Tag: rajarajeshwari nagar bypolls

  • ಆರ್‌ಆರ್‌ ನಗರ, ಶಿರಾ ಉಪಚುನಾವಣೆ – ಅಭ್ಯರ್ಥಿಗಳ ಆಸ್ತಿ ಎಷ್ಟಿದೆ?

    ಆರ್‌ಆರ್‌ ನಗರ, ಶಿರಾ ಉಪಚುನಾವಣೆ – ಅಭ್ಯರ್ಥಿಗಳ ಆಸ್ತಿ ಎಷ್ಟಿದೆ?

    ಬೆಂಗಳೂರು: ರಾಜರಾಜೇಶ್ವರಿ ನಗರ ಹಾಗೂ ತುಮಕೂರಿನ ಶಿರಾ ಕ್ಷೇತ್ರಗಳ ಉಪ ಚುನಾವಣಾ ಅಖಾಡ ಇಂದಿನಿಂದ ಮತ್ತಷ್ಟು ಕಾವೇರಿದೆ. ಆರ್ಆರ್ ನಗರದ ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಮುನಿರತ್ನ ಇಂದು ನಾಮಪತ್ರ ಸಲ್ಲಿಸಿದರು.

    ಬಿಜೆಪಿ ನಾಯಕರಾದ ಡಿಸಿಎಂ ಅಶ್ವಥ್ ನಾರಾಯಣ, ಸಚಿವ ಅಶೋಕ್ ಜೊತೆಯಲ್ಲಿ ತೆರಳಿದ ಮುನಿರತ್ನ, ಚುನಾವಣಾಧಿಕಾರಿ ಹೆಚ್.ಎಲ್. ನಾಗರಾಜ್‍ಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಎಲ್ಲಾ ದಾಖಲೆಗಳು ಸರಿಯಾಗಿ ಸಲ್ಲಿಕೆಯಾದ್ದೇಯಾ ಅಂತ ಮುನಿರತ್ನ ಮಾಹಿತಿ ಪಡೆದರು. ಆರ್‌ ಆರ್‌ ನಗರದ ಜಂಟಿ ಆಯುಕ್ತರ ಕಚೇರಿವರೆಗೆ ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜ್ ಕೂಡ ಸಾಥ್ ನೀಡಿದ್ದರು.

    ಈ ವೇಳೆ ಮಾತನಾಡಿದ ಮುನಿರತ್ನ, ಎಲ್ಲಾ ಒಳ್ಳೇ ರೀತಿಯಲ್ಲಿ ನಡೆದಿದೆ. ಕ್ಷೇತ್ರದ ಜನತೆಯ ಋಣ ನನ್ನ ಮೇಲಿದೆ ಅದನ್ನ ತೀರಿಸ್ತೇನೆ. ಬಿಜೆಪಿ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಒಟ್ಟಾಗಿ ಚುನಾವಣೆ ಎದುರಿಸ್ತೇವೆ ಅಂತ ಹೇಳಿದ್ರು.

    ಸಚಿವ ಅಶೋಕ್ ಪ್ರತಿಕ್ರಿಯಿಸಿ, ಮುನಿರತ್ನ ಅವರು 40-50 ಸಾವಿರ ಲೀಡ್‍ನಲ್ಲಿ ಗೆಲ್ತಾರೆ. ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನಗೆ ಎದುರಾಳಿಯೇ ಇಲ್ಲ. ಸಚಿವರು, ಶಾಸಕರ ಸಹಕಾರದಿಂದ ಎಲ್ಲಾ ದೃಷ್ಟಿಯಿಂದ ನಮಗೆ ಜಯ ಖಚಿತ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು.

    ಕುಸುಮಾ ನಾಮಪತ್ರ ಸಲ್ಲಿಕೆ: ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತಪ್ಪ ಸಹ ಉಮೇದುವಾರಿಕೆ ಸಲ್ಲಿಸಿದ್ರು. ಕುಸುಮಾ ನಾಮಪತ್ರ ಸಲ್ಲಿಕೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ರು.

    ನಾಮಪತ್ರ ಸಲ್ಲಿಕೆಗೂ ಮುನ್ನ ಆಂಜನೇಯ ದೇಗುಲಕ್ಕೆ ಭೇಟಿ ನೀಡಿದ ಕುಸುಮಾ, ಇಂದು ನನ್ನ ಪಾಲಿಗೆ ಅತ್ಯಂತ ಮಹತ್ವದ ದಿನ. ನನ್ನ ಇಷ್ಟದ ದೇವರು ಆಂಜನೇಯನ ದರ್ಶನ ಮಾಡಿರುವುದರಿಂದ ಹೊಸ ಶಕ್ತಿ ಬಂದಿದೆ ಎಂದ್ರು. ಸಿದ್ದರಾಮಯ್ಯ ಮಾತನಾಡಿ, ನಾನು ಅಹಿಂದ ರಾಮಯ್ಯನೇ. ಯಾವಾಗಲು ಅಹಿಂದ ವರ್ಗದ ಪರ ಇದ್ದೇನೆ ಅಂದ್ರು. ಡಿಕೆಶಿಯಂತೂ ನೊಣವಿನಕೆರೆ ಅಜ್ಜಯ್ಯನ ಆಶೀರ್ವಾದ ಪಡೆದ ಬಳಿಕವೇ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಹಾಜರಾಗಿದ್ರು. ನಾಮಪತ್ರ ಸಲ್ಲಿಕೆ ಬಳಿಕ ಚುನಾವಣಾ ರಣತಂತ್ರದ ಬಗ್ಗೆ ಸಭೆ ನಡೆಸಿದ್ರು.

    ಜೆಡಿಎಸ್‌ ನಾಮಪತ್ರ ಸಲ್ಲಿಕೆ: ಆರ್.ಆರ್.ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಕೂಡ ನಾಮಿನೇಷನ್ ಫೈಲ್ ಮಾಡಿದರು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಮ್ಮ ಅಭ್ಯರ್ಥಿಗೆ ಸಾಥ್ ನೀಡಿದ್ರು. ನಾಮಪತ್ರ ಸಲ್ಲಿಕೆ ಬಳಿಕ ಕೃಷ್ಣಮೂರ್ತಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ರು.

    ಆರ್.ಆರ್.ನಗರದಲ್ಲಿ ನಿಜಕ್ಕೂ ಕುಮಾರಸ್ವಾಮಿ ಅವರೇ ಅಭ್ಯರ್ಥಿ. ಕಾಂಗ್ರೆಸ್-ಬಿಜೆಪಿಯಲ್ಲಿ ಪ್ರಬಲ ಅಭ್ಯರ್ಥಿಗಳೇ ಇಲ್ಲ. ಜಾತಿ ರಾಜಕಾರಣ ಮಾಡಲ್ಲ. ನಾನು ಮನೆ ಮಗ. ಜನ ಅಭಿವೃದ್ಧಿಗೆ ಮತ ಕೊಡ್ಬೇಕು. ಈ ಬಾರಿ ಜನ ಜೆಡಿಎಸ್ ಕೈ ಹಿಡಿಯುತ್ತಾರೆ ಎಂದು ಕೃಷ್ಣಮೂರ್ತಿ ವಿಶ್ವಾಸ ವ್ಯಕ್ತಪಡಿಸಿದ್ರು.

    ಯಾವ ಅಭ್ಯರ್ಥಿಯ ಆಸ್ತಿ ಎಷ್ಟು?

    > ಮುನಿರತ್ನ (ಬಿಜೆಪಿ) ಆರ್.ಆರ್.ನಗರ
    ಒಟ್ಟು ಆಸ್ತಿ – 89 ಕೋಟಿ 13 ಲಕ್ಷದ 47 ಸಾವಿರದ 877 ರೂ.
    ಸಾಲ – 46 ಕೋಟಿ 41 ಲಕ್ಷದ 61 ಸಾವಿರದ 785 ರೂ.

    > ಕುಸುಮಾ (ಕಾಂಗ್ರೆಸ್) ಆರ್.ಆರ್.ನಗರ
    ಚರಾಸ್ತಿ – 1 ಕೋಟಿ 13 ಲಕ್ಷದ 2 ಸಾವಿರದ 197.38 ರೂ.
    ಚಿನ್ನ,ಬೆಳ್ಳಿ – 45 ಲಕ್ಷ ರೂ. ( ಮೌಲ್ಯದ 1,100 ಗ್ರಾಂ)

    > ಟಿ.ಬಿ. ಜಯಚಂದ್ರ (ಕಾಂಗ್ರೆಸ್) ಶಿರಾ
    ಸ್ಥಿರಾಸ್ತಿ – 13.10 ಕೋಟಿ ರೂ.
    ಚರಾಸ್ತಿ – 1ಕೋಟಿ 33 ಲಕ್ಷದ 81 ಸಾವಿರದ 409.41 ರೂ.

    > ಅಮ್ಮಾಜಮ್ಮ (ಜೆಡಿಎಸ್) ಶಿರಾ
    ಒಟ್ಟು ಆಸ್ತಿ – 2.32 ಕೋಟಿ ರೂ.
    ಚಿನ್ನ,ಬೆಳ್ಳಿ – 60 ಲಕ್ಷ ರೂ. (60 ಲಕ್ಷ ಮೌಲ್ಯದ 1200 ಗ್ರಾಂ ಚಿನ್ನಾಭರಣ – 7 ಕೆಜಿ ಬೆಳ್ಳಿ)

     

  • ಆರ್‌.ಆರ್‌.ನಗರ ಉಪಚುನಾವಣೆ – ಕೋಟ್ಯಧೀಶೆ, ಸಾಲಗಾರ್ತಿ ಆಗಿದ್ದಾರೆ ಕುಸುಮಾ

    ಆರ್‌.ಆರ್‌.ನಗರ ಉಪಚುನಾವಣೆ – ಕೋಟ್ಯಧೀಶೆ, ಸಾಲಗಾರ್ತಿ ಆಗಿದ್ದಾರೆ ಕುಸುಮಾ

    ಬೆಂಗಳೂರು: ರಾಜರಾಜೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಕೋಟ್ಯಧೀಶೆ ಮತ್ತು ಸಾಲಗಾರ್ತಿ ಆಗಿದ್ದಾರೆ.

    ನಾಮಪತ್ರ ಸಲ್ಲಿಸುವಾಗ ಚುನಾವಣಾ ಆಯೋಗಕ್ಕೆ ತಮ್ಮ ಬಳಿ ಇರುವ ಆಸ್ತಿ ವಿವರಗಳನ್ನು ಕುಸುಮಾ ಸಲ್ಲಿಸಿದ್ದಾರೆ. ಪತಿ ಹಾಗೂ ಕುಟುಂಬಸ್ಥರ ಹೆಸರನ್ನು ಕುಸುಮಾ ಅಫಿಡವಿಟ್‌ನಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ.

    1,100 ಗ್ರಾಂ ಚಿನ್ನಾಭರಣ ಹೊಂದಿರುವ ಕುಸುಮಾ 1 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯ ಒಡತಿ ಆಗಿದ್ದಾರೆ. ನಗದು ರೂಪದಲ್ಲಿ 1,41,050 ರೂ. ಹೊಂದಿರುವ ಅವರು ನಾಲ್ಕು ಬ್ಯಾಂಕ್ ಅಕೌಂಟ್ ಗಳಲ್ಲಿ ಸುಮಾರು 6 ಲಕ್ಷ ಹಣ ಹೊಂದಿದ್ದಾರೆ. 1,13,02,197.38 ರೂ. ಮೌಲ್ಯದ ಚರಾಸ್ತಿ ಹೊಂದಿರುವ ಇರುವ ನನ್ನ ಬಳಿ ಯಾವುದೇ ಕೃಷಿ ಭೂಮಿ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುನಿರತ್ನಗೆ ಬಿಗ್‌ ರಿಲೀಫ್‌ ನೀಡಿದ ಸುಪ್ರೀಂ ತೀರ್ಪಿನಲ್ಲಿ ಏನಿದೆ?

    ಸುಮಾರು 2,45,000 ರೂ. ಗಳನ್ನು ವಿವಿಧ ಬಾಂಡ್, ಶೇರುಗಳಲ್ಲಿ ಹೂಡಿಕೆ ಮಾಡಿರುವ ಕುಸುಮಾ ಬಳಿ ಯಾವುದೇ ಸ್ವಂತ ವಾಹನ ಹೊಂದಿಲ್ಲ. ಅನಿಲ್ ಗೌಡ ಎಚ್ ಅವರಿಂದ 2,05,000 ರೂ.ಮತ್ತು ಎ ಬಿಎಚ್ ಇನ್ಫ್ರಾಸ್ಟ್ರಕ್ಚರ್ಸ್ ನಿಂದ 56, 58, 316 ರೂ. ಸಾಲ ಪಡೆದಿದ್ದಾರೆ. 45,00,000 ರೂ. ಮೌಲ್ಯದ 1,100 ಗ್ರಾಂ ಚಿನ್ನ, ಬೆಳ್ಳಿ ಆಭರಣಗಳು ತನ್ನ ಬಳಿ ಇದೆ ಎಂದು ಉಲ್ಲೇಖಿಸಿದ್ದಾರೆ.

    ಬಿಬಿಎಂಪಿ ವಾರ್ಡ್ 40 ರಲ್ಲಿ 1500 ಚದರ ಅಡಿ ಹಾಗೂ 2380 ಚದರಡಿ ವಿಸ್ತೀರ್ಣದ ಎರಡು ನಿವೇಶನ ಇದ್ದು, ಇದರ ಸದ್ಯದ ಮಾರುಕಟ್ಟೆ ಮೌಲ್ಯ ಒಟ್ಟು 1,37, 10,000 ರೂ. ಆಗಿದೆ ಎಂದು ವಿವರಿಸಿದ್ದಾರೆ.