Tag: rajanikanth

  • ತಲೈವಾ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಸಿಗಲಿದೆ ‘ಜೈಲರ್’ ಟೀಮ್‌ನಿಂದ ಗುಡ್ ನ್ಯೂಸ್- ಏನದು?

    ತಲೈವಾ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಸಿಗಲಿದೆ ‘ಜೈಲರ್’ ಟೀಮ್‌ನಿಂದ ಗುಡ್ ನ್ಯೂಸ್- ಏನದು?

    ಕಾಲಿವುಡ್‌ನ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ಡಿ.12ರಂದು 74ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ‘ಜೈಲರ್’ ಟೀಮ್ ಫ್ಯಾನ್ಸ್‌ಗೆ ‘ಜೈಲರ್ 2’ (Jailer 2) ಬಗ್ಗೆ ಅಪ್‌ಡೇಟ್ ಕೊಡೋದಾಗಿ ಸುಳಿವು ನೀಡಿದೆ. ಡಿ.12ರಂದು ರಜನಿಕಾಂತ್‌ ಸಿನಿಮಾ ಬಗ್ಗೆ ಬಿಗ್‌ ನ್ಯೂಸ್‌ ಹೊರಬೀಳಲಿದೆ. ಇದನ್ನೂ ಓದಿ:‘ಮನದ ಕಡಲು’ ಚಿತ್ರಕ್ಕಾಗಿ ಮತ್ತೆ ‘ಮುಂಗಾರು ಮಳೆ’ ನಿರ್ಮಾಪಕನ ಜೊತೆ ಕೈಜೋಡಿಸಿದ ಯೋಗರಾಜ್‌ ಭಟ್‌

    ಡಿ.12 ಅಭಿಮಾನಿಗಳ ಪಾಲಿಗೆ ಹಬ್ಬ. ನೆಚ್ಚಿನ ನಟ ತಲೈವಾಗೆ ಹುಟ್ಟುಹಬ್ಬದ ಸಂಭ್ರಮವಾಗಿದೆ. ಇದೀಗ ‘ಜೈಲರ್’ ನಿರ್ದೇಶಕ ನೆಲ್ಸನ್ ರಜನಿಕಾಂತ್, ಶಿವಣ್ಣ, ಜಾಕಿ ಶ್ರಾಫ್, ಮೋಹನ್ ಲಾಲ್ ಸೇರಿದಂತೆ ಅನೇಕರ ಪೋಸ್ಟರ್ ಅನ್ನು ಮತ್ತೊಮ್ಮೆ ಶೇರ್ ಮಾಡಿ ಕುತೂಹಲ ಮೂಡಿಸಿದ್ದಾರೆ. ಅದಷ್ಟೇ ಅಲ್ಲ, ಈ ಮೂಲಕ ಪಾರ್ಟ್‌ 2ನಲ್ಲಿ ಈ ಪಾತ್ರಗಳು ಕಂಟಿನ್ಯೂ ಆಗುವ ಸೂಚನೆ ಕೂಡ ನೀಡಿದ್ದಾರೆ.

     

    View this post on Instagram

     

    A post shared by Sun Pictures (@sunpictures)

    ಮೂಲಗಳ ಪ್ರಕಾರ, ಡಿ.5ರಂದು ‘ಜೈಲರ್ ಪಾರ್ಟ್ 2’ರ ಪ್ರೋಮೋ ನಡೆಯಲಿದ್ದು, ಡಿ.12ರಂದು ತಲೈವಾ ಬರ್ತ್‌ಡೇಗೆ ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡಕ್ಕಿದೆ ಎನ್ನಲಾಗಿದೆ. ಈ ಕುರಿತು ಚಿತ್ರತಂಡ ಅಧಿಕೃತ ಅಪ್‌ಡೇಟ್ ನೀಡುವವರೆಗೂ ಕಾದುನೋಡಬೇಕಿದೆ.

    ಸದ್ಯ ಮತ್ತೊಮ್ಮೆ ‘ಜೈಲರ್’ ಸಿನಿಮಾದ ಫೋಟೋಸ್ ಶೇರ್ ಮಾಡಿ ಹಿಂಟ್ ಪಾರ್ಟ್‌ 2 ಕುರಿತು ಕೊಟ್ಟಿರೋದ್ದಕ್ಕೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ‘ಜೈಲರ್ 2’ ಜೊತೆ ‘ಕೂಲಿ’ ಸಿನಿಮಾದ ಅಪ್‌ಡೇಟ್‌ಗೆ ಎದುರು ನೋಡುತ್ತಿದ್ದಾರೆ.

  • ಧನುಷ್, ಐಶ್ವರ್ಯಾಗೆ ಡಿವೋರ್ಸ್ ಮಂಜೂರು ಮಾಡಿದ ಕೋರ್ಟ್- 18 ವರ್ಷಗಳ ದಾಂಪತ್ಯ ಅಂತ್ಯ

    ಧನುಷ್, ಐಶ್ವರ್ಯಾಗೆ ಡಿವೋರ್ಸ್ ಮಂಜೂರು ಮಾಡಿದ ಕೋರ್ಟ್- 18 ವರ್ಷಗಳ ದಾಂಪತ್ಯ ಅಂತ್ಯ

    ಕಾಲಿವುಡ್ ನಟ ಧನುಷ್ (Dhanush) ಮತ್ತು ಐಶ್ವರ್ಯಾ ರಜನಿಕಾಂತ್‌ಗೆ (Aishwarya Rajanikanth) ಚೆನ್ನೈನ ಕೌಟುಂಬಿಕ ನ್ಯಾಯಾಲಯ ಡಿವೋರ್ಸ್ (Divorce) ಮಂಜೂರು ಮಾಡಿದೆ. ಈ ಮೂಲಕ 18 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಇದನ್ನೂ ಓದಿ:BBK 11: ನಿನ್ನದು ನರಿ ಕಣ್ಣೀರು- ಯುವರಾಣಿ ಮೋಕ್ಷಿತಾಗೆ ತಿವಿದ ಉಗ್ರಂ ಮಂಜು

    2004ರ ನ.18ರಂದು ಧನುಷ್ ಮತ್ತು ಐಶ್ವರ್ಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೆಲ ಮನಸ್ತಾಪಗಳಿಂದ 2022ರಲ್ಲಿ ಇಬ್ಬರೂ ದಾಂಪತ್ಯ ಜೀವನ ಅಂತ್ಯಗೊಳಿಸೋದಾಗಿ ಘೋಷಿಸಿದ್ದರು. ಬಳಿಕ ಕಾನೂನಾತ್ಮಕವಾಗಿ ಬೇರೆ ಆಗಲು ಕೋರ್ಟ್ ಮೊರೆ ಹೋಗಿದ್ದರು. ಈ ನ.21ರಂದು ಧನುಷ್ ಮತ್ತು ಐಶ್ವರ್ಯಾ ಕೌಟುಂಬಿಕ ನ್ಯಾಯಾಲಯದ ನ್ಯಾ.ಸುಭಾದೇವಿ ಮುಂದೆ ಹಾಜರಾಗಿದ್ದ ದಂಪತಿ, ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂದು ಡಿವೋರ್ಸ್ ಕುರಿತು ನಿರ್ಧಾರ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಧನುಷ್, ಐಶ್ವರ್ಯಾಗೆ ಚೆನ್ನೈನ ಕೌಟುಂಬಿಕ ನ್ಯಾಯಾಲಯ ಡಿವೋರ್ಸ್ ಮಂಜೂರು ಮಾಡಿದೆ.

    ರಜನಿಕಾಂತ್ ಪುತ್ರಿ ಮತ್ತು ಧನುಷ್ ಒಂದಾಗುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಫ್ಯಾನ್ಸ್‌ಗೆ ಈ ವಿಚಾರ ಬೇಸರವುಂಟು ಮಾಡಿದೆ. ಇದನ್ನೂ ಓದಿ:‘ಪುಷ್ಪ 2’ನಲ್ಲಿ ಸೊಂಟ ಬಳುಕಿಸಿದ ಶ್ರೀಲೀಲಾಗೆ ಸಂಭಾವನೆಯನ್ನೇ ಕೊಟ್ಟಿಲ್ವಾ?- ನಟಿ ಹೇಳೋದೇನು?

    ಅಂದಹಾಗೆ, 2004ರಲ್ಲಿ ಧನುಷ್ ಮತ್ತು ಐಶ್ವರ್ಯಾ ಪ್ರೀತಿಸಿ ಮದುವೆಯಾಗಿದ್ದರು. ಈ ಜೋಡಿಗೆ ಇಬ್ಬರೂ ಮಕ್ಕಳಿದ್ದಾರೆ.

  • ರತನ್ ಟಾಟಾ ನಿಧನಕ್ಕೆ ಕಂಬನಿ ಮಿಡಿದ ರಜನಿಕಾಂತ್

    ರತನ್ ಟಾಟಾ ನಿಧನಕ್ಕೆ ಕಂಬನಿ ಮಿಡಿದ ರಜನಿಕಾಂತ್

    ಭಾರತದ ಖ್ಯಾತ ಉದ್ಯಮಿ, ಕರುಣಾಮಯಿ, ಅಜಾತಶತ್ರು ಎನಿಸಿಕೊಂಡಿದ್ದ ರತನ್ ಟಾಟಾ ನಿಧನ ಸುದ್ದಿ ಎಲ್ಲರಿಗೂ ಶಾಕ್ ನೀಡಿದೆ. ಟಾಟಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದ ಅವರು ಇಂದು ನಮ್ಮ ಜೊತೆಯಿಲ್ಲ. ಇದಕ್ಕೆ ಚಿತ್ರರಂಗದವರು ಸಂತಾಪ ಸೂಚಿಸಿದ್ದಾರೆ. ಇನ್ನೂ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು ರತನ್ ಟಾಟಾ (Ratan Tata) ನಿಧನಕ್ಕೆ ಭಾವುಕವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ವಕೀಲ್ ಸಾಬ್ ಗೆಟಪ್‌ನಲ್ಲಿ ರಾಕಿ ಭಾಯ್- ಇದು ‘ಟಾಕ್ಸಿಕ್‌’ ಚಿತ್ರದಲ್ಲಿನ ಯಶ್‌ ಕ್ಯಾರೆಕ್ಟರ್?

    ತಮ್ಮ ದೂರದೃಷ್ಟಿ ಮತ್ತು ಉತ್ಸಾಹದಿಂದ ಭಾರತವನ್ನು ಜಾಗತಿಕ ಭೂಪಟದಲ್ಲಿ ಇರಿಸಿದ ಮಹಾನ್ ಐತಿಹಾಸಿಕ ಐಕಾನ್. ಸಾವಿರಾರು ಕೈಗಾರಿಕೋದ್ಯಮಿಗಳಿಗೆ ಸ್ಫೂರ್ತಿ ನೀಡಿದ ವ್ಯಕ್ತಿ. ಹಲವು ತಲೆಮಾರುಗಳಿಗೆ ಲಕ್ಷಾಂತರ ಉದ್ಯೋಗವನ್ನು ಸೃಷ್ಟಿಸಿದ ವ್ಯಕ್ತಿಯಾಗಿದ್ದರು. ಎಲ್ಲರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದರು. ಅವರಿಗೆ ನನ್ನ ನಮಸ್ಥಾರಗಳು. ಈ ಮಹಾನ್ ವ್ಯಕ್ತಿಯೊಂದಿಗೆ ಕಳೆದ ಪ್ರತಿಯೊಂದು ಕ್ಷಣವನ್ನು ಎಂದೆಂದಿಗೂ ಸ್ಮರಿಸುತ್ತೇನೆ. ಭಾರತದ ನಿಜವಾದ ಮಗ ಇನ್ನಿಲ್ಲ. ರೆಸ್ಟ್ ಇನ್ ಪೀಸ್ ಎಂದು ತಲೈವಾ ಭಾವುಕವಾಗಿ ಬರೆದುಕೊಂಡಿದ್ದಾರೆ.

    ಈ ಮೂಲಕ ರತನ್ ಟಾಟಾ ಜೊತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ. ಅವರ ನಿಧನ ತಲೈವಾಗೂ ಶಾಕ್ ಕೊಟ್ಟಿದೆ. ಹಾಗಾಗಿ ಉದ್ಯಮಿಯ ನಿಧನಕ್ಕೆ ತಲೈವಾ ಕಂಬನಿ ಮಿಡಿದಿದ್ದಾರೆ.

  • ‌’ವೆಟ್ಟೈಯಾನ್’ ಟ್ರೈಲರ್ ಔಟ್- ತಲೈವಾ, ಬಿಗ್ ಬಿ ಮುಖಾಮುಖಿ

    ‌’ವೆಟ್ಟೈಯಾನ್’ ಟ್ರೈಲರ್ ಔಟ್- ತಲೈವಾ, ಬಿಗ್ ಬಿ ಮುಖಾಮುಖಿ

    ಜನಿಕಾಂತ್ (Rajanikanth) ನಟನೆಯ ‌’ವೆಟ್ಟೈಯಾನ್’ (Vettaiyan) ಟ್ರೈಲರ್ ರಿಲೀಸ್ ಆಗಿದೆ. ದಿಗ್ಗಜರಾದ ರಜನಿಕಾಂತ್, ಬಿಗ್ ಬಿ ಸಂಘರ್ಷ ರೋಚಕವಾಗಿದೆ. ‌ತಲೈವಾ ಖಡಕ್‌ ಆಗಿ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:‘ಪ್ರೇಮಲು’ ಬ್ಯೂಟಿಗೆ ಜಾಕ್‌ಪಾಟ್- ‘ದಳಪತಿ 69’ ಸಿನಿಮಾದಲ್ಲಿ ಮಮಿತಾ ಬೈಜು

    ರಜನಿಕಾಂತ್ ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಜೀವ ತುಂಬಿದ್ದಾರೆ. ಬಿಗ್ ಬಿ ನ್ಯಾಯಾಧೀಶರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಟ್ರೈಲರ್ ನೋಡಿದಾಗ ‘ವೆಟ್ಟೈಯಾನ್’ ಇಬ್ಬರು ಮಹಾನ್ ನಟರ ಜುಗಲ್‌ಬಂದಿ ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ. ಈ ಸಿನಿಮಾ ಪೊಲೀಸ್ ಹಾಗೂ ಕಾನೂನಿನ ನಡುವಿನ ಸಮರ ಎಂಬುದರ ಸುಳಿವು ನೀಡಿದ್ದಾರೆ.

    ಮಹಿಳೆಯ ವಿರುದ್ಧ ಎಸಗಿದ ಅಪರಾಧಕ್ಕೆ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರ ಮೇಲೆ ಒತ್ತಡ ಹಾಕಲಾಗುತ್ತದೆ. ಈ ವೇಳೆ ರಜನಿಕಾಂತ್ ಅವರೆಲ್ಲರನ್ನೂ ಮೂರು ದಿನದಲ್ಲಿ ಎನ್‌ಕೌಂಟರ್ ಮಾಡುತ್ತೇನೆಂದು ಮಾತು ಕೊಡುತ್ತಾರೆ. ಅನ್ಯಾಯದ ವಿರುದ್ಧ ಮತ್ತೊಂದು ಅನ್ಯಾಯ ಆಗಬಾರದು ಎಂದು ಬಿಗ್ ಬಿ ಹೇಳುವ ಡೈಲಾಗ್ ಕುತೂಹಲ ಮೂಡಿಸಿದೆ. ಇದು ರಜನಿಕಾಂತ್ ಹಾಗೂ ಬಿಗ್ ಬಿ (Amitabh Bachchan) ನಡುವಿನ ಸಂಘರ್ಷಕ್ಕೆ ಮುನ್ನುಡಿ ಬರೆದಿದೆ.

    ಅಂದಹಾಗೆ, ವೆಟ್ಟೈಯಾನ್ ಸಿನಿಮಾ ಸದ್ಯದಲ್ಲೇ ರಿಲೀಸ್‌ ಆಗುತ್ತಿದೆ. ತಲೈವಾ, ಬಿಗ್ ಬಿ ಜೊತೆ ರಾಣಾ ದಗ್ಗುಬಾಟಿ, ರಿತಿಕಾ ಸಿಂಗ್, ಮಂಜು ವಾರಿಯರ್ ಸೇರಿದಂತೆ ಅನೇಕರು ನಟಿಸಿದ್ದಾರೆ.

  • ತಲೈವಾ ಆರೋಗ್ಯದಲ್ಲಿ ಏರುಪೇರು- ಹೆಲ್ತ್ ಅಪ್‌ಡೇಟ್ ತಿಳಿಸಿದ ಪತ್ನಿ ಲತಾ

    ತಲೈವಾ ಆರೋಗ್ಯದಲ್ಲಿ ಏರುಪೇರು- ಹೆಲ್ತ್ ಅಪ್‌ಡೇಟ್ ತಿಳಿಸಿದ ಪತ್ನಿ ಲತಾ

    ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಆರೋಗ್ಯದಲ್ಲಿ ಏರುಪೇರಾಗಿದ್ದು, ಚೆನ್ನೈನ ಖಾಸಗಿ ಆಸ್ಪತ್ರೆಗೆ ತಲೈವಾರನ್ನು ದಾಖಲಿಸಲಾಗಿದೆ. ನಟನ ಅನಾರೋಗ್ಯದ ಸುದ್ದಿ ಕೇಳಿ ಆತಂಕದಲ್ಲಿರುವ ಫ್ಯಾನ್ಸ್‌ಗೆ ರಜನಿಕಾಂತ್ ಪತ್ನಿ ಹೆಲ್ತ್ ಅಪ್‌ಡೇಟ್ ತಿಳಿಸಿದ್ದಾರೆ. ಆತಂಕಪಡಬೇಡಿ, ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

    ಸೋಮವಾರ (ಸೆ.30) ತಡರಾತ್ರಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಜನಿಕಾಂತ್‌ರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಸೂಕ್ತ ಚಿಕಿತ್ಸೆ ಕೂಡ ನೀಡಲಾಗಿದೆ. ಇದೀಗ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಇಂದು ಸಂಜೆ ಅಥವಾ ನಾಳೆ ಅವರು ಡಿಸ್ಚಾರ್ಜ್ ಆಗಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ ರಚಿತಾ ರಾಮ್- ಫ್ಯಾನ್ಸ್ ಬೇಸರ

    73 ವರ್ಷದ ತಲೈವಾ ಅನಾರೋಗ್ಯದ ಸುದ್ದಿ ಕೇಳಿ ಆತಂಕಕ್ಕೆ ಒಳಗಾಗಿದ್ದ ಅಭಿಮಾನಿಗಳಿಗೆ ರಜನಿಕಾಂತ್ ಪತ್ನಿ ಲತಾ (Latha) ಸ್ಪಷ್ಟನೆ ನೀಡಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ. ರಜನಿಕಾಂತ್ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಇದೀಗ ಈ ಸುದ್ದಿ ಕೇಳಿ ಫ್ಯಾನ್ಸ್ ನಿರಾಳವಾಗಿದ್ದಾರೆ. ಆದಷ್ಟು ಬೇಗ ತಲೈವಾ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

    ಅಂದಹಾಗೆ, ಇದೇ ಅಕ್ಟೋಬರ್ 10ರಂದು ರಜನಿಕಾಂತ್ ನಟನೆಯ ‌’ವೆಟ್ಟೈಯಾನ್’ (Vettaiyan) ಸಿನಿಮಾ ರಿಲೀಸ್ ಆಗಲಿದೆ.

  • ಶೂಟಿಂಗ್‌ ಬಿಡುವಿನಲ್ಲಿ ರಜನಿಕಾಂತ್‌ ನೆಲದ ಮೇಲೆ ಮಲಗುತ್ತಿದ್ದರು: ತಲೈವಾ ಬಗ್ಗೆ ಬಿಗ್‌ಬಿ ಮೆಚ್ಚುಗೆ

    ಶೂಟಿಂಗ್‌ ಬಿಡುವಿನಲ್ಲಿ ರಜನಿಕಾಂತ್‌ ನೆಲದ ಮೇಲೆ ಮಲಗುತ್ತಿದ್ದರು: ತಲೈವಾ ಬಗ್ಗೆ ಬಿಗ್‌ಬಿ ಮೆಚ್ಚುಗೆ

    ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರು ರಜನಿಕಾಂತ್ ಅವರ ಸರಳತೆಯನ್ನು ಹಾಡಿಹೊಗಳಿದ್ದಾರೆ. ಈ ಹಿಂದೆ ‌’ಹಮ್’ (Hum) ಸಿನಿಮಾದ ಶೂಟಿಂಗ್‌ ಬಿಡುವಿನ ಸಮಯದಲ್ಲಿ ರಜನಿಕಾಂತ್ ಅವರು (Rajanikanth) ನೆಲದ ಮೇಲೆ ವಿಶ್ರಾಂತಿ ಪಡೆಯುತ್ತಿದ್ದರು ಎಂದು ಅವರ ಸರಳತೆಯ ಬಗ್ಗೆ ಬಿಗ್‌ಬಿ ಬಣ್ಣಿಸಿದ್ದಾರೆ. ಇದನ್ನೂ ಓದಿ:ಗಾಯಕಿ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಾರಾ ಜಯಂ ರವಿ?- ಸ್ಪಷ್ಟನೆ ನೀಡಿದ ನಟ

    ‘ವೆಟ್ಟೈಯಾನ್’ ಸಿನಿಮಾಗಾಗಿ 33 ವರ್ಷಗಳ ನಂತರ ರಜನಿಕಾಂತ್‌ ಮತ್ತು ತಲೈವಾ ಒಂದಾಗಿದ್ದಾರೆ.  ಹಾಗಾಗಿ ಈ ಚಿತ್ರದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಇನ್ನೂ ಇತ್ತೀಚೆಗೆ ನಡೆದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ರಜನಿಕಾಂತ್, ಮಂಜು ವಾರಿಯರ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಆದರೆ ಬಿಗ್‌ಬಿ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಆದರೆ ತಲೈವಾ ಕುರಿತು ಸೀಕ್ರೆಟ್‌ವೊಂದನ್ನು ರಿವೀಲ್‌ ಮಾಡಿರುವ ವಿಡಿಯೋವೊಂದನ್ನು ಚಿತ್ರತಂಡಕ್ಕೆ ಕಳುಹಿಸಿ ‘ಹಮ್‌’ ಸಿನಿಮಾ ಚಿತ್ರೀಕರಣದ ಬಗ್ಗೆ ನಟ ಸ್ಮರಿಸಿದ್ದಾರೆ.

    1991ರಲ್ಲಿ ತೆರೆಕಂಡ ‘ಹಮ್’ ಸಿನಿಮಾದಲ್ಲಿ ನಾನು ಮತ್ತು ತಲೈವಾ ಜೊತೆಯಾಗಿ ನಟಿಸಿದ್ದೇವೆ. ಆಗ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್‌ ಸಿಕ್ಕಾಗ ನಾನು ನನ್ನ ಎಸಿ ಇರುವ ವಾಹನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆ, ರಜನಿಕಾಂತ್ ಅವರು ನೆಲದ ಮೇಲೆ ಮಲಗುತ್ತಿದ್ದರು. ಆಗ ಅವರು ತುಂಬಾ ಸಿಂಪಲ್ ಆಗಿರೋದನ್ನು ನೋಡಿ, ನಾನು ವಾಹನದಿಂದ ಹೊರಗೆ ಬಂದು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದೆ ಎಂದು ಬಿಗ್‌ಬಿ ವಿವರಿಸಿದ್ದಾರೆ. ‘ವೆಟ್ಟೈಯಾನ್‌’ ಸಿನಿಮಾ ಮೂಲಕ ಮತ್ತೊಮ್ಮೆ ತಲೈವಾ ಜೊತೆ ನಟಿಸಿರೋದು ಖುಷಿಯಿದೆ ಎಂದು ಬಿಗ್‌ಬಿ ಮಾತನಾಡಿದ್ದಾರೆ.

    ಅಂದಹಾಗೆ, ‌’ವೆಟ್ಟೈಯಾನ್’ ಸಿನಿಮಾ ಇದೇ ಅಕ್ಟೋಬರ್ 10ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ರಜನಿಕಾಂತ್, ಬಿಗ್‌ಬಿ ಜೊತೆ ಮಂಜು ವಾರಿಯರ್, ರಿತಿಕಾ ಸಿಂಗ್, ರಾಣಾ ದಗ್ಗುಭಾಟಿ ಸೇರಿದಂತೆ ಅನೇಕರು ನಟಿಸಿದ್ದಾರೆ.

  • ರಜನಿಕಾಂತ್ ಚಿತ್ರದಲ್ಲಿ ವಿಲನ್ ರೋಲ್ ಮಾಡ್ತಿಲ್ಲ: ಪಾತ್ರದ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ಟ ಉಪೇಂದ್ರ

    ರಜನಿಕಾಂತ್ ಚಿತ್ರದಲ್ಲಿ ವಿಲನ್ ರೋಲ್ ಮಾಡ್ತಿಲ್ಲ: ಪಾತ್ರದ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ಟ ಉಪೇಂದ್ರ

    ರಿಯಲ್ ಸ್ಟಾರ್ ಉಪೇಂದ್ರ (Upendra) ಅವರಿಗೆ ನಟನೆ ಮತ್ತು ಡೈರೆಕ್ಷನ್‌ಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ಸ್ ಕ್ರೇಜ್ ಇದೆ. ಇನ್ನೂ ಕನ್ನಡದ ಸಾಲು ಸಾಲು ಸಿನಿಮಾಗಳ ನಡುವೆ ತಲೈವಾ ಜೊತೆ ‘ಕೂಲಿ’ (Coolie) ಚಿತ್ರ ಕೂಡ ಮಾಡ್ತಿದ್ದಾರೆ. ಈಗ ‘ಯುಐ’ (UI Film) ಸುದ್ದಿಗೋಷ್ಠಿಯಲ್ಲಿ ಕೂಲಿ ಸಿನಿಮಾದ ಬಗ್ಗೆ ಇಂಟರೆಸ್ಟಿಂಗ್ ವಿಚಾರವನ್ನು ನಟ ರಿವೀಲ್ ಮಾಡಿದ್ದಾರೆ.

    ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿ ಚಿತ್ರದಲ್ಲಿ ರಜನಿಕಾಂತ್ ಸರ್ (Rajanikanth) ಜೊತೆ ಸಿನಿಮಾ ಮಾಡುತ್ತಿದ್ದೇನೆ. ಚಿತ್ರದಲ್ಲಿ ಒಂದೊಳ್ಳೆಯ ಪಾತ್ರ ಮಾಡ್ತಿದ್ದೀನಿ, ವಿಲನ್ ರೋಲ್ ಅಲ್ಲ ಎಂದು ಉಪೇಂದ್ರ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಇದನ್ನೂ ಓದಿ:ಉಪೇಂದ್ರ ಹುಟ್ಟುಹಬ್ಬ: ‘ಯುಐ’ ಚಿತ್ರದ ರಿಲೀಸ್ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಚಿತ್ರತಂಡ

    ಈ ಹಿಂದೆ ರಜನಿಯ ‘ಜೈಲರ್’ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿ ಭಾರೀ ಗಮನ ಸೆಳೆದಿದ್ದರು. ಅದೇ ರೀತಿ ಇನ್ನೋರ್ವ ಕನ್ನಡದ ಸ್ಟಾರ್ ನಟ ಉಪೇಂದ್ರ ಕೂಡ ನಟಿಸುತ್ತಿದ್ದಾರೆ. ಈಗಾಗ್ಲೇ ಕಾಲಿವುಡ್-ಟಾಲಿವುಡ್‌ಗಳಲ್ಲಿ ಚಿರಪರಿಚಿತರಾಗಿರುವ ಉಪೇಂದ್ರರನ್ನು ಎರಡನೇ ಬಹುಮುಖ್ಯ ಪಾತ್ರವನ್ನಾಗಿ ಡಿಸೈನ್ ಮಾಡಲಾಗಿದೆ. ತಲೈವಾ ಮತ್ತು ಉಪೇಂದ್ರ ಕಾಂಬಿನೇಷನ್ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.

  • ಓಣಂ ಹಬ್ಬದಂದು ‌’ವೆಟ್ಟೈಯಾನ್’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ತಲೈವಾ

    ಓಣಂ ಹಬ್ಬದಂದು ‌’ವೆಟ್ಟೈಯಾನ್’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ತಲೈವಾ

    ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ಓಣಂ ಹಬ್ಬದಂದು (ಸೆ.15) ‘ಮನಸಿಲಾಯೋ’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ತಲೈವಾ ಮಾಡಿರುವ ಡ್ಯಾನ್ಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಮೊದಲ ಬಾರಿಗೆ ಮಗನ ಮುಖ ರಿವೀಲ್ ಮಾಡಿದ ‘ಹೆಬ್ಬುಲಿ’ ನಟಿ ಅಮಲಾ

    ಲೋಕೇಶ್ ಕನಕರಾಜ್ ನಿರ್ದೇಶನದ ‘ಕೂಲಿ’ (Coolie) ಸಿನಿಮಾ ಸೆಟ್‌ನಲ್ಲಿ ತಾವೇ ನಟಿಸಿರುವ ‘ವೆಟ್ಟೈಯಾನ್’ ಸಿನಿಮಾದ ಹಾಡಿಗೆ ಚಿತ್ರತಂಡದ ಜೊತೆ ಹೆಜ್ಜೆ ಹಾಕಿ ರಜನಿಕಾಂತ್ ಸಂಭ್ರಮಿಸಿದ್ದಾರೆ. ಈ ಸ್ಪೆಷಲ್ ವಿಡಿಯೋ ಮೂಲಕ ಫ್ಯಾನ್ಸ್‌ಗೆ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ವಿಜಯ್ ಕೊನೆಯ ಸಿನಿಮಾದಲ್ಲಿ ಬಾಬಿ ಡಿಯೋಲ್ ವಿಲನ್

     

    View this post on Instagram

     

    A post shared by Lyca Productions (@lycaproductions)

    ಅಂದಹಾಗೆ, ಬಹುನಿರೀಕ್ಷಿತ ಸಿನಿಮಾ ‘ವೆಟ್ಟೈಯಾನ್’ ಬಿಡುಗಡೆ ಸಜ್ಜಾಗಿದೆ. ಅಕ್ಟೋಬರ್ 10ಕ್ಕೆ ಪಂಚ ಭಾಷೆಯಲ್ಲಿ ಚಿತ್ರ ತೆರೆಗೆ ಬರಲಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ವೆಟ್ಟೈಯಾನ್ ಬಳಗ ಮೊದಲ ಹಾಡನ್ನು ಇತ್ತೀಚೆಗೆ ರಿಲೀಸ್ ಮಾಡಿತ್ತು.

    ‘ವೆಟ್ಟೈಯಾನ್’ ಸಿನಿಮಾದ ‘ಮನಸಿಲಾಯೋ’ ಎಂಬ ಸಾಂಗ್ ಸಖತ್ ಸದ್ದು ಮಾಡುತ್ತಿದೆ. ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಹಾಡು ರಿಲೀಸ್ ಮಾಡಲಾಗಿದ್ದು, ಕಲರ್‌ಫುಲ್ ಸೆಟ್ ನಲ್ಲಿ ತಲೈವ ಜೊತೆ ಮಂಜು ವಾರಿಯರ್ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದರು. ರಾಕ್ ಸ್ಟಾರ್ ಅನಿರುದ್ಧ ರವಿಚಂದರ್ ಹಾಡಿಗೆ ಟ್ಯೂನ್ ಮಾಡಿರೋದು ವಿಶೇಷ.

    ರಜನಿಕಾಂತ್ ಹಾಗೂ ಅನಿರುದ್ಧ ಕಾಂಬೋದಲ್ಲಿ ಬಂದ ಹಾಡುಗಳು ಹಿಟ್ ಲಿಸ್ಟ್‌ ಸೇರಿವೆ. ಈ ಹಿಂದೆ ಪೆಟ್ಟಾ, ದರ್ಬಾರ್, ಜೈಲರ್ ಬಳಿಕ ಈ ಜೋಡಿ ವೆಟ್ಟೈಯಾನ್‌ಗಾಗಿ ಒಂದಾಗಿದೆ. ಮನಸಿಲಾಯೋ ಸಿಂಗಿಂಗ್ ಸಖತ್ ಸೌಂಡ್ ಮಾಡುತ್ತಿದ್ದು, ಟ್ರೆಂಡಿಂಗ್‌ನಲ್ಲಿದೆ.

    ಸೂರ್ಯ ನಟಿಸಿದ ‘ಜೈ ಭೀಮ್’ ಸಿನಿಮಾ ನಿರ್ದೇಶಿಸಿದ್ದ ಟಿ.ಜೆ. ಜ್ಞಾನವೇಲ್ `ವೆಟ್ಟೈಯಾನ್’ಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗೋದಿಕ್ಕೆ ಮತ್ತೊಂದು ಕಾರಣ ತಲೈವಾ ಹಾಗೂ ಬಿಗ್ ಬಿ ಸಂಗಮ. ಭಾರತೀಯ ಚಿತ್ರರಂಗದ ದಿಗ್ಗಜರಾದ ಬಿಗ್ ಬಿ ಹಾಗೂ ರಜನಿಕಾಂತ್ ವೆಟ್ಟೈಯಾನ್ ಸಿನಿಮಾ ಮೂಲಕ ಮೂರು ದಶಕದ ಬಳಿಕ ಮತ್ತೊಮ್ಮೆ ಒಟ್ಟಿಗೆ ನಟಿಸಿದ್ದಾರೆ. ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಈ ಅಭೂತಪೂರ್ವ ಸಮಾಗಮಕ್ಕೆ ವೇದಿಕೆ ನಿರ್ಮಿಸಿದೆ.

    ಈ ಚಿತ್ರದಲ್ಲಿ ರಜನಿಕಾಂತ್, ಅಮಿತಾಭ್ ಜೊತೆ ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್, ರಿತಿಕಾ ಸಿಂಗ್, ವಿಜಯನ್, ಜಿಎಂ ಸುಂದರ್, ರೋಹಿಣಿ, ಅಭಿರಾಮಿ, ರಾವ್ ರಮೇಶ್, ರಮೇಶ್ ತಿಲಕ್, ರಕ್ಷಣ್ ಸೇರಿದಂತೆ ಇನ್ನೂ ಅನೇಕ ಪ್ರಮುಖ ನಟರು ನಟಿಸಿದ್ದಾರೆ.

  • ‌’ವೆಟ್ಟೈಯಾನ್’ ಚಿತ್ರದ ಸಾಂಗ್ ರಿಲೀಸ್- ಮಂಜು ವಾರಿಯರ್ ಜೊತೆ ತಲೈವಾ ಸಖತ್ ಸ್ಟೆಪ್ಸ್

    ‌’ವೆಟ್ಟೈಯಾನ್’ ಚಿತ್ರದ ಸಾಂಗ್ ರಿಲೀಸ್- ಮಂಜು ವಾರಿಯರ್ ಜೊತೆ ತಲೈವಾ ಸಖತ್ ಸ್ಟೆಪ್ಸ್

    ಜನಿಕಾಂತ್ (Rajanikanth) ನಟನೆಯ ‘ವೆಟ್ಟೈಯಾನ್’ (Vettaiyan) ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ನಟಿ ಮಂಜು ವಾರಿಯರ್ ಜೊತೆ ಸಖತ್ ಆಗಿ ತಲೈವಾ ಹೆಜ್ಜೆ ಹಾಕಿದ್ದಾರೆ. ‘ಜೈಲರ್’ ಸಿನಿಮಾದ ಬಳಿಕ ಮತ್ತೊಂದು ಡ್ಯಾನ್ಸ್ ನಂಬರ್ ಹಾಡಿನಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

    ‘ವೆಟ್ಟೈಯಾನ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದರ ನಡುವೆ ಕಲರ್‌ಫುಲ್ ಹಾಡಿನಲ್ಲಿ ತಲೈವಾ ಮಿಂಚಿದ್ದಾರೆ. 73ನೇ ವಯಸ್ಸಿನಲ್ಲೂ ಡ್ಯಾನ್ಸ್‌ನಲ್ಲಿ ಹಿಂದೆ ಬೀಳದೇ ರಜನಿಕಾಂತ್ ಅವರು ಮಂಜು ವಾರಿಯರ್ ಜೊತೆ ಸಖತ್‌ ಆಗಿಯೇ ಹೆಜ್ಜೆ ಹಾಕಿದ್ದಾರೆ. ‘ಮನಸಿಲಾಯೋ’ ಎಂಬ ಹಾಡಿನಲ್ಲಿ ತಮಿಳು ಮತ್ತು ಮಲಯಾಳಂ ಸಾಹಿತ್ಯ ಒಳಗೊಂಡಿದೆ. ಈ ಸಾಂಗ್‌ ಫ್ಯಾನ್ಸ್‌ಗೆ ಇಷ್ಟವಾಗಿದೆ.

     

    View this post on Instagram

     

    A post shared by Anirudh (@anirudhofficial)

    ತಲೈವಾ ಮತ್ತು ಮಂಜು ವಾರಿಯರ್ ಜೊತೆ ಗೆಸ್ಟ್ ಆಗಿ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಕೂಡ ಹೆಜ್ಜೆ ಹಾಕಿದ್ದಾರೆ. ಇತ್ತೀಚೆಗೆ ಅವರು ಚಿತ್ರಕ್ಕೆ ಕಂಪೋಸ್‌ ಮಾಡಿದ ಹಾಡುಗೆಳೆಲ್ಲಾ ಹಿಟ್‌ ಆಗಿದೆ. ಈ ಹಾಡಿಗೂ ಕೂಡ ಈಗ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಇದನ್ನೂ ಓದಿ:ಒಂದು ಅವಕಾಶ ಕಳೆದು ಹೋದರೆ, ನೂರಾರು ಅವಕಾಶಗಳು ಬರುತ್ತವೆ: ಕಾಸ್ಟಿಂಗ್‌ ಕೌಚ್ ಬಗ್ಗೆ ಸನ್ನಿ ಲಿಯೋನ್ ಪ್ರತಿಕ್ರಿಯೆ

    ಇನ್ನೂ ‘ವೆಟ್ಟೈಯಾನ್’ ಚಿತ್ರ ಅಕ್ಟೋಬರ್ 10ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ಟಿ.ಜೆ ಜ್ಞಾನ್‌ವೇಲ್ ನಿರ್ದೇಶನ ಮಾಡಿದ್ದಾರೆ. ‘ಜೈಲರ್’ ಸಿನಿಮಾದಂತೆ ‘ವೆಟ್ಟೈಯಾನ್’ ಕೂಡ ಸಕ್ಸಸ್ ಲಿಸ್ಟ್‌ಗೆ ಸೇರುತ್ತಾ? ಕಾದುನೋಡಬೇಕಿದೆ. ಚಿತ್ರದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

  • ರಜನಿಕಾಂತ್‌ ಜೊತೆ ‌’ಜೈಲರ್‌ 2′ ಬರೋದು ಫಿಕ್ಸ್‌ ಎಂದ ನಿರ್ದೇಶಕ ನೆಲ್ಸನ್

    ರಜನಿಕಾಂತ್‌ ಜೊತೆ ‌’ಜೈಲರ್‌ 2′ ಬರೋದು ಫಿಕ್ಸ್‌ ಎಂದ ನಿರ್ದೇಶಕ ನೆಲ್ಸನ್

    ಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಯಶಸ್ವಿಯಾದ್ಮೇಲೆ ಇದರ ಸೀಕ್ವೆಲ್ ಅಪ್‌ಡೇಟ್‌ಗಾಗಿ ಎದುರು ನೋಡುತ್ತಿದ್ದ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ‘ಜೈಲರ್ 2’ (Jailer 2) ಬರೋದು ಫಿಕ್ಸ್ ಎಂದು ಡೈರೆಕ್ಟರ್ ನೆಲ್ಸನ್ ಅಧಿಕೃತ ಅಪ್‌ಡೇಟ್‌ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಝೈದ್ ಖಾನ್‌ಗೆ ಮಲೈಕಾ ವಸುಪಾಲ್ ಹೀರೋಯಿನ್

    ಕಾಲಿವುಡ್‌ನಲ್ಲಿ ಕಳೆದ ವರ್ಷ ಸಂಚಲನ ಮೂಡಿಸಿದ ಸಿನಿಮಾ ಅಂದರೆ ಜೈಲರ್. ಈ ಸಿನಿಮಾದ ಸಕ್ಸಸ್ ಬಳಿಕ ಇದರ ಸೀಕ್ವೆಲ್ ಬರಲಿ ಎಂಬುದು ಅದೆಷ್ಟೋ ಅಭಿಮಾನಿಗಳ ಆಸೆಯಾಗಿತ್ತು. ಆದರೆ ಚಿತ್ರತಂಡ ಯಾವುದೇ ಸ್ಪಷ್ಟನೆ ನೀಡದೆ ಸೈಲೆಂಟ್ ಆಗಿತ್ತು. ಈಗ ‘ಜೈಲರ್’ ಪಾರ್ಟ್ 2 ಬರಲಿದೆ ಎಂದು ಅಧಿಕೃತವಾಗಿ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ (Nelson Dilipkumar) ಹೇಳಿದ್ದಾರೆ. ಅದಷ್ಟೇ ಅಲ್ಲ, ಇದರ ಮುಂದುವರೆದ ಭಾಗದಲ್ಲಿ ರಜನಿಕಾಂತ್ (Rajanikanth) ಅವರೇ ಹೀರೋ ಆಗಿ ನಟಿಸಲಿದ್ದಾರೆ ಎಂದಿದ್ದಾರೆ.

    ಕಥೆ ಕೂಡ ಸಿದ್ಧವಾಗಿದ್ದು, ‌’ವೆಟ್ಟೈಯಾನ್’ ಸಿನಿಮಾದ ರಿಲೀಸ್‌ಗೂ ಮುನ್ನವೇ ‘ಜೈಲರ್ 2’ ಸಿನಿಮಾದ ಅಧಿಕೃತ ಘೋಷಣೆ ಆಗಲಿದೆ ಎಂದಿದ್ದಾರೆ. ತೆರೆಮರೆಯಲ್ಲಿ ಈ ಸಿನಿಮಾದ ಕೆಲಸ ನಡೆಯುತ್ತಿದೆ ಎಂದು ನಿರ್ದೇಶಕ ನೆಲ್ಸನ್‌ ಮಾಹಿತಿ ನೀಡಿದ್ದಾರೆ.

    ಅಂದಹಾಗೆ, ‘ಜೈಲರ್’ (Jailer) ಸಿನಿಮಾದಲ್ಲಿ ರಜನಿಕಾಂತ್ ಜೊತೆ ರಮ್ಯಾ ಕೃಷ್ಣ, ತಮನ್ನಾ ಭಾಟಿಯಾ, ಯೋಗಿ ಬಾಬು, ಕನ್ನಡದ ನಟ ಶಿವರಾಜ್‌ಕುಮಾರ್ (Shivarajkumar), ಮೋಹನ್‌ಲಾಲ್, ಕಿಶೋರ್, ಸುನೀಲ್ ಸೇರಿದಂತೆ ಅನೇಕರು ನಟಿಸಿದ್ದರು. ಕಳೆದ ವರ್ಷ ಆ.10ರಂದು ಜೈಲರ್ ಬಹುಭಾಷೆಗಳಲ್ಲಿ ರಿಲೀಸ್ ಆಗಿತ್ತು.