Tag: Raipur

  • ನಟ ಅಕ್ಷಯ್, ಆಟಗಾರ್ತಿ ಸೈನಾಗೆ ಮಾವೋವಾದಿಗಳಿಂದ ಎಚ್ಚರಿಕೆ!

    ನಟ ಅಕ್ಷಯ್, ಆಟಗಾರ್ತಿ ಸೈನಾಗೆ ಮಾವೋವಾದಿಗಳಿಂದ ಎಚ್ಚರಿಕೆ!

    ರಾಯ್‍ಪುರ್: ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್‍ಗೆ ಮಾವೋವಾದಿಗಳು ಎಚ್ಚರಿಕೆ ನೀಡಿದ್ದಾರೆ.

    ಸುಕ್ಮಾದಲ್ಲಿ ನಕ್ಸಲರ ದಾಳಿಯಿಂದ ಹುತಾತ್ಮರಾದ ಸಿಆರ್‍ಪಿಎಫ್ ಯೋಧರ ಕುಟುಂಬಕ್ಕೆ ಸಹಾಯ ಮಾಡಿದ್ದಕ್ಕಾಗಿ ಈ ಇಬ್ಬರಿಗೆ ಮಾವೋವಾದಿಗಳು ಎಚ್ಚರಿಕೆ ನೀಡಿದ್ದು, ಈ ಪತ್ರಗಳನ್ನು ಬಸ್ತರ್, ಛತ್ತೀಸ್‍ಘಡ ಮೊದಲಾದ ಕಡೆಗಳಲ್ಲಿ ಹಂಚಿದ್ದಾರೆ. ಸಲೆಬ್ರಿಟಿಗಳು ಹಾಗೂ ಪ್ರಖ್ಯಾತರು ತುಳಿತಕ್ಕೊಳಗಾದ ಬುಡಕಟ್ಟು ಜನಾಂಗದ ಪರ ನಿಲ್ಲಬೇಕು ಹಾಗೂ ಅವರ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಬಗ್ಗೆ ಧ್ವನಿಯೆತ್ತಬೇಕು ಎಂದು ಪತ್ರದಲ್ಲಿ ಮಾವೋವಾದಿಗಳು ಹೇಳಿದ್ದಾರೆ.

    ಅಕ್ಷಯ್ ಕುಮಾರ್ ಹಾಗೂ ಸೈನಾ ಯೋಧರ ಪರವಾಗಿ ನಿಲ್ಲಬಾರದಿತ್ತು ಎಂದು ಈ ಪತ್ರದಲ್ಲಿ ಹೇಳಲಾಗಿದೆ.

    ಕಳೆದ ಮಾರ್ಚ್ ನಲ್ಲಿ ಸುಕ್ಮಾದಲ್ಲಿ ಮಡಿದ 12 ಮಂದಿ ಯೋಧರ ಕುಟುಂಬಕ್ಕೆ ನಟ ಅಕ್ಷಯ್ ಕುಮಾರ್ ತಲಾ 9 ಲಕ್ಷ ರೂ. ಹಣವನ್ನು ನೀಡಿದ್ದರು. ಅಲ್ಲದೇ ಹುತಾತ್ಮರ ಕುಟುಂಬಕ್ಕೆ ದೇಶದ ನಾಗರಿಕರು ನೇರವಾಗಿ ಆರ್ಥಿಕ ಸಹಾಯ ಮಾಡಬಹುದಾದ ‘Bharatkeveer.com’ ಎಂಬ ಸರ್ಕಾರಿ ಪೋರ್ಟಲ್‍ಗೆ ಚಾಲನೆ ನೀಡಿದ್ದರು.

    ಇವರ ಬಳಿಕ ಅಟಗಾರ್ತಿ ಸೈನಾ ಕೂಡ ಯೋಧರ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಿದ್ದರು. ಸೈನಾ 12 ಯೋಧರ ಕುಟುಂಬಕ್ಕೆ ತಲಾ 50,000 ರೂ. ಪರಿಹಾರ ಧನವನ್ನು ನೀಡಿದ್ದರು.

  • ಲೈವ್ ಸೂಸೈಡ್ ವಿಡಿಯೋ: ತನಗೆ ಸಿಗದವಳು ಬೇರೆಯವನಿಗೂ ಸಿಗಬಾರದೆಂದು ಚೂರಿ ಇರಿದು, 120 ಅಡಿ ಎತ್ತರ ಟವರ್‍ನಿಂದ ಹಾರಿದ

    ಲೈವ್ ಸೂಸೈಡ್ ವಿಡಿಯೋ: ತನಗೆ ಸಿಗದವಳು ಬೇರೆಯವನಿಗೂ ಸಿಗಬಾರದೆಂದು ಚೂರಿ ಇರಿದು, 120 ಅಡಿ ಎತ್ತರ ಟವರ್‍ನಿಂದ ಹಾರಿದ

    ರಾಯ್‍ಪುರ್: ತಾನು ಪ್ರೀತಿಸಿದ ಹುಡಗಿ ಮದುವೆ ಮಾಡಿಕೊಳ್ಳಲು ಒಪ್ಪಿಲ್ಲವೆಂದು ಮನನೊಂದ ಯುವಕನೊಬ್ಬ ಆಕೆಗೆ ಚೂರು ಹಾಕಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡ ಭಯಾನಕ ಘಟನೆಯೊಂದು ಛತ್ತೀಸ್‍ಗಢದ ಕಂಕೇರಾ ಜಿಲ್ಲೆಯ ಬೈರನ್‍ಪೂರಿ ಗ್ರಾಮದಲ್ಲಿ ನಡೆದಿದೆ.

    20 ವರ್ಷದ ಕಮಲ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ಯುವಕ.

    ಏನಿದು ಪ್ರಕರಣ?: ಕಮಲ್ ಸಿಂಗ್ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಹೀಗಾಗಿ ಈ ವಿಚಾರವನ್ನು ಆತ ತನ್ನ ಅಕ್ಕ-ಬಾವನ ಜೊತೆ ಹೇಳಿಕೊಂಡಿದ್ದಾನೆ. ಅಂತೆಯೇ ಅಕ್ಕ-ಭಾವ ಯುವತಿಯ ಅಕ್ಕ-ಭಾವನ ಜೊತೆ ಮದುವೆಯ ಪ್ರಸ್ತಾಪ ಮಾಡಿದ್ದಾರೆ. ಆದ್ರೆ ಈ ಮದುವೆಯನ್ನು ಯುವತಿ ತಿರಸ್ಕರಿಸಿದ್ದಾಳೆ. ಹೀಗಾಗಿ ಒನ್ ವೇ ಲವ್ ಮಾಡುತ್ತಿದ್ದ ಕಮಲ್ ಸಿಂಗ್ ಆಕೆ ತನ್ನನ್ನು ತಿರಸ್ಕರಿಸಿದಳೆಂದು ಸಿಟ್ಟಾಗಿ ಹರಿತವಾದ ಚೂರಿಯಿಂದ ಆಕೆಗೆ ಇರಿದಿದ್ದಾನೆ. ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದ ಯುವತಿಯನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ.

    ಬಳಿಕ ಸ್ಥಳೀಯ ಮೊಬೈಲ್ ಟವರ್ ಗೆ ಆತ್ಮಹತ್ಯೆ ಮಾಡಿಕೊಳ್ಳಲೆಂದು ಏರಿದ್ದಾನೆ. ಇತ್ತ ಸ್ಥಳೀಯರು ತಮ್ಮ ಗಂಟಲು ಒಣಗುವಷ್ಟು ಪರಿಪರಿಯಾಗಿ ಬೇಡಿಕೊಂಡರೂ ಕಮಲ್ ಮಾತ್ರ ಟವರಿಂದ ಇಳಿಯಲೇ ಇಲ್ಲ. ಬದಲಾಗಿ 120 ಅಡಿ ಎತ್ತರದಿಂದ ಕೆಳಕ್ಕೆ ಧುಮುಕಿ ಪ್ರಾಣ ಬಿಟ್ಟಿದ್ದಾನೆ.

    ಸದ್ಯ ಚಾಕು ಇರಿತದಿಂದ ಗಂಭೀರ ಗಾಯಗೊಂಡ ಯುವತಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ ಅಂತಾ ವರದಿಯಾಗಿದೆ.

    https://www.youtube.com/watch?v=hU4ndV0V2p8&feature=youtu.be

  • ಪತಿಯ ಸಾವಿನ ಬ್ರೇಕಿಂಗ್ ನ್ಯೂಸ್ ಓದಿ ಕರ್ತವ್ಯ ಪ್ರಜ್ಞೆ ಮೆರೆದ ನಿರೂಪಕಿ!

    ಪತಿಯ ಸಾವಿನ ಬ್ರೇಕಿಂಗ್ ನ್ಯೂಸ್ ಓದಿ ಕರ್ತವ್ಯ ಪ್ರಜ್ಞೆ ಮೆರೆದ ನಿರೂಪಕಿ!

    ರಾಯ್‍ಪುರ: ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಗಂಡನ ಸುದ್ದಿಯನ್ನು ನಿರೂಪಕಿಯೊಬ್ಬರು ಓದಿರುವ ಮನಕಲಕುವ ಘಟನೆ ಛತ್ತೀಸ್‍ಘಡ್‍ನಲ್ಲಿ ನಡೆದಿದೆ.

    ಐಬಿಸಿ 24 ಹೆಸರಿನ ಚಾನೆಲ್‍ನ ಆಂಕರ್ ಸರ್‍ಪ್ರೀತ್ ಕೌರ್ ಬೆಳಗ್ಗೆ ನ್ಯೂಸ್ ಲೈವ್‍ನಲ್ಲಿರುವಾಗ ಮಹಸಮುಂದ್ ಜಿಲ್ಲೆಯ ಪಿತಾರಾ ಎಂಬಲ್ಲಿ ರೆನಾಲ್ಟೋ ಡಸ್ಟರ್ ಕಾರ್ ಅಪಘಾತವಾಗಿ ಕಾರ್‍ನಲ್ಲಿದ್ದ ಐವರ ಪೈಕಿ ಮೂವರು ಸಾವನ್ನಪ್ಪಿರೋ ಸುದ್ದಿ ಬಂದಿತ್ತು. ಕೌರ್ ಗಂಡ ಹರ್ಷಾದ್ ಕವಾಡೆ ಕೂಡ ಅಪಘಾತಕ್ಕೆ ಬಲಿಯಾಗಿದ್ರು. ಸ್ಥಳದಿಂದ ವರದಿಗಾರ ಫೋನ್ ಮೂಲಕ ಮಾಹಿತಿ ಕೊಟ್ಟಿದ್ದರು.

    ಕೌರ್ ಅವರಿಗೆ ಸುದ್ದಿಯನ್ನು ಓದುವಾಗ ಅಪಘಾತಕ್ಕೆ ಒಳಗಾದ ಕಾರು ತನ್ನ ಪತಿಯದ್ದೇ ಎಂದು ಗೊತ್ತಾಗಿತ್ತು. ಆದರೂ ಕೌರ್ ಅವರು ಸುದ್ದಿಯನ್ನು ಅರ್ಧಕ್ಕೆ ನಿಲ್ಲಿಸದೇ ಪೂರ್ಣವಾಗಿ ಓದಿ ತನ್ನ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಸ್ಟುಡಿಯೋ ದಿಂದ ಹೊರ ಬಂದು ಕೌರ್ ಭಾವುಕರಾಗಿ ಕಣ್ಣೀರು ಹಾಕಲು ಪ್ರಾರಂಭಿಸಿದರು ಎಂದು ಚಾನೆಲ್‍ನ ಮುಖ್ಯಸ್ಥರು ತಿಳಿಸಿದ್ದಾರೆ.

    ಐಬಿಸಿ ಚಾನೆಲ್ ಛತ್ತೀಸಘಡ್ ರಾಜ್ಯದ ಬಹು ವೀಕ್ಷಕರನ್ನು ಹೊಂದಿರುವ ಚಾನೆಲ್. ಕಳೆದ 9 ವರ್ಷಗಳಿಂದ ಐಬಿಸಿ 24 ಸುದ್ದಿ ವಾಹಿನಿಯಾಗಿ ಕಾರ್ಯನಿರ್ವಹಿಸುತ್ತಿದೆ. 28 ವರ್ಷದ ಕೌರ್ ಒಂದು ವರ್ಷದ ಹಿಂದೆ ಹರ್ಷದ್ ಕಾವಡೆ ಎಂಬವರನ್ನು ವಿವಾಹವಾಗಿದ್ದರು. ಇಬ್ಬರು ರಾಯ್‍ಪುರ ನಗರದಲ್ಲಿ ವಾಸವಗಿದ್ದರು.

    ನಮಗೆ ಕೌರ್ ನ್ಯೂಸ್ ಓದುವಾಗ ಅವರ ಪತಿ ತೀರಿಕೊಂಡಿರೋ ಬಗ್ಗೆ ಗೊತ್ತಿತ್ತು. ಆದ್ರೆ ಹೇಳೋ ಧೈರ್ಯ ಬರಲಿಲ್ಲ. ಕೌರ್ ಧೈರ್ಯವಂತೆ. ನಮಗೆ ಆಕೆಯ ಬಗ್ಗೆ ಹೆಮ್ಮೆ ಇದೆ ಅಂತೆ ವಾಹಿನಿ ಸಂಪಾದಕರು ತಿಳಿಸಿದ್ದಾರೆ.