Tag: Rakshita

  • ಬಿಗ್‌ ಬಾಸ್‌ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ದೂರು ದಾಖಲು

    ಬಿಗ್‌ ಬಾಸ್‌ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ದೂರು ದಾಖಲು

    ಬೆಂಗಳೂರು: ಪರಿಸರ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಮನೆಗೆ ಬೀಗ ಜಡಿದ ಪ್ರಕರಣ ಮಾಸುವ ಮುನ್ನವೇ ಬಿಗ್‌ಬಾಸ್‌ (Bigg Boss) ಸ್ಪರ್ಧಿ ಅಶ್ವಿನಿ ಗೌಡ (Ashwini Gowda) ವಿರುದ್ಧ ದೂರು ದಾಖಲಾಗಿದೆ.

    ಬಿಗ್ ಬಾಸ್ ಮನೆಯಲ್ಲಿ S ಪದ ಬಳಕೆ ಮಾಡಿದಕ್ಕೆ ಅಶ್ವಿನಿಗೌಡ ಮತ್ತು ಆಯೋಜಕರ ವಿರುದ್ಧ ಹೈಕೋರ್ಟ್ ವಕೀಲ ಪ್ರಶಾಂತ್ ಮೆತಾಲ್ ಬಿಡದಿ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಸಹ ಸ್ಪರ್ಧಿ ರಕ್ಷಿತಾ (Rakshita Shetty) ಕುರಿತು ಈ ಮಾತನ್ನು ಆಡಿದ್ದಾರೆ. ಇದೊಂದು ವ್ಯಕ್ತಿತ್ವ ನಿಂದನೆ ಎಂದು ಆರೋಪಿಸಿ ಅಶ್ವಿನಿಗೌಡ, ಕಲರ್ಸ್ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ , ಕ್ಲಸ್ಟರ್ ಹೆಡ್ ಸುಷ್ಮಾ ಮತ್ತು ಡೈರೆಕ್ಟರ್ ಪ್ರಕಾಶ್ ವಿರುದ್ಧ ದೂರು ನೀಡಿದ್ದರು.  ಬಿಡದಿ ಪೊಲೀಸರು ದೂರು ಸ್ವೀಕರಿಸಿ ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ಬಿಗ್‌ಬಾಸ್ 12 ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ರಕ್ಷಿತ ರವರಿಗೆ ‘She is S, ಆ Category  ನ  ಎಂದು  ಸ್ಪರ್ಧಿಯಾದ ಅಶ್ವಿನಿ ಗೌಡ ಅವರು ಪದ ಬಳಕೆಯನ್ನು ಮಾಡಿರುತ್ತಾರೆ.

    ಇದು ಜಾತಿ ನಿಂದನೆ ಮತ್ತು ವ್ಯಕ್ತಿತ್ವದ ನಿಂದನೆ ಮಾಡುವಂತಹ ವಿಷಯ. ಈ ಸಮಾಜದಲ್ಲಿ ಎಲ್ಲರೂ ಒಂದೇ ಯಾವ ಜಾತಿ ಅಥವಾ ಭೇದವನ್ನು ಹರಡುವಂತಿಲ್ಲ. ಅಶ್ವಿನಿ ಗೌಡ  ಹೇಳಿದ ಮಾತನ್ನು ತೆಗೆಯದೇ ತಮ್ಮ ಟಿಆರ್‌ಪಿ ಹೆಚ್ಚಾಗಲು ಇದನ್ನು ಪ್ರಸಾರ ಮಾಡಿರುತ್ತಾರೆ. ಇದರಿಂದ ಸಮಾಜಕ್ಕೆ ಒಂದು ಕೆಟ್ಟ ಸಂದೇಶವನ್ನು ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

    ಬಿಗ್‌ಬಾಸ್‌ ಮನೆಯಲ್ಲಿ ಆಗಿದ್ದೇನು?
    ರಕ್ಷಿತಾ ರಾತ್ರಿ ಕ್ಯಾಮೆರಾ ಮುಂದೆ ಮಾತನಾಡುತ್ತಿರುವುದನ್ನು ನೋಡಿ ಮನೆಯವರಿಗೆಲ್ಲ ಫನ್‌ ಮಾಡಲು ರಾತ್ರಿ ಮಲಗಿದ್ದಾಗ ಜಾಹ್ನವಿ ಮತ್ತು ಅಶ್ವಿನಿ ಗೌಡ ಗೆಜ್ಜೆಯನ್ನು ಹಿಡಿದು ಅಲ್ಲಾಡಿಸಿದ್ದರು. ಮನೆಯವರು ಗೆಜ್ಜೆ ಧ್ವನಿ ಮಾಡಿದವರು ಯಾರು ಎಂದು ಕೇಳಿದಾಗ ಅದು ರಕ್ಷಿತಾಳ ಕೆಲಸ ಎಂದು ಸುಳ್ಳು ಹೇಳಿದ್ದರು.

    ಈ ವಿಚಾರದ ಬಗ್ಗೆ ರಕ್ಷಿತಾ ಪ್ರಶ್ನೆ ಮಾಡಿದಾಗ ಜಾಹ್ನವಿ ಮತ್ತು ಅಶ್ವಿನಿ ಗೌಡ ಜೋರು ಧ್ವನಿಯಲ್ಲಿ ಮಾತನಾಡಿ ಗಲಾಟೆ ಮಾಡಿದ್ದರು. ಗಲಾಟೆ ವಿಕೋಪಕ್ಕೆ ಹೋದಾಗಲೂ ಅಶ್ವಿನಿ ಮತ್ತು ಜಾಹ್ನವಿ ತಮ್ಮ ತಪ್ಪನ್ನು ಒಪ್ಪಿರಲಿಲ್ಲ.

    ಮರುದಿನ ಮನೆಯ ವರಾಂಡದಲ್ಲಿ ಜಾಹ್ನವಿ ಜೊತೆ ಅಶ್ವಿನಿ ಕುಳಿತು ರಾತ್ರಿ ನಡೆದ ಗಲಾಟೆಯ ವಿಚಾರದ ಬಗ್ಗೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ರಕ್ಷಿತಾ ಉದ್ದೇಶಿಸಿ ಅವಳು ʼಎಸ್‌ ಕೆಟಗೆರಿʼ ಎಂದು ಹೇಳಿದ್ದರು.

  • ಅಭಿಮಾನಿಗಳೊಂದಿಗೆ ‘ಅಪ್ಪು’ ಸಿನಿಮಾ ವೀಕ್ಷಿಸಲಿದ್ದಾರೆ ರಮ್ಯಾ

    ಅಭಿಮಾನಿಗಳೊಂದಿಗೆ ‘ಅಪ್ಪು’ ಸಿನಿಮಾ ವೀಕ್ಷಿಸಲಿದ್ದಾರೆ ರಮ್ಯಾ

    ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ವರ್ಷದ ಜನ್ಮ ದಿನದ ಪ್ರಯುಕ್ತ ‘ಅಪ್ಪು’ ಚಿತ್ರ ಮಾ.14ರಂದು ರಿಲೀಸ್ ಆಗಿದೆ. ಈ ಹಿನ್ನೆಲೆ ಇಂದು (ಮಾ.16) ಅಭಿಮಾನಿಗಳೊಂದಿಗೆ ಮೋಹಕ ತಾರೆ ರಮ್ಯಾ ‘ಅಪ್ಪು’ (Appu Film) ಚಿತ್ರ ವೀಕ್ಷಿಸಲಿದ್ದಾರೆ.

    ಅಭಿಮಾನಿಗಳೊಂದಿಗೆ ಅವರು ಪುನೀತ್‌ ಮತ್ತು ರಕ್ಷಿತಾ ನಟನೆಯ ‘ಅಪ್ಪು’ ಚಿತ್ರ ವೀಕ್ಷಿಸಲಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ವೀರೇಶ್ ಮಂದಿರಕ್ಕೆ ರಮ್ಯಾ ಆಗಮಿಸಲಿದ್ದಾರೆ. ಇದನ್ನೂ ಓದಿ:ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ನಟ ಪ್ರಭುದೇವ

    ಇನ್ನೂ ಪುನೀತ್‌ಗೆ ನಾಯಕಿಯಾಗಿ ‘ಅಭಿ’ ಸಿನಿಮಾದ ಮೂಲಕ ರಮ್ಯಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಅರಸು, ಆಕಾಶ್ ಸಿನಿಮಾಗಳಲ್ಲಿ ಕೂಡ ಅವರು ಜೊತೆಯಾಗಿ ನಟಿಸಿದ್ದಾರೆ.

  • 23 ವರ್ಷಗಳ ನಂತರ ಮತ್ತೆ ‘ಅಪ್ಪು’ ಸಿನಿಮಾ ನೋಡಿ ಎಮೋಷನಲ್ ಆದ ರಕ್ಷಿತಾ

    23 ವರ್ಷಗಳ ನಂತರ ಮತ್ತೆ ‘ಅಪ್ಪು’ ಸಿನಿಮಾ ನೋಡಿ ಎಮೋಷನಲ್ ಆದ ರಕ್ಷಿತಾ

    ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ‘ಅಪ್ಪು’ (Appu) ಚಿತ್ರ ರೀ-ರಿಲೀಸ್ ಆಗಿದೆ. ಈ ಹಿನ್ನೆಲೆ ಚಿತ್ರದ ನಾಯಕಿ ರಕ್ಷಿತಾ (Rakshita) ಸಿನಿಮಾ ವೀಕ್ಷಿಸಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ಸಿನಿಮಾ ಯೂತ್ ಲವ್ ಸ್ಟೋರಿ, ಈಗಲೂ ಕಥೆ ಹೊಸದಾಗಿದೆ ಎನ್ನುತ್ತಾ ನಟಿ ಎಮೋಷನಲ್ ಆಗಿದ್ದಾರೆ.

    ರಕ್ಷಿತಾ ಮಾತನಾಡಿ, 23 ವರ್ಷಗಳ ನಂತರ ‘ಅಪ್ಪು’ ಸಿನಿಮಾ ನೋಡ್ತಿದ್ದೀನಿ. ಈ ಸಿನಿಮಾ ಯೂತ್ ಲವ್ ಸ್ಟೋರಿ, ಈಗಲೂ ಕಥೆ ಹೊಸದಾಗಿದೆ. 23 ವರ್ಷದ ನಂತರ ಅಪ್ಪು ನನ್ನ ಪಕ್ಕ ನಿಂತು ಸಂದರ್ಶನ ಕೊಡ್ತಿಲ್ಲ ಅಂತ ಬೇಸರವಿದೆ. ಈ ದಿನ ನನಗೆ ಎಮೋಷನಲ್ ಆಗಿತ್ತು. ನನ್ನ ಮಗನ ಜೊತೆ ಬಂದು ಸಿನಿಮಾ ನೋಡಿದೆ. ಇನ್ನೂ ಅಭಿಮಾನಿಗಳ ಸಂಭ್ರಮ ನೋಡಿ ಖುಷಿಯಾಯ್ತು ಎಂದರು. ಇದನ್ನೂ ಓದಿ:ಜೀವನದಲ್ಲಿ ಯಶಸ್ವಿಯಾಗಲು ಪವಿತ್ರಾ ಗೌಡ ಟಿಪ್ಸ್

    ‘ಅಪ್ಪು’ ಅಂದಾಕ್ಷಣ ಮೊದಲು ನೆನಪಾಗೋದು ಪಾರ್ವತಮ್ಮನವರು. ನನ್ನ ತಂದೆಯನ್ನು ನನ್ನ ಮಗ ಇದ್ದಂತೆ ಅಂತಾ ಪಾರ್ವತಮ್ಮನವರು ಯಾವಾಗಲೂ ಹೇಳ್ತಿದ್ದರು ಎಂದು ನಟಿ ಸ್ಮರಿಸಿದರು. ‘ಅಪ್ಪು’ ಚಿತ್ರದಲ್ಲಿ ನನಗೆ ಇಷ್ಟ ಆಗಿರೋ ಸೀನ್ ಅಂದ್ರೆ ಸುಚಿ ಕೈ ಕತ್ತರಿಕೊಳ್ಳೋದು. ಅದು ಎಮೋಷನಲ್ ಆಗಿತ್ತು ಎಂದು ಸೀನ್ ಬಗ್ಗೆ ವಿವರಿಸಿದರು. ಪುನೀತ್ ಅವರನ್ನು ನೆನೆದು ನಟಿ ಭಾವುಕರಾದರು.

    ಅಂದು ಅಪ್ಪಾಜಿ, ಶಿವಣ್ಣ ಜೊತೆ 100ನೇ ದಿನದ ಪ್ರದರ್ಶನದಲ್ಲಿ ಸಿನಿಮಾ ನೋಡಿದಾಗ ಕನಸು ನನಸಾಯಿತು ಎಂದು ಅನಿಸಿತ್ತು. ಇವತ್ತಿಗೂ ಹಾಗೆ ಇದೆ ಅಪ್ಪು ಲವ್ ಸ್ಟೋರಿ, ಜನಕ್ಕೆ ಕನೆಕ್ಟ್‌ ಆಗಿದೆ ಎನ್ನುತ್ತಾ ಪುನೀತ್ ಬರ್ತ್‌ಡೇಗೆ ರಕ್ಷಿತಾ ವಿಶ್ ಮಾಡಿದರು.

  • ನಾಳೆ ರೀ ರಿಲೀಸ್‌ ಆಗ್ತಿದೆ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಅಪ್ಪು’ ಸಿನಿಮಾ

    ನಾಳೆ ರೀ ರಿಲೀಸ್‌ ಆಗ್ತಿದೆ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಅಪ್ಪು’ ಸಿನಿಮಾ

    ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ‘ಅಪ್ಪು’ ಸಿನಿಮಾ ಮಾ.14ರಂದು ರೀ ರಿಲೀಸ್‌ಗೆ ಸಿದ್ಧವಾಗಿದೆ. ಮಾ.17ರಂದು ಪುನೀತ್ ಹುಟ್ಟುಹಬ್ಬದ ಹಿನ್ನೆಲೆ ಮತ್ತೆ ‘ಅಪ್ಪು’ ಸಿನಿಮಾ ರೀ ರಿಲೀಸ್ ಮಾಡಲಾಗುತ್ತಿದೆ. ಹಾಗಾಗಿ ‘ಅಪ್ಪು’ ಸಿನಿಮಾ ಸಕ್ಸಸ್‌ನ ವಿಶೇಷ ವಿಡಿಯೋವೊಂದನ್ನು ಪುನೀತ್ ಪತ್ನಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಟಾಕ್ಸಿಕ್’ ಅದ್ಭುತವಾಗಿದೆ: ಯಶ್ ಕುರಿತು ಹಾಲಿವುಡ್ ಸ್ಟಂಟ್ ಮಾಸ್ಟರ್ ಗುಣಗಾನ

    ‘ಅಪ್ಪು’ 100ನೇ ದಿನದ ಸಂಭ್ರಮದ ವಿಡಿಯೋವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಶೇರ್ ಮಾಡಿ, ‘ಅಪ್ಪು’ ಚಿತ್ರದ ಐತಿಹಾಸಿಕ ಶತದಿನೋತ್ಸವ ಸಮಾರಂಭದ ಯಶಸ್ಸನ್ನು ಹರ್ಷದಿಂದ ಹಾರೈಸಲು ಕನ್ನಡ ಚಿತ್ರರಂಗದ ಗಣ್ಯರು ಒಂದುಗೂಡುವ ಹಬ್ಬದ ಅಪರೂಪದ ಕ್ಷಣಗಳು ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮಾ.14ರಂದು ರೀ ರಿಲೀಸ್ ಆಗುತ್ತಿರುವ ‘ಅಪ್ಪು’ ಚಿತ್ರದ ಬಗ್ಗೆ ಅಪ್‌ಡೇಟ್ ಕೊಟ್ಟಿದ್ದಾರೆ.

    ಇನ್ನೂ ‘ಅಪ್ಪು’ ಚಿತ್ರದ ಸಕ್ಸಸ್ ಕಾರ್ಯಕ್ರಮವು ಅಣ್ಣಾವ್ರು, ರಜನಿಕಾಂತ್ ಸಮ್ಮುಖದಲ್ಲಿ ನಡೆದಿತ್ತು. ಸಿನಿಮಾ ಗೆದ್ದ ಖುಷಿಯಲ್ಲಿ ಶಿವಣ್ಣ, ರಾಘಣ್ಣ ಮತ್ತು ಅಪ್ಪು ಜೊತೆಯಾಗಿ ಹೆಜ್ಜೆ ಹಾಕಿದ್ದರು.

    ಇನ್ನೂ ಪೂರಿ ಜಗನ್ನಾಥ್ ನಿರ್ದೇಶನದ ‘ಅಪ್ಪು’ ಸಿನಿಮಾದಲ್ಲಿ ಪುನೀತ್‌ಗೆ ನಾಯಕಿಯಾಗಿ ರಕ್ಷಿತಾ ನಟಿಸಿದ್ದರು. ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದರು.

  • ದರ್ಶನ್‌-ಪ್ರೇಮ್‌ ಸಿನಿಮಾ ಮಾಡೇ ಮಾಡ್ತಾರೆ – ರಕ್ಷಿತಾ

    ದರ್ಶನ್‌-ಪ್ರೇಮ್‌ ಸಿನಿಮಾ ಮಾಡೇ ಮಾಡ್ತಾರೆ – ರಕ್ಷಿತಾ

    – ದರ್ಶನ್‌ಗೋಸ್ಕರ ವಿಜಯಲಕ್ಷ್ಮಿ ತುಂಬಾ ಕಷ್ಟಪಟ್ಟಿದ್ದಾರೆ ಎಂದ ನಟಿ

    ಬೆಂಗಳೂರು: ದರ್ಶನ್‌ ಹಾಗೂ ಪ್ರೇಮ್‌ (Darshan-Prem) ಸಿನಿಮಾ ಮಾಡೇ ಮಾಡ್ತಾರೆ, ಅದರ ಬಗ್ಗೆ ಡೌಟೇ ಇಲ್ಲ ಅಂತ ನಟಿ ರಕ್ಷಿತಾ (Rakshita) ಹೇಳಿದರು.

    ಬೆಂಗಳೂರಿನಲ್ಲಿ (Bengaluru) ಕಾರ್ಯಕ್ರಮವೊಂದರ ವೇಳೆ ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ ಅವರು, ದರ್ಶನ್ ಹಾಗೂ ಪ್ರೇಮ್ ಸಿನಿಮಾ ಮಾಡ್ತಾರೆ ಅದ್ರ ಬಗ್ಗೆ ಡೌಟೇ ಇಲ್ಲ. ಯಾವ ಬ್ಯಾನರ್‌ ಅನ್ನೋದು ಮ್ಯಾಟರ್‌ ಆಗಲ್ಲ ಎಂದರು. ಇದನ್ನೂ ಓದಿ: ಡಾಲಿ ನಿರ್ಮಾಣದ ‘ವಿದ್ಯಾಪತಿ’ಗೆ ಕೆಜಿಎಫ್ ವಿಲನ್ ಎಂಟ್ರಿ- ನಾಗಭೂಷಣ್ ಎದುರು ತೊಡೆತಟ್ಟಿದ ಗರುಡ ರಾಮ್

    ಇದೇ ವೇಳೆ ದರ್ಶನ್‌ಗೆ ಮಗನ ಮದುವೆ ಬರುವಂತೆ ಇನ್ವಿಟೇಷನ್ ಕೊಟ್ಟಿದ್ದೀನಿ. ರಾಣಾನ ಚಿಕ್ಕವನಿದ್ದಾಗಿಂದ ದರ್ಶನ್ ನೋಡಿದ್ದಾನೆ. ಮದುವೆಗೆ ಬರ್ತೀನಿ ಅಂತ ಹೇಳಿದ್ದಾನೆ ಎಂದರು. ಇದನ್ನೂ ಓದಿ: ಸೈಫ್ ಅಲಿ ಖಾನ್ ಪುತ್ರನ ಸಿನಿಮಾಗೆ ಟೈಟಲ್ ಫಿಕ್ಸ್- ಪೋಸ್ಟರ್ ಔಟ್ 

    ಇನ್ನೂ ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಮಾತನಾಡಿದ ರಕ್ಷಿತಾ, ಅದೊಂದು ಕೆಟ್ಟಗಳಿಗೆ ಅದರಿಂದ ಆಚೆ ಬರಲಿ. ನನಗೆ ಅವ್ನು ಯಾವಾಗಲೂ ಫ್ಯಾಮಿಲಿನೇ. ನನ್ನ ಅಕ್ಕಪಕ್ಕದ ಜನ ಚನಾಗಿದ್ರೆ ನಾನು ಚನಾಗಿರ್ತೀನಿ ಅಂತಾ ನಾನು ಅನ್ಕೋತಿನಿ. ದರ್ಶನ್‌ಗೆ ಅವನ ಫ್ಯಾಮಿಲಿನೇ ದೊಡ್ಡ ಶಕ್ತಿ. ಅವನಿಗೋಸ್ಕರ ವಿಜಯಲಕ್ಷ್ಮೀ ತುಂಬಾ ಕಷ್ಟ ಪಟ್ಟಿದ್ದಾರೆ ಎಂದು ತಿಳಿಸಿದರು.

    ಸೋಶಿಯಲ್ ಮೀಡಿಯಾ ಒಳ್ಳೆದಕ್ಕೂ ಇದೆ ಕೆಟ್ಟದಕ್ಕೂ ಇದೆ. ನಾನೇನಾದ್ರು ಹೇಳ್ಬೇಕು ಅಂದ್ರೆ ಜಾಲತಾಣದಲ್ಲಿ ಹಾಕ್ತಿನಿ. ನನಗೆ ಗೊತ್ತಿರೋ ಪ್ರಕಾರ ಪ್ರೇಮ್ ದರ್ಶನ್ ಸಿನಿಮಾ ಮಾಡ್ತಾರೆ. ಬ್ಯಾನರ್ ಯಾವ್ದು ಅನ್ನೋದು ಮ್ಯಾಟರ್ ಆಗೋಲ್ಲ. ಯಾವುದೇ ಬ್ಯಾನರ್‌ ಅದ್ರೂ ಸಿನಿಮಾ ಮಾಡೇ ಮಾಡ್ತಾರೆ ಎಂದು ರಕ್ಷಿತಾ ಹೇಳಿದರು. ಇದನ್ನೂ ಓದಿ: ನಂಬಿಕೆ, ತಾಳ್ಮೆ ಇರಬೇಕು.. ಟೈಂ ತಗೊಂಡ್ರೂ ನಿಜ ಯಾವತ್ತೂ ಆಚೆ ಬರುತ್ತೆ: ರಾಗಿಣಿ

  • ಸೆ.21ಕ್ಕೆ ‘ಡಾನ್ಸ್ ಕರ್ನಾಟಕ ಡಾನ್ಸ್’ ಫಿನಾಲೆ : ಯಾರ ಪಾಲಾಗಲಿದೆ ಪವರ್ ಸ್ಟಾರ್ ಟ್ರೋಫಿ?

    ಸೆ.21ಕ್ಕೆ ‘ಡಾನ್ಸ್ ಕರ್ನಾಟಕ ಡಾನ್ಸ್’ ಫಿನಾಲೆ : ಯಾರ ಪಾಲಾಗಲಿದೆ ಪವರ್ ಸ್ಟಾರ್ ಟ್ರೋಫಿ?

    ದಾ  ವಿನೂತನ ಮನರಂಜನೆ  ನೀಡುತ್ತಿರುವ ಜೀ ಕನ್ನಡ ವಾಹಿನಿಯವರು ಕರ್ನಾಟಕದ ಪ್ರತಿಭೆಗಳಿಗೆಂದೇ  ಅನೇಕ  ಕಾರ್ಯಕ್ರಮಗಳನ್ನು ಮೀಸಲಿಡುತ್ತ ಬಂದಿದ್ದಾರೆ. ಯಶಸ್ವಿ 5 ಸೀಸನ್ ಗಳನ್ನು ಪೂರೈಸಿ ಇದೀಗ 6 ನೇ ಸೀಸನ್ ಅಂತಿಮ ಘಟ್ಟ ತಲುಪಿದೆ ದಕ್ಷಿಣ ಭಾರತದ ಅತಿ ದೊಡ್ಡ ಡಾನ್ಸ್ ರಿಯಾಲಿಟಿ ಶೋ  ಡಾನ್ಸ್ ಕರ್ನಾಟಕ ಡಾನ್ಸ್ -6. (Dance Karnataka Dance)ಇದೇ ಶನಿವಾರ ಸಂಜೆ 6.00 ಕ್ಕೆ ಇದರ ಗ್ರ್ಯಾಂಡ್ ಫಿನಾಲೆ  ಪ್ರಸಾರವಾಗಲಿದೆ.

    ವಿಭಿನ್ನ ರೀತಿಯ ನೃತ್ಯ ಪ್ರಯೋಗಗಳಿಗೆ ಸಾಕ್ಷಿಯಾಗಿರುವ ಈ ವೇದಿಕೆ ನಾಟ್ಯ ವೈಭವವನ್ನು ಇಡೀ ನಾಡಿಗೆ ಪರಿಚಯಿಸಿದ ಹೆಗ್ಗಳಿಕೆ ಹೊಂದಿದೆ. ಅದರಲ್ಲೂ ವಿಶೇಷವಾಗಿ ಈ ಬಾರಿ ನಮ್ಮೆಲ್ಲರ ನೆಚ್ಚಿನ ಅಪ್ಪು ಪುನೀತ್ ರಾಜ್ ಕುಮಾರ್ (Puneeth Rajkumar)ಅವರ ” ಪವರ್ ಸ್ಟಾರ್ ಟ್ರೋಫಿ ” ಯನ್ನು ಭರ್ಜರಿಯಾಗಿ ಅನಾವರಣಗೊಳಿಸಿದ್ದು ಆ ವಿಶಿಷ್ಟ ಟ್ರೋಫಿ ವಿಜೇತರ ಪಾಲಾಗಲಿದೆ. ಅಷ್ಟೇ ಅಲ್ಲದೆ ಅದು ಯಾರ ಕೈಸೇರಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಮನೆಮಾಡಿದೆ. ಇದನ್ನೂ ಓದಿ:ಯೂಟ್ಯೂಬ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಉಪ್ಪಿ- ಕಿಚ್ಚ ನಟನೆಯ ‘ಕಬ್ಜ’ ಟೀಸರ್

    ಸತತ ಐದು ತಿಂಗಳುಗಳ ಕಾಲ ವೀಕ್ಷಕರನ್ನು ಕುಣಿಸಿ ರಂಜಿಸಿದ ಈ ಕಾರ್ಯಕ್ರಮ ಕಳೆದ ಐದು ಸೀಸನ್ ಗಳಿಗಿಂತ ವಿಶಿಷ್ಟವಾಗಿತ್ತು. ಈ ಬಾರಿ ಕರುನಾಡ ಚಕ್ರವರ್ತಿ ಡಾ . ಶಿವರಾಜ್ ಕುಮಾರ್ (Shivraj Kumar) ಅವರು ಡ್ಯಾನ್ಸಿಂಗ್ ಮಹಾಗುರುವಾಗಿ ಆಗಮಿಸಿದ್ದರಿಂದ ವೇದಿಕೆಗೆ ಮತ್ತಷ್ಟು ಕಳೆಗಟ್ಟಿತು ಹಾಗು ಘನತೆ ಹೆಚ್ಚಿತು ಎನ್ನುವುದು ನೋಡುಗರ ಅಭಿಪ್ರಾಯವಾಗಿದೆ.

    ಆರಂಭದಿಂದಲೂ ಭರ್ಜರಿ ರೇಟಿಂಗ್ ಗಳಿಸುವುದರ ಮೂಲಕ ದಾಖಲೆ ನಿರ್ಮಿಸದ ಈ ಶೋ ವಾರದಿಂದ ವಾರಕ್ಕೆ ತನ್ನ ಗುಣಮಟ್ಟವನ್ನು ಹೆಚ್ಚಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಅಂತಿಮವಾಗಿ 7 ಜೋಡಿಗಳು ಫಿನಾಲೆ (Finale) ಹಂತಕ್ಕೆ ತಲುಪಿದ್ದು ಗೆಲುವಿನ ಕಿರೀಟ ಯಾರ ಮುಡಿಗೇರಲಿದೆ ಎನ್ನುವುದನ್ನು ವೀಕ್ಷಕರು ತುದಿಗಾಲಿನಲ್ಲಿ ನಿಂತು ಕಾಯುವಂತೆ ಮಾಡಿದೆ.

    ಇನ್ನು ಕಾರ್ಯಕ್ರಮಕ್ಕೆ ಮತ್ತಷ್ಟು ರಂಗುತುಂಬಿದವರೆಂದರೆ ತೀರ್ಪುಗಾರರರಾದ ದೇಶದ ಹೆಮ್ಮೆಯ ನೃತ್ಯ ನಿರ್ದೇಶಕ ಚಿನ್ನಿ ಮಾಸ್ಟರ್ , ಸ್ಯಾಂಡಲ್ ವುಡ್ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ (Rakshita) , ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ (Arjun Janya) ಮತ್ತು ಡ್ಯಾನ್ಸಿಂಗ್ ಮಹಾಗುರುವಾಗಿದ್ದ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು. ಎಂದಿನಂತೆ ಅನುಶ್ರೀ (Anushree) ಅವರ ನಿರೂಪಣೆ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ -6 ನ ಗ್ರಾಂಡ್ ಫಿನಾಲೆ ಚಿತ್ರೀಕರಣ ಇದೇ ಸೆಪ್ಟೆಂಬರ್ 21 ಬುಧವಾರದಂದು ಸಂಜೆ 5.30 ಕ್ಕೆ ಕನಕಪುರದ ರೂರಲ್ ಡಿಗ್ರಿ ಕಾಲೇಜ್ ಮೈದಾನದಲ್ಲಿ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ಯಾಂಡಲ್‌ವುಡ್‌ ಕ್ವೀನ್ ಚಿತ್ರರಂಗಕ್ಕೆ ಬಂದು ನಿನ್ನೆಗೆ 19 ವರ್ಷ: ಸದ್ಯದಲ್ಲೇ ರೀ ಎಂಟ್ರಿ

    ಸ್ಯಾಂಡಲ್‌ವುಡ್‌ ಕ್ವೀನ್ ಚಿತ್ರರಂಗಕ್ಕೆ ಬಂದು ನಿನ್ನೆಗೆ 19 ವರ್ಷ: ಸದ್ಯದಲ್ಲೇ ರೀ ಎಂಟ್ರಿ

    ಸ್ಯಾಂಡಲ್ ವುಡ್ ಪದ್ಮಾವತಿ ರಮ್ಯಾ ಸಿನಿಮಾ ರಂಗಕ್ಕೆ ಬಂದು ನಿನ್ನೆ (25 ಏಪ್ರಿಲ್ 2003)ಗೆ 19 ವರ್ಷಗಳ ಪೂರೈಸಿವೆ. ಪುನೀತ್ ರಾಜ್ ಕುಮಾರ್ ನಟನೆಯ ‘ಅಭಿ’ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ರಮ್ಯಾ ಆನಂತರ ಸಿನಿಮಾ ರಂಗದ ಕ್ವೀನ್ ಆಗಿ ಬೆಳೆದರು. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

    ರಮ್ಯಾ ಮೊದಲ ಹೆಸರು ದಿವ್ಯ ಸ್ಪಂದನ. ಉದ್ಯಮಿ ಆರ್.ಟಿ. ನಾರಾಯಣ್ ಮತ್ತು ರಂಜಿತ ದಂಪತಿಯ ಏಕೈಕ ಪುತ್ರಿ. ಪ್ರಾಥಮಿಕ ಶಿಕ್ಷಣವನ್ನು ಊಟಿ ಮತ್ತು ಪ್ರೌಢ ಶಿಕ್ಷಣವನ್ನು ಚನ್ನೈನಲ್ಲಿ ಮುಗಿಸಿದ ನಂತರ ಚಿತ್ರೋದ್ಯಮಕ್ಕೆ ಕಾಲಿಟ್ಟವರು. ನಟನೆಯ ಬಗ್ಗೆ ಯಾವತ್ತೂ ಕನಸು ಕಾಣದೇ ಇರುವಂತಹ ಈ ನಟಿ ಸಿನಿಮಾ ರಂಗಕ್ಕೆ ಬಂದಿದ್ದು ಆಕಸ್ಮಿಕವಾದರೂ, ಬಂದ ನಂತರ ಖ್ಯಾತ ನಟಿಯಾಗಿ ಬೆಳೆದದ್ದು ರೋಚಕ. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

    ಅಂದುಕೊಂಡಂತೆ ಆಗಿದ್ದರೆ ಪುನೀತ್ ಅವರ ಚೊಚ್ಚಲು ಸಿನಿಮಾ ಅಪ್ಪು ಮೂಲಕವೇ ಸಿನಿಮಾ ರಂಗ ಪ್ರವೇಶ ಮಾಡಬೇಕಿತ್ತು. ಆದರೆ, ನಾನಾ ಕಾರಣಗಳಿಂದಾಗಿ ಈ ಸಿನಿಮಾದಲ್ಲಿ ರಮ್ಯಾ ನಟಿಸಲಿಲ್ಲ. ಆ ಪಾತ್ರ ರಕ್ಷಿತಾ ಪಾಲಾಯಿತು. ಹೀಗಾಗಿ ಕನ್ನಡದ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ತಮ್ಮ ಬ್ಯಾನರ್ ನ, ಅಪ್ಪು ನಟನೆಯ ಎರಡನೇ ಚಿತ್ರಕ್ಕೆ ರಮ್ಯಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡರು. ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್

    ಅಭಿ ನಂತರ ಎಕ್ಸ್ ಕ್ಯೂಸ್ ಮಿ ಚಿತ್ರದಲ್ಲಿ ನಟಿಸಿದರು ರಮ್ಯಾ. ಎರಡೂ ಚಿತ್ರಗಳು ಸೂಪರ್ ಹಿಟ್. ಬಾಕ್ಸ್ ಆಫೀಸಿನಲ್ಲೂ ಗೆದ್ದವು. ಹಾಗಾಗಿ ಮೂರನೇ ಚಿತ್ರವನ್ನು ತೆಲುಗಿನಲ್ಲಿ ಮಾಡಿದರು. ಅತೀ ಕಡಿಮೆ ಅವಧಿಯಲ್ಲಿ ಬೇರೆ ಭಾಷೆಗೆ ಹೋದ ಕನ್ನಡದ ನಟಿ ಎಂಬ ಕೀರ್ತಿಗೂ ಅವರು ಪಾತ್ರರಾದರು. ಅಲ್ಲಿಂದ ತಮಿಳು, ಕನ್ನಡ, ತೆಲುಗು ಹೀಗೆ ನಾನಾ ಭಾಷೆಗಳಲ್ಲಿ ರಮ್ಯಾ ನಟಿಸಿದರು.  ಇದನ್ನೂ ಓದಿ : ನಮ್ಮದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಸಿನಿಮಾ ಅಷ್ಟೇ : ಬಾಲಿವುಡ್ ವಿರುದ್ಧ ಕಿಚ್ಚ ಸುದೀಪ್ ಗುಡುಗು

    ರಮ್ಯಾ ಬಂದ ಅವಧಿಯಲ್ಲೇ ರಕ್ಷಿತಾ ಕೂಡ ಸಿನಿಮಾ ರಂಗಕ್ಕೆ ಬಂದಾಗಿತ್ತು. ಹಾಗಾಗಿ ಸಹಜವಾಗಿಯೂ ಇಬ್ಬರ ಮಧ್ಯ ಪೈಪೋಟಿ ಕೂಡ ಇತ್ತು. ಸ್ನೇಹಿತರಾಗಿದ್ದವರು ಕೆಲಸ ಸಿನಿಮಾಗಳಲ್ಲಿ ಕಿತ್ತಾಡಿಕೊಂಡರು ಎಂಬ ಸುದ್ದಿಯೂ ಆಗಿತ್ತು. ಏನೇ ಆದರೂ, ರಮ್ಯಾ ಮಾತ್ರ ತಮ್ಮ ನಂಬರ್ 1 ಸ್ಥಾನವನ್ನೂ ಯಾವತ್ತೂ ಬಿಟ್ಟುಕೊಡಲಿಲ್ಲ. ಬಹುತೇಕ ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡು ಸ್ಯಾಂಡಲ್ ವುಡ್ ಕ್ವೀನ್ ಆಗಿಯೇ ಮೆರೆದರು. ಇದನ್ನೂ ಓದಿ : ಬಾಲಿವುಡ್ ಎಂದರೆ ಭಾರತೀಯ ಸಿನಿಮಾರಂಗವಲ್ಲ: ಮೆಗಾಸ್ಟಾರ್ ಚಿರಂಜೀವಿಗೂ ಆಗಿತ್ತು ಅವಮಾನ

    ನಂತರ ರಾಜಕೀಯ ಪ್ರವೇಶ ಮಾಡಿದರು. ಮಂಡ್ಯ ಕ್ಷೇತ್ರದ ಸಂಸದೆಯಾಗಿ ಕೆಲಸ ಮಾಡಿದರು. ಮತ್ತೆ ಸೋತರು. ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಹುದ್ದೆಯಲ್ಲಿದ್ದರು. ಸದ್ಯ ಸಿನಿಮಾ ಮತ್ತು ರಾಜಕಾರಣದಿಂದ ದೂರವಿದ್ದಾರೆ. ಸದ್ಯದಲ್ಲೇ ಮತ್ತೆ ಸಿನಿಮಾ ರಂಗಕ್ಕೆ ಬರುತ್ತಾರೆ ಎನ್ನುವ ಸುದ್ದಿ ಕೂಡ ಇದೆ.

  • ಸರಳತೆ ಮೆರೆದ ನಿರ್ದೇಶಕ ಪ್ರೇಮ್- ಅಭಿಮಾನಿಗಳಿಂದ ಮೆಚ್ಚುಗೆ

    ಸರಳತೆ ಮೆರೆದ ನಿರ್ದೇಶಕ ಪ್ರೇಮ್- ಅಭಿಮಾನಿಗಳಿಂದ ಮೆಚ್ಚುಗೆ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ದೇಶಕ ಪ್ರೇಮ್ ಅವರು ದನಗಳ ಮೈತೊಳೆದು ಶೃಂಗಾರ ಮಾಡುತ್ತಿರುವ ಫೋಟೋ, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪ್ರೇಮ್ ಕುಟುಂಬಸ್ಥರ ಸರಳತೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪ್ರೇಮ್ ಅವರು ತಮ್ಮ ತಾಯಿಯವರ ತೋಟಕ್ಕೆ ಕುಟುಂಬದವರು ಹಾಗೂ ಏಕಲವ್ಯ ಚಿತ್ರ ತಂಡದ ಜೊತೆ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ. ಅಲ್ಲಿ ಅವರು ತಮ್ಮ ಜಮೀನಿನಲ್ಲಿರುವ ದನಗಳ ಮೈತೊಳೆಸಿ ಅವುಗಳಿಗೆ ತಿನ್ನಲು ಹುಲ್ಲನ್ನು ಹಾಕಿ, ಹೂವಿನ ಹಾರಗಳನ್ನು ಹಾಕಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಮಗನಿಗೆ ಪೇಟವನ್ನು ಕಟ್ಟುತ್ತಿರುವ ಮತ್ತೊಂದು ಫೋಟೋ ಹಂಚಿಕೊಂಡಿದ್ದಾರೆ. ಪ್ರೇಮ್ ಜೊತೆಗೆ ರಕ್ಷಿತಾ ಪ್ರೇಮ್ ಹಾಗೂ ಏಕಲವ್ಯ ಟೀಂ ಸಾಥ್ ಕೊಟ್ಟಿದ್ದಾರೆ.

    ಸಂಕ್ರಾಂತಿಯಂದು ಹಸುಗಳಿಗೆ ಕಿಚ್ಚು ಹಾಯಿಸುವ ವೀಡಿಯೋವನ್ನು ಹಾಕಿಕೊಂಡು ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಈ ಫೋಟೋ ಹಾಗೂ ವೀಡಿಯೋಕ್ಕೆ ಹಲವಾರು ಜನರು ಕಾಮೆಂಟ್ ಮಾಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇವರ ನಡೆ, ನುಡಿ ಹಾಗೂ ಸಂಪ್ರದಾಯವನ್ನು ನೋಡಿದರೆ ಖುಷಿಯಾಗುತ್ತದೆ ಎಂದು ಒಬ್ಬರು ಕಾಮೆಂಟ್ ಹಾಕಿದ್ದಾರೆ. ನಿಮ್ಮನ್ನು ನೋಡಿದರೇ ಸಂತೋಷವಾಗುತ್ತದೆ ಎಂದು ಇನ್ನೊಬ್ಬರು ಪ್ರೇಮ್ ಅವರ ಫೋಟೋ ಕುರಿತು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಮಲಯಾಳಂ ನಟ ಮಮ್ಮುಟ್ಟಿಗೆ ಕೋವಿಡ್-19 ಪಾಸಿಟಿವ್

    ಸದ್ಯ ಪ್ರೇಮ್ ನಿರ್ದೇಶನದ ಏಕಲವ್ಯ ಚಿತ್ರ ಬಿಡುಗಡೆಗೆ ಸಿದ್ಧತೆಗೊಂಡಿದೆ. ಅದರ ಪ್ರಚಾರದಲ್ಲಿ ಪ್ರೇಮ್ ಬ್ಯುಸಿಯಾಗಿದ್ದಾರೆ. ಕೊರೊನಾ ಕಾರಣದಿಂದಾಗಿ ಸಿನಿಮಾ ಬಿಡುಗಡೆಯ ದಿನಾಂಕವನ್ನೂ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ ಭಾಮ

  • ಇಷ್ಟಾರ್ಥ ನೆರವೇರಿಸಿದ ಕೊರಗಜ್ಜನಿಗೆ ಹರಕೆ ಸಲ್ಲಿಸಿದ ಕ್ರೇಜಿ ಕ್ವೀನ್ ದಂಪತಿ

    ಇಷ್ಟಾರ್ಥ ನೆರವೇರಿಸಿದ ಕೊರಗಜ್ಜನಿಗೆ ಹರಕೆ ಸಲ್ಲಿಸಿದ ಕ್ರೇಜಿ ಕ್ವೀನ್ ದಂಪತಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಣಿಕ ದೈವಗಳಲ್ಲಿ ಒಂದಾದ ಕೊರಗಜ್ಜನನ್ನು ಜನಸಾಮಾನ್ಯರು ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ನಂಬುತ್ತಾರೆ. ತಮ್ಮ ಇಷ್ಟಾರ್ಥ ನೆರವೇರಿಸಿದ ಬಳಿಕ ಪುಣ್ಯ ಸ್ಥಳಕ್ಕೆ ಬಂದು ಅಜ್ಜನಿಗೆ ಹರಕೆಗಳನ್ನು ಸಲ್ಲಿಸುತ್ತಾರೆ. ಅಂತೆಯೇ ಇದೀಗ ಸ್ಯಾಂಡಲ್‍ವುಡ್ ನಿರ್ದೇಶಕ ಪ್ರೇಮ್ ಹಾಗೂ ಪತ್ನಿ ರಕ್ಷಿತಾ ಪ್ರೇಮ್ ಕೂಡ ಅಜ್ಜನಿಗೆ ಹರಕೆ ಸಲ್ಲಿಸಿದ್ದಾರೆ.

    ಹೌದು. ತಮ್ಮ ಇಷ್ಟಾರ್ಥ ನೆರವೇರಿಸಿದ ಅಜ್ಜನ ಸನ್ನಿಧಿಗೆ ಬಂದು ದಂಪತಿ ಆಶೀರ್ವಾದ ಪಡೆದಿದ್ದಾರೆ. ಅಲ್ಲದೆ ತಮ್ಮ ಕೋರಿಕೆಯನ್ನು ನೆರವೇರಿಸಿದ ಅಜ್ಜನಿಗೆ ಹರಕೆಯನ್ನು ನೀಡಿದ್ದಾರೆ. ಇದನ್ನೂ ಓದಿ: ದೇವಿ ವೇಷದಲ್ಲಿ ಕಾಣಿಸಿಕೊಂಡ ಸಂಜನಾ

    ಪ್ರೇಮ್, ರಕ್ಷಿತಾ ದಂಪತಿ ಬುಧವಾರ ಮಂಗಳೂರು ಸಮೀಪದ ಕುತ್ತಾರು ಕೊರಗಜ್ಜ ದೈವದ ಆದಿಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ಅಲ್ಲದೆ ತಾವು ಅಂದುಕೊಂಡಿದ್ದನ್ನು ನೆರವೇರಿಸಿದ ಅಜ್ಜನಿಗೆ ಹರಕೆಯ ರೂಪವಾಗಿ ಬೆಳ್ಳಿಯ ದೀಪ ಹಾಗೂ ಗಂಟೆಯನ್ನು ಅರ್ಪಿಸಿದ್ದಾರೆ.

    ಇದಕ್ಕೂ ಮೊದಲು ಪೊಳಲಿ ರಾಜರಾಜೇಶ್ವರಿ ಮತ್ತು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಗಳಿಗೂ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ನಂತರ ಕೊರಗಜ್ಜನ ಸನ್ನಿಧಿಗೆ ತೆರಳಿ ತಮ್ಮ ಹರಕೆ ಸಲ್ಲಿಸಿದ್ದಾರೆ. ಬಳಿಕ ಬೀಚ್ ಗೆ ತೆರಳಿ ಎಂಜಾಯ್ ಮಾಡಿದ್ದಾರೆ.

    ಸೆಲೆಬ್ರಿಟಿ ದಂಪತಿಗೆ ನಟ ಕಿಶೋರ್ ಡಿ.ಕೆ, ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ಮಿಂಚಿದ್ದ ಕಲಾವಿದರಾದ ಧೀರಜ್ ನೀರುಮಾರ್ಗ, ಸೂರಜ್ ಪಾಂಡೇಶ್ವರ, ಬೆಂಗಳೂರಿನ ಖ್ಯಾತ ಕೊರಿಯೋಗ್ರಾಫರ್ ರಾಹುಲ್ ಸಾಥ್ ನೀಡಿದರು.

  • ತಾಯಿ ಮೂಕಾಂಬಿಕೆ ಕೊಟ್ಟ ಉಡುಗೊರೆ ನೀನು – ಮಗನ ಹುಟ್ಟುಹಬ್ಬಕ್ಕೆ ರಕ್ಷಿತಾ ವಿಶ್

    ತಾಯಿ ಮೂಕಾಂಬಿಕೆ ಕೊಟ್ಟ ಉಡುಗೊರೆ ನೀನು – ಮಗನ ಹುಟ್ಟುಹಬ್ಬಕ್ಕೆ ರಕ್ಷಿತಾ ವಿಶ್

    ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ಗಳು ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವುದು ಕಾಮನ್. ಅದೇ ರೀತಿಯಾಗಿ ಸ್ಟಾರ್ ಮಕ್ಕಳು ಕೂಡ ಬರ್ತ್ ಡೇಯನ್ನು ಅಷ್ಟೇ ಸ್ಪೇಷಲ್ ಆಗಿ ಸೆಲೆಬ್ರೇಟ್ ಮಾಡೋದು ಟ್ರೇಂಡ್ ಆಗಿದೆ.

    ಕ್ರೇಜಿ ಕ್ವೀನ್ ರಕ್ಷಿತಾ ಮತ್ತು ಜೋಗಿ ಪ್ರೇಮ್ ದಂಪತಿಯ ಮುದ್ದಾದ ಮಗ ಸೂರ್ಯ 12ನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಮಗನ ಹುಟ್ಟುಹಬ್ಬಕ್ಕೆ ತಾಯಿ ರಕ್ಷಿತಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯ ಮೂಲಕವಾಗಿ ವಿಶ್ ಮಾಡಿದ್ದಾರೆ.

     

    View this post on Instagram

     

    My darling soorya, Ur the most understanding,kind helpful n loving child I know of … ur turning 12 today …. u have Been a support without whom I probably would have become a lot my weaker n alone in life …. ur 12 but the kind of support u show me makes me think that ur a lot older … I have always seen a friend in u n probably because of that u make this journey of mine as ur ma so much more happier n easier …. U coming into my life is the best gift mookambika has given me ….. I know u derive ur strength from me n trust me when I say that I get all my strength n the smile on my face only n only because of u ☺️????????here’s wishing u more strength ,happiness ,love ,success n good health for the rest of ur life …. happy birthday my dear darling soorya ….. I love u more than words can explain …. may gods blessings always be with u ….Love ma ❤️❤️❤️❤️❤️❤️❤️❤️❤️❤️❤️❤️❤️

    A post shared by Rakshitha???? (@rakshitha__official) on

    ಇನ್‍ಸ್ಟಾದಲ್ಲಿ ರಕ್ಷಿತಾ ಬರೆದುಕೊಂಡಿದ್ದೇನು?:
    ನೀನು 12ನೇ ವರ್ಷಕ್ಕೆ ಕಾಲಿಡುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ. ನನಗೆ ತಿಳಿದಿರುವಂತೆ ಅರ್ಥ ಮಾಡಿಕೊಂಡು ಸಹಾಯದ ಗುಣವನ್ನು ಹೊಂದಿರುವ ಪ್ರೀತಿಯ ಮಗು ನೀನು ಸೂರ್ಯ. ನಿನಗೆ ನಾನು ಬೆಂಬಲವಾಗಿರಬೇಕು. ಆದರೆ 12 ವರ್ಷದ ನೀನು ನನಗೆ ತೋರಿಸಿದ ಬೆಂಬಲ ಯಾರು ದೊಡ್ಡವರು ಎಂದು ನನಗೆ ಆಲೋಚಿಸುವಂತೆ ಮಾಡುತ್ತದೆ. ನಾನು ಯಾವಾಗಲೂ ನಿನ್ನಲ್ಲಿ ಒಬ್ಬ ಸ್ನೇಹಿತನನ್ನು ನೋಡಿದ್ದೇನೆ. ನನ್ನ ಜೀವನದ ಈ ಜರ್ನಿಯಲ್ಲಿ ತುಂಬಾ ಸಂತೋಷ ತಂದಿದ್ದೀಯಾ. ಮೂಕಂಬಿಕಾ ನನಗೆ ನೀಡಿರುವ ಅತ್ಯುತ್ತಮ ಉಡುಗೊರೆ ನೀನು. ನನ್ನ ಮುಖದ ಮೇಲೆ ಮುಗುಳುನಗೆ ಮೂಡುತ್ತದೆ ಎಂದರೆ ಅದು ನಿನ್ನಿಂದ ಮಾತ್ರ ಸಾಧ್ಯ ಮಗು. ಸಂತೋಷ, ಆರೋಗ್ಯ, ಪ್ರೀತಿ ಎಲ್ಲವೂ ನಿನಗೆ ಸಿಗಲಿ ಹುಟ್ಟುಹಬ್ಬದ ಸುಭಾಶಯ ಎಂದು ರಕ್ಷಿತಾ ಪ್ರೇಮ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಮುದ್ದು ಮಗನಿಗೆ ವಿಶ್ ಮಾಡಿದ್ದಾರೆ.

    ಸ್ಟಾರ್ ಮಕ್ಕಳು ಅಭಿಮಾನಿಗಳ ದೃಷ್ಟಿಯಲ್ಲಿ ಸ್ಟಾರ್‍ಗಳಿದ್ದಂತೆ. ರಕ್ಷಿತಾ ಮತ್ತು ಪ್ರೇಮ್ ದಂಪತಿಯ ಏಕೈಕ ಪುತ್ರ ಸೂರ್ಯನ ಬರ್ತ್ ಡೇಯನ್ನು ಪ್ರತಿವರ್ಷ ಕಲರ್ ಫುಲ್ ಗಾಗಿ ಸೆಲೆಬ್ರೆಟ್ ಮಾಡುತ್ತಾರೆ.