Tag: rajashekhar

  • ಹೋಳಿ ಹಬ್ಬಕ್ಕೆ ‘ಬ್ಯಾಕ್ ಬೆಂಚರ್ಸ್’ ಚಿತ್ರದ ಹಾಡು

    ಹೋಳಿ ಹಬ್ಬಕ್ಕೆ ‘ಬ್ಯಾಕ್ ಬೆಂಚರ್ಸ್’ ಚಿತ್ರದ ಹಾಡು

    ಪಿ.ಪಿ.ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮ್ಯ ಅವರು ನಿರ್ಮಿಸಿರುವ, ಬಿ.ಆರ್ ರಾಜಶೇಖರ್ (Rajashekhar) ನಿರ್ದೇಶನದಲ್ಲಿ ನೂತನ ಪ್ರತಿಭೆಗಳ ನಟಿಸಿರುವ ‘ಬ್ಯಾಕ್ ಬೆಂಚರ್ಸ್’ (Back Benchers) ಚಿತ್ರದಿಂದ ಹೋಳಿ ಹಬ್ಬಕ್ಕಾಗಿ ಸುಮಧುರ ಹಾಡೊಂದು (Song) ಬಿಡುಗಡೆಯಾಗಿದೆ. ಹೃದಯಶಿವ ಅವರು ಬರೆದಿರುವ ಈ ಹಾಡನ್ನು ಭಾರತದ ಹೆಸರಾಂತ ಗಾಯಕ ಶಂಕರ್ ಮಹದೇವನ್ ಹಾಡಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ. ಹೋಳಿಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

    ಬ್ಯಾಕ್ ಬೆಂಚರ್ಸ್ ಚಿತ್ರ ನಮ್ಮ ಕಾಲೇಜು ದಿನಗಳನ್ನು ನೆನಪಿಸುತ್ತದೆ. ಈ ಚಿತ್ರದಲ್ಲಿ ಬಹುತೇಕ ಹೊಸಪ್ರತಿಭೆಗಳು ಅಭಿನಯಿಸಿದ್ದಾರೆ.‌ ಆಡಿಷನ್ ಮೂಲಕ ಆಯ್ಕೆಯಾದ ಈ ಕಲಾವಿದರಿಗೆ ಸುಮಾರು ಒಂದು ವರ್ಷಗಳ ಕಾಲ ವರ್ಕ್ ಶಾಪ್ ನಡೆಸಿ ಆನಂತರ ಚಿತ್ರೀಕರಣ ಮಾಡಲಾಗಿದೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಬಿ.ಆರ್ ರಾಜಶೇಖರ್ ತಿಳಿಸಿದ್ದಾರೆ.

    ಮನೊಹರ್ ಜೋಶಿ ಅವರ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ರಂಜನ್ ನರಸಿಂಹಮೂರ್ತಿ, ಜಿತಿನ್ ಆರ್ಯನ್, ಆಕಾಶ್, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳಿಕರ್, ಮಾನ್ಯ ಗೌಡ, ಕುಂಕುಮ್, ಅನುಷ ಸುರೇಶ್ ಮುಂತಾದವರಿದ್ದಾರೆ.

  • ಸ್ಟಾರ್ ಹೀರೋಗಳ ನಡುವೆ ಬಹಿರಂಗ ವಾರ್- ಚಿರಂಜೀವಿಗೆ ಗರುಡವೇಗದಲ್ಲಿ ರಾಜಶೇಖರ್ ಸವಾಲ್

    ಸ್ಟಾರ್ ಹೀರೋಗಳ ನಡುವೆ ಬಹಿರಂಗ ವಾರ್- ಚಿರಂಜೀವಿಗೆ ಗರುಡವೇಗದಲ್ಲಿ ರಾಜಶೇಖರ್ ಸವಾಲ್

    ಹೈದರಾಬಾದ್: ಇಷ್ಟು ದಿನ ತೆಲುಗು ನಟರ ನಡುವೆ ಸಾಮರಸ್ಯವಿದೆ. ಆಂತರಿಕವಾಗಿ ಯಾವುದೇ ಭಿನ್ನಾಭಿಪ್ರಾಯಗಳು ಇದ್ದರೂ, ಅದನ್ನು ತೋರ್ಪಡಿಸಿಕೊಳ್ಳದೇ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಕ್ಕು ನಲಿಯುತ್ತಾರೆ ಎಂಬ ಮಾತಿತ್ತು. ಆದರೆ ಅದು ಈಗ ಸುಳ್ಳಾಗಿದೆ. ಮೂವಿ ಆರ್ಟಿಸ್ಟ್ ಅಸೋಸಿಯೇಷನ್(ಮಾ)ನ ಡೈರಿ ರಿಲೀಸ್ ಕಾರ್ಯಕ್ರಮದಲ್ಲಿ ಸ್ಟಾರ್ ನಟರ ನಡುವಿನ ಅಂತರ್ಯುದ್ಧ ಬೀದಿಗೆ ಬಂದಿದೆ.

    ಟಾಲಿವುಡ್‍ನ ಮೆಗಾ ಸ್ಟಾರ್ ಚಿರಂಜೀವಿ ಮತ್ತು ನಾಯಕ ನಟ ರಾಜಶೇಖರ್ ನಡುವೆ ನೇರಾನೇರ ಕಿತ್ತಾಟ ನಡೆದಿದೆ. ನಾನಾ ನೀನಾ ಎನ್ನುವಷ್ಟರ ಮಟ್ಟಿಗೆ ಜೋರಾಗಿ ಗಲಾಟೆ ಆಗಿದೆ. ‘ಮಾ’ ಸಂಸ್ಥೆಯ ಡೈರಿ ರಿಲೀಸ್ ಕಾರ್ಯಕ್ರಮದಲ್ಲಿ ಹಿರಿಯ ನಟ ಮತ್ತು ಸ್ಕ್ರಿಪ್ಟ್ ರೈಟರ್ ಪರಚೂರಿ ಗೋಪಾಲಕೃಷ್ಣ ಮಾತನಾಡುವ ವೇಳೆ ವೇದಿಕೆ ಹತ್ತಿದ ‘ಮಾ’ ಉಪಾಧ್ಯಕ್ಷ ರಾಜಶೇಖರ್ ಬಲವಂತವಾಗಿ ಮೈಕ್ ಕಿತ್ತುಕೊಂಡರು. ಫಿಲಂ ಸ್ಟೈಲಲ್ಲಿ ವೇದಿಕೆ ಮೇಲೆ ಕುಳಿತಿದ್ದ ಮೆಗಾ ಸ್ಟಾರ್ ಚಿರಂಜೀವಿ, ಡೈಲಾಗ್ ಕಿಂಗ್ ಮೋಹನ್ ಬಾಬು, ರೆಬೆಲ್ ಸ್ಟಾರ್ ಕೃಷ್ಣಂರಾಜು ಕಾಲಿಗೆ ನಮಸ್ಕರಿಸಿದರು.

    ‘ಮಾ’ನಲ್ಲಿ ಎಲ್ಲವೂ ಸರಿ ಇಲ್ಲ. ಗಲಾಟೆಗಳು ನಡೆಯುತ್ತಿವೆ. ಓಪನ್ ಆಗಿ ಮಾತನಾಡಲು ಯಾರಿಗೂ ಅವಕಾಶವೇ ಕೊಡುತ್ತಿಲ್ಲ. ಎಲ್ಲರೂ ಜೊತೆ ಜೊತೆಯಲ್ಲೇ ನಡೆಯಬೇಕೆಂದು ಮೆಗಾ ಸ್ಟಾರ್ ಚಿರಂಜೀವಿ ಅವರು ಹೇಳುತ್ತಾರೆ. ಆದರೆ, ಕೆಂಡವನ್ನು ಮುಚ್ಚಿಟ್ಟರೆ ಏನಾಗುತ್ತೆ? ಹೊಗೆ ಬಾರದೇ ಇರುತ್ತಾ ಎಂದು ರಾಜಶೇಖರ್ ಪ್ರಶ್ನೆ ಮಾಡಿ, ತಮ್ಮ ಅಸಮಾಧಾನ ಹೊರ ಹಾಕಿದರು.

    ಈ ವೇಳೆ ಮಧ್ಯೆ ಮಾತನಾಡಲು ಚಿರಂಜೀವಿ ಪ್ರಯತ್ನ ಮಾಡಿದರೂ, ನಟ ರಾಜಶೇಖರ್ ಅವಕಾಶ ಕೊಡಲಿಲ್ಲ. ಮತ್ತೋರ್ವ ಹಿರಿಯ ನಟ ಮೋಹನ್ ಬಾಬು, ಮಾತು ನಿಲ್ಲಿಸಿ ಎಂದರೂ ನಟ ರಾಜಶೇಖರ್ ಸುಮ್ಮನಾಗಲಿಲ್ಲ. ಕಳೆದ ಮಾರ್ಚ್ ನಲ್ಲಿ ‘ಮಾ’ ಸಂಸ್ಥೆಗೆ ಹೊಸ ಆಡಳಿತ ಮಂಡಳಿ ರಚನೆ ಆದ ಕ್ಷಣದಿಂದ ನನಗೆ ಒಂದೇ ಒಂದು ಸಿನಿಮಾ ಮಾಡಲು ಆಗಿಲ್ಲ. ಇತ್ತೀಚೆಗೆ ನನ್ನ ಆಡಿ ಕಾರು ಅಪಘಾತಕ್ಕೂ ಇದೇ ಕಾರಣ. ನಿತ್ಯ ನನ್ನ ಮನೆಯಲ್ಲಿ ಗಲಾಟೆಗಳು ನಡೆಯುತ್ತಿವೆ. `ಮಾ’ಗಾಗಿ ಯಾಕೆ ಅಷ್ಟೊಂದು ದುಡಿಯುತ್ತಿದ್ದೀಯಾ..? ಅಂತ ಬೈಯ್ತಿದ್ದಾರೆ. ರಿಯಲ್ ಲೈಫ್‍ನಲ್ಲಿಯೂ ಹೀರೋ ಆಗಿ ಕೆಲಸ ಮಾಡುತ್ತಿರುವ ತಮ್ಮನ್ನು ತುಳಿಯಲಾಗುತ್ತಿದೆ ಎಂದು ಎಲ್ಲರ ಮುಂದೆಯೇ ನೇರವಾಗಿ ವಾಗ್ದಾಳಿ ನಡೆಸಿದರು. ಈ ಮೂಲಕ ಚಿರಂಜೀವಿಗೆ ನೇರವಾಗಿ ಡಿಚ್ಚಿಕೊಟ್ಟರು.

    ಇದರಿಂದ ಚಿರಂಜೀವಿ ತೀವ್ರ ಮುಜುಗರಕ್ಕೆ ಒಳಗಾದರು. ಆದರೂ ಸಾವರಿಸಿಕೊಂಡು ಮಾತನಾಡಿದ ಮೆಗಾಸ್ಟಾರ್ ಚಿರಂಜೀವಿ, ನನ್ನ ಮಾತಿಗೆ ಯಾರು ಬೆಲೆ ಕೊಡುತ್ತಿಲ್ಲ. ನಮ್ಮ ಮಾತಿಗೆ, ತಮ್ಮ ಹಿರಿತನಕ್ಕೆ ಬೆಲೆ ಇಲ್ಲ ಎಂದರೇ ನಾವೇಕೆ ಇಲ್ಲಿ ಇರಬೇಕು. ಸಭೆಗೆ ಗೌರವ ಕೊಡದೇ ರಾಜಶೇಖರ್ ಮೈಕ್ ಎಳೆದುಕೊಂಡು ಮಾತನಾಡಿದ್ದು ಸರಿಯಲ್ಲ. ಈಗಲೂ ನಾವು ಸ್ಪಂದಿಸದಿದ್ದರೆ ನಮ್ಮ ಹಿರಿತನಕ್ಕೆ ಬೆಲೆ ಇರಲ್ಲ. ರಾಜಶೇಖರ್ ವಿರುದ್ಧ ‘ಮಾ’ ಶಿಸ್ತು ಸಮಿತಿ ಕ್ರಮ ಕೈಗೊಳ್ಳಲೇಬೇಕು ಎಂದು ಚಿರಂಜೀವಿ ಆಗ್ರಹಿಸಿದರು.

    ಈ ಬೆನ್ನಲ್ಲೇ ರಾಜಶೇಖರ್ ಕಾರ್ಯಕ್ರಮ ಸ್ಥಳದಿಂದ ನಿರ್ಗಮಿಸಿದರು. ಕೊನೆಗೆ ಮಾ ಉಪಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದರು. ತಮಗೆ ಚಿರಂಜೀವಿ ಮೇಲೆ ಕೋಪ ಇಲ್ಲ. ಅಧ್ಯಕ್ಷ ನರೇಶ್ ಕಾರ್ಯವೈಖರಿ ಬಗ್ಗೆ ಅಸಮಾಧಾನ ಇದೆ ಎಂದು ಟ್ವೀಟ್ ಮಾಡಿದ ರಾಜಶೇಖರ್, ಚಿರಂಜೀವಿ ಅವರಲ್ಲಿ ಕ್ಷಮೆ ಕೂಡ ಕೇಳಿದರು. ಆದರೆ ಅಷ್ಟೊತ್ತಿಗೆ ಆಗಬೇಕಾದ ಡ್ಯಾಮೇಜ್ ಆಗಿ ಹೋಗಿತ್ತು. ಟಾಲಿವುಡ್‍ನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಬಟಾಬಯಲಾಯ್ತು.

  • ಸರ್ಕಾರಿ ಹುದ್ದೆಗೆ ಗುಡ್‍ಬೈ, ಪ್ರಕೃತಿ ಮಾತೆಗೆ ಜೈ ಅಂದ್ರು ಕೋಲಾರದ ರಾಜಶೇಖರ್

    ಸರ್ಕಾರಿ ಹುದ್ದೆಗೆ ಗುಡ್‍ಬೈ, ಪ್ರಕೃತಿ ಮಾತೆಗೆ ಜೈ ಅಂದ್ರು ಕೋಲಾರದ ರಾಜಶೇಖರ್

    ಕೋಲಾರ: ಕೈ ಕೆಸರಾದರೆ ಬಾಯಿ ಮೊಸರು. ಈ ಗಾದೆಗೆ ಇಂದಿನ ಪಬ್ಲಿಕ್ ಹೀರೋ ಕೋಲಾರದ ರಾಜಶೇಖರ್ ಅವರು ನಿದರ್ಶನವಾಗಿದ್ದಾರೆ. ರ‍್ಯಾಂಕ್ ಪಡೆದ ಎಂಜಿನಿಯರ್ ಪದವೀಧರರಾಗಿದ್ದರೂ, ಆರೋಗ್ಯ ಕೈಕೊಟ್ಟಿತ್ತು. ಆದರೆ, ಭೂಮಾತೆಯನ್ನು ನಂಬಿದ ರಾಜಶೇಖರ್‍ಗೆ ಆರೋಗ್ಯ-ಐಶ್ವರ್ಯ ಎಲ್ಲವೂ ಸಿಕ್ಕಿದೆ.

    ಹೌದು. ಕೋಲಾರದ ಚಾಮರಹಳ್ಳಿಯ ರಾಜಶೇಖರ್ ಅವರು ತಮ್ಮ 40 ಎಕರೆಯಲ್ಲಿ ಮರಗಳನ್ನು ಬೆಳೆದಿದ್ದಾರೆ. ಸಾರಿಗೆ ಇಲಾಖೆಯಲ್ಲಿ 19 ವರ್ಷ ಸೇವೆ ಸಲ್ಲಿಸಿದ್ದ ರಾಜಶೇಖರ್ ಅವರಿಗೆ ಹಲವು ಬಗೆಯ ಕಾಯಿಲೆಗಳು ಬಾಧಿಸುತ್ತಿದ್ದವು. ಇದರಿಂದ ನೊಂದು ಜೀವನವೇ ಬೇಡ ಅಂತಿದ್ದವರು, ಸ್ನೇಹಿತರ ಮಾತಿನಂತೆ ನಿಸರ್ಗ ಜೀವನ ನಡೆಸಿ ಈಗ ಆರೋಗ್ಯಯುತರಾಗಿದ್ದಾರೆ. ತಮ್ಮ ಜಮೀನಿನಲ್ಲಿ ಮಾವು, ಬೇವು, ಹಲಸು, ಸೀತಾಫಲ, ಸಪೋಟ, ಸೀಬೆ, ನೇರಳೆ, ನೆಲ್ಲಿಕಾಯಿ ಸೇರಿದಂತೆ ಅರಳಿ ಹೀಗೆ ಹತ್ತಾರು ಬಗೆಯ ಔಷಧೀಯ ಹಾಗೂ ಅಪರೂಪದ ಸುಮಾರು 4,500ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ.

    ಜಿಲ್ಲೆಯಲ್ಲಿ ಸಾವಿರ ಅಡಿಗೂ ನೀರು ಸಿಗದ ಹೊತ್ತಲ್ಲಿ ತಮ್ಮ ಜಮೀನಿನಲ್ಲಿ ಮಳೆ ಕೊಯ್ಲು, ಹಿಂಗುಗುಂಡಿ, ಕೃಷಿ ಹೊಂಡಗಳ ಮೂಲಕ ಕೇವಲ 350 ಅಡಿಗೇ ನೀರು ಸಿಗುವಂತೆ ಅಂತರ್ಜಲ ಮಟ್ಟ ಏರಿಸಿದ್ದಾರೆ. ಹನಿ ನೀರಾವರಿ, ಇಂಗು-ಗುಂಡಿಗಳ ಮೂಲಕ ತೇವಾಂಶ ಕಾಯ್ದುಕೊಳ್ಳುವಂತೆ ಮಾಡಿ, ಸಾವಿರಾರು ಸಸಿಗಳನ್ನು ಕಾಪಾಡಿಕೊಂಡಿದ್ದಾರೆ. ಜೈವಿಕ ಆಹಾರ ಮತ್ತು ಆರೋಗ್ಯ ಕೇಂದ್ರವನ್ನಾಗಿ ಮಾರ್ಪಡಿಸಿದ್ದಾರೆ ಎಂದು ರಾಜಶೇಖರ್ ಸ್ನೇಹಿತ ಪದ್ಮನಾಭ್ ಹೇಳುತ್ತಾರೆ.

    ಒಳ್ಳೆಯ ಗಾಳಿ, ನೀರು, ಸೇರಿದಂತೆ ಔಷಧೀಯ ಗಿಡಗಳಿಂದ ಆರೋಗ್ಯದ ಜೊತೆಗೆ ಲಕ್ಷಾಂತರ ರೂಪಾಯಿ ಲಾಭವನ್ನೂ ಪಡೆಯುತ್ತಿದ್ದಾರೆ.

  • ಪರದೇಸಿ c/o ಲಂಡನ್ – ವಿಜಯ್ ರಾಘವೇಂದ್ರ ಮೇಲೆ ನಿರ್ದೇಶಕರ ಭರವಸೆ!

    ಪರದೇಸಿ c/o ಲಂಡನ್ – ವಿಜಯ್ ರಾಘವೇಂದ್ರ ಮೇಲೆ ನಿರ್ದೇಶಕರ ಭರವಸೆ!

    ವಿಜಯ್ ರಾಘವೇಂದ್ರ ನಟನೆಯ ಪರದೇಸಿ ಕೇರಾಫ್ ಲಂಡನ್ ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಟೈಟಲ್ ಒಂದು ಆಕರ್ಷಣೆಯಾದರೆ ಇದರ ಬಗ್ಗೆ ಹೊರ ಬೀಳುತ್ತಿರೋ ಕುತೂಹಲದ ವಿಚಾರಗಳಿಂದಾಗಿ ಪ್ರೇಕ್ಷಕರೂ ಕೂಡಾ ಇದರ ಬಗ್ಗೆ ಆಕರ್ಷಿತರಾಗಿದ್ದಾರೆ. ಈ ಹಿಂದೆ ರಾಜಶೇಖರ್ ಮತ್ತು ವಿಜಯ್ ರಾಘವೇಂದ್ರ ಜೋಡಿಯ ರಾಜ ಲವ್ಸ್ ರಾಧೆ ಗೆಲುವು ಕಂಡಿತ್ತಲ್ಲಾ? ಆ ಹಿಸ್ಟರಿ ಮತ್ತೆ ಮರುಕಳಿಸುತ್ತದೆಂಬ ಮಾತೇ ಎಲ್ಲೆಡೆ ಕೇಳಿ ಬರುತ್ತಿದೆ.

    ಬಹುತೇಕ ಚಿತ್ರತಂಡಗಳು ಒಂದು ಚಿತ್ರ ಪೂರ್ಣಗೊಳ್ಳುವ ಮುನ್ನವೇ ಛಿದ್ರವಾಗೋದೇ ಹೆಚ್ಚು. ಒಂದೇ ತಂಡ ಮತ್ತೊಂದು ಚಿತ್ರವನ್ನೂ ಸೇರಿ ಮಾಡಿದರೆ ಅದು ಪವಾಡದಂತೆಯೇ ಗೋಚರಿಸುತ್ತೆ. ಪರದೇಸಿ ಕೇರಾಫ್ ಲಂಡನ್ ವಿಚಾರದಲ್ಲಿ ಮಾತ್ರ ಅಂಥಾದ್ದೊಂದು ಪವಾಡ ಸಂಭವಿಸಿದೆ!

    ಇದು ನಿರ್ದೇಶಕ ರಾಜಶೇಖರ್ ಮತ್ತು ವಿಜಯ್ ರಾಘವೇಂದ್ರ ಕಾಂಬಿನೇಷನ್ನಿನ ಎರಡನೇ ಚಿತ್ರ. ಇದೇ ಜೋಡಿ ಈ ಹಿಂದೆ ರಾಜ ಲವ್ಸ್ ರಾಧೆ ಮೂಲಕ ಮೋಡಿ ಮಾಡಿತ್ತು. ಆ ಚಿತ್ರವಿನ್ನೂ ಚಿತ್ರೀಕರಣದ ಹಂತದಲ್ಲಿರುವಾಗಲೇ ರಾಜಶೇಖರ್ ವಿಜಯ್ ರಾಘವೇಂದ್ರ ಜೊತೆ ಮತ್ತೊಂದು ಚಿತ್ರ ಮಾಡುವ ಸುಳಿವನ್ನೂ ಬಿಟ್ಟು ಕೊಟ್ಟಿದ್ದರು. ಅದೇ ರೀತಿ ಈ ಜೋಡಿಯ ಸಂಗಮದೊಂದಿಗೆ ಈ ಚಿತ್ರ ವೇಗವಾಗಿ ತಯಾರಾಗಿ ನಿಂತಿದೆ. ಈ ತಿಂಗಳಾಂತ್ಯದಲ್ಲಿಯೇ ತೆರೆ ಕಾಣುವ ತಯಾರಿಯಲ್ಲಿದೆ.

    ಪರದೇಸಿ ಕೇರಾಫ್ ಲಂಡನ್ ಚಿತ್ರದ ಮೂಲಕ ವಿಜಯ್ ರಾಘವೇಂದ್ರರಿಗೆ ವಿಶಿಷ್ಟವಾದೊಂದು ಪಾತ್ರವನ್ನು ನಿರ್ದೇಶಕರು ಸೃಷ್ಟಿ ಮಾಡಿದ್ದಾರಂತೆ. ಈ ಪಾತ್ರ ಪ್ರೇಕ್ಷಕರಿಗೆ ಸರ್ಪ್ರೈಸ್ ನಂತಿರಲಿದೆಯಂತೆ. ಅದು ಯಾವ ರೀತಿಯದ್ದೆಂಬುದು ಈ ತಿಂಗಳಲ್ಲಿಯೇ ಬಯಲಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪರದೇಸಿ ಕೇರಾಫ್ ಲಂಡನ್ – ಇಲ್ಲಿರೋದು ಡಿಫರೆಂಟ್ ವಿಜಯ್ ರಾಘವೇಂದ್ರ!

    ಪರದೇಸಿ ಕೇರಾಫ್ ಲಂಡನ್ – ಇಲ್ಲಿರೋದು ಡಿಫರೆಂಟ್ ವಿಜಯ್ ರಾಘವೇಂದ್ರ!

    ರಾಜಶೇಖರ್ ನಿರ್ದೇಶನದ ಪರದೇಸಿ ಕೇರಾಫ್ ಲಂಡನ್ ಈ ತಿಂಗಳು ತೆರೆ ಕಾಣಲಿದೆ. ಈಗಾಗಲೇ ಹಾಡುಗಳ ಮೂಲಕವೂ ಭಾರೀ ಕ್ರೇಜ್ ಸೃಷ್ಟಿಸಿರೋ ಈ ಚಿತ್ರ ವಿಜಯ್ ರಾಘವೇಂದ್ರ ಅವರ ವೃತ್ತಿ ಬದುಕಲ್ಲಿ ಹೊಸ ತಿರುವು ನೀಡಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ರಾಜಶೇಖರ್ ಅಂಥಾದ್ದೊಂದು ರಸವತ್ತಾದ ಕಥನವನ್ನಿಲ್ಲಿ ದೃಶ್ಯ ರೂಪಕವಾಗಿಸಿದ್ದಾರೆ.

    ವಿಜಯ್ ರಾಘವೇಂದ್ರರನ್ನು ಹೊಸ ಗೆಟಪ್ಪಿನಲ್ಲಿ ಕಾಣಿಸಬೇಕೆಂಬ ಹಂಬಲದೊಂದಿಗೆ ಈ ಕಥೆಯನ್ನು ಸಿದ್ಧಪಡಿಸಿದ್ದವರು ರಾಜಶೇಖರ್. ಚಿತ್ರೀಕರಣವನ್ನೆಲ್ಲ ಅಚ್ಚುಕಟ್ಟಾಗಿಯೇ ಮಾಡಿ ಮುಗಿಸಿದ್ದ ಅವರು ಪ್ರತಿಯೊಂದು ವಿಚಾರದಲ್ಲಿಯೂ ಅದೇ ದೃಷ್ಟಿಯಿಂದಲೇ ಕಾರ್ಯ ನಿರ್ವಹಿಸಿದ್ದರು. ಹಾಡುಗಳ ವಿಚಾರದಲ್ಲಿ ಅವರು ವಹಿಸಿದ್ದ ಮುತುವರ್ಜಿಯೇ ಈ ಮಾತಿಗೆ ಸಾಕ್ಷಿಯಾಗುತ್ತೆ.

    ಸಾಮಾನ್ಯವಾಗಿ ಇತ್ತೀಚಿನ ಚಿತ್ರಗಳ ಹಾಡುಗಳಿಗೆ ಒಂದೋ ಪರಭಾಷಾ ಗಾಯಕ, ಗಾಯಕಿಯರಾಗಬೇಕು. ಇಲ್ಲದಿದ್ದರೆ ಕನ್ನಡದ ಖ್ಯಾತನಾಮರೇ ಹಾಡಬೇಕೆಂಬ ಟ್ರೆಂಡಿದೆ. ಕೆಲ ಮಂದಿ ಅದರ ಆಚೀಚೆಗೆ ದೃಷ್ಟಿ ಹಾಯಿಸಿದ್ದಿದೆ. ಆದರೆ ರಾಜಶೇಖರ್ ಅಪ್ಪಟ ಈ ನೆಲದ ಅಪರೂಪದ ಮಹಿಳೆಯೋರ್ವರಿಂದ ಒಂದು ಹಾಡನ್ನು ಹಾಡಿಸಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡ ಕೋಗಿಲೆ ಎಂಬ ಹಾಡಿನ ಶೋನ ಮೂಲಕ ಪ್ರಸಿದ್ಧಿ ಪಡೆದವರು ಗಂಗಮ್ಮ. ಹಳ್ಳಿಗಾಡಿನಿಂದ ಬಂದಿರೋ ಗಂಗಮ್ಮ ಯಾವ ಥರದ ಹಾಡನ್ನೇ ಆದರೂ ಶ್ರುತಿಬದ್ಧವಾಗಿ, ಎಂಥವರೂ ತಲೆದೂಗುವಂತೆ ಹಾಡುವ ಕಲೆಗಾರಿಕೆಯ ಮೂಲಕವೇ ಗಾನಕೋಗಿಲೆ ಗಂಗಮ್ಮ ಎಂದೇ ಪ್ರಸಿದ್ಧರಾಗಿದ್ದಾರೆ. ರಾಜಶೇಖರ್ ತಮ್ಮ ಚಿತ್ರಕ್ಕಾಗಿ ಗಂಗಮ್ಮನವರಿಂದಲೇ ಒಂದು ಚೆಂದದ ಹಾಡನ್ನು ಹಾಡಿಸಿದ್ದಾರೆ. ಇದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ. ಈ ಹಾಡೂ ಕೂಡಾ ಜನಮನ ಗೆದ್ದಿದೆ. ಈ ಮೂಲಕವೇ ಈ ಚಿತ್ರದ ಬಗ್ಗೆ ಎಲ್ಲೆಡೆ ಒಳ್ಳೆ ಮಾತುಗಳು ಹರಡಿಕೊಂಡಿವೆ. ಅದೆಲ್ಲವೂ ಗೆಲುವಾಗುವ ಸ್ಪಷ್ಟ ಸೂಚನೆಗಳೂ ಇವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಂಜುಂಡಿ ಕಲ್ಯಾಣ ನಿರ್ದೇಶಕ ಎಂ.ಎಸ್ ರಾಜಶೇಖರ್ ವಿಧಿವಶ

    ನಂಜುಂಡಿ ಕಲ್ಯಾಣ ನಿರ್ದೇಶಕ ಎಂ.ಎಸ್ ರಾಜಶೇಖರ್ ವಿಧಿವಶ

    ಬೆಂಗಳೂರು: ಹಿರಿಯ ನಿರ್ದೇಶಕ ಎಂ.ಎಸ್ ರಾಜಶೇಖರ್ ವಿಧಿವಶರಾಗಿದ್ದಾರೆ.

    ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ರಾಜಶೇಖರ್ ಅವರು ನಿಧನರಾಗಿದ್ದಾರೆ. ರಾಜ ಶೇಖರ್ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

    ರಾಜಶೇಖರ್ ಅವರು ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು, ಸ್ಯಾಂಡಲ್ ವುಡ್ ನಲ್ಲಿ ಸೃಜನಶೀಲ ನಿರ್ದೇಶಕ ಎಂದೇ ಕರೆಸಿಕೊಂಡಿದ್ದರು. ಆದರೆ ಇಂದು ರಾಜಶೇಖರ್ ಎಲ್ಲರನ್ನು ಅಗಲಿ ಹೋಗಿದ್ದಾರೆ.

    ಅನುರಾಗ ಅರಳಿತು, ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗ, ರಥಸಪ್ತಮಿ, ಮನಮೆಚ್ಚಿದ ಹುಡುಗಿ, ನಂತಹ ಸ್ಟಾರ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಗ್ಮೋರೆ ಖುಲಾಸೆಯಾದ್ರೂ ಆಶ್ಚರ್ಯವಿಲ್ಲ: ಪ್ರಗತಿಪರ ಚಿಂತಕ ಸಂಶಯ

    ವಾಗ್ಮೋರೆ ಖುಲಾಸೆಯಾದ್ರೂ ಆಶ್ಚರ್ಯವಿಲ್ಲ: ಪ್ರಗತಿಪರ ಚಿಂತಕ ಸಂಶಯ

    ಉಡುಪಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿಯನ್ನು ಕೋರ್ಟ್ ತಾಂತ್ರಿಕ ಕಾರಣ ಕೊಟ್ಟು ಬಿಡುಗಡೆ ಮಾಡಿದ್ರೂ ಆಶ್ಚರ್ಯವಿಲ್ಲ ಅಂತ ವಿಮರ್ಷಕ, ಪ್ರಗತಿಪರ ಚಿಂತಕ ಜಿ ರಾಜಶೇಖರ್ ಸಂಶಯ ವ್ಯಕ್ತಗೊಳಿಸಿದರು.

    ಶನಿವಾರ ನಗರದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಸಂಸ್ಮರಣೆ ನಡೆಯಿತು. ಕೋಮು ಸೌಹಾರ್ದ ವೇದಿಕೆ ಮತ್ತು ದಲಿತ ಸಂಘಟನೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ವೇಳೆ ಮಾತನಾಡಿದ ವಿಚಾರವಾದಿ ಜಿ.ರಾಜಶೇಖರ್, ಗಾಂಧಿಯನ್ನು ಕೊಂದವರು ಗೌರಿಯನ್ನು ಕೊಂದಿದ್ದಾರೆ. ಆರೋಪಿ ಪರಶುರಾಮ ವಾಗ್ಮೋರೆ ಓರ್ವ ಗಲಭೆಕೋರ. ಸಿಂಧಗಿಯಲ್ಲಿ ಪಾಕ್ ಧ್ವಜದ ವಿಚಾರದಲ್ಲಿ ಘರ್ಷಣೆಗೆ ಕಾರಣವಾಗಿದ್ದವ ಎಂದರು.

    ಧ್ವಜದ ಪ್ರಕರಣದಿಂದ ವಾಗ್ಮೋರೆ ಖುಲಾಸೆಯಾಗಿದ್ದಾನೆ. ಮುಂದಿನ ದಿನಗಳಲ್ಲಿ ಗೌರಿ ಕೊಲೆಯ ಆರೋಪಿಗಳು ಬಿಡುಗಡೆಯಾಗಬಹುದು. ತಾಂತ್ರಿಕ ಕಾರಣ ಕೊಟ್ಟು ಕೋರ್ಟ್ ಬಿಡುಗಡೆ ಮಾಡಿದ್ರೂ ಆಶ್ಚರ್ಯವಿಲ್ಲ ಎಂದು ಸಂಶಯ ವ್ಯಕ್ತಪಡಿಸಿ, ಆ ಪ್ರಕರಣ ಕೂಡ ಹೀಗೆಯೇ ಬಿದ್ದೋಯ್ತು ಎಂದರು.

    ಮಹಾತ್ಮಾ ಗಾಂಧಿಯನ್ನು ಕೊಂದವರೇ ದಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿ ಮುಂತಾದ ವಿಚಾರವಾದಿಗಳನ್ನು ಕೊಂದಿದ್ದಾರೆ ಎಂದು ಅಭಿಪ್ರಾಯಪಟ್ಟರು. ಆರ್ ಎಸ್ ಎಸ್ ಸಿದ್ಧಾಂತ ದೇಶದಲ್ಲಿ ಮುಸ್ಲಿಮರ ಹತ್ಯೆಗೆ ಕಾರಣವಾಗಿದೆ. ಗೌರಿ ಸೇರಿದಂತೆ ಎಲ್ಲಾ ಹತ್ಯೆಗಳು ಆರ್‍ಎಸ್‍ಎಸ್‍ನ ಸರಣಿ ಹತ್ಯೆಯೆಂದು ನಾವು ಭಾವಿಸುತ್ತೇವೆ ಎಂದು ಗಂಭೀರ ಆರೋಪ ಮಾಡಿದರು.

    ಹಿಂದುತ್ವದ ಅಮಲು ದೇಶವನ್ನು ಹಾಳುಗೆಡವುತ್ತಿದೆ. ಆರ್ ಎಸ್ ಎಸ್ ಎಸ್ ಒಂದು ದೇಶದ್ರೋಹಿ ಸಂಘಟನೆ ಅದನ್ನು ನಿಷೇಧ ಮಾಡಬೇಕಹ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv