Tag: ramayana film

  • ‘ರಾಮಾಯಣ’ ಚಿತ್ರಕ್ಕಾಗಿ ರಣ್‌ಬೀರ್ ಕಪೂರ್ ಹೇರ್ ಸ್ಟೈಲ್ ಚೇಂಜ್

    ‘ರಾಮಾಯಣ’ ಚಿತ್ರಕ್ಕಾಗಿ ರಣ್‌ಬೀರ್ ಕಪೂರ್ ಹೇರ್ ಸ್ಟೈಲ್ ಚೇಂಜ್

    ‘ಅನಿಮಲ್’ (Animal) ಸಿನಿಮಾದ ಸಕ್ಸಸ್ ನಂತರ ರಣ್‌ಬೀರ್ ಕಪೂರ್ ‘ರಾಮಾಯಣ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ರಾಮನಾಗಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ರಣ್‌ಬೀರ್ ಕಪೂರ್ ಹೊಸ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಣ್‌ಬೀರ್ (Ranbir Kapoor) ನಯಾ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ‘ರಾಮಾಯಣ’ ಸಿನಿಮಾದಲ್ಲಿ ರಾಮನಾಗಿ ರಣ್‌ಬೀರ್ ಕಾಣಿಸಿಕೊಂಡ್ರೆ, ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದೆ. ಇದೀಗ ರಣ್‌ಬೀರ್ ಕಪೂರ್ ಹೇರ್ ಸ್ಟೈಲ್ ಚೇಂಜ್ ಮಾಡಿರೋದು ಅಭಿಮಾನಿಗಳ ಗಮನ ಸೆಳೆದಿದೆ. ಕಣ್ಣಿಗೆ ಸ್ಟೈಲ್‌ ಆಗಿ ಕನ್ನಡಕ ಹಾಕಿ ಕಪ್ಪು ಟೀ ಶರ್ಟ್ ಧರಿಸಿ ನಟ ಸ್ಟೈಲೀಶ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

    ಇನ್ನೂ ‘ರಾಮಾಯಣ’ (Ramayana) ಸಿನಿಮಾವನ್ನು ನಿತೇಶ್ ನಿರ್ದೇಶನ ಮಾಡುತ್ತಿದ್ದಾರೆ. ‘ಅನಿಮಲ್’ ಚಿತ್ರದಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ರು, ಈಗ ರಾಮನಾಗಿ ರಣ್‌ಬೀರ್ ಮತ್ತೊಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದನ್ನೂ ಓದಿ:‘ರಣಹದ್ದು’ ಚಿತ್ರ ಟೀಸರ್ ರಿಲೀಸ್: ಇದು ತಂದೆ-ಮಕ್ಕಳ ಸಿನಿಮಾ

    ಲವ್ & ವಾರ್, ಅನಿಮಲ್ ಪಾರ್ಕ್ ಸೇರಿದಂತೆ ಹಲವು ಚಿತ್ರಗಳು ರಣ್‌ಬೀರ್ ಕಪೂರ್ ಕೈಯಲ್ಲಿವೆ.

  • ಅಶ್ಲೀಲ ಪದ ಬಳಸಿದ ಫೋಟೋಗ್ರಾಫರ್- ಶಾಕ್ ಆದ ರಣ್‌ಬೀರ್ ಕಪೂರ್

    ಅಶ್ಲೀಲ ಪದ ಬಳಸಿದ ಫೋಟೋಗ್ರಾಫರ್- ಶಾಕ್ ಆದ ರಣ್‌ಬೀರ್ ಕಪೂರ್

    ಬಾಲಿವುಡ್ ನಟ ರಣ್‌ಬೀರ್ ಕಪೂರ್ (Ranbir Kapoor) ಸದ್ಯ ‘ರಾಮಾಯಣ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಆಭರಣ ಮಳಿಗೆಯೊಂದಕ್ಕೆ ನಟ ಚಾಲನೆ ನೀಡಿದ್ದಾರೆ. ಈ ವೇಳೆ, ರಣ್‌ಬೀರ್ ವೇದಿಕೆ ಮೇಲಿದ್ದಾಗ ಫೋಟೋಗ್ರಾಫರ್ ಅಶ್ಲೀಲ ಪದ ಬಳಸಿ ಮಾತನಾಡಿದ್ದು, ಕೇಳಿ ಶಾಕ್ ಆಗಿದ್ದಾರೆ.

    ರಣ್‌ಬೀರ್ ವೇದಿಕೆಗೆ ಎಂಟ್ರಿ ಕೊಟ್ಟಾಗ ಬೇಗನೆ ಫೋಟೋ ಕ್ಲಿಕ್ಕಿಸಬೇಕೆಂಬ ತವಕ. ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದ ನಿಮಿತ್ತ ಫೋಟೋಗ್ರಾಫರ್‌ಗೆ ಸರಿಯಾದ ಫೋಟೋ ಸಿಗದ ಕಾರಣ ಸಿಟ್ಟಾಗಿದ್ದಾರೆ. ಈ ವೇಳೆ, ಕೆಟ್ಟ ಪದ ಬಳಸಿ ಮಾತನಾಡಿದ್ದಾರೆ. ಆ ಪದ ಬಳಕೆ ಮಾಡಿದ್ದು, ರಣ್‌ಬೀರ್ ಅವರಿಗೇನಾ ಅಥವಾ ಸೇರಿದ್ದ ಜನರಿಗೇನಾ? ಎಂದು ಸ್ಪಷ್ಟನೆ ಸಿಕ್ಕಿಲ್ಲ. ಒಟ್ನಲ್ಲಿ ಫೋಟೋಗ್ರಾಫರ್ ವರ್ತನೆ ರಣ್‌ಬೀರ್‌ಗೆ ಕೋಪ ತರಿಸಿದೆ.

    ರಣ್‌ಬೀರ್ ಕೂಡ ತಾಳ್ಮೆ ಕಳೆದುಕೊಂಡಿಲ್ಲ. ಖಡಕ್ ಆಗಿ ಲುಕ್ ಕೊಟ್ಟು ವೇದಿಕೆಯಿಂದ ಹೊರನಡೆದಿದ್ದಾರೆ. ವೈರಲ್‌ ಆಗಿರುವ ವಿಡಿಯೋ ನೋಡಿ ಫೋಟೋಗ್ರಾಫರ್ ವರ್ತನೆಗೆ ಫ್ಯಾನ್ಸ್ ಗರಂ ಆಗಿದ್ದಾರೆ. ಎಲ್ಲಿ ಹೇಗಿರಬೇಕು ಎಂಬ ಸೌಜನ್ಯವಿಲ್ಲ ಎಂದು ಖಡಕ್ ಆಗಿ ಪಾಪರಾಜಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಕೈಯಲ್ಲಿ ಗನ್ ಹಿಡಿದು ರಕ್ತಸಿಕ್ತ ಅವತಾರದಲ್ಲಿ ಸಮಂತಾ

    ರಾಮಾಯಣ, ಅನಿಮಲ್ ಪಾರ್ಕ್, ಬ್ರಹ್ಮಾಸ್ತ್ರ 2, ಲವ್ & ವಾರ್ ಸೇರಿದಂತೆ ಹಲವು ಸಿನಿಮಾಗಳು ರಣ್‌ಬೀರ್ ಕೈಯಲ್ಲಿವೆ.

  • ‘ರಾಮಾಯಣ’ ಸಿನಿಮಾ ಬಗ್ಗೆ ಯಶ್‌ ಹೇಳಿದ್ದೇನು?

    ‘ರಾಮಾಯಣ’ ಸಿನಿಮಾ ಬಗ್ಗೆ ಯಶ್‌ ಹೇಳಿದ್ದೇನು?

    ನ್ಯಾಷನಲ್ ಸ್ಟಾರ್ ಯಶ್ (Yash) ಇಂದು (ಏ.26) ಹೊಸಕೆರೆಹಳ್ಳಿಯಲ್ಲಿ ಮತದಾನ ಮಾಡಿದ್ದಾರೆ. ದೇಶಕ್ಕಾಗಿ ಮತದಾನ ಮಾಡಬೇಕು ಎಂದು ಯಂಗ್‌ಸ್ಟರ್‌ಗೆ ಯಶ್ ಕಿವಿಹಿಂಡಿದ್ದಾರೆ. ಈ ವೇಳೆ, ಮಾಧ್ಯಮ ಎದುರು ಬಂದ ಯಶ್‌ಗೆ ‘ರಾಮಾಯಣ’ ಸಿನಿಮಾ ಬಗ್ಗೆ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ‘ರಾಮಾಯಣ’ (Ramayana) ಸಿನಿಮಾ ಬಗ್ಗೆ ಯಶ್ ಮಾತನಾಡಿ, ಈಗ ವೋಟಿಂಗ್ ನಡೆಯುತ್ತಿದೆ. ವಿಷಯವನ್ನು ಡೈವರ್ಟ್ ಮಾಡಬೇಡಿ. ಈ ವಿಚಾರದ ಬಗ್ಗೆ ಮುಂದೆ ಮಾತಾಡೋಣ. ನಾನು ಎಲ್ಲೂ ಹೋಗಲ್ಲ ಇಲ್ಲೇ ಇರುತ್ತೇನೆ ಮಾತಾಡೋಣ ಎಂದು ಯಶ್ ರಿಯಾಕ್ಟ್‌ ಮಾಡಿದ್ದರು. ಬಳಿಕ ‘ರಾಮಾಯಣ’ ಸಿನಿಮಾ ಬಗ್ಗೆ ಯಾವುದೇ ಅಪ್‌ಡೇಟ್ ನೀಡಲಿಲ್ಲ.‌ ಇದನ್ನೂ ಓದಿ:ನನ್ನ ಕೆಣಕಿದರೆ ನೆಟ್ಟಗೆ ಇರಲ್ಲ: ಸಚಿವನಿಗೆ ವಾರ್ನ್ ಮಾಡಿದ ನಟ ವಿಶಾಲ್

    ‘ರಾಮಾಯಣ’ ಸಿನಿಮಾ ಬಹುಕೋಟಿ ವೆಚ್ಚದಲ್ಲಿ ಮೂಡಿ ಬರುತ್ತಿದೆ. ನಿತೇಶ್ ತಿವಾರಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ರಣ್‌ಬೀರ್ ಕಪೂರ್ ರಾಮನಾದ್ರೆ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಯಶ್ ಕೂಡ ಸಹ ನಿರ್ಮಾಪಕರಾಗಿದ್ದಾರೆ.

    ಕೆಜಿಎಫ್‌ 2 (KGF 2) ಸಕ್ಸಸ್‌ ನಂತರ ಯಶ್ ‘ಟಾಕ್ಸಿಕ್‌’ (Toxic Film) ಸಿನಿಮಾಗಾಗಿ ನಟನೆಯ ಜೊತೆ ನಿರ್ಮಾಣದ ಹೊಣೆ ಕೂಡ ಹೊತ್ತಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆ ಇದೆ.