Tag: Ramcharitmanas

  • ರಾಮಚರಿತಮಾನಸ ಸಮಾಜದಲ್ಲಿ ದ್ವೇಷವನ್ನು ಹರಡುತ್ತದೆ – ಶಿಕ್ಷಣ ಸಚಿವ ಚಂದ್ರಶೇಖರ್ ವಿವಾದಾತ್ಮಕ ಹೇಳಿಕೆ

    ರಾಮಚರಿತಮಾನಸ ಸಮಾಜದಲ್ಲಿ ದ್ವೇಷವನ್ನು ಹರಡುತ್ತದೆ – ಶಿಕ್ಷಣ ಸಚಿವ ಚಂದ್ರಶೇಖರ್ ವಿವಾದಾತ್ಮಕ ಹೇಳಿಕೆ

    ಪಾಟ್ನಾ: ರಾಮಾಯಣವನ್ನು ಆಧರಿಸಿ ರಚಿತವಾದ ಹಿಂದೂ ಧಾರ್ಮಿಕ ಗ್ರಂಥ ರಾಮಚರಿತಮಾನಸವು (Ramcharitmanas) ಸಮಾಜದಲ್ಲಿ ದ್ವೇಷವನ್ನು ಹರಡುತ್ತದೆ ಎಂದು ಬಿಹಾರದ (Bihar) ಶಿಕ್ಷಣ ಸಚಿವ (Education Minister) ಚಂದ್ರಶೇಖರ್ (Chandra Shekhar) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಳಂದ ಮುಕ್ತ ವಿಶ್ವವಿದ್ಯಾನಿಲಯದ 15ನೇ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡುವ ವೇಳೆ ಚಂದ್ರಶೇಖರ್ ಈ ಹೇಳಿಕೆ ನೀಡಿದ್ದು, ಹೊಸ ವಿವಾದ ಹುಟ್ಟು ಹಾಕಿದೆ. ಸಮಾಜದ ಕೆಳವರ್ಗದವರು ಶಿಕ್ಷಣ ಪಡೆದರೆ ವಿಷಕಾರಿಯಾಗುತ್ತಾರೆ ಎಂದು ರಾಮಚರಿತಮಾನಸ ಹೇಳುತ್ತದೆ. ರಾಮಚರಿತಮಾನಸ, ಮನುಸ್ಮೃತಿ ಮತ್ತು ಎಂಎಸ್ ಗೋಲ್ವಾಲ್ಕರ್ ಅವರ ಚಿಂತನೆಗಳ ಪುಸ್ತಕಗಳು ಸಾಮಾಜಿಕ ವಿಭಜನೆಯನ್ನು ಸೃಷ್ಟಿಸಿವೆ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದರು. ಇದನ್ನೂ ಓದಿ: ಸ್ಮೂಕಿಂಗ್ ಝೋನ್ ನಿರ್ಮಿಸದ ಬೆಂಗ್ಳೂರಿನ 378 ಹೋಟೆಲ್‌ಗಳಿಗೆ BBMP ನೋಟಿಸ್‌

    ಪ್ರೀತಿ ಮತ್ತು ವಾತ್ಸಲ್ಯದಿಂದ ರಾಷ್ಟ್ರವು ಶ್ರೇಷ್ಠವಾಗುತ್ತದೆ. ರಾಮಚರಿತಮಾನಸ, ಮನುಸ್ಮೃತಿ ಮತ್ತು ಬಂಚ್ ಆಫ್ ಥಾಟ್ಸ್‌ನಂತಹ ಪುಸ್ತಕಗಳು ದ್ವೇಷ ಮತ್ತು ಸಾಮಾಜಿಕ ವಿಭಜನೆಯ ಬೀಜಗಳನ್ನು ಬಿತ್ತಿದವು. ದಲಿತರು, ಹಿಂದುಳಿದವರು ಮತ್ತು ಮಹಿಳೆಯರ ಶಿಕ್ಷಣದ ವಿರುದ್ಧ ಮಾತನಾಡುವ ರಾಮಚರಿತಮಾನದ ಭಾಗಕ್ಕೆ ಜನರು ಮನುಸ್ಮೃತಿಯನ್ನು ಸುಟ್ಟುಹಾಕಲು ಮತ್ತು ಅಪವಾದವನ್ನು ತೆಗೆದುಕೊಳ್ಳಲು ಇದೇ ಕಾರಣ, ಅವರು ಹೇಳಿದರು. ಇದನ್ನೂ ಓದಿ: ರಜಾ ದಿನಗಳಲ್ಲಿ ಸಹೋದ್ಯೋಗಿಗೆ ತೊಂದರೆ ನೀಡಿದ್ರೆ 1 ಲಕ್ಷ ದಂಡ..!

    ಸಚಿವರ ವಿವಾದಾತ್ಮಕ ಹೇಳಿಕೆಗೆ ಭಾರತೀಯ ಜನತಾ ಪಕ್ಷ ಪ್ರತಿಕ್ರಿಯಿಸಿದ್ದು, ಪಕ್ಷದ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ, ಇದು ಸಂಯೋಗ ಅಲ್ಲ ವೋಟ್‍ಬ್ಯಾಂಕ್ ಕಾ ಉದ್ಯೋಗ ಎಂದು ವ್ಯಂಗ್ಯವಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಈ ಅಪರೂಪದ ಕೃತಿಯ ದರ್ಶನ ಪಡೆದರೆ ಮಾನವನ ಎಲ್ಲ ಸಂಕಷ್ಟ ದೂರ!

    ಈ ಅಪರೂಪದ ಕೃತಿಯ ದರ್ಶನ ಪಡೆದರೆ ಮಾನವನ ಎಲ್ಲ ಸಂಕಷ್ಟ ದೂರ!

    447 ವರ್ಷಗಳ ಹಳೆಯ ಗೋಸ್ವಾಮಿ, ತುಳಸಿದಾಸರ ಕೈಬರಹದ ರಾಮಚರಿತಮಾನಸವನ್ನು ಇನ್ನೂ ಸಂರಕ್ಷಿಸಿರುವ ವಿಶೇಷ ಸುದ್ದಿಯೊಂದು ರಾಜಪುರದಲ್ಲಿ ಹೊರಬಂದಿದೆ. ಅಲ್ಲದೆ ಈ ಕೃತಿಯನ್ನು ನೋಡಿದರೆ ಮಾನವನ ಎಲ್ಲ ಸಂಕಷ್ಟ ದೂರವಾಗುತ್ತೆ ಎಂದು ಎಷ್ಟೋ ಜನರು ನಂಬುತ್ತಾರೆ.

    447 ವರ್ಷಗಳ ಹಿಂದೆ ಗೋಸ್ವಾಮಿ ಅವರು ತಾಳೆಗರಿ ಮೇಲೆ ಬರೆದ ‘ರಾಮಚರಿತಮಾನಸ’ ಇನ್ನೂ ಅವರ ಹುಟ್ಟೂರಿನಲ್ಲಿ ಸಂರಕ್ಷಿಸಲಾಗಿದೆ. ಗೋಸ್ವಾಮಿ ಅವರ ಹಳ್ಳಿ ರಾಜಪುರದಲ್ಲಿ ಇವರ ಕೈಬರಹವಿದೆ. ಈ ಕೈಬರಹದ ರಾಮಚರಿತಮಾನಸವನ್ನು ನೋಡಿದಾಗ, 500 ವರ್ಷಗಳಲ್ಲಿ ಹಿಂದಿ ವರ್ಣಮಾಲೆಯ 15 ಅಕ್ಷರಗಳು ಬದಲಾಗಿವೆ ಎಂದು ತಿಳಿದಿದೆ. ಇದನ್ನೂ ಓದಿ: ತುಂಗಾಭದ್ರಾ ಆರತಿಯಿಂದ ಹರಿಹರದ ಗತವೈಭವ ಮರಳಿ ಪಡೆಯುವ ಗುರಿ: ವಚನಾನಂದ ಸ್ವಾಮೀಜಿ

    ಶ್ರೀರಾಮನನ್ನು ಸಾಮಾನ್ಯ ಜನರ ಬಳಿಗೆ ತರುವಲ್ಲಿ ‘ರಾಮಚರಿತಮಾನಸ’ ಮಹಾಕಾವ್ಯದ ಪಾತ್ರ ದೊಡ್ಡದು. ಗೋಸ್ವಾಮಿ ತುಳಸಿದಾಸರು ರಚಿಸಿದ ರಾಮಚರಿತಮಾನಸಗಳ ರಚನೆಯು 966 ದಿನಗಳಲ್ಲಿ ಪೂರ್ಣಗೊಂಡಿತು. ಇದಕ್ಕಾಗಿ ತುಳಸಿದಾಸರು ಅಯೋಧ್ಯೆ, ಕಾಶಿ, ಹಾಗೂ ಶ್ರೀರಾಮನ ಕುರಿತಾದ ಪುರಾವೆಗಳು ಇರುವ ಎಲ್ಲ ಸ್ಥಳಗಳಿಗೆ ಭೇಟಿ ನೀಡಿದ್ದರು.

    ತುಳಸಿದಾಸರ ರಾಮಚರಿತಮಾನಸ ಅವರ ಹುಟ್ಟೂರು ರಾಜಾಪುರದಲ್ಲಿ ಈಗಲೂ ಇದೆ. ಗೋಸ್ವಾಮಿ ತುಳಸಿದಾಸರು ಬರೆದ ನೂರಾರು ವರ್ಷಗಳ ಹಳೆಯ ಕೃತಿ ಇಂದಿಗೂ ಸುರಕ್ಷಿತವಾಗಿವೆ. ಶ್ರಾವಣ ಮಾಸದಲ್ಲಿ ಈ ಕೃತಿಯ ಅಪರೂಪದ ದರ್ಶನ ಪಡೆದರೆ ಮಾನವನ ಎಲ್ಲ ಸಂಕಷ್ಟಗಳನ್ನು ದೂರ ಮಾಡುತ್ತದೆ ಎಂದು ನಂಬಲಾಗಿದೆ.

    ರಾಮಚರಿತಮಾನಸನ ಸೇವಕ ರಾಮಾಶ್ರಯ, ಮಹಾಕಾವ್ಯವನ್ನು 76ನೇ ವಯಸ್ಸಿನಲ್ಲಿ ತುಳಸಿದಾಸರು ರಚಿಸಿದರು ಎಂದು ತಿಳಿಸಿದ್ದರು. ಈಗ ಅಯೋಧ್ಯೆ ವಿಷಯ ಕುರಿತು ಬರೆದ ಭಾಗ ಮಾತ್ರ ಉಳಿದಿದ್ದು, ಉಳಿದೆಲ್ಲವೂ ಕಣ್ಮರೆಯಾಗಿದೆ.

    ರಾಮಾಶ್ರಯ ಅವರ ತುಳಸಿದಾಸರ ಕೈಬರಹದ ರಾಮಕಥೆಯನ್ನು ಓದುವ ತಿಳುವಳಿಕೆ ಇವರಿಗಿದೆ. ರಾಮಾಶ್ರಯರು ತುಳಸೀದಾಸರ ಶಿಷ್ಯರ 11ನೇ ತಲೆಮಾರಿನವರಾಗಿದ್ದು, ಅವರ ಕುಟುಂಬವು ಕಳೆದ 500 ವರ್ಷಗಳಿಂದ ಈ ಮಹಾನ್ ಗ್ರಂಥವನ್ನು ಸಂರಕ್ಷಿಸುತ್ತಿದ್ದಾರೆ. ಇವರ ಬರಹದಲ್ಲಿರುವ ಎಷ್ಟೋ ಪದ, ಅಕ್ಷರಗಳು ಪ್ರಸ್ತುತ ಹಿಂದಿಯಲ್ಲಿ ಇಲ್ಲ. ಕಳೆದ 50 ವರ್ಷಗಳಲ್ಲಿ ಹಿಂದಿಯಲ್ಲಿ ತುಂಬಾ ಬದಲಾವಣೆ ಆಗಿದೆ ಎಂಬುದು ಈ ಮೂಲಕ ತಿಳಿದುಬರುತ್ತೆ. ಇದನ್ನೂ ಓದಿ: ರಾಜಕೀಯಕ್ಕೆ ಬರ್ತಾರಾ ನಿರ್ದೇಶಕ ಪ್ರೇಮ್..?

    ಜಪಾನೀಸ್ ತಂತ್ರಜ್ಞಾನದ ಬಳಕೆ!
    ಈ ಪುಸ್ತಕವನ್ನು ಸಂರಕ್ಷಿಸಲು ಭಾರತದ ಪುರಾತತ್ವ ಇಲಾಖೆಯು ಜಪಾನಿನ ತಂತ್ರಗಳನ್ನು ಬಳಸಿದೆ. ಅದರಲ್ಲಿ ಕಾಗದವನ್ನು ಎಲ್ಲೆಲ್ಲಿ ತೆಗೆದರೂ ಅದನ್ನು ಜಪಾನೀಸ್ ಲೇಪನದ ಮೂಲಕ ಸೇರಿಸಲಾಗುತ್ತದೆ.