Tag: ramanatha rai

  • ಬಶೀರ್ ಹತ್ಯೆಯಲ್ಲಿ ನಳಿನ್ ಕೈವಾಡ ಇದೆಯೇ? ಹೀಗೆಂದು ನಾನು ಹೇಳಿಕೆ ನೀಡಲ್ಲ:  ರಮಾನಾಥ ರೈ

    ಬಶೀರ್ ಹತ್ಯೆಯಲ್ಲಿ ನಳಿನ್ ಕೈವಾಡ ಇದೆಯೇ? ಹೀಗೆಂದು ನಾನು ಹೇಳಿಕೆ ನೀಡಲ್ಲ: ರಮಾನಾಥ ರೈ

    ಮಂಗಳೂರು: ಸುರತ್ಕಲ್ ಸಮೀಪದ ಕಾಟಿಪಳ್ಳದ ದೀಪಕ್ ರಾವ್ ಹತ್ಯೆ ವಿಚಾರದಲ್ಲಿ ತನ್ನ ಪಾತ್ರವಿದೆಯೆಂದು ಸಂಸದ ನಳಿನ್ ಕುಮಾರ್ ಹೇಳಿದ್ದರು. ಹಾಗಾದ್ರೆ ಬಶೀರ್ ಹತ್ಯೆಯಲ್ಲಿ ನಳಿನ್ ಕುಮಾರ್ ಪಾತ್ರ ಇದೆಯೇ ಅಂತಾ ನಾನು ಕೇಳಬಹುದೇ ಎಂದು ಸಚಿವ ರಮಾನಾಥ ರೈ ಹೇಳಿದ್ದಾರೆ.

    ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವ ರಮಾನಾಥ ರೈ, ದೀಪಕ್ ಹತ್ಯೆಯಾದಾಗ ದೆಹಲಿಯಲ್ಲಿದ್ದ ನಳಿನ್, ಹತ್ಯೆ ಪ್ರಕರಣದಲ್ಲಿ ನನ್ನ ಹೆಸರನ್ನು ಹೇಳಿದ್ದರು. ಹಾಗಾದ್ರೆ ಬಶೀರ್ ಹತ್ಯೆಯಲ್ಲಿ ನಳಿನ್ ಕೈವಾಡ ಇದೆಯೇ? ಹೀಗಂತ ಕೆಟ್ಟ ಹೇಳಿಕೆ ನಾನು ನೀಡುವುದಿಲ್ಲ. ಇವರ ಮೇಲೆ ಆರೋಪ ಬಂದಾಗ ನೋವಾಗುತ್ತಂತೆ. ಹಾಗಾದ್ರೆ ಇಲ್ಲಿನ ಎಲ್ಲಾ ಕೊಲೆಗಳಿಗೂ ನಾನೇ ಕಾರಣನಾ? ಎಂದು ಪ್ರಶ್ನಿಸಿದ ಅವರು, ನನಗೆ, ನನ್ನ ಕುಟುಂಬದವರಿಗೆ ನೋವಾಗುವುದಿಲ್ಲವೇ ಅಂತ ಪ್ರಶ್ನಿಸಿದ್ರು.  ಇದನ್ನೂ ಓದಿ:  ಕರಾವಳಿಯಲ್ಲಿ ಹಿಂದೂಗಳು ಹತ್ಯೆ ಮಾಡ್ತಿದ್ದಾರೆ- ಸಿಎಂ ಎದುರೇ ರೈ ವಿವಾದಾತ್ಮಕ ಹೇಳಿಕೆ

    ಕುಮಾರಸ್ವಾಮಿಯವರು ದೀಪಕ್ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಕಾರ್ಪೋ ರೇಟರ್ ಕೈವಾಡ ಇದೆಯೆಂದು ಹೇಳಿದಾಗಲೂ ಇವರಿಗೆ ನೋವಾಗಿದ್ಯಂತೆ. ಇದಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾದ್ರೆ ಇಲ್ಲಿ ನಡೆದ ಎಲ್ಲ ಕೊಲೆಗಳಿಗೆ ನನ್ನ ಹೆಸರನ್ನು ಹೇಳ್ತಾ ಬಂದಿದ್ದಾರೆ. ಇದರಿಂದ ನನಗೆ ನೋವಾಗುವುದಿಲ್ಲವೇ? ನಾನು ಕೂಡ, ದೇವರಲ್ಲಿ ಬೇಡಿಕೊಂಡಿದ್ದೇನೆ. ನನ್ನ ವಿರುದ್ಧ ಅಪಪ್ರಚಾರ ಮಾಡಿದವರಿಗೆ ಬುದ್ಧಿ ಕಲಿಸೆಂದು ಪ್ರಾರ್ಥಿಸಿದ್ದೇನೆ ಅಂತಾ ಹೇಳಿದರು. ಇದನ್ನೂ ಓದಿ: ದೀಪಕ್ ಹತ್ಯೆ ನಡೆದ ರಾತ್ರಿ ಮಂಗ್ಳೂರಿನಲ್ಲಿ ವ್ಯಾಪಾರಿಯ ಮೇಲೆ ಮಾರಣಾಂತಿಕ ಹಲ್ಲೆ: ಸಿಸಿಟಿವಿಯಲ್ಲಿ ಸೆರೆ

    ಇದನ್ನೂ ಓದಿ: ದೀಪಕ್ ರಾವ್, ಬಶೀರ್ ಮನೆಗೆ ಸಿಎಂ ಭೇಟಿ- ದೀಪಕ್ ರಾವ್ ತಮ್ಮನಿಗೆ ಎಂಆರ್ ಪಿಎಲ್ ನಲ್ಲಿ ಕೆಲಸ ನೀಡುವಂತೆ ಸೂಚನೆ

  • ಕರಾವಳಿಯಲ್ಲಿ ಹಿಂದೂಗಳು ಹತ್ಯೆ ಮಾಡ್ತಿದ್ದಾರೆ- ಸಿಎಂ ಎದುರೇ ರೈ ವಿವಾದಾತ್ಮಕ ಹೇಳಿಕೆ

    ಕರಾವಳಿಯಲ್ಲಿ ಹಿಂದೂಗಳು ಹತ್ಯೆ ಮಾಡ್ತಿದ್ದಾರೆ- ಸಿಎಂ ಎದುರೇ ರೈ ವಿವಾದಾತ್ಮಕ ಹೇಳಿಕೆ

    ಮಂಗಳೂರು: ಕರಾವಳಿಯಲ್ಲಿ ಹಿಂದೂಗಳು, ಸಂಘ ಪರಿವಾರದವರು ಹತ್ಯೆ ಮಾಡುತ್ತಿದ್ದಾರೆ ಅಂತ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಬಂದಿದ್ದ ವೇಳೆ ಬಶೀರ್ ಸಾವಿನ ಕುರಿತು ಸುದ್ದಿಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆ ಪಡೆಯುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ರೈ, ಹಿಂದೂ ವಿರೋಧಿ ನೀತಿಯನ್ನು ಸಿಎಂ ಎದುರೇ ಪ್ರದರ್ಶಿಸಿದ್ದಾರೆ. ಇದನ್ನೂ ಓದಿ: ಬಶೀರ್ ಸಾವಿನ ಕುರಿತು ಸಂಸದ ಪ್ರತಾಪ್ ಸಿಂಹ ಹೀಗಂದ್ರು

    ಕರಾವಳಿಯಲ್ಲಿ ಹಿಂದೂಗಳಿಂದಲೇ ಹತ್ಯೆ ನಡೆಯುತ್ತಿವೆ. ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಈ ಹತ್ಯೆಗಳನ್ನು ಮಾಡಲಾಗುತ್ತಿದೆ ಎಂದು ನೇರವಾಗಿ ಆರೋಪಿಸಿದ್ರು. ಇದನ್ನೂ ಓದಿ: ಬಶೀರ್ ಹತ್ಯೆ ಖಂಡಿಸಿ ಬಿಜೆಪಿಯವರೇಕೆ ಬೀದಿಗಿಳಿದಿಲ್ಲ- ಸಿಎಂ ಪ್ರಶ್ನೆ

    ಬಷೀರ್ ಗೆ ಸಂತಾಪ ಸೂಚಿಸಿದ ಅವರು, ಈ ಹತ್ಯೆಗಳಲ್ಲಿ ಕಾಣದ ಕೈಗಳ ಕೈವಾಡ ಇದೆ. ಚುನಾವಣೆ ಹಿನ್ನೆಲೆಯಲ್ಲಿ ಇಂತಹ ಕೃತ್ಯ ಆಗುತ್ತಿದೆ. ಕಾಣದ ಕೈಗಳ ಮೂಲ ಹುಡುಕುತ್ತೇವೆ. ಸಂಘಪರಿವಾದವರು ಪ್ರಚೋದನಕಾರಿ ಹೇಳಿಕೆ ನೀಡ್ತಾರೆ. ಹತ್ಯೆಯಲ್ಲಿ ಕಾಂಗ್ರೆಸ್ ಪಾತ್ರ ಇಲ್ಲ ಎಂದು ಹೇಳಿದ್ದಾರೆ.

    ಬಶೀರ್ ಕುಟುಂಬಕ್ಕೆ 10 ಲಕ್ಷ ಪರಿಹಾರವನ್ನು ಡಿಸಿ ಸಸಿಕಾಂತ್ ಸೆಂಥಿಲ್ ಅವರು ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಘೋಷಣೆ ಮಾಡಿದ್ದಾರೆ.

    ಜ.3ರಂದು ಮಧ್ಯಾಹ್ನ 1.30ರ ವೇಳೆಗೆ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ದೀಪಕ್ ರಾವ್ ಅವರನ್ನು ಅಡ್ಡಗಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ದೀಪಕ್ ಸ್ಥಳದಲ್ಲೇ ಮೃತಪಟ್ಟಿದ್ದರು. ಅಂದೇ ರಾತ್ರಿ 11.30ರ ಸುಮಾರಿಗೆ ಫಾಸ್ಟ್ ಫುಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಶೀರ್(47) ತನ್ನ ಮನೆಯತ್ತ ತೆರಳುತ್ತಿದ್ದರು. ಈ ವೇಳೆ 3 ಬೈಕ್‍ನಲ್ಲಿ ಬಂದ 7 ಜನರ ತಂಡ ಏಕಾಏಕಿ ಬಶೀರ್ ಮೇಲೆ ತಲ್ವಾರ್ ದಾಳಿ ನಡೆಸಿ ಪರಾರಿಯಾಗಿದ್ದರು. ಗಂಭಿರ ಗಾಯಗೊಂಡು ನಗರದ ಎಜೆ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಬಶೀರ್ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

    https://www.youtube.com/watch?v=dxBldKE4p2w

    https://www.youtube.com/watch?v=IlGszWsi80U

    https://www.youtube.com/watch?v=ZWFlu1dmwi0

  • ಮಂಗ್ಳೂರಲ್ಲಿ ಆಣೆ ಪ್ರಮಾಣ ರಾಜಕೀಯ- ಸಚಿವರ ಸವಾಲು ಸ್ವೀಕರಿಸಿದ ಜನಾರ್ದನ ಪೂಜಾರಿ ಆಪ್ತರು

    ಮಂಗ್ಳೂರಲ್ಲಿ ಆಣೆ ಪ್ರಮಾಣ ರಾಜಕೀಯ- ಸಚಿವರ ಸವಾಲು ಸ್ವೀಕರಿಸಿದ ಜನಾರ್ದನ ಪೂಜಾರಿ ಆಪ್ತರು

    ಮಂಗಳೂರು: ಒಂದು ಕಾಲದಲ್ಲಿ ರಮಾನಾಥ ರೈ ಪಾಲಿಗೆ ರಾಜಕೀಯ ಗುರುವಾಗಿದ್ದ ಜನಾರ್ದನ ಪೂಜಾರಿಯವರನ್ನೇ ಅವಾಚ್ಯ ಶಬ್ದಗಳಲ್ಲಿ ನಿಂದಿಸಿದರೆಂಬ ಆರೋಪ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿತ್ತು.  ಇದನ್ನೂ ಓದಿ: ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಕಣ್ಣೀರಿಟ್ಟ ಸಚಿವ ರಮಾನಾಥ ರೈ!

    ಸಾರ್ವಜನಿಕ ವೇದಿಕೆಯಲ್ಲಿ ಪೂಜಾರಿಯವರು ಕಣ್ಣೀರು ಹಾಕಿದ್ದು, ಬಿಲ್ಲವರನ್ನು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ರೈ ವಿರುದ್ಧ ಟೀಕೆ ಎದ್ದುಬಂದಿತ್ತು. ಆದರೆ ಮತ್ತೆ ಪೂಜಾರಿಯವರ ಕಣ್ಣೀರಿಗೆ ಪ್ರತಿಯಾಗಿ ರಮಾನಾಥ ರೈ ಕೂಡ ಕಣ್ಣೀರು ಹಾಕಿದ್ದಲ್ಲದೆ, ಆಣೆ ಪ್ರಮಾಣಕ್ಕೆ ಕರೆದಿದ್ದು ಪೂಜಾರಿ ಆಪ್ತರನ್ನು ಕೆರಳಿಸಿತ್ತು.  ಇದನ್ನೂ ಓದಿ: ಬಹಿರಂಗ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಕಣ್ಣೀರು

    ಇದೀಗ ಸವಾಲನ್ನು ಸ್ವೀಕರಿಸಿರುವ ಪೂಜಾರಿ ಆಪ್ತರಾದ ಹರಿಕೃಷ್ಣ ಬಂಟ್ವಾಳ್ ಮತ್ತು ಅರುಣ್ ಕುವೆಲ್ಲೋ ಆಣೆ ಪ್ರಮಾಣಕ್ಕೆ ಸಿದ್ಧರಾಗಿದ್ದಾರೆ. ಅಲ್ಲದೆ ಧರ್ಮಸ್ಥಳಕ್ಕೆ ಜನಾರ್ದನ ಪೂಜಾರಿ ಯಾಕೆ ಬರಬೇಕು. ನಾವೇ ಬರ್ತೀವಿ. ಯಾಕಂದ್ರೆ ರಮಾನಾಥ ರೈ ಪೂಜಾರಿಯವರನ್ನು ನಿಂದಿಸಿದಾಗ ಅರುಣ್ ಕುವೆಲ್ಲೋ ಸಾಕ್ಷಿಯಾಗಿದ್ರು ಅಂತಾ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.  ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಮತ್ತೆ ಕಣ್ಣೀರು!

    https://www.youtube.com/watch?v=d0ABn6LEi-w

    https://www.youtube.com/watch?v=3tD5oKIc3EY

     

  • ತಾಕತ್ತಿದ್ದರೆ ನನ್ನ ವಿರುದ್ಧ ಚುನಾವಣೆಗೆ ನಿಲ್ಲಲಿ- ಕಲ್ಲಡ್ಕ ಭಟ್ ಗೆ ರೈ ಸವಾಲ್

    ತಾಕತ್ತಿದ್ದರೆ ನನ್ನ ವಿರುದ್ಧ ಚುನಾವಣೆಗೆ ನಿಲ್ಲಲಿ- ಕಲ್ಲಡ್ಕ ಭಟ್ ಗೆ ರೈ ಸವಾಲ್

    ಮಡಿಕೇರಿ: ತಾಕತ್ತಿದ್ದರೆ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ನನ್ನ ವಿರುದ್ಧ ಚುನಾವಣೆಗೆ ನಿಲ್ಲಲಿ ಅಂತ ಅರಣ್ಯ ಸಚಿವ ರಮಾನಾಥ ರೈ ಸವಾಲೆಸೆದಿದ್ದಾರೆ.

    ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಚುನಾವಣೆಗೆ ನಿಂತರೆ ಅವರಿಗೆ ಠೇವಣಿ ಸಿಗಲ್ಲ. ಅವ್ರನ್ನ ದೊಡ್ಡ ಜನ ಅಂದುಕೊಂಡಿದ್ದೀರಾ? ಅವರೇನೆಂದು ನಮ್ಮೂರಿನ ಜನರಿಗೆ ಗೊತ್ತಿದೆ ಅಂತ ಪ್ರಭಾಕರ್ ಭಟ್ ವಿರುದ್ಧ ರೈ ಮತ್ತೆ ಕಿಡಿಕಾರಿದ್ರು.

    ಕಲ್ಲಡ್ಕ ಪ್ರಭಾಕರ ಭಟ್ ಕೂಡ ಮಂಜೂರಾತಿ ಆಗಿದ್ದ ಒಂದು ಶಾಲೆಯನ್ನು ಸ್ವಾರ್ಥಕ್ಕಾಗಿ ಮುಚ್ಚಿದ್ದಾರೆ. ಇದೀಗ ಶಾಲೆಯ ವಿಚಾರದ ಚರ್ಚೆ ಅರ್ಥಹೀನ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಸರ್ಕಾರ ಬಿಸಿಯೂಟ ನೀಡುತ್ತದೆ. ಕಲ್ಲಡ್ಕ ಪ್ರಭಾಕರ ಭಟ್ ಶಾಲೆ ಅನುದಾನಿತ ಶಾಲೆ ಅದಕ್ಕೆ ಬಿಸಿಯೂಟ ಸಿಗುತ್ತದೆ. ಆದರೆ ಅವರಿಗೆ ಬಿಸಿಯೂಟ ಬೇಡ, ಹಣ ಬೇಕು, ಅದೂ ದೇವಸ್ಥಾನ ಹಣ. ನಾನು ಹೇಳುತ್ತೇನೆ ದೇವಾಲಯದ ಹಣ ದೇವಾಲಯಕ್ಕೆ ಮಾತ್ರ ಬಳಕೆಯಾಗಬೇಕು. ದೇವಸ್ಥಾನದ ಹಣ ಶಾಲೆಗೆ ಬಳಸಿಕೊಂಡಿರುವುದು ಅಧಿಕಾರ ದುರುಪಯೋಗ. ಹೀಗಾಗಿ ಶಾಲೆಗೆ ಹೋಗುವ ಹಣಕ್ಕೆ ಕಡಿವಾಣ ಹಾಕಿರುವುದು ಸರಿ ಅಂತ ಅವರು ಸರ್ಕಾರದ ನಡೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡರು.

    ದೇಶದಲ್ಲಿ ಬಿಜೆಪಿ ವರ್ಚಸ್ಸು ಕಡಿಮೆಯಾಗುತ್ತಿದೆ. ಲೋಕಸಭಾ ಚುನಾವಣಾ ವೇಳೆ ಇದ್ದ ಶಕ್ತಿ ಅವರಿಗಿಲ್ಲ. ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ತಾವು ನಡೆಸಿದ ಸಾಮರಸ್ಯ ಯಾತ್ರೆ ಯಶಸ್ವಿಯಾಗಿದೆ. ಸೋನಿಯಾ ಗಾಂಧಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ವಿಚಾರದ ಬಗ್ಗೆ ಮಾಹಿತಿ ಇಲ್ಲ, ಸೊ ನೋ ಕಮೆಂಟ್ ಎಂದು ಪ್ರತಿಕ್ರಿಯಿಸಿದರು.

    ಕಾಂಗ್ರೆಸ್ ಮುತ್ಸದ್ಧಿ ಜಾಫರ್ ಷರೀಫ್ ಹೇಳಿಕೆ ಅವರ ವೈಯಕ್ತಿಕ ವಿಚಾರ. ಅಂತಹ ಭಿನ್ನಾಭಿಪ್ರಾಯ ಇಲ್ಲ. ಗುಜರಾತ್ ಚುನಾವಣೆಯ ಎಕ್ಸಿಟ್ ಪೋಲ್ ಬಿಜೆಪಿ ಪರ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ವಿರೋಧಿ ಅಲೆ ಇದ್ದ ಗುಜರಾತ್ ನಲ್ಲಿ ಕಾಂಗ್ರೆಸ್ ಸುಧಾರಣೆ ಕಾಣುತ್ತಿದೆ. ಇನ್ನೂ ಮತ ಎಣಿಕೆ ಕಾರ್ಯ ಬಾಕಿ ಇದೆ, ಚುನಾವಣೆ ಫಲಿತಾಂಶ ಬರುವವರೆಗೆ ಕಾದು ನೋಡೋಣ ಅಂತ ಅವರು ಹೇಳಿದ್ರು.

  • ಬಯೋ ಪಾರ್ಕ್ ಉದ್ಘಾಟನೆಯಲ್ಲಿ ಸಚಿವ ರಮಾನಾಥ ರೈ ಮೇಲೆ ಹೆಜ್ಜೇನು ದಾಳಿ

    ಬಯೋ ಪಾರ್ಕ್ ಉದ್ಘಾಟನೆಯಲ್ಲಿ ಸಚಿವ ರಮಾನಾಥ ರೈ ಮೇಲೆ ಹೆಜ್ಜೇನು ದಾಳಿ

    ಬೆಳಗಾವಿ: ಅರಣ್ಯ ಸಚಿವ ರಮಾನಾಥ ರೈ ಮೇಲೆ ಹೆಜ್ಜೆನು ದಾಳಿ ಮಾಡಿದ್ದು, ಎದ್ನೋ ಬಿದ್ನೋ ಅಂತ ಓಡಿ ಹೋದ ಘಟನೆ ನಡೆದಿದೆ.

    ಬೆಳಗಾವಿಯ ಬಯೋ ಪಾರ್ಕ್ ಉದ್ಘಾಟನೆಗೆ ಸಚಿವ ರಮಾನಾಥ ರೈ, ಸಂಸದ ಸುರೇಶ್ ಅಂಗಡಿ ಸೇರಿದಂತೆ ಅರಣ್ಯ ಇಲಾಖೆಯ ಅನೇಕ ಅಧಿಕಾರಿಗಳು ಪಾಲ್ಗೊಂಡಿದ್ದರು.

    ಸಮಾರಂಭದಲ್ಲಿ ಸುರೇಶ್ ಅಂಗಡಿ ಮಾತನಾಡುತ್ತಿದ್ದ ವೇಳೆ ಏಕಾಏಕಿ ಹೆಜ್ಜೆನು ದಾಳಿ ನಡೆಸಿದೆ. ಡ್ರೋನ್ ಕ್ಯಾಮರಾ ಸದ್ದಿನಿಂದ ಮರದಲ್ಲಿ ಕುಳಿತಿದ್ದ ಹೆಜ್ಜೆನ್ನು ಸಮಾರಂಭದಲ್ಲಿ ಪಾಲ್ಗೊಂಡವರ ಮೇಲೆ ದಾಳಿ ನಡೆಸಿದೆ. ಹೀಗಾಗಿ ಏಕಾಏಕಿ ಸಚಿವ ರಮಾನಾಥ ರೈ ಸೇರಿ ಎಲ್ಲರೂ ಸಮಾರಂಭ ಬಿಟ್ಟು ಅರ್ಧದಲ್ಲಿ ಓಡಿ ಹೋಗಿದ್ದಾರೆ.

    ಘಟನೆಯಲ್ಲಿ 6ಕ್ಕೂ ಹೆಚ್ಚು ಜನರಿಗೆ ಹೆಜ್ಜೇನು ಕಡಿದು ಗಾಯವಾಗಿದೆ. ಗಾಯಾಳುಗಳಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಿಸಲಾಗಿದೆ.

  • ಸೆ.12ರ ಸಾಮರಸ್ಯ ನಡಿಗೆಗೆ ಇವರಿಗೆ ಮಾತ್ರ ಆಹ್ವಾನ: ಸಚಿವ ರೈ ಕರೆ

    ಸೆ.12ರ ಸಾಮರಸ್ಯ ನಡಿಗೆಗೆ ಇವರಿಗೆ ಮಾತ್ರ ಆಹ್ವಾನ: ಸಚಿವ ರೈ ಕರೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯಕ್ಕೆ ತೊಂದರೆಯಾಗಿದೆ. ನಾನು ವಿದ್ಯಾರ್ಥಿಯಾಗಿದ್ದಾಗ ಸಾಮರಸ್ಯ ಇತ್ತು. ಈಗ ವಿದ್ಯಾರ್ಥಿ ಸಂಘಟನೆಗಳು ಮತೀಯವಾದಿಗಳಾಗುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ.

    ಜಿಲ್ಲೆಯಲ್ಲಿ ನಂಬಿಕೆಯ ಹೆಸರಲ್ಲಿ ಹಿಂಸಾಚಾರಗಳು ನಡೆಯುತ್ತಿವೆ. ಮೋದಿಯವರು ನಂಬಿಕೆ ನೆಲೆಯಲ್ಲಿನ ಹಿಂಸೆ ಸಹಿಸುವುದಿಲ್ಲ ಎಂದಿದ್ದಾರೆ. ಈ ಪ್ರಶ್ನೆಯನ್ನು ಅವರ ಶಿಷ್ಯರಲ್ಲೇ ಕೇಳಬೇಕಾಗಿದೆ ಎಂದರು.

    ಈಗ ಜಿಲ್ಲೆಯಲ್ಲಿ ನಡೆಯುತ್ತಿರುವುದು ನಿಯೋಜಿತ ಕೃತ್ಯಗಳು. ಶಾಂತಿ ನೆಲೆಸುವುದಕ್ಕಾಗಿ ಸಾಮರಸ್ಯ ನಡಿಗೆ ಮಾಡುತ್ತೇವೆ. ಸೆಪ್ಟೆಂಬರ್ 12ರಂದು ಫರಂಗಿಪೇಟೆಯಿಂದ ಮಾಣಿವರೆಗೆ ಸಾಮರಸ್ಯ ನಡಿಗೆ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಹತ್ಯೆಗೆ ಕಾರಣವಾಗಿದ್ದ ಬಿಜೆಪಿ, ಪಿಎಫ್‍ಐ ಹೊರತುಪಡಿಸಿ ಎಲ್ಲರೂ ಬನ್ನಿ. ಶಾಂತಿಪ್ರಿಯರಿಗಾಗಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕರೆ ಕೊಡುತ್ತಿದ್ದೇನೆ. ಧಾರ್ಮಿಕ ನಾಯಕರು, ಶಾಂತಿಪ್ರಿಯರು ಕೈಜೋಡಿಸಬೇಕು ಅಂತ ರೈ ನುಡಿದ್ರು.

    ಇದನ್ನೂ ಓದಿ: ಅಶ್ರಫ್ ಸಾಯ್ಸಿದ್ದು ಬಿಜೆಪಿ, ಶರತ್ ಕೊಂದಿದ್ದು ಪಿಎಫ್‍ಐ: ಮತ್ತೆ ಬೆಂಕಿ ಹಚ್ಚಿದ ರೈ

     

  • ಅಶ್ರಫ್ ಸಾಯ್ಸಿದ್ದು ಬಿಜೆಪಿ, ಶರತ್ ಕೊಂದಿದ್ದು ಪಿಎಫ್‍ಐ: ಮತ್ತೆ ಬೆಂಕಿ ಹಚ್ಚಿದ ರೈ

    ಅಶ್ರಫ್ ಸಾಯ್ಸಿದ್ದು ಬಿಜೆಪಿ, ಶರತ್ ಕೊಂದಿದ್ದು ಪಿಎಫ್‍ಐ: ಮತ್ತೆ ಬೆಂಕಿ ಹಚ್ಚಿದ ರೈ

    ಬೆಂಗಳೂರು: ರಾಜ್ಯದಲ್ಲಿ ಜನರ ಹತ್ಯೆಗಳನ್ನು ಮಾಡುವುದು ಎರಡೇ ಪಕ್ಷಗಳು ಅಂತ ಹೇಳುವ ಮೂಲಕ ತಣ್ಣಗಾಗಿರೋ ಕರಾವಳಿಯಲ್ಲಿ ಮತ್ತೆ ಬೆಂಕಿ ಹಚ್ಚುವ ಕೆಲಸಕ್ಕೆ ಅರಣ್ಯ ಸಚಿವ ರಮಾನಾಥ ರೈ ಕೈ ಹಾಕಿದ್ದಾರೆ.

    ಎಸ್‍ಡಿಪಿಐ-ಪಿಎಫ್‍ಐ ಮತ್ತು ಬಿಜೆಪಿ ಕೊಲೆಯ ರಾಜಕಾರಣ ಮಾಡುತ್ತಿದೆ. ಅಶ್ರಫ್‍ನನ್ನು ಬಿಜೆಪಿಯೇ ಕೊಲೆ ಮಾಡಿದೆ. ಅದಕ್ಕೆ ಶರತ್‍ನನ್ನು ಎಸ್‍ಡಿಪಿಐ-ಪಿಎಫ್‍ಐ ಕೊಲೆ ಮಾಡಿದೆ ಅಂತ ಹೇಳಿದ್ದಾರೆ.

    ಈ ಎರಡು ಮತೀಯ ಶಕ್ತಿಗಳು ಕೊಲೆ ರಾಜಕಾರಣ ಮಾಡುತ್ತಿವೆ. ಈ ಮಧ್ಯೆ ನನ್ನ ಬಳಿ ರಾಜೀನಾಮೆ ಕೇಳ್ತಿದ್ದಾರೆ ಅಂತ ಅವರು ಹೇಳಿದರು.

    ಇದನ್ನೂ ಓದಿ: 20 ವರ್ಷ ಬಟ್ಟೆ ಒಗೆದು ಕೊಟ್ರೂ ರೈ ನನ್ನ ನೋವನ್ನು ಕೇಳಲು ಬಂದಿಲ್ಲ: ಶರತ್ ತಂದೆ ತನಿಯಪ್ಪ ಕಣ್ಣೀರು

    ಇದನ್ನೂ ಓದಿ: ಮೃತ ಶರತ್ ಮಡಿವಾಳ ಮನೆಗೆ ಸಚಿವ ರಮಾನಾಥ ರೈ ಭೇಟಿ

  • ಸಚಿವ ರಮಾನಾಥ ರೈಗೆ ಗೃಹ ಇಲಾಖೆ ಖಾತೆ: ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದು ಹೀಗೆ

    ಸಚಿವ ರಮಾನಾಥ ರೈಗೆ ಗೃಹ ಇಲಾಖೆ ಖಾತೆ: ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದು ಹೀಗೆ

    ಉಡುಪಿ: ಗೃಹ ಇಲಾಖೆ ಸಚಿವ ರಮಾನಾಥ ರೈ ಪಾಲಾಗಲಿದೆ ಅನ್ನೋದನ್ನು ಮಾಧ್ಯಮಗಳಲ್ಲಿ ಓದಿ ಕೇಳಿ ತಿಳಿದುಕೊಂಡಿದ್ದೇನೆ. ರೈ ಅವರಿಗೆ ಗೃಹಖಾತೆ ಸಿಕ್ಕರೆ ಅದು ಬರೀ ಹೆಸರಿಗೆ ಮಾತ್ರವಾಗಲಿದೆ. ಆದ್ರೆ ನಿಜವಾದ ಗೃಹಸಚಿವ ಕೆಂಪಯ್ಯ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರೈ ಹೆಬ್ಬೆಟ್ಟು ಒತ್ತಲು ಮಾತ್ರ ಗೃಹಖಾತೆಗೆ ಉಪಯೋಗವಾಗುತ್ತಾರೆ. ಸಿಎಂ ಸಿದ್ದರಾಮಯ್ಯಗೆ ಕೆಂಪಯ್ಯ ಅನಿವಾರ್ಯವೆನ್ನೂದನ್ನು ಬಹಿರಂಗವಾಗಿ ತೋರ್ಪಡಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

    ಕರಾವಳಿಯಲ್ಲಿ ಕೋಮು ಭಾವನಾತ್ಮಕ ವಿಚಾರ ಇಟ್ಟುಕೊಂಡು ಎರಡು ರಾಜಕೀಯ ಪಕ್ಷಗಳು ಚುನಾವಣೆಗೆ ಹೋಗುತ್ತಿದೆ. ಆದ್ರೆ ಇಬ್ಬರಿಗೂ ಈ ಎರಡು ಜಿಲ್ಲೆಗಳ ಅಭಿವೃದ್ಧಿ ಬೇಕಿಲ್ಲ ಎಂದು ಆರೋಪಿಸಿದರು.

    ಇದನ್ನೂ ಓದಿ: ರಮಾನಾಥ್ ರೈ ಗೆ ಗೃಹ ಖಾತೆ ನೀಡಲು ಸಿಎಂ ಚಿಂತನೆ

    ಮೈಸೂರಿನನಲ್ಲಿ ಸಿಎಂ ಆಡಿದ ಮಾತಿಗೆ ತಿರುಗೇಟು ನೀಡಿದ ಅವರು, ರಾಜ್ಯದಲ್ಲಿರುವ ಕೆರೆಗಳಿಗೆ ನೀರು ಹಾಯಿಸಲು ಆಗದಿದ್ದರೆ ನಮ್ಮಲ್ಲಿರುವ ನಾಲ್ಕು ಜಲಾಶಯಗಳು ಪಕ್ಕದ ರಾಜ್ಯಕ್ಕೆ ನೀರು ಬಿಡುವುದಕ್ಕೆ ನಿರ್ಮಾಣ ಮಾಡಿದ್ದಾ ಎಂದು ಪ್ರಶ್ನಿಸಿ ಕಿಡಿಕಾರಿದರು.

    ಬಿಜೆಪಿ ದೇಶಾದ್ಯಂತ ಇತರೆ ಪಕ್ಷಗಳನ್ನು ನಿರ್ನಾಮ ಮಾಡಲು ಹೊರಟಿದೆ ಎಂದ ಕುಮಾರಸ್ವಾಮಿ, ಗುಜರಾತ್-ಬಿಹಾರದಲ್ಲಿ ಕಾಂಗ್ರೆಸ್ ಕಥೆ ಮಾಡಿದ್ದುಣ್ಣೋ ಮಹಾರಾಯನಂತಾಗಿದೆ. ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಜೆಡಿಎಸ್‍ನ 8 ಮಂದಿ ಶಾಸಕರನ್ನು ಕಾಂಗ್ರೆಸ್ ಸೆಳೆದುಕೊಂಡಿತು. ಈಗ ಅದಕ್ಕೆ ಈ ಸ್ಥಿತಿ ಎದುರಾಗಿದೆ. ಮೊದಲು ರಾಜ್ಯಕ್ಕೆ ರಕ್ಷಣೆ ಕೊಡಿ. ಆ ಮೇಲೆ ರೆಸಾರ್ಟ್ ನಲ್ಲಿರುವ ಗುಜರಾತ್ ಶಾಸಕರಿಗೆ ರಕ್ಷಣೆ ಕೊಡುವಿರಂತೆ ಎಂದು ಎಚ್‍ಡಿಕೆ ಚಾಟಿ ಬೀಸಿದರು.

  • ಮೃತ ಶರತ್ ಮಡಿವಾಳ ಮನೆಗೆ ಸಚಿವ ರಮಾನಾಥ ರೈ ಭೇಟಿ

    ಮೃತ ಶರತ್ ಮಡಿವಾಳ ಮನೆಗೆ ಸಚಿವ ರಮಾನಾಥ ರೈ ಭೇಟಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಆರ್‍ಎಸ್‍ಎಸ್ ಕಾರ್ಯಕರ್ತ ಮೃತ ಶರತ್ ಮಡಿವಾಳ ಮನೆಗೆ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ರಮಾನಾಥ ರೈ ಭೇಟಿ ನೀಡಿದ್ದಾರೆ.

    ಘಟನೆ ನಡೆದು ಒಂಬತ್ತು ದಿನಗಳ ಬಳಿಕ ರೈ ಬಂಟ್ವಾಳದ ಸಜಿಪದಲ್ಲಿರುವ ಶರತ್ ಮನೆಗೆ ಭೇಟಿ ನೀಡಿ ಶರತ್ ತಂದೆ ತನಿಯಪ್ಪ ಹಾಗೂ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಭೇಟಿ ವೇಳೆ ಸ್ಥಳೀಯರಿಗೆ ಮಾತ್ರ ರೈ ಬೆಂಬಲಿಗರು ಸೂಚನೆ ನೀಡಿದ್ದು, ಮಾಧ್ಯಮದವರ ಪ್ರವೇಶವನ್ನು ನಿರಾಕರಿಸಿದ್ದಾರೆ. ಅಲ್ಲದೇ ಯಾರೂ ಕೂಡ ಫೊಟೋ ಕ್ಲಿಕ್ಕಿಸದಂತೆ ಸೂಚಿಸಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಮೃತ ಶರತ್ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಸಚಿವ ಡಿವಿಎಸ್

    20 ವರ್ಷ ರಮಾನಾಥ ರೈ ಬಟ್ಟೆ ಒಗೆದು ಇಸ್ತ್ರಿ ಮಾಡಿಕೊಟ್ಟಿದ್ರೂ ಇಂದು ನನ್ನ ನೋವನ್ನು ಕೇಳಲು ಬಂದಿಲ್ಲ ಅಂತ ಶರತ್ ತಂದೆ ತನಿಯಪ್ಪ ಮಡಿವಾಳ ಮಾಧ್ಯಮದ ಮುಂದೆ ಕಣ್ಣೀರಿಟ್ಟ ಬಳಿಕ ಇದೀಗ ಯಾರಿಗೂ ಮಾಹಿತಿ ನೀಡದೆ ರೈ ಶರತ್ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಇದೇ ವೇಳೆ ಪ್ರಕರಣದ ಕುರಿತು ತನಿಖೆ ಮಾಡಿ ಆರೋಪಿಗಳನ್ನು ಶೀಘ್ರವೇ ಬಂಧಿಸುವ ಭರವಸೆ ನೀಡಿದ್ದಾರೆ.

    ಮಾಧ್ಯಮಗಳಲ್ಲಿ ಸುದ್ದಿಪ್ರಸಾರವಾಗಿ ಒಂದು ಗಂಟೆಯೊಳಗೆ ಶರತ್ ಮನೆಗೆ ಭೇಟಿ ಮಾಡಿದ ಫೋಟೋವನ್ನು ರೈ ಆಪ್ತ ಕಾರ್ಯದರ್ಶಿ ರಿಲೀಸ್ ಮಾಡಿದ್ದಾರೆ.

    ಇದನ್ನೂ ಓದಿ: 20 ವರ್ಷ ಬಟ್ಟೆ ಒಗೆದು ಕೊಟ್ರೂ ರೈ ನನ್ನ ನೋವನ್ನು ಕೇಳಲು ಬಂದಿಲ್ಲ: ಶರತ್ ತಂದೆ ತನಿಯಪ್ಪ ಕಣ್ಣೀರು

    https://www.youtube.com/watch?v=L5WjxAOQ_VE

  • ಮೃತ ಶರತ್ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಸಚಿವ ಡಿವಿಎಸ್

    ಮೃತ ಶರತ್ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಸಚಿವ ಡಿವಿಎಸ್

    ಮಂಗಳೂರು: ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಮನೆಗೆ ಇಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಭೇಟಿ ನೀಡಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪದಲ್ಲಿರುವ ಶರತ್ ಮನೆಗೆ ಭೇಟಿ ನೀಡಿದ ಡಿವಿಎಸ್ ಶರತ್ ತಂದೆ ಹಾಗೂ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಈ ವೇಳೆ ಮಗನ ಸಾವನ್ನು ನೆನೆದು ಡಿವಿಎಸ್ ಮುಂದೆ ಶರತ್ ತಂದೆ ತನಿಯಪ್ಪ ಕಣ್ಣೀರು ಹಾಕಿದ್ರು. ಡಿವಿಎಸ್‍ಗೆ ಶಾಸಕ ಸುನೀಲ್ ಕುಮಾರ್, ಎಂಎಲ್‍ಸಿ ಗಣೇಶ್ ಕಾರ್ಣಿಕ್ ಸಾಥ್ ನೀಡಿದ್ರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿವಿಎಸ್, ಶರತ್ ಒಬ್ಬ ಅಮಾಯಕ ಯುವಕ. ಒಂದು ಕಪ್ಪುಚುಕ್ಕೆ ಇಲ್ಲದವನ ಕೊಲೆಯಾಯ್ತು. ಇಂತಹ ನೂರು ಶರತ್ ಹುಟ್ಟಿ ಬರ್ತಾರೆ. ಆಡಳಿತ ಸೂತ್ರ ಹಿಡಿದವರೇ ಇದರ ಹಿಂದೆಯಿದ್ದಾರೆ. ಅವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಅಂತ ಹೇಳಿದ್ದಾರೆ.

    ಇದೇ ವೇಳೆ ಡಿವಿಎಸ್ ತುಪ್ಪ ಸುರಿಯುತ್ತಾರೆಂಬ ರಮಾನಾಥ ರೈ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಯಾರು ಯಾರಿಗೆ ತುಪ್ಪ ಸುರಿಯುತ್ತಾರೆ ನೋಡೋಣ. ತುಪ್ಪ ಯಾರಿಗೆ ಸುರಿಯುತ್ತಾರೆ ಅಂತ ಗೊತ್ತಾಗುತ್ತದೆ ಎಂದು ರೈ ವಿರುದ್ಧ ಕಿಡಿಕಾರಿದ್ರು.