Tag: Rajaguru Dwarakanath

  • ಡಿಕೆಶಿ ಸಜ್ಜನರ ಸಹವಾಸ ಮಾಡಲಿ: ರಾಜಗುರು ದ್ವಾರಕಾನಾಥ್

    ಡಿಕೆಶಿ ಸಜ್ಜನರ ಸಹವಾಸ ಮಾಡಲಿ: ರಾಜಗುರು ದ್ವಾರಕಾನಾಥ್

    – ಅಹರ್ನ ಶಾಸಕರಿಗೆ ಶಿಕ್ಷೆ ಫಿಕ್ಸ್

    ಹಾಸನ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಜ್ಜನರ ಸಹವಾಸ ಮಾಡಲಿ ಎಂದು ರಾಜಗುರು ದ್ವಾರಕಾನಾಥ್ ಸಲಹೆ ನೀಡಿದ್ದಾರೆ.

    ಹುಟ್ಟೂರು ರಾಮನಗರ ಜಿಲ್ಲೆಯ ಚನ್ನರಾಯಪಟ್ಟಣದ ಅಣತಿ ಗ್ರಾಮದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರಿಗೆ ನಮ್ಮ ಮನೆ ಬಾಗಿಲು ತೆರೆದಿದೆ. ಅವರಿಗೆ ಈಗ ಎದುರಾಗಿರುವುದು ಕಂಟಂಕ ಅಲ್ಲ. ರಾಮ ವನವಾಸ ಮುಗಿಸಿದ ಮೇಲೆ ಅಯೋಧ್ಯೆಗೆ ಬಂದು ಕೂರಲಿಲ್ಲವೆ? ಅಂತೆ ಡಿ.ಕೆ.ಶಿವಕುಮಾರ್ ಅವರು ಹೊರ ಬಂದಿದ್ದಾರೆ. ಇನ್ನು ಮುಂದೆ ಸಜ್ಜನರ ಸಹವಾಸ ಮಾಡಲಿ ಎಂದು ತಿಳಿಸಿದ್ದಾರೆ.

    ಡಿ.ಕೆ.ಶಿವಕುಮಾರ್ ಅವರು ಇಲ್ಲಿವರೆಗೂ ನನ್ನ ಬಳಿ ಬಂದಿಲ್ಲ. ಅವರು ಅಲ್ಲೆಲ್ಲೋ ಹೋಗಿದ್ದಾರೆ ಎನ್ನುತ್ತಾರೆ. ನಾನು ಅವರನ್ನ ಸಂಪರ್ಕಿಸಿಲ್ಲ. ಅವರೊಂದಿಗೆ ಯಾರೂ ಇಲ್ಲದಿದ್ದಾಗ ನಾನಿದ್ದೆ. ಅವರ ಜೀವನದಲ್ಲಿ ಮೊದಲು ಬಂದವನು ನಾನು. ಬಂಗಾರಪ್ಪ ಮಂತ್ರಿಮಂಡಲದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಸಚಿವರಾಗಿ ಮಾಡಿದ್ದೆ. ಮಾಜಿ ಸಚಿವರ ಜೀವನದಲ್ಲಿ ನನ್ನ ಪಾತ್ರ ಬಹಳ ಇದೆ. ನಮ್ಮ ಮನೆಗೆ ಬರುವರೆಲ್ಲಾ ದೇವರೆ. ಡಿ.ಕೆ.ಶಿವಕುಮಾರ್ ಗಂಧದ ಜೊತೆಗೆ ಗುದ್ದಾಡಲಿ. ಉತ್ತಮರೊಂದಿಗೆ ಹೋರಾಡಲಿ ಎಂದು ಹೇಳಿದರು.

    ಉಪ ಚುನಾವಣೆಯಲ್ಲಿ ಪಕ್ಷಾಂತರಿಗಳಿಗೆ ಆಘಾತ ಕಾದಿದೆ. ಅನರ್ಹ ಶಾಸಕರಿಗೆ ದೇವರೇ ಶಿಕ್ಷೆ ಕೊಡುತ್ತಾನೆ. ತಂದೆ-ತಾಯಿ ಬೈದರೆಂದು ಮನೆ ಬಿಟ್ಟು ಹೋಗಲು ಸಾಧ್ಯವೆ? ಪಕ್ಷ ತಾಯಿ ಸಮಾನ. ಸರಿ ಹೊಂದದೆ ಇದ್ದರೆ ಗೆದ್ದ ಪಕ್ಷದಿಂದ ಐದು ವರ್ಷ ಪೂರೈಸಿ ಬಿಡಬೇಕು. ಹೀಗೆ ಮಧ್ಯದಲ್ಲಿ ಪಕ್ಷ ಬಿಟ್ಟು ಹೋದರೆ ಸಾರ್ವಜನಿಕರ ಸಮಯ, ಹಣ ವ್ಯರ್ಥವಾಗುತ್ತದೆ ಎಂದು ಅನರ್ಹ ಶಾಸಕರ ವಿಚಾರದಲ್ಲಿ ಮಾರ್ಮಿಕವಾಗಿ ಭವಿಷ್ಯ ನುಡಿದರು.

    ನವೆಂಬರ್ 4ರಂದು ಗುರು ಮುಂದೆ ಚಲಿಸಿದ್ದಾನೆ. ಹೀಗಾಗಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಾರ್ಚ್ ವರೆಗೆ ಆಘಾತಗಳಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹುಷಾರಾಗಿ ಸರ್ಕಾರ ನಡೆಸಬೇಕು ಎಂದು ತಿಳಿಸಿದರು.

  • ಎಚ್‍ಡಿಡಿ, ನಿಖಿಲ್, ಪ್ರಜ್ವಲ್ ಗೆಲುವು ಖಚಿತ: ರಾಜಗುರು ದ್ವಾರಕನಾಥ್

    ಎಚ್‍ಡಿಡಿ, ನಿಖಿಲ್, ಪ್ರಜ್ವಲ್ ಗೆಲುವು ಖಚಿತ: ರಾಜಗುರು ದ್ವಾರಕನಾಥ್

    – ಸಿಎಂ ಟೆಂಪಲ್ ರನ್‍ನಿಂದ ರಾಜ್ಯಕ್ಕೆ ಒಳ್ಳೆಯದಾಗುತ್ತೆ

    ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರದಿಂದ ಎಚ್.ಡಿ.ದೇವೇಗೌಡ, ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಹಾಗೂ ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಗೆಲುವು ಖಚಿತ ಎಂದು ರಾಜಗುರು ದ್ವಾರಕನಾಥ್ ಭವಿಷ್ಯ ನುಡಿದಿದ್ದಾರೆ.

    ಸಿಎಂ ಭೇಟಿಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಅವರು ಗೊಂದಲದಲ್ಲಿ ಇಲ್ಲ, ಪ್ರಶಾಂತವಾಗಿದ್ದಾರೆ. ಸುಮ್ಮನೆ ಆರೋಪ ಮಾಡುವ ಜನರ ಮಾತುಗಳ ಬಗ್ಗೆ ಹೆಚ್ಚು ವಿಚಾರ ಮಾಡದಂತೆ, ಯಾವುದಕ್ಕೂ ಧೈರ್ಯ ಕಳೆದುಕೊಳ್ಳದಂತೆ ಸಿಎಂಗೆ ಸಲಹೆ ನೀಡಿದ್ದೇನೆ ಎಂದರು.

    ಕುಕ್ಕೆಯ ವಿಚಾರವಾಗಿ ಸಿಎಂ ಕುಮಾರಸ್ವಾಮಿಯವರು ನನ್ನ ಜೊತೆ ಮಾತಾನಾಡಿದ್ದಾರೆ. ಸಾರ್ವಜನಿಕ ದೇಣಿಗೆಯ ಮೂಲಕ ರಥ ನಿರ್ಮಿಸುವ ಸಲಹೆಯನ್ನು ನೀಡಿದ್ದೇನೆ. ಇದರ ಜೊತೆಗೆ ಹುಂಡಿಯಲ್ಲಿ ಭಕ್ತರು ಹಾಕಿದ ಚಿನ್ನ, ಬೆಳ್ಳಿಯನ್ನು ಬಳಕೆ ಮಾಡುವಂತೆ ಹೇಳಿದ್ದೇನೆ. ಟ್ಯಾಕ್ಸ್ ಪೇಯರ್ಸ್ ಹಣವನ್ನು ನಾವು ಬಳಕೆ ಮಾಡುವುದು ಬೇಡ ಅಂತ ಸಿಎಂಗೆ ಸಲಹೆ ನೀಡಿರುವೆ. ಅವರು ಕೂಡ ಟ್ಯಾಕ್ಸ್ ಪೇಯರ್ಸ್ ಹಣವನ್ನು ಬಳಕೆ ಮಾಡುವುದಕ್ಕೆ ಒಪ್ಪಿಲ್ಲ ಎಂದು ತಿಳಿಸಿದರು.

    ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಸಿಎಂ ಕುಮಾರಸ್ವಾಮಿ ಅವರು ಟೆಂಪಲ್‍ರನ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ರಾಜ್ಯದ ಮಹಾರಾಜ ದೇವಸ್ಥಾನಕ್ಕೆ ಹೋಗಬೇಕು. ಜನರಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳಬೇಕಾಗುತ್ತದೆ. ಮಹಾರಾಜನಾಗಿ ನಾಡಿನ ಜನತೆಗೆ ನಡೆ ನುಡಿ ಕಲಿಸುವ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ ಎಂದು ಹೇಳಿದರು.

    ಕೊಲ್ಲೂರು ಮೂಕಾಂಬಿಕಾ ದೇವಾಸ್ಥಾನವನ್ನು ಶಾರದಪೀಠಕ್ಕೆ ಕೊಡುವ ಬಗ್ಗೆ ಗುಸು ಗುಸು ಸುದ್ದಿಯಾಗುತ್ತಿದೆ. ಈ ಕುರಿತು ಕುಮಾರಸ್ವಾಮಿ ಅವರನ್ನು ಕೇಳಿದ್ದೇನೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿಮ್ಮ ಸಲಹೆಯನ್ನು ಕೇಳದೆ ಯಾವುದಕ್ಕೂ ಮುಂದುವರಿಯುವುದಿಲ್ಲ ಎಂದು ಹೇಳಿದ್ದಾರೆ.

    ಸಿಎಂ ಕುಮಾರಸ್ವಾಮಿ ಅವರು ಮಾಧ್ಯಮಕ್ಕೆ ನಿರ್ಬಂಧ ಮಾಡಲ್ಲ, ಸಹಜವಾಗಿ ಇರುವೆ ಅಂತ ಮಾತು ಕೊಟ್ಟಿದ್ದಾರೆ. ಇನ್ನು ಮುಂದೆ ಅವರಿಗೆ ಬೇಕಾದರೆ ಪ್ರತಿಕ್ರಿಯೆ ನೀಡುತ್ತಾರೆ. ಆದರೆ ನಿರ್ಬಂಧವನ್ನು ಮಾಡುವುದಿಲ್ಲ. ನಗುನಗುತ್ತಾ ಇರುವುದಾಗಿ ಹೇಳಿದ್ದಾರೆ ಎಂದರು.

    ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ತಡೆಯುವುದಕ್ಕೆ ಆಗಲ್ಲ. ಆದರೆ ಬಿಜೆಪಿ ಒಂದೇ ಬಹುಮತದಿಂದ ಬರಲ್ಲ ಅಂತ ಕುಮಾರಸ್ವಾಮಿ ಅವರಿಗೆ ನಾನು ಹೇಳಿದ್ದೇನೆ.

    ಕಚ್ಚಾಡಿಕೊಂಡು ಮೈತ್ರಿಯಿಂದ ಹೊರಬಿದ್ದರೆ ಕಾಂಗ್ರೆಸ್‍ಗೆ ಸರ್ಕಾರವಂತೂ ರಚನೆ ಮಾಡುವುದಕ್ಕೆ ಆಗಲ್ಲ. ಬಿಜೆಪಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸಲು ಅವಕಾಶ ಇಲ್ಲ. ಏಕೆಂದರೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ದೇವರ ಅನುಗ್ರಹವಿದೆ. ಕುಮಾರಸ್ವಾಮಿ ಸರ್ಕಾರ ಬಿದ್ದರೆ ನನಗೆ, ಪ್ರಜೆಗಳಿಗೆ ದುಃಖವಾಗುತ್ತದೆ ಎಂದು ದ್ವಾರಕನಾಥ್ ಗುರೂಜಿ ಹೇಳಿದರು.