Tag: raihur

  • BELನಿಂದ ರಾಯಚೂರು ಜಿಲ್ಲೆಗೆ 10 ಅಂಬ್ಯುಲೆನ್ಸ್

    BELನಿಂದ ರಾಯಚೂರು ಜಿಲ್ಲೆಗೆ 10 ಅಂಬ್ಯುಲೆನ್ಸ್

    ರಾಯಚೂರು : ಅಭಿವೃದ್ಧಿ ವಿಚಾರದಲ್ಲಿ ರಾಯಚೂರು ಮಹತ್ವಾಕಾಂಕ್ಷೆ ಜಿಲ್ಲೆಯಾಗಿರುವುದರಿಂದ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ಕಂಪನಿ (BEL) ಜಿಲ್ಲೆಗೆ 10 ಅಂಬ್ಯುಲೆನ್ಸ್ ಗಳನ್ನ ನೀಡಿದೆ. ಕಂಪನಿಯ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ನಿಧಿ ಸಿಎಸ್‍ಆರ್ ಫಂಡ್‍ನಿಂದ ಅಂಬ್ಯುಲೆನ್ಸ್ ಗಳನ್ನ ಜಿಲ್ಲೆಗೆ ನೀಡಲಾಗಿದೆ.

    ಬಿಇಎಲ್ ಕಂಪನಿ ಅಧಿಕಾರಿಗಳು ನಗರದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ ಅಂಬ್ಯುಲೆನ್ಸ್ ಗಳನ್ನ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಿದರು. ಸುಮಾರು 4 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಸೌಲಭ್ಯಗಳನ್ನೊಳಗೊಂಡ ಹವಾ ನಿಯಂತ್ರಿತ ಅಂಬ್ಯುಲೆನ್ಸ್ ಗಳನ್ನ ನೀಡಲಾಗಿದೆ. ಸದ್ಯ ಅಂಬ್ಯುಲೆನ್ಸ್ ನಲ್ಲಿ ಆಕ್ಸಿಜನ್ ಸರಬರಾಜು, ರೋಗಿಗಳ ಸಾಗಣೆಗೆ ಅಗತ್ಯ ಸೌಲಭ್ಯಗಳಿವೆ.

    ವೆಂಟಿಲೇಟರ್ ಸೇರಿದಂತೆ ಅಡ್ವಾನ್ಸ್ ಲೈಫ್ ಸಪೋರ್ಟ್ ವ್ಯವಸ್ಥೆಗಳನ್ನ ಅಳವಡಿಸುವುದು ಬಾಕಿಯಿದೆ. ಬಿಇಎಲ್ ಕಂಪನಿ ನೀಡಿರುವ ಅಂಬ್ಯುಲೆನ್ಸ್ ಗಳು ಜಿಲ್ಲೆಗೆ ಅವಶ್ಯಕವಾಗಿದ್ದು, ಸದ್ಬಳಕೆಯಾಗಲಿವೆ ಅಂತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ಹೇಳಿದ್ದಾರೆ. ಇದನ್ನೂ ಓದಿ: ಇಡಿ ಕರೆ ಬಂದಿಲ್ಲ, ವೈಯಕ್ತಿಕ ಕೆಲಸದ ಮೇಲೆ ದೆಹಲಿ ಬಂದಿರೋದು: ಜಮೀರ್ ಅಹ್ಮದ್ ಖಾನ್

  • ಸ್ಮಶಾನ ಜಾಗಕ್ಕೆ ರೇಟ್ ಫಿಕ್ಸ್ ಮಾಡಿ ಮಾರಾಟ- ಜನರ ಆಕ್ರೋಶ

    ಸ್ಮಶಾನ ಜಾಗಕ್ಕೆ ರೇಟ್ ಫಿಕ್ಸ್ ಮಾಡಿ ಮಾರಾಟ- ಜನರ ಆಕ್ರೋಶ

    ರಾಯಚೂರು: ಕೋಟೆ ನಗರಿ ರಾಯಚೂರಿನಲ್ಲಿ ಕೋಟೆ ಜಾಗ ಒತ್ತುವರಿ ಮಾಡಿಕೊಂಡು ದೊಡ್ಡ ದೊಡ್ಡ ಕಟ್ಟಡಗಳನ್ನ ಕಟ್ಟಿರೋದು ಹಳೆಯ ವಿಚಾರ. ಈಗ ಒತ್ತುವರಿಕೋರರು, ಭೂಗಳ್ಳರು ಸರ್ಕಾರಿ ಸ್ಮಶಾನ ಜಾಗಕ್ಕೆ ರೇಟ್ ಫಿಕ್ಸ್ ಮಾಡಿ ಮಾರಿಕೊಳ್ಳುತ್ತಿದ್ದಾರೆ.

    ನಗರದ ಮೈಲಾರ ನಗರದಲ್ಲಿನ 582ನೇ ಸರ್ವೆ ನಂಬರ್ ನಲ್ಲಿನ ಒಟ್ಟು 214 ಎಕರೆ ಭೂಮಿಯಲ್ಲಿ 7 ಎಕರೆ 20 ಗುಂಟೆ ಇರುವ ಸ್ಮಶಾನ ಜಾಗವನ್ನ ಸೈಟ್ ಮಾಡಿ ಮಾರಲಾಗುತ್ತಿದೆ. ಇದನ್ನೆಲ್ಲಾ ಮಾಜಿ ಶಾಸಕ ಎ.ಪಾಪರೆಡ್ಡಿ ಮಾಡಿಸುತ್ತಿದ್ದಾರೆ ಅಂತ ಸಾರ್ವಜನಿಕರು ಆರೋಪಿಸಿದ್ದಾರೆ.


    10 ಸಾವಿರ ರೂಪಾಯಿ ಸ್ವಚ್ಛತೆಗೆ, 20 ಸಾವಿರ ಪಾಪಾರೆಡ್ಡಿಗೆ, 30 ಸಾವಿರ ನಗರಸಭೆ ಸದಸ್ಯರಿಗೆ, 20 ಸಾವಿರ ಮುನ್ನೂರು ಕಾಪು ಸಮಾಜಕ್ಕೆ ಹೀಗೆ ಒಟ್ಟು 80 ಸಾವಿರ ರೂಪಾಯಿಗೆ 30*40 ಚದರ ಅಡಿಯ ಒಂದು ನಿವೇಶನ ಮಾರಾಟ ಮಾಡಲಾಗುತ್ತಿದೆ. ಸಾರ್ವಜನಿಕ ಜಾಗವನ್ನ ಮಾರಿಕೊಳ್ಳುತ್ತಿರುವ ಪಾಪಾರೆಡ್ಡಿ ವಿರುದ್ಧ ಕ್ರಮ ಜರುಗಿಸಬೇಕು ಅಂತ ಸ್ಥಳೀಯರು ಒತ್ತಾಯಿಸಿದ್ದಾರೆ. ಆದ್ರೆ ಯಾವುದೇ ಕಾರಣಕ್ಕೂ ಸ್ಮಶಾನ ಜಾಗ ಮಾರಾಟಕ್ಕೆ ಅವಕಾಶ ಕೊಡಲ್ಲ ಅಂತ ನಗರಸಭೆ ಅಧ್ಯಕ್ಷರು ಹೇಳುತ್ತಿದ್ದಾರೆ.

    ಕಡಿಮೆ ದುಡ್ಡಲ್ಲಿ ಒಂದು ಸೂರಾಗುತ್ತೆ ಅಂತ ಬಡ ಜನರು ಈಗಾಗಲೇ ನಿವೇಶನಕ್ಕಾಗಿ ದುಡ್ಡು ಕೊಟ್ಟು ಕಾಯುತ್ತಿದ್ದಾರೆ. ಆದ್ರೆ ಬಡಜನರ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡು ಸರ್ಕಾರಿ ಜಾಗವನ್ನ ಮಾರಾಟ ಮಾಡುತ್ತಿರೋದು ನಿಜಕ್ಕೂ ದುರಂತ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.