Tag: Raipur

  • ಅಧಿಕಾರಕ್ಕೆ ಬಂದರೆ ಬಡವರ ಖಾತೆಗೆ ದುಡ್ಡು – ರಾಹುಲ್ ಗಾಂಧಿ

    ಅಧಿಕಾರಕ್ಕೆ ಬಂದರೆ ಬಡವರ ಖಾತೆಗೆ ದುಡ್ಡು – ರಾಹುಲ್ ಗಾಂಧಿ

    ರಾಯ್‍ಪುರ: 2019ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಬಡವರ ಕುಟುಂಬಕ್ಕೆ ಕನಿಷ್ಠ ಆದಾಯ ಗ್ಯಾರಂಟಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

    ಛತ್ತೀಸ್‍ಗಢದ ರಾಯಪುರದಲ್ಲಿ ಮಾತನಾಡಿದ ಅವರು, ದೇಶದ ಎಲ್ಲಾ ರಾಜ್ಯಗಳಲ್ಲೂ ಇರುವ ಬಡವರಿಗೆ ಕನಿಷ್ಠ ಆದಾಯ ದೊರೆಯುವಂತೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಇಂತದ ಯೋಜನೆ ವಿಶ್ವದಲ್ಲೇ ಮೊದಲು ಆಗಿದ್ದು, ಬೇರೆ ಯಾವುದೇ ದೇಶದಲ್ಲಿ ಇಂತಹ ಯೋಜನೆ ಜಾರಿ ಮಾಡಿಲ್ಲ ಎಂದರು.

    ದೇಶದಲ್ಲಿ ಯಾರು ಬಡತನ ಮತ್ತು ಹಸಿವಿನಿಂದ ಇರಬಾರದು ಎಂಬುವುದು ನಮ್ಮ ಉದ್ದೇಶ. ಈ ಯೋಜನೆಯನ್ನು ಛತ್ತೀಸ್‍ಗಢ, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಎಲ್ಲಾ ರಾಜ್ಯಗಳಲ್ಲೂ ಜಾರಿ ಮಾಡಲಾಗುವುದು. ಕಾಂಗ್ರೆಸ್ ಇಂತಹ ಐತಿಹಾಸ ನಿರ್ಧಾರವನ್ನು ಮೊದಲ ಬಾರಿಗೆ ತೆಗೆದುಕೊಳ್ಳುತ್ತಿದೆ. ಇದು ಈಡೇರಲು ನೀವು ನಮಗೆ ಒಂದು ಅವಕಾಶ ನೀಡಬೇಕು ಎಂದು ಹೇಳಿದರು.

    ಕಿಸಾನ್ ಆಹಾರ್ ಸಮ್ಮೇಳನದಲ್ಲಿ ಮಾತನಾಡಿದ ರಾಹುಲ್ ಗಾಂಧಿ 15 ವರ್ಷಗಳ ಬಳಿಕ ಅಧಿಕಾರಕ್ಕೆ ಬರಲು ಕಾರಣರಾದ ಚತ್ತೀಸ್‍ಗಢದ ಜನರಿಗೆ, ವಿಶೇಷವಾಗಿ ರೈತರಿಗೆ ಕೃತಜತ್ಞೆಗಳನ್ನು ತಿಳಿಸಿದರು.

    ರಾಹುಲ್ ಗಾಂಧಿ ನೀಡಿದ ಈ ಭರವಸೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಾಮೆಂಟ್ ಮಾಡಿ ತಿಳಿಸಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಹುಡ್ಗಿ ಎಂದು ಸೆಕ್ಸ್‌ಗೆ ಕರೆದ – ನಿಜ ಗೊತ್ತಾದಾಗ ಪ್ರೈವೇಟ್ ಪಾರ್ಟ್ ಕತ್ತರಿಸಿದ

    ಹುಡ್ಗಿ ಎಂದು ಸೆಕ್ಸ್‌ಗೆ ಕರೆದ – ನಿಜ ಗೊತ್ತಾದಾಗ ಪ್ರೈವೇಟ್ ಪಾರ್ಟ್ ಕತ್ತರಿಸಿದ

    ರಾಯ್‍ಪುರ್: ಹುಡುಗಿ ಎಂದು ಸೆಕ್ಸ್‌ಗೆ ಕರೆದ ಇಬ್ಬರು ಯುವಕರು ಆಕೆ ತೃತೀಯ ಲಿಂಗಿ ಎಂದು ತಿಳಿಯುತ್ತಿದ್ದಂತೆ ಖಾಸಗಿ ಅಂಗವನ್ನು ಕತ್ತರಿಸಿ ಕೊಲೆ ಮಾಡಿದ ಘಟನೆ ಚಂಡಿಗಢದ ಬಲಾಂಪುರ್ ನ ಟಾಟಾಪಾನಿಯಲ್ಲಿ ನಡೆದಿದೆ.

    ಜೈಪ್ರಕಾಶ್ ಅಲಿಯಾಸ್ ಅಲ್ಕಾ(21) ಮೃತಪಟ್ಟ ತೃತೀಯ ಲಿಂಗಿ. ಸೌರಬ್ ಗುಪ್ತಾ ಹಾಗೂ ಆತನ ಸ್ನೇಹಿತ ಶಶಾಂಕ್ ಗುಪ್ತಾ ಕೊಲೆ ಮಾಡಿದ ಆರೋಪಿಗಳು. ಜೈಪ್ರಶಾಶ್ ವೇಶ್ಯೆ ಆಗಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸರು ಶಂಕಿಸಿದ್ದಾರೆ. ಜೈಪ್ರಕಾಶ್ ಹೆಣ್ಣಿನ ವೇಶದಲ್ಲಿದ್ದ ಕಾರಣ ಯುವಕರು ಆಕೆಯನ್ನು ಯುವತಿ ಎಂದು ತಿಳಿದು ಸೆಕ್ಸ್‌ಗೆ ಆಹ್ವಾನಿಸಿದ್ದಾರೆ.

    ಈ ಘಟನೆ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವೊಂದು ರಚಿಸಲಾಗಿತ್ತು. ಅಲ್ಲದೇ ಆರೋಪಿಗಳನ್ನು ಕಂಡು ಹಿಡಿಯಲು ಪೊಲೀಸರು ಜೈಪ್ರಕಾಶ್‍ನ ಮೊಬೈಲ್ ಪರಿಶೀಲಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಸೋಮವಾರ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಜೈಪ್ರಕಾಶ್ ಆರೋಪಿಗಳನ್ನು ಯುವತಿ ಎಂದು ಹೇಳಿ ಮೋಸ ಮಾಡಿದಲ್ಲದೇ ದೈಹಿಕ ಸಂಬಂಧ ಬೆಳೆಸಲು ಹಣವನ್ನು ನೀಡಲು ಬೇಡಿಕೆಯಿಟ್ಟಿದ್ದನು. ಇದರಿಂದ ಕೋಪಗೊಂಡು ನಾವು ಜೈಪ್ರಕಾಶ್‍ನನ್ನು ಕೊಲೆ ಮಾಡಿದ್ದೇವೆ ಎಂದು ವಿಚಾರಣೆ ವೇಳೆ ಆರೋಪಿಗಳು ಹೇಳಿದ್ದಾರೆ.

    ಜೈಪ್ರಕಾಶ್ ಯುವತಿ ಎಂದು ಹೇಳಿ ತಮಗೆ ಮೋಸ ಮಾಡಿದ್ದಾಳೆ. ಹೀಗಾಗಿ ಕುಡಿದ ಮತ್ತಿನಲ್ಲಿ ನಾವು ತೃತೀಯ ಲಿಂಗಿಯನ್ನು ಕೊಲೆ ಮಾಡಿದ್ದೇವೆ. ಮೊದಲು ಜೈಪ್ರಕಾಶ್ ಮೇಲೆ ಹಲ್ಲೆ ನಡೆಸಿ ಬಳಿಕ ಆತನನ್ನು ಕಾಡಿಗೆ ಎಳೆದುಕೊಂಡು ಹೋಗಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದೇವೆ. ಅಲ್ಲದೇ ಜೈಪ್ರಕಾಶ್‍ನ ಖಾಸಗಿ ಅಂಗವನ್ನು ಕೂಡ ಕತ್ತರಿಸಿದ್ದೇವೆ ಎಂದು ಪೊಲೀಸ್ ವಿಚಾರಣೆ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

    ಇಬ್ಬರು ಆರೋಪಿಗಳಲ್ಲಿ ಒಬ್ಬ ಈಗಾಗಲೇ ಗ್ಯಾಂಗ್‍ರೇಪ್ ಎಸಗಿದ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದನು ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 30 ವರ್ಷದಿಂದ ಕೇವಲ ಟೀ ಸೇವಿಸಿ ಬದುಕುತ್ತಿರುವ ಮಹಿಳೆ..!

    30 ವರ್ಷದಿಂದ ಕೇವಲ ಟೀ ಸೇವಿಸಿ ಬದುಕುತ್ತಿರುವ ಮಹಿಳೆ..!

    ರಾಯ್‍ಪುರ: ಬೆಳಗ್ಗೆ, ಸಂಜೆ ಟೀ ಕುಡಿಯೋರನ್ನ ನೋಡಿರ್ತೀರಿ ಆದರೆ ಛತ್ತೀಸ್‍ಗಢದಲ್ಲಿ ಮಹಿಳೆಯೊಬ್ಬರು 30 ವರ್ಷದಿಂದ ಕೇವಲ ಟೀ ಕುಡಿದೇ ಬದುಕುತ್ತಿದ್ದಾರೆ.

    ಹೌದು, ಈ ವಿಷಯ ನೋಡಿದರೇ ಬರೀ ಟೀ ಕುಡಿದು ಬದುಕಿದ್ದಾರಾ ಅಂತ ಆಶ್ಚರ್ಯ ಆಗೋದು ಸಹಜ. ಛತ್ತೀಸ್‍ಗಢದ ಕೊರಿಯಾ ಜಿಲ್ಲೆಯ ಬರಾದಿಯಾ ಗ್ರಾಮದ ನಿವಾಸಿ ಪಿಲ್ಲಿ ದೇವಿ(44) ಕಳೆದ 30 ವರ್ಷಗಳಿಂದ ಕೇವಲ ಟೀ ಕುಡಿದುಕೊಂಡೇ ಬದುಕುತ್ತಿದ್ದಾರೆ. ಯಾವುದೇ ಆಹಾರ ಸೇವಿಸದಿದ್ದರು ಪಿಲ್ಲಿ ದೇವಿಯವರ ಆರೋಗ್ಯ ಚೆನ್ನಾಗಿಯೇ ಇದೆ.

    ಪಿಲ್ಲಿ ದೇವಿ ಅವರು ತಮ್ಮ 11 ವರ್ಷದ ವಯಸ್ಸಿನಲ್ಲಿಯೇ ಆಹಾರ ಹಾಗೂ ನೀರು ಸೇವನೆಯನ್ನು ತ್ಯಜಿಸಿದ್ದರು. ಅಂದಿನಿಂದಲೂ ಅವರು ಕೇವಲ ಟೀ ಕುಡಿದೇ ಬದುಕುತ್ತಿದ್ದಾರೆ. ಹಾಗಾಗಿ ಇಡೀ ಗ್ರಾಮದಲ್ಲಿ ಪಿಲ್ಲಿ ದೇವಿಯನ್ನು ‘ಚಾಯ್ ವಾಲಿ ಚಾಚಿ’ ಎಂದೇ ಕರೆಯುತ್ತಾರೆ.

    ತಮ್ಮ ಮಗಳು ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಒಂದು ದಿನ ಪಾಟ್ನಾ ಶಾಲೆಯ ಜಿಲ್ಲಾ ಮಟ್ಟದ ಕ್ರೀಡಾ ಕೂಟಕ್ಕೆ ಹೋಗಿದ್ದಳು. ಆ ದಿನ ಮನೆಗೆ ವಾಪಸ್ ಬಂದಾಗಿನಿಂದ ಆಕೆ ನೀರು ಮತ್ತು ಆಹಾರವನ್ನು ತಿನ್ನುವುದನ್ನು ಬಿಟ್ಟಳು. ಮೊದಲಿಗೆ ಟೀ ಜೊತೆ ಬಿಸ್ಕಟ್ ಮತ್ತು ಬ್ರೆಡ್ ತಿನ್ನುತ್ತಿದ್ದಳು, ಆದ್ರೆ ಕೆಲ ತಿಂಗಳ ನಂತರ ಬಿಸ್ಕಟ್ ಮತ್ತು ಬ್ರೆಡ್ ತಿನ್ನೋದನ್ನು ಬಿಟ್ಟಳು ಎಂದು ಮಹಿಳೆಯ ತಂದೆ ರತಿ ರಾಮ್ ಹೇಳಿದ್ದಾರೆ.

    ಯಾಕೆ ಹೀಗೆ ಪಿಲ್ಲಿ ವರ್ತಿಸುತ್ತಿದ್ದಾಳೆ ಅಂತ ತಿಳಿಯದೆ, ಅವಳಿಗೆ ಏನಾದರು ಕಾಯಿಲೆ ಇದಿಯಾ ಎಂದು ಭಯಗೊಂಡು ವೈದ್ಯರಿಗೆ ತೊರಿಸಿದ್ದೇವು. ಆದರೆ ಆಕೆಗೆ ಯಾವುದೇ ಕಾಯಿಲೆ ಇಲ್ಲ, ಅವಳು ಆರೋಗ್ಯವಾಗಿದ್ದಾಳೆ ಎಂದು ವೈದ್ಯರು ದೃಢಪಡಿಸಿದರು ಎಂದು ಮಹಿಳೆಯ ಸಹೋದರ ತಿಳಿಸಿದ್ದಾರೆ. ಅಲ್ಲದೆ ಪಿಲ್ಲಿ ದೇವಿ ಮನೆಯಿಂದ ಹೊರ ಹೊಗುವುದು ಅಪರೂಪ, ಯಾವಾಗಲೂ ಶಿವಧ್ಯಾನದಲ್ಲಿ ಮುಳುಗಿರುತ್ತಾರೆ ಎಂದುರು. ಹಾಗೆಯೇ ಕೇವಲ ಟೀ ಕುಡಿದು ಮಾನವ 33 ವರ್ಷ ಬದುಕುವುದು ವೈಜ್ಞಾನಿಕವಾಗಿ ಅಸಾಧ್ಯ, ಆದ್ರೆ ಪಿಲ್ಲಿ ದೇವಿ ಬದುಕಿರೋದೇ ಒಂದು ಪವಾಡ ಎಂದು ಜಿಲ್ಲಾ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಾಯಿಯನ್ನೇ ಕೊಂದು ಆಕೆಯ ರಕ್ತ ಕುಡಿದ ನರಭಕ್ಷಕ ಮಗ!

    ತಾಯಿಯನ್ನೇ ಕೊಂದು ಆಕೆಯ ರಕ್ತ ಕುಡಿದ ನರಭಕ್ಷಕ ಮಗ!

    ರಾಯ್‍ಪುರ: ನರಭಕ್ಷಕ ಮಗನೊಬ್ಬ ತನ್ನ ತಾಯಿಯನ್ನೇ ತುಂಡು ತುಂಡಾಗಿ ಕತ್ತರಿಸಿ ಆಕೆಯ ರಕ್ತ ಕುಡಿದಿರುವ ಭಯಾನಕ ಘಟನೆ ಛತ್ತಿಸ್‍ಗಢದ ಕೋರ್ಬಾ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ದಿಲೀಪ್ ಯಾದವ್(27) ಈ ಭಯಾನಕ ಕೃತ್ಯವೆಸಿಗಿದ್ದಾನೆ. ಸುಮಾರಿಯಾ(50) ಮೃತ ದುರ್ದೈವಿ. ಡಿಸೆಂಬರ್ 31ರಂದು ಈ ಭಯಂಕರ ಘಟನೆ ನಡೆದಿದೆ. ಆರೋಪಿ ಮನೆಗೆ ಯಾವಾಗಲು ನೆರೆಮನೆಯಲ್ಲಿದ್ದ ಸಮೀರನ್ ಎಂಬ ಮಹಿಳೆ ದಿಲೀಪ್ ತಾಯಿಯನ್ನು ಮಾತನಾಡಿಸಲು ಬರುತ್ತಿದ್ದರು. ಎಂದಿನಂತೆ ಘಟನೆ ನಡೆದ ದಿನವು ಬಂದಿದ್ದಾರೆ. ಆಗ ದಿಲೀಪ್ ತನ್ನ ತಾಯಿಯನ್ನೇ ತುಂಡು ತುಂಡಾಗಿ ಕತ್ತರಿಸಿ ಆಕೆಯ ರಕ್ತ ಕುಡಿದು, ನಂತರ ಮನೆಯೊಳಗೆ ಮೃತದೇಹದ ತುಂಡುಗಳನ್ನು ತೆಗೆದುಕೊಂಡು ಹೋಗಿ ಬೆಂಕಿ ಹಚ್ಚಿ ಸುಟ್ಟಿದ್ದನ್ನು ನೋಡಿ ಭಯಬಿದ್ದು ಅಲ್ಲಿಂದ ಮನೆಗೆ ಓಡಿಹೋಗಿದ್ದಾರೆ.

    ಈ ಘಟನೆಯಿಂದ ಭಯಬಿದ್ದಿದ್ದ ಮಹಿಳೆ ಯಾರ ಬಳಿಯೂ ದಿಲೀಪ್ ವಿಚಾರವನ್ನು ಹೇಳಲು ಮುಂದೆ ಬಂದಿರಲಿಲ್ಲ. ಆದ್ರೆ ಸ್ವಲ್ಪ ದಿನಗಳ ಬಳಿಕ ಈ ಭಯದಿಂದ ಚೇತರಿಸಿಕೊಂಡ ನಂತರ ಪೊಲೀಸರ ಬಳಿ ಘಟನೆ ಕುರಿತು ತಿಳಿಸಿದ್ದಾರೆ. ಮಹಿಳೆಯ ದೂರಿನ ಮೆರೆಗೆ ಪೊಲೀಸರು ದಿಲೀಪ್‍ನನ್ನು ಬಂಧಿಸಲು ಹೋದಾಗ ಆತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

    ಬಳಿಕ ಆತನ ಕುರಿತು ಗ್ರಾಮಸ್ಥರಲ್ಲಿ ಪೊಲೀಸರು ವಿಚಾರಿಸಿದಾಗ ಆತ ತಾಂತ್ರಿಕ ವಿದ್ಯೆಯನ್ನು ತಿಳಿದಿದ್ದನು. ಅಲ್ಲದೆ ಯಾವಾಗಲು ತನ್ನ ತಂದೆ ಹಾಗೂ ಸಹೋದರನ ಸಾವಿಗೆ ನೀನೆ ಕಾರಣ ಎಂದು ತಾಯಿಯ ಬಳಿ ಜಗಳವಾಡುತ್ತಿದ್ದನು. ಅಲ್ಲದೆ ಯಾವಾಗಲು ನರಬಲಿ ಹಾಗೂ ಇತರೇ ವಿಚಿತ್ರ ವಿಷಯವನ್ನೇ ಮಾತನಾಡುತ್ತಿದ್ದನು ಎಂದು ತಿಳಿಸಿದ್ದಾರೆ.

    ಬಹುಶಃ ತಾಯಿಯ ಮೇಲಿನ ಸಿಟ್ಟಿಗೆ ಆಕೆಯನ್ನು ಕೊಂದಿರಬಹುದು ಅಥವಾ ನರಬಲಿ ಎಂದು ಹೆತ್ತವಳನ್ನು ಬಲಿ ಪಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಛತ್ತೀಸ್‍ಗಡ ಮುಖ್ಯಮಂತ್ರಿಯಾಗಿ ಭೂಪೇಶ್ ಬಘೇಲ್ ಆಯ್ಕೆ

    ಛತ್ತೀಸ್‍ಗಡ ಮುಖ್ಯಮಂತ್ರಿಯಾಗಿ ಭೂಪೇಶ್ ಬಘೇಲ್ ಆಯ್ಕೆ

    ರಾಯ್‍ಪುರ: ತೀವ್ರ ಪೈಪೋಟಿ ಹೊಂದಿದ್ದ ಛತ್ತೀಸ್‍ಗಡ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಅಂತಿಮವಾಗಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಬಘೇಲ್ ಅವರನ್ನು ನೂತನ ಮುಖ್ಯಮಂತ್ರಿಯನ್ನಾಗಿ ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ.

    ಮಂಗಳವಾರ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬರೋಬ್ಬರಿ 15 ವರ್ಷಗಳ ಬಳಿಕ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಒಟ್ಟು 90 ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಮತಕ್ಕೆ 45 ಸ್ಥಾನಗಳು ಬೇಕಾಗಿತ್ತು. ಕಾಂಗ್ರೆಸ್ ಈ ಬಾರಿ ಬರೋಬ್ಬರಿ 68 ಸ್ಥಾನಗಳನ್ನು ಗೆಲ್ಲುವ ಮೂಲಕ ಸುಲಭವಾಗಿ ಬಹುಮತ ಸಾಧಿಸಿತ್ತು.

    ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಹೈಕಮಾಂಡ್‍ಗೆ ಮುಖ್ಯಮಂತ್ರಿ ಆಯ್ಕೆ ವಿಚಾರ ನಿದ್ದೆಗೆಡಿಸಿತ್ತು. ಏಕೆಂದರೆ ವಿಧಾನಸಭಾ ವಿರೋಧ ಪಕ್ಷ ನಾಯಕರಾಗಿದ್ದ ಟಿ.ಎಸ್.ಸಿಂಗ್ದೇವ್ ಹಾಗೂ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಭೂಪೇಶ್ ಬಘೇಲ್ ನಡುವೆ ತೀವ್ರ ಸ್ಪರ್ಧೆ ಏರ್ಪಟಿತ್ತು. ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಪ್ರಚಂಡ ಗೆಲುವು ಸಾಧಿಸಿದ ಕಾಂಗ್ರೆಸ್ – ಬಿಜೆಪಿ ಸೋಲಿಗೆ ಕಾರಣಗಳೇನು?

    ಭಾನುವಾರ ನವದೆಹಲಿಯ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್ಯ ಕೈ ನಾಯಕರ ಸಭೆ ನಡೆದಿತ್ತು. ಬಳಿಕ ರಾಜಧಾನಿಯ ರಾಯ್‍ಪುರದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಒಮ್ಮತ ನಿರ್ಧಾರ ತೆಗೆದುಕೊಂಡು, ಅಂತಿಮವಾಗಿ ಹೈಕಮಾಂಡ್ ಹಾಗೂ ಸಭೆಯ ತೀರ್ಮಾನದಂತೆ ಭೂಪೇಶ್ ರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ನೂತನ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸೋಮವಾರ ಛತ್ತೀಸ್ ಗಡ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ಯಾರಿದು ಭೂಪೇಶ್ ಬಘೇಲ್?
    ಭೂಪೇಶ್ ಹಿಂದುಳಿದ ವರ್ಗದ ಕುರ್ಮಿ ಸಮುದಾಯಕ್ಕೆ ಸೇರಿದ ನಾಯಕ. ಈ ಹಿಂದೆ ಮಧ್ಯಪ್ರದೇಶದ ದಿಗ್ವಿಜಯ್ ಸಿಂಗ್ ಕ್ಯಾಬಿನೆಟ್‍ನಲ್ಲಿ ಹಾಗೂ 2000ನೇ ಇಸವಿಯಲ್ಲಿ ಅಜಿತ್ ಜೋಗಿ ನೇತೃತ್ವದ ಛತ್ತೀಸ್‍ಗಡ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2008 ರ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದ ಇವರು, 2013ರಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ರಾಜ್ಯದಲ್ಲಿ 15 ವರ್ಷಗಳ ಬಳಿಕ ಕಾಂಗ್ರೆಸ್ ಅನ್ನು ಅಧಿಕಾರದ ಗದ್ದುಗೆಗೆ ಏರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಬಾರಿ ಪಟನ್ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅವರು, ಬಿಜೆಪಿಯ ಮೋತಿಲಾಲ್ ಸಾಹು ವಿರುದ್ಧ 27,477 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಛತ್ತೀಸ್‍ಗಢದಲ್ಲಿ ಪ್ರಚಂಡ ಗೆಲುವು ಸಾಧಿಸಿದ ಕಾಂಗ್ರೆಸ್ – ಬಿಜೆಪಿ ಸೋಲಿಗೆ ಕಾರಣಗಳೇನು?

    ಛತ್ತೀಸ್‍ಗಢದಲ್ಲಿ ಪ್ರಚಂಡ ಗೆಲುವು ಸಾಧಿಸಿದ ಕಾಂಗ್ರೆಸ್ – ಬಿಜೆಪಿ ಸೋಲಿಗೆ ಕಾರಣಗಳೇನು?

    ರಾಯ್‍ಪುರ: ಬಿಜೆಪಿಯ ಕೋಟೆಯಾದ ಛತ್ತೀಸ್‍ಗಢದಲ್ಲಿ 15 ವರ್ಷಗಳ ಬಳಿಕ ಮತದಾರ ‘ಕೈ’ ಕುಲುಕಿದ್ದಾನೆ.

    ಮೂರು ಬಾರಿ ಮುಖ್ಯಮಂತ್ರಿ ಆಗಿದ್ದ ರಮಣ್ ಸಿಂಗ್ ಕೆಳಗಿಳಿದಿದ್ದಾರೆ. 15 ವರ್ಷಗಳಿಂದ ಅಧಿಕಾರ ಬರ ಅನುಭವಿಸಿದ್ದ ಕಾಂಗ್ರೆಸ್ ಈ ಬಾರಿ ಚಿಗುರಿದೆ. ಮತ ಎಣಿಕೆ ಆರಂಭದಿಂದಲೂ ಕಾಂಗ್ರೆಸ್ ನಾಗಾಲೋಟದಲ್ಲೇ ಮುಂದುವರಿದಿತ್ತು.

    ಛತ್ತೀಸಗಡದ ಒಟ್ಟು 90 ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಮಕ್ಕೆ 45 ಸ್ಥಾನಗಳು ಬೇಕು. ಇದರಲ್ಲಿ ಕಾಂಗ್ರೆಸ್ 67 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದು, ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ. ಆಡಳಿತರೂಢ ಬಿಜೆಪಿ 15 ಸ್ಥಾನಗಳನ್ನು ಗೆಲ್ಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ. ಇತರರು ಈ ಬಾರಿ 8 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದ್ದಾರೆ

    2013ರ ಚುನಾವಣೆಯಲ್ಲಿ ಬಿಜೆಪಿ 49 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 39 ಕ್ಷೇತ್ರಗಳಲ್ಲಿ ಗೆದ್ದಿತ್ತು. ಇತರರು 2 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದರು.

    ಬಿಜೆಪಿ ಸೋಲಿಗೆ ಕಾರಣಗಳೇನು?
    – 10 ವರ್ಷದ ರಮಣ್‍ಸಿಂಗ್ ಆಡಳಿತಕ್ಕೆ ಬೇಸತ್ತು ಬಂದಿರುವ ತೀರ್ಪು ಇದಾಗಿದೆ. ಏಕೆಂದರೆ ಚಾವಲ್ ಬಾಬಾ ಎಂದೇ ಹಾಲಿ ಸಿಎಂ ರಮಣ್ ಸಿಂಗ್ ಮೇಲೆ 36 ಸಾವಿರ ಕೋಟಿ ರೂಪಾಯಿ ಪಡಿತರ ಅಕ್ಕಿ ಹಗರಣ ಹಾಗೂ 5 ಸಾವಿರ ಕೋಟಿ ರೂ. ಚಿಟ್ ಫಂಡ್ ಹಗರಣ ಆರೋಪ ಕೇಳಿಬಂದಿತ್ತು. ಅಲ್ಲದೇ ಅವರ ಪತ್ನಿ, ನಾದಿನಿಯರು ಕೂಡ ಈ ಹಗರಣದಲ್ಲಿ ಭಾಗಿಯಾಗಿದ್ದರು ಎನ್ನುವ ಆರೋಪ ಇದೆ.

    – ಬಿಜೆಪಿಯ ಸಂಘಟನೆ ಅಥವಾ ಪ್ರಧಾನಿ ನರೇಂದ್ರ ಮೋದಿ ಅಲೆ ಛತ್ತೀಸಗಢದಲ್ಲಿ ವಿಫಲವಾಗಿತ್ತು. ಸರ್ಕಾರದ ಮೇಲೆ ಮೊದಲೇ ಆಕ್ರೋಶಗೊಂಡಿದ್ದರಿಂದ ಮೋದಿ ಪ್ರಚಾರ ಮಾಡಿದ್ದ ಕ್ಷೇತ್ರಗಳಲ್ಲೂ ನಿರೀಕ್ಷಿತ ಮತ ಬೀಳಲಿಲ್ಲ.

    – ಬುಡಕಟ್ಟು ಪಾರ್ಟಿ ಎನ್ನುವ ಪಟ್ಟದಿಂದ ಹೊರ ಬಂದ ಕಾಂಗ್ರೆಸ್ ಈ ಬಾರಿ ಒಬಿಸಿ ಮುಖಂಡರನ್ನೇ ಅಗ್ರನಾಯಕರನ್ನಾಗಿ ನೇಮಿಸಿತ್ತು. ಬಗೇಲ್ ಕುರ್ಮಿ, ಸಾಹು, ವಿಪಕ್ಷ ನಾಯಕ, ಕಾಂಗ್ರೆಸ್ ಅಧ್ಯಕ್ಷ ಎಲ್ಲರೂ ಒಬಿಸಿ ನಾಯಕರು ಆಗಿದ್ದ ಕಾರಣ ಕಾಂಗ್ರೆಸ್‍ಗೆ ಜಾಕ್‍ಪಾಟ್ ಹೊಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕಾಡಿನಲ್ಲಿ ಸೈನಿಕರನ್ನು ದಾರಿ ತಪ್ಪಿಸಲು ನಕ್ಸಲರ ಪ್ಲಾನ್!

    ಕಾಡಿನಲ್ಲಿ ಸೈನಿಕರನ್ನು ದಾರಿ ತಪ್ಪಿಸಲು ನಕ್ಸಲರ ಪ್ಲಾನ್!

    ರಾಯಪುರ: ಛತ್ತಿಸ್‍ಗಢದ ಕಾಡಿನಲ್ಲಿ ಸೈನಿಕರ ದಾಳಿಗೆ ತತ್ತರಿಸಿ ಹೋಗಿರುವ ನಕ್ಸಲಿಯರು ಈಗ ನಕಲಿ ಬಂದೂಕು ಹಾಗೂ ಗೊಂಬೆ ಬಳಸಿ ಭದ್ರತಾ ಪಡೆಯ ದಾರಿಯನ್ನು ತಪ್ಪಿಸಲು ಮುಂದಾಗಿದ್ದಾರೆ.

    ಛತ್ತಿಸ್‍ಗಢದ ಸುತ್ತಮುತ್ತ ನಕ್ಸಲಿಯರ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಇಲ್ಲಿನ ಸುಕ್ಮಾ ಜಿಲ್ಲೆಯನ್ನು ನಕ್ಸಲ್ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಈಗ ಈ ಪ್ರದೇಶದ ಜನರಲ್ಲಿ ಭಯ ಹುಟ್ಟುಸಿ, ಭದ್ರತಾ ಸಿಬ್ಬಂದಿಯ ದಾರಿ ತಪ್ಪಿಸಲು ನಕ್ಸಲಿಯರು ಹೊಸ ಪ್ಲಾನ್ ಮಾಡಿದ್ದಾರೆ.

    ಕಾಡಿನಲ್ಲಿ ಮರಗಳ ಹಿಂದೆ ಮನುಷ್ಯರು ನಿಂತಿರುವ ಹಾಗೆ ಬೆದರು ಗೊಂಬೆಗಳನ್ನು ನಿಲ್ಲಿಸಿ ಅದರ ಕೈಯಲ್ಲಿ ನಕಲಿ ಬಂದೂಕನ್ನು ಇಟ್ಟು ಮರಗಳಿಗೆ ಕಟ್ಟಿದ್ದಾರೆ. ಈ ದಾರಿಯಲ್ಲಿ ಜನರು ಓಡಾಡುವವಾಗ ಗೊಂಬೆಗಳನ್ನು ಕಂಡು ಮರದ ಹಿಂದೆ ನಕ್ಸಲಿಯರೇ ನಿಂತಿದ್ದಾರೆ ಎಂದು ಭಯಪಡುತ್ತಿದ್ದಾರೆ.

    ಈ ಕುರಿತು ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದಾಗ, ಕಾಡಿನಲ್ಲಿ ಇರುವುದು ನಕ್ಸಲಿಯರಲ್ಲ, ಬದಲಿಗೆ ಜನರನ್ನು ಹೆದರಿಸಲು ನಕ್ಸಲಿಯರು ಮಾಡಿರುವ ಹೊಸ ಪ್ಲಾನ್ ಎನ್ನುವುದು ಬೆಳಕಿಗೆ ಬಂದಿದೆ.

    ಈ ಪ್ರದೇಶದಲ್ಲಿ ಒಟ್ಟು ಮೂರು ನಕಲಿ ಬಂದೂಕು ಹಿಡಿದು ನಿಂತ ಬೆದರು ಗೊಂಬೆಗಳನ್ನು ಭದ್ರತಾ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಜನರಲ್ಲಿ ನಕ್ಸಲಿಯರ ಮೇಲೆ ಇರುವ ಭಯವನ್ನು ಹೆಚ್ಚಿಸಲು ಹಾಗೂ ಭದ್ರತಾ ಪಡೆಯ ದಾರಿ ತಪ್ಪಿಸಲು ನಕ್ಸಲಿಯರು ಈ ರೀತಿ ತಂತ್ರ ಮಾಡಿದ್ದಾರೆ ಎಂದು ಭದ್ರತಾ ಪಡೆಯ ಅಧಿಕಾರಿ ಧರ್ಮೇಂದ್ರ ಸಿಂಗ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇಶದ ಅತೀ ದೊಡ್ಡ ಸ್ಟೀಲ್ ತಯಾರಿಕಾ ಘಟಕದಲ್ಲಿ ಭಾರೀ ಅವಘಡ- 6 ಮಂದಿ ಸಜೀವ ದಹನ

    ದೇಶದ ಅತೀ ದೊಡ್ಡ ಸ್ಟೀಲ್ ತಯಾರಿಕಾ ಘಟಕದಲ್ಲಿ ಭಾರೀ ಅವಘಡ- 6 ಮಂದಿ ಸಜೀವ ದಹನ

    ರಾಯ್ಪುರ: ಛತ್ತೀಸ್‍ಗಢದ ಭಿಲಾಯಿನಲ್ಲಿರೋ ಸ್ಟೀಲ್ ತಯಾರಿಕಾ ಘಟಕ(ಉಕ್ಕು ಉತ್ಪಾದಕಾ ಘಟಕ)ದಲ್ಲಿ ಅನಿಲ ಪೈಪ್ ಸ್ಫೋಟಗೊಂಡ ಪರಿಣಾಮ 6 ಮಂದಿ ಸಜೀವ ದಹನವಾದ ಘಟನೆ ನಡೆದಿದೆ.

    ಈ ಘಟನೆ ಇಂದು ಮಧ್ಯಾಹ್ನ ರಾಜಧಾನಿ ರಾಯ್ ಪುರದಿಂದ 30 ಕಿಮೀ ದೂರದಲ್ಲಿ ನಡೆದಿದೆ. ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದಾರೆ. ಕೋಕ್ ಓವನ್ ಸ್ಟೇಷನ್ ಬಳಿ ಇರುವ ಪೈಪ್ ಲೈನ್ ನಲ್ಲಿ ಈ ಸ್ಫೋಟ ಸಂಭವಿಸಿದೆ ಅಂತ ಪೊಲೀಸರು ಹೇಳಿದ್ದಾರೆ.

    ಘಟನೆಯ ಮಾಹಿತಿ ಪಡೆದ ಕೂಡಲೇ ಪೊಲೀಸರು ಹಾಗೂ ರಕ್ಷಣಾ ತಂಡ ದೌಡಾಯಿಸಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಸರಿ ಸುಮಾರು 6 ಮಂದಿ ಘಟನೆಯಿಂದಾಗಿ ಸಜೀವ ದಹನವಾಗಿದ್ದಾರೆ. ಇನ್ನು 14 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಹೆಚ್ಚಿನವರ ಸ್ಥಿತಿ ಗಂಭೀರವಾಗಿದೆ ಅಂತ ಪೊಲೀಸ್ ಇನ್ಸ್ ಪೆಕ್ಟರ್ ಜಿಪಿ ಸಿಂಗ್ ತಿಳಿಸಿದ್ದಾರೆ.

    ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಗೆ ಸೇರಿದ ಉಕ್ಕಿನ ಘಟಕ ಇದಾಗಿದ್ದು, ಭಾರತದಲ್ಲೇ ಅತಿ ದೊಡ್ಡ ಉಕ್ಕಿನ ಘಟಕ ಎಂದೇ ಹೆಸರು ಪಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರೇಯಸಿ ಮೇಲೆ ನಡೆದ ಹೀನ ಕೃತ್ಯವನ್ನು ಕಣ್ಣಾರೆ ಕಂಡ ಪ್ರಿಯಕರ ಆತ್ಮಹತ್ಯೆ

    ಪ್ರೇಯಸಿ ಮೇಲೆ ನಡೆದ ಹೀನ ಕೃತ್ಯವನ್ನು ಕಣ್ಣಾರೆ ಕಂಡ ಪ್ರಿಯಕರ ಆತ್ಮಹತ್ಯೆ

    ರಾಯ್ಪುರ: ತನ್ನ ಅಪ್ರಾಪ್ತ ಪ್ರೇಯಸಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಕಣ್ಣಾರೆ ಕಂಡಿದ್ದ ಯುವಕನೊಬ್ಬ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಛತ್ತೀಸ್‍ಗಡದಲ್ಲಿ ನಡೆದಿದೆ.

    ಛತ್ತೀಸ್‍ಗಡದ ಕೊರ್ಬಾ ಜಿಲ್ಲೆಯ ಕಟ್ಗೋರಾ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 1 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸವನ್ ಸಾಯಿ(21) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ. ಸದ್ಯಕ್ಕೆ ಈಶ್ವರ್ ದಾಸ್(22) ಹಾಗೂ ಕನ್ವಾರ್(21) ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ಘಟನೆ ವಿವರ:
    ನಾನು ಸಾಯ್ ಇಬ್ಬರು ಮನೆಗೆ ಹೋಗುತ್ತಿದ್ದೆವು. ಆಗ ಆರೋಪಿಗಳಾದ ದಾಸ್ ಮತ್ತು ಕನ್ವಾರ್ ಬಂದು ಇಬ್ಬರ ಮೇಲು ಹಲ್ಲೆ ಮಾಡಿದರು. ಬಳಿಕ ಸಾಯಿ ಮುಂದೆಯೇ ನನ್ನ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಕಾಪಾಡದ ಪರಿಸ್ಥಿತಿಯಲ್ಲಿ ಸಾಯಿ ಇದ್ದನು. ಘಟನೆಯನ್ನು ಕಣ್ಣಾರೆ ಕಂಡಿದ್ದ ಆತ ಬಳಿಕ ಮಾನಸಿಕವಾಗಿ ನೊಂದಿದ್ದನು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಮರುದಿನ ಆರೋಪಿಗಳು ನಡೆದ ಘಟನೆ ಬಗ್ಗೆ ಗ್ರಾಮದ ಕೆಲವು ಯುವಕರಿಗೆ ಹೇಳಿದ್ದಾರೆ. ಇದರಿಂದ ಯುವಕರು ಸಾಯಿಗೆ ಅವಮಾನ ಮಾಡಿರಬಹುದು. ಆದ್ದರಿಂದ ನೊಂದು ಸಾಯಿ ತಮ್ಮ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ವಿಚಾರಣೆ ವೇಳೆ ಸಂತ್ರಸ್ತೆ ತಿಳಿಸಿದ್ದಾಳೆ.

    ಸದ್ಯ ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನನ್ವಯ ಆರೋಪಿಗಳಾದ ದಾಸ್ ಮತ್ತು ಕನ್ವಾರ್ ಇಬ್ಬರನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ನಿಯ ಗುಪ್ತಾಂಗಕ್ಕೆ ಕರೆಂಟ್ ಶಾಕ್ ಕೊಟ್ಟ ಸಿಎಎಫ್ ಸೈನಿಕ

    ಪತ್ನಿಯ ಗುಪ್ತಾಂಗಕ್ಕೆ ಕರೆಂಟ್ ಶಾಕ್ ಕೊಟ್ಟ ಸಿಎಎಫ್ ಸೈನಿಕ

    ರಾಯ್ಪುರ್: ಛತ್ತೀಸ್‍ಗಢ ಆರ್ಮಿ ಫೋರ್ಸ್(ಸಿಎಎಫ್) ನ ಸೈನಿಕನೊಬ್ಬ ಪತ್ನಿಯ ಶೀಲ ಶಂಕಿಸಿ ಆಕೆಗೆ ವಿದ್ಯುತ್ ಶಾಕ್ ಕೊಟ್ಟು ಕೊಲೆ ಮಾಡಿರುವ ಘಟನೆ ಭಟಪಾರ ಜಿಲ್ಲೆಯ ಬಾಲೋದಬಜಾರ್ ನಗರದಲ್ಲಿ ನಡೆದಿದೆ.

    ಲಕ್ಷ್ಮೀ(27) ಪತಿಯಿಂದಲೇ ಕೊಲೆಯಾದ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ 33 ವರ್ಷದ ಸುರೇಶ್ ಮಿರಿನನ್ನು ಬುಧವಾರ ಮುಂಗೆಲಿ ಜಿಲ್ಲೆಯ ಸರ್ಗಾಂವ್ ಪೊಲೀಸರು ಬಂಧಿಸಿದ್ದಾರೆ ಎಂದು ಸಹಾಯಕ ಉಪ ಇನ್ಸ್ ಪೆಕ್ಟರ್ ಪರಾಸ್ ರಾಮ್ ಜಗತ್ ಹೇಳಿದ್ದಾರೆ.

    ಘಟನೆಯ ವಿವರ:
    ಆರೋಪಿ ದಾಂತೇವಾಡಾ ಜಿಲ್ಲೆಯ ಸಿಎಎಫ್ ನ 6ನೇ ಬೆಟಾಲಿಯನ್ ನಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದನು. ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಭಟಪಾರದ ವಸತಿ ಬೋರ್ಡ್ ಕಾಲೊನಿಯಲ್ಲಿ ವಾಸವಾಗಿದ್ದರು. ಆರೋಪಿ ಮಿರಿ ಪತ್ನಿ ಬೇರೊಬ್ಬರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು ಎಂದು ಅನುಮಾನ ಪಡುತ್ತಿದ್ದನು. ಇದೇ ವಿಚಾರಕ್ಕೆ ಪ್ರತಿದಿನ ಜಗಳವಾಗುತ್ತಿತ್ತು ಎಂದು ಜಗತ್ ಅವರು ತಿಳಿಸಿದ್ದಾರೆ.

    ಬುಧವಾರ ಮೃತ ಲಕ್ಷ್ಮಿ ಬಾತ್‍ರೂಮಿನಲ್ಲಿ ಬಟ್ಟೆಯನ್ನು ವಾಶ್ ಮಾಡುತ್ತಿದ್ದರು. ಆಗ ಏಕಾಏಕಿ ಆರೋಪಿ ಮಿರಿ ಮನೆಗೆ ಬಂದು ಪತ್ನಿಗೆ ಥಳಿಸಿದ್ದಾನೆ. ಪರಿಣಾಮ ಲಕ್ಷ್ಮಿ ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಈ ವೇಳೆ ಆರೋಪಿ ಮಿರಿ ವಿದ್ಯುತ್ ತಂತಿಯಿಂದ ಆಕೆಯ ಗುಪ್ತಾಂಗಕ್ಕೆ ಶಾಕ್ ಕೊಟ್ಟಿದ್ದಾನೆ. ಆದ್ದರಿಂದ ಲಕ್ಷ್ಮಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಳಿಕ ಮಿರಿ ಆಕೆಯ ಸಂಬಂಧಿಕರಿಗೆ ಕರೆ ಮಾಡಿ ಲಕ್ಷ್ಮಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ ಎಂದು ಹೇಳಿದ್ದಾನೆ.

    ಇಷ್ಟು ಮಾತ್ರವಲ್ಲದೇ ಆತನೇ ವ್ಯಾನ್ ಬುಕ್ ಮಾಡಿ ಲಕ್ಷ್ಮಿ ಮೃತ ದೇಹವನ್ನು ಮುಂಗೆಲಿ ಜಿಲ್ಲೆಯ ಪತ್ನಿಯ ಖಜರಿ ಗ್ರಾಮಕ್ಕೆ ಸಾಗಿಸಿದ್ದಾನೆ. ಅಲ್ಲಿಯೂ ಕೂಡ ಅನಾರೋಗ್ಯದಿಂದ ಲಕ್ಷ್ಮಿ ಮೃತಪಟ್ಟಿದ್ದಾಳೆ ಎಂದು ಹೇಳಿಕೊಂಡಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ.

    ಲಕ್ಷ್ಮಿಯ ದೇಹವನ್ನು ನೋಡಿ ಸಂಬಂಧಿಕರು ಪೋಲಿಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಪತಿಯನ್ನು ಕಸ್ಟಡಿಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯಕ್ಕೆ ಭಟಪಾರ ಪೊಲೀಸರು ಆರೋಪಿ ಮಿರಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ