Tag: Rakesh

  • ರಾಗಿಣಿಗೆ ಬೆನ್ನು ನೋವು, ಆರೋಗ್ಯ ಸಮಸ್ಯೆ – ತಂದೆ ರಾಕೇಶ್

    ರಾಗಿಣಿಗೆ ಬೆನ್ನು ನೋವು, ಆರೋಗ್ಯ ಸಮಸ್ಯೆ – ತಂದೆ ರಾಕೇಶ್

    ಬೆಂಗಳೂರು: ಸದ್ಯ ಆರೋಗ್ಯ ಸಮಸ್ಯೆ ನಟಿ ರಾಗಿಣಿ ದ್ವಿವೇದಿಯನ್ನು ಕಾಡುತ್ತಿದ್ದು, ಚೇತರಿಕೆ ನಂತರ ಸುದ್ದಿಗೋಷ್ಠಿ ನಡೆಸುತ್ತಾರೆ ಎಂದು ತಂದೆ ರಾಕೇಶ್ ತಿಳಿಸಿದ್ದಾರೆ.

    ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಗಿಣಿಗೆ ಬೆನ್ನು ನೋವು ಮತ್ತು ಆರೋಗ್ಯ ಸಮಸ್ಯೆ ಕಾಡುತ್ತಿದೆ. ಹಾಗಾಗಿ ಮನೆಯಲ್ಲಿಯೇ ಅವರು ರೆಸ್ಟ್ ಮಾಡುತ್ತಿದ್ದಾರೆ ಎಂದು ಹೇಳಿದರು.

    ಮೊದಲು ವೈದ್ಯರನ್ನು ಭೇಟಿ ಮಾಡಿ ರಾಗಿಣಿ ಚಿಕಿತ್ಸೆ ಪಡೆಯಬೇಕಿದೆ. ಎರಡು ಮೂರು ದಿನಗಳ ನಂತರ ವಕೀಲರ ಜೊತೆ ಮಾತುಕತೆ ನಡೆಸಬೇಕಾಗಿದೆ. ವಕೀಲರು ಮತ್ತು ವೈದ್ಯರ ಸಲಹೆ ಮೇರೆಗೆ ನಂತರ ರಾಗಿಣಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಅಷ್ಟೇ ಅಲ್ಲದೇ ನಮ್ಮ ಕಷ್ಟದ ಸಮಯದಲ್ಲಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಹೇಳುವ ಮೂಲಕ ಕೃತಜ್ಞತೆ ಸಲ್ಲಿಸಿದರು.

    ಸ್ಯಾಂಡಲ್‍ವುಡ್ ಡ್ರಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ನಟಿ ರಾಗಿಣಿ ದ್ವಿವೇದಿ ಸೋಮವಾರ ಪರಪ್ಪನ ಅಗ್ರಹಾರದಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

  • ರಾಕೇಶ್ ಜೊತೆಗಿನ ಸ್ನೇಹ ಎಂದಿಗೂ ಮರೆಯಲು ಸಾಧ್ಯವಿಲ್ಲ: ಸುಧಾಕರ್

    ರಾಕೇಶ್ ಜೊತೆಗಿನ ಸ್ನೇಹ ಎಂದಿಗೂ ಮರೆಯಲು ಸಾಧ್ಯವಿಲ್ಲ: ಸುಧಾಕರ್

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ದಿವಂಗತ ರಾಕೇಶ್ ನನ್ನು ಸಚಿವ ಸುಧಾಕರ್ ಇಂದು ನೆನಪು ಮಾಡಿಕೊಂಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಸುಧಾಕರ್, ಇಂದು ಮಾಜಿ ಮುಖ್ಯಮಂತ್ರಿ, ವಿಪಕ್ಷನಾಯಕ ಸಿದ್ದರಾಮಯ್ಯನವರ ಪುತ್ರ ದಿವಂಗತ ರಾಕೇಶ್ ಸಿದ್ದರಾಮಯ್ಯನವರು ನಮ್ಮನ್ನೆಲ್ಲ ಅಗಲಿ 4 ವರ್ಷಗಳೇ ಕಳೆದವು. ಅವರು ಇದ್ದಾಗ ಅವರ ಜೊತೆಗಿನ ಸ್ನೇಹ ಎಂದೂ ಮರೆಯಲು ಸಾಧ್ಯವಿಲ್ಲ. ಅವರಿಗೆ ನನ್ನ ಭಾವಪೂರ್ಣ ನಮನಗಳು ಎಂದು ಬರೆದುಕೊಂಡಿದ್ದಾರೆ.

    ವಿದೇಶ ಪ್ರವಾಸದ ಸಂದರ್ಭದಲ್ಲಿ ರಾಕೇಶ್ ಅನಾರೋಗ್ಯಕ್ಕೆ ತುತ್ತಾಗಿದ್ದು. ಹೀಗಾಗಿ ಬೆಲ್ಜಿಯಂನ ಬ್ರಸೆಲ್ಸ್ ಯೂನಿವರ್ಸಿಟಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಫಲಕಾರಿಯಾಗದೆ 2016ರ ಜುಲೈ ತಿಂಗಳಲ್ಲಿ ನಿಧನರಾಗಿದ್ದರು. ಈ ಹಿಂದೆ ಕಾಂಗ್ರೆಸ್ಸಿನಲ್ಲಿದ್ದಾಗ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಸುಧಾಕರ್ ಗುರುತಿಸಿಕೊಂಡಿದ್ದರು. ಹೀಗಾಗಿ ಸುಧಾಕರ್ ಹಾಗೂ ರಾಕೇಶ್ ಉತ್ತಮ ಸ್ನೇಹಿತರಾಗಿದ್ದರು. ಆದರೆ ಆಪರೇಷನ್ ಕಮಲದ ಸಂದರ್ಭದಲ್ಲಿ ಸುಧಾಕರ್ ಬಿಜೆಪಿ ಪಾಳಯಕ್ಕೆ ಸೇರಿಕೊಂಡಿದ್ದರು.

  • ನಿಖಿಲ್ ರೆಬೆಲ್ ಸ್ಟಾರ್ ಫ್ಯಾನ್ ಅಲ್ವಾ?

    ನಿಖಿಲ್ ರೆಬೆಲ್ ಸ್ಟಾರ್ ಫ್ಯಾನ್ ಅಲ್ವಾ?

    ಬೆಂಗಳೂರು: ತರ್ಲೆ ನನ್ ಮಕ್ಳು ಮತ್ತು ಪತಿಬೇಕು ಡಾಟ್ ಕಾಮ್ ಸಿನಿಮಾವನ್ನು ನಿರ್ದೇಶನ ಮಾಡಿದ್ದವರು ನಿರ್ದೇಶಕ ರಾಕೇಶ್. ಸದ್ಯ ರಾಕೇಶ್ ಫ್ಯಾನ್ ಆಫ್ ರೆಬೆಲ್ ಸ್ಟಾರ್ ಅನ್ನೋ ಸಿನಿಮಾವನ್ನು ಆರಂಭಿಸುವ ಸಿದ್ದತೆಯಲ್ಲಿದ್ದಾರೆ. ಸದ್ಯ ಮಂಡ್ಯ ಲೋಕಸಭಾ ಚುನಾವಣೆ ಇಂಡಿಯಾದ ಲೆವೆಲ್ಲಿನಲ್ಲಿ ಟಾಕ್ ಕ್ರಿಯೇಟ್ ಮಾಡಿರುವ ಹೊತ್ತಿನಲ್ಲೇ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ರಾಕೇಶ್ ಬಿಡುಗಡೆ ಮಾಡಿದ್ದಾರೆ.

    ಒಂದು ಕಡೆ ಮಂಡ್ಯ, ಅಂಬರೀಶ್ ಮತ್ತು ನಿಖಿಲ್ ಕುಮಾರಸ್ವಾಮಿ ಚುನಾವಣೆಯಲ್ಲಿ ಮುಖ್ಯವಾಗಿ ಕೇಳಿಬರುತ್ತಿರೋ ಹೆಸರುಗಳು. ಫ್ಯಾನ್ ಆಫ್ ರೆಬೆಲ್ ಸ್ಟಾರ್ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಕನ್ನಡಚಿತ್ರರಂಗದ ಎಲ್ಲಾ ಹೀರೋಗಳ ಮುಖಗಳನ್ನೂ ನಮೂದಿಸಲಾಗಿದೆ. ಈ ಲಿಸ್ಟಿನಲ್ಲಿ ಎಲ್ಲಿ ಹುಡುಕಿದರೂ ನಿಖಿಲ್ ಕುಮಾರಸ್ವಾಮಿಯವರ ಫೇಸು ಕಾಣಸಿಗುತ್ತಿಲ್ಲ. ಇದು ಉದ್ದೇಶಪೂರ್ವಕವಾಗಿಯೇ ಮಾಡಿರೋದಾ ಅಥವಾ ಬೈ ಮಿಸ್ಟೇಕ್ ಮಿಸ್ ಆಗಿಬಿಟ್ಟಿದೆಯಾ ಗೊತ್ತಿಲ್ಲ. ಕೆಲವೇ ನಿಮಿಷಗಳ ಹಿಂದೆ ಬಿಡುಗಡೆಯಾಗಿರುವ ಈ ಪೋಸ್ಟರ್ ಸದ್ಯ ಟಾಕ್ ಆಫ್ ದಿ ಟೌನ್ ಎನ್ನುವಂತೆ ಬಗೆಬಗೆಯ ಚರ್ಚೆಗೆ ಕಾರಣವಾಗಿದೆ.

    ಇದರ ಹಿನ್ನೆಲೆ, ಉದ್ದೇಶಗಳೇನು ಅನ್ನೋದನ್ನು ಸ್ವತಃ ನಿರ್ದೇಶಕ ರಾಕೇಶ್ ಬಹಿರಂಗಗೊಳಿಸೋ ತನಕ ಇದು ಮತ್ತಷ್ಟು ಮಸಾಲೆ ಮಾತುಗಳೊಂದಿಗೆ ಬೆರೆತು ಗಾಳಿಸುದ್ದಿಗಳಿಗೆ ಆಹಾರವಾಗೋದಂತೂ ನಿಜ.

    ಅಂದಹಾಗೆ ಇಷ್ಟರಲ್ಲಿಯೇ ಫ್ಯಾನ್ ಆಫ್ ರೆಬೆಲ್ ಸ್ಟಾರ್ ಸಿನಿಮಾ ಮಂಡ್ಯದಲ್ಲೇ ಅದ್ದೂರಿಯಾಗಿ ಆರಂಭಗೊಳ್ಳಲಿದೆ. ಚುನಾವಣೆಗೂ ಮುನ್ನ ಶುರುವಾಗುವ ಈ ಸಿನಿಮಾದಲ್ಲಿ ನಾಯಕ ಯಾರು ಅನ್ನೋದು ಸದ್ಯದ ತನಕ ಟಾಪ್ ಸೀಕ್ರೇಟ್ ಆಗಿಯೇ ಉಳಿದಿದೆ. ಅದು ಅಂಬರೀಶ್ ಅವರ ಆಪ್ತ ನಟನೇ ಈ ಚಿತ್ರದ ಹೀರೋ ಅನ್ನೋದಷ್ಟೇ ಈತನಕದ ಮಾಹಿತಿಯಾಗಿದ್ದು, ರೆಬೆಲ್ ಸ್ಟಾರ್ ಫ್ಯಾನ್ ಆಗಿ ಯಾರು ನಟಿಸುತ್ತಾರೆ ಅನ್ನೋ ವಿಚಾರ ಮಂಡ್ಯದ ಸಮಾರಂಭದಲ್ಲಿಯೇ ಬಹಿರಂಗಗೊಳ್ಳಲಿದೆಯಂತೆ!

  • ಫ್ಯಾನ್ ಆಫ್ ರೆಬೆಲ್ ಸ್ಟಾರ್ ಶುರುವಾಗೋದು ಯಾವಾಗ?

    ಫ್ಯಾನ್ ಆಫ್ ರೆಬೆಲ್ ಸ್ಟಾರ್ ಶುರುವಾಗೋದು ಯಾವಾಗ?

    ಬೆಂಗಳೂರು: ಪತಿಬೇಕು ಡಾಟ್ ಕಾಮ್ ಚಿತ್ರದ ನಂತರ ನಿರ್ದೇಶಕ ರಾಕೇಶ್ ಹೊಸಾ ಚಿತ್ರಕ್ಕೆ ತಯಾರಿ ನಡೆಸಿರೋದು ಆ ಚಿತ್ರಕ್ಕೆ ಫ್ಯಾನ್ ಆಫ್ ರೆಬೆಲ್ ಸ್ಟಾರ್ ಅನ್ನೋ ಶೀರ್ಷಿಕೆ ಇಟ್ಟಿದ್ದಾರೆ ಅನ್ನೋ ವಿಚಾರ ಈಗಾಗಲೇ ಜಾಹೀರಾಗಿದೆ. ಫ್ಯಾನ್ ಆಫ್ ರೆಬೆಲ್ ಸ್ಟಾರ್ ಹೆಸರೇ ಹೇಳುವಂತೆ ಮಂಡ್ಯದ ಗಂಡು ಅಂಬರೀಶ್ ಅವರ ಅಭಿಮಾನಿಯೊಬ್ಬನ ಕಥೆ ಈ ಸಿನಿಮಾದ್ದು. ಈ ಸಿನಿಮಾದಲ್ಲಿ ಯಾರು ಹೀರೋ ಆಗಿ ನಟಿಸುತ್ತಾರೆ ಎಂಬುದನ್ನು ಈ ಕ್ಷಣಕ್ಕೂ ಗೌಪ್ಯವಾಗಿ ಇಡಲಾಗಿದೆ.

    ಒಂದು ಮೂಲದ ಪ್ರಕಾರ ಈ ಚಿತ್ರದ ಹೀರೋ ಅಂಬರೀಶ್ ಅವರ ಪರಮಾಪ್ತರಲ್ಲೊಬ್ಬರು ಅನ್ನೋ ಮಾತೂ ಕೇಳಿಬರುತ್ತಿದೆ. ಅವರು ಯಾರೆಂಬ ವಿಚಾರವನ್ನು ರಾಕೇಶ್ ಇಷ್ಟರಲ್ಲೇ ಜಾಹೀರು ಮಾಡಲಿದ್ದಾರಂತೆ. ಆದರೆ ರೆಬೆಲ್ ಸ್ಟಾರ್ ಅಂಬರೀಶ್ ಆಪ್ತ ವಲಯದಲ್ಲಿದ್ದ ಆ ಹೀರೋ ಯಾರೆಂಬ ಬಗ್ಗೆ ಈಗಾಗಲೇ ಜನ ಅಂದಾಜು ಊಹಿಸಲು ಶುರು ಮಾಡಿದ್ದಾರೆ. ಆದರೆ ಅವರ್ಯಾರೆಂದು ಕಂಡು ಹಿಡಿಯೋದು ಅಷ್ಟು ಸಲೀಸಿನ ವಿಚಾರವಲ್ಲ. ಯಾಕೆಂದರೆ ಅಂಬಿ ಬಳಗ ತುಂಬಾ ದೊಡ್ಡದು! ಫ್ಯಾನ್ ಆಫ್ ರೆಬೆಲ್ ಸ್ಟಾರ್ ಚಿತ್ರದಲ್ಲಿ ಅಂಬಿ ಬದುಕಿನ ಕಥೆ ಇದೆಯಾ? ಅದು ಅಭಿಮಾನಿಯೊಬ್ಬನ ಕಥೆ ಹೊಂದಿರೋ ಚಿತ್ರವಾ ಅನ್ನೋದೂ ಕೂಡಾ ಹೀರೋ ಯಾರೆಂಬಷ್ಟೇ ನಿಗೂಢ. ಆದರೆ ಇದು ಮಂಡ್ಯಾ ಸೀಮೆಯ ಹಳ್ಳಿ ವಾತಾವರಣದಲ್ಲಿ ನಡೆಯೋ ಪಕ್ಕಾ ಗ್ರಾಮೀಣ ಸೊಗಡಿನ ಕಥೆ ಹೊಂದಿರೋ ಚಿತ್ರ ಅನ್ನೋದಂತೂ ಸತ್ಯ.

    ಅಂಬರೀಶ್ ಅವರ ಪಾರ್ಥೀವ ಶರೀರವನ್ನು ಮಂಡ್ಯದ ಮೈದಾನದಲ್ಲಿ ಅಂತಿಮ ದರ್ಶನಕ್ಕಿಟ್ಟಿದ್ದ ಜಾಗದಲ್ಲೇ ಫ್ಯಾನ್ ಆಫ್ ರೆಬೆಲ್ ಸ್ಟಾರ್ ಚಿತ್ರದ ಆರಂಭಿಕ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ ಅನ್ನೋ ಮಾತು ಕೇಳಿಬರುತ್ತಿತ್ತು. ಅದು ಸಾಧ್ಯವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಮಂಡ್ಯದ ಯಾವುದಾದರೂ ಪ್ರಮುಖ ಸ್ಥಳದಲ್ಲಿ ನಡೆಯೋದು ಖಚಿತ. ಅದು ಎಲೆಕ್ಷನ್ ಮುಗಿದ ನಂತರವಾ ಅಥವಾ ಅದಕ್ಕೆ ಮುಂಚೆಯೇ ಶುರುವಾಗುತ್ತದಾ ಅನ್ನುವುದರ ಮಾಹಿತಿಯಷ್ಟೇ ಹೊರಬೀಳಬೇಕು.

  • ಫ್ಯಾನ್ ಆಫ್ ರೆಬೆಲ್ ಸ್ಟಾರ್ ಯಾರೆಂಬ ಮಿಲಿಯನ್ ಡಾಲರ್ ಪ್ರಶ್ನೆ!

    ಫ್ಯಾನ್ ಆಫ್ ರೆಬೆಲ್ ಸ್ಟಾರ್ ಯಾರೆಂಬ ಮಿಲಿಯನ್ ಡಾಲರ್ ಪ್ರಶ್ನೆ!

    ಬೆಂಗಳೂರು:  ಪತಿಬೇಕು ಡಾಟ್ ಕಾಮ್ ಮೂಲಕ ಬೇರೆಯದ್ದೇ ಫ್ಲೇವರಿನ ಚಿತ್ರವೊಂದನ್ನು ಕೊಟ್ಟವರು ನಿರ್ದೇಶಕ ರಾಕೇಶ್. ಈ ಕಾರಣದಿಂದಲೇ ಅವರು ಮುಂದೆ ಯಾವ ಚಿತ್ರ ಮಾಡುತ್ತಾರೆಂಬ ಬಗ್ಗೆ ಕುತೂಹಲವಿತ್ತು. ಇದೀಗ ಹೊಸಾ ಚಿತ್ರಕ್ಕಾಗಿ ರಾಕೇಶ್ ಸಂಪೂರ್ಣ ತಯಾರಿ ಮಾಡಿಕೊಂಡಿದ್ದಾರೆ.

    ಈ ಚಿತ್ರಕ್ಕೆ ವಿಶೇಷವಾದ ಶೀರ್ಷಿಕೆಯೂ ಪಕ್ಕಾ ಆಗಿದೆ. ಫ್ಯಾನ್ ಆಫ್ ರೆಬೆಲ್ ಸ್ಟಾರ್ ಎಂಬ ಕ್ಯಾಚೀ ಟೈಟಲ್ ರಿಜಿಸ್ಟರ್ ಕೂಡಾ ಆಗಿದೆ. ಆದರೆ ಈ ಸಿನಿಮಾದ ಹೀರೋ ಯಾರೆಂಬ ವಿಚಾರದಲ್ಲಿ ಮಾತ್ರ ನಿರ್ದೇಶಕ ರಾಕೇಶ್ ಮಹಾ ಕುತೂಹಲವೊಂದನ್ನು ಹುಟ್ಟು ಹಾಕಿ ಬಿಟ್ಟಿದ್ದಾರೆ!

    ಈ ಚಿತ್ರದಲ್ಲಿ ಹೀರೋ ಆಗಲಿರುವವರು ಅಂಬರೀಶ್ ಅವರ ಆಪ್ತ ವಲಯದಲ್ಲಿದ್ದವರಂತೆ. ಅಂಬಿಗೂ ಕೂಡಾ ಅವರಂದ್ರೆ ತುಂಬಾ ಇಷ್ಟವಿತ್ತು. ಸದ್ಯ ರಾಕೇಶ್ ಅವರು ಬಿಟ್ಟುಕೊಟ್ಟಿರೋದು ಇದೊಂದು ಹಿಂಟ್ ಮಾತ್ರ. ಇದೀಗ ಇದರ ಸುತ್ತಲೇ ನಾನಾ ದಿಕ್ಕಿನ ಚರ್ಚೆ ನಡೆಯುತ್ತಿದೆ. ಅಂಬರೀಶ್ ಆಪ್ತ ವಲಯದಲ್ಲಿದ್ದವರ ಚಿತ್ರಾವಳಿಗಳನ್ನ ಹಲವರು ರಿವೈಂಡ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಏನೇ ತಿಪ್ಪರಲಾಗ ಹೊಡೆದರೂ ಈ ಹೀರೋನನ್ನು ಕಂಡು ಹಿಡಿಯೋದು ಅಷ್ಟು ಸಲೀಸಿನ ಸಂಗತಿಯಲ್ಲ.

    ಅಂದಹಾಗೆ ಈ ಚಿತ್ರವನ್ನ ಅಂಬಿ ಅಭಿಮಾನಿಗಳೇ ಸೇರಿಕೊಂಡು ನಿರ್ಮಾಣ ಮಾಡುತ್ತಿರೋದು ವಿಶೇಷ. ಅಂಬರೀಶ್ ಮೇಲೆ ಅಗಾಧ ಅಭಿಮಾನ ಹೊಂದಿದ್ದ ಉದ್ಯಮಿಯೊಬ್ಬರು ಈ ಸಿನಿಮಾಗೆ ಸಾಥ್ ನೀಡುತ್ತಿದ್ದಾರಂತೆ. ಕಡೇಯದಾಗಿ ಅಂಬಿ ಪಾರ್ಥೀವ ಶರೀರವನ್ನ ಅಂತಿಮ ದರ್ಶನಕ್ಕಿಡಲಾಗಿದ್ದ ಮಂಡ್ಯದ ಮೈದಾನದಲ್ಲಿಯೇ ಈ ಚಿತ್ರಕ್ಕೆ ಆರಂಭ ಸಿಗಲಿದೆಯಂತೆ. ಇದೊಂದು ಅಪ್ಪಟ ಮಂಡ್ಯ ಸೀಮೆಯ ಹಳ್ಳಿಗಾಡಿನ ಕಥೆ. ಇದರ ಹೀರೋ ಯಾರೆಂಬುದೂ ಸೇರಿದಂತೆ ಉಳಿಕೆ ವಿವರಗಳು ಹಂತ ಹಂತವಾಗಿ ಹೊರ ಬೀಳಲಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 50 ದಿನ ಪ್ರೀತಿಸಿದ್ದ ಅಕ್ಷತಾ-ರಾಕಿ ಬ್ರೇಕಪ್ ಆಗಿದ್ದೇಕೆ? ಮುರಳಿ ಉತ್ತರ ಹೀಗಿತ್ತು

    50 ದಿನ ಪ್ರೀತಿಸಿದ್ದ ಅಕ್ಷತಾ-ರಾಕಿ ಬ್ರೇಕಪ್ ಆಗಿದ್ದೇಕೆ? ಮುರಳಿ ಉತ್ತರ ಹೀಗಿತ್ತು

    ಬೆಂಗಳೂರು: 15 ವಿವಿಧ ಮನಸ್ಸುಗಳನ್ನು ಒಂದೇ ಮನೆಯಲ್ಲಿರಿಸುವುದು. ಬಾಹ್ಯ ಜಗತ್ತಿನೊಂದಿಗೆ ಸಂಪರ್ಕವಿಲ್ಲದೆ ಅಲ್ಲಿರುವ ವಿಭಿನ್ನ ಜನರೊಂದಿಗೆ ಜೀವನ ನಡೆಸುವ ರಿಯಾಲಿಟಿ ಶೋ ಬಿಗ್‍ಬಾಸ್. ಈ ಕಾರ್ಯಕ್ರಮ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಮೂಡಿಬರುತ್ತಿದ್ದು, ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕನ್ನಡದ ಬಿಗ್‍ಬಾಸ್ ಸಹ 6ನೇ ಆವೃತ್ತಿಯ ಅಂತಿಮ ಘಟ್ಟಕ್ಕೆ ತಲುಪಿದೆ. ಶೋ ಆರಂಭವಾದಗಿನಿಂದಲೂ ಮನೆಯಲ್ಲಿರುವ ಅಕ್ಷತಾ ಪಾಂಡವಪುರ ಮತ್ತು ಎಂ.ಜೆ.ರಾಕೇಶ್ ಇಬ್ಬರ ಪ್ರೇಮ ಕಹಾನಿ ಬಹು ಜನರನ್ನು ಆಕರ್ಷಿಸಿತ್ತು.

    ಆರಂಭದ 50 ದಿನಗಳಲ್ಲಿ ಇಬ್ಬರ ಮಧ್ಯೆ ಪ್ರೀತಿ ಇತ್ತು ಎಂಬುದನ್ನು 11ನೇ ವಾರ ಮನೆಯಿಂದ ಹೊರ ಬಂದಿರುವ ಮುರಳಿ ಸಹ ಒಪ್ಪಿಕೊಳ್ಳುತ್ತಾರೆ. ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಕೆಲವು ವಿಚಾರಗಳನ್ನು ಹೊರಹಾಕಿರುವ ಮುರಳಿ, ಕೆಲ ಸ್ಪರ್ಧಿಗಳ ವರ್ತನೆ ಮತ್ತು ನಡವಳಿಕೆ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಕ್ಷತಾ ಬಗ್ಗೆ ಮಾತನಾಡುತ್ತಾ ಆಕೆ ಹುಡುಗಿ ಅಲ್ಲ ಹೆಂಗಸು ಎಂದು ಮಾತು ಆರಂಭಿಸಿದ ಮುರಳಿ, ಆಕೆ ಮಾಡ್ತೀರೋದು ಸರಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಇದನ್ನೂ ಓದಿ:  ಅಮ್ಮ ರಾಕಿಯನ್ನ ಮಾತಾಡ್ಸು-ತಾಯಿ ಬಳಿ ಅಕ್ಷತಾ ಮನವಿ

    ಬ್ರೇಕಪ್ ಆಗಿದ್ದೇಕೆ?
    ಮೊದಲ 50 ದಿನ ಇಬ್ಬರು ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಿದ್ದರು. ಒಂದು ವಾರ ರಾಕೇಶ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾಗ ಬಿಗ್‍ಬಾಸ್ ಅಧಿಕಾರ ನೀಡಿತ್ತು. ನಾಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿ ಒಬ್ಬರನ್ನು ಸೇವ್ ಮಾಡಬಹುದು ಎಂದು ಹೇಳಿತ್ತು. ಆ ವಾರ ನಾಮಿನೇಟ್ ಆದವರಲ್ಲಿ ಅಕ್ಷತಾ ಮತ್ತು ಮುರಳಿ ಸಹ ಇದ್ದರು. ಎಲ್ಲರೂ ಅಕ್ಷತಾಳನ್ನು ರಾಕೇಶ್ ಸೇವ್ ಮಾಡುತ್ತಾನೆ ಅಂದುಕೊಂಡಿದ್ದರು. ಆದ್ರೆ ಈ ಮನೆಗೆ ಮುರಳಿ ಅವರು ಅವಶ್ಯವಾಗಿದ್ದರು. ಹಾಗಾಗಿ ಮುರಳಿ ಅವರನ್ನು ಸೇವ್ ಮಾಡ್ತೀನಿ ಅಂತಾ ಹೇಳಿದ್ದರಿಂದ ಸಹಜವಾಗಿಯೇ ಅಕ್ಷತಾಗೆ ಬೇಸರವಾಯ್ತು ಅಂತಾ ಮುರಳಿ ಹೇಳಿದರು. ಇದನ್ನೂ ಓದಿ: ಬಿಗ್‍ಬಾಸ್ ಸ್ಪರ್ಧಿಗಳ ರಹಸ್ಯ ಬಿಚ್ಚಿಟ್ಟ ಮುರಳಿ

    ಇದಕ್ಕೂ ಮೊದಲು ಜೋಡಿ ನಾಮಿನೇಷನ್ ವೇಳೆ ಅಕ್ಷತಾ ತಾನು ನಾಮಿನೇಟ್ ಆಗುವ ಮೂಲಕ ರಾಕಿಯನ್ನು ಸೇವ್ ಮಾಡಿದ್ದಳು. ಒಂದು ರೀತಿ ಇಬ್ಬರ ಬ್ರೇಕಪ್ ಗೆ ನಾನೇ ಕಾರಣ ಅಂತ ಹೇಳಿ ಮುರಳಿ ನಕ್ಕರು. ಇದನ್ನೂ ಓದಿ:  ರಾಕೇಶ್ ಕೊಟ್ಟ ಗಿಫ್ಟನ್ನು ಲೈಟ್ ಆಫ್ ಆದ್ಮೇಲೆ ಪಡೆದ ಅಕ್ಷತಾ

    ದಿನವಿಡೀ ರಾಕೇಶ್ ಮತ್ತು ಅಕ್ಷತಾ ಜಗಳ ಆಡುತ್ತಾರೆ. ಬಿಗ್‍ಬಾಸ್ ಮನೆಯ ಲೈಟ್ ಆಫ್ ಆದಾಗ ಮಾತನಾಡಲು ಶುರು ಮಾಡುತ್ತಾರೆ. ಕೆಲವರು ತಮ್ಮ ಮುಖಕ್ಕೆ ತಾವೇ ಬಣ್ಣ ಬಳಿದುಕೊಂಡು ಆಟ ಆಡುತ್ತಿದ್ದಾರೆ. ಆದ್ರೆ ಮನೆಯಿಂದ ಹೊರ ಬಂದ ಮೇಲೆ ಜಗತ್ತು ಅದೇ ಬಣ್ಣವನ್ನು ನಂಬುತ್ತೆ. ಅಷ್ಟು ಬೇಗ ತಾವಾಗಿಯೇ ಹಾಕಿಕೊಂಡ ಬಣ್ಣವನ್ನು ತಾವೇ ಬೇಡ ಅಂದರೂ ಕಳಚಲ್ಲ. ರಿಯಲ್ ಮತ್ತು ರಿಯಾಲಿಟಿಗೂ ತುಂಬಾನೇ ವ್ಯತ್ಯಾಸವಿದೆ ಎಂಬುದನ್ನು ಅಲ್ಲಿರುವವರು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಮುರಳಿ ಹೇಳಿದ್ದಾರೆ. ಇದನ್ನೂ ಓದಿ: ರಾಕೇಶ್ ಮೇಲೆ ಗುಡುಗಿದ ಅಕ್ಷತಾ – ಮೋಸ ಹೋದೆ ಎಂದು ಬಾತ್‍ರೂಮಿನಲ್ಲಿ ಚೀರಾಟ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಮ್ಮ ರಾಕಿಯನ್ನ ಮಾತಾಡ್ಸು-ತಾಯಿ ಬಳಿ ಅಕ್ಷತಾ ಮನವಿ

    ಅಮ್ಮ ರಾಕಿಯನ್ನ ಮಾತಾಡ್ಸು-ತಾಯಿ ಬಳಿ ಅಕ್ಷತಾ ಮನವಿ

    -ಅಕ್ಷತಾ ತಾಯಿ ಕೊಟ್ಟ ಉತ್ತರ ಹೀಗಿತ್ತು
    -ಅಕ್ಷತಾ ತಾಯಿ ಬಳಿ ಕ್ಷಮೆಯಾಚಿದ ರಾಕೇಶ್

    ಬೆಂಗಳೂರು: ಬಿಗ್‍ಬಾಸ್ ಶೋಗೆ ಪ್ರತಿ ಸೀಸನ್ ನಲ್ಲೂ ಬಿಗ್ ಮನೆಗೆ ಸ್ಪರ್ಧಿಗಳ ಕುಟುಂಬದವರಲ್ಲಿ ಒಬ್ಬರನ್ನು ಕಳುಹಿಸಿ ಎಲ್ಲರಿಗೂ ಸರ್ಪ್ರೈಸ್ ಕೊಡುತ್ತಾರೆ. ಅದೇ ರೀತಿ ಬಿಗ್‍ಬಾಸ್ ಸೀಸನ್ 6ರಲ್ಲೂ ಮಂಗಳವಾರ ಪ್ರಸಾರವಾದ ಸಂಚಿಕೆಯಲ್ಲಿ ಸ್ಪರ್ಧಿಗಳ ಕುಟುಂಬದವರನ್ನು ಬಿಗ್ ಮನೆಗೆ ಕಳುಹಿಸಿದ್ದರು.

    ಮೊದಲಿಗೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಪಾಸ್ ಟಾಸ್ಕ್ ಕೊಟ್ಟಿರುತ್ತಾರೆ. ಅಂದರೆ ಬಿಗ್ ಬಾಸ್ ಪಾಸ್ ಎಂದು ಹೇಳಿದಾಗ ಸ್ಪರ್ಧಿಗಳು ಯಾರೇ ಬಂದರೂ ಮಾತನಾಡದೇ, ಅಲುಗಾಡದೇ ಸುಮ್ಮನೆ ನಿಲ್ಲಬೇಕಾಗುತ್ತದೆ. ಈ ವೇಳೆ ಮೊದಲ ಬಾರಿಗೆ ನವೀನ್ ಅವರ ಅಮ್ಮ ಬರುತ್ತಾರೆ. ನಂತರ ಶಶಿ ಮನೆಯವರು ಬರುತ್ತಾರೆ. ಅವರನ್ನು ಮನೆಯವರೆಲ್ಲಾ ಮಾತನಾಡಿಸಿ ಕಳುಹಿಸುತ್ತಾರೆ.

    ಮೂರನೇಯದಾಗಿ ಅಕ್ಷತಾ ಅಮ್ಮ ಬಿಗ್ ಮನೆಗೆ ಬರುತ್ತಾರೆ. ಅಮ್ಮನನ್ನು ನೋಡಿದ ಅಕ್ಷತಾ ತಕ್ಷಣ ಅವರನ್ನು ಅಪ್ಪಿಕೊಂಡು ಅಳುತ್ತಾರೆ. ಅಕ್ಷತಾ ತಾಯಿ ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರೆ. ನೀನು ಚೆನ್ನಾಗಿ ಆಟವಾಡುತ್ತಿದ್ದೀಯಾ, ಗೆದ್ದು ಬಾ ಎಂದು ಅಕ್ಷತಾ ಕೈ ಹಿಡಿದುಕೊಂಡು ಹೇಳುತ್ತಾರೆ. ಆದರೆ ರಾಕೇಶ್ ಯಿಂದ ದೂರವಿರು ಎಂದು ಸಲಹೆ ನೀಡಿದ್ದಾರೆ.

    ಆಗ ಅಕ್ಷತಾ, ರಾಕೇಶ್ ಕೂಡ ಅಮ್ಮಂದಿರಿಗೆ ತುಂಬಾ ಗೌರವ ಕೊಡುತ್ತಾರೆ ಮಾತನಾಡಿಸು ಎಂದು ಹೇಳುತ್ತಾರೆ. ಆದರೂ ಅಕ್ಷತಾ ಅಮ್ಮ ಎಲ್ಲರನ್ನು ಮಾತನಾಡಿಸಿ ರಾಕೇಶ್ ಅವರನ್ನು ಮಾತನಾಡಿಸುವುದಿಲ್ಲ. ಈ ವೇಳೆ ರಾಕೇಶ್ ಅಲ್ಲೇ ಪಕ್ಕದಲ್ಲಿಯೇ ಕುಳಿತಿರುತ್ತಾರೆ. ಆಗ ಅಕ್ಷತಾ ರಾಕೇಶ್‍ ನ ಮಾತನಾಡಿಸಿ, ಇಲ್ಲಂದ್ರೆ ಬೇಜಾರ್ ಮಾಡಿಕೊಳ್ಳುತ್ತಾರೆ ಮಾತನಾಡಿಸಿ, ಸಮೀಪ ಕರೀಲಾ ಎಂದು ಕೇಳುತ್ತಾರೆ. ಆಗ ಅವರ ತಾಯಿ ಬೇಡ ಎಂದು ಸುಮ್ಮನಾಗುತ್ತಾರೆ.

    ಕೊನೆಗೆ ರಾಕೇಶ್ ಬಂದು ನನ್ನ ಮೇಲೆ ಕೋಪನಾ ಎಂದು ಅಕ್ಷತಾ ತಾಯಿಯನ್ನು ಮಾತನಾಡಿಸುತ್ತಾರೆ. ಆಗ ಅಕ್ಷತಾ ಅಮ್ಮ ಹಾಗೇನು ಇಲ್ಲ, ಆದರೆ ಹೊರಗಡೆ ಜನರು ಸುಮ್ಮನೆ ಮಾತನಾಡಿಕೊಳ್ಳುತ್ತಾರೆ. ನೀನು ನನ್ನ ಮಗನ ತರ ಎಂದು ಹೇಳುತ್ತಾರೆ. ಬಳಿಕ ರಾಕೇಶ್ ನನ್ನಿಂದ ಏನಾದರೂ ತಪ್ಪಾಗಿದ್ದರೆ  ಕ್ಷಮಿಸಿ ಎಂದು ಕೇಳಿದ್ದಾರೆ.

    ಇದೇ ವೇಳೆ ಅಕ್ಷತಾ ತಾಯಿ ಬಿಗ್ ಮನೆಯಿಂದ ಹೊರ ಬಂದಮೇಲೆ ಎಲ್ಲರನ್ನು ಕರೆದುಕೊಂಡು ಮನೆಗೆ ಬಾ ಎಂದು ಹೇಳಿರುತ್ತಾರೆ. ಆಗ ಅಕ್ಷತಾ ಎಲ್ಲರನ್ನೂ ಮನೆಗೆ ಕರೆದಿದ್ದಾರೆ. ನೀನು ಬಾ ಎಂದು ಹೇಳಿದ್ದಾರೆ.

    ಯಾರ ಜೊತೆ ಕಿರಿಕ್ ಮಾಡಬೇಡ, ಕೋಪ ಕಡಿಮೆ ಮಾಡಿಕೋ ಎಂದು ಬಿಗ್‍ಬಾಸ್ ಮನೆಯಲ್ಲಿ ಮಾಡಿದ್ದ ಟಾಸ್ಕ್ ಬಗ್ಗೆ ಮಾತನಾಡುತ್ತಾರೆ. ಕೊನೆಗೆ ಅವರ ಕೈಯಾರೆ ಮಟನ್ ಅಡುಗೆ ಮಾಡಿ ಎಲ್ಲರಿಗೂ ಕೊಟ್ಟು ಬಿಗ್ ಮನೆಯಿಂದ ಹೊರಹೋಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಕೇಶ್ ಕೊಟ್ಟ ಗಿಫ್ಟನ್ನು ಲೈಟ್ ಆಫ್ ಆದ್ಮೇಲೆ ಪಡೆದ ಅಕ್ಷತಾ

    ರಾಕೇಶ್ ಕೊಟ್ಟ ಗಿಫ್ಟನ್ನು ಲೈಟ್ ಆಫ್ ಆದ್ಮೇಲೆ ಪಡೆದ ಅಕ್ಷತಾ

    -ಬಿಗ್ ಮನೆಯಲ್ಲಿ ಯಾರಿಗೂ ಗೊತ್ತಾಗಲಿಲ್ಲ!

    ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಅಕ್ಷತಾ ಮತ್ತು ರಾಕೇಶ್ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಅಕ್ಷತಾ ಅವರು ಕ್ರಿಸ್ ಮಸ್ ಪ್ರಯುಕ್ತ ರಾಕೇಶ್ ಕೊಟ್ಟ ಉಡುಗೊರೆಯನ್ನು ಮೊದಲು ನಿರಾಕರಿಸಿ ಬಳಿಕ ಎಲ್ಲರೂ ಮಲಗಿದ ನಂತರ ತೆಗೆದುಕೊಳ್ಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

    ಕ್ರಿಸ್‍ಮಸ್ ಪ್ರಯುಕ್ತ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆಲ್ಲರೂ ಸಾಂತಾ ಆಗಿದ್ದರು. ಆದ್ದರಿಂದ ಬಿಗ್‍ಬಾಸ್ ಸ್ಪರ್ಧಿಗಳೆಲ್ಲರಿಗೂ ಒಂದು ಟಾಸ್ಕ್ ಕೊಟ್ಟಿದ್ದರು. ಆ ಟಾಸ್ಕ್ ಎಂದರೆ ತಮ್ಮ ಬಳಿ ಇರುವ ಅಮೂಲ್ಯ ವಸ್ತುವನ್ನು ಇತರೆ ಸ್ಪರ್ಧಿಯೊಬ್ಬರಿಗೆ ಉಡುಗೊರೆ ರೂಪದಲ್ಲಿ ಕೊಡಬೇಕಿತ್ತು. ಉಡುಗೊರೆ ಕೊಟ್ಟ ಕಾರಣವನ್ನು ಎಲ್ಲರ ಮುಂದೆ ಹೇಳಿ ಕೊಡಬೇಕಿತ್ತು.

    ಅದೇ ರೀತಿ ಎಲ್ಲರೂ ತಮ್ಮ ಅಮೂಲ್ಯ ವಸ್ತುಗಳನ್ನು ಸ್ಪರ್ಧಿಗಳಿಗೆ ಕೊಟ್ಟಿದ್ದಾರೆ. ರಾಕೇಶ್, ರಶ್ಮಿ ಅವರಿಗೆ ಕ್ರಿಸ್‍ಮಸ್ ಗಿಫ್ಟ್ ಆಗಿ ಒಂದು ಬೆಲ್ಟ್ ಕೊಟ್ಟಿದ್ದರು. ಎಲ್ಲ ಸ್ಪರ್ಧಿಗಳಿಗೂ ಉಡುಗೊರೆ ಸಿಕ್ಕಿತ್ತು. ಆದರೆ ಅಕ್ಷತಾಗೆ ಯಾರಿಂದಲೂ ಉಡುಗೊರೆ ಸಿಗಲಿಲ್ಲ. ಇದರಿಂದ ಅಕ್ಷತಾ ಬೇಸರ ಮಾಡಿಕೊಂಡಿದ್ದರು. ಕೊನೆಗೆ ರಾಕೇಶ್ ಮೇಕಪ್ ರೂಮಿಗೆ ತೆರಳಿ ಅಕ್ಷತಾ ಸೂಟ್‍ಕೇಸ್ ಮೇಲೆ ಗಿಫ್ಟ್ ಇಟ್ಟು ಬಂದಿದ್ದರು.

    ಮೇಕಪ್ ರೂಮಿನಲ್ಲಿ ಇರಿಸಿದ ಗಿಫ್ಟ್ ನ್ನು ನಿವೇದಿತಾ ಗೌಡ ನೋಡಿದರು. ಗಿಫ್ಟ್ ಮೇಲೆ ಅಕ್ಷತಾ ಅಂತ ಬರೆಯಲಾಗಿತ್ತು. ಹಾಗಾಗಿ ನಿವೇದಿತಾ ಗೌಡ ನೇರವಾಗಿ ಅಕ್ಷತಾಗೆ ನೀಡಿದರು. ಆದರೆ ಅಕ್ಷತಾ ಉಡುಗೊರೆ ಮೇಲೆ ಬರೆದಿದ್ದ ಸಂದೇಶವನ್ನು ಇಟ್ಟುಕೊಂಡು ಕಾಣಿಕೆಯನ್ನು ರಾಕೇಶ್ ಸೂಟ್‍ಕೇಸ್ ನಲ್ಲಿ ವಾಪಸ್ ಇಟ್ಟಿದ್ದರು. ರಾಕೇಶ್ ತಮ್ಮ ಸ್ವೆಟರ್ ನ್ನು ಉಡುಗೊರೆಯಾಗಿ ಕೊಟ್ಟಿದ್ದರು.

    ಇದನ್ನು ನೋಡಿದ ರಾಕೇಶ್, ಇದು ಕ್ರಿಸ್ ಮಸ್ ಗಿಫ್ಟ್, ಯಾರು ಉಡುಗೊರೆಯನ್ನ ವಾಪಸ್ ಕೊಡಬಾರದು ಅಂತ ಪದೇ ಪದೇ ಅಕ್ಷತಾಗೆ ಹೇಳಿದರು. ಆದರೆ ಅಕ್ಷತಾ ನೀವು ಕನ್ನಡದಲ್ಲಿ ಬರೆದಿರುವ ಸಂದೇಶ ಸಾಕು ಎಂದು ಗಿಫ್ಟ್ ಪಡೆಯದೆ ಹೋದರು. ಬಳಿಕ ಬಿಗ್ ಮನೆಯಲ್ಲಿ ಲೈಟ್ ಆಫ್ ಆದ ಮೇಲೆ ಅಕ್ಷತಾ ರಾಕೇಶ್ ಕೊಟ್ಟ ಉಡುಗೊರೆಯನ್ನು ಪಡೆದುಕೊಂಡಿದ್ದಾರೆ.

    ರಾತ್ರಿ ವೇಳೆ ಅಕ್ಷತಾ ಗಿಫ್ಟ್ ತೆಗೆದುಕೊಂಡು ರಾಕೇಶ್ ಬರೆದ ಸಂದೇಶವನ್ನು ಬಿಗ್ ಬಾಸ್ ಕ್ಯಾಮೆರಾ ಮುಂದೆ ಓದಿ ಹೇಳಿದ್ದಾರೆ. “ಅಕ್ಷತಾ ನನಗೆ ಗೊತ್ತು, ಇದು ನಿನಗೆ ಬೇಕು ಅಂತ, ನೀನು ಇದನ್ನು ಕ್ಯಾಮೆರಾ ಮುಂದೆ ಬೇಕು ಎಂದು ಕೇಳುತ್ತಿದ್ದೆ. ನಮ್ಮ ಮಧ್ಯೆ ನಡೆಯುತ್ತಿರುವ ಕೋಲ್ಡ್ ವಾರ್ ಗೆ ಈ ಉಡುಗೊರೆಯಿಂದ ವಾವ್ ಸಿಗಲಿದೆ’ ಎಂದು ರಾಕೇಶ್ ಬರೆದಿದ್ದರು.

    ಅಕ್ಷತಾ ಬಿಗ್ ಮನೆಯಲ್ಲಿ ಕ್ಯಾಮೆರಾ ಮುಂದೆ ಹೋಗಿ ನನಗೆ ಸ್ವೆಟರ್ ಬೇಕು ಎಂದು ಕೇಳುತ್ತಿದ್ದರು. ಆದ್ದರಿಂದ ರಾಕೇಶ್ ಕ್ರಿಸ್‍ಮಸ್ ಪ್ರಯುಕ್ತ ಅಕ್ಷತಾಗೆ ಸ್ವೆಟರ್ ಕೊಟ್ಟಿದ್ದಾರೆ. ಕೊನೆಗೆ ಸ್ವೆಟರ್ ಕೊಟ್ಟ ರಾಕೇಶ್ ಗೆ ಅಕ್ಷತಾ ಧನ್ಯವಾದ ತಿಳಿಸಿದ್ದಾರೆ. ರಾತ್ರಿ ವೇಳೆ ಗಿಫ್ಟ್ ಪಡೆದುಕೊಂಡ ಕಾರಣ ಉಳಿದ ಸ್ಪರ್ಧಿಗಳಿಗೆ ಗೊತ್ತಾಗಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಕಿ-ಅಕ್ಷತಾ ನಡುವೆ ಜ್ವಾಲಾಮುಖಿ ಸ್ಫೋಟ

    ರಾಕಿ-ಅಕ್ಷತಾ ನಡುವೆ ಜ್ವಾಲಾಮುಖಿ ಸ್ಫೋಟ

    -ಹೋಗಲೋ ನಿನ್ನನ್ನ ಯಾರ್ ಮಾತಾಡಾಸ್ತಾರೆ: ಅಕ್ಷತಾ
    -ಅಯ್ಯೋ ಇದೇನಾಯ್ತು? ಇತರೆ ಸ್ಪರ್ಧಿಗಳೆಲ್ಲಾ ಕನ್ಫ್ಯೂಸ್

    ಬೆಂಗಳೂರು: ಬಿಗ್ ಬಾಸ್ 6ನೇ ಆವೃತ್ತಿಯ ಪ್ರೇಮ ಜೋಡಿಗಳೆಂದು ಗುರುತಿಸಿಕೊಂಡಿರುವ ಅಕ್ಷತಾ ಮತ್ತು ರಾಕೇಶ್ ನಡುವೆ ಮಹಾಯುದ್ಧವೇ ನಡೆದಿದೆ. ಶುಕ್ರವಾರ ಪ್ರಸಾರವಾದ ಸಂಚಿಕೆಯಲ್ಲಿ ಅಕ್ಷತಾ ಮತ್ತು ರಾಕೇಶ್ ನಡುವೆ ದೊಡ್ಡ ಜಗಳವೇ ನಡೆದಿದೆ.

    ಈ ವಾರದ ಕ್ಯಾಪ್ಟನ್ ಆಗಿ ರಾಕೇಶ್ ಆಯ್ಕೆಯಾಗಿದ್ದರು. ನಾಮಿನೇಷನ್ ವೇಳೆ ಬಿಗ್‍ಬಾಸ್ ರಾಕೇಶ್ ಗೆ ವಿಶೇಷ ಅಧಿಕಾರ ನೀಡಿತ್ತು. ಅಕ್ಷತಾರನ್ನು ಉಳಿಸದೇ ಮುರುಳಿ ಅವರನ್ನು ರಾಕೇಶ್ ಸೇವ್ ಮಾಡಿದ್ದರು. ಇದರಿಂದ ಸಹಜವಾಗಿಯೇ ಅಕ್ಷತಾ ಜೋರಾಗಿ ಕೂಗಿ ಕಣ್ಣೀರು ಹಾಕಿದ್ದರು. ಕಳೆದ ಎರಡು ದಿನಗಳಿಂದ ಆರಂಭದ ದಿನಗಳಿಂದಲೂ ಅಕ್ಷತಾ ಅಡುಗೆ ಮನೆಯಲ್ಲಿ ಕೆಲಸ ಮಾಡ್ತಿದ್ದಾಳೆ. ಹಾಗಾಗಿ ಬೇರೆಯವರು ಅಡುಗೆ ಮಾಡಿ ಎಂದು ರಾಕೇಶ್ ಆದೇಶಿಸಿದ್ದರು. ಈ ವೇಳೆ ರಾಕೇಶ್, ಇದು ನನ್ನ ನಿರ್ಣಯ ಅಲ್ಲ, ಮನೆಯ ಇತರೆ ಸದಸ್ಯರ ಮನವಿಯ ಮೇರೆಗೆ ಅಡುಗೆ ಬೇರೆಯವರ ಮಾಡಲಿ ಎಂದು ಹೇಳ್ತಿದ್ದೇನೆ ಎಂದರು.

    ಇಷ್ಟಕ್ಕೆ ಸುಮ್ಮನಾಗದ ಅಕ್ಷತಾ ಎಲ್ಲರ ಬಳಿಯೂ ಹೋಗಿ, ನಾನು ಅಡುಗೆ ಯಾರು ಮಾಡಬಾರದೆಂದು ಎಂದು ಪ್ರಶ್ನೆ ಮಾಡಿದರು. ಈ ವೇಳೆ ಎಲ್ಲರೂ ನಾವು ಹೇಳಿಲ್ಲ, ನಿಮ್ಮ ಅಡುಗೆಯೇ ನಮಗಿಷ್ಟ ಅಂತಾ ಉತ್ತರ ನೀಡಿದ್ದಾರೆ. ಎಲ್ಲರ ಬಳಿ ಸ್ಪಷ್ಟನೆ ಪಡೆದುಕೊಂಡ ಅಕ್ಷತಾ, ನಾನು ಅಡುಗೆ ಮಾಡಬಾರದೆಂದು ಹೇಳಿದ್ಯಾರು ಎಂದು ರಾಕೇಶ್ ನನ್ನು ಪ್ರಶ್ನಿಸಿದರು. ನಾನು ಹೆಸರು ಹೇಳಲ್ಲ ಎಂದು ರಾಕೇಶ್ ವಾದಿಸಿದರು.

    ಹೀಗೆ ಇಬ್ಬರ ಮಾತುಕತೆ ಕೆಲ ಸಮಯ ನಡೆಯಿತು. ಕೊನೆಗೆ ನೀವು ನನ್ನನ್ನು ಬಿಟ್ಟುಬಿಡಿ. ನಿಮ್ಮಿಂದ ಹೊರಗಡೆ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂಬ ಅನುಮಾನ ಬರುತ್ತಿದೆ. ಈಗಾಗಲೇ ನಮ್ಮಿಬ್ಬರ ಸಂಬಂಧದ ಬಗ್ಗೆ ನಿಮ್ಮ ತಾಯಿ ಬೇಸರ ವ್ಯಕ್ತಪಡಿಸಿದ್ದಾರೆ. ದಯವಿಟ್ಟು ನನ್ನೊಂದಿಗೆ ಪದೇ ಪದೇ ಮಾತನಾಡಬೇಡಿ ಎಂದು ರಾಕೇಶ್ ಮನವಿ ಮಾಡಿಕೊಂಡರು.

    ರಾಕೇಶ್ ಮನವಿಗೆ ಪ್ರತಿಕ್ರಿಯಿಸಿದ ಅಕ್ಷತಾ, ನನಗೆ ನಿಮ್ಮಿಂದ ಪರ್ಸನಲ್ ಡ್ಯಾಮೇಜ್ ಆಗ್ತಿದೆಯೇ ಹೊರತು ನಿಮಗೆ ಅಲ್ಲ. ಮೊದಲಿನಿಂದಲೂ ಬಿಗ್ ಬಾಸ್ ಮನೆಯ ಹೊರಗೆ ಒಳ್ಳೆಯ ಫ್ರೆಂಡ್ಸ್ ಎಂದು ಹೇಳಿದ್ದೇನೆ. ಕೂಡಲೇ ರಾಕೇಶ್ ನಾವಿಬ್ಬರು ಫ್ರೆಂಡ್ಸ್ ಅಲ್ಲ ಎಂದು ಜೋರಾಗಿ ಹೇಳಿದರು. ಕೋಪಗೊಂಡ ಅಕ್ಷತಾ, ಹೋಗಲೋ ನಿನ್ನನ್ನು ಯಾರ್ ಮಾತಾಡಾಸ್ತಾರೆ ಎಂದು ಗಾರ್ಡನ್ ಏರಿಯಾದಿಂದ ಮನೆಯೊಳಗೆ ಹೋದ್ರು.

    ಮನೆಯಲ್ಲಿದ್ದ ಇತರೆ ಸದಸ್ಯರು ಮೂಕವಿಸ್ಮಿತರಾಗಿ ಎಲ್ಲವನ್ನು ನೋಡಿ ಒಂದು ಕ್ಷಣ ಶಾಕ್ ಆದಂತೆ ತಬ್ಬಿಬಾದರು. ಅದ್ರೆ ಯಾವ ಸದಸ್ಯರು ಇಬ್ಬರನ್ನು ರಾಜಿ ಮಾಡಿಸುವ ಕೆಲಸಕ್ಕೆ ಮುಂದಾಗಲಿಲ್ಲ. ಮುರುಳಿ ಅವರನ್ನು ಸೇವ್ ಮಾಡಿದಾಗಲೂ ಇಬ್ಬರು ಇದೇ ರೀತಿ ಜಗಳ ಮಾಡಿಕೊಂಡು ದಿನವಿಡೀ ಕಿಡಿಕಾರಿ, ಮನೆಯ ಲೈಟ್ ಆಫ್ ಆಗ್ತಿದ್ದಂತೆ ಅಕ್ಷತಾ ಮತ್ತು ರಾಕೇಶ್ ತಮ್ಮ ಮಾತುಗಳನ್ನು ಆರಂಭಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಕೇಶ್ ಮೇಲೆ ಗುಡುಗಿದ ಅಕ್ಷತಾ – ಮೋಸ ಹೋದೆ ಎಂದು ಬಾತ್‍ರೂಮಿನಲ್ಲಿ ಚೀರಾಟ

    ರಾಕೇಶ್ ಮೇಲೆ ಗುಡುಗಿದ ಅಕ್ಷತಾ – ಮೋಸ ಹೋದೆ ಎಂದು ಬಾತ್‍ರೂಮಿನಲ್ಲಿ ಚೀರಾಟ

    ಬೆಂಗಳೂರು: ಬಿಗ್ ಬಾಸ್ ಸೀಸನ್ 6ರಲ್ಲಿ ರಾಕೇಶ್ ಮತ್ತು ಅಕ್ಷತಾ ಇಬ್ಬರ ನಡುವೆ ಪ್ರೀತಿ ಇದೆ ಎಂದು ಗಾಸಿಪ್ ಹರಿದಾಡುತ್ತಿದೆ. ಅದರಂತೆಯೇ ಅವರಿಬ್ಬರು ಬಿಗ್ ಬಾಸ್ ಮೆನಯಲ್ಲಿ ಯಾವಾಗಲೂ ಒಟ್ಟಿಗೆ ಇದ್ದು ಟಾಸ್ಕ್ ಮಾಡುತ್ತಿರುತ್ತಾರೆ.

    ಈ ವಾರ ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅವರು ಕ್ಯಾಪ್ಟನ್ ಆಗಿದ್ದರು. ಆದರೆ ಮನೆಯಿಂದ ಹೊರ ಹೋಗಲು ರಾಕೇಶ್ ಕೂಡ ನಾಮಿನೇಟ್ ಆಗಿದ್ದರು. ಆದ ಕಾರಣ ಬಿಗ್ ಬಾಸ್ ಒಂದು ವಿಶೇಷವಾದ ಅಧಿಕಾರವನ್ನು ರಾಕೇಶ್‍ಗೆ ಕೊಟ್ಟಿದ್ದರು.

    ಈ ವಾರ ಜಯಶ್ರೀ, ಕವಿತಾ, ಆ್ಯಂಡಿ, ಮುರಳಿ, ಅಕ್ಷತಾ, ರಶ್ಮಿ ಮತ್ತು ರಾಕೇಶ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಬಿಗ್‍ಬಾಸ್ ಕೊಟ್ಟ ವಿಶೇಷ ಅಧಿಕಾರದಲ್ಲಿ ರಾಕೇಶ್, ನಾಮಿನೇಟ್ ಯಿಂದ ತಮ್ಮನ್ನು ಸೇವ್ ಮಾಡಿಕೊಳ್ಳಬಹುದಿತ್ತು ಅಥವಾ ನಾಮಿನೇಟ್ ಆಗಿದ್ದ ಸ್ಪರ್ಧಿಗಳಲ್ಲಿ ಒಬ್ಬರನ್ನು ಉಳಿಸಿಕೊಳ್ಳಬೇಕಿತ್ತು. ಆಗ ರಾಕೇಶ್ ಮುರಳಿ ಅವರನ್ನು ಸೇವ್ ಮಾಡಿದರು.

    ರಾಕೇಶ್ ಮುರಳಿಯನ್ನು ಸೇವ್ ಮಾಡಿದ ತಕ್ಷಣ ಬೇಸರ ಮಾಡಿಕೊಂಡ ಅಕ್ಷತಾ ಕೋಪಗೊಂಡು ಬಾತ್‍ರೂಮಿಗೆ ಹೋಗಿ ಜಯಶ್ರೀ ಅವರನ್ನು ಅಪ್ಪಿಕೊಂಡು ಗಳಗಳನೇ ಅತ್ತಿದ್ದಾರೆ. ಈ ವೇಳೆ ನಾನಾಗಿದ್ದರೆ ಅವರನ್ನೇ ಉಳಿಸುತ್ತಿದ್ದೆ ಎಂದು ಹೇಳಿಕೊಂಡು ಅತ್ತಿದ್ದಾರೆ.

    ರಾಕೇಶ್ ಸ್ಪರ್ಧಿಗಳಿಗಾಗಿ ಒಂದು ಆಟ ಆಡಿಸಲು ಎಲ್ಲರನ್ನು ಕರೆದಿದ್ದರು. ಆಗ ಅಕ್ಷತಾ ಸ್ನಾನಕ್ಕೆಂದು ಬಾತ್‍ರೂಮಿಗೆ ಹೋಗಿದ್ದರು. ರಾಕೇಶ್ ಕರೆಯಲು ಹೋಗಿದ್ದಾರೆ. ಆಗ ರಾಕೇಶ್ ಮೇಲೆ ಕೋಪಗೊಂಡು ಗುಡುಗಿದ್ದಾರೆ. ಕೆಲ ಸಮಯ ಬಾತ್‍ರೂಮಿನಲ್ಲಿಯೇ ಕುಳಿತ ಅಕ್ಷತಾ ಜೋರು ಜೋರಾಗಿ ಕೂಗಿ ಅತ್ತರು. ಕೊನೆಗೆ ಅಕ್ಷತಾ ಬಳಿ ಹೋದ ಆ್ಯಂಡಿ ಸಮಾಧಾನ ಮಾಡಿ ಹೊರ ತಂದರು. ನಾನು ಮನೆಯವರ ವಿರೋಧ ಕಟ್ಟಿಕೊಂಡಿದ್ದೇನೆ. ಒಮ್ಮೆ ಅಮ್ಮನನ್ನು ತಬ್ಬಿಕೊಂಡು ಕ್ಷಮೆ ಕೇಳಬೇಕು ಎಂದು ಬಿಗ್‍ಬಾಸ್ ಬಳಿ ಕೇಳಿಕೊಂಡರು.

    ದಿನಪೂರ್ತಿ ರಾಕೇಶ್ ಮೇಲೆ ಮುನಿಸಿಕೊಂಡಿದ್ದ ಅಕ್ಷತಾ, ಮನೆಯ ಲೈಟ್ ಆಫ್ ಆಗುತ್ತಿದ್ದಂತೆ ಮತ್ತೆ ಆತನೊಂದಿಗೆ ಗುಸು ಗುಸು ಚರ್ಚೆಯಲ್ಲಿ ಭಾಗಿಯಾದ್ರು. ನನ್ನನ್ನು ಯಾಕೆ ಸೇವ್ ಮಾಡಿಲ್ಲ ಅಂತ ಸೂಕ್ತವಾದ ಕಾರಣ ಕೊಡು ಎಂದು ಅಕ್ಷತಾ ಕೇಳಿದ್ರು. ತನ್ನ ನಿರ್ಣಯವನ್ನು ಸಮರ್ಥಿಸಿಕೊಳ್ಳುವ ಕೆಲಸವನ್ನು ಬೆಳಗ್ಗೆಯಿಂದ ರಾಕೇಶ್ ಮಾಡತೊಡಗಿದ್ದು ಸಂಚಿಕೆಯಲ್ಲಿ ನೋಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv