Tag: rajamouli

  • ಮುತ್ತಿನ ನಗರಿಯಲ್ಲಿ ರಾಜಮೌಳಿ ಜೊತೆ ಕೆಜಿಎಫ್

    ಮುತ್ತಿನ ನಗರಿಯಲ್ಲಿ ರಾಜಮೌಳಿ ಜೊತೆ ಕೆಜಿಎಫ್

    – ಗಡಿದಾಟಿದ ರಾಕಿಯ ಖಡಕ್ ಸದ್ದು

    ಬೆಂಗಳೂರು: ಕನ್ನಡದ ಕೆಜಿಎಫ್ ಕರುನಾಡ ಗಡಿ ದಾಟಿದ್ದು, ಎಲ್ಲಡೆ ರಾಕಿಯ ಗುಂಗು ಕಾಣುತ್ತಿದೆ. ಕೆಜಿಎಫ್ ಚಿತ್ರದ ವಿಶೇಷ ಕಾರ್ಯಕ್ರಮವೊಂದನ್ನು ಡಿಸೆಂಬರ್ 9ರಂದು ಹೈದರಾಬಾದ್ ನಲ್ಲಿ ನಡೆಯಲಿದೆ. ಈ ಸಂಬಂಧ ಯಶ್ ತಮ್ಮ ಫೇಸ್ ಬುಕ್ ಪೇಜಿನಲ್ಲಿ ಬರೆದುಕೊಂಡಿದ್ದಾರೆ.

    ಸಿನಿಮಾ ರಿಲೀಸ್ ಮುನ್ನ ಟಾಲಿವುಡ್ ಮತ್ತು ಬಾಲಿವುಡ್ ಅಂಗಳದಲ್ಲಿ ದೊಡ್ಡ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾರೆ. ಅದರಂತೆ ಕೆಜಿಎಫ್ ಚಿತ್ರತಂಡ ಹೈದರಾಬಾದ್ ನಲ್ಲಿ ಸಿನಿಮಾದ ಇವೆಂಟ್ ಏರ್ಪಡಿಸಿದೆ. ಹೈದರಾಬಾದ್ ನಗರದ ಜ್ಯೂಬ್ಲಿ ಹಿಲ್ಸ್, ಜೆಆರ್‍ಸಿ ಕನ್ವೆಂನಷನ್ ನಲ್ಲಿ ಸಂಜೆ 6.30ಕ್ಕೆ ಬಾಹುಬಲಿ ನಿರ್ದೇಶಕ ರಾಜಮೌಳಿ ಅವರ ಜೊತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

    ಮಂಗಳವಾರ ಸಂಜೆ ‘ಸಲಾಮ್ ರಾಕಿ ಭಾಯ್’ ಹಾಡಿನ ಲಿರಿಕಲ್ ವಿಡಿಯೋವನ್ನು 5 ಭಾಷೆಗಳಲ್ಲಿಯೂ ರಿಲೀಸ್ ಆಗಿತ್ತು. ಬುಧವಾರ ಚಿತ್ರದ ಎರಡನೇ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿಮಾ ಭರವಸೆಯನ್ನು ಹೆಚ್ಚಿಸಿದೆ.

    ಕೋಲಾರದ ಕೆಜಿಎಫ್ ನಲ್ಲಿ ಹುಟ್ಟುವ ಮಗು ಮುಂಬೈನಲ್ಲಿ ತನ್ನ ಹೆಜ್ಜೆಯನ್ನು ಮೂಡಿಸುತ್ತಾನೆ. ನೀನು ಹೇಗೆ ಬಾಳ್ತಿಯಾ ನನಗೆ ಗೊತ್ತಿಲ್ಲ. ಆದ್ರೆ ಸಾಯುವ ಮುನ್ನ ನೀನೊಬ್ಬ ಶ್ರೀಮಂತ, ಅತ್ಯಂತ ಶಕ್ತಿಯುಳ್ಳವನಾಗಿರಬೇಕು ಎಂದು ಮಗನಿಂದ ಮಾತು ಪಡೆದುಕೊಳ್ಳುವ ತಾಯಿ. ಮುಂಬೈ ಸೇರಿದ ಮೇಲೆ ಬದಲಾಗುವ ಬದುಕು. ಮತ್ತೆ ಕೋಲಾರ ಸೇರುವ ಹುಡುಗ. ಹೀಗೆ ಕಥೆಯ ಒಂದೊಂದು ಎಳೆಯನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ. ಅದೇ ರೀತಿಯಲ್ಲಿ ಇತರೆ ಕಲಾವಿದರ ಪಾತ್ರವನ್ನು ಇಲ್ಲಿ ಪರಿಚಯಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜಮೌಳಿ ಚಿತ್ರದಲ್ಲಿ ಯಶ್ ವಿಲನ್ ಪಾತ್ರ: ಸ್ಟ್ರೇಟ್ ಫಾರ್ವರ್ಡ್ ಉತ್ತರ ಕೊಟ್ಟ ಯಶ್

    ರಾಜಮೌಳಿ ಚಿತ್ರದಲ್ಲಿ ಯಶ್ ವಿಲನ್ ಪಾತ್ರ: ಸ್ಟ್ರೇಟ್ ಫಾರ್ವರ್ಡ್ ಉತ್ತರ ಕೊಟ್ಟ ಯಶ್

    ಬೆಂಗಳೂರು: ಸ್ಟಾರ್ ನಿರ್ದೇಶಕ ಎಸ್.ಎಸ್ ರಾಜಮೌಳಿ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿತ್ತು. ಸದ್ಯ ಈಗ ಯಶ್ ಸ್ವತಃ ಈ ವಿಷಯದ ಕುರಿತು ಸ್ಪಷ್ಟನೆ ನೀಡಿದ್ದಾರೆ.

    ರಾಜಮೌಳಿ ನಿರ್ದೇಶಿಸುತ್ತಿರುವ ಮಲ್ಟಿ ಸ್ಟಾರರ್ ‘ಆರ್‍ಆರ್‍ಆರ್’ ಚಿತ್ರದಲ್ಲಿ ಯಶ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಗಾಸಿಪ್ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಈಗ ಸ್ವತಃ ಯಶ್ ತಮ್ಮ ಫೇಸ್‍ಬುಕ್‍ನಲ್ಲಿ ಈ ಕುರಿತು ಸ್ಪಷ್ಟಪಡಿಸಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಎಲ್ಲರಿಗೂ ನಮಸ್ಕಾರ, ನಿನ್ನೆಯಿಂದ ಕೆಲ ಮಾಧ್ಯಮಗಳಲ್ಲಿ ನನ್ನನ್ನು ಎಸ್.ಎಸ್ ರಾಜಮೌಳಿಯವರು ಸಂಪರ್ಕಿಸಿದ್ದಾರೆ. ಅವರ ಹೊಸ ಚಿತ್ರದಲ್ಲಿ ನಾನು ನಟಿಸುತ್ತಿದ್ದೇನೆಂದು ಸುದ್ದಿ ಬಿತ್ತರಿಸುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು. ನಾನು ಅವರ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ. ಅವರು ಆ ವಿಚಾರವಾಗಿ ನನ್ನ ಸಂಪರ್ಕಿಸಿಯೂ ಇಲ್ಲ. ಅಂತಹ ದೊಡ್ಡ ನಿರ್ದೇಶಕರ ಹೆಸರನ್ನು ಹೀಗೆ ಸುಖಾಸುಮ್ಮನೆ ಬಳಸುವುದು ಸರಿಯಲ್ಲ. ಅದು ಯಾರಿಗೂ ಶೋಭೆ ತರುವಂತಹದಲ್ಲ.

    ಸದ್ಯಕ್ಕೆ ನನ್ನ ಗುರಿ ಕೆ.ಜಿ.ಎಫ್. ಕೆ.ಜಿ.ಎಫ್ ಕೆಲಸದಲ್ಲಿ ನಾನು ನನ್ನ ತಂಡ ಮಗ್ನರಾಗಿದ್ದೀವಿ. ದಯವಿಟ್ಟು ಊಹಾಪೋಹಗಳಿಗೆ ಕಿವಿಕೊಡದಿರಿ.ಸುಳ್ಳುಸುದ್ದಿಯನ್ನು ಬಿತ್ತರಿಸದಿರಿ. ಈಗ ಕೆ.ಜಿ.ಎಫ್ ಬರುತಿರುವಂತಹ ಸಮಯ. ಬರೀ ಈ ಚಿತ್ರದ ಬಗ್ಗೆ ಮಾತಾಡೋಣ. ಧನ್ಯವಾದಗಳು ಎಂದು ಪೋಸ್ಟ್ ಮಾಡಿದ್ದಾರೆ.

    ಆರ್‍ಆರ್‍ಆರ್ ಚಿತ್ರವನ್ನು ರಾಜಮೌಳಿ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದಲ್ಲಿ ರಾಮ್ ಚರಣ್ ಹಾಗೂ ಎನ್‍ಟಿಆರ್ ಅಭಿನಯಿಸುತ್ತಿದ್ದಾರೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಈ ಸಿನಿಮಾಗೆ ಕಥೆ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ರಶ್ಮಿಕಾ ಅಭಿನಯಕ್ಕೆ ಮನಸೋತ ಟಾಲಿವುಡ್ ದಿಗ್ಗಜರು

    ರಶ್ಮಿಕಾ ಅಭಿನಯಕ್ಕೆ ಮನಸೋತ ಟಾಲಿವುಡ್ ದಿಗ್ಗಜರು

    ಹೈದರಾಬಾದ್: ಕನ್ನಡದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗದಲ್ಲಿ ಹವಾ ಎಬ್ಬಿಸಿದ್ದಾರೆ. ಅವರ ಅಭಿನಯ ನೋಡಿ ಟಾಲಿವುಡ್ ದಿಗ್ಗಜರು ಮನಸೋತಿದ್ದಾರೆ.

    ರಶ್ಮಿಕಾ ಈಗ ‘ಗೀತಾ ಗೋವಿಂದಂ’ ಚಿತ್ರದ ಯಶಸ್ಸಿನಲ್ಲಿದ್ದಾರೆ. ಈ ಚಿತ್ರದಲ್ಲಿ ನಟ ವಿಜಯ್ ಹಾಗೂ ರಶ್ಮಿಕಾ ಅಭಿನಯ ನೋಡಿ ಟಾಲಿವುಡ್ ದಿಗ್ಗಜರಾದ ಮೆಗಾ ಸ್ಟಾರ್ ಚಿರಂಜೀವಿ, ಬಾಹುಬಲಿ ನಿರ್ದೇಶಕ ಎಸ್.ಎಸ್ ರಾಜಮೌಳಿ, ಮಹೇಶ್ ಬಾಬು, ರಾಮ್‍ಚರಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಎಸ್.ಎಸ್ ರಾಜಮೌಳಿ ಈಗ ಜೂ. ಎನ್‍ಟಿಆರ್ ಹಾಗೂ ರಾಮ್‍ಚರಣ್ ಚಿತ್ರವನ್ನು ನಿರ್ದೇಶನ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಸ್ವಲ್ಪ ಬಿಡುವು ಮಾಡಿಕೊಂಡು ಚಿತ್ರ ಬಿಡುಗಡೆ ಆದ ಮೊದಲನೇ ದಿನವೇ ಗೀತಾ ಗೋವಿಂದಂ ಚಿತ್ರವನ್ನು ವೀಕ್ಷಿಸಿದ್ದಾರೆ. ಚಿತ್ರ ವೀಕ್ಷಿಸಿದ ತಕ್ಷಣ ರಾಜಮೌಳಿ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ.

    “ಗೀತಾ ಗೋವಿಂದಂ ಚಿತ್ರ ನಗುವಿನ ಗಲಭೆ ಹೆಚ್ಚಿಸುವ ಚಿತ್ರ. ‘ಅರ್ಜುನ್ ರೆಡ್ಡಿ’ ಚಿತ್ರದ ನಂತರ ವಿಜಯ್ ದೇವರಕೊಂಡ ಒಂದು ಒಳ್ಳೆಯ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತಾನು ಏನು ಮಾಡುತ್ತಿದ್ದೇನೆ ಎಂಬುದು ವಿಜಯ್‍ಗೆ ಚೆನ್ನಾಗಿ ತಿಳಿಸಿದೆ. ಈ ಚಿತ್ರದಲ್ಲಿ ಸಾಕಷ್ಟು ಹಾಸ್ಯ ಸನ್ನಿವೇಶಗಳಿವೆ. ಪರಶುರಾಮ್ ಒಂದು ಒಳ್ಳೆಯ ಚಿತ್ರಕಥೆಯನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ತುಂಬಾನೇ ಚೆನ್ನಾಗಿದೆ. ಇಡೀ ಚಿತ್ರತಂಡಕ್ಕೆ ನನ್ನ ಶುಭಾಶಯ” ಎಂದು ಟ್ವೀಟ್ ಮಾಡಿದ್ದಾರೆ.

    ನಿರ್ಮಾಪಕ ಅಲ್ಲು ಅರವಿಂದ್ ಮೆಗಾ ಸ್ಟಾರ್ ಚಿರಂಜೀವಿ ಅವರಿಗೆ ಚಿತ್ರದ ವಿಶೇಷ ಪ್ರದರ್ಶನವಿಟ್ಟಿದ್ದರು. ಚಿತ್ರ ನೋಡಿದ ನಂತರ ಚಿರಂಜೀವಿ ಅವರು ರಶ್ಮಿಕಾ ಅಭಿನಯವನ್ನು ಮೆಚ್ಚಿಕೊಂಡರು. “ರಶ್ಮಿಕಾ ಅವರ ಪಾತ್ರ ನಾಯಕನ ಪಾತ್ರವನ್ನೇ ಡಾಮಿನೇಟ್ ಮಾಡುವಂತಹ ಪಾತ್ರವಾಗಿದ್ದು, ಈ ಪಾತ್ರವನ್ನು ರಶ್ಮಿಕಾ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಕಣ್ಣಿನಲ್ಲೇ ಕೋಪವನ್ನು ತೋರಿಸುತ್ತಾರೆ. ಅಲ್ಲದೇ ಅವರ ಅಭಿನಯ ಕೂಡ ಚೆನ್ನಾಗಿ ಮಾಡಿದ್ದಾರೆ ಎಂದು ಚಿರಂಜೀವಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.

    ಅರ್ಜುನ್ ರೆಡ್ಡಿ ಸಿನಿಮಾದ ನಂತರ ವಿಜಯ್ ಒಳ್ಳೆಯ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ವಿಜಯ್ ಹಾಗೂ ರಶ್ಮಿಕಾ ಇಬ್ಬರನ್ನು ಒಟ್ಟಿಗೆ ನೋಡಲು ಖುಷಿಯಾಗುತ್ತದೆ. ಇಬ್ಬರು ನ್ಯಾಚುರಲ್ ಆಗಿ ಅಭಿನಯಿಸಿದ್ದಾರೆ. ಚಿತ್ರದ ಕತೆ, ಸಂಗೀತ ಅದ್ಭುತವಾಗಿದೆ. ಈ ಚಿತ್ರ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಗೀತಾ ಗೋವಿಂದಂ ಚಿತ್ರತಂಡಕ್ಕೆ ನನ್ನ ಶುಭಾಶಯಗಳು ಎಂದು ರಾಮ್‍ಚರಣ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದಾರೆ.

    ಭಾರತೀಯ ಚಿತ್ರರಂಗದ ಮೋಸ್ಟ್ ಟ್ಯಾಲೆಂಟೆಡ್, ಹ್ಯಾಂಡ್ಸಮ್ ಹೀರೋ ಮಹೇಶ್ ಬಾಬು ಅವರು ಕೂಡ ರಶ್ಮಿಕಾ ಮಂದಣ್ಣ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ರಶ್ಮಿಕಾರದ್ದು ಬ್ರಿಲಿಯಂಟ್ ಆಕ್ಟಿಂಗ್ ಅಂತ ಕೊಂಡಾಡಿದ್ದಾರೆ. ಈ ಚಿತ್ರವನ್ನು ಬಿಡುಗಡೆಯಾದ ದಿನದಂದೇ ನೋಡಿರುವ ಮಹೇಶ್ ಬಾಬು ಟ್ವೀಟ್ ಮೂಲಕ ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದು ಅಲ್ಲದೇ ರಶ್ಮಿಕಾ ಬಗ್ಗೆ ವಿಶೇಷವಾಗಿ ಮೆಚ್ಚುಗೆ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕುಮಾರಿ ಕನ್ನಡಕ್ಕೆ ಬರಲು ಕಾರಣ ರಾಜಮೌಳಿಯ ಅಪ್ಪ!

    ಕುಮಾರಿ ಕನ್ನಡಕ್ಕೆ ಬರಲು ಕಾರಣ ರಾಜಮೌಳಿಯ ಅಪ್ಪ!

    ಕುಮಾರಿ 21 ಎಫ್ ಚಿತ್ರದ ಮೂಲಕ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಎರಡನೇ ಮಗ ಪ್ರಣಾಮ್ ಭರ್ಜರಿಯಾಗಿಯೇ ಎಂಟ್ರಿ ಕೊಟ್ಟಿದ್ದಾರೆ. ತೆಲುಗಿನಲ್ಲಿ ಹಿಟ್ ಆಗಿದ್ದ ಚಿತ್ರದ ರೀಮೇಕ್ ಆಗಿರೋ ಕುಮಾರಿ ಕನ್ನಡಕ್ಕೆ ಬರಲು ಮೂಲ ಕಾರಣ ರಾಜಮೌಳಿಯವರ ತಂದೆ ವಿಜಯೇಂದ್ರ ಪ್ರಸಾದ್ ಎಂಬ ವಿಚಾರ ಇದೀಗ ಬಯಲಾಗಿದೆ!

    ಇದು ತೆಲುಗಿನ ಕುಮಾರಿ 21 ಎಫ್ ಚಿತ್ರದ ರೀಮೇಕ್. ಈ ಚಿತ್ರವನ್ನು ಸುಕುಮಾರ್ ನಿರ್ದೇಶನ ಮಾಡಿದ್ದರು. ಸುಕುಮಾರ್ ಅವರ ಅಣ್ಣ ವಿಜಯ ಕುಮಾರ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದರು. ಸದರಿ ಚಿತ್ರ ಹಿಟ್ ಆಗುತ್ತಲೇ ನಿರ್ಮಾಪಕ ವಿಜಯ ಕುಮಾರ್ ಈ ಚಿತ್ರವನ್ನು ಬೇರೆ ಬೇರೆ ಭಾಷೆಗಳಲ್ಲಿಯೂ ನಿರ್ಮಾಣ ಮಾಡಲು ಯೋಜನೆ ಹಾಕಿಕೊಂಡಿದ್ದರು. ಈ ವಿಚಾರವನ್ನು ನಿರ್ದೇಶಕ ಶ್ರೀಮಾನ್ ಗೆ ಹೇಳಿದ ಸುಕುಮಾರ್, ಅದನ್ನು ಕನ್ನಡಕ್ಕೆ ತಾವೇ ನಿರ್ದೇಶನ ಮಾಡಬೇಕೆಂದು ಕೇಳಿಕೊಂಡಿದ್ದರಂತೆ. ಆದರೆ ಅದುವರೆಗೂ ಈ ಚಿತ್ರವನ್ನು ನೋಡಿರದ ಶ್ರೀಮಾನ್ ಹಿಂದೇಟು ಹಾಕಿ ಅಲ್ಲಿಂದ ಎಸ್ಕೇಪಾಗಿದ್ದರಂತೆ.

    ಅದಾಗಿ ಕೆಲ ದಿನಗಳ ನಂತರ ಈ ವಿಚಾರವನ್ನು ಶ್ರೀಮಾನ್ ತಮ್ಮ ಗುರುಗಳಾದ ವಿಜಯೇಂದ್ರ ಪ್ರಸಾದ್ ಅವರ ಬಳಿ ಹೇಳಿದ್ದಾರೆ. ಅದಕ್ಕವರು ಯಾವ ಕಾರಣಕ್ಕೂ ಈ ಅವಕಾಶವನ್ನು ಬಿಡಬಾರದಾಗಿ ಸಲಹೆ ಕೊಟ್ಟ ನಂತರ ಶ್ರೀಮಾನ್ ಅಖಾಡಕ್ಕಿಳಿದಿದ್ದರು. ಆ ಬಳಿಕ ಮಿಂಚಿನ ವೇಗದಲ್ಲಿ ತಯಾರಿ ಮಾಡಿಕೊಂಡು, ದೇವರಾಜ್ ಅವರ ಬಳಿಯೇ ಮಾತಾಡಿ ಪ್ರಣಾಮ್ ನಟಿಸುವಂತೆ ಮಾಡುವಲ್ಲಿಯೂ ಶ್ರೀಮಾನ್ ಯಶಸ್ವಿಯಾಗಿದ್ದರು.

    ಅಂದಹಾಗೆ ಇದು ಈ ದಿನಮಾನದಲ್ಲಿನ ಯುವಕರ ಕಥೆ. ಈ ಚಿತ್ರ ನೋಡಿದರೆ ಬೇರೆ ಬೇರೆ ಪಾತ್ರಗಳಲ್ಲಿ, ಸನ್ನಿವೇಶಗಳಲ್ಲಿ ಇದು ತಮ್ಮದೇ ಕಥೆ ಎಂಬಂಥಾ ಆಪ್ತ ಭಾವ ಹುಟ್ಟಿಕೊಳ್ಳಲಿದೆಯಂತೆ. ಕನ್ನಡದ ನೇಟಿವಿಟಿಯನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕುದಾಗಿ ಈ ಚಿತ್ರವನ್ನು ರೂಪಿಸಿರೋ ನಿರ್ದೇಶಕ ಶ್ರೀಮಾನ್ ದೊಡ್ಡ ಗೆಲುವೊಂದು ಸಿಕ್ಕುವ ಭರವಸೆಯಿಂದಿದ್ದಾರೆ.

  • 100 ಕೋಟಿ ರೂ. ಕಲೆಕ್ಷನ್ :’ಭರತ್ ಅನೆ ನೇನು’ ಭರ್ಜರಿ ಪ್ರತಿಕ್ರಿಯೆ

    100 ಕೋಟಿ ರೂ. ಕಲೆಕ್ಷನ್ :’ಭರತ್ ಅನೆ ನೇನು’ ಭರ್ಜರಿ ಪ್ರತಿಕ್ರಿಯೆ

    ಹೈದರಾಬಾದ್: ಟಾಲಿವುಡ್ ನಲ್ಲಿ ಸಂಚಲನ ಮೂಡಿಸುತ್ತಿರುವ ಸಿನಿಮಾ ‘ಭರತ್ ಅನೆ ನೇನು’. ಶುಕ್ರವಾರ ಚಿತ್ರ ಬಿಡುಗಡೆ ಆಗಿದ್ದು, ನೋಡುಗರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಮುನ್ನುಗ್ಗುತ್ತಿದೆ.

    ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಬಾಹುಬಲಿ ನಿರ್ದೇಶಕ ಎಸ್.ಎಸ್.ರಾಜಮೌಳಿ ಮತ್ತು ನಟ ಜೂನಿಯರ್.ಎನ್‍ಟಿಆರ್ ಸಹ ಭರತ್ ಅನೆ ನೇನು ಸಿನಿಮಾ ನೋಡಿ ಮೆಚ್ಚುಗೆಯನ್ನು ತಿಳಿಸಿದ್ದಾರೆ.

    ಮಹೇಶ್ ಬಾಬು ನಟನೆ ಉತ್ತಮವಾಗಿದ್ದು, ಚಿತ್ರ ಪರದೆಯ ಮೇಲೆ ಅದ್ಭುತವಾಗಿ ಮೂಡಿಬಂದಿದೆ. ಚಿತ್ರದ ಪ್ರತಿಯೊಂದು ಪಾತ್ರಗಳು ಮತ್ತು ದೃಶ್ಯಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಒಂದು ಕಮರ್ಷಿಯಲ್ ಸಿನಿಮಾದಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಸರಳ ರೀತಿಯಲ್ಲಿ ತಿಳಿಸಲಾಗಿದೆ. ಚಿತ್ರದ ಬಹುತೇಕ ಎಲ್ಲ ದೃಶ್ಯಗಳು ಅತ್ಯದ್ಭುತವಾಗಿ ಮೂಡಿಬಂದಿದೆ. ಇಂತಹ ಸಿನಿಮಾ ನೀಡಿದ ಕೊರಟಾಲ ಶಿವ, ಮಹೇಶ್ ಬಾಬು ಮತ್ತು ಇಡೀ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಅಂತಾ ರಾಜಮೌಳಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಈ ಐದು ಕಾರಣಗಳಿಗಾಗಿ ‘ಭರತ್ ಅನೆ ನೇನು’ ಚಿತ್ರವನ್ನು ನೋಡಬೇಕೆಂದು ಮಹೇಶ್ ಬಾಬು ಅಭಿಮಾನಿಗಳು ಹೇಳುತ್ತಿದ್ದಾರೆ

    ಇತ್ತ ಭರತ್ ಅನೆ ನೇನು ಸಿನಿಮಾ ನೋಡಿದ ಮೇಲೆ ಜೂ.ಎನ್‍ಟಿಆರ್ ಸಹ ಟ್ವೀಟ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ. ಭರತ್ ಅನೆ ನೇನು ಚಿತ್ರತಂಡಕ್ಕೆ ನನ್ನ ಶುಭಾಶಯಗಳು. ಪ್ರಾಮಾಣಿಕ ಕಥೆಯುಳ್ಳ ಎವರ್ ಗ್ರೀನ್ ಸಿನಿಮಾ ನೀಡಿದ ನಿಮಗೆಲ್ಲರಿಗೂ ಧನ್ಯವಾದ ಅಂತಾ ಟ್ವೀಟ್ ಮಾಡಿದ್ದಾರೆ.

    ಕೊರಟಾಲ ಶಿವ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಮಹೇಶ್ ಬಾಬುಗೆ ಜೊತೆಯಾಗಿ ಬಾಲಿವುಡ್ ಚೆಲುವೆ ಕೈರಾ ಅದ್ವಾನಿ ನಟಿಸಿದ್ದಾರೆ. ಪ್ರಕಾಶ್ ರೈ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರ ಹೊಂದಿದ್ದು, ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಬಾಲಿವುಡ್ ನಟ ಫರ್ಹಾನ್ ಅಖ್ತರ್ ಹಾಡಿರುವುದು ಈ ಚಿತ್ರದ ಮತ್ತೊಂದು ವಿಶೇಷ. ರಾಮ್‍ಚರಣ್ ಅಭಿನಯದ `ರಂಗಸ್ಥಳಂ’ ಸಿನಿಮಾಗೂ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದರು.

    ಈ ವರ್ಷ ವಿದೇಶದಲ್ಲಿ ಬಿಡುಗಡೆಯಾದ ಭಾರತೀಯ ಸಿನಿಮಾಗಳ ಟಾಪ್ 5ರಲ್ಲಿ ಎರಡನೇ ಸ್ಥಾನವನ್ನು ಭರತ್ ಅನೆ ನೇನು ಹೊಂದಿದೆ. ಮೊದಲ ಸ್ಥಾನವನ್ನು ಬಾಲಿವುಡ್ `ಪದ್ಮಾವತ್’ ಹೊಂದಿದೆ.

  • ಪಾಕ್ ಶಾದ್ಮನ್ ಚೌಕದ ಫೋಟೋ ಪ್ರಕಟಿಸಿ, ಈಗ ಹೇಗಿದೆ ಅನ್ನೋದನ್ನು ತಿಳಿಸಿದ್ರು ರಾಜಮೌಳಿ

    ಪಾಕ್ ಶಾದ್ಮನ್ ಚೌಕದ ಫೋಟೋ ಪ್ರಕಟಿಸಿ, ಈಗ ಹೇಗಿದೆ ಅನ್ನೋದನ್ನು ತಿಳಿಸಿದ್ರು ರಾಜಮೌಳಿ

    ಹೈದರಾಬಾದ್: ನಿರ್ದೇಶಕ ರಾಜಮೌಳಿ ಪ್ರತಿ ಬಾರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅಂಶಗಳು ಅಭಿಮಾನಿಗಳಲ್ಲಿ ಕುತೂಹಲವನ್ನು ಉಂಟು ಮಾಡುತ್ತವೆ. ಈ ಬಾರಿ ರಾಜಮೌಳಿ ಫೋಟೋವೊಂದನ್ನು ಟ್ವೀಟ್ ಮಾಡಿದ್ದು, ಅಭಿಮಾನಿಗಳಲ್ಲಿ ಕುತೂಹಲವನ್ನು ಉಂಟು ಮಾಡಿದೆ.

    ಅಂದ ಹಾಗೇ ರಾಜಮೌಳಿ ಪಾಕಿಸ್ತಾನದ ಲಾಹೋರ್ ನಗರದ ಶಾದ್ಮನ್ ಚೌಕದ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಇಲ್ಲಿಯೇ ಭಾರತ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ರನ್ನು ಬ್ರೀಟಿಷರು ಗಲ್ಲಿಗೇರಿಸಿದ್ದರು ಎಂದು ತಮ್ಮ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

    ಇತ್ತೀಚೆಗೆ ಅಂತರಾಷ್ಟ್ರೀಯ ಚಲನಚಿತ್ರ ಪ್ರದರ್ಶನಕ್ಕೆ ಎಂದು ಪಾಕಿಸ್ತಾನದ ಕರಾಚಿಗೆ ತೆರಳಿದ್ದ ರಾಜಮೌಳಿ ಲಾಹೋರ್ ಮತ್ತು ಇಸ್ಲಾಮಾಬಾದ್ ನಗರಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಲಾಹೋರ್ ನ ಈ ಪ್ರದೇಶದೊಂದಿಗೆ ಭಾರತ ಹೊಂದಿರುವ ಸಂಬಂಧ ಮಹತ್ವ ಅರಿತು ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಈ ಪ್ರದೇಶದ ಮಹತ್ವ ಸಾರುವ ಯಾವ ಗುರುತು ಇಲ್ಲ ಎಂದು ತಿಳಿಸಿದ್ದಾರೆ.

    ಪಾಕಿಸ್ತಾನಕ್ಕೆ ತೆರಳುವ ಮುನ್ನ ರಾಜಮೌಳಿ ಟ್ವೀಟ್ ಮಾಡಿ, ಬಾಹುಬಲಿ ಸಿನಿಮಾ ನನಗೆ ಸಾಕಷ್ಟು ಅವಕಾಶಗಳನ್ನ ತಂದುಕೊಟ್ಟಿದೆ. ಇದರಿಂದ ನಾನು ಹಲವಾರು ದೇಶಗಳನ್ನ ಸುತ್ತಿದ್ದೇನೆ. ಬಾಹುಬಲಿಯಿಂದಾಗಿ ಪಾಕಿಸ್ತಾನಕ್ಕೆ ಬಂದಿರುವುದಕ್ಕೆ ಬಹಳ ಉತ್ಸಾಹದಿಂದ್ದಿದೇನೆ. ನನ್ನನ್ನು ಆಹ್ವಾನಿಸಿರುವ ಪಾಕಿಸ್ತಾನದ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಹೃದಯಪೂರ್ವಕ ಧನ್ಯವಾದಗಳು ಎಂದು ಬರೆದುಕೊಂಡಿದ್ದರು.

  • ಕೊನೆಗೂ ಕಿರಿಕ್ ಪಾರ್ಟಿಯ ಬೆಡಗಿಯ ಮೇಲೆ ರಾಜಮೌಳಿಯ ಕಣ್ಣು ಬಿತ್ತು!

    ಕೊನೆಗೂ ಕಿರಿಕ್ ಪಾರ್ಟಿಯ ಬೆಡಗಿಯ ಮೇಲೆ ರಾಜಮೌಳಿಯ ಕಣ್ಣು ಬಿತ್ತು!

    ಬೆಂಗಳೂರು: ಕಿರಿಕ್ ಪಾರ್ಟಿ ಚೆಲುವೆ ರಶ್ಮಿಕಾ ಮಂದಣ್ಣಗೆ ಕನ್ನಡಕ್ಕಿಂತ ಪರಭಾಷೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ.

    ಕನ್ನಡದಲ್ಲಿ ಸ್ಟಾರ್ ನಟರ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ರಶ್ಮಿಕಾ ತೆಲುಗಿನಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ನಾಗಶೌರ್ಯ ಅಭಿನಯದ ಚಲೋ ಚಿತ್ರದಲ್ಲಿ ನಟಿಸಿದ್ದ ರಶ್ಮಿಕಾ ಮೊದಲ ನೋಟದಲ್ಲೇ ತೆಲುಗು ಅಭಿಮಾನಿಗಳನ್ನು ಕೂಡ ಬೌಲ್ಡ್ ಮಾಡಿದ್ದರು. ಈಗ ಮತ್ತಷ್ಟು ತೆಲುಗು ಸಿನಿಮಾಗಳು ಕನ್ನಡದ ಹುಡುಗಿಯ ಪಾಲಾಗುತ್ತಿದೆ.

    ಬಾಹುಬಲಿ ನಿರ್ದೇಶಕ ಎಸ್.ಎಸ್ ರಾಜಮೌಳಿಯ ಕಣ್ಣು ಈಗ ರಶ್ಮಿಕಾ ಮಂದಣ್ಣ ಅವರ ಮೇಲೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಬಾಹುಬಲಿ ಚಿತ್ರದ ನಂತರ ಮೆಗಾ ಸಿನಿಮಾ ಕೈಗೆತ್ತಿಕೊಂಡಿರುವ ರಾಜಮೌಳಿ ತೆಲುಗಿನ ಇಬ್ಬರು ಸೂಪರ್ ಸ್ಟಾರ್ ನಟರ ಜೊತೆ ಮುಂದಿನ ಸಿನಿಮಾ ಮಾಡುತ್ತಿದ್ದಾರೆ.

    ರಾಜಮೌಳಿ ಆಕ್ಷನ್ ಕಟ್ ಹೇಳಲಿರುವ ‘RRR’ ಪ್ರಾಜೆಕ್ಟ್ ಗೆ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ ನಾಯಕಿಯಾಗುವ ಸಾಧ್ಯತೆ ಇದೆ. ರಾಮ್ ಚರಣ್ ತೇಜ್ ಮತ್ತು ಜೂನಿಯರ್ ಎನ್.ಟಿ.ಆರ್ ಈ ಚಿತ್ರದಲ್ಲಿ ನಾಯಕರಾಗಿದ್ದು, ಇಬ್ಬರಲ್ಲಿ ಒಬ್ಬರಿಗೆ ಜೋಡಿಯಾಗಬಹುದು ಎಂಬ ಸುದ್ದಿ ಗಾಂಧಿನಗರದಲ್ಲಿ ಜೋರಾಗಿ ಹರಿದಾಡುತ್ತಿದೆ.

    ಸದ್ಯದ ಮಾಹಿತಿ ಪ್ರಕಾರ ರಾಜಮೌಳಿಯ ಈ ದೊಡ್ಡ ಪ್ರಾಜೆಕ್ಟ್ ಗೆ ತೆಲುಗಿನ ನಟಿ ರಾಶಿ ಖನ್ನಾ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ತೆಲುಗಿನ ದೊಡ್ಡ ಸ್ಟಾರ್ ನಟರ ಜೊತೆಯಲ್ಲಿ ಅಭಿನಯಿಸಿರುವ ರಾಶಿ, ರಾಜಮೌಳಿ ಚಿತ್ರದಲ್ಲಿ ನಟಿಸುವ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

    ‘RRR’ ಚಿತ್ರದಲ್ಲಿ ಇಬ್ಬರು ಸ್ಟಾರ್ ನಟರಿದ್ದು, ಇಬ್ಬರು ನಾಯಕಿಯರು ಇರುವುದು ಖಚಿತ. ಹೀಗಾಗಿ ಆ ಇಬ್ಬರಿಗೆ ಸೂಕ್ತವಾದ ನಟಿಯರ ಅವಶ್ಯಕತೆ ಇದೆ. ಈಗಾಗಲೇ ರಾಶಿ ಖನ್ನಾ ಜೊತೆ ರಕುಲ್ ಪ್ರೀತ್ ಸಿಂಗ್ ಮತ್ತು ಸಮಂತಾ ಅಕ್ಕಿನೇನಿ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಈ ಚಿತ್ರದಲ್ಲಿ ರಶ್ಮಿಕಾ ಕೂಡ ಒಬ್ಬ ನಾಯಕಿಯಾಗುವ ಸಾಧ್ಯತೆ ಇದೆ ಎಂದು ಈ ಸುದ್ದಿ ಕೇಳಿ ಬರುತ್ತಿದೆ.

    ‘ಚಲೋ’ ಚಿತ್ರದಲ್ಲಿ ಮೋಡಿ ಮಾಡಿದ್ದ ರಶ್ಮಿಕಾ ಮಂದಣ್ಣ ಈಗ ನಾನಿ ವಿಜಯ ದೇವರಕೊಂಡ ಅಭಿನಯದ ಚಿತ್ರದಲ್ಲೂ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ.

    ಈಗಾಗಲೇ RRR ಚಿತ್ರದ ಪೋಸ್ಟ್ ಪ್ರೋಡಕ್ಷನ್ ಕೆಲಸ ಮುಗಿಸಿರುವ ರಾಜಮೌಳಿ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದರು. ಮತ್ತೊಂದೆಡೆ ರಾಮ್ ಚರಣ್ ‘ರಂಗಸ್ಥಲಂ’ ಚಿತ್ರದ ಬಿಡುಗಡೆಗಾಗಿ ಕಾದಿದ್ದಾರೆ. ಎನ್.ಟಿ.ಆರ್ ತ್ರಿವಿಕ್ರಮ ಶ್ರೀನಿವಾಸ್ ಜೊತೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಬಹುಶಃ ಈ ವರ್ಷವೇ ಸೆಟ್ಟೇರಲಿದ್ದು, ಮುಂದಿನ ವರ್ಷ ಈ ಚಿತ್ರ ತೆರೆಕಾಣಬಹುದು.

  • ಬಾಹುಬಲಿಯ ಜೊತೆ ಪಾಕಿಸ್ತಾನಕ್ಕೆ ಹೊರಟ ನಿರ್ದೇಶಕ ರಾಜಮೌಳಿ

    ಬಾಹುಬಲಿಯ ಜೊತೆ ಪಾಕಿಸ್ತಾನಕ್ಕೆ ಹೊರಟ ನಿರ್ದೇಶಕ ರಾಜಮೌಳಿ

    ನವದೆಹಲಿ: ಬಾಹುಬಲಿ ಸಿನಿಮಾ ಪಾಕಿಸ್ತಾನದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಈ ಖುಷಿಯನ್ನ ನಿರ್ದೇಶಕ ಎಸ್.ಎಸ್ ರಾಜಮೌಳಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

    ಟ್ಟರ್ ನಲ್ಲಿ ಟ್ವೀಟ್ ಮಾಡಿರುವ ರಾಜಮೌಳಿಯವರು,”ಬಾಹುಬಲಿ ಸಿನಿಮಾ ನನಗೆ ಸಾಕಷ್ಟು ಅವಕಾಶಗಳನ್ನ ತಂದುಕೊಟ್ಟಿದೆ. ಇದರಿಂದ ನಾನು ಹಲವಾರು ದೇಶಗಳನ್ನ ಸುತ್ತಿದ್ದೇನೆ. ಇದರಲ್ಲಿ ಪಾಕಿಸ್ತಾನಕ್ಕೆ ಬಂದಿರುವುದಕ್ಕೆ ಬಹಳ ಉತ್ಸಾಹದಿಂದ್ದಿದೇನೆ. ನನ್ನನ್ನು ಆಹ್ವಾನಿಸಿರುವ ಪಾಕಿಸ್ತಾನದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಹೃದಯಪೂರ್ವಕ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

    2017ರ ಮೇ ತಿಂಗಳಿನಲ್ಲಿ ಬಾಹುಬಲಿ ಸಿನಿಮಾ ಪಾಕಿಸ್ತಾನದಲ್ಲಿ ಭರ್ಜರಿ ಪ್ರರ್ದಶನಗೊಂಡಿತ್ತು. ಈ ವರ್ಷದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಪಾಕಿಸ್ತಾನದ ಕರಾಚಿಯಿಂದ ಬಾಹುಬಲಿ ನಿರ್ದೇಶಕ ರಾಜಮೌಳಿ ಅವರಿಗೆ ಆಮಂತ್ರಣ ಸಿಕ್ಕಿದೆ.

    250 ಕೋಟಿ ರೂ. ವೆಚ್ಚದಲ್ಲಿ ತಯಾರಾದ ಬಾಹುಬಲಿ ಭಾಗ 2 ಬಾಕ್ಸ್ ಆಫೀಸ್‍ನಲ್ಲಿ 18 ಸಾವಿರ ಕೋಟಿ ರೂ. ಕಲೆಕ್ಷನ್ ಮಾಡಿತ್ತು. 2017ರ ಏಪ್ರಿಲ್ 28 ರಂದು ಬಿಡುಗಡೆಯಾದ ಈ ಸಿನಿಮಾದಲ್ಲಿ ಪ್ರಭಾಸ್, ರಾಣಾ ದಗ್ಗು ಭಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ರಮ್ಯಕೃಷ್ಣ, ಸತ್ಯರಾಜ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದರು.

  • ಕೊನೆಗೂ ತಮ್ಮ ಮುಂದಿನ ಸಿನಿಮಾ ಬಗ್ಗೆ ರಿವಿಲ್ ಮಾಡಿದ ರಾಜಮೌಳಿ

    ಕೊನೆಗೂ ತಮ್ಮ ಮುಂದಿನ ಸಿನಿಮಾ ಬಗ್ಗೆ ರಿವಿಲ್ ಮಾಡಿದ ರಾಜಮೌಳಿ

    ಹೈದರಾಬಾದ್: ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸಿದ `ಬಾಹುಬಲಿ’ ಚಿತ್ರದ ನಿರ್ದೇಶಕ ಎಸ್.ಎಸ್ ರಾಜಮೌಳಿಯವರ ಮುಂದಿನ ಚಿತ್ರ ಯಾವುದು ಎಂಬ ನಿರೀಕ್ಷೆಯಲ್ಲಿದ್ದ ಸಿನಿಪ್ರಿಯರ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.

    ಗುರುವಾರದಂದು ರಾಜಮೌಳಿ ತಮ್ಮ ಮುಂದಿನ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರದಲ್ಲಿ ರಾಮ್ ಚರಣ್ ತೇಜಾ ಹಾಗೂ ಜ್ಯೂನಿಯರ್ ಎನ್‍ಟಿಆರ್ ಅಭಿನಯಿಸುತ್ತಿರುವುದು ಖಚಿತವಾಗಿದೆ.

    ಗುರುವಾರ ಸಂಜೆ ಟ್ವೀಟ್ ಮಾಡಿರುವ ರಾಜಮೌಳಿ, ತಮ್ಮ ಹೊಸ ಪ್ರಾಜೆಕ್ಟ್ ಕುರಿತು ಹೇಳಿದ್ದಾರೆ. ಮೋಷನ್ ಫಿಕ್ಚರ್ ನಲ್ಲಿ ‘RRR’ ಎನ್ನುವ ಅಕ್ಷರಗಳು ಮಾತ್ರ ಇವೆ. ಈ ‘RRR’ ಅಕ್ಷರಗಳು ಅವರ ಚಿತ್ರದ ಹೆಸರಲ್ಲ. ಬದಲಾಗಿ ರಾಜಮೌಳಿ, ರಾಮ್ ಚರಣ್ ಹಾಗೂ ಜ್ಯೂ. ಎನ್.ಟಿ.ರಾಮ್ ರಾವ್ ಅವರ ಹೆಸರುಗಳ ಅಕ್ಷರಗಳಾಗಿವೆ.

    ರಾಜಮೌಳಿಯವರ ಹೊಸ ಚಿತ್ರ ಕುತೂಹಲ ಹುಟ್ಟಿಸಿದ್ದು, ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಈ ಹಿಂದೆಯೇ ರಾಮ್ ಚರಣ್ ತೇಜಾ ಹಾಗೂ ಜ್ಯೂನಿಯರ್ ಎನ್‍ಟಿಆರ್ ಜೊತೆ ರಾಜಮೌಳಿಯವರು ಕೆಲಸ ಮಾಡಿದ್ದು, ರಾಮ್ ಚರಣ್ ತೇಜಾರ `ಮಗಧೀರ’ ಹಾಗೂ ಜ್ಯೂನಿಯರ್ ಎನ್‍ಟಿಆರ್ ಅವರ `ಸ್ಟೂಡೆಂಟ್ ನಂಬರ್ 1′ ಚಿತ್ರವನ್ನು ನಿರ್ದೇಶಿಸಿದ್ದರು. ರಾಜಮೌಳಿಯವರ ಹೊಸ ಚಿತ್ರ #RRR ಕುರಿತು ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲವಾದರೂ ಮೂವರ ಕಾಂಬಿನೇಷನ್ ನಲ್ಲಿ ಚಿತ್ರ ಅದ್ಭುತವಾಗಿ ಮೂಡಿ ಬರಲಿದೆ ಎಂಬ ಮಾತುಗಳು ಕೇಳಿಬಂದಿವೆ.

    ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಈ ಸಿನಿಮಾಗೆ ಕಥೆ ಬರೆದಿದ್ದಾರಂತೆ. ಕೀರವಾಣಿ ಸಂಗೀತ, ಕೆಲ ತಿಂಗಳುಗಳ ಹಿಂದೆ ರಾಮ್ ಚರಣ್ ತೇಜಾ ಹಾಗೂ ಎನ್‍ಟಿಆರ್ ಜೊತೆ ಫೋಟೋ ತೆಗೆದುಕೊಂಡಿದ್ದರು. ಈಗಾಗಲೇ ಈ ಸ್ಟಾರ್ ನಟರು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಈ ವರ್ಷದ ಅಕ್ಟೋಬರ್ ನಸಿನಿಮಾ ಸೆಟ್ಟೇರಲಿದೆ.

  • ಫೋರ್ಬ್ಸ್  ಪಟ್ಟಿಯಲ್ಲೂ ಬಾಹುಬಲಿ ಶೈನಿಂಗ್: ಯಾರ ಆದಾಯ ಎಷ್ಟು ಕೋಟಿ ರೂ.?

    ಫೋರ್ಬ್ಸ್  ಪಟ್ಟಿಯಲ್ಲೂ ಬಾಹುಬಲಿ ಶೈನಿಂಗ್: ಯಾರ ಆದಾಯ ಎಷ್ಟು ಕೋಟಿ ರೂ.?

    ನವದೆಹಲಿ: ದೇಶದ ಸಿನಿಮಾ ಇತಿಹಾಸದಲ್ಲಿ ಹಲವು ದಾಖಲೆ ಬರೆದ ಬಾಹುಬಲಿ ಸಿನಿಮಾ ಈ ವರ್ಷದ ಫೋರ್ಬ್ಸ್ ಪಟ್ಟಿಯಲ್ಲೂ ಸದ್ದು ಮಾಡಿದೆ.

    ಫೋರ್ಬ್ಸ್ 2017ರ ಭಾರತದ ಟಾಪ್ ಸೆಲೆಬ್ರಿಟಿಗಳ ಆದಾಯದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಬಾಹುಬಲಿ ನಿರ್ದೇಶಕ ಎಸ್‍ಎಸ್ ರಾಜಮೌಳಿ, ನಟ ಪ್ರಭಾಸ್, ಖಳನಟ ರಾಣಾ ದಗ್ಗುಬಾಟಿ ಸ್ಥಾನವನ್ನು ಪಡೆದಿದ್ದಾರೆ.

    ವಿಶೇಷ ಏನೆಂದರೆ 2016ರ ಪಟ್ಟಿಯಲ್ಲಿ ಈ ಮೂವರು ಸ್ಥಾನ ಪಡೆದಿರಲಿಲ್ಲ. ಆದರೆ ಈ ವರ್ಷ ಈ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಾಹುಬಲಿ ಭಾಗ 2 ಏಪ್ರಿಲ್ 28 ರಂದು ಬಿಡುಗಡೆಯಾಗಿತ್ತು. ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಸಿನಿಮಾ 1,700 ಕೋಟಿ ರೂ.ಗೂ ಹೆಚ್ಚು ಹಣವನ್ನು ಬಾಕ್ಸ್ ಆಫೀಸ್ ನಲ್ಲಿ ಗಳಿಸಿತ್ತು.

    ಇದನ್ನು ಓದಿ: ಫೋರ್ಬ್ಸ್ ಇಂಡಿಯಾ ಟಾಪ್ 100 ಸೆಲೆಬ್ರಿಟಿ ಪಟ್ಟಿ ರಿಲೀಸ್: ಯಾರ ಆದಾಯ ಎಷ್ಟು ಕೋಟಿ ಇದೆ ಗೊತ್ತಾ?

    ಇದನ್ನು ಓದಿ: ಬಾಹುಬಲಿ-2 ಚಿತ್ರದಿಂದ ಕರ್ನಾಟಕಕ್ಕೆ ಕೋಟಿ ಕೋಟಿ ಆದಾಯ

    ಎಸ್.ಎಸ್.ರಾಜಮೌಳಿ
    ವಯಸ್ಸು – 44
    ಸ್ಥಾನ – 15
    ವಾರ್ಷಿಕ ಆದಾಯ – 55 ಕೋಟಿ ರೂ.

    ಪ್ರಭಾಸ್
    ವಯಸ್ಸು – 38
    ಸ್ಥಾನ – 22
    ವಾರ್ಷಿಕ ಆದಾಯ – 36.25 ಕೋಟಿ ರೂ.

    ರಾಣಾ ದಗ್ಗುಬಾಟಿ
    ವಯಸ್ಸು – 33
    ಸ್ಥಾನ – 36
    ವಾರ್ಷಿಕ ಆದಾಯ – 22 ಕೋಟಿ ರೂ.