Tag: Ram Gopal Verma

  • ರಾಮ್ ಗೋಪಾಲ್ ವರ್ಮಾ ಕಾರಣಕ್ಕೆ ಕುಟುಂಬ ದೂರ ಮಾಡಿಕೊಂಡ ನಟಿ ಇನಾಯಾ ಸುಲ್ತಾನ್

    ರಾಮ್ ಗೋಪಾಲ್ ವರ್ಮಾ ಕಾರಣಕ್ಕೆ ಕುಟುಂಬ ದೂರ ಮಾಡಿಕೊಂಡ ನಟಿ ಇನಾಯಾ ಸುಲ್ತಾನ್

    ತೆಲುಗು ಸಿನಿಮಾ ರಂಗದ ಉದಯೋನ್ಮುಖ ನಟಿ ಇನಾಯಾ ಸುಲ್ತಾನ್ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ಸಿನಿಮಾ ರಂಗದಲ್ಲಿ ಇನ್ನೂ ಸ್ಟ್ರಗಲ್ ಮಾಡುತ್ತಿರುವ ಈ ನಟಿ, ಕುಟುಂಬದಿಂದ ದೂರವಾಗಿದ್ದಾರಂತೆ. ಅದಕ್ಕೆ ಕಾರಣ ರಾಮ್ ಗೋಪಾಲ್ ವರ್ಮಾ ಎಂದು ನೇರವಾಗಿಯೇ ಆಕೆ ಆರೋಪಿಸಿದ್ದಾರೆ. ಅದಕ್ಕೆ ಕಾರಣವನ್ನೂ ಅವರು ಕೊಟ್ಟಿದ್ದಾರೆ. ಆ ಒಂದು ಘಳಿಗೆ ತಮ್ಮ ಜೀವನಕ್ಕೆ ಹೇಗೆ ಮಾರಕವಾಯಿತು ಎಂದು ವಿವರಿಸಿದ್ದಾರೆ.

    ಇನಾಯಾ ಸಿನಿಮಾ ರಂಗದಲ್ಲಿ ಅವಕಾಶ ಹುಡುಕುತ್ತಿದ್ದಾಗ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪರಿಚಯವಾದರಂತೆ. ತೀರಾ ಆತ್ಮೀಯರೂ ಅನಿಸಿದರಂತೆ. ಇನಾಯಾ ಸುಲ್ತಾನ್ ಅವರನ್ನು ತಮ್ಮ ಬರ್ತಡೇ ಪಾರ್ಟಿಗೆ ಕರೆದಿದ್ದರಂತೆ ವರ್ಮಾ. ಆಗ ಮಿತಿಮೀರಿದ ಕುಡಿತವು ಡಾನ್ಸ್ ಮಾಡುವಂತೆ ಮಾಡಿದೆ. ವರ್ಮಾ ಡಾನ್ಸ್ ಮಾಡುತ್ತಲೇ ಇನಾಯಾಗೆ ಮುತ್ತಿನ ಮಳೆಯನ್ನೇ ಸುರಿಸಿದ್ದಾರೆ. ತಬ್ಬಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದೇ ಕುಟುಂಬ ದೂರ ಮಾಡುವುದಕ್ಕೆ ಕಾರಣ ಎಂದಿದ್ದಾರೆ. ಇದನ್ನೂ ಓದಿ:ಗುಮ್ಮನ ಜೊತೆ ಬಂದ `ವಿಕ್ರಾಂತ್ ರೋಣ’ ಟೀಮ್: ಹೊಸ ಸಾಂಗ್‌ ರಿಲೀಸ್

    ಗುಂಡಿನ ಮತ್ತಿನಲ್ಲಿ ಇನಾಯಾ ಜೊತೆ ವರ್ಮಾ ಮಾಡಿದ ಡಾನ್ಸ್ ಅನ್ನು ಯಾರೋ ವಿಡಿಯೋ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಹಾಗಾಗಿ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಅದು ಇನಾಯಾ ಅವರ ಕುಟುಂಬಕ್ಕೂ ತಲುಪಿತ್ತು. ಇಂಥದ್ದನ್ನು ಸಹಿಸದ ಅವರ ಕುಟುಂಬ, ಮಗಳನ್ನೇ ದೂರ ಮಾಡಿಕೊಂಡಿದೆ ಅಂತೆ. ಈ ನೋವಿನ ಸಂಗತಿಯನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಕೆದಕಿ, ಬರೆ ಹಾಕಿಸಿಕೊಂಡ ರಾಮ್ ಗೋಪಾಲ್ ವರ್ಮಾ

    ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಕೆದಕಿ, ಬರೆ ಹಾಕಿಸಿಕೊಂಡ ರಾಮ್ ಗೋಪಾಲ್ ವರ್ಮಾ

    ಸಿನಿಮಾ ಮಾಡಿಕೊಂಡು, ಪಬ್, ಬಾರು ಅಂತ ಸುತ್ತಾಡಿಕೊಂಡಿರುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಆಗಾಗ್ಗೆ ಪೊಲೀಸ್ ಸ್ಟೇಶನ್ ಮೆಟ್ಟಿಲು ಹತ್ತುವುದನ್ನೂ ಹವ್ಯಾಸ ಮಾಡಿಕೊಂಡಿದ್ದಾರೆ. ಈ ಹಿಂದೆಯೂ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಹಲವರ ಕಂಗೆಣ್ಣಿಗೆ ಗುರಿಯಾಗಿರುವ ರಾಮ್ ಗೋಪಾಲ್ ವರ್ಮಾ, ಈ ಬಾರಿ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಮೇಲೆ ಟ್ವಿಟ್ ಮಾಡಿ ವಿವಾದಕ್ಕೆ ಕಾರಣವಾಗಿದ್ದಾರೆ. ದ್ರೌಪದಿ ಕುರಿತಾಗಿ ವರ್ಮಾ ಮಾಡಿರುವ ಟ್ವಿಟ್ ಭಾರೀ ವೈರಲ್ ಕೂಡ ಆಗಿದೆ.

    ಎನ್.ಡಿ.ಎ ತನ್ನ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಎಂದು ಘೋಷಿಸುತ್ತಿದ್ದಂತೆಯೇ ರೊಚ್ಚಗೆದ್ದ ರಾಮ್ ಗೋಪಾಲ್ ವರ್ಮಾ ‘ದ್ರೌಪದಿ ರಾಷ್ಟ್ರಪತಿಯಾದರೆ, ಪಾಂಡವರು ಯಾರು, ಎಲ್ಲದಕ್ಕಿಂತ ಕೌರವರು ಯಾರು” ಎಂದು ಅವಹೇಳನ ಮಾಡುವಂತೆ ಟ್ವಿಟ್ ಮಾಡಿದ್ದರು. ಈ ಟ್ವಿಟ್ ಇದೀಗ ದ್ರೌಪದಿ ಬೆಂಬಲಿಗರನ್ನು ಕೆರಳಿಸಿದೆ. ಹಾಗಾಗಿ ಬಿಜೆಪಿ ನಾಯಕರಾದ ಗುಡೂರು ನಾರಾಯಣ ರೆಡ್ಡಿ ಮತ್ತು ಟಿ. ನಂದೇಶ್ವರ ಗೌಡ ಅವರು ಹೈದರಾಬಾದ್ ಅಬಿಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ, ಆಂಧ್ರದ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲೂ ದೂರು ದಾಖಲಾಗುತ್ತಿವೆ. ಇದನ್ನೂ ಓದಿ : ತಮ್ಮೊಂದಿಗೆ, ನಾಯಿಗೂ ವಿಮಾನ ಟಿಕೆಟ್ ಬುಕ್ ಮಾಡಲು ಹೇಳುತ್ತಾರಂತೆ ರಶ್ಮಿಕಾ ಮಂದಣ್ಣ

    ಪೊಲೀಸರಿಗೆ ಹಲವರು ದೂರು ನೀಡುತ್ತಿದ್ದಂತೆಯೇ ಎಚ್ಚೆತ್ತುಕೊಂಡ ರಾಮ್ ಗೋಪಾಲ್ ವರ್ಮಾ ಮತ್ತೊಂದು ಟ್ವಿಟ್ ಮಾಡಿ, ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ. ‘ದ್ರೌಪದಿ ನನಗೆ ಇಷ್ಟವಾದ ಪಾತ್ರ. ಹಾಗಾಗಿ ನಾನು ವ್ಯಂಗ್ಯ ಮಾಡಿದೆ. ಯಾರನ್ನೂ ನೋಯಿಸುವ ಉದ್ದೇಶ ಇಲ್ಲ. ದ್ರೌಪದಿ ಎಂದು ಹೆಸರು ಇಟ್ಟುಕೊಳ್ಳುವವರು ಕಡಿಮೆ. ಈ ಹೆಸರು ಕೇಳಿದಾಕ್ಷಣ ನನಗೆ ಮಹಾಭಾರತದ ದ್ರೌಪದಿ ನೆನಪಾದರು. ಈ ರೀತಿ ಟ್ವಿಟ್ ಮಾಡುವುದರ ಹಿಂದೆ ಯಾವುದೇ ಕೆಟ್ಟ ಉದ್ದೇಶವಿಲ್ಲ’ ಎಂದಿದ್ದಾರೆ. ಆದರೆ, ದೂರು ದಾಖಲಿಸಿಕೊಂಡಿರುವ ಪೊಲೀಸರು ಯಾವ ಕ್ರಮ ತಗೆದುಕೊಳ್ಳುತ್ತಾರೋ ನೋಡಬೇಕು.

    Live Tv

  • ‘ಮಾ ಇಷ್ಟಂ’ ಸಿನಿಮಾಗೆ ತಡೆಯಾಜ್ಞೆ ತಂದವರ ವಿರುದ್ಧವೇ ನಕಲಿ ಸಹಿ ದೂರು ನೀಡಿದ ವರ್ಮಾ

    ‘ಮಾ ಇಷ್ಟಂ’ ಸಿನಿಮಾಗೆ ತಡೆಯಾಜ್ಞೆ ತಂದವರ ವಿರುದ್ಧವೇ ನಕಲಿ ಸಹಿ ದೂರು ನೀಡಿದ ವರ್ಮಾ

    ಕ್ಷಿಣದ ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ‘ಮಾ ಇಷ್ಟಂ’ ಸಿನಿಮಾ ಅಂದುಕೊಂಡಂತೆ ಆಗಿದ್ದರೆ ಮೂರು ವಾರಗಳ ಹಿಂದೆಯೇ ರಿಲೀಸ್ ಆಗಬೇಕಿತ್ತು. ಆದರೆ, ನಿರ್ಮಾಪಕರಾದ ಕ್ರಾಂತಿ ಹಾಗೂ ನಟ್ಟಿ ಕರುಣಾ ಎನ್ನುವವರು ಈ ಚಿತ್ರಕ್ಕೆ ತಡೆಯಾಜ್ಞೆ ತಂದಿದ್ದರು. ತಮಗೆ ರಾಮ್ ಗೋಪಾಲ್ ವರ್ಮಾ ಹಣ ಕೊಡದೇ ವಂಚಿಸಿದ್ದಾರೆ ಎಂದು ದೂರು ದಾಖಲಿಸಿದ್ದರು. ಇದನ್ನೂ ಓದಿ : ಕರಣ್ ಜೋಹಾರ್ ಬರ್ತಡೇ ಪಾರ್ಟಿಗೆ ‘ಬಾಡಿಗಾರ್ಡ್ಸ್ ‘ ನಿರ್ಬಂಧ

    ನಟ್ಟಿಸ್ ಎಂಟರ್ ಟೈನ್ಮೆಂಟ್ ಗೆ ರಾಮ್ ಗೋಪಾಲ್ ವರ್ಮಾ ವಂಚಿಸಿದ್ದಾರೆ ಎಂದು ಈ ಇಬ್ಬರೂ ನಿರ್ಮಾಪಕರು ದೂರು ಕೊಟ್ಟ ಹಿನ್ನೆಲೆಯಲ್ಲಿ ಮತ್ತು ಕೋರ್ಟ್ನಿಂದ ತಡೆಯಾಜ್ಞೆ ತಂದ ಕಾರಣದಿಂದಾಗಿ ಚಿತ್ರ ರಿಲೀಸ್ ಆಗಿರಲಿಲ್ಲ. ಇದೀಗ ರಾಮ್ ಗೋಪಾಲ್ ವರ್ಮಾ ಆ ನಿರ್ಮಾಪಕರ ಮೇಲೆ ಮತ್ತೊಂದು ದೂರು ದಾಖಲಿಸಿದ್ದಾರೆ. ಈ ದೂರಿನಲ್ಲಿ ನಟ್ಟಿ ಕ್ರಾಂತಿ ಮತ್ತು ನಟ್ಟಿ ಕರುಣಾ ಅವರು ತಮ್ಮ ಸಹಿ ಫೋರ್ಜರಿ ಮಾಡಿದ್ದಾರೆ ಎಂದು ಹೈದರಾಬಾದ್ ನ ಪಂಗಗುಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ : ರಜನಿಕಾಂತ್ ಮನೆಯಲ್ಲಿ ಕಾಣಿಸಿಕೊಂಡ ಕಮಲ್ ಹಾಸನ್: ಕುತೂಹಲ ಮೂಡಿಸಿದ ಭೇಟಿ

    ನಟ್ಟಿಸ್ ಎಂಟರ್ ಟೈನ್ಮೆಂಟ್ ನಿರ್ಮಾಪಕರು ನನ್ನ ಸಹಿ ಮತ್ತು ನನ್ನ ಲೆಟರ್ ಹೆಡ್ ಅನ್ನು ನಕಲು ಮಾಡಿ, ದುರುಪಯೋಗ ಮಾಡಿಕೊಂಡಿದ್ದಾರೆ. ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಲೆಟರ್ ಹೆಡ್ ನನ್ನದಲ್ಲ ಮತ್ತು ಸಹಿ ಕೂಡ ನಾನು ಮಾಡಿಲ್ಲ. ಅವರೇ ಫೋರ್ಜರಿ ಮಾಡಿದ್ದಾರೆ ಎಂದು ಪ್ರತಿದೂರು ನೀಡಿದ್ದಾರೆ. ಇದರ ಬಗ್ಗೆ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ : ಐಪಿಎಲ್ ಫಿನಾಲೆಯಲ್ಲಿ ಅಮೀರ್ ಖಾನ್ ಸಿನಿಮಾ ‘ಲಾಲ್ ಸಿಂಗ್ ಛಡ್ಡಾ’ ಟ್ರೈಲರ್ ರಿಲೀಸ್

    ನಟ್ಟಿ ಸಹೋದರರಿಂದ ರಾಮ್ ಗೋಪಾಲ್ ವರ್ಮಾ 56 ಲಕ್ಷ ರೂಪಾಯಿಯನ್ನು ಸಾಲ ಪಡೆದುಕೊಂಡಿದ್ದರಂತೆ. ಸಾಲ ಮರಳಿಸದೇ ವಂಚಿಸಿದ್ದಾರೆ ಎಂದು ಮಿಯಾಪೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿತ್ತು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 12ಕ್ಕೆ ನಡೆಯಲಿದೆ.

  • ಪ್ರಶಾಂತ್ ನೀಲ್ ಭಾರತೀಯ ಸಿನಿಮಾ ರಂಗದ ವೀರಪ್ಪನ್ : ಆರ್.ಜಿ.ವಿ

    ಪ್ರಶಾಂತ್ ನೀಲ್ ಭಾರತೀಯ ಸಿನಿಮಾ ರಂಗದ ವೀರಪ್ಪನ್ : ಆರ್.ಜಿ.ವಿ

    ನಿರ್ದೇಶಕರ ದಿನದಂದು ಖ್ಯಾತ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ವಿಭಿನ್ನವಾಗಿ ವಿಶ್ ಮಾಡಿದ್ದಾರೆ. ಕನ್ನಡದ ಹೆಸರಾಂತ ನಿರ್ದೇಶಕ, ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಅವರನ್ನು ವೀರಪ್ಪನ್ ಗೆ ಹೋಲಿಸಿದ್ದಾರೆ ಆರ್.ಜಿ.ವಿ. ಈ ಟ್ವಿಟ್ ಭಾರತೀಯ ಸಿನಿಮಾ ರಂಗದಲ್ಲೇ ಸಂಚಲನ ಮೂಡಿಸಿದೆ. ಇದನ್ನೂ ಓದಿ : ಕೇಂದ್ರ ಸಚಿವ ಅನುರಾಗ್ ಠಾಕೂರ್ ಜತೆ ಸಿನಿರಂಗದ ಸಮಸ್ಯೆ ಚರ್ಚೆ

    ಕೆಜಿಎಫ್ ಸಿನಿಮಾ ಕಾರಣದಿಂದಾಗಿ ಪ್ರಶಾಂತ್ ನೀಲ್ ಅವರನ್ನು ಭಾರತೀಯ ಸಿನಿಮಾ ರಂಗವೇ ಹೊಗಳುತ್ತಿರುವಾಗ, ರಾಮ್ ಗೋಪಾಲ್ ವರ್ಮಾ ಬೇರೆ ರೀತಿಯಲ್ಲೇ ಪ್ರಶಾಂತ್ ನೀಲ್ ಅವರಿಗೆ ಬೆನ್ನು ತಟ್ಟಿದ್ದಾರೆ. “ಪ್ರಶಾಂತ್ ನೀಲ್ ಅವರಿಂದಾಗಿ ಭಾರತೀಯ ಸಿನಿಮಾ ರಂಗಕ್ಕೆ ನೂರಾರು ಕೋಟಿ ನಷ್ಟವಾಗಿದೆ’ ಎಂದು ಹಿಂದಿ ಸಿನಿಮಾ ರಂಗವನ್ನು ಕಾಲೆಳೆದಿದ್ದಾರೆ. ಇದನ್ನೂ ಓದಿ : ಹಿರಿಯ ರಂಗಕರ್ಮಿ, ಏಣಗಿ ಬಾಳಪ್ಪನವರ ಪತ್ನಿ ಲಕ್ಷ್ಮೀಬಾಯಿ ನಿಧನ

    ಸ್ಯಾಂಡಲ್ ವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ ಎಲ್ಲ ನಿರ್ದೇಶಕರ ತಲೆ ಕೆಡಿಸಿದ್ದಕ್ಕಾಗಿ ಪ್ರಶಾಂತ್ ನೀಲ್ ಅವರಿಗೆ ಅನ್ ಹ್ಯಾಪಿ ಡೈರೆಕ್ಟರ್ಸ್ ಡೇ ಎಂದು ವರ್ಮಾ ಟ್ವಿಟ್ ಮಾಡಿದ್ದಾರೆ. ಮುಂದುವರೆದು ಅವರು ನೀವು ಭಾರತೀಯ ಸಿನಿಮಾ ರಂಗದ ವೀರಪ್ಪನ್ ಎಂದು ಕಾಲೆಳೆದಿದ್ದಾರೆ. ಕ್ವಿಂಟಲ್ ಗಟ್ಟಲೆ ಪ್ರಶಾಂತ್ ನೀಲ್ ಅವರು ಹಣ ಮಾಡಿದ್ದಾರೆ. ಇದರಿಂದಾಗಿ ಬೇರೆ ಸಿನಿಮಾಗಳ ನಿರ್ಮಾಪಕರು ಟನ್ ಗಟ್ಟಲೆ ಹಣವನ್ನು ನಷ್ಟ ಮಾಡಿಕೊಳ್ಳಲಿದ್ದಾರೆ. ನಿಮ್ಮಂತೆಯೇ ಅವರೂ ಈಗ ಹಣ ಖರ್ಚು ಮಾಡಬೇಕಾಗಬಹುದು ಎಂದಿದ್ದಾರೆ ವರ್ಮಾ. ಇದನ್ನೂ ಓದಿ : ಶಿವಣ್ಣನ ಹುಲಿ ಅವತಾರ: ಬೈರಾಗಿ ಹಾಡಿಗೆ ಭೀಮನ ಬಲ

    ಪ್ರಶಾಂತ್ ನೀಲ್ ಕುರಿತಾಗಿ ವರ್ಮಾ ಸರಣಿಯಾಗಿ ಟ್ವಿಟ್ ಮಾಡಿದ್ದು, ಪ್ರಶಾಂತ್ ನೀಲ್ ಅಭಿಮಾನಿಗಳು ವರ್ಮಾ ಟ್ವಿಟ್ ಗೆ ಖುಷ್ ಆಗಿದ್ದಾರೆ. ಕನ್ನಡದ ಹೆಮ್ಮೆಯ ನಿರ್ದೇಶಕ ಎಂದು ಪ್ರಶಾಂತ್ ನೀಲ್ ಅವರನ್ನು ಹಾಡಿಹೊಗಳಿದ್ದಾರೆ. ಅಧಿಕೃತವಾಗಿ ಕೆಜಿಎಫ್ 2 ಸಿನಿಮಾ ಸಾವಿರಾರು ಕೋಟಿ ಕಲೆಕ್ಷನ್ ಮಾಡಿದ್ದು, ಇನ್ನೂ ಶರವೇಗದಲ್ಲೇ ಬಾಕ್ಸ್ ಆಫೀಸಿನಲ್ಲಿ ಮುನ್ನುಗ್ಗುತ್ತಿದೆ.

  • ತೆಲುಗು, ಕನ್ನಡ ಕೋವಿಡ್ ಹೊಡೆತಕ್ಕೆ ಬಾಲಿವುಡ್ ಸೋಂಕಿತ : ಬೆಂಕಿ ಹಚ್ಚಿದ ರಾಮ್ ಗೋಪಾಲ್ ವರ್ಮಾ

    ತೆಲುಗು, ಕನ್ನಡ ಕೋವಿಡ್ ಹೊಡೆತಕ್ಕೆ ಬಾಲಿವುಡ್ ಸೋಂಕಿತ : ಬೆಂಕಿ ಹಚ್ಚಿದ ರಾಮ್ ಗೋಪಾಲ್ ವರ್ಮಾ

    ಕೆಜಿಎಫ್ 2, ಆರ್.ಆರ್.ಆರ್, ಪುಷ್ಪಾ ಸಿನಿಮಾಗಳು ಬಾಲಿವುಡ್ ನಲ್ಲಿ ಕಮಾಯಿ ಮಾಡುತ್ತಿದ್ದಂತೆಯೇ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿಪರೀತ ಆಕ್ಟಿವ್ ಆಗಿದ್ದಾರೆ. ದಕ್ಷಿಣದ ಸಿನಿಮಾಗಳನ್ನು ಹಿಗ್ಗಾಮುಗ್ಗಾ ಹೊಗಳಿ, ಹಿಂದಿ ಸಿನಿಮಾಗಳ ಬಗ್ಗೆ ಸಖತ್ ಟಾಂಗ್ ಕೊಡುತ್ತಿದ್ದಾರೆ. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

    ಮೊನ್ನೆಯಷ್ಟೇ ರಾಮ್ ಗೋಪಾಲ್ ವರ್ಮಾ ಅವರ ಹೊಸ ಸಿನಿಮಾದ ಟೈಟಲ್ ಲಾಂಚ್ ಬೆಂಗಳೂರಿನಲ್ಲಿ ನಡೆಯಿತು. ಈ ಸಿನಿಮಾದ ಪತ್ರಿಕಾಗೋಷ್ಠಿಯಲ್ಲೂ ಕೆಜಿಎಫ್ 2 ಸಿನಿಮಾದ ಬಗ್ಗೆ ಮೆಚ್ಚಿ ಮಾತನಾಡಿದರೆ, ಅದರ ದಾಖಲೆಯನ್ನು ವಿವರಿಸಿದರು. ಕೆಜಿಎಫ್ 2 ಸಿನಿಮಾ ಬಾಲಿವುಡ್ ಮಂದಿಯನ್ನು ಹೇಗೆಲ್ಲ ಜಾಗೃತವಾಗಿರುವಂತೆ ಮಾಡಿದೆ ಎನ್ನುವುದನ್ನು ಹೇಳಿದ್ದರು. ಇದೀಗ ಇದೇ ವಿಷಯವಾಗಿ ಟ್ವಿಟ್ ವೊಂದನ್ನು ಮಾಡಿದ್ದಾರೆ ಆರ್.ಜಿ.ವಿ. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

    ತೆಲುಗು ಮತ್ತು ಕನ್ನಡ ಸಿನಿಮಾಗಳು ಹಿಂದಿ ಚಿತ್ರಗಳನ್ನು ಕೋವಿಡ್ 19 ರೀತಿಯಲ್ಲಿ ಸೋಂಕಿತರನ್ನಾಗಿ ಮಾಡಿವೆ. ಅತೀ ಶೀಘ್ರದಲ್ಲೇ ಬಾಲಿವುಡ್ ವ್ಯಾಕ್ಸಿನ್ ತಗೆದುಕೊಂಡು ಮರಳಲಿದೆ ಎಂದು ಟ್ವಿಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ. ಈ ಟ್ವಿಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ್ದು, ನೂರಾರು ಹಿಂದಿ ಸಿನಿಮಾಗಳ ಅಭಿಮಾನಿಗಳು ಅದಕ್ಕೆ ಉತ್ತರವನ್ನೂ ಕೊಟ್ಟಿದ್ದಾರೆ. ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್

    ತೆಲುಗಿನ ಆರ್.ಆರ್.ಆರ್ ಮತ್ತು ಕನ್ನಡದ ಕೆಜಿಎಫ್ 2 ಸದ್ಯ ಬಾಲಿವುಡ್ ಅನ್ನು ಆಳುತ್ತಿವೆ. ನೂರಾರು ಕೋಟಿ ಕೊಳ್ಳೆ ಹೊಡೆದಿವೆ. ಅದರಲ್ಲೂ ಕನ್ನಡದ ಕಜಿಎಫ್ 2 ಚಿತ್ರ ಮುನ್ನೂರು ಕೋಟಿ ಕ್ಲಬ್ ತಲುಪಿ, ಇನ್ನೂ ಮುನ್ನುಗ್ಗುತ್ತಿದೆ. ಬಾಲಿವುಡ್ ಕಲಾವಿದರು ಈ ಓಟಕ್ಕೆ ಬೆಚ್ಚಿ ಬಿದ್ದಿದ್ದಾರೆ. ಕೆಲವು ಕಲಾವಿದರು ತಮ್ಮದೇ ಆದ ರೀತಿಯಲ್ಲಿ ರಿಯ್ಯಾಕ್ಟ್ ಕೂಡ ಮಾಡುತ್ತಿದ್ದಾರೆ. ಹೀಗಾಗಿ ರಾಮ್ ಗೋಪಾಲ್ ವರ್ಮಾ ಟ್ವಿಟ್ ಮಹತ್ವ ಪಡೆದಿದೆ.

  • ನಾಳೆ ರಾಮ್ ಗೋಪಾಲ್ ವರ್ಮಾ ಮತ್ತು ಉಪೇಂದ್ರ ಕಾಂಬಿನೇಷನ್ ಹೊಸ ಸಿನಿಮಾದ ಫಸ್ಟ್ ಲುಕ್ ರಿಲೀಸ್

    ನಾಳೆ ರಾಮ್ ಗೋಪಾಲ್ ವರ್ಮಾ ಮತ್ತು ಉಪೇಂದ್ರ ಕಾಂಬಿನೇಷನ್ ಹೊಸ ಸಿನಿಮಾದ ಫಸ್ಟ್ ಲುಕ್ ರಿಲೀಸ್

    ಮೊನ್ನೆಯಷ್ಟೇ ರಾಮ್ ಗೋಪಾಲ್ ವರ್ಮಾ ಕನ್ನಡದ ನಟ ಉಪೇಂದ್ರ ಅವರಿಗಾಗಿ ಸಿನಿಮಾವೊಂದನ್ನು ಮಾಡುವುದಾಗಿ ಘೋಷಿಸಿದ್ದರು. ಈಗ ಆ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ನಾಳೆ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ಈ ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಲಿದೆ. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ

    ಈ ಫಸ್ಟ್ ಲುಕ್ ರಿಲೀಸ್ ಕಾರ್ಯಕ್ರಮದ ವಿಶೇಷ ಅಂದರೆ, ರಾಮ್ ಗೋಪಾಲ್ ವರ್ಮಾ ಅವರು ಬಾಲಿವುಡ್ ಗೆ ಪರಿಚಯಿಸಿದ ಕನ್ನಡದ ಖ್ಯಾತ ನಟರೊಬ್ಬರು ಈ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಲಿದ್ದಾರೆ. ಸ್ಯಾಂಡಲ್ ವುಡ್ ನ ಸಾಕಷ್ಟು ಗಣ್ಯರು ಮತ್ತು ರಾಜಕೀಯ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

    ನಾಳೆ ಸಂಜೆ ಹೊಸ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗಲಿದ್ದು, ಕನ್ನಡದ ಹೆಸರಾಂತ ನಟ ಕಿಚ್ಚ ಸುದೀಪ್ ಈ ಚಿತ್ರದ ಮೊದಲ ನೋಟವನ್ನು ಬಿಡುಗಡೆ ಮಾಡುತ್ತಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಡಿ.ಕೆ. ಶಿವಕುಮಾರ್, ಮಂತ್ರಿಗಳಾದ ಮುನಿರತ್ನ, ಆರ್.ಅಶೋಕ್, ಭೈರತಿ ಬಸವರಾಜು ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

    ನಾನಾ ಕಾರಣಗಳಿಂದಾಗಿ ಈ ಸಿನಿಮಾ ಕುತೂಹಲ ಮೂಡಿಸಿದೆ. ಈ ಚಿತ್ರವು ಮಾಜಿ ಡಾನ್ ಮುತ್ತಪ್ಪ ರೈ ಅವರ ಬದುಕನ್ನು ಆಧರಿಸಿದ್ದು ಎನ್ನಲಾಗುತ್ತಿದೆ. ಆದರೆ, ಈವರೆಗೂ ರಾಮ್ ಗೋಪಾಲ್ ವರ್ಮಾ ಆಗಲಿ ಅಥವಾ ಉಪೇಂದ್ರವಾಗಲಿ ಎಲ್ಲಿಯೂ ಹೇಳಿಕೊಂಡಿಲ್ಲ. ಕಥೆಯು ಸಣ್ಣದೊಂದು ಸುಳಿವು ಬಿಟ್ಟುಕೊಟ್ಟಿದ್ದು ಬಿಟ್ಟರೆ, ಬಹುಶಃ ನಾಳೆ ಒಂದಷ್ಟು ಮಾಹಿತಿಯು ಸಿಗಬಹುದು.

  • ಕೆಜಿಎಫ್ 2 : ನಾಲ್ಕೇ ದಿನಕ್ಕೆ 550 ಕೋಟಿ ಬಾಚಿದ ರಾಕಿಭಾಯ್

    ಕೆಜಿಎಫ್ 2 : ನಾಲ್ಕೇ ದಿನಕ್ಕೆ 550 ಕೋಟಿ ಬಾಚಿದ ರಾಕಿಭಾಯ್

    ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬಿನೇಷನ್ ನ ಕೆಜಿಎಫ್ 2 ಗಳಿಕೆ ರಾಕೆಟ್ ಸ್ಪೀಡ್ ನಲ್ಲಿ ಮುನ್ನುಗ್ಗುತ್ತಿದೆ. ಬಿಡುಗಡೆಯಾದ ಅಷ್ಟೂ ಭಾಷೆಗಳಲ್ಲೂ ಕೋಟಿ ಕೋಟಿ ಸಂಪಾದನೆ ಮಾಡುತ್ತಿದೆ. ಈವರೆಗೂ ಎಲ್ಲಾ ರೆಕಾರ್ಡ್ ಗಳನ್ನು ಮುರಿದಿರುವ ಕೆಜಿಎಫ್ 2, ಮುಂದೆ ಯಾರೂ ಮುರಿಯದಂತಹ ದಾಖಲೆಯನ್ನೂ ಮಾಡುತ್ತಿದೆ. ಇದನ್ನೂ ಓದಿ : ಕ್ಷಮಿಸಿ ಬಿಡು ಬಸವಣ್ಣ : ವಿಡಿಯೋ ರಿಲೀಸ್ ಮಾಡಿದ ಹಂಸಲೇಖ

    ಏ.14ರ ಗುರುವಾರ ಬಿಡುಗಡೆಯಾದ ಕೆಜಿಎಫ್ 2 ದಿನದಿಂದ ದಿನಕ್ಕೆ ಬಾಕ್ಸ್ ಆಫೀಸಿನ ಕ್ರೇಜ್ ಏರಿಸುತ್ತಲೇ ಇದೆ. ನಾಲ್ಕು ದಿನಗಳ ಕಾಲ ರಜೆ ಸಿಕ್ಕ ಕಾರಣಕ್ಕಾಗಿ ರಾಕಿಭಾಯ್ ಮತ್ತಷ್ಟು ಜೇಬು ತುಂಬಿಸಿಕೊಳ್ಳುತ್ತಿದ್ದಾನೆ. ಕನ್ನಡ ಸಿನಿಮಾವೊಂದು ವಿಶ್ವಮಟ್ಟದಲ್ಲಿ ಈ ರೀತಿ ದುಡ್ಡು ಮಾಡುತ್ತಿರುವುದು ಅನೇಕ ಸಿನಿಮಾ ರಂಗದ ನಿರ್ಮಾಪಕರಿಗೆ ಹೊಸದೊಂದು ಮಾರ್ಗ ಕಾಣಿಸಿದಂತಾಗಿದೆ. ಇದನ್ನೂ ಓದಿ: ಬಾಲಿವುಡ್‌ 3ನೇ ದಿನದ ಕಲೆಕ್ಷನ್‌ನಲ್ಲೂ ಹವಾ ಕ್ರಿಯೇಟ್‌ ಮಾಡಿದ ʻಕೆಜಿಎಫ್‌ 2ʼ

    ಕೆಜಿಎಫ್ 2 ಮೂರು ದಿನಗಳ ಗಳಿಕೆ ಅಂದಾಜು 400 ಕೋಟಿ ಎನ್ನಲಾಗಿತ್ತು. ನಾಲ್ಕನೇ ದಿನದ ಗಳಿಕೆ ಒಟ್ಟು ಅಂದಾಜು 550 ಕೋಟಿ ಎನ್ನಲಾಗುತ್ತಿದೆ. ಈ ಮೂಲಕ ಆರ್.ಆರ್.ಆರ್, ಬಾಹುಬಲಿ, ಕೆಜಿಎಫ್ ಚಾಪ್ಟರ್ 1 ಹೀಗೆ ದಾಖಲಾಗಿದ್ದ ಎಲ್ಲ ರೇಕಾರ್ಡ್ ಉಢೀಸ್ ಆಗಿವೆ. ಅಲ್ಲದೇ ವಿದೇಶದಿಂದಲೇ ಅಂದಾಜು ಮೂರು ದಿನಗಳಲ್ಲಿ 80 ಕೋಟಿಗೂ ಅಧಿಕ ಹಣ ಹರಿದು ಬಂದಿದೆ ಎನ್ನುತ್ತಾರೆ ವಿತರಕರು.  ಇದನ್ನೂ ಓದಿ: `ಚಂದ್ರಲೇಖ ರಿಟರ್ನ್ಸ್’ ಅಂತಿದ್ದಾರೆ ನಿರ್ದೇಶಕ ಓಂಪ್ರಕಾಶ್ ರಾವ್

    ಯಾವ ದಿನ, ಎಷ್ಟು ಲೆಕ್ಕ ?

    ಮೊದಲ ದಿನದ ಗಳಿಕೆ : 165.37 ಕೋಟಿ

    ಎರಡನೇ ದಿನದ ಗಳಿಕೆ : 139.25 ಕೋಟಿ

    ಮೂರನೇ ದಿನದ ಗಳಿಕೆ : 115.08 ಕೋಟಿ

    ನಾಲ್ಕನೇ ದಿನದ ಗಳಿಕೆ 132.12 ಕೋಟಿ

    ಒಟ್ಟು : 551. 83 ಕೋಟಿ ಎಷ್ಟು ಕೆಜಿಎಫ್ 2 ಈವರೆಗೂ ಬಾಕ್ಸ್ ಆಫೀಸ್ ಅನ್ನು ತುಂಬಿಸಿದೆ ಎಂದು ಕಾಮ್ ಸ್ಕೋರ್ ವರದಿ ಮಾಡಿದೆ. ಕನ್ನಡಕ್ಕಿಂತಲೂ ಹಿಂದಿ ಸಿನಿಮಾ ರಂಗದಿಂದಲೇ ನಿರ್ಮಾಪಕರಿಗೆ ಹೆಚ್ಚು ಹಣ ಸಂದಾಯವಾಗಿದೆ. ಮೊದಲ ದಿನ 53 ಕೋಟಿ, ಎರಡನೇ ದಿನ 45.7 ಕೋಟಿ, ಮೂರನೇ ದಿನ 42.50 ಕೋಟಿ, ನಾಲ್ಕನೇ ದಿನವೂ ಅಂದಾಜು 50 ಕೋಟಿ ಹಣ ಬಂದಿದೆ ಎನ್ನಲಾಗುತ್ತಿದೆ. ಐದೇ ದಿನದಲ್ಲಿ ಬಹುಶಃ ಹಿಂದಿಯಲ್ಲಿ 200 ಕೋಟಿ ಕ್ಲಬ್ ಗೆ ಕೆಜಿಎಫ್ 2 ಸೇರಲಿದೆ.

  • ಕೆಜಿಎಫ್-2 : ಎರಡನೇ ದಿನಕ್ಕೆ 240 ಕೋಟಿ ಬಾಚಿದ ರಾಕಿ ಭಾಯ್ : ಗ್ರೌಂಡ್ ರಿಪೋರ್ಟ್

    ಕೆಜಿಎಫ್-2 : ಎರಡನೇ ದಿನಕ್ಕೆ 240 ಕೋಟಿ ಬಾಚಿದ ರಾಕಿ ಭಾಯ್ : ಗ್ರೌಂಡ್ ರಿಪೋರ್ಟ್

    ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಸಿನಿಮಾ ಈವರೆಗೂ ಬಾಕ್ಸ್ ಆಫೀಸಿನಲ್ಲಿದ್ದ ಎಲ್ಲ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ಭಾರತೀಯ ಸಿನಿಮಾ ರಂಗದಲ್ಲೇ ಈವರೆಗೂ ಯಾವ ಚಿತ್ರಗಳು ಮಾಡದೇ ಇರುವಂತಹ ಸಾಧನೆಯನ್ನು ಕನ್ನಡದ ಹೆಮ್ಮೆಯ ಚಿತ್ರ ಕೆಜಿಎಫ್ 2 ಮಾಡಿದೆ. ಹಾಗಾಗಿ ಭಾರತೀಯ ಚಲನಚಿತ್ರ ರಂಗವೇ ಬೆರಗಿನಿಂದ ಕನ್ನಡದತ್ತ ನೋಡುತ್ತಿದೆ. ಇದನ್ನೂ ಓದಿ : ಹನುಮ ಜಯಂತಿ : ದೂರದ ಬೆಟ್ಟ ಸಿನಿಮಾದಲ್ಲಿಯ ಡಾ.ರಾಜ್ ಅವರ ಹನುಮನ ಪಾತ್ರ ಏನಾಯಿತು?

    ಮೊದಲನೇ ದಿನ ಬಾಕ್ಸ್ ಆಫೀಸ್ ಕಲೆಕ್ಷನ್ ಭಾರತದಲ್ಲಿ 134.5 ಕೋಟಿ ಗಳಿಸಿತ್ತು. ಇದನ್ನು ಸ್ವತಃ ಸಿನಿಮಾ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಹೇಳಿಕೊಂಡಿತ್ತು. ಎರಡನೇ ದಿನದ ಕಲೆಕ್ಷನ್ ನಲ್ಲೂ ಕೆಜಿಎಫ್ 2 ಹಿಂದೆ ಬಿದ್ದಿಲ್ಲ. ಶುಕ್ರವಾರ ಕೂಡ 105.5  ಕೋಟಿ ಗಳಿಸಿದೆ. ಅಲ್ಲಿಗೆ ಎರಡು ದಿನದ ಒಟ್ಟು ಬಾಕ್ಸ್ ಆಫೀಸ್ ರಿಪೋರ್ಟ್ 240 ಕೋಟಿ ಆಗಿದೆ. ಇದನ್ನೂ ಓದಿ : ಹಸೆಮಣೆ ಏರಿದ ಆಲಿಯಾ-ರಣಬೀರ್‌ಗೆ ಜೋಡಿ ಕುದುರೆ ಉಡುಗೊರೆ

    ಕನ್ನಡದ ಸಿನಿಮಾವೊಂದು ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾ ರಂಗದಲ್ಲಿ ಹಲವು ದಾಖಲೆಗಳನ್ನು ಬರೆದಿದೆ. ಭಾರತದಲ್ಲೇ ಎರಡು ದಿನಕ್ಕೆ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಿಂದಿಯಲ್ಲಿ ಎರಡೇ ದಿನಕ್ಕೆ ನೂರು ಕೋಟಿ ಕ್ಲಬ್ ಗೆ ಸೇರಿದ ಮೊದಲ ಸಿನಿಮಾ ಎಂಬ ಗರಿಮೆ ಕೆಜಿಎಫ್ ಚಿತ್ರದ್ದು. ಹಿಂದಿಯಲ್ಲಿ ಮೊದಲ ದಿನ 46.79 ಕೋಟಿ, ಎರಡನೇ ದಿನ 55.21 ಕೋಟಿ ಗಳಿಗೆ ಮಾಡಿ, ಬಾಲಿವುಡ್ ನಲ್ಲಿ ಕಡಿಮೆ ಅವಧಿಯಲ್ಲೇ ನೂರು ಕೋಟಿ ಕ್ಲಬ್ ಸೇರಿದ ಚಿತ್ರ ಎನಿಸಿಕೊಂಡಿದೆ. ಒಬ್ಬನೇ ಸ್ಟಾರ್ ನಟಿಸಿದ ಸಿನಿಮಾಗಳು ಈವರೆಗೂ ಇಷ್ಟೊಂದು ಕಲೆಕ್ಷನ್ ಮಾಡಿಲ್ಲ ಹಾಗಾಗಿ ಆ ಗರಿಮೆ ಯಶ್‍ ಗೆ ಸೇರಿದೆ. ಭಾರತೀಯ ಸಿನಿಮಾ ರಂಗದಲ್ಲೇ ಇದೇ ಮೊದಲ ಬಾರಿಗೆ ಕೇರಳದಲ್ಲಿ ಅತೀ ಹೆಚ್ಚು ದುಡ್ಡು ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆ ಕನ್ನಡ ಚಿತ್ರಕ್ಕೆ ಸಿಕ್ಕಿದೆ. ಕರ್ನಾಟಕದಲ್ಲಿ ಇದುವರೆಗೆ ಈ ಪ್ರಮಾಣದ ದುಡ್ಡನ್ನು ಯಾವ ಚಿತ್ರಗಳು ತಂದುಕೊಟ್ಟಿಲ್ಲ ಎನ್ನುವುದು ಖುಷಿ ಪಡಬೇಕಾದ ಸಂಗತಿ.  ಇದನ್ನೂ ಓದಿ : ಕೆಜಿಎಫ್-2 ಬಾಲಿವುಡ್ ಮೇಲೆ ಹಾಕಿದ ಅಣುಬಾಂಬ್ : ರಾಮ್ ಗೋಪಾಲ್ ವರ್ಮಾ

    ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಸಿನಿಮಾ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸಿನ ಎಲ್ಲಾ ದಾಖಲೆಗಳನ್ನು ಉಢೀಸ್ ಮಾಡಿದೆ. ಬಿಡುಗಡೆಯಾದ ಒಂದೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಕೇವಲ ಗಲ್ಲಾಪೆಟ್ಟಿಗೆ ಮಾತ್ರವಲ್ಲ, ವಿಮರ್ಶಕರು ಕೂಡ ಸಿನಿಮಾವನ್ನು ಕೊಂಡಾಡಿದ್ದಾರೆ.

  • ಕೆಜಿಎಫ್-2 ಬಾಲಿವುಡ್ ಮೇಲೆ ಹಾಕಿದ ಅಣುಬಾಂಬ್ : ರಾಮ್ ಗೋಪಾಲ್ ವರ್ಮಾ

    ಕೆಜಿಎಫ್-2 ಬಾಲಿವುಡ್ ಮೇಲೆ ಹಾಕಿದ ಅಣುಬಾಂಬ್ : ರಾಮ್ ಗೋಪಾಲ್ ವರ್ಮಾ

    ನೇಕ ಹಿಟ್ ಚಿತ್ರಗಳನ್ನು ಕೊಟ್ಟಿರುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿನ್ನೆಯಿಂದ ಕೆಜಿಎಫ್ 2 ಚಿತ್ರದ ಬಗ್ಗೆ ಸಾಲು ಸಾಲು ಟ್ವಿಟ್ ಗಳನ್ನು ಮಾಡುತ್ತಿದ್ದಾರೆ. ಸಿನಿಮಾ, ಕಲಾವಿದರು, ತಂತ್ರಜ್ಞರು ಮತ್ತು ನಿರ್ದೇಶಕರ ಬಗ್ಗೆ ಹಾಡಿ ಹೊಗಳುತ್ತಿದ್ದಾರೆ. ಆರ್.ಆರ್.ಆರ್ ಸಿನಿಮಾ ರಿಲೀಸ್ ಆದಾಗ ತಮ್ಮ ಡೇಂಜರ್ಸ್ ಸಿನಿಮಾ ಹೋಲಿಸಿ ಲೇವಡಿ ಮಾಡಿದ್ದ ರಾಮ್ ಗೋಪಾಲ್ ವರ್ಮಾ, ಕೆಜಿಎಫ್ 2 ಸಿನಿಮಾದ ಮೇಲೆ ಎಲ್ಲಿಲ್ಲದ ಪ್ರೀತಿ ತೋರಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 ಡಿಜಾಸ್ಟರ್ ಸಿನಿಮಾ ಎಂದು ‘ಥೂ… ಥೂ..’ ಉಗಿಸಿಕೊಂಡ ಬಾಲಿವುಡ್ ನಟ

    ಕೆಜಿಎಫ್ 2 ವಿಶ್ವದಾದ್ಯಂತ ಗೆದ್ದಿದೆ. ಬಾಕ್ಸ್ ಆಫೀಸ್ ತುಂಬಿಸಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರೂ ಚಿತ್ರದ ಬಗ್ಗೆ ಹಾಡಿ ಹೊಗಳುತ್ತಿದ್ದಾರೆ. ಕನ್ನಡಿಗರಂತೂ ಚಿತ್ರವನ್ನು ಎದೆ ಮೇಲೆ ಇಟ್ಟುಕೊಂಡು ಆರಾಧಿಸುತ್ತಿದ್ದಾರೆ. ಹಾಗೆಯೇ ವರ್ಮಾ ಒಬ್ಬ ಸಾಮಾನ್ಯ ನೋಡುಗನಾಗಿ ಸಿನಿಮಾ ವೀಕ್ಷಿಸಿ, ಚಿತ್ರದ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ : ಕನ್ನಡದಲ್ಲೇ ಕೆಜಿಎಫ್ ನೋಡಿ ಫಿದಾ ಆದ ತಲೈವಾ

    ಸ್ಟಾರ್ ನಟರ ಮೇಲೆ ದುಡ್ಡು ಸುರಿಯುವುದಕ್ಕಿಂತ ಸಿನಿಮಾದ ಮೇಲೆ ದುಡ್ಡು ಸುರಿದರೆ ‘ಕೆಜಿಎಫ್ 2’ನಂತಹ ಚಿತ್ರವಾಗುತ್ತದೆ ಎಂದು ಪರೋಕ್ಷವಾಗಿ ಸ್ಟಾರ್ ನಟರ ಮೇಲೆ ದುಡ್ಡು ಹಾಕುವವರಿಗೆ ಟಾಂಗ್ ಕೊಟ್ಟಿದ್ದಾರೆ ವರ್ಮಾ. ಕೆಜಿಎಫ್ ಸಿನಿಮಾದ ಮೂಲಕ ನಿರ್ದೇಶಕ ಪ್ರಶಾಂತ್ ನೀಲ್, ಕನ್ನಡದ ಬಾವುಟವನ್ನು ಜಗತ್ತಿನ ತುತ್ತತುದಿಯವರೆಗೂ ತಗೆದುಕೊಂಡು ಹೋಗಿದ್ದಾರೆ ಎಂದೂ ಟ್ವೀಟ್ ಮಾಡಿದ್ದಾರೆ. ಜಗತ್ತಿನ ನಕಾಶೆಯನ್ನು ಬದಲಿಸಿದ ನಿರ್ದೇಶಕ ಎಂದು ಕೊಂಡಾಡಿದ್ದಾರೆ. ಇದನ್ನೂ ಓದಿ: ಕೆಜಿಎಫ್ 2 : ಯಾವ ರಾಜ್ಯದಲ್ಲಿ ಎಷ್ಟು ಕಲೆಕ್ಷನ್? ಪಕ್ಕಾ ಲೆಕ್ಕ

    ಸಿನಿಮಾದ ಒಂದೊಂದು ದೃಶ್ಯವನ್ನೂ ಹೋಲಿಸಿ ಕಾಮೆಂಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ವಿಲನ್ ಗಳನ್ನು ಹುಡುಕಿಕೊಂಡು‌ ಮಷಿನ್ ಗನ್ ನೊಂದಿಗೆ ಮುಂಬೈಗೆ ಹೊರಡುವ ರಾಕಿಭಾಯ್ ರೀತಿಯಲ್ಲಿ ನಿರ್ದೇಶಕ ಪ್ರಶಾಂತ್ ನೀಲ್, ಬಾಲಿವುಡ್ ಮೇಲೆ ಅಣುಬಾಂಬ್ ಸಿಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ರಾಮ್ ಗೋಪಾಲ್ ವರ್ಮಾ ಒಬ್ಬ ಮಹಾನ್ ಮೋಸಗಾರ : ನಟ್ಟಿಕುಮಾರ್

    ರಾಮ್ ಗೋಪಾಲ್ ವರ್ಮಾ ಒಬ್ಬ ಮಹಾನ್ ಮೋಸಗಾರ : ನಟ್ಟಿಕುಮಾರ್

    ಅಂದುಕೊಂಡಂತೆ ಆಗಿದ್ದರೆ ಈ ವಾರ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಡೇಂಜರಸ್’ ಚಿತ್ರ ಬಿಡುಗಡೆ ಆಗಬೇಕಿತ್ತು. ಹಿಂದಿ ಮತ್ತು ತೆಲುಗುನಲ್ಲಿ ರಿಲೀಸ್ ಆಗಬೇಕಿದ್ದ ಸಿನಿಮಾಗಾಗಿ ವರ್ಮಾ ಸಾಕಷ್ಟು ಪ್ರಚಾರ ಮಾಡಿದರು. ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಿನಿಮಾದ ನಾಯಕಿಯರನ್ನು ಕರೆದುಕೊಂಡು ಸುದ್ದಿಗೋಷ್ಠಿ ಕೂಡ ಏರ್ಪಡಿಸಿದ್ದರು. ಆದರೆ, ಸಿನಿಮಾ ರಿಲೀಸ್ ಆಗಲಿಲ್ಲ. ಅದಕ್ಕೆ ವರ್ಮಾ ಕೊಟ್ಟ ಕಾರಣ, ‘ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಮಾಡಲು ವಿತರಕರು ಒಪ್ಪುತ್ತಿಲ್ಲ’ ಎನ್ನುವುದಾಗಿತ್ತು. ಈ ನಡೆಯ ವಿರುದ್ಧ ತಾವು ಹೋರಾಟ ಮಾಡುವುದಾಗಿ ಹೇಳಿದ್ದರು.

    ಆದರೀಗ ಡೇಂಜರಸ್‌ ಸಿನಿಮಾ ರಿಲೀಸ್ ಆಗದೇ ಇರುವುದಕ್ಕೆ ಬೇರೆಯದ್ದೇ ಕಾರಣವನ್ನು ಕೊಡುತ್ತಾರೆ ವಿತರಕ ನಟ್ಟಿ ಕುಮಾರ್. ಈ ಕುರಿತು ಅವರು ಇಂದು ಸುದ್ದಿಗೋಷ್ಠಿ ಮಾಡಿದ್ದು, ರಾಮ್ ಗೋಪಾಲ್ ವರ್ಮಾ ಬಗ್ಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ರಾಮ್ ಗೋಪಾಲ್ ವರ್ಮಾ ಒಬ್ಬ ಮೋಸಗಾರ. ನನ್ನ ಹತ್ತಿರವೇ ಐದು ಕೋಟಿಗೂ ಹೆಚ್ಚು ಸಾಲ ಮಾಡಿದ್ದಾರೆ. ಆ ಸಾಲವನ್ನು ಈವರೆಗೂ ಕೊಟ್ಟಿಲ್ಲ. ಹಾಗಾಗಿ ಕಾನೂನು ಮೊರೆ ಹೋಗಿ ಚಿತ್ರ ಪ್ರದರ್ಶನ ಆಗದಂತೆ ತಡೆಯಾಜ್ಞೆ ತಂದಿರುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ, ಕೇವಲ ಹಿಂದಿಯಲ್ಲಿ ಮಾತ್ರ ಈ ಸಿನಿಮಾ ಸೆನ್ಸಾರ್ ಆಗಿದೆ. ಉಳಿದಂತೆ ಅವರಿಗೆ ಯಾವ ಭಾಷೆಯಲ್ಲೂ ಸಿಬಿಎಫ್‍ಸಿ ಸರ್ಟಿಫಿಕೇಟ್ ಸಿಕ್ಕಿಲ್ಲ. ಪ್ರಮಾಣಪತ್ರವಿಲ್ಲದೇ ಹೇಗೆ ಬಿಡುಗಡೆ ಮಾಡಲು ಸಾಧ್ಯ ಎಂದೂ ಅವರು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ : ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್

    ರಾಮ್ ಗೋಪಾಲ್ ವರ್ಮಾ ಸಿನಿಮಾಗಳಿಗೆ ತಡೆಯಾಜ್ಞೆ ತರುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದಿನ ಅವರ ಎರಡು ಚಿತ್ರಗಳಿಗೆ ತಂದಿದ್ದೆ. ಮುಂದೆಯೂ ತರುತ್ತೇನೆ. ನನಗೆ ಕೊಡಬೇಕಾದ ಹಣ ಸಂದಾಯ ಆಗುವವರೆಗೂ ನಾನು ಈ ಕೆಲಸ ಮಾಡುತ್ತಲೇ ಇರುತ್ತೇನೆ ಎಂದಿದ್ದಾರೆ ನಟ್ಟಿಕುಮಾರ್. ಬಾಲಿವುಡ್ ನಲ್ಲೂ ಸುಮಾರು 12 ಕೋಟಿಗೂ ಹೆಚ್ಚು ರಾಮ್ ಗೋಪಾಲ್ ವರ್ಮಾ ಸಾಲ ಮಾಡಿದ್ದಾರಂತೆ. ಅದನ್ನು ತೀರಿಸೋಕೆ ಆಗದೇ ಆ ಸಿನಿಮಾ ರಂಗವನ್ನೇ ಬಿಟ್ಟು ಬಂದರಂತೆ. ಆಗ ವರ್ಮಾ ಸಹಾಯಕ್ಕೆ ಬಂದವರು ಇದೇ ನೆಟ್ಟಿಕುಮಾರ್. ನನಗೂ ಮೋಸ ಮಾಡಿ ಗೋವಾಗೆ ಹೋದರು. ಅಲ್ಲಿಯೂ ಮೋಸ ಮಾಡಿ ವಾಪಸ್ಸು ಇಲ್ಲಿಗೆ ಬಂದಿದ್ದಾರೆ. ಅವರಿಂದ ಸಾಕಷ್ಟು ಜನರು ಮೋಸ ಹೋಗಿದ್ದಾರೆ ಎಂದು ನಟ್ಟಿಕುಮಾರ್ ಆರೋಪಿಸಿದ್ದಾರೆ. ಇದನ್ನೂ ಓದಿ : EXCLUSIVE INTERVIEW: ಗೆಲ್ಲಲು ಹೊರಟವನಿಗೆ ಸೋಲು ದೊಡ್ಡದಾಗಬಾರದು: ಯಶ್

    ನಟ್ಟಿಕುಮಾರ್ ಆರೋಪಕ್ಕೆ ತಿರುಗೇಟು ನೀಡಿರುವ ರಾಮ್ ಗೋಪಾಲ್ ವರ್ಮಾ, ಅದೆಲ್ಲವೂ ಸುಳ್ಳು ಎಂದು ನಿರಾಕರಿಸಿ ವೀಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ನಟ್ಟಿಕುಮಾರ್ ಬರೀ ಸುಳ್ಳನ್ನೇ ಹೇಳುತ್ತಾರೆ. ಅವರು ಪ್ರಚಾರ ಪ್ರಿಯರು. ನಾನು ಅವರ ವಿರುದ್ಧ ಕಾನೂನುಕ್ರಮಕ್ಕೆ ಹೋರಾಡುತ್ತೇನೆ ಎಂದು ಅವರು ವೀಡಿಯೋದಲ್ಲಿ ಹೇಳಿದ್ದಾರೆ.