Tag: rajanikanth

  • ನನ್ನ ಗುರು ಅಮಿತಾಭ್ ಜೊತೆ ಮತ್ತೆ ಕೆಲಸ ಮಾಡ್ತಿದ್ದೇನೆ- ತಲೈವಾ

    ನನ್ನ ಗುರು ಅಮಿತಾಭ್ ಜೊತೆ ಮತ್ತೆ ಕೆಲಸ ಮಾಡ್ತಿದ್ದೇನೆ- ತಲೈವಾ

    ಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ‘ಜೈಲರ್’ (Jailer) ಸಕ್ಸಸ್ ನಂತರ ಸಾಲು ಸಾಲು ಸಿನಿಮಾಗಳನ್ನ ಮಾಡ್ತಿದ್ದಾರೆ. ತಲೈವಾ 170ನೇ ಚಿತ್ರದಲ್ಲಿ ರಜನಿಕಾಂತ್‌ಗೆ ಬಿಗ್ ಬಿ ಜೊತೆಯಾಗುತ್ತಿದ್ದಾರೆ. 33 ವರ್ಷಗಳ ಬಳಿಕ ಮತ್ತೆ ಈ ಜೋಡಿ ಒಂದಾಗ್ತಿರೋದು ವಿಶೇಷ. ಈ ಬಗ್ಗೆ ಸ್ಪೆಷಲ್ ಪೋಸ್ಟ್‌ವೊಂದನ್ನ ತಲೈವಾ ಹಂಚಿಕೊಂಡಿದ್ದಾರೆ.

    ಟಿ.ಜಿ ಜ್ಞಾನವೇಲ್ ನಿರ್ದೇಶನದ, ಲೈಕಾ ಪ್ರೋಡಕ್ಷನ್ಸ್ ನಿರ್ಮಾಣ ಮಾಡುತ್ತಿರುವ ‘ತಲೈವರ್ 170’ ಚಿತ್ರದಲ್ಲಿ 33 ವರ್ಷಗಳ ನಂತರ ನಾನು ನನ್ನ ಗುರು ಶ್ರೀ ಅಮಿತಾಭ್ ಬಚ್ಚನ್ ಅವರೊಂದಿಗೆ ಮತ್ತೆ ಕೆಲಸ ಮಾಡುತ್ತಿದ್ದೇನೆ. ನನ್ನ ಹೃದಯವು ಸಂತೋಷದಿಂದ ಬಡಿದುಕೊಳ್ಳುತ್ತಿದೆ ಎಂದು ರಜನಿಕಾಂತ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:ನಾನು ಧರಿಸಿದ್ದು ಕೃತಕ ಹುಲಿ ಉಗುರು: ನಟ ನಿಖಿಲ್ ಕುಮಾರ್ ಸ್ವಾಮಿ ಸ್ಪಷ್ಟನೆ

    ರಜನಿಕಾಂತ್ ಅವರು ತಮಿಳು, ಕನ್ನಡ ಹಿಂದಿಯಲ್ಲೂ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ಬಿಗ್ ಬಿ ಅವರೊಂದಿಗೆ ಅಂದಾ ಕಾನೂನ್, ಗಿರಫ್ತಾರ್- ಹಮ್ ಸಿನಿಮಾಗಳಲ್ಲಿ ನಟಿಸಿದ್ದರು. ಈ ಸಿನಿಮಾಗಳು ದೊಡ್ಡ ಹಿಟ್ ಆಗಿದ್ದವು. ಅಂದಾ ಕಾನೂನ್ ಸಿನಿಮಾದಲ್ಲಿ ರಜನಿಕಾಂತ್ ಹೀರೋ ಆಗಿದ್ದರೆ, ಅಮಿತಾಭ್ ಅತಿಥಿ ಪಾತ್ರ ಮಾಡಿದ್ದರು. ಹಮ್ ಚಿತ್ರದಲ್ಲಿ ಇಬ್ಬರು ಜೊತೆಗೆ ಕಾಣಿಸಿಕೊಂಡಿದ್ದರು. ಆ ಸಿನಿಮಾ ಕೂಡ ಸೂಪರ್ ಹಿಟ್ ಎನಿಸಿಕೊಂಡಿತ್ತು.

    ರಜನಿ 170ನೇ ಸಿನಿಮಾದಲ್ಲಿ ತಲೈವಾ-ಅಮಿತಾಭ್ ಒಟ್ಟಿಗೆ ನಟಿಸುತ್ತಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. 33 ವರ್ಷಗಳ ನಂತರ ಮತ್ತೆ ಬಿಗ್‌ ಬಿ- ರಜನಿ ಒಂದಾಗಿರೋದ್ರಿಂದ ಸಿನಿಮಾ ಬಗೆಗಿನ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Jailer ಸಕ್ಸಸ್ ಬಳಿಕ ಹೊಸ ಚಿತ್ರದ ಬಗ್ಗೆ ರಿಲೀಸ್ ಅಪ್‌ಡೇಟ್ ಕೊಟ್ರು ಮೋಹನ್ ಲಾಲ್

    Jailer ಸಕ್ಸಸ್ ಬಳಿಕ ಹೊಸ ಚಿತ್ರದ ಬಗ್ಗೆ ರಿಲೀಸ್ ಅಪ್‌ಡೇಟ್ ಕೊಟ್ರು ಮೋಹನ್ ಲಾಲ್

    ಜನಿಕಾಂತ್ (Rajanikanth) ನಟನೆಯ ‘ಜೈಲರ್’ (Jailer) ಸಿನಿಮಾದಲ್ಲಿ ಮೋಹನ್ ಲಾಲ್ ಗೆಸ್ಟ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ನಟಿಸಿದ್ದು ಕೆಲವೇ ನಿಮಿಷ ಆಗಿದ್ರು, ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇತ್ತು. ಈಗ ‘ಜೈಲರ್’ ಸಕ್ಸಸ್ ಬೆನ್ನಲ್ಲೇ ಹೊಸ ಸಿನಿಮಾದ ರಿಲೀಸ್ ಬಗ್ಗೆ ಮೋಹನ್ ಲಾಲ್ ಅಪ್‌ಡೇಟ್ ಕೊಟ್ಟಿದ್ದಾರೆ. ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿ ‘ಬಿಗ್ ಬಾಸ್’ ತೇಜಸ್ವಿನಿ ಪ್ರಕಾಶ್

    ಕಲಾವಿದರಿಗೆ ಭಾಷೆಯ ಬೇಲಿಯಿಲ್ಲ ಎಂಬುದನ್ನ ಮೋಹನ್‌ಲಾಲ್ (Mohanlal) ಈಗಾಗಲೇ ಪ್ರೂವ್ ಮಾಡಿದ್ದಾರೆ. ಯಾವುದೇ ಪಾತ್ರ ಕೊಟ್ರು ಆ ಪಾತ್ರವೇ ತಾವಾಗಿ ಬಿಡ್ತಾರೆ ಎಂಬುದಕ್ಕೆ ಅವರು ನಟಿಸಿದ ಸಿನಿಮಾಗಳೇ ಸಾಕ್ಷಿ. ಈಗ ‘ಮಲೈ ಕೋಟ್ಟೈ ವಾಲಿಬನ್’ ಎಂಬ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. 2024ರ ಜನವರಿ 24ರಂದು ಈ ಚಿತ್ರ ತೆರೆ ಕಾಣಲಿದೆ.

    ಕೌಂಟ್‌ಡೌನ್ ಶುರುವಾಗಿದೆ. ಜನವರಿ 25, 2024ರಂದು ವಿಶ್ವದೆಲ್ಲೆಡೆ ರಿಲೀಸ್ ಆಗಲಿದೆ ಎಂದು ನಟ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಚಿತ್ರದ ರಿಲೀಸ್ ಬಗ್ಗೆ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

    ಮೋಹನ್ ಲಾಲ್ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಹೆಚ್ಚಿನ ನಿರೀಕ್ಷೆಯಿದೆ. ಸಿನಿಮಾ, ಪಾತ್ರದ ಸೆಲೆಕ್ಷನ್‌ನಲ್ಲಿ ಯಾವಾಗಲೂ ಚ್ಯುಸಿಯಿರುವ ಮೋಹನ್ ಲಾಲ್, ಈ ಸಿನಿಮಾದಲ್ಲಿ ಎಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ನಟಿಸಿದ್ದಾರೆ. ಹಾಗಾಗಿ ಸಹಜವಾಗಿ ಚಿತ್ರದ ಬಗ್ಗೆ ಫ್ಯಾನ್ಸ್‌ಗೆ ನಿರೀಕ್ಷೆಯಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಂಜನಗೂಡು ರಾಘವೇಂದ್ರ ಸ್ವಾಮಿ ಮಠಕ್ಕೆ ರಜನಿಕಾಂತ್‌ ಭೇಟಿ

    ನಂಜನಗೂಡು ರಾಘವೇಂದ್ರ ಸ್ವಾಮಿ ಮಠಕ್ಕೆ ರಜನಿಕಾಂತ್‌ ಭೇಟಿ

    ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ (Raghavendra Swampy Mutt)ಭೇಟಿ ನೀಡಿದ್ದಾರೆ. ಜೈಲರ್ ಸಕ್ಸಸ್ ಬಳಿಕ ರಾಘವೇಂದ್ರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:‘ಜೈಲರ್‌’ ಬಳಿಕ ಹೆಚ್ಚಿದ ಬೇಡಿಕೆ- ‘ದಿ ಕೇರಳ ಸ್ಟೋರಿ’ ಡೈರೆಕ್ಟರ್ ಜೊತೆ ಶಿವಣ್ಣ ಸಿನಿಮಾ?

    ರಜನಿಕಾಂತ್ ಅವರು ದೇವರನ್ನು ನಂಬುವ ಆರಾಧಿಸುವ ವ್ಯಕ್ತಿ. ಜೈಲರ್ (Jailer)  ರಿಲೀಸ್ ಸಂದರ್ಭದಲ್ಲಿ ಹಲವು ದೇವಸ್ಥಾನಗಳಿಗೆ ತಲೈವಾ ಭೇಟಿ ನೀಡಿದ್ದರು. ಈಗ ನಂಜನಗೂಡಿನ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ್ದಾರೆ. ಇಂದು (ಆಗಸ್ಟ್ 29) ಬೆಳಗ್ಗೆ 10:15ರ ವೇಳೆಗೆ ಬಂದು ತಲೈವಾ ಅರ್ಚನೆ ಮಾಡಿಸಿದ್ದಾರೆ. ಈ ಬಗ್ಗೆ ಹಿರಿಯ ವ್ಯವಸ್ಥಾಪಕರಾದ ವೆಂಕಣ್ಣಾಚಾರ್ ಮಾಹಿತಿ ನೀಡಿದ್ದಾರೆ.

    ಪ್ರತಿಬಾರಿ ಬೆಂಗಳೂರಿಗೆ ಬಂದಾಗ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಪ್ರತಿ ಸಲ ಬಂದಾಗಲೂ ಸರ್ಪ್ರೈಸ್ ವಿಸಿಟ್ ಮಾಡುತ್ತಾರೆ. ಮಠಕ್ಕೆ ಬಂದಾಗ 10 ನಿಮಿಷ ಪ್ರಾರ್ಥನೆ ಮಾಡ್ತಾರೆ. ರಜನಿಕಾಂತ್ ಅವರು ತುಂಬಾ ಸರಳಜೀವಿ, ಅಹಂಕಾರ ಇಲ್ಲದ ವ್ಯಕ್ತಿಯಾಗಿದ್ದಾರೆ. ಅವರು ಭೇಟಿ ನೀಡಿದ್ದು, ಖುಷಿಯಾಗಿದೆ ಎಂದು ದೇವಾಲಯದ ವ್ಯವಸ್ಥಾಪಕರು ಮಾತನಾಡಿದ್ದಾರೆ. ಇದಷ್ಟೇ ಅಲ್ಲ, ಬೆಂಗಳೂರಿನ(Bengaluru) ಜಯನಗರದ ಡಿಪೋಗೆ ತಲೈವಾ ಭೇಟಿ ನೀಡಿ ಕಂಡೆಕ್ಟರ್‌, ಚಾಲಕರ ಜೊತೆ 10 ನಿಮಿಷಗಳ ಕಾಲ ಮಾತನಾಡಿದ್ದಾರೆ.

    ಆಗಸ್ಟ್ 10ರಂದು ತೆರೆ ಕಂಡ ‘ಜೈಲರ್’ (Jailer) ಸಿನಿಮಾ, 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಪ್ರಸ್ತುತ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಚಿತ್ರದಲ್ಲಿ ತಮನ್ನಾ ಭಾಟಿಯಾ, ಶಿವಣ್ಣ, ಮೋಹನ್ ಲಾಲ್, ಜಾಕಿ ಶ್ರಾಫ್ ಅತಿಥಿ ರೋಲ್‌ನಲ್ಲಿ ನಟಿಸುವ ಮೂಲಕ ಮೋಡಿ ಮಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರಿನ ಜಯನಗರದ BMTC ಡಿಪೋಗೆ ತಲೈವಾ ಸರ್ಪ್ರೈಸ್ ವಿಸಿಟ್

    ಬೆಂಗಳೂರಿನ ಜಯನಗರದ BMTC ಡಿಪೋಗೆ ತಲೈವಾ ಸರ್ಪ್ರೈಸ್ ವಿಸಿಟ್

    ‘ಜೈಲರ್’ (Jailer) ಸಿನಿಮಾದ ಸಕ್ಸಸ್ ಬೆನ್ನಲ್ಲೇ ಬೆಂಗಳೂರಿಗೆ (Bengaluru) ತಲೈವಾ ಭೇಟಿ ನೀಡಿದ್ದಾರೆ. ಚಿತ್ರರಂಗಕ್ಕೆ ಬರುವ ಮುನ್ನ ಕಾರ್ಯ ನಿರ್ವಹಿಸಿದ್ದ ಜಯನಗರ ಡಿಪೋಗೆ ತಲೈವಾ ಸರ್ಪ್ರೈಸ್ ವಿಸಿಟ್ ನೀಡಿದ್ದಾರೆ. ಕಂಡೆಕ್ಟರ್- ಡ್ರೈವರ್ ಜೊತೆ ತಲೈವಾ ಮಾತುಕತೆ ನಡೆಸಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಮೈಸೂರು ದಸರಾ ಉದ್ಘಾಟಿಸಲಿದ್ದಾರೆ ನಾದಬ್ರಹ್ಮ ಹಂಸಲೇಖ

    ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ಬೆಂಗಳೂರಿಗೆ ಬಂದಿದ್ದಾರೆ. ಸಾಕಷ್ಟು ವರ್ಷಗಳ ರಜನಿಕಾಂತ್ ಬೆಂಗಳೂರಿನಲ್ಲೇ ನೆಲೆಸಿದ್ದರು. ಬೆಂಗಳೂರು ಜೀವನಕ್ಕೂ ತಲೈವಾಗೂ ನಂಟಿದೆ. ಚಿತ್ರರಂಗಕ್ಕೆ ಬರುವ ಮುನ್ನ ಜಯನಗರದ ಡಿಪೋದಲ್ಲಿ (Jayanagara Bus Depo)ಕಂಡೆಕ್ಟರ್ ಆಗಿ ತಲೈವಾ ಕಾರ್ಯ ನಿರ್ವಹಿಸಿದ್ದರು. ಈ ಅಲ್ಲಿಗೆ ಸರ್ಪ್ರೈಸ್ ವಿಸಿಟ್ ನೀಡಿ, ಕಂಡೆಕ್ಟರ್- ಡ್ರೈವರ್ ಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಸುಮಾರು ಹತ್ತು ನಿಮಿಷಗಳ ಕಾಲ ನಟ ಮಾತುಕತೆ ನಡೆಸಿದ್ದಾರೆ. ರಜನಿಕಾಂತ್ ಭೇಟಿಗೆ ಚಾಲಕರು ಶಾಕ್ ಆಗಿದ್ದಾರೆ.

    ಬೆಂಗಳೂರಿನ (Bengaluru) ಜಯನಗರ ಡಿಪೋಗೆ ಭೇಟಿ ನೀಡಿ ಹಳೆಯ ನೆನಪನ್ನ ನಟ ಸ್ಮರಿಸಿದ್ದರು. ವೈಟ್ & ವೈಟ್ ಧರಿಸಿನಲ್ಲಿ ತಲೈವಾ ಮಿಂಚಿದ್ದರು. ರಜನಿಕಾಂತ್ ಅವರನ್ನ ನೋಡಿ ಖುಷಿಯಲ್ಲಿ ಸಿಬ್ಬಂದಿಗಳು ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ತಲೈವಾ ಭೇಟಿ ಜಯನಗರದ ಚಾಲಕರಲ್ಲಿ ಸಂಭ್ರಮ ಮನೆ ಮಾಡಿತ್ತು. ಬಳಿಕ ಬೆಂಗಳೂರಿನ ರಾಘವೇಂದ್ರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

    ಈ ಹಿಂದೆ ಹಲವು ಕಾರ್ಯಕ್ರಮದಲ್ಲಿ ತಾವು ಕಂಡೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದರ ಬಗ್ಗೆ ನಟ ಮಾತನಾಡಿದ್ದರು. ರೈಟ್ ರೈಟ್ ಅಂತಾ ಟಿಕೆಟ್ ಕೊಟ್ಟ ನೆನಪನ್ನ ತಲೈವಾ ಹಂಚಿಕೊಂಡಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆ ನಟರನ್ನ ಫ್ಲಾಪ್‌ ಹೀರೋಸ್ ಎಂದು ಕರೆದು ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ವಿಜಯ್

    ಆ ನಟರನ್ನ ಫ್ಲಾಪ್‌ ಹೀರೋಸ್ ಎಂದು ಕರೆದು ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ವಿಜಯ್

    ವಿಜಯ್ ದೇವರಕೊಂಡ (Vijay Devarakonda) ಅಕ್ಷರಶಃ ಹೊಂಡಕ್ಕೆ ಬಿದ್ದಿದ್ದಾರೆ. ಖುಷಿ (Kushi) ಸಿನಿಮಾ ಇನ್ನೆನು ಬಿಡುಗಡೆಯಾಗಲಿದೆ. ಈ ಹೊತ್ತಲ್ಲಿ ರಜನಿ, ದಳಪತಿ ವಿಜಯ್ ಹಾಗೂ ಚಿರು ಭಕ್ತಗಣವನ್ನು ಕೆರಳಿಸಿದ್ದಾರೆ. ಫ್ಲಾಪ್ ಹೀರೋಸ್ ಎಂದು ಇನ್‌ಡೈರೆಕ್ಟಾಗಿ ಈ ಸ್ಟಾರ್‌ಗಳನ್ನು ಕರೆದಿದ್ದಾರೆ. ಏನಿದು ಸುದ್ದಿ? ಏನಾಗಲಿದೆ ದೇವರಕೊಂಡ ಖುಷಿ ಸಿನಿಮಾ? ನೋಡಿ.

    ಸುಮ್ಮನಿರಲಾದೆ ಇರುವೆ ಬಿಟ್ಟುಕೊಂಡರು ಅನ್ನೋದು ಇದಕ್ಕೇನೆ. ವಿಜಯ್ ಹಾಗೂ ಸಮಂತಾ ಅಭಿನಯದ ಖುಷಿ ಬಿಡುಗಡೆ ಹೊಸ್ತಿನಲ್ಲಿದೆ. ಸಿನಿಮಾ ಪ್ರಚಾರ ಮಾಡೋದು ಬಿಟ್ಟು. ಇನ್ಯಾರೋ ಹೀರೋಗಳನ್ನು ಎಳೆದು ತಂದರೆ ಅವರವರ ಫ್ಯಾನ್ಸ್ ಸುಮ್ಮನಿರುತ್ತಾರಾ? ಈ ಸ್ಟಾರ್‌ಗಳೆಲ್ಲ ಫ್ಲಾಪ್ ಸಿನಿಮಾ ಕೊಟ್ಟರೂ ನಾವು ಮುಚ್ಚಿಕೊಂಡು ನೋಡಬೇಕು ಎಂದಿರುವುದು ರಜನಿ, ವಿಜಯ್ ಹಾಗೂ ಚಿರು ಫ್ಯಾನ್ಸ್‌ಗೆ ಖಾರ ಕಲಿಸಿದಂತಾಗಿದೆ. ಏನಂದರು ವಿಜಯ್ ದೇವರಕೊಂಡ?

    ರಜನಿ(Rajanikanth), ವಿಜಯ್ (Thalapathy Vijay) ಹಾಗೂ ಚಿರಂಜೀವಿ (Megastar Chiranjeevi) ಹಲವಾರು ಫ್ಲಾಪ್ ಕೊಟ್ಟಿದ್ದಾರೆ. ಆರಾರು ಸಿನಿಮಾ ಸೋತರೂ ಜೈಲರ್ ರೀತಿ ಮತ್ತೆ ಹಿಟ್ ಕೊಟ್ಟು ಎದ್ದು ಬರುತ್ತಾರೆ. ಸೋಲು ಅವರನ್ನು ಕಂಗೆಡಿಸುವುದಿಲ್ಲ. ಅವರು ಸೂಪರ್‌ಸ್ಟಾರ್ಸ್. ಅವರ ಸಿನಿಮಾಗಳನ್ನು ಮುಚ್ಚಿಕೊಂಡು ನೋಡಬೇಕು.‌ ಇದನ್ನೂ ಓದಿ:ಚಂದ್ರಯಾನ ವ್ಯಂಗ್ಯ: ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು

    ವಿಜಯ್ ಸತ್ಯ ಹೇಳಿದ್ದಾರೆ. ಆದರದನ್ನು ವಿವರಿಸಿದ ರೀತಿ ಫ್ಯಾನ್ಸ್ ಅರಗಿಸಿಕೊಂಡಿಲ್ಲ. ರಜನಿ, ವಿಜಯ್, ಚಿರು ಭಕ್ತಗಣ ಈ ಕಾರಣಕ್ಕೆ ಕೊಂಡ ವಿರುದ್ಧ ಕೆಂಡ ಕಾರುತ್ತಿದೆ. ಯಾವಾಗ ಫ್ಯಾನ್ಸ್ ಆಕ್ರೋಶ ಹೆಚ್ಚಾಯಿತೊ. ವಿಜಯ್ ಕ್ಷಮೆ ಕೇಳಿಲ್ಲ. ಯಾರಿಗೂ ತಲೆ ಕೆಡಿಸಿಕೊಳ್ಳಲ್ಲ ಎಂದು ಗಹಗಹಿಸಿದ್ದಾರೆ. ಖುಷಿ ಚಿತ್ರಕ್ಕೆ ಗತಿ ಕಾಣಿಸುತ್ತೇವೆ ತೊಡೆ ತಟ್ಟಿದೆ ಮೂರೂ ಸ್ಟಾರ್ಸ್ ಬಳಗ. ಲೈಗರ್ ಸೋಲು ಪಾಠ ಕಲಿಸಿಲ್ಲ ಈ ವ್ಯಕ್ತಿಗೆ. ಎಣಿಸಿ ಎಣಿಸಿ ಮೊಂಬತ್ತಿ ಇಡಿಸಿಕೊಂಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಲ್ಲೆಲ್ಲೂ ‘ಜೈಲರ್’ ಚಿತ್ರದ ಹವಾ, ನಿಲ್ಲುತ್ತಿಲ್ಲ ರಜನಿ ತಾಕತ್ತು

    ಎಲ್ಲೆಲ್ಲೂ ‘ಜೈಲರ್’ ಚಿತ್ರದ ಹವಾ, ನಿಲ್ಲುತ್ತಿಲ್ಲ ರಜನಿ ತಾಕತ್ತು

    ‘ಜೈಲರ್’ (Jailer) ಸಿನಿಮಾ ಹವಾ ಆಕಾಶಕ್ಕೆ ಮುಟ್ಟಿದೆ. ಬಿಡುಗಡೆಯಾಗಿ ಹನ್ನೆರಡು ದಿನ ಕಳೆದಿವೆ. ಆದರೂ ರಜನಿಯನ್ನು (Rajanikanth) ನೋಡಲು ಜನರು ಮುಗಿಬೀಳುತ್ತಿದ್ದಾರೆ. ವಿಶ್ವಾದ್ಯಂತ 500 ಕೋಟಿ ರೂಪಾಯಿ ಗಳಿಸಿದೆ. ಆದರೆ ಕರ್ನಾಟಕದಲ್ಲಿ ತಲೈವಾ ಸಿನಿಮಾ ಬಾಚಿದ್ದೆಷ್ಟು? ಎಷ್ಟು ಪ್ರದರ್ಶನಗಳಲ್ಲಿ ಮೆರೆಯುತ್ತಿದೆ ಜೈಲರ್?

    ರಜನಿಕಾಂತ್ ಮೇನಿಯಾ ನಿಲ್ಲುತ್ತಿಲ್ಲ. ಒಂದಲ್ಲ ಎರಡಲ್ಲ. ಭರ್ತಿ ಹನ್ನೆರಡು ದಿನ ಮುಗಿದಿದೆ. ಆದರೂ ಜನರು ಚಿತ್ರಮಂದಿರಕ್ಕೆ ನುಗ್ಗುತ್ತಿದ್ದಾರೆ. ನೋಡಿದವರೇ ಮತ್ತೆ ಮತ್ತೆ ನೋಡುತ್ತಿದ್ದಾರೆ. ರಜನಿ ಯುಗ ಮುಗಿಯಿತು ಎಂದವರಿಗೆ ಕಪಾಳಕ್ಕೆ ಬಾರಿಸುವಂಥ ಉತ್ತರ ಕೊಟ್ಟಿದೆ ಜೈಲರ್. ವಿಶ್ವಾದ್ಯಂತ ಇಲ್ಲಿವರೆಗೆ 500 ಕೋಟಿ ರೂ. ಗಳಿಸಿದೆ. ಹಾಗಿದ್ದರೆ ಕರ್ನಾಟಕದಲ್ಲಿ(Karnataka) ಎಷ್ಟು ಕೋಟಿ? ಉಸಿರು ಬಿಗಿ ಹಿಡಿಯಿರಿ. ಅನಾಮತ್ತು ಐವತ್ತು ಕೋಟಿಯನ್ನು ಖಜಾನೆಗೆ ಸೇರಿಸಿದೆ. ದಟ್ ಈಸ್ ತಲೈವಾ ತಾಕತ್ತು. ಇದನ್ನೂ ಓದಿ:ಬಾಲಿವುಡ್‌ ನಟ ಪಂಕಜ್ ತ್ರಿಪಾಠಿ ತಂದೆ ವಿಧಿವಶ

    ಮೊದಲ ದಿನ ಒಟ್ಟು 500 ಪ್ರದರ್ಶನ ಕಂಡಿತ್ತು ಜೈಲರ್. ಮೊದಲ ವಾರದ ನಂತರ ಪ್ರದರ್ಶನ ಸಂಖ್ಯೆ ಕಮ್ಮಿ ಆಗಬಹುದು. ಹೀಗಂತ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಐದು ನೂರರಲ್ಲಿ ಒಂದೇ ಒಂದು ಪ್ರದರ್ಶನ ಕಮ್ಮಿಯಾಗಿಲ್ಲ. ಜನರು ಸಿನಿಮಾ ನೋಡುವುದನ್ನು ನಿಲ್ಲಿಸುತ್ತಿಲ್ಲ. ರಜನಿ ಅಷ್ಟೊಂದು ಮೋಡಿ ಮಾಡಿದ್ದಾರೆ. ಏನಾದರಾಗಲಿ. ಹಳೇ ರಜನಿಕಾಂತ್ ಮತ್ತೆ ಸಿಕ್ಕಿದ್ದಾರೆ. ಫ್ಯಾನ್ಸ್ ಕೇಕೆ ಹಾಕುತ್ತಿದ್ದಾರೆ. ನಿರ್ದೇಶಕ ನೆಲ್ಸನ್ ನಿರ್ದೇಶನಕ್ಕೆ ಭೇಷ್ ಎಂದಿದ್ದಾರೆ.

    ಸಿನಿಮಾರಂಗದ ಆರಾಧ್ಯ ದೈವ ರಜನಿಕಾಂತ್ ಅವರನ್ನ ಜೈಲರ್ (Jailer) ಸಿನಿಮಾ ಮೂಲಕ ಮತ್ತೆ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ತಲೈವಾ ಮತ್ತೆ ತೆರೆಯ ಮೇಲೆ ಮಿಂಚೋದಕ್ಕೆ ಸೂಕ್ತ ಸಿನಿಮಾ ಅಂತಿದ್ದಾರೆ. ಈಗ ಅವರ ಮುಂದಿನ ಸಿನಿಮಾಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಎಂ ಯೋಗಿ ಆದಿತ್ಯನಾಥ್ ಜೊತೆ ‘ಜೈಲರ್’ ಸಿನಿಮಾ ವೀಕ್ಷಿಸಲಿರುವ ತಲೈವಾ

    ಸಿಎಂ ಯೋಗಿ ಆದಿತ್ಯನಾಥ್ ಜೊತೆ ‘ಜೈಲರ್’ ಸಿನಿಮಾ ವೀಕ್ಷಿಸಲಿರುವ ತಲೈವಾ

    ಕಾಲಿವುಡ್ ನಟ ರಜನಿಕಾಂತ್ (Rajanikanth) ಅವರು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಜೊತೆ ಇಂದು (ಆಗಸ್ಟ್ 19) ಜೈಲರ್ (Jailer) ಚಿತ್ರವನ್ನ ವೀಕ್ಷಿಸಲಿದ್ದಾರೆ. ಲಕ್ನೋದಲ್ಲಿ ಸಿಎಂ ಮತ್ತು ಅಭಿಮಾನಿಗಳ ಜೊತೆಗೆ ‘ಜೈಲರ್’ ಸಿನಿಮಾ ವೀಕ್ಷಣೆ ಮಾಡಲಿದ್ದಾರೆ.

    ತಲೈವಾ-ಶಿವಣ್ಣ ಕಾಂಬೋ ‘ಜೈಲರ್’ (Jailer) ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ತಲೈವಾ ಸಿನಿಮಾವನ್ನ ಒಪ್ಪಿ ಜನ ಮೆಚ್ಚಿಕೊಂಡಿದ್ದಾರೆ. ಸದ್ಯ ಸಿನಿಮಾ ಪ್ರಚಾರಕ್ಕಾಗಿ ಲಕ್ನೋದಲ್ಲಿ ತಲೈವಾ ಬೀಡು ಬಿಟ್ಟಿದ್ದಾರೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಜೊತೆ ಇಂದು ಸಂಜೆ 7ಕ್ಕೆ ‘ಜೈಲರ್’ ಸಿನಿಮಾ ನೋಡೋದು ಫಿಕ್ಸ್ ಆಗಿದೆ. ಅಷ್ಟೇ ಅಲ್ಲ, ಇದೀಗ ರಾಜ್ಯಪಾಲರಾದ ಆನಂದಿಬೇನ್ ಪಟೇಲ್ ಅವರನ್ನು ಕೂಡ ತಲೈವಾ ಭೇಟಿಯಾಗಿದ್ದಾರೆ.

    ಇಂದು ಸಿಎಂ ಜೊತೆಗೆ ಸಿನಿಮಾ ವೀಕ್ಷಣೆಯ ನಂತರ ನಾಳೆ (ಆಗಸ್ಟ್ 20) ಅಯೋಧ್ಯೆಗೆ ತಲೈವಾ ಭೇಟಿ ನೀಡಲಿದ್ದಾರೆ. ನಿರ್ಮಾಣ ಹಂತದ ದೇವಸ್ಥಾನವನ್ನ ನಟ ವೀಕ್ಷಣೆ ಮಾಡಲಿದ್ದಾರೆ. ಬಳಿಕ ಶ್ರೀರಾಮನ ದರ್ಶನ ಪಡೆಯಲಿದ್ದಾರೆ. ಇದನ್ನೂ ಓದಿ:ಪ್ರಭಾಸ್ ಮುಂದಿನ ಚಿತ್ರಕ್ಕೆ ನಾಯಕಿಯಾದ ಬೆಂಗಳೂರಿನ ಬೆಡಗಿ

    ಜೈಲರ್ ಸಿನಿಮಾದಲ್ಲಿ ತಲೈವಾಗೆ ಶಿವಣ್ಣ, ಮೋಹನ್ ಲಾಲ್, ಜಾಕಿ ಶ್ರಾಫ್ ಸಾಥ್ ನೀಡಿದ್ದಾರೆ. ಸಿನಿಮಾ ಕಥೆ, ಡೈಲಾಗ್, ಸಾಂಗ್ಸ್ ಎಲ್ಲವೂ ಫ್ಯಾನ್ಸ್‌ಗೆ ಮೋಡಿ ಮಾಡಿದೆ. ಆಗಸ್ಟ್ 10ಕ್ಕೆ ರಿಲೀಸ್ ಆಗಿದ್ದು, 350 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಮೂಲಕ ಭರ್ಜರಿ ಕಲೆಕ್ಷನ್ ಮಾಡ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Jailer ಮುಂದೆ ನಡೆಯಲಿಲ್ವಾ ಬೋಲಾ ಶಂಕರ್ ಆಟ? ಏನಾಯ್ತು ಮೆಗಾಸ್ಟಾರ್ ಸಿನಿಮಾ ಕಥೆ

    Jailer ಮುಂದೆ ನಡೆಯಲಿಲ್ವಾ ಬೋಲಾ ಶಂಕರ್ ಆಟ? ಏನಾಯ್ತು ಮೆಗಾಸ್ಟಾರ್ ಸಿನಿಮಾ ಕಥೆ

    ದ್ಯಾಕೋ ಮೆಗಾಸ್ಟಾರ್ ಅದೃಷ್ಟ ನೆಟ್ಟಗಿಲ್ಲ. ‘ಬೋಲಾ ಶಂಕರ್’ (Bhola Shankar) ರಿಲೀಸ್ ಆಗಿದ್ದೇ ಎಷ್ಟೋ ಜನಕ್ಕೆ ಗೊತ್ತಾಗ್ತಿಲ್ಲ. ಹೀಗಿದ್ಮೇಲೆ ಬಾಕ್ಸಾಫೀಸ್ ಕಲೆಕ್ಷನ್ ಕಥೆ ಏನಪ್ಪಾ? ಏನಾಯ್ತು ‘ಬೋಲಾ ಶಂಕರ್’ ಹಣೆಬರಹ? ಡಲ್ ಆಗಿದ್ದು ಯಾಕೆ.? ಜೈಲರ್ ಸಿನಿಮಾ ಮುಂದೆ ರಿಲೀಸ್ ಆಗಿದ್ದೇ ಎಫೆಕ್ಟ್ ಆಯ್ತಾ?

    ಬೋಲಾ ಶಂಕರ್ ತೆರೆಕಂಡಿದೆ. ಚಿರಂಜೀವಿ(Megastar Chiranjeevi) ಅಭಿನಯದ ಸಿನಿಮಾ. ಹಾಗ್ ನೋಡೋದಾದ್ರೆ ಬೋಲಾ ಶಂಕರ್ ಆರಂಭದಿಂದಲೂ ಅಷ್ಟೊಂದು ನಿರೀಕ್ಷೆ ಹುಟ್ಟುಹಾಕಲೇ ಇಲ್ಲ. ಜೈಲರ್ (Jailer) ಅಪೋಸಿಟ್ ಆಗಿ ಬಂದಿದ್ದಕ್ಕೋ ಇನ್ನಷ್ಟು ನೆಲಕಚ್ಚುವಂತಾಗಿದೆ. ಮೊದಲ ದಿನ ಅಬ್ಬಬ್ಬಾ ಅಂದ್ರೂ 20 ಕೋಟಿ ಕಲೆಕ್ಷನ್ ತುಂಬಿಕೊಳ್ಳಲು ತಡವರಿಸುತ್ತಿದೆ ಚಿರಂಜೀವಿ ಸಿನಿಮಾ ಅನ್ನೋದೇ ದುರಂತ. ಇದನ್ನೂ ಓದಿ:Jailer ಸಿನಿಮಾ ಸಕ್ಸಸ್- ಬದರೀನಾಥ್ ದೇವಾಲಯಕ್ಕೆ ತಲೈವಾ ಭೇಟಿ

    ಮೆಗಾಸ್ಟಾರ್ ಸಾಲು ಸಾಲು ಸಿನಿಮಾಗಳು ಪಾತಾಳ ನೋಡೋಕೆ ಆರಂಭಿಸಿವೆ. ಅದರ ಸಾಲಿಗೆ ಹೊಸ ಸೇರ್ಪಡೆ ಬೋಲಾ ಶಂಕರ್. ಯಾಕಂದ್ರೆ ಮುಖ್ಯ ಕಾರಣವೇ ಇದು ವೇದಾಲಂ ರಿಮೇಕ್ ಅನ್ನೋದು. ಅಜಿತ್ ಅಭಿನಯಿಸಿದ್ದ ವೇದಾಲಂ ತೆಲುಗು ಕಾಪಿಯೇ ಬೋಲಾ ಶಂಕರ್. ಹೀಗಾಗೇ ಟಾಲಿವುಡ್‌ನಲ್ಲಿ ಬೋಲಾ ಶಂಕರ್ ದೊಡ್ಡ ಸೌಂಡ್ ಮಾಡ್ಲಿಲ್ಲ. ಇನ್ನು ಕಾಲಿವುಡ್‌ನಲ್ಲಿ ಕೇಳೋರೇ ಇಲ್ಲ. ಇಷ್ಟೆಲ್ಲಾ ಹಣೆಬರಹ ಗೊತ್ತಿರೋದಕ್ಕೆ ಚಿರಂಜೀವಿ ತಲೆ ಕೆಡಿಸಿಕೊಳ್ಳದೆ ಮನೆಯೊಳಗೆ ಬೆಚ್ಚಗೆ ಕುಳಿತಿದ್ದಾರೆ. ಏನೇ ಆದ್ರೂ ಅಸಲಿ ಮೆಗಾಸ್ಟಾರ್ ಅಬ್ಬರ ಯಾವಾಗ ಶುರುವಾಗುತ್ತಪ್ಪಾ ಎಂದು ಮೆಗಾ ಫ್ಯಾನ್ಸ್ ಕಾದು ಕುಳಿತಿದ್ದಾರೆ.

    ‘ಬೋಲಾ ಶಂಕರ್’ ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆ ತಮನ್ನಾ ಭಾಟಿಯಾ(Tamannaah Bhatia), ಕೀರ್ತಿ ಸುರೇಶ್(Keerthi Suresh), ನಟಿಸಿದ್ದಾರೆ. ಸ್ಟಾರ್ ಕಲಾವಿದರು ಸಿನಿಮಾದಲ್ಲಿ ಇದ್ರೂ ಸಿನಿಮಾ ದೊಡ್ಡ ಮಟ್ಟದ ಹಿಟ್ ಅಲ್ಲದೇ ಇದ್ರೂ ಹಿಟ್ ಲಿಸ್ಟ್‌ಗೆ ಹೋಗೋದ್ರಲ್ಲಿ ಸಿನಿಮಾ ಮಕಾಡೆ ಮಲಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Jailer ಸಿನಿಮಾ ಸಕ್ಸಸ್- ಬದರೀನಾಥ್ ದೇವಾಲಯಕ್ಕೆ ತಲೈವಾ ಭೇಟಿ

    Jailer ಸಿನಿಮಾ ಸಕ್ಸಸ್- ಬದರೀನಾಥ್ ದೇವಾಲಯಕ್ಕೆ ತಲೈವಾ ಭೇಟಿ

    ಕಾಲಿವುಡ್ (Kollywood) ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ಬದರೀನಾಥ್ (Badrinath) ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಜೈಲರ್ ಸಿನಿಮಾ ಆಗಸ್ಟ್ 10ಕ್ಕೆ ರಿಲೀಸ್ ಆಗಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಬೆನ್ನಲ್ಲೇ ತಲೈವಾ ಬದರೀನಾಥ್ ಸನ್ನಿಧಿಗೆ ಭೇಟಿ ನೀಡಿದ್ದಾರೆ.

    ಉತ್ತರಾಖಂಡದ ಬದರೀನಾಥ್ ದೇವಾಲಯಕ್ಕೆ ತಲೈವಾ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಅಭಿಮಾನಿಗಳ ಜೊತೆ ತಲೈವಾ ಸಂವಹನ ನಡೆಸಿದ್ದರು. ಜೈಲರ್ (Jailer) ಸಿನಿಮಾ ರಿಲೀಸ್ ಸಮಯದಲ್ಲೇ ತಲೈವಾ ಪ್ರವಾಸದಲ್ಲಿದ್ದರು. ಬಳಿಕ ಹಿಮಾಲಯಕ್ಕೆ ಭೇಟಿ ನೀಡಿದ್ದರು. ಇದೀಗ ಬದರೀನಾಥ್ ದೇವಾಲಯಕ್ಕೆ ತಲೈವಾ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ಬರೋಬ್ಬರಿ 20 ವರ್ಷಗಳ ಬಳಿಕ ದಳಪತಿ ವಿಜಯ್ ಜೊತೆ ಜ್ಯೋತಿಕಾ ನಟನೆ

    ‘ಅಣ್ಣಾತ್ತೆ’ ಚಿತ್ರದ 2 ವರ್ಷಗಳ ನಂತರ ಜೈಲರ್ ಆಗಿ ರಜನಿಕಾಂತ್ ಮಿಂಚಿದ್ದಾರೆ. ತಲೈವಾ ಸಿನಿಮಾದಲ್ಲಿ ಶಿವಣ್ಣ (Shivarajkumar), ಮೋಹನ್ ಲಾಲ್ (Mohanlal), ಜಾಕಿ ಶ್ರಾಫ್, ಸುನೀಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನೂರಾರು ಕೋಟಿ ಕಲೆಕ್ಷನ್ ಮಾಡ್ತಿರೋ ‘ಜೈಲರ್'(Jailer) ಚಿತ್ರದಲ್ಲಿ ಶಿವಣ್ಣ ಪಾತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Jailer: ರಜನಿಕಾಂತ್- ಶಿವಣ್ಣ ಆ್ಯಕ್ಟಿಂಗ್ ಚಿಂದಿ ಎಂದ ಪ್ರೇಕ್ಷಕರು

    Jailer: ರಜನಿಕಾಂತ್- ಶಿವಣ್ಣ ಆ್ಯಕ್ಟಿಂಗ್ ಚಿಂದಿ ಎಂದ ಪ್ರೇಕ್ಷಕರು

    ಸೂಪರ್ ಸ್ಟಾರ್ ರಜನಿಕಾಂತ್(Rajanikanth)- ಶಿವಣ್ಣ (Shivarajkumar) ಕಾಂಬೋ ಸಿನಿಮಾ ‘ಜೈಲರ್’ (Jailer) ಸಿನಿಮಾ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ. ಆಗಸ್ಟ್ 10 ರಿಲೀಸ್ ಆಗಿ ಮೊದಲ ದಿನವೇ ಭರ್ಜರಿ ಪ್ರದರ್ಶನ ಕಾಣುತ್ತಿದೆ. ‘ಬೀಸ್ಟ್’ ಸಿನಿಮಾದಿಂದ ಕೈ ಸುಟ್ಟುಕೊಂಡಿದ್ದ ನೆಲ್ಸನ್ ದಿಲೀಪ್ ಕುಮಾರ್ ಅವರು ಈ ಚಿತ್ರದಿಂದ ಯಶಸ್ಸು ಸಿಕ್ಕಿದೆ.

    ಕೆಲ ವರ್ಷಗಳ ನಂತರ ತಲೈವಾ ‘ಜೈಲರ್’ (Jailer) ಮೂಲಕ ದರ್ಶನ ನೀಡಿದ್ದಾರೆ. ಚಿತ್ರದಲ್ಲಿ ಸಿಂಪಲ್ ಕಾಮನ್ ಮ್ಯಾನ್ ಮುತ್ತುವೇಲ್ ಆಗಿ ಕಾಣಿಸಿಕೊಳ್ಳುವ ತಲೈವಾ, ದ್ವಿತೀಯಾರ್ಧದಲ್ಲಿ ಟೈಗರ್ ಮುತ್ತುವೇಲ್ ಪಾಂಡಿಯನ್ ಆಗಿ ಮಾಸ್ ಅವತಾರದಲ್ಲಿ ಅಬ್ಬರಿಸಿದ್ದಾರೆ.

    ದೇವರ ಮನೆಯಲ್ಲಿ ಪೂಜೆ ಮಾಡುತ್ತಾ ಎಂಟ್ರಿ ನೀಡುವ ಮುತ್ತುವೇಲ್ ಬಹಳ ಸಿಂಪಲ್ ವ್ಯಕ್ತಿ. ಮಡದಿ, ಮಗ, ಸೊಸೆ- ಮೊಮ್ಮಗನ ಜತೆ ಸರಳ ಸುಖ ಸಂಸಾರ ನಡೆಸುವ ಕಾಮನ್ ಮ್ಯಾನ್. ಮುತ್ತುವೇಲ್ ಮಗ ಅರ್ಜುನ್ ಪೊಲೀಸ್ ಅಧಿಕಾರಿಯಾಗಿದ್ದು, ಪ್ರಕರಣವೊಂದನ್ನು ಭೇದಿಸಲು ಹೋಗಿ ಕಣ್ಮರೆಯಾಗ್ತಾನೆ. ಹೀಗೆ ಕಣ್ಮರೆಯಾಗುವ ಮಗನನ್ನು ಹುಡುಕಲು ನಾಯಕ ಮುತ್ತುವೇಲ್ ಮುಂದಾಗಲಿದ್ದು, ಯಾವ ರೀತಿ ಸೇಡು ತೀರಿಸಿಕೊಳ್ಳಲಿದ್ದಾನೆ ಎಂಬುವುದೇ ಚಿತ್ರದ ಕಥೆಯಾಗಿದೆ. ಇದನ್ನೂ ಓದಿ:ಸಿಕ್ಸ್ ಪ್ಯಾಕ್ ಅವತಾರದಲ್ಲಿ ಚಾರ್ಲಿ ಬೆಡಗಿ ಸಂಗೀತಾ

    ನಾಯಕ ಮುತ್ತುವೇಲ್ ತನ್ನ ಮಗನನ್ನು ಹುಡುಕುವ ಯತ್ನದಲ್ಲಿ ಕರ್ನಾಟಕ ಮೂಲದ ಡಾನ್ ನರಸಿಂಹನ ಸಹಾಯ ಪಡೆದುಕೊಳ್ತಾನೆ. ಈ ಪಾತ್ರವನ್ನು ಶಿವಣ್ಣ ನಿರ್ವಹಿಸಿದ್ದಾರೆ. ಕನ್ನಡದಲ್ಲಿಯೇ ಡೈಲಾಗ್ ಹೊಡೆಯುತ್ತಾ ಎಂಟ್ರಿ ಕೊಡುವ ಶಿವಣ್ಣ ಮಂಡ್ಯ ಮೂಲದ ಗ್ಯಾಂಗ್‌ಸ್ಟರ್ ಆಗಿದ್ದು ನಾಯಕನಿಗೆ ತನ್ನ ಮಗನನ್ನು ಹುಡುಕಲು ಸಹಾಯ ಮಾಡಲಿದ್ದಾರೆ. ಶಿವರಾಜ್ ಕುಮಾರ್ ನಿರ್ವಹಿಸಿರುವ ಈ ಪಾತ್ರ ವಿಶೇಷ ಅತಿಥಿ ಪಾತ್ರವಾಗಿದ್ದರೂ ಸಹ ಆ ಪಾತ್ರಕ್ಕೆ ತನ್ನದೇ ಆದ ಗತ್ತಿದೆ. ಚಿತ್ರದಲ್ಲಿ ನಾಯಕನ ಪಾತ್ರಕ್ಕೆ ಎಷ್ಟು ಗತ್ತು ಗಮ್ಮತ್ತಿದೆಯೋ ಅಷ್ಟೇ ಮಟ್ಟದ ಬಿಲ್ಡಪ್ ಶಿವಣ್ಣನ ಪಾತ್ರಕ್ಕೂ ಸಹ ಇದೆ. ತಲೈವಾ- ಶಿವಣ್ಣ ಇಬ್ಬರ ಕಾಂಬೋ ಕೂಡ ಮಸ್ತ್ ಆಗಿ ತೆರೆಯ ಮೇಲೆ ಮೂಡಿ ಬಂದಿದೆ. ಒಟ್ನಲ್ಲಿ ಜೈಲರ್ ಚಿತ್ರಕ್ಕೆ ಅಭಿಮಾನಿಗಳು ಮಾರ್ಕ್ಸ್ ಕೊಟ್ಟಿದ್ದಾರೆ.

    ಚಿತ್ರದಲ್ಲಿ ರಜನಿಕಾಂತ್, ಶಿವಣ್ಣ ಜೊತೆ ತಮನ್ನಾ ಭಾಟಿಯಾ, ಮೋಹನ್ ಲಾಲ್(Mohanlal), ರಮ್ಯಾ ಕೃಷ್ಣ ಸೇರಿದಂತೆ ಹಲವರು ನಟಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]