Tag: Rajesh Gowda

  • ರಾಜಕೀಯ ಅನುಭವ ಇಲ್ಲದೇ ಇದ್ರೂ ಶಿರಾದಲ್ಲಿ ತಾವರೆ ಅರಳಿಸಿದ ರಾಜೇಶ್‌ ಗೌಡ!

    ರಾಜಕೀಯ ಅನುಭವ ಇಲ್ಲದೇ ಇದ್ರೂ ಶಿರಾದಲ್ಲಿ ತಾವರೆ ಅರಳಿಸಿದ ರಾಜೇಶ್‌ ಗೌಡ!

    ತುಮಕೂರು: ಕರ್ನಾಟಕದ ಚುನಾವಣಾ ಇತಿಹಾಸದಲ್ಲಿಯೇ 2018ರವರೆಗೆ ಶಿರಾ (Sira) ಕ್ಷೇತ್ರದಲ್ಲಿ ಕಮಲ ಪಕ್ಷದ ಖಾತೆಯೇ ತೆರೆದಿರಲಿಲ್ಲ. ಆದರೆ 2020 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ (BJP) ಅಭ್ಯರ್ಥಿ ಸಿ.ಎಂ.ರಾಜೇಶ್ ಗೌಡ ಗೆದ್ದು ಶಿರಾ ಕೋಟೆಯ ಮೇಲೆ ಬಿಜೆಪಿ ಬಾವುಟ ಹಾರಿಸಿ ಇತಿಹಾಸ ಸೃಷ್ಟಿಸಿದ್ದರು.

    ಮಾಜಿ ಸಚಿವ ಟಿ.ಬಿ.ಜಯಚಂದ್ರರ (TB Jayachandra) ವಿರುದ್ದ ಬರೋಬ್ಬರಿ 13,800 ಮತಗಳ ಅಂತರದಿಂದ ಗೆದ್ದು ಬೀಗಿದ ಸಿ.ಎಂ.ರಾಜೇಶ್ ಗೌಡ (Dr. Rajesh Gowda) ವೃತ್ತಿಯಲ್ಲಿ ವೈದ್ಯರು. ಬೆಂಗಳೂರಿನಲ್ಲಿ ವೈದ್ಯ ವೃತ್ತಿ ಮಾಡಿಕೊಂಡಿದ್ದ ಇವರ ತಂದೆ ಮೂಡಲಗಿರಿಯಪ್ಪ ಮೂರುಬಾರಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. ಒಂದು ಬಾರಿ ಶಿರಾ ಕ್ಷೇತ್ರದಿಂದ ಶಾಸಕರಾಗಿದ್ದರು. ಆದರೂ ಪುತ್ರ ರಾಜೇಶ್ ಗೌಡ ಮಾತ್ರ ರಾಜಕೀಯದತ್ತ ಸುಳಿಯದೇ ವೈದ್ಯ ವೃತ್ತಿಯಲ್ಲಿ ತೊಡಗಿದ್ದರು. ತಂದೆಯ ಯಾವುದೇ ರಾಜಕೀಯ ಸಭೆ ಸಮಾರಂಭಗಳಲ್ಲಿ ಇವರು ಭಾಗಿಯಾಗುತ್ತಿರಲಿಲ್ಲ. ಇದನ್ನೂ ಓದಿ: ಚುನಾವಣೆ ಬಂದ್ರೆ ಕುರುಡುಮಲೆ ವಿನಾಯಕನಿಗೆ ಎಲ್ಲಿಲ್ಲದ ಬೇಡಿಕೆ 

    ತಂದೆ ಮೂಡಲ ಗಿರಿಯಪ್ಪ ರಾಜಕೀಯದಿಂದ ನೇಪಥ್ಯಕ್ಕೆ ಸರಿದು ದಶಕಗಳೇ ಕಳೆದಿತ್ತು. ಆದರೆ ಇದ್ದಕಿದ್ದ ಹಾಗೇ ರಾಜೇಶ್ ಗೌಡರಲ್ಲಿ ತಾನೂ ಜನಪ್ರತಿನಿಧಿ ಆಗಬೇಕು ಎಂಬ ಹಂಬಲ ಮೂಡಿತ್ತು. 2018 ರಲ್ಲಿ ಶಿರಾ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿದ್ದ ಜೆಡಿಎಸ್‌ನ ಸತ್ಯನಾರಾಯಣ ಅವರು 2020 ರಲ್ಲಿ ಅಕಾಲಿಕ ಮರಣ ಹೊಂದಿದ್ದರು. ಹಾಗಾಗಿ ಶಿರಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಿತು. ಈ ಸಂದರ್ಭದಲ್ಲಿ ಡಾ.ಸಿ.ಎಂ ರಾಜೇಶ್ ಗೌಡರು ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಕಾಂಗ್ರೆಸ್‌ನಿಂದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಎದುರಾಳಿಯಾಗಿದ್ದರು. ಆದರೂ ರಾಜೇಶ್ ಗೌಡರು ಜಯಚಂದ್ರರ ವಿರುದ್ದ ಗೆದ್ದು ಜಯಭೇರಿ ಬಾರಿಸಿ ಇತಿಹಾಸ ಸೃಷ್ಟಿಸಿದರು.

    ಶಾಸಕ ಡಾ.ಸಿ.ಎಂ. ರಾಜೇಶ್ ಗೌಡರದ್ದು ಸೌಮ್ಯ ಸ್ವಭಾವ. ಶಿರಾ ತಾಲೂಕಿನ ಚಿರತೆಹಳ್ಳಿಯವರು. ತಾವು ಬೆಂಗಳೂರಲ್ಲಿ ವೈದ್ಯ ವೃತ್ತಿಯಲ್ಲಿ ತೊಡಗಿದ್ದರೂ ತಮ್ಮ ತಾಲೂಕಿನ ಜನರನ್ನು ಮರೆತಿರಲಿಲ್ಲ. ಆಗಾಗ ಬಂದು ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ಊರ ಜನರ ವೈದ್ಯಕೀಯ ಸೇವೆ ಮಾಡುತಿದ್ದರು. ಜನರ ಕಷ್ಟಕ್ಕೆ ಸ್ಪಂದಿಸುತಿದ್ದರು. ಆ ಮೂಲಕ ಜನ ಮಾನಸದಲ್ಲಿ ಒಳ್ಳೆ ಡಾಕ್ಟ್ರು ಎಂದೇ ಜನಜನಿತರಾಗಿದ್ದರು. ಹಾಗಾಗಿ ಶಿರಾ ಕ್ಷೇತ್ರದ ಜನತೆ 2020 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ರಾಜೇಶ್ ಗೌಡರ ಕೈ ಹಿಡಿದರು. ಇದನ್ನೂ ಓದಿ: 2 ದಶಕಗಳಿಂದ ಹಾಲಿ ಶಾಸಕರಿಗೆ ಸೋಲು – ಇದು ಆಳಂದ ವಿಶೇಷತೆ 

    ಕೋವಿಡ್ ಕಾಲದಲ್ಲಿ ಕಣ್ಣೀರು ಒರೆಸಿದ ರಾಜೇಶ್ ಗೌಡರು- ಕೋವಿಡ್ ಎರಡನೇ ಅಲೆಯಲ್ಲಿ ಶಿರಾ ಕ್ಷೇತ್ರದ ಜನ ಅಕ್ಷರಶಃ ತತ್ತರಿಸಿದ್ದರು. ತುಮಕೂರು ಜಿಲ್ಲೆಯಲ್ಲಿ ಕೋವಿಡ್ ಮೊದಲ ಕೇಸ್ ಪತ್ತೆಯಾಗಿದ್ದೇ ಶಿರಾದಲ್ಲಿ. ಈ ವೇಳೆ ಕಾಲಿಗೆ ಚಕ್ರಕಟ್ಟಿಕೊಂಡು ಕೋವಿಡ್ ಪೀಡಿತರ ಸೇವೆ ಮಾಡಿದ ರಾಜೇಶ್ ಗೌಡರು ಜನ ಸಾಮಾನ್ಯರ ನೆರವಿಗೆ ಬಂದರು. ಫುಡ್ ಕಿಟ್, ವ್ಯಾಕ್ಸಿನೇಷನ್‌, ಮೆಡಿಷಿನ್ ಹೀಗೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡಿದ್ದರು.

    ಮದಲೂರು ಕೆರೆಗೆ ನೀರು ಹರಿಸಿದ್ದು, ಭದ್ರಾ ಮೇಲ್ದಂಡೆ ಕಾಮಗಾರಿ ಅನುಷ್ಠಾನ, ಶಿರಾ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಿದ್ದು, ಆಕ್ಸಿಜನ್ ತಯಾರಿಕಾ ಘಟಕ, ಆರ್‌ಟಿಪಿಸಿಆರ್‌ ಘಟಕ ‌ಶಿರಾಗೆ ತಂದಿದ್ದು, ಸ್ವಾತಂತ್ರ್ಯ ಬಂದು 75 ವರ್ಷ ಆದರೂ ರಸ್ತೆ ಕಾಣದ ಊರಿಗೆ ರಸ್ತೆ ಮಾಡಿಕೊಟ್ಟಿದ್ದಾರೆ. ಇದೇ ರೀತಿಯ ಹಲವು ಅಭಿವೃದ್ಧಿಯ ಕಾರ್ಡ್ ಇಟ್ಟುಕೊಂಡು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

  • ದೇವರನ್ನು ಹೊತ್ತು ಕುಣಿದು ವಿಶೇಷ ಸೇವೆ ಸಲ್ಲಿಸಿದ ಬಿಜೆಪಿ ಶಾಸಕ

    ದೇವರನ್ನು ಹೊತ್ತು ಕುಣಿದು ವಿಶೇಷ ಸೇವೆ ಸಲ್ಲಿಸಿದ ಬಿಜೆಪಿ ಶಾಸಕ

    ತುಮಕೂರು: ಶಿರಾ ಬಿಜೆಪಿ ಶಾಸಕ ಡಾ. ರಾಜೇಶ್ ಗೌಡ (Rajesh Gowda) ಅವರು ಜಾತ್ರಾ ಮಹೋತ್ಸವದಲ್ಲಿ (Fair) ದೇವರನ್ನು ಹೊತ್ತು ಕುಣಿಯುತ್ತಾ ಸೇವೆ ಸಲ್ಲಿಸಿದ್ದಾರೆ.

    ಶಿರಾ (Sira) ತಾಲೂಕಿನ ಗುಮ್ಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಬಿಜೆಪಿ (BJP) ಶಾಸಕ ಡಾ. ರಾಜೇಶ್ ಗೌಡ ಲಕ್ಷ್ಮಿನರಸಿಂಹ ಸ್ವಾಮಿ, ಶ್ರೀ ಕಂಡಗದ ಕರಿಯಮ್ಮ ದೇವಿ, ಶ್ರೀ ಈರಮರಿಯಣ್ಣ ಸ್ವಾಮಿ ದೇವರನ್ನು ಹೊತ್ತು ಕುಣಿದಿದ್ದಾರೆ. ಇದನ್ನೂ ಓದಿ: ದೇಗುಲದ ರಥಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು!

    ಶಾಸಕರು ಮೂರು ದೇವರ ಹಲಗು ಹಿಡಿದು ಗಂಟೆಗಟ್ಟಲೆ ಕುಣಿದಿದ್ದಾರೆ. ದೇವರನ್ನು ಹೊತ್ತು ಕುಣಿದು ವಿಶೇಷ ಸೇವೆ ಸಲ್ಲಿಸಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅವರು ಕುಣಿಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಪಕ್ಷ ಅಧಿಕಾರಕ್ಕೆ ಬಂದ್ರೆ ಹೆಣ್ಮಕ್ಕಳಿಗೆ ತೊಂದ್ರೆ ಕೊಟ್ಟವರ ಮನೆಗೆ ಬುಲ್ಡೋಜರ್ ನುಗ್ಗಿಸ್ತೇವೆ: ಬಂಡಿ ಸಂಜಯ್

  • ಆರಗ, VVIP ವ್ಯಕ್ತಿಗಳಿಗೆ ನಿವೇಶನ – ಬಿಡಿಎ ಆಯುಕ್ತರ ವರ್ಗಾವಣೆಗೆ ಸುಪ್ರೀಂ ಸೂಚನೆ

    ಆರಗ, VVIP ವ್ಯಕ್ತಿಗಳಿಗೆ ನಿವೇಶನ – ಬಿಡಿಎ ಆಯುಕ್ತರ ವರ್ಗಾವಣೆಗೆ ಸುಪ್ರೀಂ ಸೂಚನೆ

    ನವದೆಹಲಿ: ಆರಗ ಜ್ಞಾನೇಂದ್ರ ಸೇರಿ ಇತರೆ ವಿವಿಐಪಿಗಳಿಗೆ ನಿವೇಶನ ಹಂಚಿಕೆ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಆಯುಕ್ತ ಎಂ.ಬಿ ರಾಜೇಶ್ ಗೌಡ ಅವರನ್ನು ವರ್ಗಾವಣೆ ಮಾಡುವಂತೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ಬಹು ಜನರಿಗೆ ಪರ್ಯಾಯ ನಿವೇಶನಗಳನ್ನು ಹಂಚಿಕೆ ಮಾಡಿದಕ್ಕೆ ಕೋರ್ಟ್‌ ರಾಜೇಶ ಗೌಡ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

    ಡಾ.ಶಿವರಾಮ ಕಾರಂತ ಬಡಾವಣೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಎಸ್‌.ಅಬ್ದುಲ್‌ ನಜೀರ್ ಹಾಗೂ ಸಂಜೀವ್‌ ಖನ್ನಾ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ ಅಧಿಕಾರಿಗಳಿಗೆ ಚಾಟಿ ಬೀಸಿತು. 2021ರ ಅಕ್ಟೋಬರ್‌ 29ರಂದು ಸುಪ್ರೀಂ ಕೋರ್ಟ್‌ ಹೊರಡಿಸಿದ ಆದೇಶಕ್ಕೆ ವ್ಯತಿರಿಕ್ತವಾಗಿ ತೀರ್ಮಾನ ತೆಗೆದುಕೊಂಡಿದ್ದಕ್ಕೆ ಬಿಡಿಎ ವಿರುದ್ಧ ಕೆಂಡಾಮಂಡಲವಾಗಿದೆ.

    ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ಪರ್ಯಾಯ ನಿವೇಶನಗಳ ಹಂಚಿಕೆಯನ್ನು ಮಾಡುವಂತಿಲ್ಲ. ನಾವು ನಿರ್ಬಂಧಿಸಿದ್ದರೂ ಹಂಚಿಕೆ ಮಾಡಿ ಆದೇಶವನ್ನು ಉಲ್ಲಂಘಿಸಿ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದೆ ಎಂದು ಹೇಳಿ ಚಾಟಿ ಬೀಸಿದೆ.

    ಏನಿದು ಪ್ರಕರಣ?
    2021ರ ಅಕ್ಟೋಬರ್‌ 29ರಂದು ಮರು ಸ್ವಾಧೀನ ಪಡೆದಿರುವ ಅಥವಾ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ಬಡಾವಣೆಗಳ ನಿವೇಶನಗಳನ್ನು ಸಾರ್ವಜನಿಕ ಹರಾಜಿನ ಮೂಲಕ ಮಾತ್ರ ಹಂಚಿಕೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಆದರೆ ಬಿಡಿಎ ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲಂಘಿಸಿ ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ಆರಗ ಜ್ಞಾನೇಂದ್ರ ಸೇರಿದಂತೆ ನಾಲ್ವರಿಗೆ ಪರ್ಯಾಯ ನಿವೇಶನ ಹಂಚಿಕೆ ಮಾಡಿತ್ತು. ಬಳಿಕ ಮಧ್ಯಂತರ ಅರ್ಜಿ ಸಲ್ಲಿಸಿ ತನ್ನ ಆದೇಶವನ್ನು ಮಾರ್ಪಾಡು ಮಾಡುವಂತೆ ಮನವಿ ಮಾಡಿತ್ತು. ಇದನ್ನೂ ಓದಿ: ಕಾಂಗ್ರೆಸ್‌ಗೆ ಗುಲಾಂ ನಬಿ ಆಜಾದ್‌ ಗುಡ್‌ಬೈ

    ಬಿಡಿಎ ವಾದ ಏನು?
    ಆಯುಕ್ತರು ಕೋವಿಡ್‌ ಪೀಡಿತರಾಗಿದ್ದಾರೆ. ಹಾಗಾಗಿ ಅವರು ಇಂದಿನ ವಿಚಾರಣೆಗೆ ಹಾಜರಾಗಿಲ್ಲ. ನಿವೇಶನಗಳನ್ನು ಹಂಚಿಕೆ ಮಾಡುವ ಮೊದಲು ಆದೇಶ ಮಾರ್ಪಾಡು ಮಾಡುವಂತೆ ಅರ್ಜಿ ಸಲ್ಲಿಸಬೇಕಿತ್ತು. ಕೋರ್ಟ್‌ ಆದೇಶ ಉಲ್ಲಂಘನೆಯಾಗಿದ್ದಕ್ಕೆ ಕ್ಷಮೆ ಕೋರುತ್ತೇವೆ ಎಂದು ವಕೀಲರು ಹೇಳಿದರು.

    ಪೀಠ ಹೇಳಿದ್ದೇನು?
    ಕೋರ್ಟ್‌ ಆದೇಶ ಉಲ್ಲಂಘಿಸಿದ ಬಳಿಕ ಆಯುಕ್ತರು ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ ಎಂದರೆ ಅರ್ಥವೇನು? ಜಿ ಕೆಟಗರಿ ನಿವೇಶನವನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಆಯುಕ್ತರಿಗೆ ಕೋರ್ಟ್‌ ಆದೇಶಗಳ ಬಗ್ಗೆ ಗೌರವವೇ ಇಲ್ಲ. ಆದೇಶಕ್ಕೆ ಅವಿಧೇಯತೆ ತೋರಿದ ರಾಜೇಶ ಗೌಡ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಇಂದಿನಿಂದ ಅವರು ಯಾವುದೇ ಪ್ರಮುಖ ಆದೇಶಗಳಿಗೆ ಸಹಿ ಹಾಕುವಂತಿಲ್ಲ. ಇದು ಕೋರ್ಟ್‌ ಆದೇಶ. ಬಿಡಿಎ ಕಾರ್ಯದರ್ಶಿ ಹಾಗೂ ಉಪ ಕಾರ್ಯದರ್ಶಿಯವರು ಅಕ್ರಮ ಹಂಚಿಕೆಯಲ್ಲಿ ಭಾಗಿಯಾಗಿದ್ದು ಅವರನ್ನು ವರ್ಗಾವಣೆ ಮಾಡುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ.

    Live Tv
    [brid partner=56869869 player=32851 video=960834 autoplay=true]

  • ಮದಲೂರು ಕೆರೆಗೆ ಹೇಮಾವತಿ ನೀರು – 30 ದಿನದಲ್ಲೇ ಭರವಸೆ ಈಡೇರಿಸಿದ ಸಿಎಂ

    ಮದಲೂರು ಕೆರೆಗೆ ಹೇಮಾವತಿ ನೀರು – 30 ದಿನದಲ್ಲೇ ಭರವಸೆ ಈಡೇರಿಸಿದ ಸಿಎಂ

    – 4 ದಶಕದ ಕನಸು ನನಸು
    – ಹರ್ಷಗೊಂಡ ಶಿರಾ ಜನತೆ

    ತುಮಕೂರು: ಶಿರಾ ಉಪಚುನಾವಣೆ ವೇಳೆ ರಾಜ್ಯ ಬಿಜೆಪಿ ಸರ್ಕಾರ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಆರು ತಿಂಗಳಲ್ಲಿ ಹೇಮಾವತಿ ನೀರನ್ನು ಮದಲೂರು ಕೆರೆಗೆ ಬಿಡುತ್ತೇವೆ ಎಂದು ಶಿರಾ ಉಪಚುನಾವಣೆ ವೇಳೆ ಸಿಎಂ ವಾಗ್ದಾನ ಮಾಡಿದ್ದರು. ಆದರಂತೆ ಸೋಮವಾರದಿಂದ ಕಳ್ಳಂಬೆಳ್ಳ ಕೆರೆಯಿಂದ ಹೇಮಾವತಿ ನೀರನ್ನು ಮದಲೂರು ಕೆರೆಗೆ ಬಿಡಲಾಗಿದ್ದು 40 ವರ್ಷದ ಕನಸು ನನಸಾಗಿದೆ.

    ಉಪಚುನಾವಣೆ ವೇಳೆ ಮದಲೂರು ಕೆರೆಗೆ ನೀರು ಹರಿಸುವ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಒಂದು ಪಕ್ಷದವರು ಮದಲೂರು ಕೆರೆಗೆ ನಾಲೆ ಮಾಡಿದ್ದು ನಾವು ಎಂದರೆ ಇದನ್ನು ಯೋಜನೆ ಜಾರಿ ಮಾಡಿದ್ದು ನಾವು ಎಂದು ಇನ್ನೊಂದು ಪಕ್ಷದವರು ಪರಸ್ಪರ ವಾಗ್ದಾಳಿ ಮಾಡಿದ್ದರು. ಈ ನಡುವೆ ಸಿಎಂ ಯಡಿಯೂರಪ್ಪ ಅಕ್ಟೋಬರ್ 30 ರಂದು ಮದಲೂರು ನಲ್ಲಿ ಸಮಾವೇಶ ನಡೆಸಿ ಆರು ತಿಂಗಳ ಒಳಗಡೆ ಕೆರೆಗೆ ನೀರು ಬಿಡುತ್ತೇವೆ ಎಂದು ಘೋಷಣೆ ಮಾಡಿದ್ದರು.

    ಉಪ ಚುನಾವಣೆ ಮುಗಿದ ಬಳಿಕ ಶಾಸಕ ರಾಜೇಶ್ ಗೌಡ ಮದಲೂರಿಗೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಿದ್ದರು. 40ಕ್ಕೂ ಹೆಚ್ಚು ಜೆಸಿಬಿ ಮೂಲಕ ಕೆರೆಯಲ್ಲಿದ್ದ ಸೀಮೆಜಾಲಿಯನ್ನು ತೆರವು ಮಾಡಲಾಗಿತ್ತು. ಈಗ ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ಹೇಮಾವತಿ ನೀರನ್ನು ನಾಲೆ ಮೂಲಕ 200 ಕ್ಯೂಸೆಕ್ ನೀರು ಹರಿಸಲಾಗಿದೆ. ಮುಂದಿನ 24 ಗಂಟೆಯಲ್ಲಿ ಅಂದರೆ ಇಂದು ನೀರು ಮದಲೂರು ಕೆರೆಗೆ ತಲುಪಲಿದೆ. ಕೊಟ್ಟ ಮಾತನ್ನು 30 ದಿನದಲ್ಲೇ ಈಡೇರಿಸುವ ಮೂಲಕ ಸರ್ಕಾರ ವಿಪಕ್ಷಗಳಿಗೆ ತಿರುಗೇಟು ನೀಡಿದೆ.

    ಮದಲೂರು ಕೆರೆಗೆ ನೀರು ಬಿಡಬೇಕೆಂದು ಈ ಭಾಗದ ಜನರು ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಭಾರೀ ಹೋರಾಟಗಳು ನಡೆದಿತ್ತು. ಈ ಬಗ್ಗೆ ಶಿರಾ ಶಾಸಕ ಡಾ.ರಾಜೇಶ್ ಗೌಡ ಪ್ರತಿಕ್ರಿಯೆ ನೀಡಿದ್ದು, ಕಳ್ಳಂಬೆಳ್ಳ ಕೆರೆಯಲ್ಲಿ ಸಾಕಷ್ಟು ನೀರು ಸಂಗ್ರಹಣೆಯಾಗಿದೆ. ಹೀಗಾಗಿ ಉಪಚುನಾವಣೆ ವೇಳೆ ಮದಲೂರು ಕೆರೆಗೆ ಕೊಟ್ಟ ಮಾತಿನಂತೆ ನೀರು ಹರಿಸಿದ್ದು ಇನ್ನೂ ಒಂದೂವರೆ ತಿಂಗಳ ಕಾಲ ನೀರು ಹರಿಯಲಿದೆ. ಇದಕ್ಕೆ ಸಹಕರಿಸಿದ ಸಿಎಂ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸ್ಥಳೀಯ ನಾಯಕರಿಗೆ ಹಾಗೂ ಹೋರಾಟಗಾರಿಗೆ ಕೃತಜ್ಞತೆ ತಿಳಿಸಿದ್ದಾರೆ.

    ಬಿಜೆಪಿ ವಿರೋಧಿಸಿತ್ತು: ಈ ಪ್ರಯತ್ನ ಈ ಮೊದಲು ಮಾಜಿ ಸಚಿವ ಟಿ.ಬಿ.ಜಯಚಂದ್ರರೂ ಮಾಡಿದ್ದರು. ಆಗ ಇದೇ ಬಿಜೆಪಿ ಪಕ್ಷದವರು ಮದಲೂರು ಕೆರೆಗೆ ಹೇಮಾವತಿ ನೀರು ಬಿಡಲು ಸಾಧ್ಯವಿಲ್ಲ ಎಂದು ವಾದ ಮಾಡಿದ್ದರು. ಅಲ್ಲದೆ ಕಳ್ಳಂಬೆಳ್ಳದಿಂದ ಮದಲೂರು ಕೆರೆವರೆಗೂ ಸುಮಾರು 110 ಕಿ.ಮೀ ದೂರ ಜಯಚಂದ್ರ ನಾಲೆ ನಿರ್ಮಾಣ ಮಾಡಿದ್ದರು. ಅಲ್ಲಲ್ಲಿ ಬ್ಯಾರೇಜ್ ಗಳನ್ನು ನಿರ್ಮಾಣ ಮಾಡಿರುವ ಕಾರಣ ನೀರು ಪೋಲಾಗುತ್ತದೆ. ಹಾಗಾಗಿ ನಾಲೆ ಕಾಮಗಾರಿ ಅವೈಜ್ಞಾನಿಕವಾಗಿ ಎಂದು ಎಂದು ಬಿಜೆಪಿಯವರು ಆಪಾದನೆ ಮಾಡುತಿದ್ದರು. ಆದರೆ ಅದೇ ನಾಲೆ ಮೂಲಕ ಇಂದು ನೀರು ಹರಿಸಿ ಮಾತನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಮದಲೂರು ಕೆರೆಗೆ ನೀರಿನ ಹಂಚಿಕೆ ಇಲ್ಲದೇ ಇದ್ದರೂ ನೀರು ಹರಿಸಿದ್ದಾರೆ ಎಂದು ಕುಣಿಗಲ್ ಕಾಂಗ್ರೆಸ್ ಶಾಸಕ ರಂಗನಾಥ್ ಪ್ರತಿಕ್ರಿಯಿಸಿದ್ದಾರೆ.

  • ಶಿರಾ ಉಪಚುನಾವಣೆ – ಮೊದಲ ಸುತ್ತಿನಲ್ಲಿ ಬಿಜೆಪಿ ಮುನ್ನಡೆ

    ಶಿರಾ ಉಪಚುನಾವಣೆ – ಮೊದಲ ಸುತ್ತಿನಲ್ಲಿ ಬಿಜೆಪಿ ಮುನ್ನಡೆ

    ತುಮಕೂರು: ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಶಿರಾದಲ್ಲೂ ಬಿಜೆಪಿ ಮುನ್ನಡೆಯಲ್ಲಿದೆ.

    ಒಟ್ಟು  7,043 ಮತಗಳ ಪೈಕಿ ಬಿಜೆಪಿ ರಾಜೇಶ್ ಗೌಡ 3,224, ಕಾಂಗ್ರೆಸ್ಸಿನ ಟಿ.ಬಿ.ಜಯಚಂದ್ರ 2,429, ಜೆಡಿಎಸ್ ಅಮ್ಮಾಜಮ್ಮಾ1,135 , ಸಿಪಿಎಂ 69, ನೋಟಾಗೆ 37 ಮತಗಳು ಬಿದ್ದಿದೆ.

    ಶಿರಾದಲ್ಲಿ 2,15,694 ಮತದಾರರು ಇದ್ದು 1,77,645 ಮತಗಳು ಚಲಾವಣೆ ಆಗಿತ್ತು. ಈ ಪೈಕಿ 6,821 ಅಂಚೆ ಮತಗಳು ಚಲಾವಣೆ ಆಗಿತ್ತು.

  • ಶಿರಾ ‘ಕೈ’ ಅಭ್ಯರ್ಥಿ ಜಯಚಂದ್ರ ಮುದಿ ಎತ್ತು: ಬಿ.ಜೆ.ಪುಟ್ಟಸ್ವಾಮಿ

    ಶಿರಾ ‘ಕೈ’ ಅಭ್ಯರ್ಥಿ ಜಯಚಂದ್ರ ಮುದಿ ಎತ್ತು: ಬಿ.ಜೆ.ಪುಟ್ಟಸ್ವಾಮಿ

    – ಬಿಜೆಪಿಯ ರಾಜೇಶ್ ಗೌಡ ಯುವ ಎತ್ತು
    – ಶಿರಾದಲ್ಲಿ ಮರಿ ರಾಜಾಹುಲಿ ಪ್ರಚಾರ

    ತುಮಕೂರು: ಶಿರಾದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಟಿ.ಬಿ.ಜಯಚಂದ್ರ ಮುದಿ ಎತ್ತು. ನಮ್ಮ ಅಭ್ಯರ್ಥಿ ರಾಜೇಶ್ ಗೌಡ ಯುವ ಎತ್ತು ಎಂದು ರಾಜ್ಯ ಯೋಜನಾ ಪ್ರಾಧಿಕಾರದ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಹೇಳಿದ್ದಾರೆ.

    ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಜೆ.ಪುಟ್ಟಸ್ವಾಮಿ, ಯುವ ಎತ್ತಿಗೆ ಶಿರಾ ಜನತೆ ಮತ ನೀಡಿದ್ರೆ ಪ್ರಯೋಜನೆ. ಏಳು ಬಾರಿ ಗೆದ್ದಿರುವ ಟಿ.ಬಿ.ಜಯಚಂದ್ರ ಮುದಿ ಎತ್ತು. ನಮ್ಮ ಅಭ್ಯರ್ಥಿಯಾಗಿರುವ ರಾಜೇಶ್ ಗೌಡ ಯುವಕರು. ಹಾಗಾಗಿ ಯುವ ಎತ್ತಿಗೆ ಮತ ನೀಡಿದ್ರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರ ವೈಯಕ್ತಿಕ ದ್ವೇಷದಿಂದಾಗಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನವಾಯ್ತು. ಸರ್ಕಾರ ಬಿದ್ದು ಒಂದು ವರ್ಷ ಕಳೆದರೂ ಇಬ್ಬರ ಅಸಮಾಧಾನ ಇನ್ನೂ ಕಡಿಮೆಯಾಗಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಬಳಿ ಅಭಿವೃದ್ಧಿ ಮಂತ್ರ ಇಲ್ಲ. ಎರಡೂ ಪಕ್ಷಗಳು ಅಭ್ಯರ್ಥಿಗಳನ್ನು ನಿಲ್ಲಿಸಿದ್ಯಾಕೆ ಅಂತ ಗೊತ್ತಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

    ಸಿಎಂ ಯಡಿಯೂರಪ್ಪ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಕೊರೊನಾ ವೇಳೆ ದೇಶಕ್ಕೆ ಪ್ರಧಾನಿ ಮೋದಿ, ರಾಜ್ಯಕ್ಕೆ ಯಡಿಯೂರಪ್ಪ ಇರದಿದ್ರೆ ಅಲ್ಲೋಲ ಕಲ್ಲೋಲವಾಗುತ್ತಿತ್ತು. ಸಿಎಂ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯತೆ ಮತ್ತು ಆರ್ಥಿಕ ನೆರವು ನೀಡಿದ್ದಾರೆ. ರಾಜಾಹುಲಿ ಯಡಿಯೂರಪ್ಪನವರ ಪುತ್ರ ಮರಿ ರಾಜಾಹುಲಿ ವಿಜಯೇಂದ್ರ ಶಿರಾದಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ನಮ್ಮ ಅಭ್ಯರ್ಥಿಗೆ ಗೆದ್ದರೆ ಈ ಕ್ಷೇತ್ರ ಅಭಿವೃದ್ಧಿಯಾಗಲಿದ್ದು, ಬಿಜೆಪಿಗೆ ಮತ ನೀಡಿ ಎಂದು ಮತದಾರರ ಬಳಿ ಬಿ.ಜೆ.ಪುಟ್ಟಸ್ವಾಮಿ ಮನವಿ ಮಾಡಿಕೊಂಡರು.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕರೆಂಟ್ ಬಿಲ್‌ನಲ್ಲಿ ವ್ಯತ್ಯಾಸ ಇದ್ರೆ ಕಟ್ಟಬೇಡಿ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕರೆಂಟ್ ಬಿಲ್‌ನಲ್ಲಿ ವ್ಯತ್ಯಾಸ ಇದ್ರೆ ಕಟ್ಟಬೇಡಿ

    – ಪಬ್ಲಿಕ್ ಟಿವಿಯ ನಿರಂತರ ಅಭಿಯಾನದಿಂದ ಎಚ್ಚೆತ್ತ ಬೆಸ್ಕಾಂ
    – ಸರಾಸರಿ ಬಿಲ್ ನೀಡಿದ್ದರಿಂದ ದುಬಾರಿ ಬಂದಿದೆ
    – ಜೂನ್‍ವರೆಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸಲ್ಲ
    – ದುಬಾರಿ ಬಿಲ್ ಪಾವತಿಸಿದ್ರೆ ಮೇ ತಿಂಗಳಲ್ಲಿ ಕಡಿತ
    – ಸಮಸ್ಯೆ ಇದ್ರೆ ಮತ್ತೆ ರೀಡಿಂಗ್

    ಬೆಂಗಳೂರು: ದುಬಾರಿ ವಿದ್ಯುತ್ ಬಿಲ್ ಪಡೆದು ಸಂಕಷ್ಟಕ್ಕೆ ಸಿಲುಕಿದ ಜನತೆಗೆ ಗುಡ್‍ನ್ಯೂಸ್. ದುಬಾರಿ ಬಿಲ್ ಪಡೆದ ಗ್ರಾಹಕರು ತಮ್ಮ ಗೊಂದಲಗಳನ್ನು ಬಗೆಹರಿಸಿ ಬಿಲ್ ಕಟ್ಟುವಂತೆ ಬೆಸ್ಕಾಂ ಹೇಳಿದ್ದು ಈ ಮೂಲಕ ಪಬ್ಲಿಕ್ ಟಿವಿ ನಿರಂತರ ಅಭಿಯಾನಕ್ಕೆ ದೊಡ್ಡ ಗೆಲುವು ಸಿಕ್ಕಿದೆ.

    ಪಬ್ಲಿಕ್ ಟಿವಿ ಕಳೆದ ವಾರದಿಂದಲೇ ದುಬಾರಿ ಬಿಲ್ ವಿಚಾರವನ್ನು ಪ್ರಸ್ತಾಪ ಮಾಡಿ ವರದಿ ಮಾಡಿತ್ತು. ಇಂದು ಬೆಳಗ್ಗೆಯಿಂದಲೇ ಗ್ರಾಹಕರಿಗೆ ಹಳೆ ಬಿಲ್ ಎಷ್ಟು ಇತ್ತು ಈಗ ಲಾಕ್‍ಡೌನ್ ಅವಧಿಯಲ್ಲಿ ಎಷ್ಟು ಬಿಲ್ ಬಂದಿದೆ ಎಂಬ ವಿಚಾರವನ್ನು ಸಾಕ್ಷ್ಯ ಸಮೇತ ಮುಂದಿಟ್ಟು ನಿರಂತರವಾಗಿ ಪ್ರಸಾರ ಮಾಡಿತ್ತು. ಅಷ್ಟೇ ಅಲ್ಲದೇ ಎಲ್ಲ ಎಸ್ಕಾಂಗಳ ಎಂಡಿಗಳ ಹೆಸರು, ಫೋನ್ ನಂಬರ್, ಇಮೇಲ್, ಟ್ವಿಟ್ಟರ್ ಹ್ಯಾಂಡಲ್ ಹಾಕಿ ಅಭಿಯಾನ ಮಾಡಿತ್ತು.

    ಈ ಅಭಿಯಾನದ ಬೆನ್ನಲ್ಲೇ ಎಚ್ಚೆತ್ತ ಬೆಸ್ಕಾಂ ಎಂಡಿ ರಾಜೇಶ್ ಗೌಡ ಮಧ್ಯಾಹ್ನ 3 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಬಿಲ್ ವಿಚಾರದಲ್ಲಿ ಎದ್ದಿದ್ದ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ನಡೆಸಿದರು.

    ಬೇಸಿಗೆ ಹಾಗೂ ಲಾಕ್ ಡೌನ್ ಇರುವುದರಿಂದ ವಿದ್ಯುತ್ ಬಳಕೆ ಹೆಚ್ಚಾಗಿದೆ. ಐಟಿ ಬಿಟಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಿದ್ದರಿಂದ ಬಿಲ್ ಹೆಚ್ಚಾಗಿರಬಹುದು. ಅಲ್ಲದೆ 2 ತಿಂಗಳ ಬಿಲ್ ಆದ್ದರಿಂದ ಇದು ಹೆಚ್ಚಾಗಿದೆ ಎಂದು ಭಾವಿಸಿದ್ದೇನೆ. ಕೋವಿಡ್ 19 ಸುರಕ್ಷತೆ ದೃಷ್ಟಿಯಿಂದ ಹಲವು ಕಡೆಗಳಲ್ಲಿ ಮೀಟರ್ ರೀಡರ್ಸ್ ಮನೆಗಳಿಗೆ ಹೋಗಿಲ್ಲ. ಇದಕ್ಕಾಗಿ 3 ತಿಂಗಳ ಸರಾಸರಿ ಬಿಲ್ ಮಾಡಲು ಸೂಚಿಸಿದ್ದೆವು ಎಂಬ ವಿಚಾರವನ್ನು ಹೇಳಿದರು.

    ಮಾರ್ಚ್ ಹಾಗೂ ಏಪ್ರಿಲ್ 2 ರೀಡಿಂಗ್ ಇದ್ದು ಅದನ್ನು ನೋಡಿ ಲೆಕ್ಕ ಹಾಕಲಾಗಿದೆ. ಬಳಕೆ ಜಾಸ್ತಿ ಆದಂತೆ ಸ್ಲಾಬ್ ಲಿಮಿಟ್ ಸಹ ಜಾಸ್ತಿ ಆಗುತ್ತದೆ. ಬಿಲ್‍ನಲ್ಲಿ ವ್ಯತ್ಯಾಸ ಇದ್ರೆ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ. ಪರಿಶೀಲನೆ ಮಾಡಿ ಸರಿಯಾದ ಮೇಲೆ ಕಟ್ಟಬಹುದು. ಸಮಸ್ಯೆ ಇರುವವರು ಮೀಟರ್ ರೀಡಿಂಗ್ ಗೆ ಅವಕಾಶ ಮಾಡಿಕೊಡಿ. ನಾವು ಮೀಟರ್ ರೀಡಿಂಗ್ ಮಾಡಿದ ನಂತರ ನೀಡುವ ಬಿಲ್ ಪಾವತಿಸಬಹುದು ಎಂದು ರಾಜೇಶ್ ಗೌಡ ತಿಳಿಸಿದರು.

    ಲಾಕ್‍ಡೌನ್ ಆಗಿದ್ದರಿಂದ ಕೆಲವರು ಮನೆಯನ್ನು ತೊರೆದು ಬೇರೆ ಕಡೆಯಲ್ಲಿದ್ದರು. ಅವರು ಮನೆಯಲ್ಲಿ ಇಲ್ಲದೇ ಇದ್ದರೂ ದುಬಾರಿ ಬಿಲ್ ಬಂದಿದೆ ಹೇಗೆ ಎಂಬ ಪಬ್ಲಿಕ್ ಟಿವಿಯ ವರದಿಗಾರರ ಪ್ರಶ್ನೆಗೆ ಈ ರೀತಿ ಸಮಸ್ಯೆ ಆಗಿದ್ದಲ್ಲಿ ಗ್ರಾಹಕರು ವಾಟ್ಸಪ್, ಇಮೇಲ್ ಮೂಲಕ ನಮಗೆ ಬಿಲ್ ಕಳುಹಿಸಿ. ಇದನ್ನು ಪರಿಶೀಲಿಸಿ ನಾವು ಬಿಲ್ ನೀಡುತ್ತೇವೆ. ಬೇಸಿಗೆ ಕಾರಣದಿಂದ ಕೊಂಚ ಬಿಲ್ ಹೆಚ್ಚಾಗಿದೆ. ಬಿಲ್ ವಿಚಾರದಲ್ಲಿ ಸ್ಪಷ್ಟತೆ ಬರುವವರೆಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಿಲ್ಲ ಎಂದರು.

    ಭಾರತದ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿ ನಮ್ಮ ಬಿಲ್ಲಿಂಗ್ ವ್ಯವಸ್ಥೆಯನ್ನು ನಿರ್ವಹಣೆ ಮಾಡುತ್ತದೆ. ವಿದ್ಯುತ್ ಬಳಕೆ ಜಾಸ್ತಿಯಾದಂತೆ ವಿದ್ಯುತ್ ಬಿಲ್ ಸ್ಲಾಬ್ ಏರಿಕೆಯಾಗುತ್ತದೆ. ರೀಡಿಂಗ್ ಸಮಯದಲ್ಲಿ ಹಲವು ಮಂದಿ ಡೋರ್ ಲಾಕ್ ಮಾಡಿದ್ದರು. ಡೋರ್ ಲಾಕ್ ಅಂತ ಮೀಟರ್ ರೀಡಿಂಗ್ ಯಂತ್ರದಲ್ಲಿ ಪ್ರೆಸ್ ಮಾಡಿದ್ರೆ ಸರಾಸರಿ ಬಿಲ್ ಬರುತ್ತದೆ. ಈ ಕಾರಣದಿಂದ ಬಿಲ್ ಏರಿಕೆಯಾಗಿರಬಹುದು. ಯಾವುದೇ ಕಾರಣಕ್ಕೂ ನಮ್ಮಿಂದ ಒಂದು ರೂ. ವ್ಯತ್ಯಾಸವಾಗದಂತೆ ನೋಡಿಕೊಳ್ಳಲಾಗುವುದು ಎಂದು ಬೆಸ್ಕಾಂ ಎಂಡಿ ರಾಜೇಶ್ ಗೌಡ ಹೇಳಿದರು.

    ಬಿಲ್ ಬಗ್ಗೆ ಗೊಂದಲವಿದ್ರೆ 1912 ಸಹಾಯವಾಣಿಗೆ ಕರೆಮಾಡಿ ಪರಿಹರಿಸಿಕೊಳ್ಳಬಹುದು. ವಿದ್ಯುತ್ ಬಿಲ್ ನಲ್ಲಿ ನಿಗದಿತ ಶುಲ್ಕ, ವಿದ್ಯುತ್ ಶುಲ್ಕ ಮತ್ತು ತೆರಿಗೆ ಎಂಬ ಮೂರು ಅಂಶಗಳಿವೆ. ಕೆಲವು ಗ್ರಾಹಕರಿಗೆ ಸೀಲ್ಡೌನ್, ಡೋರ್ ಲಾಕ್, ಕ್ವಾರಂಟೈನ್ ಕಾರಣದಿಂದ ಸರಾಸರಿ ಬಿಲ್ ನೀಡಲಾಗಿದೆ. ಒಂದು ವೇಳೆ ಸರಾಸರಿ ಬಿಲ್ ತಾಳೆಯಾಗದಿದ್ದಲ್ಲಿ ಸಹಾಯವಾಣಿಗೆ ಕರೆಮಾಡಿದ್ರೆ ಪರಿಷ್ಕೃತ ಬಿಲ್ ನೀಡಲಾಗುವುದು ಎಂದು ತಿಳಿಸಿದರು.

    ಈಗಾಗಲೇ ಬಿಲ್ ಪಾವತಿಸಿದವರಿಗೆ ಅವರ ಬಿಲ್ ಬಗ್ಗೆ ಅನುಮಾನವಿದ್ದಲ್ಲಿ ನಮ್ಮನ್ನು ಸಂಪರ್ಕಿಸಬಹುದು. ಒಂದು ಕಡಿಮೆ ವಿದ್ಯುತ್ ಬಳಸಿಯೂ ದುಬಾರಿ ಬಿಲ್ ಬಂದಿದ್ದರೆ ಮೇ ತಿಂಗಳ ವಿದ್ಯುತ್ ಬಿಲ್ ನಲ್ಲಿ ಕಡಿತ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

    ಬಿಲ್ ಕಟ್ಟಲು ತಡಮಾಡಿದವರ ಮನೆಗೆ ವಿದ್ಯುತ್ ಸಂಪರ್ಕ ತೆಗೆಯುವುದು ಬೇಡ ಎಂದು ಸೂಚನೆ ನೀಡಲಾಗಿದೆ. ಜೂನ್ ವರೆಗೂ ಯಾವುದೇ ಕಾರಣಕ್ಕೂ ವಿದ್ಯುತ್ ಸಂಪರ್ಕ ಮಾಡುವುದಿಲ್ಲ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಸ್ಪಷ್ಟನೆ ನೀಡಿದರು.

     

  • ಗ್ರಾಹಕರಿಂದ ಒಂದೇ ಒಂದು ರೂ. ಹೆಚ್ಚಾಗಿ ಬೆಸ್ಕಾಂ ಪಡೆದಿಲ್ಲ: ಎಂಡಿ ರಾಜೇಶ್‍ಗೌಡ

    ಗ್ರಾಹಕರಿಂದ ಒಂದೇ ಒಂದು ರೂ. ಹೆಚ್ಚಾಗಿ ಬೆಸ್ಕಾಂ ಪಡೆದಿಲ್ಲ: ಎಂಡಿ ರಾಜೇಶ್‍ಗೌಡ

    – ಬೆಸ್ಕಾಂ ಕರೆಂಟ್ ಬಿಲ್‍ನಲ್ಲಿ ಯಾವುದೇ ಲೋಪವಾಗಿಲ್ಲ

    ಬೆಂಗಳೂರು: ಬೆಸ್ಕಾಂ ಕರೆಂಟ್ ಬಿಲ್‍ನಲ್ಲಿ ಯಾವುದೇ ಲೋಪವಾಗಿಲ್ಲ. ಎರಡು ತಿಂಗಳ ಬಿಲ್ ಒಟ್ಟಿಗೆ ಬಂದಿರುವುದರಿಂದ ಗ್ರಾಹಕರಿಗೆ ಹೆಚ್ಚು ಅಂತ ಅನ್ನಿಸುತ್ತಿದೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‍ಗೌಡ ಹೇಳಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ ಅವರು, ಬೆಸ್ಕಾಂ ಕರೆಂಟ್ ಬಿಲ್‍ನಲ್ಲಿ ಯಾವುದೇ ಅಕ್ರಮ ಆಗಿಲ್ಲ. ಗ್ರಾಹಕರಿಂದ ಒಂದೇ ಒಂದು ರೂಪಾಯಿ ಹೆಚ್ಚಾಗಿ ಬೆಸ್ಕಾಂ ತೆಗೆದುಕೊಂಡಿಲ್ಲ. ಕರೆಂಟ್ ಉಪಯೋಗಿಸದಿದ್ದರೂ ಫಿಕ್ಸೆಡ್ ಚಾರ್ಜ್ (ಮಿನಿಮಮ್) ಬಿಲ್ ಬಂದೇ ಬರುತ್ತದೆ. ಅದು ಕೂಡ ನಿಯಮದ ಅನ್ವಯ ಇರುತ್ತದೆ. ಕಂಪನಿಗಳ ವಿಚಾರದಲ್ಲೂ ಫಿಕ್ಸೆಡ್ ಚಾರ್ಜ್ ಬಂದೇ ಬರುತ್ತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಜೊತೆಗೆ ಹೊಡೀತು ಕರೆಂಟ್ ಶಾಕ್- ಸರಾಸರಿ ಬದಲಿಗೆ ಒನ್ ಟು ಡಬಲ್ ಬಿಲ್

    ಮೀಟರ್ ರೀಡಿಂಗ್ ಅನ್ವಯ ಬಿಲ್ ಬಂದಿದೆ. ಗ್ರಾಹಕರು ಬಳಕೆ ಮಾಡಿದ ಯೂನಿಟ್‍ಗೆ ಬಿಲ್ ಬಂದಿದೆ. ಯೂನಿಟ್ ಬಳಕೆಯಲ್ಲಿ ಮೋಸ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಕರೆಂಟ್ ಬಿಲ್ ಬಗ್ಗೆ ಯಾರಿಗಾದರು ಗೊಂದಲವಿದ್ದರೆ ಅವರು 1912 ನಂಬರಿಗೆ ಕರೆ ಮಾಡಿ ಪರಿಹಾರ ಮಾಡಿಕೊಳ್ಳಬಹುದು. ಯಾರಿಗೇ ಸಮಸ್ಯೆ ಇದ್ದರೂ ಅದನ್ನ ಪರಿಹಾರ ಮಾಡುತ್ತೇವೆ ಎಂದರು.

    ಬಿಲ್ ಕಟ್ಟಿಲ್ಲ ಅಂದ್ರೆ ಜೂನ್‍ವರೆಗೂ ಯಾರಿಗೂ ಕರೆಂಟ್ ಕಟ್ ಮಾಡಲ್ಲ, ಈವರೆಗೂ ಮಾಡಿಲ್ಲ. ಕರೆಂಟ್ ಬಿಲ್ ಕಟ್ಟುವುಕ್ಕೆ ಬೇಕಾದ್ರೆ 3 ತಿಂಗಳ ಅವಕಾಶ ಕೊಡುತ್ತೇವೆ ಎಂದು ಹೇಳಿದರು.

    ಉದ್ಯೋಗಿಗಳು, ಕಟ್ಟಡ, ವಾಹನ ಸಂಚಾರ, ದುರಸ್ತಿ ಸೇರಿದಂತೆ ಅನೇಕ ವಿಚಾರದಲ್ಲಿ ಬೆಸ್ಕಾಂ ಹಣ ವೆಚ್ಚ ಮಾಡುತ್ತದೆ. ಹೀಗಾಗಿ ಗ್ರಾಹಕರಿಂದ ಫಿಕ್ಸೆಡ್ ಚಾರ್ಜ್ ಪಡೆಯಲಾಗುತ್ತದೆ. ಉಳಿದ ರಾಜ್ಯಕ್ಕೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಫಿಕ್ಸೆಡ್ ಚಾರ್ಜ್ ಪ್ರಮಾಣ ಅತಿ ಕಡಿಮೆ ಇದೆ ಎಂದು ತಿಳಿಸಿದರು.

    ಲಾಕ್‍ಡೌನ್‍ನಿಂದಾಗಿ ಕಳೆದ ತಿಂಗಳು ಮನೆ ಮನೆಗೆ ಹೋಗಿ ಬಿಲ್ ಕೊಡಲು ಸಾಧ್ಯವಾಗಲಿಲ್ಲ. ನಮ್ಮ ಸಿಬ್ಬಂದಿಯ ಆರೋಗ್ಯ ದೃಷ್ಟಿಯಿಂದ ಮೇ ನಲ್ಲಿ ಕರೆಂಟ್ ಬಿಲ್ ನೀಡಿದ್ದರಿಂದ ಗ್ರಾಹಕರಿಗೆ ಅದು ದೊಡ್ಡ ಮೊತ್ತವಾಗಿ ಕಾಣಿಸಿದೆ. ಹೀಗಾಗಿ ಇನ್ನುಮುಂದೆ ಗ್ರಾಹಕರ ಮೊಬೈಲ್ ನಂಬರ್ ಇಲ್ಲವೇ ಇಮೇಲ್ ಅಡ್ರೆಸ್ ಪಡೆದು ಆನ್‍ಲೈನ್ ಮೂಲಕ ಬಿಲ್ ನೀಡುವ ಹಾಗೂ ಹಣ ಪಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದರು.