದಿಸುವಲ್ಲಿ ಬ್ಯುಸಿಯಾಗಿರುವ ವಿಡಿಯೋ ಹಾಗೂ ಫೋಟೊಗಳು ವೈರಲ್ ಆಗುತ್ತಿವೆ.

    ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಹಿಂದಿನಿಂದಲೂ ಕುರಿ, ಕೋಳಿ ಸಾಕಾಣಿಕೆ ಸೇರಿದಂತೆ ವ್ಯವಸಾಯದಲ್ಲಿ ಹೆಚ್ವು ಆಸಕ್ತಿ ತೋರುತ್ತಾ ಬಂದಿದ್ದಾರೆ. ಹೀಗಾಗಿ ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲೂಕಿನ ಅಂಗಾಲ ಶನಿವಾರ ಸಂತೆಯಲ್ಲಿ ಕುರಿ ವ್ಯಾಪಾರದಲ್ಲಿ ಬಿಸಿಯಾಗಿದ್ದರು.

  • ರಮೇಶ್ ಕುಮಾರ್ ಭೇಟಿಯಾಗಿ ಅಚ್ಚರಿ ಮೂಡಿಸಿದ ಸ್ವಾಭಿಮಾನಿ ಶರತ್

    ರಮೇಶ್ ಕುಮಾರ್ ಭೇಟಿಯಾಗಿ ಅಚ್ಚರಿ ಮೂಡಿಸಿದ ಸ್ವಾಭಿಮಾನಿ ಶರತ್

    ಕೋಲಾರ: ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿರುವ ಹೊಸಕೋಟೆ ನೂತನ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಗುರುವಾರ ರಾತ್ರಿ ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗಿರುವ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ, ರಮೇಶ್ ಕುಮಾರ್ ಆಶೀರ್ವಾದ ಪಡೆದುಕೊಂಡಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿರುವ ಶರತ್ ನಡೆ ತೀವ್ರ ಕುತೂಹಲ ಕೆರಳಿಸಿದೆ.

    ಹೊಸಕೋಟೆಯ ಪರಾಜಿತ ಬಿಜೆಪಿ ಅಭ್ಯರ್ಥಿ ವಿರುದ್ಧ ಗೆದ್ದ ನಂತರ ನೂತನ ಪಕ್ಷೇತರ ಶಾಸಕ ಶರತ್, ರಮೇಶ್ ಕುಮಾರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಶರತ್ ಜೊತೆ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿ ರಮೇಶ್ ಕುಮಾರ್ ಶುಭಾಶಯ ಕೋರಿದ್ದಾರೆ. ನಂತರ ರಮೇಶ್ ಕುಮಾರ್ ಅವರ ಬಳಿ ಆಶೀರ್ವಾದ ಪಡೆದು ಶರತ್ ವಾಪಸ್ ಆಗಿದ್ದಾರೆ.

    ಸದ್ಯಕ್ಕೆ ಬಿಜೆಪಿಗೆ ಪಕ್ಷಕ್ಕೆ ಸೇರಿಸಿಕೊಳ್ಳಲೂ ಆಗದೆ, ಇತ್ತ ಉಚ್ಚಾಟನೆ ಮಾಡಲೂ ಆಗದೆ ಬಿಸಿ ತುಪ್ಪವಾಗಿ ಶರತ್ ಪರಿಣಮಿಸಿದ್ದಾರೆ. ಹೀಗಿರುವಾಗ ಶರತ್ ಅವರು ಹಿರಿಯ ಕಾಂಗ್ರೆಸ್ ಮುಖಂಡನ ಭೇಟಿ ಮಾಡಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

  • ಲಕ್ಷ್ಮಿ ಹೆಬ್ಬಾಳ್ಕರ್ ವಿಷಕನ್ಯೆ, ಆಕೆ ಎಲ್ಲೇ ಹೋದ್ರೂ ಸರ್ವನಾಶವಾಗುತ್ತೆ: ರಮೇಶ್ ಜಾರಕಿಹೋಳಿ

    ಲಕ್ಷ್ಮಿ ಹೆಬ್ಬಾಳ್ಕರ್ ವಿಷಕನ್ಯೆ, ಆಕೆ ಎಲ್ಲೇ ಹೋದ್ರೂ ಸರ್ವನಾಶವಾಗುತ್ತೆ: ರಮೇಶ್ ಜಾರಕಿಹೋಳಿ

    ಬೆಳಗಾವಿ: ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿಷಕನ್ಯೆ, ಆಕೆ ಎಲ್ಲಿ ಕಾಲಿಡುತ್ತಾಳೋ ಅಲ್ಲಿ ಸರ್ವನಾಶವಾಗುತ್ತದೆ. ಆಕೆಯಿಂದ ಇಂದು ಪಕ್ಷ ನಾಶವಾಗಿದೆ ಎಂದು ರಮೇಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.

    ಉಪಸಮರದ ಗೆಲುವಿನ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಲಕ್ಷ್ಮಿ ಹೆಬ್ಬಾಳ್ಕರ್ ವಿಷಕನ್ಯೆ. ಆಕೆ ಯಾವ ಪಕ್ಷದಲ್ಲಿರುತ್ತಾಳೆ ಆ ಪಕ್ಷದ ಸರ್ವನಾಶವಾಗುತ್ತದೆ. ಆಕೆ ತನ್ನ ಮಿತಿಯಲ್ಲಿದ್ದರೆ ಒಳ್ಳೆಯದು. ಆಕೆಯಿಂದಲೇ ಇಂದು ಕಾಂಗ್ರೆಸ್ ಪಕ್ಷ ಹಾಳಾಗಿದೆ. ಆಕೆ ಹೆಣ್ಣುಮಗಳಾಗಿ ಹೆಣ್ಣುಮಗಳ ರೀತಿ ಇದ್ದರೆ ಒಳ್ಳೆಯದು. ಗಂಡಸರು ಗಂಡಸರಾಗಿದ್ದರೆ ಒಳ್ಳೆಯದು. ಅಧಿಕಾರ ಬರುತ್ತೆ ಹೋಗುತ್ತೆ, ಅಧಿಕಾರ ಶಾಶ್ವತವಲ್ಲ. ಆಕೆಗೆ ಒಳ್ಳೆಯದು ಮಾಡುವುದು ಗೊತ್ತಿಲ್ಲ. ಕ್ಲಬ್ ಮತ್ತು ಇತರೆ ವ್ಯವಹಾರ ಮಾಡಲು ಜನರನ್ನು ವೋಟ್ ಕೇಳಿದ್ದಾರೆ ಎಂದು ಹರಿಹಾಯ್ದರು.

    ಬಿಜೆಪಿ ಅವರು ನನಗೆ ಕರೆ ಮಾಡಿದ್ದರು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾಳೆ. ದೇವರ ಆಣೆ ಮಾಡಿ, ನನ್ನ ಎರಡು ಮಕ್ಕಳ ಮೇಲೆ ಆಣೆ ಮಾಡಿ ಹೇಳುತ್ತೇನೆ ಬಿಜೆಪಿ ಆಕೆಗೆ ಪಕ್ಷಕ್ಕೆ ಬನ್ನಿ ಎಂದು ಕರೆದಿಲ್ಲ. ಗೊಡ್ಡು ಕೊದುರೆ ಏನು ಕೊಟ್ಟಿದೆ, ಡ್ಯಾಶ್ ಡ್ಯಾಶ್ ಆಕೆಗೆ ಗೊತ್ತು ಎಂದು ಏನವಚನದಲ್ಲೇ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

    ಬಿಎಸ್‍ವೈ ಮಾತು ನೀಡಿದರೆ ತಪ್ಪಲ್ಲ. ಅವರು ಕೊಟ್ಟ ಭರವಸೆ ಈಡೇರಿಸುತ್ತಾರೆ. ಅವರು ಈ ವಯಸ್ಸಿನಲ್ಲೂ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಅವರನ್ನು ರಮೇಶ್ ಹಾಡಿಹೊಗಳಿದರು. ಆ ಬಳಿಕ ಮಾಜಿ ಸ್ಪೀಕರ್ ತಮ್ಮನ್ನು ಅನರ್ಹರು ಎಂದು ಆದೇಶಿದ ಬಗ್ಗೆ ಪ್ರತಿಕ್ರಿಯಿಸಿ, ರಮೇಶ್ ಕುಮಾರ್ ಅಯೋಗ್ಯ ತಕ್ಷಣವೇ ಆತ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

    ಇಂದು ಕೂಡ ಸಿದ್ದರಾಮಯ್ಯ ನಮ್ಮ ನಾಯಕರೇ. ನಾನು ಬೇರೆ ಪಕ್ಷದಲ್ಲಿದ್ದರೂ ಅವರು ನಮ್ಮ ನಾಯಕರು. ಹೀಗಾಗಿ ಅವರು ಅವರ ಕೆಲಸ ಅವರು ಮಾಡಲಿ. ನಮ್ಮ ಕೆಲಸ ನಾವು ಮಾಡುತ್ತೇವೆ. ಸಿದ್ದರಾಮಯ್ಯ ಅವರಿಗೆ ನಾನು ಮೊದಲೇ ಹೇಳಿದ್ದೆ, ನೀವು ವೈಯಕ್ತಿಕ ಟೀಕೆ ಮಾಡಿದರೆ ನನ್ನ ಬಳಿಯೂ ಅಸ್ತ್ರವಿದೆ ಎಂದಿದ್ದೆ. ಆಗ ಸಿದ್ದರಾಮಯ್ಯ ಅವರು ಏನು ಮಾತನಾಡಿಲ್ಲ ಎಂದರು.

    ಶಾಸಕ ಜಮೀರ್ ಗೆ ವಿಷಯ ಗೊತ್ತಿದ್ದರೆ ಸಿದ್ದರಾಮಯ್ಯ ಅವರಿಗೆ ಗೊತ್ತಿರದೆ ಹೋಗುತ್ತಾ? ಅವರ ಬಗ್ಗೆ ಅನೇಕ ವಿಷಯಗಳಿದೆ. ಅದೆನ್ನೆಲ್ಲಾ ಹೇಳಿದರೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾಗುತ್ತದೆ. ನಾನು ಪಕ್ಷಕ್ಕೆ ಮೋಸ ಮಾಡಿದೆ, ವಂಚನೆ ಮಾಡಿದೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಜೆಡಿಎಸ್‍ಗೆ ಚೂರಿ ಹಾಕಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ್ದಾರೆ ಎಂದು ತಿರುಗೇಟು ನೀಡಿದರು.

  • ಅನರ್ಹರ ಆರೋಗ್ಯ ಸರಿಯಿಲ್ಲ, ಒಳ್ಳೆ ತಲೆ ಡಾಕ್ಟರ್‌ಗೆ ತೋರಿಸಿ: ರಮೇಶ್ ಕುಮಾರ್

    ಅನರ್ಹರ ಆರೋಗ್ಯ ಸರಿಯಿಲ್ಲ, ಒಳ್ಳೆ ತಲೆ ಡಾಕ್ಟರ್‌ಗೆ ತೋರಿಸಿ: ರಮೇಶ್ ಕುಮಾರ್

    ಬೆಳಗಾವಿ: ಅನರ್ಹರ ಆರೋಗ್ಯ ಸರಿಯಿಲ್ಲ, ಅವರನ್ನು ತಲೆಗೆ ಸಂಬಂಧಿಸಿದ ವೈದ್ಯರ ಬಳಿ ತೋರಿಸೋದು ಒಳ್ಳೆದು ಎಂದು ಅಥಣಿಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅನರ್ಹರಿಗೆ ಟಾಂಗ್ ಕೊಟ್ಟಿದ್ದಾರೆ.

    ಅಥಣಿಯ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನರ್ಹಗೊಂಡ ನಂತರವೂ ಶಾಸಕರು ತಾವು ಅರ್ಹರು ಎಂದು ಹೇಳಿಕೊಳ್ಳುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಸುಪ್ರೀಂ ಕೋರ್ಟಿನಲ್ಲೂ ಅನರ್ಹಗೊಂಡ ನಂತರ ಅರ್ಹರು ಎಂದು ಹೇಳಿಕೊಳ್ಳುತ್ತಿದ್ದಾರೆ. ಅನರ್ಹರ ಆರೋಗ್ಯ ಸರಿಯಿಲ್ಲ, ಒಳ್ಳೆಯ ತಲೆ ಸಂಬಂಧಿಸಿದ ವೈದ್ಯರಿಗೆ ತೋರಿಸಿ ಎಂದು ಕಾಲೆಳೆದಿದ್ದಾರೆ.

    ನಾನು ಯಾರನ್ನೂ ವ್ಯಕ್ತಿಗತವಾಗಿ ಅನರ್ಹಗೊಳಿಸಿಲ್ಲ. ಸಂವಿಧಾನಾತ್ಮಕವಾಗಿ ಅವರನ್ನು ಅನರ್ಹರು ಅಂತ ಘೋಷಣೆ ಮಾಡಿದ್ದೆ. ಸುಪ್ರೀಂ ಕೋರ್ಟ್ ಸಹ ನನ್ನ ಆದೇಶ ಎತ್ತಿ ಹಿಡಿದಿದೆ. ನಾನು ಕೊಟ್ಟ ತೀರ್ಪು ಸರಿಯೇ ಎಂದು ಪರಿಶೀಲಿಸಿದ್ದೇನೆ. ಜನರು ಕೂಡ ನೀವು ಮಾಡಿದ್ದು ಸರಿಯಾಗಿದೆ ಎಂದಿದ್ದಾರೆ. ಆದರೆ ಕೋರ್ಟ್ ಅನರ್ಹರಿಗೆ ಉಪಚುನಾವಣೆಗೆ ನಿಲ್ಲಲು ಅವಕಾಶ ನೀಡಿದೆ. ಕೋರ್ಟಿನ ತೀರ್ಪನ್ನು ನಾನು ಗೌರವಿಸುತ್ತೇನೆ. ಉಪಚುನಾವಣೆಯಲ್ಲಿ ಜನರು ಅನರ್ಹರಿಗೆ ಉತ್ತರ ನೀಡುತ್ತಾರೆ ಎಂದು ಕಿಡಿಕಾರಿದರು.

    ನಾನು ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. ಒಂದು ವೇಳೆ ಪಕ್ಷದಲ್ಲಿ ನೀನು ಕಸ ಗುಡಿಸಬೇಕು ಎಂದರೆ ನಾನು ಗುಡಿಸಬೇಕು, ಅದು ಪಕ್ಷದ ಶಿಸ್ತು. ಹಿಂದೆ ಸಮ್ಮಿಶ್ರ ಸರ್ಕಾರವಿದ್ದಾಗ ಯಾರೂ ಹೆಚ್ಚು ಉತ್ಸಾಹ ತೋರಲಿಲ್ಲ. ಪಕ್ಷದ ನಾಯಕ ವೇಣುಗೋಪಾಲ್ ಅವರು ನೀವು ಸ್ಪೀಕರ್ ಆಗಬೇಕು ಎಂದು ಹೇಳಿದಾಗ, ಪಕ್ಷ ಏನೇ ಜವಾಬ್ದಾರಿ ನೀಡಿದರೂ ನಾನು ವಹಿಸಿಕೊಳ್ಳುತ್ತೇನೆ ಎಂದು ಹೇಳಿದ್ದೆ. ಜನರ ಮನಸ್ಸಲ್ಲಿ ಗೌರವಾನ್ವಿತ ಸ್ಥಾನ ಸಿಕ್ಕಾಗ ಅದಕ್ಕೆ ಮಿಗಿಲಾದದ್ದು ಯಾವ ಸ್ಥಾನವೂ ಇಲ್ಲ ಎಂದು ರಮೇಶ್ ಕುಮಾರ್ ಹೇಳಿದರು.

  • ಬೇರೆ ಪಕ್ಷಕ್ಕೆ ಹೋಗುವವರಿಗೆ ಇದೊಂದು ಪಾಠ – ಸಿದ್ದರಾಮಯ್ಯ

    ಬೇರೆ ಪಕ್ಷಕ್ಕೆ ಹೋಗುವವರಿಗೆ ಇದೊಂದು ಪಾಠ – ಸಿದ್ದರಾಮಯ್ಯ

    ಬೆಂಗಳೂರು: ಅನರ್ಹ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ನಾನು ಸ್ವಾಗತಿಸುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಪ್ರೀಂ ಕೋರ್ಟಿನ ತೀರ್ಪನ್ನು ಸ್ವಾಗತಿಸುತ್ತೇನೆ. ರಮೇಶ್ ಕುಮಾರ್ ಅವರ ಆದೇಶವನ್ನು ಕೋರ್ಟ್ ಭಾಗಶಃ ಎತ್ತಿಹಿಡಿದಿದೆ. ಕಾಂಗ್ರೆಸ್ಸಿನ 14 ಶಾಸಕರು ಹಾಗೂ ಜೆಡಿಎಸ್‍ನ 3 ಶಾಸಕರು ರಾಜೀನಾಮೆ ನೀಡಿ, ವಿಪ್ ಉಲ್ಲಂಘಿಸಿದ್ದರು. ಆಗ ನಾನು ಮತ್ತು ದಿನೇಶ್ ಗುಂಡುರಾವ್ ಅವರು ಸ್ಪೀಕರ್ ಮುಂದೆ ಅರ್ಜಿ ಸಲ್ಲಿಸಿದ್ದೇವು. ಅದರ ಆಧಾರದ ಮೇಲೆ ಸ್ಪೀಕರ್ ಕುಲಂಕುಶವಾಗಿ ವಿಚಾರಣೆ ನಡೆಸಿ ರಾಜೀನಾಮೆ ಕೊಟ್ಟ ಶಾಸಕರು ಅನರ್ಹರು ಎಂದು ಆದೇಶ ಹೊರಡಿಸಿದ್ದರು. ಅದರಲ್ಲಿ ಎರಡು ಭಾಗಗಳಿವೆ. ಒಂದು ಭಾಗ ಪಕ್ಷಾಂತರ ಮಾಡಿದ್ದಾರೆ ಎಂದು ಹಾಗೂ ಇನ್ನೊಂದು ಭಾಗ 15ನೇ ವಿಧಾನಸಭಾ ಅವಧಿ ಮುಗಿಯುವವರೆಗೂ ಉಪಚುನಾವಣೆಗೆ ನಿಲ್ಲಬಾರದು ಎಂದು ಆದೇಶಿಸಿದ್ದರು. ಇದನ್ನೂ ಓದಿ:ಸಿದ್ದರಾಮಯ್ಯ, ಸ್ಪೀಕರ್ ಷಡ್ಯಂತ್ರಕ್ಕೆ ಸುಪ್ರೀಂ ತಕ್ಕ ತೀರ್ಪು ಕೊಟ್ಟಿದೆ: ಸಿಎಂ ಬಿಎಸ್‍ವೈ

    ಪ್ರಜಾಪ್ರಭುತ್ವದಲ್ಲಿ ಹಾಗೂ 10ನೇ ಶೆಡ್ಯೂಲ್‍ನಲ್ಲಿ ಒಂದು ಪಕ್ಷದಿಂದ ಗೆದ್ದವರು ರಾಜೀನಾಮೆ ಕೊಡಬಾರದು ಎಂದೇನಿಲ್ಲ. ಆದರೆ ಸ್ವಯಂ ಪ್ರೇರಣೆಯಿಂದ ಹಾಗೂ ಯಾವುದೇ ಬಾಹ್ಯ ಒತ್ತಡಗಳಿಲ್ಲದೆ ಹೋದರೆ ರಾಜೀನಾಮೆ ನೀಡಬಹುದು. ಹಾಗಿಲ್ಲದಿದ್ದರೆ ರಾಜೀನಾಮೆಯನ್ನು ಪರಿಗಣಿಸಲು ಆಗುವುದಿಲ್ಲ. ಒಂದು ಪಕ್ಷದಿಂದ ಆಯ್ಕೆಯಾದ ಮೇಲೆ ಅವರು ಮನಸೋಯಿಚ್ಛೆ ನಡೆಕೊಳ್ಳುವಂತಿಲ್ಲ. ಹೀಗಾಗಿ ಸುಪ್ರೀಂ ಕೋರ್ಟಿನಲ್ಲಿ ನೈತಿಕತೆ ಬಗ್ಗೆಯೂ ವಿಚಾರಣೆ ನಡೆದಿದೆ. ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುವುದು ಅನೈತಿಕತೆ ಎನ್ನುವುದು ಸುಪ್ರೀಂ ನಿಲುವಾಗಿದೆ. ಇದು ಅನೈತಿಕವಾದದ್ದು, ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು, ಅಸಂವಿಧಾನಾತ್ಮಕವಾದದ್ದು, ಮತದಾದರ ನಂಬಿಕೆ ದ್ರೋಹ ಮಾಡಿದಂತೆ, ಇದು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುವ ಎಂಎಲ್‍ಎಗಳಿಗೆ ಪಾಠವಾಗಿದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನ ಮೂಲಕ ಹೇಳಿದೆ ಎಂದು ಅಭಿಪ್ರಾಯ ತಿಳಿಸಿದರು. ಇದನ್ನೂ ಓದಿ:ಭಾಗಶ: ತೃಪ್ತಿ, ಅನರ್ಹತೆ ಎನ್ನುವುದೇ ಒಂದು ಕಳಂಕ – ರಮೇಶ್ ಕುಮಾರ್

    ಅನರ್ಹರು ಉಪಚುನಾವಣೆಗೆ ನಿಲ್ಲಬಹುದು ಎಂದು ಸುಪ್ರೀಂ ಹೇಳಿದೆ ಅದನ್ನು ನಾನು ಸ್ವಾಗತಿಸುತ್ತೇನೆ. ಕೋರ್ಟಿನ ಸಂಪೂರ್ಣ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಆದರೆ ಪಕ್ಷಾಂತರ ಮಾಡಿದನ್ನು ಕೋರ್ಟ್ ಒಪ್ಪಿಲ್ಲ. ಬದಲಿಗೆ ಸ್ಪೀಕರ್ ಆದೇಶ ಸರಿಯಂದಿದೆ. ಯಾರೆಲ್ಲಾ ಬೇರೆ ಪಕ್ಷಕ್ಕೆ ಹೋಗಲು ಮುಂದಾಗುತ್ತಾರೋ ಅವರಿಗೂ ಇದು ಪಾಠವಾಗಲಿದೆ ಎಂದು ಹೇಳಿದ್ದಾರೆ. ಉಪಚುನಾವಣೆಯಲ್ಲಿ ನಿಂತರೂ ಜನರು ಅನರ್ಹ ಶಾಸಕರನ್ನ ಸೋಲಿಸುತ್ತಾರೆ. ಅದಕ್ಕೆ ಗುಜರಾತ್ ಹಾಗೂ ಮಹಾರಾಷ್ಟ್ರ ಉದಾಹರಣೆ. ಈ ರಾಜ್ಯಗಳಲ್ಲಿ ಪಕ್ಷಾಂತರ ಮಾಡಿದವರು ಬಹುತೇಕ ಸೋತಿದ್ದಾರೆ ಎಂದು ತಿಳಿಸಿ ಅನರ್ಹರಿಗೆ ಟಾಂಗ್ ಕೊಟ್ಟರು.

  • ತಾಕತ್ ಪ್ರಶ್ನಿಸಿ ಸಿದ್ದರಾಮಯ್ಯನವರಿಗೆ ಸವಾಲು ಎಸೆದ ಸುಧಾಕರ್

    ತಾಕತ್ ಪ್ರಶ್ನಿಸಿ ಸಿದ್ದರಾಮಯ್ಯನವರಿಗೆ ಸವಾಲು ಎಸೆದ ಸುಧಾಕರ್

    ಚಿಕ್ಕಬಳ್ಳಾಪುರ: ಸಿದ್ದರಾಮಯ್ಯನವರೇ ನಿಮಗೆ ಹೃದಯ ಮನಸ್ಸು ಇದ್ಯಾ? ನಿಮಗೆ ತಾಕತ್ ಇದ್ದರೆ ನಮ್ಮ ಮೇಲೆ ಹಗೆತನ ಸಾಧಿಸುವುದಲ್ಲ. ನಿಮ್ಮನ್ನು ಮುಗಿಸೋದವರು ಬೇರೆ ಇದ್ದಾರೆ. ತಾಕತ್ ಇದ್ದರೆ ಅವರ ಮೇಲೆ ಹಗೆತನ ಸಾಧಿಸಿ ಎಂದು ಮಾಜಿ ಸಿಎಂಗೆ ಅನರ್ಹ ಶಾಸಕ ಸುಧಾಕರ್ ಸವಾಲು ಹಾಕಿದ್ದಾರೆ.

    ಚಿಕ್ಕಬಳ್ಳಾಪುರ ನಗರದಲ್ಲಿ ಮಾತನಾಡಿದ ಸುಧಾಕರ್, ತಂದೆ ಸ್ಥಾನದಲ್ಲಿ ಇದ್ದ ನೀವು ಎಲ್ಲರನ್ನು ಸಮಾನಾಗಿ ಕಾಣಲಿಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರ ಬೀಳಲು ಸ್ವತಃ ನೀವೇ ಕಾರಣ ಹೊರತು ನಾವಲ್ಲ. ಹೀಗಾಗಿ ನಮ್ಮ ಮೇಲೆ ಹಗೆತನ ಸಾಧನೆ ಮಾಡುವುದಲ್ಲ ಎಂದು ಅಸಮಾಧಾನ ಹೊರ ಹಾಕಿದರು.

    ಅಂದಿನ ಸಿಎಂ ಎಚ್‌ಡಿಕೆ ನನಗೆ ಕೆಲಸಗಳನ್ನ ಮಾಡಿಕೊಡುತ್ತೇನೆ ಎಂದರೂ ಕೆಲ ಕಾಂಗ್ರೆಸ್ ನಾಯಕರೇ ಅಡ್ಡಿ ಮಾಡಿದರು. ಅವರ ಮೇಲೆ ಏನು ಕ್ರಮ ಕೈಗೊಂಡಿರಿ ಸಿದ್ದರಾಮಯ್ಯನವರೇ? ಪಕ್ಷದ ನಾಯಕತ್ವವನ್ನ ವಹಿಸಿಕೊಂಡು ತಂದೆಯ ಸ್ಥಾನದಲ್ಲಿದ್ದವರೂ ಎಲ್ಲರೂ ಒಂದೇ ಅಂತ ಕಾಣಬೇಕಿತ್ತು. ಆದರೆ ನೀವು ಅದರಲ್ಲಿ ವಿಫಲ ಅಗಿದ್ದಕ್ಕೆ ಸಮ್ಮಿಶ್ರ ಸರ್ಕಾರ ಬಿತ್ತು. ಹೀಗಾಗಿ ನಮ್ಮ ಮೇಲೆ ಹಗೆ ಸಾಧಿಸದೇ ನಿಮ್ಮ ವಿರುದ್ಧ ಕೆಲಸ ಮಾಡಿದವರ ವಿರುದ್ಧ ಹಗೆ ಸಾಧಿಸಿ ಎಂದು ಸವಾಲು ಎಸೆದರು.

    ಅನರ್ಹತೆ ಪ್ರಕರಣದಲ್ಲಿ ಸ್ಪೀಕರ್ ಆ್ಯಕ್ಟರ್ ಆಗಿದ್ದಾರೆ. ಇದರ ಡೈರೆಕ್ಟರ್ ಯಾರು? ಸ್ಕ್ರಿಪ್ಟ್ ರೈಟರ್ ಹಾಗೂ ಪ್ರೂಡ್ಯೂಸರ್ ಯಾರು ಅಂತ ಸುಪ್ರೀಂಕೋರ್ಟ್ ತೀರ್ಪು ಬಂದ ನಂತರ ಹೇಳುವೆ. ರಮೇಶ್ ಕುಮಾರ್ ಸಹ ಒಂದು ಬಾರಿ ಗೆಲ್ಲುತ್ತಾರೆ. ಒಂದು ಬಾರಿ ಸೋಲುತ್ತಾರೆ. ಗೆಲ್ಲುವಾಗ ಎಷ್ಟು ಪರಿಶ್ರಮ ಹಾಕಬೇಕು ಅವರಿಗೆ ಗೊತ್ತಾಗಬೇಕಲ್ವಾ? ನಾನು ಹುಟ್ಟುವ ಮೊದಲೇ ಶಾಸಕರಾಗಿ ವಿಧಾನಸೌಧ ಪ್ರವೇಶ ಮಾಡಿದ್ದಾರೆ. ಹೀಗಾಗಿ ಅವರು ಕೂಡ ಯಾರು ಎಷ್ಟೇ ಒತ್ತಡ ಹಾಕಿದರೂ ಅವರಿಗಿರುವ ಕಾನೂನಿನ ಇತಿಮಿತಿ ಓಳಗೆ ಅರಿವಿನ ಮೂಲಕ ವಸ್ತು ಸ್ಥಿತಿ ಅರ್ಥ ಮಾಡಿಕೊಂಡು ಪ್ರಕರಣ ಇತ್ಯರ್ಥ ಮಾಡಬೇಕಿತ್ತು. ಆಗ ನಿಮ್ಮ ವ್ಯಕ್ತಿತ್ವ ಇನ್ನೂ ಮೇಲೆ ಹೋಗಿರೋದು. ಆದರೆ ಆತ್ಮಸಾಕ್ಷಿಗೆ ಅನುಗುಣವಾಗಿ ಅಂತ ನಮ್ಮನ್ನ ಅನರ್ಹ ಮಾಡಿ ಎರಡು ವಿಧಾನಸಭೆಯನ್ನು ಕಗ್ಗೊಲೆ ಮಾಡಿಬಿಟ್ರಿ ಅಂತ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಅಸಮಾಧಾನ ಹೊರಹಾಕಿದರು.

  • ಬ್ರಿಟಿಷರ ವಿರುದ್ಧ ಹೋರಾಡಿದವರಿಗೆ ಬಿಜೆಪಿಯಿಂದ ದೇಶದ್ರೋಹಿ ಪಟ್ಟ: ರಮೇಶ್ ಕುಮಾರ್

    ಬ್ರಿಟಿಷರ ವಿರುದ್ಧ ಹೋರಾಡಿದವರಿಗೆ ಬಿಜೆಪಿಯಿಂದ ದೇಶದ್ರೋಹಿ ಪಟ್ಟ: ರಮೇಶ್ ಕುಮಾರ್

    ಕೋಲಾರ: ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರಿಗೆ ಬಿಜೆಪಿ ದೇಶದ್ರೋಹ ಪಟ್ಟ ಕಟ್ಟಿದೆ. ಅದು ಬಿಜೆಪಿಯ ನಂಬಿಕೆ ಮತ್ತು ಸಿದ್ದಾಂತ. ಅವರ ಕೈಯಲ್ಲಿ ಅಧಿಕಾರಿವಿದೆ ಹಾಗಾಗಿ ಅವರು ಇದೆಲ್ಲಾ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕೆ.ಆರ್. ರಮೇಶ್ ಕುಮಾರ್ ಆರೋಪಿಸಿದ್ದಾರೆ.

    ಕೋಲಾರದ ಶ್ರೀನಿವಾಸಪುರದ ಗೌನಿಪಲ್ಲಿಯಲ್ಲಿಯಲ್ಲಿ ವೇಣುಗೋಪಾಲಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟಿಷರು ಯಾರ ಪರ ಇದ್ದವರು, ಅಂತಹವರ ವಿರುದ್ಧ ಹೋರಾಟ ಮಾಡಿದವರಿಗೆ ದೇಶ ದ್ರೋಹದ ಪಟ್ಟಿ ಕಟ್ಟಿದವರು ಬಿಜೆಪಿಯವರು ಎಂದು ವಾಗ್ದಾಳಿ ಮಾಡಿದರು.

    ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಪ್ರಾಣ ಕಳೆದುಕೊಂಡವರು ಟಿಪ್ಪು ಸುಲ್ತಾನ್. ಬಿಜೆಪಿ ಅವರು ಇತಿಹಾಸ ತಿರುಚಲು ಹೊರಟಿದ್ದಾರೆ. ಅವರ ಕೈಯಲ್ಲಿ ಅಧಿಕಾರವಿದೆ ಅವರು ಮಾತನಾಡುತ್ತಾ ಇದ್ದರೆ. ವೈಯಕ್ತಿಕ ಆರೋಪಗಳು ಮಾಡುವುದು ಸರಿಯಲ್ಲ, ನಮಗೆ ಈ ವಿಚಾರವಾಗಿ ಸಹಮತ ಇಲ್ಲ. ಆದರೆ ಕೆಲವರು ಅವರೇನೇ ಮಾಡಿದರು ಸರಿ ಎನ್ನುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಬಿಜೆಪಿ ಸರ್ಕಾರ ನೂರು ದಿನ ಪೂರೈಸಿರುವುದು ಸಮಾಧಾನ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ರಮೇಶ್ ಕುಮಾರ್, ಸಮಾಧಾನ ಅವರಿಗೂ ಇಲ್ಲ, ನಮಗೂ ಇಲ್ಲ. ಇದೇ ವೇಳೆ ಸಿಎಂ ಯಡಿಯೂರಪ್ಪ ಆಡಿಯೋ ವಿಚಾರವಾಗಿ ಮಾತನಾಡಲು ನಿರಾಕರಿಸಿದ ಅವರು, ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್ ಅವರ ಅಜೆಂಡಾ ಜಾತ್ಯತೀತವಾಗಿದ್ದು ಅದನ್ನು ಸ್ವಾಗತಿಸುತ್ತೇನೆ. ಪವನ್ ಕಲ್ಯಾಣ್ ಒಳ್ಳೆಯ ಆದರ್ಶಗಳನ್ನು ಹೊಂದಿರುವ ವ್ಯಕ್ತಿ, ವಯಸ್ಸಿನಲ್ಲಿ ದೊಡ್ಡವನಾದ ಕಾರಣ ಆಶೀರ್ವಾದ ಮಾಡಿದ್ದೇನೆ ಎಂದು ತಿಳಿಸಿದರು.

  • ರಮೇಶ್ ಕುಮಾರ್ ಕಾಲಿಗೆ ನಮಸ್ಕರಿಸಿದ ಪವನ್ ಕಲ್ಯಾಣ್

    ರಮೇಶ್ ಕುಮಾರ್ ಕಾಲಿಗೆ ನಮಸ್ಕರಿಸಿದ ಪವನ್ ಕಲ್ಯಾಣ್

    ಕೋಲಾರ: ಇಂದು ಕೋಲಾರ ಜಿಲ್ಲೆಗೆ ಬಂದಿದ್ದ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಅವರ ಕಾಲಿಗೆ ನಮಸ್ಕರಿಸಿದ್ದಾರೆ.

    ಇಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಗೌನಿಪಲ್ಲಿ ನಡೆದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪವನ್, ಭಾಷಣ ವೇಳೆ ರಮೇಶ್ ಕುಮಾರ್ ಪವನ್ ಕಲ್ಯಾಣ್ ಗೆ ತಮ್ಮ ಬೆಂಬಲ ಸೂಚಿಸಿ ಅವರ ನಾಯಕತ್ವ ಬೆಳೆಯಬೇಕು, ಅವರಿಗೆ ನಿಮ್ಮೆಲ್ಲರ ಬೆಂಬಲ ನೀಡಿ ಎಂದು ಜನರಿಗೆ ಮನವಿ ಮಾಡಿಕೊಂಡ ಹಿನ್ನೆಲೆ ಪವನ್ ಕಲ್ಯಾಣ್ ಅವರು ರಮೇಶ್ ಕುಮಾರ್ ಕಾಲಿಗೆ ನಮಸ್ಕಾರ ಮಾಡಿದ್ದಾರೆ.

    ಈ ವೇಳೆ ಮಾತನಾಡಿದ ಪವನ್ ಕಲ್ಯಾಣ್, ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕರ್ನಾಟಕ ರಾಜ್ಯಕ್ಕೆ ಬಂದು ಕನ್ನಡದಲ್ಲಿ ಮಾತನಾಡಬೇಕೆಂಬ ಹಂಬಲ ನನ್ನಲ್ಲಿದೆ. ಮುಂದಿನ ದಿನಗಳಲ್ಲಿ ನಾನು ರಾಜ್ಯದಲ್ಲಿ ಕನ್ನಡದಲ್ಲಿ ಮಾತನಾಡುವೆ ಎಂದು ಕನ್ನಡದಲ್ಲೇ ಹೇಳಿದರು. ವೇದಿಕೆಯಲ್ಲಿರುವ ಎಲ್ಲಾ ನಾಯಕರು ದೇಶದ ಚಿಂತನೆ ಮಾಡುವವರೆ. ಭವಿಷ್ಯದಲ್ಲಿ ದೇಶದ ಚಿಂತನೆ, ಉದ್ಧಾರ ಮಾಡುವ ನಾಯಕರು ನಮ್ಮಲ್ಲಿದ್ದಾರೆ. ಅಖಂಡ ಭಾರತದಲ್ಲಿ ಭಗತ್ ಸಿಂಗ್ ನಂತಹ ಮಹಾನ್ ವ್ಯಕ್ತಿಗಳು ಹುಟ್ಟಿದ್ದಾರೆ ಎಂದು ಹೇಳಿದರು.

    ಕೋಲಾರ ಜಿಲ್ಲೆಯಲ್ಲಿ ತೋಟಗಾರಿಕೆ, ಕೃಷಿ, ಹೈನೋದ್ಯಮವೆ ಮುಖ್ಯ ಕಸುಬು. ನೀರಿನ ಸಮಸ್ಯೆ ಹೆಚ್ಚಾಗಿದೆ ಆದರೂ ಇಲ್ಲಿ ನಾನಾ ಬೆಳೆಗಳನ್ನು ಬೆಳೆಯುತ್ತಾರೆ. ನಾನೂ ತೆಲುಗು ದೇಶದಲ್ಲಿ ಹುಟ್ಟಿದ್ರೂ ದೇಶದ ಚಿಂತನೆ ನನಗೆ ಮುಖ್ಯ. ದೇಶದ ಬೆನ್ನೆಲೆಬು ರೈತ. ಹಾಗಾಗಿ ದೇಶದ ರೈತರ ಸಮಸ್ಯೆಗಳು, ಕರ್ನಾಟಕ ರಾಜ್ಯದ ರೈತರ ಸಮಸ್ಯೆಗಳಿದ್ದರು ಅವರ ಹೋರಾಟಕ್ಕೂ ನಾನು ಬೆಂಬಲವಾಗಿ ನಿಲ್ಲುತ್ತೇನೆ. ರೈತರ ಸಮಸ್ಯೆಗಳ ಹೋರಾಟಕ್ಕೆ ನಾನು ಈ ರಾಜ್ಯಕ್ಕೆ ಬರುತ್ತೇನೆ. ರೈತರ ಉದ್ಧಾರಕ್ಕಾಗಿ ಸಹಕಾರ ಸಂಘಗಳ ಅವಶ್ಯಕತೆ ಇದೆ ಎಂದು ಪವನ್ ತಿಳಿಸಿದ್ದಾರೆ.

    ಇದೇ ವೇಳೆ ಮಾತನಾಡಿದ ನಂಜಾವಧೂತ ಸ್ವಾಮಿಗಳು, ಪವನ್ ಕಲ್ಯಾಣ್ ಒಬ್ಬ ಜೂನಿಯರ್ ಭಗತ್ ಸಿಂಗ್ ಎಂದು ಹೊಗಳಿದರು. ಅವರು ಆಂಧ್ರದಿಂದ ಸಿಎಂ ಆಗಬೇಕು. ಅವರು ಸಿಎಂ ಆಗಲು ನೀವೆಲ್ಲಾ ಪವನ್ ಕಲ್ಯಾಣ್ ಗೆ ಬೆಂಬಲಿಸಿ ಎಂದು ಜನರಲ್ಲಿ ಮನವಿ ಮಾಡಿದರು.

  • ‘ಕೈ’ನಲ್ಲಿ ಮುಗಿಯದ ಫೈಟ್- ಮುನಿಯಪ್ಪ ಬೆಂಬಲಿಗರ ವಿರುದ್ಧ ಗುಂಡೂರಾವ್ ಅಮಾನತು ಅಸ್ತ್ರ

    ‘ಕೈ’ನಲ್ಲಿ ಮುಗಿಯದ ಫೈಟ್- ಮುನಿಯಪ್ಪ ಬೆಂಬಲಿಗರ ವಿರುದ್ಧ ಗುಂಡೂರಾವ್ ಅಮಾನತು ಅಸ್ತ್ರ

    ಬೆಂಗಳೂರು: ವಿಧಾನಸಭಾ ವಿರೋಧ ಪಕ್ಷದ ನಾಯಕ ಆಯ್ಕೆ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿದ್ದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರು ಸದ್ಯ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ವಾರ್ನಿಂಗ್ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಬದಲಾವಣೆ ಮಾಡಬೇಕು ಎಂದು ಕೆ.ಎಚ್.ಮುನಿಯಪ್ಪ ಬೆಂಬಲಿಗರು ಸಭೆ ನಡೆಸಿ ಆಗ್ರಹಿಸಿದ್ದರು. ಈ ಸಭೆ ಪಕ್ಷದ ಶಿಸ್ತು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಕೆಪಿಸಿಸಿ ಅವರ ಅವಮಾನತಿಗೆ ಮುಂದಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಮುನಿಯಪ್ಪ ಅವರು ದಿನೇಶ್ ಗುಂಡೂರಾವ್ ರೊಂದಿಗೆ ಜಟಾಪಟಿ ನಡೆಸಿದ್ದಾರೆ ಎನ್ನಲಾಗಿದೆ.

    ಕೆಪಿಸಿಸಿ ಕಚೇರಿಗೆ ಆಗಮಿಸಿದ್ದ ಮುನಿಯಪ್ಪ ಅವರು ಕಚೇರಿಯಲ್ಲಿಯೇ ದಿನೇಶ್ ಅವರಿಗೆ ತರಾಟೆಗೆ ತೆಗೆದುಕೊಂಡಿದ್ದು, ತಮ್ಮ ಆಪ್ತರನ್ನ ಅಮಾನತು ಮಾಡದಂತೆ ಹೇಳಿದ್ದರು. ಅಲ್ಲದೇ ತಮ್ಮ ಬೆಂಬಲಿಗರು ಹೇಳಿಕೆ ನೀಡಿದ್ದಾರೆ ಎಂದ ಮಾತ್ರಕ್ಕೆ ಅಮಾನತು ಮಾಡುವುದಾದರೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ಮೇಲೆ ನಾನೇ ದೂರು ನೀಡಿದ್ದು, ಈ ದೂರಿನ ಅನ್ವಯ ಮೊದಲು ಪಕ್ಷ ವಿರೋಧಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪರೋಕ್ಷವಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್‍ರತ್ತ ಮುನಿಯಪ್ಪ ಬೊಟ್ಟು ಮಾಡಿದ್ದರು ಎಂಬ ಮಾಹಿತಿ ಲಭಿಸಿದೆ.

    ಇತ್ತ ಮುನಿಯಪ್ಪ ಅವರಿಗೆ ಮಾತಿಗೆ ಯಾವುದೇ ಬೆಲೆ ನೀಡಿದ ದಿನೇಶ್ ಗುಂಡೂರಾವ್ ಅವರು, ಮುನಿಯಪ್ಪ ಬೆಂಬಲಿತ ಕೋಲಾರದ ಜಿಲ್ಲಾ ಕಾಂಗ್ರೆಸ್‍ನ 7 ಸದಸ್ಯರನ್ನು ಅಮಾನತು ಮಾಡಿದ್ದಾರೆ. ಕೆಪಿಸಿಸಿಯಿಂದ ಆದೇಶ ಅನ್ವಯ ಪ್ರಸಾದ್ ಬಾಬು, ಕುಮಾರ್, ಅತವುಲ್ಲಾ, ಇಕ್ಬಾಲ್ ಅಹಮದ್, ಜಯದೇವ್, ನಾಗರಾಜ್, ಎಲ್ ಕಟೀಲ್ ಅಮಾನತು ಗೊಂಡ ಕಾಂಗ್ರೆಸ್ ಸದಸ್ಯರಾಗಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಎಚ್.ಮುನಿಯಪ್ಪ ಅವರು, ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಅಮಾನತು ಮಾಡದೆ ಸಮಿತಿ ರಚಿಸಿ ಅಭಿಪ್ರಾಯ ಸಂಗ್ರಹಿಸಿ ಕ್ರಮಕೈಗೊಳ್ಳಲು ಮನವಿ ಮಾಡಿದ್ದೇನೆ. ಅಂತಿಮವಾಗಿ ವರದಿ ಬಂದ ಬಳಿಕ ಪಕ್ಷದ ಅಧ್ಯಕ್ಷರು ಏನು ಕ್ರಮಕೈಗೊಳ್ಳುತ್ತಾರೆ ಅದಕ್ಕೆ ಎಲ್ಲರೂ ಬದ್ಧರಾಗಿರಬೇಕಾಗುತ್ತದೆ ಎಂದು ಹೇಳಿದರು.

  • ಸುಧಾಕರ್ ಒಬ್ಬ ದುರಂಹಕಾರಿ ಅವನ ಆಟ ನಡೆಯೋಲ್ಲ – ರಮೇಶ್ ಕುಮಾರ್ ತಿರುಗೇಟು

    ಸುಧಾಕರ್ ಒಬ್ಬ ದುರಂಹಕಾರಿ ಅವನ ಆಟ ನಡೆಯೋಲ್ಲ – ರಮೇಶ್ ಕುಮಾರ್ ತಿರುಗೇಟು

    – ನಾಯಕರು ಸೇಲ್ ಆಗಬಹುದು, ಮತದಾರರು ಸೇಲ್ ಆಗಲ್ಲ

    ಚಿಕ್ಕಬಳ್ಳಾಪುರ: ದುರಂಹಕಾರದಿಂದ ಮೆರೆದಾಡುವವರ ಆಟ ಏನೂ ನಡೆಯುವುದಿಲ್ಲ ಎಂದು ಪರೋಕ್ಷವಾಗಿ ಅನರ್ಹ ಶಾಸಕ ಸುಧಾಕರ್ ಒಬ್ಬ ದುರಹಂಕಾರಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಿರುಗೇಟು ನೀಡಿದ್ದಾರೆ.

    ಇಂದು ದೇವಿಶೆಟ್ಟಿಹಳ್ಳಿ ಗ್ರಾಮದಲ್ಲಿ ಜಿಲ್ಲೆಗೆ ರಮೇಶ್ ಕುಮಾರ್ ಅವರ ಕೊಡುಗೆ ಏನು ಎಂದು ಪ್ರಶ್ನೆ ಮಾಡಿದ್ದ ಸುಧಾಕರ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಪಂಚದ ವಿಚಾರವೇ ತಿಳಿದುಕೊಳ್ಳದೇ ಇರುವವರು ನಮ್ಮ ಬಗ್ಗೆ ಮಾತಾಡ್ತಾರೆ. ನಾವು ಅವರ ಬಗ್ಗೆ ಮಾತಾಡೊದು ಬೇಡ. ನಾವು ಬಹಳ ದೊಡ್ಡವರ ನೆರಳಲ್ಲಿ ಬದುಕಿದ್ದೇವೆ. ನಾನು ದೊಡ್ಡ ಮನುಷ್ಯ ಅಲ್ಲ. ಆದರೆ ನಾವು ಯಾರಿಂದಲೂ ಬುದ್ದಿ ಕಲಿಯಬೇಕಿಲ್ಲ. ನಾನು ಪಕ್ಷದ ಕಾರ್ಯಕರ್ತರಿಗೆ ಹಿತವಚನ ಹೇಳಲು ಬಂದಿರುವೆ. ನನಗೆ ಎಚ್ಚರಿಕೆ ಕೊಡುವವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು.

    ಮಳೆ ಬರುವ ಆಗಿದ್ದರೆ ನನಗೆ ನಿಲ್ಲಿಸಲು ಯೋಗ್ಯತೆ ಇದೆಯೇ? ಮನುಷ್ಯನಿಗೆ ಬಹಳ ಇತಿ ಮಿತಿ ಇರಬೇಕು. ನಮಗೆ ಗೊತ್ತಿಲ್ಲದೇ ಇರುವುದನ್ನು ಕಂಟ್ರೋಲ್ ಮಾಡಲು ಯಾವುದೋ ಒಂದು ಶಕ್ತಿ ಇದೆ. ನನ್ನ ಕೊಡುಗೆ ಬಗ್ಗೆ ಅನರ್ಹ ಶಾಸಕ ಸುಧಾಕರ್ ಪ್ರಶ್ನೆ ಮಾಡಿದ್ದಾರೆ. ಎಚ್ ಎನ್ ವ್ಯಾಲಿ, ವಿಶ್ವವಿದ್ಯಾಲಯ, ಡಯಾಲಿಸಿಸ್ ಘಟಕಗಳು, ಹೈವೇ ಮಾಡಿದ್ದೀವಿ ಇಷ್ಟು ಕೊಡುಗೆ ಕೊಟ್ಟಿದ್ದೀವಿ ಎಂದು ಸುಧಾಕರ್‍ಗೆ ಟಾಂಗ್ ನೀಡಿದರು.

    ಅನರ್ಹ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ವಿಚಾರವಾಗಿ ಪ್ರತಿಕ್ರಿಯಿಸಿ, ನೋಡೋಣ ಕೋರ್ಟ್ ಏನು ಹೇಳುತ್ತೆ? ಜನ ಏನು ಹೇಳುತ್ತಾರೆ ಎಂದು. ನಾಯಕರು ಸೇಲ್ ಆಗಬಹುದು ಆದರೆ ಮತದಾರರು ಮಾರಾಟವಾಗುವುದಿಲ್ಲ. ವ್ಯಾಪಾರ ಮಾಡಿಕೊಳ್ಳುವವರು ಇದ್ದೇ ಇರುತ್ತಾರೆ. ಕೆಲವರು ಕೋಳಿ ವ್ಯಾಪಾರ, ಮೊಟ್ಟೆ ವ್ಯಾಪಾರ, ಬಟ್ಟೆ ವ್ಯಾಪಾರ, ಇನ್ನೂ ಕೆಲವರು ವೋಟಿನ ವ್ಯಾಪಾರ. ಅವರು ಇದ್ದೇ ಇರುತ್ತಾರೆ ಅಂತವರ ಆಟ ನಡೆಯುವುದಿಲ್ಲ ಎಂದು ಸುಧಾಕರ್ ವಿರುದ್ಧ ಆಕ್ರೋಶ ಹೊರಹಾಕಿದರು.

    ಸುಧಾಕರ್ ಹೇಳೀದ್ದೇನು?
    ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ದೇವಿಶೆಟ್ಟಿಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ಉಪಚುನಾವಣೆ ನಿಮಿತ್ತ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪಕ್ಷ ಸಂಘಟನೆ ಹಾಗೂ ಚುನಾವಣಾ ಪೂರ್ವ ಪ್ರಚಾರದ ತಯಾರಿಗಳನ್ನು ನಡೆಸಿದ್ದಾರೆ. ಹೀಗಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅನರ್ಹ ಶಾಸಕ ಸುಧಾಕರ್, ರಮೇಶ್ ಕುಮಾರ್ ಕ್ಷೇತ್ರಕ್ಕೆ ಬಂದಿರೋದು ಸ್ವಾಗತ. ಆದರೆ ಕ್ಷೇತ್ರದ ಜನತೆಗೆ 1978 ರಿಂದ ಶಾಸಕರಾಗಿರುವ ರಮೇಶ್ ಕುಮಾರ್ ಕಳೆದ ಬಾರಿ ಆರೋಗ್ಯ ಸಚಿವರಾಗಿದ್ದ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಲಿ. ರಮೇಶ್ ಕುಮಾರ್ ರವರ ನೀಡಿರುವ ಕಾನೂನು ಬಾಹಿರ ತೀರ್ಪು ಸುಪ್ರೀಂಕೋರ್ಟ್ ನಲ್ಲಿ ರದ್ದಾಗುತ್ತೆ. ತದನಂತರ ರಮೇಶ್ ಕುಮಾರ್ ಬಗ್ಗೆ ಮಾತನಾಡ್ತೇನೆ ಎಂದು ಹೇಳಿದ್ದರು.