Tag: rajamouli

  • RRR ಆಡಿಯೋ ಖರೀದಿ -ಒಪ್ಪಂದಕ್ಕೆ ಸಹಿ ಹಾಕಿದ ಲಹರಿ ಸಂಸ್ಥೆ

    RRR ಆಡಿಯೋ ಖರೀದಿ -ಒಪ್ಪಂದಕ್ಕೆ ಸಹಿ ಹಾಕಿದ ಲಹರಿ ಸಂಸ್ಥೆ

    ಬೆಂಗಳೂರು: ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರ ಬಹುನಿರೀಕ್ಷಿತ RRR ಚಿತ್ರದ ಆಡಿಯೋ ಪಡೆದುಕೊಂಡ ಒಪ್ಪಂದಕ್ಕೆ ಲಹರಿ ಸಂಸ್ಥೆ ಇಂದು ಸಹಿ ಹಾಕಿದೆ.

    ಕೆಲದಿನಗಳ ಹಿಂದೆ ಲಹರಿ ಸಂಸ್ಥೆ ಆರ್‍ಆರ್‍ಆರ್ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿತ್ತು. ಇದೀಗ ಲಹರಿ ಸಂಸ್ಥೆಯು ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಅವರು ಆರ್‍ಆರ್‍ಆರ್ ಅಗ್ರಿಮೆಂಟ್ ಗೆ ಸೈನ್ ಮಾಡಿರುವ ಅಧಿಕೃತವಾಗಿ ಪತ್ರವನ್ನು ಪಡೆಯುವ ಮೂಲಕ ಹಕ್ಕನ್ನು ಪಡೆದುಕೊಂಡಿದೆ. ಆಗಸ್ಟ್ 1ರ ಬೆಳಗ್ಗೆ 11 ಗಂಟೆಗೆ ಆರ್‍ಆರ್‍ಆರ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗಲಿದೆ. ಇದನ್ನೂ ಓದಿ: RRR ಆಡಿಯೋ ರೈಟ್ಸ್ ಲಹರಿ ಪಾಲು

    ಲಹರಿ ಸಂಸ್ಥೆ ಹೈದರಾಬಾದ್‍ನಲ್ಲಿ ಲಿಖಿತವಾಗಿ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದ್ದು, ಲಹರಿ ಸಂಸ್ಥೆಯ ಮನೋಹರ್ ನಾಯ್ಡು, ನವೀನ್, ಕೀರವಾಣಿ ಜೊತೆ ಸಭೆಯಲ್ಲಿ ಭಾಗಿಯಾಗಿದ್ದರು. 28 ಕೋಟಿ ರೂ.ಗೆ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ಖರೀದಿಸಿದೆ ಎಂದು ತಿಳಿದು ಬಂದಿದೆ.

    ಆರ್‌ಆರ್‌ಆರ್‌ ಚಿತ್ರದ ಆಡಿಯೋ ಹಕ್ಕನ್ನು ಭಾರೀ ಮೊತ್ತಕ್ಕೆ ಖರೀದಿಸಲಾಗಿದೆ. ಒಟ್ಟು 5 ಭಾಷೆಗಳಲ್ಲಿ ಆರ್‌ಆರ್‌ಆರ್‌ ತೆರೆಕಾಣುತ್ತಿದ್ದು, ಐದೂ ಭಾಷೆಯ ಆಡಿಯೋ ಹಕ್ಕನ್ನು ಲಹರಿ ಹಾಗೂ ಟಿ ಸಿರೀಸ್ ತಮ್ಮ ಜೋಳಿಗೆಗೆ ಹಾಕಿಕೊಂಡಿವೆ. ಬಾಹುಬಲಿ ಚಿತ್ರದ ಆಡಿಯೋ ಹಕ್ಕನ್ನೂ ಇದೇ ಸಂಸ್ಥೆ ದಾಖಲೆ ಮೊತ್ತಕ್ಕೆ ಖರೀದಿಸಿತ್ತು.  ಇದನ್ನೂ ಓದಿ: RRR ಸಿನಿಮಾದ ಒಂದು ಸಾಂಗ್ ಶೂಟ್‍ಗೆ ರಾಜಮೌಳಿ ಬೃಹತ್ ಪ್ಲಾನ್

    ಈಗಾಗಲೇ ಆರ್‌ಆರ್‌ಆರ್‌ ಸಿನಿಮಾದ ಚಿತ್ರೀಕರಣ ಕೊನೇಯ ಹಂತ ತಲುಪಿದ್ದು, ಇದೇ ಆಗಸ್ಟ್ 1 ರಂದು ವಿಶೇಷ ಹಾಡನ್ನು ಬಿಡುಗಡೆಗೊಳಿಸಲು ಚಿತ್ರ ತಂಡ ಸಿದ್ಧತೆ ನಡೆಸಿದೆ. ಇದರ ಮಧ್ಯೆಯೇ ಜುಲೈ 15ರಂದು ಮೇಕಿಂಗ್ ವೀಡಿಯೋ ಬಿಡುಗಡೆ ಮಾಡಲು ಸಹ ತಯಾರಿ ನಡೆದಿದೆ. ಈ ಮೇಕಿಂಗ್ ವೀಡಿಯೋ ನಿಮ್ಮನ್ನು ಆರ್‍ಆರ್‍ಆರ್ ಪ್ರಪಂಚಕ್ಕೆ ಕೊಂಡೊಯ್ಯಲಿದ್ದು, ಈ ಮೂಲಕ ಚಿತ್ರವನ್ನು ಹೇಗೆ ನಿರ್ಮಿಸಲಾಗಿದೆ ಎಂಬುದರ ಝಲಕ್ ತೋರಿಸಲಾಗುತ್ತಿದೆ.

    ಹೀಗೆ ಆರ್‌ಆರ್‌ಆರ್‌ ಸಿನಿಮಾ ಕುರಿತು ಚಿತ್ರ ತಂಡ ಬ್ಯಾಕ್ ಟು ಬ್ಯಾಕ್ ಅಪ್‍ಡೇಟ್ ನೀಡುತ್ತಿದೆ. ಅಂದಹಾಗೆ ಬಹುನಿರೀಕ್ಷಿತ ಆರ್‍ಆರ್‍ಆರ್ ಸಿನಿಮಾ ಅಕ್ಟೋಬರ್ 13ರಂದು ವಿಶ್ವಾದ್ಯಂತ ತೆರೆಗಪ್ಪಳಿಸುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ. ಹೀಗಾಗಿ ಅಭಿಮಾನಿಗಳು ಆರ್‍ಆರ್‍ಆರ್ ಅಪ್‍ಡೇಟ್ಸ್‍ಗಾಗಿ ಕಾತರದಿಂದ ಕಾಯುತ್ತಿದ್ದಾರೆ.

  • ಆಲಿಯಾ ಅಭಿಮಾನಿಗಳನ್ನ ಚಕಿತಗೊಳಿಸಿದ ರಾಜಮೌಳಿ

    ಆಲಿಯಾ ಅಭಿಮಾನಿಗಳನ್ನ ಚಕಿತಗೊಳಿಸಿದ ರಾಜಮೌಳಿ

    ಮುಂಬೈ: ಇಂದು ಬಾಲಿವುಡ್ ಕ್ಯೂಟ್ ಬೆಡಗಿ ಆಲಿಯಾ ಭಟ್ ಹುಟ್ಟುಹಬ್ಬ. ಇವತ್ತು ಟಾಲಿವುಡ್ ಸ್ಟಾರ್ ನಿರ್ದೇಶಕ ರಾಜಮೌಳಿ ಆರ್‌ಆರ್‌ಆರ್‌ ಸಿನಿಮಾದಲ್ಲಿಯ ಆಲಿಯಾ ಭಟ್ ಪಾತ್ರದ ಲುಕ್ ರಿವೀಲ್ ಮಾಡುವ ಮೂಲಕ ಡಿಯರ್ ಜಿಂದಗಿ ಚೆಲುವೆಯ ಅಭಿಮಾನಿ ಬಳಗವನ್ನ ಚಕಿತಗೊಳಿಸಿದ್ದಾರೆ.

    ಸ್ಟುಡೆಂಟ್ ಆಫ್ ದಿ ಇಯರ್ ಫಿಲಂ ಮೂಲಕ ಬಿಟೌನ್ ಗೆ ಎಂಟ್ರಿ ಕೊಟ್ಟ ಹದಿಹರೆಯದ ಹುಡುಗಿ ಆಲಿಯಾ ಭಟ್. ಚಿಕ್ಕವಯಸ್ಸಿನಲ್ಲಿಯೇ ತನ್ನ ಗ್ಲಾಮರ್ ಲುಕ್, ಡ್ಯಾನ್ಸಿಂಗ್, ತುಟಿಯ ಮೇಲಿನ ಕಡುಗೆಂಪು ನಗುವಿನ ಜೊತೆಯಲ್ಲಿ ಸರಳ ನಟನೆ ಮೂಲಕ ತನ್ನದೇ ಅಭಿಮಾನಿ ಬಳಗವನ್ನ ಸೃಷ್ಟಿಸಿಕೊಂಡ ಅಪ್ಸರೆ ಆಲಿಯಾ ಭಟ್. ಇನ್ನು ತಾನು ಗ್ಲಾಮರ್ ಪಾತ್ರಕ್ಕೆ ಸೀಮಿತ ಅಲ್ಲ ಅನ್ನೋದನ್ನ ಉಡ್ತಾ ಪಂಜಾಬ್ ಸಿನಿಮಾದಲ್ಲಿ ನಿರೂಪಿಸಿದ್ದರು. ಶಾಹಿದ್ ಕಪೂರ್, ಕರೀನಾ ಕಪೂರ್ ಅಂತಹ ಸ್ಟಾರ್ ಗಳ ಜೊತೆ ಸ್ಕ್ರೀನ್ ಶೇರ್ ಮಾಡಿದ್ದ ಆಲಿಯಾ, ತಾನು ಹೊಸಬಳು ಅನ್ನೋದು ತಿಳಿಯದಂತೆ ಸರಿಸಮಾನವಾಗಿ ಆ್ಯಕ್ಟ್ ಮಾಡೋ ಮೂಲಕ ವಿಮರ್ಶಕರ ಮೆಚ್ಚುಗೆಯನ್ನ ಅಲಿಯಾ ಪಡೆದುಕೊಂಡಿದ್ದರು.

    2018ರಲ್ಲಿ ಬಿಡುಗಡೆಗೊಂಡಿದ್ದ ‘ರಾಝಿ’ಯಲ್ಲಿ ಸೆಹಮತ್ ಖಾನ್ ಪಾತ್ರಕ್ಕೆ ಜೀವ ತುಂಬಿದ್ದ ಆಲಿಯಾ ಭಟ್, ತಂದೆಯಿಂದ ಸಿನಿಮಾಕ್ಕೆ ಬಂದ ನಟಿ ಅಂತ ಹೇಳಿದ್ದ ಟೀಕಾಕಾರರಿಗೆ ತಿರುಗೇಟು ನೀಡಿದ್ದರು. ಪಾಕಿಸ್ತಾನದಲ್ಲಿ ಭಾರತದ ಮಗಳಾಗಿ ಗೂಢಾಚಾರಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಆಲಿಯಾ ಭಟ್, ತನ್ನ ನಟನೆ ಮೂಲಕ ಟೀಕಾಕಾರರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದರು.

    ಇದೀಗ ಟಾಲಿವುಡ್ ಪ್ರವೇಶಿಸಿರುವ ಆಲಿಯಾ ಭಟ್ ಆರ್‌ಆರ್‌ಆರ್‌ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ಹಳೆಯದು. ಆದ್ರೆ ಚಿತ್ರದ ಸೂತ್ರದಾರ ರಾಜಮೌಳಿ ಮಾತ್ರ ಚೆಲುವೆ ಆಲಿಯಾ ಪಾತ್ರದ ಗುಟ್ಟು ಬಿಟ್ಟಕೊಟ್ಟಿರಲಿಲ್ಲ. ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಆಲಿಯಾರ ಫಸ್ಟ್ ಲುಕ್ ರಿವೀಲ್ ಮಾಡುವ ಮೂಲಕ ಬರ್ತ್ ಡೇ ಗಿಫ್ಟ್ ನೀಡಿದ್ದಾರೆ. ಭಾನುವಾರವೇ ಫಸ್ಟ್ ಲುಕ್ ರಿಲೀಸ್ ಮಾಡುವ ಕುರಿತು ಸುಳಿವು ನೀಡಿದ್ದ ರಾಜಮೌಳಿ, ಇಂದು ಬೆಳಗ್ಗೆ 11 ಗಂಟೆಗೆ ಸೀತಾ ಪಾತ್ರವನ್ನ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

    ಸದೃಢ ಇಚ್ಛಾಶಕ್ತಿಯ ಎಲ್ಲ ಸಮಸ್ಯೆಗಳನ್ನ ಪರಿಹರಿಸುವ ಸೀತೆಯನ್ನ ನಾನು ಪರಿಚಯಿಸುತ್ತಿದ್ದೇವೆ ಎಂದು ರಾಜಮೌಳಿ ಬರೆದುಕೊಂಡಿದ್ದಾರೆ. ಹಸಿರು ಬಣ್ಣದ ಸೀರೆ, ಮುಡಿ ತುಂಬ ಕನಕಾಂಬರ ಧರಿಸಿ ತದೇಕಚಿತ್ತದಿಂದ ಕುಳಿತು ಯೋಚನೆಯಲ್ಲಿ ಮಗ್ನಳಾಗಿರುವ ಸೀತೆಯಾಗಿ ಆಲಿಯಾ ಮಿಂಚಿದ್ದಾರೆ. ಕೇವಲ ಒಂದೇ ಒಂದು ಲುಕ್, ಸಿನಿಮಾದಲ್ಲಿ ಆಲಿಯಾ ಪಾತ್ರದ ಪ್ರಾಮುಖ್ಯತೆಯನ್ನ ಹೇಳುವಂತಿದೆ. ನಟಿಯ ಹೊಸ ಲುಕ್ ನೋಡಿದ ಅಭಿಮಾನಿಗಳು  ಥ್ರಿಲ್ ಆಗಿದ್ದು, ಚಿತ್ರಕ್ಕಾಗಿ ಕಾದು ಕುಳಿತಿದ್ದಾರೆ.

     

     

    View this post on Instagram

     

    A post shared by Alia Bhatt ☀️ (@aliaabhatt)

  • ರಾಜಮೌಳಿ ನಿರ್ದೇಶನದಲ್ಲಿ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆ

    ರಾಜಮೌಳಿ ನಿರ್ದೇಶನದಲ್ಲಿ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆ

    ಹೈದರಾಬಾದ್: ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ತಮ್ಮ ಮುಂದಿನ ಸಿನಿಮಾ ಮಾಡುವುದಾಗಿ ಖ್ಯಾತ ನಿರ್ದೇಶಕ ಎಸ್‍ಎಸ್ ರಾಜಮೌಳಿ ಹೇಳಿದ್ದಾರೆ. ಆ ಮೂಲಕ ಟಾಲಿವುಡ್‍ನಲ್ಲಿ ಬಹುದಿನಗಳಿಂದ ಕೇಳಿ ಬರುತ್ತಿದ್ದ ಕ್ರೇಜಿ ಕಾಂಬಿನೇಷನ್ ಸುದ್ದಿಗಳಿಗೆ ತೆರೆ ಹೇಳಿದಿದ್ದಾರೆ.

    ಸದ್ಯ ಎನ್‍ಟಿಆರ್, ರಾಮ್ ಚರಣ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಆರ್‌ಆರ್‌ಆರ್ ಸಿನಿಮಾದಲ್ಲಿ ರಾಜಮೌಳಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಮಹೇಶ್ ಬಾಬು ಅವರೊಂದಿಗೆ ತಮ್ಮ ಮುಂದಿನ ಸಿನಿಮಾ ಎಂದು ಘೋಷಣೆ ಮಾಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ. ಅಲ್ಲದೇ ಚಿತ್ರದ ಕುರಿತು ಕೆಲ ಮಾಹಿತಿಗಳನ್ನು ಬಿಟ್ಟುಕೊಟ್ಟಿದ್ದಾರೆ.

    ಟಾಲಿವುಡ್ ಕ್ರೇಜಿ ಕಾಂಬಿನೇಷನ್ ಎಂದೇ ಸುದ್ದಿಯಾಗುತ್ತಿದ್ದ ಮಹೇಶ್ ಬಾಬು ಹಾಗೂ ರಾಜಮೌಳಿ ಅವರ ಸಿನಿಮಾವನ್ನು ದುರ್ಗಾ ಆಟ್ರ್ಸ್ ಬ್ಯಾನರ್ ಅಡಿ ಕೆಎಲ್ ನಾರಾಯಣ ನಿರ್ಮಾಣ ಮಾಡುತ್ತಿದೆ. ನಮ್ಮ ಮೂವರ ಕಾಂಬಿನೇಷನ್‍ನಲ್ಲಿ ಸಿನಿಮಾ ಮಾಡಬೇಕೆಂಬ ಯೋಚನೆ ಬಹಳ ದಿನಗಳಿಂದ ಇತ್ತು ಎಂದು ರಾಜಮೌಳಿ ಹೇಳಿದ್ದಾರೆ.

    ಇದೇ ಸಂದರ್ಭದಲ್ಲಿ ಆರ್‌ಆರ್‌ಆರ್ ಸಿನಿಮಾ ಕುರಿತು ಮಾತನಾಡಿರುವ ರಾಜಮೌಳಿ ಅವರು, ಲಾಕ್‍ಡೌನ್ ಮುನ್ನವೇ ಚಿತ್ರದ ಶೇ.80 ಶೂಟಿಂಗ್ ಪೂರ್ಣಗೊಳಿಸಿದ್ದೇವೆ. ಸದ್ಯ ನಮ್ಮ ತಂಡದ ವರ್ಕ್ ಫ್ರಮ್ ಹೋಂ ಮಾಡುತ್ತಿದೆ. ಇತ್ತ ವಿಜ್ಯುವಲ್ ಎಫೆಕ್ಟ್ ಕೆಲಸ ಕೂಡ ನಡೆಯುತ್ತಿದೆ. ನಾವು ಅಂದುಕೊಂಡಿರುವ ಸಮಯಕ್ಕೆ ಸಿನಿಮಾ ಬಿಡುಗಡೆ ಮಾಡುತ್ತೇವೆ. ಆದರೆ ಲಾಕ್‍ಡೌನ್ ವೇಳೆಯಲ್ಲಿ ರಾಮ್ ಚರಣ್ ವಿಡಿಯೋವನ್ನು ಬಿಡುಗಡೆ ಮಾಡುವುದಕ್ಕೆ ತುಂಬಾ ಯೋಚನೆ ಮಾಡಿದ್ದೇವೆ. ಬಳಿಕ ಎಲ್ಲರೂ ಮನೆಯಲ್ಲಿ ಕುಳಿತು ಕೊಂಡು ಈ ಬಗ್ಗೆ ಮಾತನಾಡಿಕೊಳ್ಳುತ್ತಾರೆ ಎಂದು ತೀರ್ಮಾನಿಸಿ ಬಿಡುಗಡೆ ಮಾಡಿದ್ದಾಗಿ ತಿಳಿಸಿದ್ದಾರೆ.

    ಆರ್‌ಆರ್‌ಆರ್ ಸಿನಿಮಾದಲ್ಲಿ ಎನ್‍ಟಿಆರ್, ರಾಮ್ ಚರಣ್ ನಟಿಸುತ್ತಿದ್ದಾರೆ. ಇತ್ತೀಚೆಗೆ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದ ಚಿತ್ರತಂಡ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿತ್ತು. ಟೀಸರಿನಲ್ಲಿ ಎನ್‍ಟಿಆರ್ ನೀರಿನ ಪ್ರತಿರೂಪವಾಗಿ ಕಾಣಿಸಿಕೊಂಡರೆ, ರಾಮ್ ಚರಣ್ ಬೆಂಕಿಯ ರೂಪವಾಗಿ ಕಾಣಿಸಿಕೊಂಡಿದ್ದಾರೆ. ಈ ಎರಡು ಶಕ್ತಿಗಳು ಒಂದಾದರೆ ಏನಾಗಬಹುದು ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆಯಂತೆ. ರಾಜಮೌಳಿ ನಿರ್ದೇಶನದ ಈ ಸಿನಿಮಾಕ್ಕೆ ಡಿವಿವಿ ದಾನಯ್ಯ ಬಂಡವಾಳ ಹೂಡಿದ್ದಾರೆ. ಇಡೀ ಸಿನಿಮಾ 1920ರ ಕಾಲಘಟ್ಟದಲ್ಲಿ ನಡೆಯಲಿದೆಯಂತೆ.

  • ಕೊರೊನಾ ಎಫೆಕ್ಟ್ – ರಾಜಾಮೌಳಿ ಆರ್‌ಆರ್‌ಆರ್ ಸಿನಿಮಾದಿಂದ ಆಲಿಯಾ ಔಟ್

    ಕೊರೊನಾ ಎಫೆಕ್ಟ್ – ರಾಜಾಮೌಳಿ ಆರ್‌ಆರ್‌ಆರ್ ಸಿನಿಮಾದಿಂದ ಆಲಿಯಾ ಔಟ್

    ಮುಂಬೈ: ಕೊರೊನಾ ದೇಶದ ಎಲ್ಲಾ ಕ್ಷೇತ್ರಗಳ ಮೇಲೆ ತನ್ನ ಪ್ರಭಾವವನ್ನು ಬೀರಿದೆ, ಹಾಗೆಯೇ ಭಾರತ ಚಿತ್ರರಂಗವನ್ನು ಸಂಕಷ್ಟಕ್ಕೆ ದೂಡಿದೆ. ಕೊರೊನಾದಿಂದ ನಿರ್ದೇಶಕ ರಾಜಾಮೌಳಿಯ ಆರ್‌ಆರ್‌ಆರ್ ಚಿತ್ರದಿಂದ ಬಾಲಿವುಡ್ ಬೆಡಗಿ ಆಲಿಯಾ ಭಟ್ ಹೊರಬಂದಿದ್ದಾರೆ ಎನ್ನಲಾಗಿದೆ.

    ಹೌದು ಸ್ಟಾರ್ ನಿರ್ದೇಶಕ ರಾಜಾಮೌಳಿ ನಿರ್ದೇಶದ ಆರ್‌ಆರ್‌ಆರ್ ಚಿತ್ರ ಬಹುಕೋಟಿ ವೆಚ್ಚದಲ್ಲಿ ತಯಾರಗುತ್ತಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಅವರು ಒಂದು ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕೊರೊನಾ ವೈರಸ್‍ನ ಪರಿಣಾಮದಿಂದ ಅವರು ಈ ಸಿನಿಮಾದಿಂದ ಹೊರಬಂದಿದ್ದಾರೆ ಎಂದು ಹೇಳಲಾಗಿದೆ.

    ಈ ಚಿತ್ರದ 75% ಚಿತ್ರೀಕರಣ ಮುಗಿಯಲು ಬಂದಿದೆ. ಅಂತಾಯೇ ಅಲಿಯಾ ಭಟ್ ಅವರು ಇರುವ ಚಿತ್ರದ ಭಾಗವನ್ನು ಚಿತ್ರತಂಡ ಇದೇ ತಿಂಗಳು ಚಿತ್ರೀಕರಣ ಮಾಡಲು ಪ್ಲಾನ್ ಕೂಡ ಮಾಡಿತ್ತು. ಇದಕ್ಕಾಗಿ ಆಲಿಯಾ ಕೂಡ ಡೇಟ್ ಕೊಟ್ಟಿದ್ದರು. ಆದರೆ ಭಾರತದಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರ ಸಿನಿಮಾ ಶೂಟಿಂಗ್ ಮಾಡಬೇಡಿ ಎಂದು ಸೂಚಿಸಿದ ಕಾರಣ ಚಿತ್ರೀಕರಣವನ್ನು ಮುಂದೂಡಲಾಗಿದೆ.

    ಆರ್‌ಆರ್‌ಆರ್ ಚಿತ್ರಕ್ಕಾಗಿ ಎಂದೇ ಬ್ಯುಸಿ ವೇಳಾಪಟ್ಟಿಯ ನಡುವೆ ಆಲಿಯಾ ಡೇಟ್ ಕೊಟ್ಟಿದ್ದರು. ಈಗ ಕೊರೊನಾ ವೈರಸ್ ಹಿನ್ನೆಲೆ ಚಿತ್ರೀಕರಣ ಮುಂದೂಡಲಾದ ಪರಿಣಾಮ ಅವರಿಗೆ ಮತ್ತೆ ಸಿನಿಮಾಗೆ ಡೇಟ್ ಕೊಡಲು ಆಗುತ್ತಿಲ್ಲ. ಯಾಕೆಂದರೆ ಅಲಿಯಾ ಈ ಸಿನಿಮಾದ ನಂತರ ಸದಕ್ 2, ಬ್ರಹ್ಮಾಸ್ತ್ರ ಮತ್ತು ಸಂಜಯ್ ಲೀಲಾ ಭನ್ಸಾಲಿ ಅವರ ಗಂಗುಬಾಯಿ ಕಥಿಯಾವಾಡಿ ಎಂಬ ಸಾಲು ಸಾಲು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಗಳ ನಡುವೆ ಮತ್ತೆ ಆರ್‌ಆರ್‌ಆರ್ ಚಿತ್ರಕ್ಕೆ ಡೇಟ್ ಕೊಡಲು ಸಾಧ್ಯವಿಲ್ಲ ಎಂದು ಅಲಿಯಾ ಹೇಳಿದ್ದಾರೆ ಎನ್ನಲಾಗಿದೆ.

    ರಾಜಾಮೌಳಿ ಅವರು ಸಿನಿಮಾ ಪಾತ್ರವನ್ನು ಆಯ್ಕೆ ಮಾಡುವಾಗ ಯಾರಲ್ಲಿ ನೈಜ ಪ್ರತಿಭೆ ಇದೆಯೋ ಮತ್ತು ಸಿನಿಮಾಕ್ಕೆ ಯಾರು ದುಡಿಯುತ್ತಾರೋ ಅವರನ್ನು ಮಾತ್ರ ರಾಜಮೌಳಿ ಆಯ್ಕೆ ಮಾಡುತ್ತಾರೆ. ಈ ಕಾರಣದಿಂದಲೇ ಆಲಿಯಾ ಅವರು ಅಪಾರ ಪ್ರಮಾಣ ಹಣ ನೀಡಿ ಚಿತ್ರಕ್ಕಾಗಿ ಕರೆತಂದಿದ್ದರು ಎನ್ನಲಾಗಿತ್ತು. ಆದರೆ ಮೂಲಗಳ ಪ್ರಕಾರ ಮತ್ತೆ ಆಲಿಯಾ ಭಟ್ ಅವರ ಡೇಟ್ ಪಡೆಯಲು ರಾಜಾಮೌಳಿ ಆಲಿಯಾ ಮ್ಯಾನೇಜರ್ ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.

    400 ರಿಂದ 450 ಕೋಟಿ ರೂ. ಬಜೆಟ್‍ನಲ್ಲಿ ತಯಾರಾಗುತ್ತಿರುವ ಆರ್‌ಆರ್‌ಆರ್ ಸಿನಿಮಾದಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಅವರ ಪಾತ್ರದಲ್ಲಿ ರಾಮ್ ಚರಣ್ ಮತ್ತು ಕೊಮರಾಮ್ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್‍ಟಿಆರ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡ ಸೆಪ್ಟೆಂಬರ್ ವೇಳೆಗೆ ಚಿತ್ರೀಕರಣ ಪೂರ್ಣಗೊಳಿಸಿ 2021ರ ಜನವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

  • ಹಾಲಿವುಡ್ ನಟನಿಗಾಗಿ ‘ಆರ್‌ಆರ್‌ಆರ್’ ಚಿತ್ರ ಬಿಡುಗಡೆಯನ್ನು ಮುಂದೂಡಿದ ರಾಜಮೌಳಿ

    ಹಾಲಿವುಡ್ ನಟನಿಗಾಗಿ ‘ಆರ್‌ಆರ್‌ಆರ್’ ಚಿತ್ರ ಬಿಡುಗಡೆಯನ್ನು ಮುಂದೂಡಿದ ರಾಜಮೌಳಿ

    ಹೈದರಾಬಾದ್: ಸ್ಟಾರ್ ನಿರ್ದೇಶಕ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಚಿತ್ರ ಬಿಡುಗಡೆಯನ್ನು ಹಾಲಿವುಡ್ ನಟನಿಗಾಗಿ ಮುಂದೂಡಲಾಗಿದೆ.

    2018ರ ನವೆಂಬರಿನಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಿದ್ದು, ಈ ವರ್ಷದ ಜುಲೈ ತಿಂಗಳ ಕೊನೆಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿತ್ತು. ಆದರೆ ಇತ್ತೀಚೆಗಷ್ಟೇ ಚಿತ್ರತಂಡ ಈ ಚಿತ್ರವನ್ನು ಮುಂದಿನ ವರ್ಷ ಜನವರಿ 8ಕ್ಕೆ ಬಿಡುಗಡೆ ಮಾಡುವುದಾಗಿ ಟ್ವೀಟ್ ಮಾಡಿತ್ತು. ಆದರೆ ಆಕೆ ಎಂಬುದರ ಕಾರಣವನ್ನು ಹೇಳಿರಲಿಲ್ಲ. ಆದರೆ ಚಿತ್ರ ಮುಂದೂಡಿದ್ದೇಕೆ ಎಂಬುದು ಈಗ ರಿವೀಲ್ ಆಗಿದೆ.

    ಆರ್‌ಆರ್‌ಆರ್ ಚಿತ್ರದಲ್ಲಿ ಜೂ. ಎನ್‍ಟಿಆರ್ ಹಾಗೂ ರಾಮ್‍ಚರಣ್ ಅವರ ಜೊತೆ ಹಾಲಿವುಡ್ ನಟ ಕೂಡ ನಟಿಸುತ್ತಿದ್ದಾರೆ. ಚಿತ್ರೀಕರಣದ ವೇಳೆ ಹಾಲಿವುಡ್ ನಟ ತೀವ್ರವಾಗಿ ಗಾಯಗೊಂಡಿದ್ದು, ದೀರ್ಘ ಸಮಯದ ವಿಶ್ರಾಂತಿಯಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಹಾಲಿವುಡ್ ನಟ, ರಾಮ್‍ಚರಣ್ ಅವರ ಜೊತೆಗೆ ಚಿತ್ರದಲ್ಲಿ ಹಲವು ದೃಶ್ಯಗಳಲ್ಲಿ ನಟಿಸಿದ್ದಾರೆ. ಆದರೆ ಇವರಿಬ್ಬರ ಶೂಟಿಂಗ್ ಇನ್ನೂ ಪೂರ್ಣಗೊಂಡಿಲ್ಲ. ನಟ ವಿಶ್ರಾಂತಿ ಪಡೆದು ಬಂದ ಬಳಿಕವಷ್ಟೇ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧಾರ ಮಾಡಿದೆ.

    ಆರ್‌ಆರ್‌ಆರ್ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, 1920ರ ಕಾಲಘಟ್ಟದಲ್ಲಿ ನಡೆಯುವ ಕತೆ ಇದಾಗಿದೆ. ಅದಕ್ಕೆ ತಕ್ಕಂತೆ ಅದ್ಧೂರಿಯಾಗಿ ಸೆಟ್ ನಿರ್ಮಾಣ ಮಾಡಿ ಚಿತ್ರೀಕರಣ ನಡೆಸುತ್ತಿದ್ದಾರೆ. ಈ ಚಿತ್ರ ಹೈದರಾಬಾದ್‍ನ ನಿಜಾಮರ ಹಾಗೂ ಬ್ರಿಟಿಷರ ಆಡಳಿತದ ವಿರುದ್ಧ ಕೋಮರಾಮ್ ಭೀಮ ಮತ್ತು ಅಲ್ಲುರಿ ಸೀತಾರಾಮ ರಾಜು ಹೋರಾಟ ನಡೆಸುವ ಕತೆ ಆಗಿದ್ದು, ಜೂ. ಎನ್‍ಟಿಆರ್ ಕೋಮರಾಮ್ ಭೀಮನಾಗಿ ಕಾಣಿಸಿಕೊಂಡರೆ, ರಾಮ್ ಚರಣ್ ಸೀತಾರಾಮ ರಾಜನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    300 ಕೋಟಿ ಬಜೆಟ್‍ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಬಾಲಿವುಡ್ ಕಲಾವಿದರಾದ ಅಲಿಯಾ ಭಟ್ ಮತ್ತು ಅಜಯ್ ದೇವಗನ್ ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಹತ್ತು ಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ಕನ್ನಡದಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳಿವೆ. ಡಿವಿವಿ ದಾನಯ್ಯ ಅವರು ಈ ಚಿತ್ರವನ್ನು ಡಿವಿವಿ ಎಂಟರ್‍ಟೈನ್‍ಮೆಂಟ್ಸ್‍ನಡಿ ನಿರ್ಮಾಣ ಮಾಡುತ್ತಿದ್ದು, ಎಂ.ಎಂ ಕೀರ್ವಾಣಿ ಸಂಗೀತ ನೀಡುತ್ತಿದ್ದಾರೆ.

  • ರಾಜಮೌಳಿ ಚಿತ್ರದಲ್ಲಿ ಕಿಚ್ಚನಿಗೆ ಮತ್ತೊಂದು ಆಫರ್

    ರಾಜಮೌಳಿ ಚಿತ್ರದಲ್ಲಿ ಕಿಚ್ಚನಿಗೆ ಮತ್ತೊಂದು ಆಫರ್

    ಬೆಂಗಳೂರು: ಟಾಲಿವುಡ್‍ನ ಖ್ಯಾತ ನಿರ್ದೇಶಕ ರಾಜಮೌಳಿ ಅವರು ತಮ್ಮ ನಿರ್ದೇಶನದ ಸಿನಿಮಾದಲ್ಲಿ ಮತ್ತೊಮ್ಮೆ ಸುದೀಪ್ ಅವರಿಗೆ ಆಫರ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.

    ನಟ ಕಿಚ್ಚ ಸುದೀಪ್ ಈ ಹಿಂದೆ ತೆಲುಗಿನ ಬ್ಲಾಕ್ ಮಾಸ್ಟರ್ ಹಿಟ್ ಸಿನಿಮಾ ‘ಬಾಹುಬಲಿ’ ಸಿನಿಮಾದಲ್ಲಿ ಅಸ್ಲಾಂ ಖಾನ್ ಎಂಬ ಶಸ್ತ್ರಾಸ್ತ್ರ ವ್ಯಾಪಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಇವರ ಪಾತ್ರ ಕೆಲವೇ ನಿಮಿಷ ಇದ್ದರೂ, ಬಹಳ ಉತ್ತಮವಾಗಿ ಮೂಡಿ ಬಂದಿತ್ತು.

    ಇದೀಗ ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ಮತ್ತೆ ಸುದೀಪ್ ಅಭಿನಯಿಸುವ ಸಾಧ್ಯತೆ ಇದೆ. ಸದ್ಯಕ್ಕೆ ರಾಜಮೌಳಿ ಅವರು ‘ಆರ್‌ಆರ್‌ಆರ್’ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಜೂನಿಯರ್ ಎನ್‍ಟಿಆರ್ ಮತ್ತು ರಾಮ್ ಚರಣ್ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಸುದೀಪ್ ಅಭಿನಯಿಸಲು ರಾಜಮೌಳಿ ಆಫರ್ ಕೊಟ್ಟಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

    ಆರ್‌ಆರ್‌ಆರ್ ಸಿನಿಮಾದಲ್ಲಿ ಸುದೀಪ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸುವ ಸಾಧ್ಯತೆಗಳಿವೆ. ಯಾಕೆಂದರೆ ಈ ಸಿನಿಮಾದಲ್ಲಿ ಇದು ತುಂಬಾ ಮುಖ್ಯವಾದ ಪಾತ್ರವಾಗಿದೆ. ಹೀಗಾಗಿ ಈ ಪಾತ್ರವನ್ನು ಸುದೀಪ್ ಅವರಿಂದಲೇ ಮಾಡಿಸಬೇಕೆಂದು ಚಿತ್ರತಂಡ ಪ್ಲಾನ್ ಮಾಡಿಯಂತೆ. ಆದರೆ ಚಿತ್ರತಂಡದಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.

    ಸದ್ಯಕ್ಕೆ ಸುದೀಪ್ ‘ಕೋಟಿಗೊಬ್ಬ 3’ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯುಸಿಯಿದ್ದಾರೆ. ಇತ್ತೀಚೆಗಷ್ಟೆ ಈ ಸಿನಿಮಾ ಮೊದಲ ಮೋಷನ್ ಪೋಸ್ಟರ್ ಬಿಡುಗಡೆಯಾಗಿತ್ತು.

  • ‘RRR’ ಸಿನಿಮಾ ಟೈಟಲ್ ವಿಮರ್ಶೆ- ಈ ಹೆಸರು ಸೂಟ್ ಆಗುತ್ತಾ? ಅಭಿಪ್ರಾಯ ತಿಳಿಸಿ ಎಂದ ರಾಜಮೌಳಿ

    ‘RRR’ ಸಿನಿಮಾ ಟೈಟಲ್ ವಿಮರ್ಶೆ- ಈ ಹೆಸರು ಸೂಟ್ ಆಗುತ್ತಾ? ಅಭಿಪ್ರಾಯ ತಿಳಿಸಿ ಎಂದ ರಾಜಮೌಳಿ

    ಹೈದರಾಬಾದ್: ಕೆಲವು ದಿನಗಳ ಹಿಂದೆ ರಾಮ ಯಾರು, ರಾವಣ ಯಾರು ಅನ್ನೊ ಮಾತುಕಥೆ ಸ್ಯಾಂಡಲ್‍ವುಡ್‍ ನಲ್ಲೂ ಜೋರಾಗಿತ್ತು. ಈಗ ಇದೇ ಪ್ರಶ್ನೆ ಟಾಲಿವುಡ್‍ನಲ್ಲಿ ಶುರುವಾಗಿದೆ. ಅದಕ್ಕೆ ಕಾರಣ ರಾಜಮೌಳಿ ಸಾರಥ್ಯದ ಹೊಚ್ಚಹೊಸ ಸಿನಿಮಾವಾಗಿದೆ. ಚಿತ್ರತಂಡ ಆರ್ ಆರ್ ಆರ್ ಅಂತ ವರ್ಕಿಂಗ್ ಟೈಟಲ್ ಫಿಕ್ಸ್ ಮಾಡಿಕೊಂಡಿತ್ತು. ಈಗ ಈ ಸಿನಿಮಾ ಟೈಟಲ್ ಬಗ್ಗೆ ತೆಲುಗು ನಾಡಿನಲ್ಲಿ ಚರ್ಚೆ ಶುರುವಾಗಿದೆ.

    ರಾಜಮೌಳಿ ಅವರು ಸಿನಿಮಾ ಮುಹೂರ್ತ ಆಗುತ್ತಿದ್ದಂತೆ ಟೈಟಲ್ ಅನೌನ್ಸ್ ಮಾಡುತ್ತಿದ್ದರು. ಆದರೆ ಈಗ ಶೂಟಿಂಗ್ ಕಂಪ್ಲೀಟ್ ಆದ ಮೇಲೆ ಟೈಟಲ್ ಅನೌನ್ಸ್ ಮಾಡುತ್ತೇನೆ ಎಂದಿದ್ದಾರೆ. ಆದರೆ ಮೂಲಗಳ ಪ್ರಕಾರ ಒಂದಿಷ್ಟು ಹೆಸರುಗಳು ಟಾಲಿವುಡ್‍ನಲ್ಲಿ ಸೌಂಡ್ ಮಾಡುತ್ತಿವೆ. ಅದರಲ್ಲಿ ‘ರಾಮರಾವಣ ರಾಜ್ಯಂ’ ಪ್ರಮುಖವಾದ ಹೆಸರಾಗಿದೆ.

    ಥ್ರಿಬಲ್ ಆರ್ ಅನ್ನೊ ವರ್ಕಿಂಗ್ ಟೈಟಲ್‍ಗೆ ಮ್ಯಾಚ್ ಆಗುವಂತೆ ಹೊಸ ಸಿನಿಮಾದ ಹೆಸರನ್ನು ರಾಜಮೌಳಿ ಹುಡುಕುತ್ತಿದ್ದು,`ರಾಮರಾವಣ ರಾಜ್ಯಂ’ ಟೈಟಲ್ ಸೂಟ್ ಆಗುತ್ತಾ, ಒಮ್ಮೆ ನೋಡಿ ಅಂತ ಚಿತ್ರತಂಡದ ಸದಸ್ಯರಿಗೂ ಹೇಳಿದ್ದಾರಂತೆ. ಈ ಟೈಟಲ್ ಕೇಳಿದ ರಾಮ್‍ಚರಣ್ ಹಾಗೂ ಜೂನಿಯರ್ ಎನ್‍ಟಿಆರ್ ಅಭಿಮಾನಿಗಳು ಹಾಗಾದರೆ ರಾಮ ಯಾರು ರಾವಣ ಯಾರು ಅನ್ನೊದ್ರ ಬಗ್ಗೆ ಚರ್ಚೆ ಶುರು ಮಾಡಿಕೊಂಡಿದ್ದಾರೆ.

    ಇದೇ ಟೈಟಲ್ ಫೈನಲ್ ಆಗುತ್ತಾ ಇಲ್ವಾ ಅನ್ನೊದು ಕನ್ಫರ್ಮ್ ಆಗಬೇಕು ಎಂದರೆ ಸಂಕ್ರಾತಿ ಹಬ್ಬದವರೆಗೂ ಕಾಯಬೇಕು. ಯಾಕೆಂದರೆ ಚಿತ್ರತಂಡ ಸದ್ಯಕ್ಕೆ ಫಸ್ಟ್ ಶೆಡ್ಯೂಲ್ ಕಂಪ್ಲೀಟ್ ಮಾಡಿದ್ದು, ಹಬ್ಬ ಆದ ಮೇಲೆ ಸೆಕೆಂಡ್ ಶೆಡ್ಯೂಲ್ ಪ್ಲಾನ್ ಮಾಡಿದೆ. ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ಕಂಪ್ಲೀಟ್ ಆದ ಮೇಲೆ ರಾಜ್‍ಮೌಳಿ ಅವರು ಟೈಟಲ್ ಅನೌನ್ಸ್ ಮಾಡುತ್ತಾರೆ.

    ಸದ್ಯಕ್ಕೆ ಈ `ರಾಮರಾವಣ ರಾಜ್ಯಂ’ ಜೊತೆ ರಾಜಸಿಂಹ ಅನ್ನೊ ಟೈಟಲ್ ಕೂಡ ಸೌಂಡ್ ಮಾಡುತ್ತಿದೆ. ರಾಜಮೌಳಿ ಅವರು ಯಾವ ಟೈಟಲ್ ಅನ್ನು ಫೈನಲ್ ಮಾಡುತ್ತಾರೋ ಅನ್ನೊದನ್ನ ಕಾದುನೋಡಬೇಕಿದೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಭಾಸ್ ಒಬ್ಬ ಕೆಟ್ಟ ಹುಡುಗ, ಅದು ನಿಮ್ಗೆ ಗೊತ್ತಾಗಲ್ಲ: ರಾಜಮೌಳಿ

    ಪ್ರಭಾಸ್ ಒಬ್ಬ ಕೆಟ್ಟ ಹುಡುಗ, ಅದು ನಿಮ್ಗೆ ಗೊತ್ತಾಗಲ್ಲ: ರಾಜಮೌಳಿ

    ಮುಂಬೈ: ಬಾಹುಬಲಿ ನಟ ಪ್ರಭಾಸ್ ಒಬ್ಬ ಕೆಟ್ಟ ಹುಡುಗ. ಅವನು ಬ್ಯಾಡ್ ಬಾಯ್ ಎಂದು ಕಂಡು ಹಿಡಿಯಲು ನಿಮಗೆ ಸಾಧ್ಯವೇ ಇಲ್ಲ ಎಂದು ಸ್ಟಾರ್ ನಿರ್ದೇಶಕ ರಾಜಮೌಳಿ ಹೇಳಿದ್ದಾರೆ.

    ಇತ್ತೀಚೆಗೆ ನಿರ್ದೇಶಕ ಕರಣ್ ಜೋಹರ್ ನಡೆಸಿ ಕೊಡುವ `ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಪ್ರಭಾಸ್ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಭಾಸ್ ಜೊತೆ ಬಾಹುಬಲಿ ಚಿತ್ರದ ನಿರ್ದೇಶಕ ರಾಜಮೌಳಿ ಹಾಗೂ ರಾಣಾ ದಗ್ಗುಬಾಟಿ ಕೂಡ ಪಾಲ್ಗೊಂಡಿದ್ದರು. ಈ ವೇಳೆ ರಾಜಮೌಳಿ ಪ್ರಭಾಸ್ ಬಗ್ಗೆ ಈ ಹೇಳಿಕೆ ನೀಡಿದ್ದಾರೆ.

    ಕಾರ್ಯಕ್ರಮದಲ್ಲಿ ಕರಣ್ ಜೋಹರ್, ರಾಣಾ ಹಾಗೂ ಪ್ರಭಾಸ್ ನಡುವೆ ಬ್ಯಾಡ್ ಬಾಯ್ ಯಾರು ಎಂದು ರಾಜಮೌಳಿ ಅವರನ್ನು ಪ್ರಶ್ನಿಸಿದ್ದಾರೆ. ಆಗ ರಾಜಮೌಳಿ ಬ್ಯಾಡ್ ಬಾಯ್ ಎಂದರೆ ಅದು ಪ್ರಭಾಸ್. ಆದರೆ ಅವನು ಬ್ಯಾಡ್ ಬಾಯ್ ಎಂದು ನಿಮಗೆ ಕಂಡು ಹಿಡಿಯಲು ಸಾಧ್ಯವಿಲ್ಲ ಎಂದು ಉತ್ತರಿಸಿದರು. ಈ ವೇಳೆ ರಾಣಾ ನಾನು ತಪ್ಪು ಮಾಡಿದ್ದರೆ ಬೇಗ ಸಿಕ್ಕಿ ಹಾಕಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅನುಷ್ಕಾ ಜೊತೆಗಿನ ಸಂಬಂಧದ ರಹಸ್ಯ ಬಿಚ್ಚಿಟ್ಟ ಪ್ರಭಾಸ್: ವಿಡಿಯೋ

    ಈ ಕಾರ್ಯಕ್ರಮದ ಪ್ರೋಮೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ನೀವು ಸಿಂಗಲ್ ಆಗಿದ್ದೀರಾ? ನಿಮ್ಮ ಮತ್ತು ಅನುಷ್ಕಾ ಡೇಟಿಂಗ್ ಸುದ್ದಿ ನಿಜಾವೇ ಎಂದು ಪ್ರಭಾಸ್ ಅವರನ್ನು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಪ್ರಭಾಸ್, ನಾನು ಸಿಂಗಲ್ ಎಂದು ಉತ್ತರಿಸಿದ್ದಾರೆ. ನಂತರ ಕರಣ್ ರ‍್ಯಾಪಿಡ್ ಫೈರ್ ರೌಂಡ್‍ನಲ್ಲಿ ಕರಣ್ ಅವರು ಪ್ರಭಾಸ್ ನೀವು ಈ ಸೋಫಾದಲ್ಲಿ ಕುಳಿತು ಸುಳ್ಳು ಹೇಳಿದ್ದೀರಿ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಆಗ ಪ್ರಭಾಸ್ ಹೌದು ಎಂದು ಹೇಳಿ ಎಲ್ಲರ ಮುಂದೆ ಜೋರಾಗಿ ನಕ್ಕಿದ್ದಾರೆ.

    ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ದಕ್ಷಿಣ ಭಾರತದ ನಟರು ಭಾಗಿಯಾಗಿದ್ದಾರೆ. ಬಾಹುಬಲಿ ಚಿತ್ರತಂಡ ಜೊತೆ ಕರಣ್ ನಡೆಸಿಕೊಟ್ಟ ಈ ಸಂಚಿಕೆ ಡಿಸೆಂಬರ್ ತಿಂಗಳ ಕೊನೆಯಲ್ಲಿ ಪ್ರಸಾರವಾಗಲಿದೆ. ಪ್ರಭಾಸ್ ಅವರಿಗೆ 38 ವರ್ಷವಾಗಿದ್ದು, ಸಲ್ಮಾನ್ ಖಾನ್ ಅವರಂತೆ ಪ್ರಭಾಸ್ ಅವರನ್ನು ಅಭಿಮಾನಿಗಳು ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಎಂದು ಕರೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಶ್‍ಗಿಂತ ದೊಡ್ಡ ಹೀರೋ ಅವರ ತಂದೆ: ರಾಜಮೌಳಿ

    ಯಶ್‍ಗಿಂತ ದೊಡ್ಡ ಹೀರೋ ಅವರ ತಂದೆ: ರಾಜಮೌಳಿ

    -ಕೆಜಿಎಫ್ ಚಿತ್ರದ ವಿಡಿಯೋ ನೋಡಿದ ಅನುಭವ ಹಂಚಿಕೊಂಡ ಬಾಹುಬಲಿಗಾರು

    ಹೈದರಾಬಾದ್: ನಾಲ್ಕೈದು ವರ್ಷಗಳ ಹಿಂದೆ ಸಾಯಿಗಾರು ಅವರ ಹತ್ತಿರ ಮಾತನಾಡುತ್ತಿರುವಾಗ ಕನ್ನಡದಲ್ಲಿ ಪ್ರಚಲಿತನಾಗಿರುವ ನಟ ಯಾರು ಅಂತಾ ಕೇಳಿದಾಗ ಯಶ್ ಅಂದ್ರು. ಆ ವೇಳೆ ನನಗೆ ಯಶ್ ಬಗ್ಗೆ ಹೆಚ್ಚಾಗಿ ಗೊತ್ತಿರಲಿಲ್ಲ. ಯಾರು ಯಶ್, ಬ್ಯಾಗ್ರೌಂಡ್ ಏನು ಅಂತಾ ಮರುಪ್ರಶ್ನೆ ಮಾಡಿದೆ. ಯಶ್ ಓರ್ವ ಬಿಎಂಟಿಸಿ ಚಾಲಕನ ಪುತ್ರನಾಗಿದ್ದು, ಸಾಲು ಸಾಲು ಹಿಟ್ ಸಿನಿಮಾ ನೀಡಿದ್ದಾರೆ. ಮಗ ಸೂಪರ್ ಸ್ಟಾರ್ ಆದ್ರು ತಂದೆ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ವಿಷಯ ಕೇಳಿದಾಗ ಯಶ್ ಗಿಂತ ಅವರ ತಂದೆಯೇ ದೊಡ್ಡ ಹೀರೋ ಎಂದು ನನಗೆ ಅನ್ನಿಸುತ್ತದೆ ಅಂತ ರಾಜಮೌಳಿ ಹೇಳಿದರು.

    ಭಾನುವಾರ ಸಂಜೆ ಹೈದರಾಬಾದ್ ನಲ್ಲಿ ನಡೆದ ಕೆಜಿಎಫ್ ಚಿತ್ರತಂಡ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ವರ್ಷದ ಏಪ್ರಿಲ್ ನಲ್ಲಿ ನನ್ನ ಸಿನಿಮಾದ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿದ್ದೆ. ಈ ವೇಳೆ ತಾಜ್ ವೆಸ್ಟ್ ಹೋಟೆಲ್ ನಲ್ಲಿ ಉಳಿದುಕೊಂಡಾಗ ಯಶ್ ಸಹ ಅಲ್ಲಿದ್ದರು. ನನ್ನನ್ನು ಭೇಟಿಯಾದ ಯಶ್ ಮತ್ತು ಚಿತ್ರತಂಡ, ಕೆಜಿಎಫ್ ಚಿತ್ರದ ಟೀಸರ್ ಸೇರಿದಂತೆ ಕೆಲವು ದೃಶ್ಯಗಳನ್ನು ತೋರಿಸಿದರು. ಚಿತ್ರದ ದೃಶ್ಯ ನೋಡಿದಾಗ ನನಗೆ ನಿಜವಾಗಲು ಶಾಕ್ ಆಗಿತ್ತು. ದೃಶ್ಯಗಳ ಗುಣಮಟ್ಟ, ಎಫೆಕ್ಸ್ ಎಲ್ಲವು ಪರಿಪೂರ್ಣತೆಯಿಂದ ಕೂಡಿತ್ತು. ಮುಖ್ಯವಾಗಿ ಚಿತ್ರದ ದೃಶ್ಯಗಳ ಒರಿಜಿನಾಲಿಟಿ ನನಗೆ ಇಷ್ಟವಾಯಿತು. ದೊಡ್ಡ ಸಿನಿಮಾ ಅಂತಾ ಹೇಳಿಕೊಳ್ಳುವವರು, ಬೇರೆ ಸಿನಿಮಾಗಳಿಂದ ದೃಶ್ಯಗಳಂತೆ ನಮ್ಮಲ್ಲಿ ತೋರಿಸ್ತಾರೆ. ಕೆಜಿಎಫ್ ಚಿತ್ರದ ಪ್ರತಿಯೊಂದು ದೃಶ್ಯಗಳಲ್ಲಿ ಹೊಸತನವಿದೆ. ಇದು ಮೂರು ವರ್ಷದ ಪರಿಶ್ರಮ, ಹಾಗಾಗಿ ಚಿತ್ರವನ್ನು ದೇಶಾದ್ಯಂತ ಬಿಡುಗಡೆ ಮಾಡಲು ಯೋಚಿಸುತ್ತಿದ್ದೇವೆ ಅಂತಾ ಅಂದ್ರು.

    ನಾನು ಕೂಡಲೇ ಮುಂಬೈನಲ್ಲಿರುವ ಅನಿಲ್ ತಡಾನಿ ಫೋನ್ ಮಾಡಿ ಕನ್ನಡದಲ್ಲೊಂದು ಹೊಸತನದ ವಿಭಿನ್ನ ಸಿನಿಮಾ ಸಿದ್ಧವಾಗುತ್ತಿದೆ. ಯಶ್ ಎಂಬವರು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಕೆಲವು ದೃಶ್ಯಗಳನ್ನು ನೋಡಿದ್ದು, ನನಗೆ ತುಂಬಾನೇ ಇಷ್ಟವಾಗಿದೆ. ನೀವು ಒಂದು ಸಾರಿ ಸಿನಿಮಾದ ಕ್ಲಿಪ್ಸ್ ನೋಡಿ ಏನಾದ್ರು ಮಾಡುವುದಕ್ಕೆ ಸಾಧ್ಯವಾಗುತ್ತಾ ಅಂತ ಕೇಳಿದೆ. ಚಿತ್ರದ ದೃಶ್ಯ ನೋಡಿದ ಖುಷಿಗೆ ಅಂದು ನನ್ನ ಆಪ್ತರೆಲ್ಲರಿಗೂ ಕನ್ನಡದಲ್ಲೊಂದು ಸೂಪರ್ ಸಿನಿಮಾ ಬರುತ್ತಿದೆ ಅಂತಾ ಹೇಳಿದೆ.

    ದೃಶ್ಯಗಳಲ್ಲಿ ಕೇವಲ ಯಶ್ ಮಾತ್ರ ಕಾಣಲ್ಲ. ಚಿತ್ರದ ಹಿಂದೆ ಕೆಲಸ ಮಾಡಿದ ಪ್ರತಿ ತಂತ್ರಜ್ಞರ ಕ್ಷಮತೆ ನನಗೆ ಕಾಣುತ್ತಿತ್ತು. ಚಿತ್ರತಂಡದಲ್ಲಿ ಕೆಲಸ ಮಾಡಿದ ತಂತ್ರಜ್ಞರ ಪರಿಚಯ ನನಗಿಲ್ಲ. ಆದ್ರೆ ಸಿನಿಮಾದಲ್ಲಿ ಅವರ ಅಚ್ಚುಕಟ್ಟಿನ ಕೆಲಸದಲ್ಲಿ ಕಾಣುತ್ತಾರೆ. ಕೆಜಿಎಫ್ ಎಂಬ ಉತ್ಪನ್ನ ಹೊರಬರಲು ಪ್ರತಿಯೊಬ್ಬರ ಕಠಿಣ ಪರಿಶ್ರಮ ಅಡಕವಾಗಿದೆ. ತೆಲುಗು ಜನರು ಸಿನಿಮಾ ಮಾಡಿದ್ದು ಯಾರು? ಯಾವ ಭಾಷೆ? ಅಂತಾ ನೋಡಲ್ಲ. ಚಿತ್ರದ ಗುಣಮಟ್ಟ ಕಥೆಯನ್ನು ನೋಡುತ್ತಾರೆ. ತೆಲುಗು ಮಾತ್ರವಲ್ಲದೇ ಎಲ್ಲ ಭಾಷೆಯ ಸಿನಿಮಾಗಳನ್ನು ನೋಡುತ್ತಾರೆ. ಅಂತೆಯೇ ಕೆಜಿಎಫ್ ಸಿನಿಮಾ ನೋಡಿ ಅಂತ ರಾಜಮೌಳಿ ಜನರಲ್ಲಿ ಮನವಿ ಮಾಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಜಿಎಫ್ ಅಭಿಮಾನಿಗಳಿಗೆ ಧಮಾಕೆದಾರ್ ಸುದ್ದಿ

    ಕೆಜಿಎಫ್ ಅಭಿಮಾನಿಗಳಿಗೆ ಧಮಾಕೆದಾರ್ ಸುದ್ದಿ

    ಬೆಂಗಳೂರು: ಇಡೀ ಭಾರತೀಯ ಸಿನಿ ಅಂಗಳದಲ್ಲಿ ಕೆಜಿಎಫ್ ಧ್ಯಾನ ಆರಂಭವಾಗಿದೆ. ಚಿತ್ರ ತೆರೆಮೇಲೆ ಬರೋದನ್ನು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಚಿತ್ರದ ಒಂದು ಟೀಸರ್, ಎರಡು ಟ್ರೇಲರ್ ಮತ್ತು ಒಂದು ಲಿರಿಕಲ್ ಹಾಡಿನ ವಿಡಿಯೋ ರಿಲೀಸ್ ಆಗಿದೆ. ಈ ಎಲ್ಲ ವಿಡಿಯೋ ನೋಡಿದವ್ರು ಸಿನಿಮಾ ಯಾವಾಗ ಬರುತ್ತೆ ಅಂತಾ ಕಾಯುತ್ತಿದ್ದಾರೆ. ಇಂದು ಸಂಜೆ 7 ಗಂಟೆಗೆ ಚಿತ್ರದ ಮತ್ತೊಂದು ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಲಿದೆ.

    ಈ ಸಂಬಂದ ಲಹರಿ ಮ್ಯೂಸಿಕ್ ಸಂಸ್ಥೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದೆ. ಈ ಮೊದಲು ಪವರ್ ಹುಡುಕಿ ಹೊರಟ ಕೋಲಾರದ ಹುಡುಗ ಹೇಗೆ ಮುಂಬೈ ಭೂಗತ ಲೋಕದ ನಾಯಕನಾಗಿ ‘ಎಲ್ಲರಿಂದಲೂ ರಾಕಿ ಭಾಯ್’ ಅಂತಾ ಕರೆಸಿಕೊಳ್ಳುತ್ತಾನೆ ಎಂಬುದನ್ನು ತೋರಿಸಲಾಗಿತ್ತು. ಈ ಹಾಡಿನ ಸಾಲುಗಳು ಮಾಸ್ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಈಗ ಸೆಂಟಿಮೆಂಟ್ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳಲು ಚಿತ್ರತಂಡ ಪ್ರಯತ್ನ ಮಾಡುತ್ತಿದೆ.

    ತಾಯಿ ಮತ್ತು ಮಗನ ಸಂಬಂಧವನ್ನು ಹೇಳುವ ‘ಗರ್ಭದಿ’ ಹಾಡು ರಿಲೀಸ್ ಆಗಲಿದೆ. ಹಾಡಿನ ಸಾಹಿತ್ಯ ಸಂಪೂರ್ಣ ಮಗನಿಗಾಗಿ ಕಾಯುತ್ತಿರುವ ತಾಯಿ, ಅಮ್ಮನ ಪ್ರೀತಿ ಹುಡುಕುವ ಮಗನ ಬಗ್ಗೆ ಹೇಳುವ ಪದಪುಂಜವನ್ನು ಒಳಗೊಂಡಿದೆಯಂತೆ. ಅಮ್ಮನ ಪ್ರೀತಿಗಾಗಿ ಹಾತೊರೆಯುತ್ತಿರುವ ಮಗ, ಪುತ್ರನ ಬರುವಿಕೆಗಾಗಿ ಶಬರಿಯಂತೆ ಕಾಯುವ ತಾಯಿ ಎಲ್ಲವನ್ನು ಈ ಹಾಡು ವರ್ಣನೆ ಮಾಡಲಿದೆ ಎಂದು ಹೇಳಲಾಗುತ್ತಿದೆ.

    ಇವತ್ತು ಹೈದರಾಬಾದ್ ನಲ್ಲಿ ಕೆಜಿಎಫ್ ಚಿತ್ರದ ವಿಶೇಷ ಅದ್ಧೂರಿ ಕಾರ್ಯಕ್ರಮ ಸಂಜೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಕೆಜಿಎಫ್ ಚಿತ್ರತಂಡ ಸೇರಿದಂತೆ ಬಾಹುಬಲಿ ನಿರ್ದೇಶಕ ರಾಜಮೌಳಿ ಭಾಗಿಯಾಗಲಿದ್ದಾರೆ. ಟಾಲಿವುಡ್ ನ ಇತರೆ ಕಲಾವಿದರು ಕಾರ್ಯಕ್ರಮದಲ್ಲಿ ಹಾಜರಾಗಲಿದ್ದಾರೆ. ಈ ವೇಳೆ ಕೆಜಿಎಫ್ ಚಿತ್ರೀಕರಣದ ಹೊಸ ಮಾಹಿತಿಗಳನ್ನು ಚಿತ್ರತಂಡ ಹೊರಹಾಕಲಿದೆಯಂತೆ.

    ಇಂದು ಯಶ್ ಮತ್ತು ರಾಧಿಕಾ ಪಂಡಿತ್ ಎರಡನೇ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಡಿಸೆಂಬರ್ 2ರಂದು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಪತ್ನಿ ರಾಧಿಕಾರನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಎರಡು ವರ್ಷದ ಹಿಂದೆ ಸಂಪ್ರದಾಯಬದ್ಧವಾಗಿ ಸಂಗಾತಿಯಾಗಿ ರಾಧಿಕಾ ಅವರು ಯಶ್ ಗೃಹ ಪ್ರವೇಶ ಮಾಡಿದ್ದರು. ಇಂದು ಅದೇ ಶುಭ ಗಳಿಗೆಯಲ್ಲಿ ಪುತ್ರಿ ಗೃಹ ಪ್ರವೇಶ ಮಾಡುತ್ತಿರೋದು ಮತ್ತೊಂದು ವಿಶೇಷತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv