Tag: rama

  • ರಾಮ ಆಯ್ತು, ಈಗ ಸೀತೆ ಸರದಿ – ದನದ ಮಾಂಸ ತಿನ್ತಿದ್ದಳು: ಚಿಂತಕಿ ಕಲೈಸೆಲ್ವಿ

    ರಾಮ ಆಯ್ತು, ಈಗ ಸೀತೆ ಸರದಿ – ದನದ ಮಾಂಸ ತಿನ್ತಿದ್ದಳು: ಚಿಂತಕಿ ಕಲೈಸೆಲ್ವಿ

    ಮೈಸೂರು: ರಾಮಾಯಣದ ರಾಮ ಆಯ್ತು ಇದೀಗ ಸೀತೆಯ ಸರದಿ. ರಾಮ ಮದ್ಯವ್ಯಸನಿ ಎಂದು ವಿಚಾರವಾದಿ ಕೆ.ಎಸ್. ಭಗವಾನ್ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಈಗ ಮತ್ತೊಂದು ವಿವಾದ ಸೃಷ್ಟಿಯಾಗಿದೆ.

    ಸೀತೆ ಜಿಂಕೆ, ಹಂದಿ, ದನದ ಮಾಂಸ ತಿಂದಿದ್ದಾಳೆ ಎಂದು ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಪೆರಿಯಾರ್ ವಾದಿ ಚಿಂತಕಿ ಕಲೈಸೆಲ್ವಿ ಹೇಳಿಕೆ ನೀಡಿದ್ದಾರೆ. ಸೀತೆ ಅರಣ್ಯದಲ್ಲಿ ಇದ್ದಾಗ ದನದ ಮಾಂಸ ತಿಂದಿದ್ದಾಳೆ. ದನದ ಮಾಂಸವನ್ನು ಹಸುವಿನ ತುಪ್ಪದಲ್ಲಿ ಉರಿದು ತಿಂದಿದ್ದಾಳೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಮ ಒಬ್ಬ ಕುಡುಕ, ಮಾಂಸ ತಿನ್ತಿದ್ದ- ಮತ್ತೆ ಕೆಂಗಣ್ಣಿಗೆ ಗುರಿಯಾದ ಪ್ರೊ. ಭಗವಾನ್

    ವೇದಗಳ ಕಾಲದಲ್ಲಿ ಮಹಿಳೆಯರಿಗೆ ಹೆಚ್ಚಿನ ಮಹತ್ವ ಇತ್ತು ಅಂತಾರೆ. ಎಲ್ಲಿತ್ತು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ವರ್ಣಾಶ್ರಮ ಧರ್ಮವನ್ನು ಒಪ್ಪಿಕೊಂಡು ವರ್ಣಾಶ್ರಮ ಶ್ರೇಷ್ಠ, ಬ್ರಾಹ್ಮಣರು ಶ್ರೇಷ್ಠ ಎಂದು ಒಪ್ಪಿಕೊಳ್ಳಬೇಕು. ಇಲ್ಲವಾದರೆ ಅವರನ್ನು ಕೀಳಾಗಿ ನೋಡುತ್ತಿದ್ದರು. ವಿಷ್ಣು ಅಷ್ಟೊಂದು ಅವತಾರ ಎತ್ತಿದ್ದಾನೆ. ಆದರೆ ಶಿವ ಯಾಕೆ ಎತ್ತಿಲ್ಲ. ವಿಷ್ಟು ದೇವಾಲಯಗಳು ವಿಜೃಂಭಣೆಯಿಂದ ಕೂಡಿರುತ್ತವೆ. ಶಿವನ ದೇವಾಲಯ ಸಿಂಪಲ್ಲಾಗಿರಲು ಕಾರಣ ಏನು. ಇದು ಮೌಢ್ಯವನ್ನು ಹೆಚ್ಚಿಸುವ ಕೆಲಸ ಎಂದು ಕಲೈಸೆಲ್ವಿ ಹೇಳಿದ್ದಾರೆ.

    ಈ ಹಿಂದೆ ವಿಚಾರವಾದಿ ಪ್ರೊಫೆಸರ್ ಕೆ. ಎಸ್ ಭಗವಾನ್ ಅವರು ರಾಮ ಮಂದಿರ ಏಕೆ ಬೇಡ? ಎಂಬ ವಿವಾದಾತ್ಮಕ ಪುಸ್ತಕ ಬರೆದಿದ್ದು, ಅದರಲ್ಲಿ ರಾಮ ಒಬ್ಬ ಕುಡುಕ, ಮಾಂಸ ತಿನ್ನುತ್ತಿದ್ದನೆಂದು ಉಲ್ಲೇಖಿಸುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ರಾಮನೊಂದಿಗೆ ಮಹಾತ್ಮ ಗಾಂಧೀಜಿ ಹಾಗೂ ಚಾಮುಂಡಿ ದೇವಿಯನ್ನು ಕೂಡ ಟೀಕಿಸಿದ್ದು, ಭಾರೀ ಚರ್ಚೆಗೆ ಒಳಗಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಮ ಒಬ್ಬ ಕುಡುಕ, ಮಾಂಸ ತಿನ್ತಿದ್ದ- ಮತ್ತೆ ಕೆಂಗಣ್ಣಿಗೆ ಗುರಿಯಾದ ಪ್ರೊ. ಭಗವಾನ್

    ರಾಮ ಒಬ್ಬ ಕುಡುಕ, ಮಾಂಸ ತಿನ್ತಿದ್ದ- ಮತ್ತೆ ಕೆಂಗಣ್ಣಿಗೆ ಗುರಿಯಾದ ಪ್ರೊ. ಭಗವಾನ್

    – ಮಹಾತ್ಮ ಗಾಂಧಿ ಒಬ್ಬ ಮತಾಂಧ

    ಮೈಸೂರು: ವಿಚಾರವಾದಿ ಪ್ರೊಫೆಸರ್ ಭಗವಾನ್ ಮತ್ತೊಂದು ವಿವಾದಾತ್ಮಕ ಪುಸ್ತಕ ಬರೆದಿದ್ದು, ಅದರಲ್ಲಿ ರಾಮ ಒಬ್ಬ ಕುಡುಕ, ಮಾಂಸ ತಿನ್ನುತ್ತಿದ್ದನೆಂದು ಉಲ್ಲೇಖಿಸುವ ಮೂಲಕ ಇದೀಗ ಮತ್ತೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಭಗವಾನ್‍ರವರು ರಾಮ ಮಂದಿರ ಏಕೆ ಬೇಡ? ಎಂಬ ವಿವಾದಾತ್ಮಕ ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ ರಾಮನ ಬಗ್ಗೆ ವಿವಾದಾತ್ಮಕವಾಗಿ ಬರೆದುಕೊಂಡಿದ್ದಾರೆ. ರಾಮ, ಮಹಾತ್ಮ ಗಾಂಧೀಜಿ ಹಾಗೂ ಚಾಮುಂಡಿ ದೇವಿಯನ್ನು ಟೀಕಿಸಿದ್ದಾರೆ.

    ವಿವಾದಾತ್ಮಕ ಅಂಶಗಳೇನು?
    ರಾಮ ಹಾಗೂ ಸೀತೆ ಮಾಂಸವನ್ನು ಸೇವಿಸುತ್ತಿದ್ದರು. ಮದ್ಯಪಾನವನ್ನು ಮಾಡುತ್ತಿದ್ದರು. ರಾಮ ತನ್ನ ಕೈಯಿಂದ ಸೀತೆಗೆ ಮದ್ಯಪಾನ ಮಾಡಿಸುತ್ತಿದ್ದ. ರಾಮ ಏಕಪತ್ನಿವ್ರತಸ್ಥ ಎನ್ನುವುದು ಕಟ್ಟುಕತೆ. ರಾಮ ಹುಡುಗಿಯರ ಹಾಗೂ ವನಿತೆಯರ ಜೊತೆ ಕುಡಿದು ನೃತ್ಯ ಮಾಡಿ, ಅವರನ್ನು ಸಂತೋಷ ಪಡಿಸುತ್ತಿದ್ದ. ರಾಮ ದೇವರೇ ಅಲ್ಲ, ಅವನೊಬ್ಬ ಕೊಲೆಗಡುಕ. ದಾಳಿಕೋರರಿಂದ ತಪ್ಪಿಸಿಕೊಳ್ಳಲಾಗದವರು, ದೇವರುಗಳೇ ಅಲ್ಲವೆಂದು ಉಲ್ಲೇಖಿಸಿದ್ದಾರೆ.

    ಇದಲ್ಲದೇ ಕೃಷ್ಣ, ಶಿವ, ಚಾಮುಂಡಿ ಹಾಗೂ ಮಾರಮ್ಮರನ್ನು ಕಸದಂತೆ ತಿರಸ್ಕರಿಸಿ ಎಸೆಯಿರಿ. ಮಹಾತ್ಮ ಗಾಂಧೀಜಿಯೂ ಒಬ್ಬ ಮತಾಂಧ ಹಾಗೂ ಮೂಲಭೂತವಾದಿಯಾಗಿದ್ದಾನೆ. ಗಾಂಧೀಜಿ, ರಾಮ, ಗೀತೆ, ಚಾತುರ್ವರ್ಣ ಪ್ರತಿಪಾದಿಸಿದ್ದು, ಶೂದ್ರರಿಗೆ ಮಾಡಿದ ಮಹಾ ದ್ರೋಹ ಎಂದು ಬರೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಮ ಸುಳ್ಳು ಅಂದೋರೆಲ್ಲ ಗೋರಿ ಸೇರಿದ್ದು, ಇನ್ನೊಬ್ಬ ಉಳಿದಿದ್ದಾನೆ: ಆಂದೋಲ ಶ್ರೀ

    ರಾಮ ಸುಳ್ಳು ಅಂದೋರೆಲ್ಲ ಗೋರಿ ಸೇರಿದ್ದು, ಇನ್ನೊಬ್ಬ ಉಳಿದಿದ್ದಾನೆ: ಆಂದೋಲ ಶ್ರೀ

    ಕಲಬುರಗಿ: ರಾಮ ಸುಳ್ಳು ಅಂದೋರೆಲ್ಲ ಗೋರಿ ಸೇರಿದ್ದು, ಇನ್ನೊಬ್ಬ ಉಳಿದಿದ್ದಾನೆ. ಆತ ಮೈಸೂರಿನ ಸೈತಾನ್, ಅವನೂ ಗೋರಿ ಸೇರಲಿದ್ದಾನೆ ಎಂದು ಆಂದೋಲ ಕರುಣೇಶ್ವರ ಮಠದ ಸಿದ್ದಲಿಂಗಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಜಗತ್ ವೃತ್ತದಲ್ಲಿ ಆಯೋಜಿಸಿರುವ ರಾಮ ಮಂದಿರ ಕಟ್ಟುವ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿ, ರಾಮ ಸುಳ್ಳು ಎಂದಿದ್ದ ಕರುಣಾನಿಧಿ ಗೋರಿ ಸೇರಿದ್ದು, ಕಿಡ್ನಿ ವೈಫಲ್ಯದಿಂದ ಯು.ಆರ್.ಅನಂತಮೂರ್ತಿ ಗೋರಿ ಸೇರಿದ್ದಾರೆ. ಹಿಂದೂಗಳ ವಿರುದ್ಧ ಮಾತನಾಡುತ್ತಿದ್ದ ಗೌರಿ ಲಂಕೇಶ್ ಗೋರಿ ಸೇರಿದ್ದಾಳೆ. ಇನ್ನೊಬ್ಬ ಉಳಿದಿದ್ದಾನೆ. ಮೈಸೂರಿನ ಸೈತಾನ್ ಅವನೂ ಗೋರಿ ಸೇರಲಿದ್ದಾನೆ ಎಂದು ಪರೋಕ್ಷವಾಗಿ ಭಗವಾನ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

    ಇದೇ ವೇಳೆ ಅಯ್ಯಪ್ಪ ದೇಗುಲ ಪ್ರವೇಶಿಸಲು ಮುಂದಾದ ಫಾತಿಮಾಳನ್ನು ವೇಶ್ಯೆ ಎಂದು ಲೇವಡಿ ಮಾಡಿದ ಸ್ವಾಮೀಜಿ, ಕಿಸ್ ಆಫ್ ಲವ್ ಕಾರ್ಯಕ್ರಮ ಆಯೋಜಿಸಿದ ಇಂಥವರು ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸುವುದಾಗಿ ಹೇಳುತ್ತಾರೆ. ಮೊದಲು ಇಂಥವರನ್ನು ಜೈಲಿಗೆ ಕಳುಹಿಸಬೇಕು ಎಂದು ಕಿಡಿಕಾರಿದರು. ರಾಮನ ಹೆಸರಲ್ಲಿ ಮೋದಿ ಅಧಿಕಾರಕ್ಕೆ ಬಂದಿದ್ದಾರೆ. ಹೀಗಾಗಿ ಮೋದಿ ರಾಮ ಮಂದಿರ ನಿರ್ಮಾಣಕ್ಕೆ ಬದ್ಧರಾಗಿರಬೇಕು ಎಂದು ಇದೇ ವೇಳೆ ಆಗ್ರಹಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ರಾಮನ ಭಕ್ತರು ಬಿಜೆಪಿಗೆ, ರಾವಣನ ಭಕ್ತರು ಕಾಂಗ್ರೆಸ್ಸಿಗೆ ಮತ ಹಾಕ್ತಾರೆ: ಯೋಗಿ ಆದಿತ್ಯನಾಥ್

    ರಾಮನ ಭಕ್ತರು ಬಿಜೆಪಿಗೆ, ರಾವಣನ ಭಕ್ತರು ಕಾಂಗ್ರೆಸ್ಸಿಗೆ ಮತ ಹಾಕ್ತಾರೆ: ಯೋಗಿ ಆದಿತ್ಯನಾಥ್

    ಜೈಪುರ: ರಾಮನ ಭಕ್ತರು ಬಿಜೆಪಿಗೆ ಮತ ಹಾಕಿದರೆ, ರಾವಣನ ಭಕ್ತರು ಕಾಂಗ್ರೆಸ್ಸಿಗೆ ಮತ ಹಾಕುತ್ತಾರೆಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

    ಯೋಗಿ ಆದಿತ್ಯನಾಥ್ ಬಿಜೆಪಿಯ ಸ್ಟಾರ್ ಪ್ರಚಾರಕರೆಂದೇ ಗುರುತಿಸಿಕೊಂಡಿದ್ದಾರೆ. ಚುನಾವಣಾ ಪ್ರಚಾರದ ಬರದಲ್ಲಿ ರಾಮಭಕ್ತರು ಖುದ್ದು ಕೇಸರಿ ಪಕ್ಷಕ್ಕೆ ಓಟು ಹಾಕುತ್ತಾರೆ ಎನ್ನುವ ಮೂಲಕ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ರಾಜಸ್ಥಾನದ ಮಲ್ಪುರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ರಾಮನ ಪರಮ ಭಕ್ತ ಹನುಮಂತನೂ ಸಹ ದಲಿತ ಬುಡಕಟ್ಟು ಜನಾಂಗಕ್ಕೆ ಸೇರಿದ್ದನು. ಅಲ್ಲದೇ ಕಾಡಿನ ನಿವಾಸಿಯಾಗಿದ್ದನು. ಭಜರಂಗ ಬಲಿ ಪೂರ್ವದಿಂದ ಪಶ್ಚಿಮಕ್ಕೆ ಹಾಗೂ ಉತ್ತರದಿಂದ ದಕ್ಷಿಣದ ವರೆಗೂ ಭಾರತದಲ್ಲಿರುವ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸುವಲ್ಲಿ ಶ್ರಮಿಸಿದ್ದನು. ಇದು ಕೇವಲ ಹನುಮಂತನ ಇಚ್ಛೆಯಾಗಿರಲಿಲ್ಲ. ರಾಮನ ಇಂಗಿತವೂ ಆಗಿತ್ತು. ಹೀಗಾಗಿ ಇವರಿಬ್ಬರ ಮಹತ್ವಾಕಾಂಕ್ಷೆಯನ್ನು ಈಡೇರಿಸುವವರೆಗೂ ವಿಶ್ರಾಂತಿಯನ್ನು ಮಾಡುವುದಿಲ್ಲವೆಂದು ಹೇಳಿದ್ದಾರೆ.

    ಇದೇ ವೇಳೆ ರಾಮನನ್ನು ಪೂಜಿಸುವವರು ಖಂಡಿತವಾಗಿಯೂ ಬಿಜೆಪಿಗೆ ಮತ ಹಾಕುತ್ತಾರೆ. ಆದರೆ ರಾವಣ ಭಕ್ತರು ಕಾಂಗ್ರೆಸ್ಸಿಗೆ ಮತ ಹಾಕುವ ಮೂಲಕ ತಮ್ಮ ನಿಷ್ಠೆಯನ್ನು ತೋರುತ್ತಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿವೇಕಾನಂದರು ಅಮೆರಿಕಾದಲ್ಲಿ ಗೋಮಾಂಸ ತಿಂದಿದ್ದರು – ಚಿಂತಕ ಪ್ರಸನ್ನ ವಿವಾದಾತ್ಮಕ ಹೇಳಿಕೆ

    ವಿವೇಕಾನಂದರು ಅಮೆರಿಕಾದಲ್ಲಿ ಗೋಮಾಂಸ ತಿಂದಿದ್ದರು – ಚಿಂತಕ ಪ್ರಸನ್ನ ವಿವಾದಾತ್ಮಕ ಹೇಳಿಕೆ

    ಉಡುಪಿ: ವಿವೇಕಾನಂದರನ್ನು ನಾವು ಹಿಂದು ಧರ್ಮವನ್ನು ಕಾಪಾಡಿದ ಮನುಷ್ಯ ಎಂದು ಕಾಣುತ್ತಿದ್ದೇವೆ. ಆದರೆ ವಿವೇಕಾನಂದರು ಅಮೆರಿಕದಲ್ಲಿ ಗೋಮಾಂಸ ಎಂದು ತಿಂದಿದ್ದರು ಎಂದು ಚಿಂತಕ ಪ್ರಸನ್ನ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಜಿಲ್ಲೆಯಲ್ಲಿ ನಡೆದ ಹೇರಾಮ್.. ರಾಮಾಯಣ ಸಂವಾದದಲ್ಲಿ ಮಾತನಾಡಿದ ಚಿಂತಕ ಪ್ರಸನ್ನ, ಅಮೆರಿಕದಲ್ಲಿ ವಿವೇಕಾನಂದರು ಗೋಮಾಂಸ ಸೇವಿದ್ದರು. ತಾವು ಸೇವನೆ ಮಾಡುತ್ತಿರೋದು ಗೋಮಾಂಸ ಎಂದು ಅವರಿಗೆ ತಿಳಿದಿತ್ತು. ಅಲ್ಲದೇ ಈ ಕುರಿತು ಸ್ವತಃ ಅವರೇ ಹೇಳಿಕೊಂಡಿದ್ದರು. ಏಕೆಂದರೆ ಅವರು ಹಿಂದೂಗಳ ಮನಸ್ಸನಲ್ಲಿ ನೋವುಂಟು ಮಾಡಲು ಅಲ್ಲ. ಹಿಂದೂಗಳನ್ನು ಈ ಸಾಂಕೇತಿಕತೆಯಿಂದ ಹೊರಗೆಳೆದು ಸಮಕಾಲಿನ ಸತ್ಯವನ್ನು ಕಾಣಿಸುವಂತೆ ಮಾಡಲು. ಅವರಿಗೆ ಗೋವು ಸಂರಕ್ಷಣೆ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು, ಅದನ್ನು ರೈತನ ಹೊಲದಲ್ಲಿಯೇ ಸಂರಕ್ಷಿಸಬೇಕು ಎಂಬುದನ್ನು ತಿಳಿದಿದ್ದರು. ಸಾಮಾಜಿಕ ನ್ಯಾಯಕ್ಕಾಗಿ ಹಾಗೂ ಹಿಂದು ಧರ್ಮದಲ್ಲಿರುವ ಅನೇಕ ವಿತಂಡಗಳನ್ನು ವಿಮರ್ಶಿಸುವ ಕೆಲಸವನ್ನು ನಾವು ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

    ರಾಮಾಯಣ ಗ್ರಂಥ ವೈಯಕ್ತಿಕ ತ್ಯಾಗದ ಬಗ್ಗೆ ತಿಳಿಸಿದ್ದು, ಇಂದಿನ ರಾಜಕಾರಣಿಗಳು ಸಹ ಇದನ್ನು ಮಾಡಲು ಹೊರಟ್ಟಿದ್ದಾರೆ. ರಾಹುಲ್ ಹೇಳಿರುವುದು ನಿಜ ಸಿಟ್ಟನ್ನು ಪ್ರೀತಿಯಿಂದ ಎದುರಿಸಬೇಕು. ಅವರು ಸತ್ಯವನ್ನು ಹೇಳಿದ್ದಾರೆ. ಆದರೆ ಅದು ನಮಗೇ ಹಾಸ್ಯವಾಗಿ ಕಾಣಿಸುತ್ತಿದೆ. ಆದರೆ ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದರು ಹೆಚ್ಚು ಪ್ರಬಲವಾಗಿ ಕಾಣುತ್ತಾರೆ. ಇದಕ್ಕೆ ಕಾರಣ ರಾಹುಲ್ ಅವರ ಹಿಂದೆ ನಿಂತಿರುವ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು, ಅವರನ್ನು ನಾವು ನಂಬಲ್ಲ ಎಂದರು. ಇದೇ ವೇಳೆ ಯಡಿಯೂರಪ್ಪ ಅವರನ್ನು ಜನರು ನಂಬುತ್ತಿಲ್ಲ. ಸದ್ಯ ನಾವು ನಿಜವಾದ ರಾಮನನ್ನು ತೋರಿಸಲು ಯತ್ನಿಸಿಬೇಕು ಎಂದರು.

    ದೇವರು ರಾಮ ಎಂದು ಸಾಬೀತು ಪಡಿಸಲು ಹಲವರು ಯತ್ನಿಸುತ್ತಿದ್ದಾರೆ. ಇದು ಅವರ ವಿತಂಡವಾದ ಏಕೆಂದರೆ ಇಲ್ಲಿ ರಾಮನನ್ನು ಬೆಳವಣಿಗೆ ಇಲ್ಲದ ಪಾತ್ರವಾಗಿ ರೂಪಿಸುತ್ತಿದ್ದಾರೆ. ಆದರೆ ವಾಲ್ಮೀಕಿ ಬರೆದಿರುವುದು ದೇವ ಕಲ್ಪನೆ ಇಲ್ಲದ ರಾಮ, ತನ್ನ ಬದುಕಿನಿಂದ ದೈವತ್ವ ಪಡೆದಿರುವುದು ರಾಮಾಯಣ. ಇಂದಿನ ಹಿಂಸಾ ವಾದಕ್ಕೆ ದೇವರು ನನ್ನಿಂದ ಪ್ರತ್ಯೇಕ ಎಂಬ ಕಲ್ಪನೆಯೇ ಕಾರಣ ಎಂದು ಹೇಳಿದ್ದಾರೆ.

    ರಾಮನಿಗಿಂತ ಸಭ್ಯ ಹನುಮ: ರಾಮ ನಮ್ಮ ನಿಮ್ಮಂತ ಮನುಷ್ಯ. ರಾಮರಾಜ್ಯ ಅಂದರೆ ಗ್ರಾಮ ರಾಜ್ಯ ಆಗಬೇಕು. ರಾಮನಿಗಿಂತ ಹನುಮಂತ ಸಭ್ಯ ಮನುಷ್ಯ. ಆದೆ ಸದ್ಯ ಹನುಮನಿಗೆ ರಾಕ್ಷಸ ಸ್ವರೂಪವನ್ನು ಕೊಡಲಾಗಿದೆ. ಆಂಜನೇಯನನ್ನು ಭಜರಂಗಬಲಿಯಾಗಿ ನೇಮಿಸಲಾಗಿದೆ. ಯಾರನ್ನು ಬಲಿ ಕೊಡಲು ನೇಮಕ ಮಾಡಿದ್ದೇವೆ. ಬಿಜೆಪಿಯವರು ರಾಮ ಮಂದಿರ ನಿರ್ಮಾಣ ಹುನ್ನಾರ ಎಬ್ಬಿಸುತ್ತಿದ್ದಾರೆ. ರಾಮ ಮಂದಿರ ನಿರ್ಮಾಣವಾದರೆ ನನಗೆ ಖುಷಿ. ಆದರೆ ಮಂದಿರದ ಹುನ್ನಾರವೇ ನನಗೆ ಆತಂಕ ವ್ಯಕ್ತಪಡಿಸಿದರು.

    ಇಂದು ಹನುಮನ ಹೆಸರನ್ನು ನಾವು ದೇಶದಲ್ಲಿ ಕೇವಲ 20 ಪ್ರತಿಶತ ಇರುವ ಜನರನ್ನು ಚುಚ್ಚಲು ಬಳಕೆ ಮಾಡಲಾಗುತ್ತಿದೆ. 1 ಅಂಕಿ ಇದ್ದ ಅವರ ಸಂಖ್ಯೆ 300 ಕ್ಕಿಂತ ಹೆಚ್ಚಾಗಲು ರಾಮನ ಹೆಸರೇ ಕಾರಣ. ಇದನ್ನು ಅರಿತು ಬುದ್ಧಿಜೀವಿಗಳು ಕೋಣೆಯೊಳಗೆ ಇದ್ದೇವೆ. ಬೀದಿಗೆ ಬಂದು ಪ್ರಾಣ ಹೋದರೂ ಪರವಾಗಿಲ್ಲ ಸತ್ಯ ಹೇಳೋಣ ಎಂದರು.

  • ಕೊಹ್ಲಿ ದೇಶಭಕ್ತನಾಗಲು ಸಾಧ್ಯವಿಲ್ಲ: ಬಿಜೆಪಿ ಶಾಸಕ

    ಕೊಹ್ಲಿ ದೇಶಭಕ್ತನಾಗಲು ಸಾಧ್ಯವಿಲ್ಲ: ಬಿಜೆಪಿ ಶಾಸಕ

    ಝಾನ್ಸಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಟಲಿಯಲ್ಲಿ ಮದುವೆಯಾದ್ದಕ್ಕೆ ಮಧ್ಯಪ್ರದೇಶದ ಬಿಜೆಪಿ ಶಾಸಕರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ವಿರಾಟ್ ಕೊಹ್ಲಿ ದೇಶದಲ್ಲಿ ಹಣ ಮತ್ತು ಕೀರ್ತಿಯನ್ನು ಸಂಪಾದಿಸಿ ಇಟಲಿಗೆ ಹೋಗಿ ಮದುವೆಯಾಗಿದ್ದಾರೆ. ದೇವರಾಗಿರುವ ರಾಮ, ಕೃಷ್ಣನಂತವರೇ ಭಾರತದಲ್ಲಿ ಮದುವೆಯಾಗಿರುವಾಗ ವಿದೇಶದಲ್ಲಿ ಮದುವೆಯಾಗಿದ್ದು ಎಷ್ಟು ಸರಿ? ಇಟಲಿಗೆ ಹೋಗಿ ಮದುವೆಯಾದ ಕೊಹ್ಲಿ ದೇಶಭಕ್ತನಾಗಲು ಸಾಧ್ಯವಿಲ್ಲ ಎಂದು ಗುನದ ಬಿಜೆಪಿ ಶಾಸಕ ಪನ್ನಾಲಾಲ್ ಶಾಕ್ಯ ಹೇಳಿದ್ದಾರೆ. ಇದನ್ನೂ ಓದಿ: ವಿರಾಟ್- ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದು ಏಕೆ? ಇಲ್ಲಿದೆ ಸತ್ಯ

    ಯಾರು ದೇಶಕ್ಕೆ ವಿಧೇಯರಾಗಿರುತ್ತಾರೋ ಅವರು ಜನರಿಗೆ ಪ್ರೇರಕ ಶಕ್ತಿ ಆಗುತ್ತಾರೆ. ಹೀಗಾಗಿ ಕೊಹ್ಲಿ ಭಾರತೀಯರಿಗೆ ಪ್ರೇರಣೆಯಾಗಲು ಯಾವುದೇ ಅರ್ಹತೆಯನ್ನು ಹೊಂದಿಲ್ಲ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಗುನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಕಿಲ್ ಇಂಡಿಯಾ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಟಲಿಯ ಡ್ಯಾನ್ಸರ್ ಭಾರತದಲ್ಲಿ ಶತಕೋಟ್ಯಾಧಿಪತಿ ಆಗಿದ್ದರೆ, ಕೊಹ್ಲಿ ಭಾರತದ ಸಂಪತ್ತನ್ನು ಬೇರೆ ದೇಶಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಒಂದು ವೇಳೆ ಭಾರತದಲ್ಲೇ ವಿರುಷ್ಕಾ ಜೋಡಿ ಮದುವೆಯಾಗಿದ್ದರೆ ಪ್ರವಾಸೋದ್ಯಮಕ್ಕೆ ಸಹಾಯವಾಗುತಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ದ್ರಾಕ್ಷಿ ತೋಟದ ರೆಸಾರ್ಟ್ ಗೆ ಒಂದು ದಿನಕ್ಕೆ ಇಷ್ಟು ವ್ಯಯಿಸಿದ್ರಂತೆ ವಿರುಷ್ಕಾ!

    ಬಿಜೆಪಿ ಶಾಸಕರ ಹೇಳಿಕೆಗೆ ಮಧ್ಯಪ್ರದೇಶ ಕಾಂಗ್ರೆಸ್ ವಕ್ತಾರ ಪಂಕಜ್ ಚತುರ್ವೇದಿ ಪ್ರತಿಕ್ರಿಯಿಸಿ, ಗುಜರಾತ್ ನಲ್ಲಿ ಜಯಗಳಿಸಿದ ಬಳಿಕ ಬಿಜೆಪಿ ಇಲ್ಲೂ ರಾಷ್ಟ್ರೀಯತೆ ವಿಚಾರವನ್ನು ಬಿತ್ತಲು ಆರಂಭಿಸಿದೆ. ಅವರ ದೊಡ್ಡ ನಾಯಕ ನಿವೃತ್ತ ಸೇನಾ ಮುಖ್ಯಸ್ಥ, ಮಾಜಿ ಉಪರಾಷ್ಟ್ರಪತಿ, ಮಾಜಿ ಪ್ರಧಾನಿ ವಿಚಾರವನ್ನು ಪ್ರಸ್ತಾಪಿಸಿ ಗುಜರಾತಿನಲ್ಲಿ ಸಮಾಜವನ್ನು ಒಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಅದರ ಮುಂದುವರಿದ ಭಾಗವಾಗಿ ಈಗ ಅದೇ ತಂತ್ರವನ್ನು ಇಲ್ಲೂ ಪ್ರಯೋಗಿಸುತ್ತಿರುವುದು ಸ್ಪಷ್ಟವಾಗಿದೆ. ಆದರೆ ಮಧ್ಯಪ್ರದೇಶದಲ್ಲಿ ಬಿಜೆಪಿಯ ಈ ತಂತ್ರ ಫಲಕಾರಿಯಾಗುವುದಿಲ್ಲ ಎಂದು ಹೇಳಿದರು.

    2018ರ ಕೊನೆಯಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಭಾರೀ ಟ್ವಿಸ್ಟ್, ಮಧ್ಯೆ ಬ್ರೇಕಪ್ ಸುದ್ದಿ, ಕೊನೆಗೆ ಮದ್ವೆ – ಇಲ್ಲಿದೆ ವಿರುಷ್ಕಾ ಲವ್ ಸ್ಟೋರಿ

    https://youtu.be/gHvF38xCsiY

  • ರಾಮ ಸೇತುವೆ ಅಸ್ತಿತ್ವ ನಿಜ ಅಂತಿದೆ ಅಮೆರಿಕ ವಾಹಿನಿಯ ಈ ಪ್ರೋಮೋ

    ರಾಮ ಸೇತುವೆ ಅಸ್ತಿತ್ವ ನಿಜ ಅಂತಿದೆ ಅಮೆರಿಕ ವಾಹಿನಿಯ ಈ ಪ್ರೋಮೋ

    ನವದೆಹಲಿ: ರಾಮ ಸೇತುವೆ ಅಸ್ತಿತ್ವದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಭಾರತ ಮತ್ತು ಶ್ರೀಲಂಕಾ ನಡುವೆ ಸಾವಿರಾರು ವರ್ಷಗಳ ಹಿಂದೆ ಕಟ್ಟಲಾಗಿರೋ ರಾಮಸೇತುವೆ ಬಗ್ಗೆ ಅಮೆರಿಕದ ವಾಹಿನಿಯೊಂದು ಕಾರ್ಯಕ್ರಮ ಮಾಡಿದೆ. ವಿಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದಾಗ ಸೇತುವೆ ಅಸ್ತಿತ್ವದಲ್ಲಿರುವ ಸಾಧ್ಯತೆಯಿದೆ ಎಂದು ಹೇಳಿದೆ.

    ಸೈನ್ಸ್ ಚಾನೆಲ್ ಈ ಕಾರ್ಯಕ್ರಮದ ಪ್ರೋಮೋವನ್ನ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು, ಈ ಸೇತುವೆ ನೈಸರ್ಗಿಕವಾಗಿ ನಿರ್ಮಾಣವಾಗಿಲ್ಲ. ಇದು ಮಾನವ ನಿರ್ಮಿತ ಎಂದು ಹೇಳಿದೆ. ಬುಧವಾರ ರಾತ್ರಿ 7.30ಕ್ಕೆ ಡಿಸ್ಕವರಿ ಕಮ್ಯುನಿಕೇಷನ್ಸ್ ಮಾಲೀಕಕತ್ವದ ಅಮೆರಿಕದ ಸೈನ್ಸ್ ಚಾನೆಲ್‍ನಲ್ಲಿ “ಏನ್ಶಿಯಂಟ್ ಲ್ಯಾಂಡ್ ಬ್ರಿಡ್ಜ್” ಎಂಬ ಕಾರ್ಯಕ್ರಮ ಪ್ರಸಾರವಾಗಲಿದೆ.

    ನಾಸಾದ ಫೋಟೋಗಳನ್ನ ಉದಾಹರಣೆಯಾಗಿ ನೀಡಿ 50 ಕಿ.ಮೀ ಉದ್ದದ ಈ ಸೇತುವೆ ಮಾನವ ನಿರ್ಮಿತವಾದುದು ಎಂದು ಕಾರ್ಯಕ್ರಮದಲ್ಲಿ ಅಮೆರಿಕದ ಪುರಾತತ್ವಶಾಸ್ತ್ರಜ್ಞರು ಹೇಳಿದ್ದಾರೆ.

    https://twitter.com/ScienceChannel/status/940259901166600194?ref_src=twsrc%5Etfw&ref_url=http%3A%2F%2Fzeenews.india.com%2Findia%2Fram-setu-exists-us-promo-reignites-debate-on-the-mythological-bridge-2065734.html

    ಮರಳಿನ ಮೇಲಿರುವ ಕಲ್ಲುಗಳು ಮರಳಿಗಿಂತ ಹಿಂದಿನ ಕಾಲದ್ದಾಗಿರುವುದರಿಂದ, ಕಥೆಯಲ್ಲಿ ಹೆಚ್ಚಿನದ್ದೇನೋ ಇದೆ ಎಂದು ಪ್ರೋಮೋದಲ್ಲಿ ಅಮೆರಿಕದ ಪುರಾತತ್ವಶಾಸ್ತ್ರಜ್ಞರೊಬ್ಬರು ಹೇಳೋದನ್ನ ಕೇಳಬಹುದು. ಇದರ ಆಧಾರದ ಮೇಲೆ ಹೇಳುವುದಾದರೆ ಮರಳು ನೈಸರ್ಗಿಕವಾಗಿ ರಚನೆಯಾಗಿದ್ದು, 7 ಸಾವಿರ ವರ್ಷಗಳಷ್ಟು ಹಳೆಯದ್ದು ಎನ್ನಲಾದ ಕಲ್ಲುಗಳನ್ನು ಅದರ ಮೇಲೆ ಇರಿಸಲಾಗಿದೆ ಎಂದು ಹೇಳಿದ್ದಾರೆ.

    ಈ ಪ್ರೋಮೋವನ್ನ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಪಕ್ಷದ ಮುಖಂಡರಾದ ತರುಣ್ ವಿಜಯ್ ಹಾಗೂ ಪ್ರತಾಪ್ ಸಿಂಹ ರೀಟ್ವೀಟ್ ಮಾಡಿದ್ದಾರೆ.

  • ದೇವಸ್ಥಾನಗಳಿಗೆ ಹೋಗ್ಬೇಡಿ, ಹೋದ್ರೆ ದಡ್ಡರಾಗುತ್ತೀರಿ: ಪ್ರೊ.ಕೆ ಎಸ್ ಭಗವಾನ್

    ದೇವಸ್ಥಾನಗಳಿಗೆ ಹೋಗ್ಬೇಡಿ, ಹೋದ್ರೆ ದಡ್ಡರಾಗುತ್ತೀರಿ: ಪ್ರೊ.ಕೆ ಎಸ್ ಭಗವಾನ್

    ಮೈಸೂರು: ದೇವಸ್ಥಾನಗಳಿಗೆ ಹೋಗಬೇಡಿ. ಹೋದರೆ ನೀವು ದಡ್ಡರಾಗುತ್ತೀರಿ. ರಾಮ ದೇವರಲ್ಲ ಅಂತ ಪ್ರಗತಿಪರ ಚಿಂತಕ ಪ್ರೊ.ಕ ಎಎಸ್ ಭಗವಾನ್ ಹೇಳಿದ್ದಾರೆ.

    83ನೇ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಯಲ್ಲಿ ಪ್ರೊ.ಕೆ.ಎಸ್.ಭಗವಾನ್ ಇಂದು ಭಾಗವಹಿಸಿ, ರಾಮನ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ಸದ್ದು ಗದ್ದಲ ಏರ್ಪಟ್ಟಿತು. ಮೈಸೂರಿನ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಅಲಕ್ಷಿತ ಸಮುದಾಯಗಳು ಎಂಬ ವಿಷಯದ ಕುರಿತ ವಿಚಾರಗೋಷ್ಠಿಯಲ್ಲಿ ಭಗವಾನ್ ರಾಮನ ಬಗ್ಗೆ ಪ್ರಸ್ತಾಪ ಮಾಡಿದ್ರು.

    ರಾಮ ಒಬ್ಬ ಜಾತಿವಾದಿ, ಅವನು ದೇವರಲ್ಲ, ಹೆಂಡತಿಯನ್ನು ತುಂಬು ಗರ್ಭಿಣಿಯಾಗಿದ್ದಾಗ ಕಾಡಿಗೆ ಕಳುಹಿಸಿದವನು, ಕೆಲವರ ತಲೆ ಕಡಿದವನು ಇಂಥವನ ದೇವಸ್ಥಾನ ಕಟ್ಟಲು ಈಗ ಮುಂದಾಗಿದ್ದಾರೆ ಎಂದು ಭಗವಾನ್ ಪ್ರಸ್ತಾಪಿಸಿದ್ರು.

    ಈ ವೇಳೆ ಸಭಾಂಗಣದಲ್ಲಿದ್ದ ಕೆಲವರು ನೀನು ಮಾತಾಡುತ್ತಿರೋದು ತಪ್ಪು ಎಂದು ಗದ್ದಲ ಸೃಷ್ಟಿಸಿದ್ರು. ಇನ್ನು ಕೆಲವರು ಭಗವಾನ್ ಪರ ನಿಂತು ಭಗವಾನ್ ಮಾತಾಡಿರೋದು ಸರಿ ಎಂದು ಕೂಗಾಡಿದ್ರು. ಭಗವಾನ್ ಭಾಷಣ ಮುಗಿಯುವವರೆಗೂ ಸಭಾಂಗಣದಲ್ಲಿ ಮಾತ್ರ ಪರ ವಿರೋಧಗಳ ಬಗ್ಗೆ ಸದ್ದು ಗದ್ದಲ ಉಂಟಾಯಿತು. ನಂತರ ಕಾರ್ಯಕ್ರಮ ಮುಗಿದ ಮೇಲೆ ಪೊಲೀಸ್ ಭದ್ರತೆಯೊಂದಿಗೆ ಭಗವಾನ್ ರನ್ನು ಕರೆದೊಯ್ಯಲಾಯ್ತು.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ದೇವಸ್ಥಾನಗಳಲ್ಲಿ ಮೌಢ್ಯ, ಕಂದಾಚಾರ ಇವುಗಳನ್ನು ಬೆಳೆಸುತ್ತಾರೆ ಹೊರತು ಬುದ್ಧಿ ಬೆಳೆಸುವುದಿಲ್ಲ. ಹೀಗಾಗಿ ಬುದ್ಧಿ ಬೆಳೆಸದೇ ಇದ್ದರೆ ಜನ ಭಕ್ತಿ ಅನ್ನೋ ಹೆಸರಿನಲ್ಲಿ ದಡ್ಡರಾಗುತ್ತಾರೆ. ದೇವಸ್ಥಾನ `ದೆವ್’ ಎಂಬ ಧಾತುವಿನಿಂದ ಬಂದಿದೆ. `ದೆವ್’ ಅಂದ್ರೆ ಬೆಳಕು ಎಂದರ್ಥ. ಆದ್ರೆ ದೇವಸ್ಥಾನದಲ್ಲಿ ಬೆಳಕು ಎಲ್ಲಿದೆ. ಅದಕ್ಕೆ ನಾನು ದೇವಸ್ಥಾನಕ್ಕೆ ಹೋಗುತ್ತಿಲ್ಲ ಅಂತ ಹೇಳಿದ್ರು.

    ದೇವಸ್ಥಾನದಲ್ಲಿ ತಾರತಮ್ಯ, ಮೇಲು-ಕೀಳು ಇದೆ. ಹೀಗಾಗಿ ನಾನು ಕಳೆದ 58 ವರ್ಷಗಳಿಂದ ದೇವಸ್ಥಾನಕ್ಕೆ ಹೋಗುತ್ತಿಲ್ಲ. ವಾಲ್ಮೀಕಿ ರಾಮಾಯಣದಲ್ಲಿ ರಾಮ ದೇವರಲ್ಲ ಎಂದಿದ್ದಾನೆ. ಅದಕ್ಕೆ ನಾನು ರಾಮ ದೇವರಲ್ಲ ಎನ್ನುತ್ತಿದ್ದೇನೆ. ದೇವಸ್ಥಾನಗಳಿಗೆ ಹೋದರೆ ನಮ್ಮಲ್ಲಿ ಮೌಢ್ಯ ಬೆಳೆಯುತ್ತದೆ. ಆದ್ದರಿಂದ ನಾನು ದೇವಸ್ಥಾನಕ್ಕೆ ಹೋಗಲ್ಲ ನೀವೂ ಹೋಗಬೇಡಿ ಅಲ್ಲಿ ದೇವರಿಲ್ಲ ಎಂದಿದ್ದಾರೆ.