Tag: Rahul

  • ಧನ್ಯಾ ಹೊಸ ಸಿನಿಮಾಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್

    ಧನ್ಯಾ ಹೊಸ ಸಿನಿಮಾಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್

    ‘ನಿನ್ನ ಸನಿಹಕೆ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಎಂಟ್ರಿ ಕೊಟ್ಟ ಡಾ.ರಾಜ್ ಕುಟುಂಬದ ಕುಡಿ ಧನ್ಯಾ ರಾಮ್‌ಕುಮಾರ್ (Dhanya Ramkuma) ಇದೀಗ ಡಿಫರೆಂಟ್ ಪಾತ್ರಗಳನ್ನ ಒಪ್ಪಿಕೊಳ್ಳುವ ಮೂಲಕ ಸದ್ದು ಮಾಡ್ತಿದ್ದಾರೆ. ಧನ್ಯಾ ಹೊಸ ಸಿನಿಮಾಗೆ ನಟ ಶ್ರೀಮುರಳಿ (Srimurali) ಸಾಥ್ ನೀಡಿದ್ದಾರೆ.

    ಕಾಲಾಪತ್ಥರ್, ಹೈಡ್ & ಸೀಕ್, ದಿ ಜಡ್ಜ್‌ಮೆಂಟ್ ಸಿನಿಮಾಗಳು ಧನ್ಯಾ ಲಿಸ್ಟ್ನಲ್ಲಿದೆ. ಈ ಬೆನ್ನಲ್ಲೇ ಕಾಶಿ ನಿರ್ದೇಶನದ ‘ಎಲ್ಲಾ ನಿನಗಾಗಿ’ ಚಿತ್ರದಲ್ಲಿ ಹೊಸ ಪ್ರತಿಭೆ ರಾಹುಲ್‌ಗೆ (Rahul) ಧನ್ಯಾ ಜೋಡಿಯಾಗಿ ನಟಿಸುತ್ತಿದ್ದಾರೆ. ಡಿಫರೆಂಟ್ ಪಾತ್ರದಲ್ಲಿ ಧನ್ಯಾ ನಟಿಸಲಿದ್ದಾರೆ.

    ನೈಜ ಕಥೆ ಆಧರಿಸಿದ ಸಿನಿಮಾವಾಗಿದೆ. ರಿಯಲ್ ಕಥೆಯನ್ನ ಸಿನಿಮಾ ಮಾಡಲು ನಿರ್ದೇಶಕ ಕಾಶಿ ರೆಡಿಯಾಗಿದ್ದಾರೆ. ಶ್ರೀಮುರಳಿ ಅವರ ಆಪ್ತ ರಾಹುಲ್ ಈ ಚಿತ್ರಕ್ಕೆ ನಾಯಕನಾಗಿ ಸೆಲೆಕ್ಟ್ ಆಗಿದ್ದು, ಕಥೆ ಕೇಳಿ ಶ್ರೀಮುರಳಿ ಮೆಚ್ಚಿದ್ದಾರೆ. ಈ ವೇಳೆ ನಾಯಕಿ ಹುಡುಕಾಟದಲ್ಲಿದ್ದ ಚಿತ್ರತಂಡಕ್ಕೆ ಶ್ರೀಮುರಳಿ ಅವರು ಧನ್ಯಾ ಅವರ ಹೆಸರನ್ನ ಸೂಚಿಸಿದ್ದರಂತೆ. ಕಥೆಗೆ ಧನ್ಯಾ ಸೂಟ್ ಆಗುವ ಕಾರಣ, ಧನ್ಯಾ ಅವರನ್ನೇ ನಾಯಕಿಯಾಗಿ ಫೈನಲ್ ಮಾಡಲಾಯಿತು. ಇದನ್ನೂ ಓದಿ:2ನೇ ಮಗುವಿನ ನಿರೀಕ್ಷೆಯಲ್ಲಿ ಅರ್ಜುನ್ ರಾಮ್‌ಪಾಲ್- ಗೇಬ್ರಿಯೆಲ್ಲಾ ಜೋಡಿ

    ‘ಎಲ್ಲಾ ನಿನಗಾಗಿ’ ಸಿನಿಮಾ ಟೈಟಲ್‌ನ ನಟ ಶ್ರೀಮುರಳಿ ಅವರಿಂದ ಅನಾವರಣ ಮಾಡಿದ್ದಾರೆ. ಬಳಿಕ ಚಿತ್ರತಂಡಕ್ಕೆ ಶ್ರೀಮುರಳಿ ಶುಭಹಾರೈಸಿದ್ದಾರೆ.  ಈ ವೇಳೆ ಚಿತ್ರತಂಡದ ಜೊತೆ ಪೂರ್ಣಿಮಾ ರಾಮ್‌ಕುಮಾರ್‌ ಕೂಡ ಭಾಗಿಯಾಗಿದ್ದರು. ಇನ್ನೂ ಎಂದೂ ಕಾಣಿಸಿಕೊಂಡಿರದ ವಿಭಿನ್ನ ಪಾತ್ರದಲ್ಲಿ ಧನ್ಯಾ ಕಾಣಿಸಿಕೊಳ್ತಿದ್ದಾರೆ. ಇದೇ ಮೇ 20ರಿಂದ 50 ದಿನಗಳ ಕಾಲ ಶೂಟಿಂಗ್ ನಡೆಯಲಿದೆ. ಮೊದಲ ಹಂತದ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆಯಲಿದೆ.

    ‘ನಿನ್ನ ಸನಿಹಕೆ’ ಎಂಬ ಲವ್‌ಸ್ಟೋರಿ ಚಿತ್ರದ ಮೂಲಕ ನಟಿ ಕಮಾಲ್ ಮಾಡಿದ್ದರು. ‘ಎಲ್ಲಾ ನಿನಗಾಗಿ’ ಎಂಬ ಭಿನ್ನ ಪ್ರೇಮಕಥೆಯ ಮೂಲಕ ರಾಹುಲ್- ಧನ್ಯಾ ಜೋಡಿ ಅದ್ಯಾವ ರೀತಿ ಮೋಡಿ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.

  • ವಿಶೇಷ ವ್ಯಕ್ತಿಯಿಂದ ಸಮಂತಾಗೆ ಸಿಕ್ತು ಕ್ರಿಸ್‌ಮಸ್ ಗಿಫ್ಟ್

    ವಿಶೇಷ ವ್ಯಕ್ತಿಯಿಂದ ಸಮಂತಾಗೆ ಸಿಕ್ತು ಕ್ರಿಸ್‌ಮಸ್ ಗಿಫ್ಟ್

    ಟಾಲಿವುಡ್ (Tollywood) ನಟಿ ಸಮಂತಾ (Samantha) ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ಸೂಕ್ತ ಚಿಕಿತ್ಸೆಯನ್ನ ಕೂಡ ನಟಿ ಪಡೆಯುತ್ತಿದ್ದಾರೆ. ಇದರ ನಡುವೆ ಕ್ರಿಸ್‌ಮಸ್ ಸೆಲೆಬ್ರೇಷನ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿಶೇಷ ವ್ಯಕ್ತಿಯಿಂದ ಸಮಂತಾಗೆ ಭರ್ಜರಿ ಗಿಫ್ಟ್ ಸಿಕ್ಕಿದೆ.

    ನಟಿ ಸಮಂತಾ ಸಾಕಷ್ಟು ಸಮಯದಿಂದ ವಯೋಸಿಟಿಸ್ ಖಾಯಿಲೆಯಿಂದ ಬಳಲುತ್ತಿದ್ದಾರೆ. `ಯಶೋದ’ (Yashoda) ಚಿತ್ರದ ನಂತರ ಸಿನಿಮಾಗೆ ಬ್ರೇಕ್ ಕೊಟ್ಟು, ಆರೋಗ್ಯದ ಕಡೆ ಗಮನ ಕೊಡುತ್ತಿದ್ದಾರೆ. ಈ ವೇಳೆ ಕ್ರಿಸ್‌ಮಸ್ ಹಬ್ಬವನ್ನ ನಟಿ ಸೆಲೆಬ್ರೇಟ್ ಮಾಡಿದ್ದಾರೆ. ಅನಾರೋಗ್ಯದ ನಡುವೆ ಹಬ್ಬಕ್ಕೆ ಮಹತ್ವ ನೀಡಿದ್ದಾರೆ. ಈ ವೇಳೆ ನೆಚ್ಚಿನ ನಟಿಗೆ ನಿರ್ದೇಶಕ ರಾಹುಲ್ ರವೀಂದ್ರನ್ (Rahul Ravidran) ಕಡೆಯಿಂದ ಸ್ಪೆಷಲ್ ಉಡುಗೊರೆ ಸಿಕ್ಕಿದೆ.

    ಈ ಕುರಿತು ಸ್ವತಃ ಸಮಂತಾ ಅವರೇ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ. ಗಿಫ್ಟ್ ಫೋಟೋ ಶೇರ್ ಮಾಡಿ, ಸಮಂತಾ ಧನ್ಯವಾದಗಳನ್ನ ತಿಳಿಸಿದ್ದಾರೆ. ಇದನ್ನೂ ಓದಿ: ಬಾಯ್‌ಫ್ರೆಂಡ್ ಜಾಕಿ ಭಗ್ನಾನಿ ಬರ್ತ್‌ಡೇಗೆ ನಟಿ ರಾಕುಲ್ ಲವ್ಲಿ ವಿಶ್

     

    View this post on Instagram

     

    A post shared by Samantha (@samantharuthprabhuoffl)

    ಅನಾರೋಗ್ಯದ ಹಿನ್ನೆಲೆ ಇತ್ತೀಚೆಗಷ್ಟೇ ವರುಣ್ ಧವನ್ (Varun Dhawan) ಸಿನಿಮಾದಿಂದ ಸಮಂತಾ ಹೊರಬಂದಿದ್ದರು. ಸಂಪೂರ್ಣವಾಗಿ ಆರೋಗ್ಯದಲ್ಲಿ ಚೇತರಿಕೆ ಕಾಣಿಸುವವರೆಗೂ ಸಿನಿಮಾಗೆ ಬ್ರೇಕ್ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶೀಘ್ರದಲ್ಲೇ ಕ್ರಿಕೆಟಿಗ ರಾಹುಲ್ ಜತೆ ಸುನಿಲ್ ಶೆಟ್ಟಿ ಮಗಳ ಮ್ಯಾರೇಜ್

    ಶೀಘ್ರದಲ್ಲೇ ಕ್ರಿಕೆಟಿಗ ರಾಹುಲ್ ಜತೆ ಸುನಿಲ್ ಶೆಟ್ಟಿ ಮಗಳ ಮ್ಯಾರೇಜ್

    ಗುಜರಾತ್ ಜೈಟ್ಸ್ ತಂಡದ ನಾಯಕ, ಟೀಮ್ ಇಂಡಿಯಾ ಆಟಗಾರ ಕೆ.ಎಲ್ ರಾಹುಲ್ ಮತ್ತು ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ ಲವ್ವಿಡ‍ವ್ವಿಗೆ ತೆರೆ ಬೀಳುವ ಸಮಯ ಬಂದಿದೆ. ಮೊನ್ನೆಯಷ್ಟೇ ರಾಹುಲ್ ಜತೆ ಇರುವ ರೋಮ್ಯಾಂಟಿಕ್ ಫೋಟೋ ಶೇರ್ ಮಾಡಿದ್ದ ಅತಿಯಾ ಶೆಟ್ಟಿ, ತಮ್ಮಿಬ್ಬರ ಪ್ರೀತಿಯ ಕುರಿತಾಗಿ ಹಂಚಿಕೊಂಡಿದ್ದರು. ಈ ಮೂಲಕ ರಾಹುಲ್ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆಯನ್ನು ನೀಡಿದ್ದರು. ಇದನ್ನೂ ಓದಿ : ಕೆಜಿಎಫ್ 2 : ಕಿಚ್ಚ ಸುದೀಪ್ ಮತ್ತು ಯಶ್ ಮಧ್ಯೆ ತಂದಿಡುತ್ತಿದೆ ವೈರಲ್ ವಿಡಿಯೋ

    ಅಲ್ಲದೇ, ಈ ಹಿಂದೆಯೂ ರಾಹುಲ್ ಜತೆ ಅತಿಯಾ ಓಡಾಡುವ ದೃಶ್ಯಗಳು ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದ್ದವು. ತಡರಾತ್ರಿ ಈ ಜೋಡಿಗಳು ಕಾಣಿಸಿಕೊಂಡು ಕ್ಯಾಮೆರಾಗಳಿಗೆ ಆಹಾರವಾಗಿದ್ದರು. ಇದೀಗ ಈ ಜೋಡಿ ಮದುವೆ ಆಗುವ ಸುದ್ದಿ ಬಿಟೌನ್ ನಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯ

    ಕ್ರಿಕೆಟಿಗೆ ರಾಹುಲ್ ಜತೆ ಮಗಳ ಮದುವೆಗೆ ಸುನಿಲ್ ಶೆಟ್ಟಿ ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ. ಅಂದುಕೊಂಡಂತೆ ಆದರೆ, ಇದೇ ವರ್ಷದ ಕೊನೆಯಲ್ಲಿ ರಾಹುಲ್ ಮತ್ತು ಅತಿಯಾ ಹಸೆಮಣೆ ಏರಲಿದ್ದಾರೆ. ಇದನ್ನೂ ಓದಿ: ಮಗಳ ಮದುವೆಯ ಫೋಟೋ ಶೇರ್ ಮಾಡಿ ಭಾವುಕರಾದ ಆಲಿಯಾ ತಾಯಿ

    ಮೊದ ಮೊದಲ ರಾಹುಲ್ ಮತ್ತು ಅತಿಯಾ ಸ್ನೇಹಿತರು ಎಂದು ಬಿಂಬಿಸಲಾಯಿತು. ರಾಹುಲ್ ಕ್ರಿಕೆಟ್ ಪಂದ್ಯ ಆಡುವಾಗೆಲ್ಲ ಅತಿಯಾ ಕ್ರೀಡಾಂಗಣದಲ್ಲಿ ಹಾಜರಿರುತ್ತಿದ್ದರು. ಅವರನ್ನು ಹುರುದುಂಬಿಸುತ್ತಿದ್ದರು. ಸ್ನೇಹಿತನನ್ನು ಹುರಿದುಂಬಿಸಲು ಅತಿಯಾ ಬರುತ್ತಿದ್ದಾರೆ ಎಂದೇ ಹೇಳಲಾಯಿತು. ಈ ಜೋಡಿ ತಡರಾತ್ರಿಯ ಪಾರ್ಟಿಗಳಲ್ಲಿ ಸಿಗುತ್ತಿದ್ದಂತೆಯೇ ಇಬ್ಬರ ಮಧ್ಯೆ ಏನೋ ನಡೆಯುತ್ತಿದೆ ಎಂದು ಬಿಟೌನ್ ಮಾತಾಡಿಕೊಂಡಿತು. ಆನಂತರ  ತಾವಿಬ್ಬರೂ ಪ್ರೀತಿಸುವ ವಿಷಯವನ್ನು ಬೇರೆ ಬೇರೆ ರೀತಿಯಲ್ಲಿ ಇಬ್ಬರೂ ಹೇಳಿಕೊಂಡರು. ಇದೀಗ ಈ ಪ್ರೇಮಿಗಳು ಹೊಸ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ.

  • ರಾಹುಲ್, ಪ್ರಿಯಾಂಕಾ ನನ್ನ ಮಕ್ಕಳಿದ್ದಂತೆ, ಅವರಿಗೆ ಅನುಭವ ಇಲ್ಲ: ಕ್ಯಾ.ಅಮರೀಂದರ್ ಸಿಂಗ್

    ರಾಹುಲ್, ಪ್ರಿಯಾಂಕಾ ನನ್ನ ಮಕ್ಕಳಿದ್ದಂತೆ, ಅವರಿಗೆ ಅನುಭವ ಇಲ್ಲ: ಕ್ಯಾ.ಅಮರೀಂದರ್ ಸಿಂಗ್

    ಚಂಡೀಗಢ: ತಮ್ಮ ರಾಜೀನಾಮೆಗೆ ಕಾರಣರಾದ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತು ಸಿಧು ವಿರುದ್ಧ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ವಾಗ್ದಾಳಿ ನಡೆಸಿದ್ದು, ಮುಂದಿನ ಚುನಾವಣೆಯಲ್ಲಿ ಗೆಲ್ಲಲ್ಲು ಬಿಡುವುದಿಲ್ಲ ಎಂದು ಸವಾಲು ಹಾಕಿದ್ದಾರೆ.

    ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಗೆ ಅನುಭವದ ಕೊರತೆ ಇದೆ ಇದನ್ನು ಸಿಧು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿಗೆ ಹೆಚ್‍ಡಿಕೆ ಟಕ್ಕರ್ – ಸಿ.ಎಂ ಇಬ್ರಾಹಿಂ ಜೆಡಿಎಸ್ ಸೇರೋದು ಪಕ್ಕಾ!

    2022ರ ವಿಧಾನಸಭೆ ಚುನಾವಣೆಯಲ್ಲಿ ಸಿಧು ಸೋಲಿಸಲು ಪ್ರಬಲ ಅಭ್ಯರ್ಥಿಯನ್ನು ಹಾಕಲಿದ್ದೇನೆ. ಸಿಧು ಸಿಎಂ ಅಭ್ಯರ್ಥಿಯಾಗುವುದನ್ನು ತಪ್ಪಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಿದ್ದೇನೆ, ಅವನೊಬ್ಬ ಅಪಾಯಕಾರಿ ವ್ಯಕ್ತಿಯಾಗಿದ್ದು, ಅವನಿಂದ ರಾಜ್ಯವನ್ನು ರಕ್ಷಿಸಬೇಕಿದೆ ಎಂದು ಸಿಧು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 17 ವರ್ಷದ ದಾಂಪತ್ಯ ಅಂತ್ಯಗೊಳಿಸಿ ಡೈವೋರ್ಸ್ ಪಾರ್ಟಿ ಮಾಡಿದ ಮಹಿಳೆ

    ಮೂರು ವಾರಗಳ ಹಿಂದೆಯೇ ನಾನು ರಾಜೀನಾಮೆ ನೀಡಿದ್ದೆ, ಆದರೆ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹುದ್ದೆಯಲ್ಲಿ ಮುಂದುವರಿಯಲು ಸೂಚಿಸಿದ್ದರು. ಸೈನಿಕನಾಗಿ ನಾನು ಹೇಗೆ ಕೆಲಸ ಮಾಡಬೇಕು, ಹೇಗೆ ಹಿಂತಿರುಗಬೇಕು ಎಂದು ಗೊತ್ತಿದೆ ಎಂದರು. ಇನ್ನೂ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ನನ್ನ ಮಕ್ಕಳಿದ್ದಾಗೆ, ಅವರಿಗೆ ಅನುಭವ ಇಲ್ಲ, ಅವರಿಗೆ ತಪ್ಪು ಸಲಹೆಗಳನ್ನು ನೀಡಲಾಗುತ್ತಿದೆ. ಯಾವುದು ಹೀಗೆ ಆಗಬಾರದು, ಇದರಿಂದ ನನಗೆ ದುಃಖವಾಗಿದೆ ಎಂದು ಹೇಳಿದ್ದಾರೆ.

  • ಅಯ್ಯೋ ಮಗನೇ, ಆ ದೇವರು ನಿನ್ನ ಬದಲು ನನ್ನನ್ನು ಕರೆದುಕೊಳ್ಳಬೇಕಿತ್ತು

    ಅಯ್ಯೋ ಮಗನೇ, ಆ ದೇವರು ನಿನ್ನ ಬದಲು ನನ್ನನ್ನು ಕರೆದುಕೊಳ್ಳಬೇಕಿತ್ತು

    – ರಸ್ತೆಯಲ್ಲಿ ಕಣ್ಣೀರಿಟ್ಟ ಪೋಷಕರು
    – ರಕ್ಷಾ ಬಂಧನದಂದು ನಾನು ಯಾರಿಗೆ ರಾಖಿ ಕಟ್ಟಲಿ?

    ಬೆಂಗಳೂರು: ಅಯ್ಯೋ ಮಗನೇ, ಆ ದೇವರು ನಿನ್ನ ಬದಲು ನನ್ನನ್ನು ಕರೆದುಕೊಳ್ಳಬೇಕಿತ್ತು ಎಂದು ಹೇಳಿ ಮೃತ ರಾಹುಲ್ ಪೋಷಕರು ಕಣ್ಣೀರಿಟ್ಟರೆ ಸಹೋದರಿ ರಕ್ಷಾ ಬಂಧನದ ದಿನ ನಾನು ಯಾರಿಗೆ ರಾಖಿ ಕಟ್ಟಲಿ ಎಂದು ಹೇಳಿ ದು:ಖ ತೋಡಿಕೊಂಡಿದ್ದಾರೆ.


    17 ವರ್ಷದ ವಿದ್ಯಾರ್ಥಿ ರಾಹುಲ್ ಇಂದು ಬೆಳಗ್ಗೆ ಸದಾಶಿವನಗರ ವ್ಯಾಪ್ತಿಯಲ್ಲಿ ಪಿಸ್ತೂಲಿನಿಂದ ಗುಂಡು ಹರಿಸಿಕೊಂಡು ಆತ್ಮಹತ್ಯೆ ಮಾಡಿದ್ದಾನೆ. ಈ ಸುದ್ದಿ ತಿಳಿದ ತಕ್ಷಣ ಭಗತ್ ಸಿಂಗ್, ಬಾಬ್ನಾ ದಂಪತಿ ಸ್ಥಳಕ್ಕೆ ಆಗಮಿಸಿ ಕಣ್ಣೀರಿಟ್ಟಿದ್ದಾರೆ.

    ರಾಹುಲ್ ತಂದೆ ಮಧ್ಯ ರಸ್ತೆಯಲ್ಲಿ ಕುಳಿತುಕೊಂಡು ಫೋನ್ ನಲ್ಲಿ ತನ್ನ ಮಗನ ಫೋಟೋವನ್ನು ನೋಡಿಕೊಂಡು ‘ನನ್ನ ಮಗ, ಅಯ್ಯೋ ನನ್ನ ಮಗ’ ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಈ ವೇಳೆ ಅಲ್ಲಿದ್ದ ಪೊಲೀಸರು ಸಮಾಧಾನ ಮಾಡಿ ರಸ್ತೆಬದಿಗೆ ಕರೆದುಕೊಂಡುಹೋಗಿ ಕೂರಿಸಿದ್ದಾರೆ. ಈ ವೇಳೆ ತಂದೆಯವರೆಗೆ ಎದ್ದು ನಿಲ್ಲಲು ಸಹ ಶಕ್ತಿ ಇರಲಿಲ್ಲ. ಇದನ್ನೂ ಓದಿ:  ರಾಹುಲ್‍ಗೆ ಪಿಸ್ತೂಲ್ ಬಳಸಲು ತರಬೇತಿಯನ್ನು ನೀಡಲಾಗಿತ್ತು: ಡಿಸಿಪಿ ಅನುಚೇತ್

    ಭಗತ್ ಸಿಂಗ್ ಮಾತನಾಡಿ, ನಾನು ಆರ್ಮಿಯಿಂದ ನಿವೃತ್ತಿಯನ್ನು ಪಡೆದಿದ್ದೇನೆ. ನಾವು ಎಂದೂ ಅವನಿಗೆ ಇದು ಮಾಡು ಇಷ್ಟು ಓದು ಎಂದು ಹೇಳಿಲ್ಲ. ಅವನಿಗೆ ಒಳ್ಳೆಯ ಕೆಲಸ ಸಿಕ್ಕಿ ಒಂದು ಕಡೆ ನೆಲೆ ನಿಂತರೆ ಸಾಕಾಗಿತ್ತು. ಆದರೆ ಈ ರೀತಿ ಮಾಡಿಕೊಳ್ಳುತ್ತಾನೆ ಎಂದು ನಾವು ಊಹಿಸಿರಲಿಲ್ಲ. ಅವನಿಗೆ ವ್ಯಾಯಾಮ ಮಾಡುವ ಅಭ್ಯಾಸವಿತ್ತು. ಯಾವುದೇ ರೀತಿಯ ತೊಂದರೆಗಳನ್ನು ನಾವು ಅವನಿಗೆ ಕೊಟ್ಟಿರಲಿಲ್ಲ. ಈ ಕುರಿತು ಅವರ ಗೆಳಯರಿಂದ ಏನಾದರೂ ತಿಳಿಯಬಹುದೇ? ಏಕೆಂದರೆ ಸ್ನೇಹಿತರ ಜೊತೆ ಯಾವಾಗಲೂ ಮಾತನಾಡುತ್ತಿದ್ದ ಅವರಿಂದ ಏನಾದರೂ ಸುಳಿವು ಸಿಗಬಹುದು ಎಂದು ಹೇಳಿ ದು:ಖ ಹೊರಹಾಕಿದರು.

    ರಾಹುಲ್ ತಾಯಿ ಬಾಬ್ನ, ತನ್ನ ಸಂಬಂಧಿಕರಿಗೆ ಕರೆ ಮಾಡಿ ನಡೆದಿದ್ದ ಪರಿಸ್ಥಿತಿಯನ್ನು ಹೇಳಿ ಗೋಳಾಡುತ್ತಿದ್ದರು. ಸಿಕ್ಕ ಪೊಲೀಸರಿಗೆಲ್ಲ ಅಣ್ಣ ಇವನನ್ನು ಯಾರು ಸಾಯಿಸಿದ್ದರೆ ಎಂದು ತಿಳಿಯಿತಾ ಎಂದು ಪ್ರಶ್ನೆ ಮಾಡುತ್ತಿದ್ದರು. ಅಯ್ಯೋ ದೇವರೇ ನಾನು ಏನು ಮಾಡಿದೆ ನಮಗೆ ಏಕೆ ಈ ರೀತಿಯ ಪರಿಸ್ಥಿತಿಯನ್ನು ಕೊಟ್ಟೆ ಎಂದು ದೇವರನ್ನು ಶಪಿಸುತ್ತ ಒಂದು ಕಡೆ ನಿಲ್ಲಲಾರದೇ ಕಣ್ಣೀರು ಹಾಕುತ್ತಿದ್ದರು. ಇದನ್ನೂ ಓದಿ:  ಮುಂದಿನ ದಿನಗಳಲ್ಲಿ ಕ್ಷೇತ್ರವಾರು ಶಾಸಕರ ಜೊತೆ ಸಭೆ ಮಾಡಿ ಲಸಿಕೆ ಅಭಿಯಾನ ಮಾಡ್ತೇವೆ: ಆರ್.ಅಶೋಕ್

    ಕುಸಿದು ಬಿದ್ದ ಸಹೋದರಿ!

    ರಾಹುಲ್ ಸಹೋದರಿ ಸಹ ಸ್ಥಳಕ್ಕೆ ಆಗಮಿಸಿದ್ದು, ವಿಷಯ ತಿಳಿದು ಅಲ್ಲೇ ಕುಸಿದ್ದಿದ್ದಾರೆ. ಅದು ತನ್ನ ತಮ್ಮನಾ. ಇಲ್ಲಾ ಅದು ಸಾಧ್ಯನೇ ಇಲ್ಲ ಎಂದು ಸತ್ಯವನ್ನು ಅರಗಿಸಿಕೊಳ್ಳಲು ಒದ್ದಾಡುತ್ತಿದ್ದರು.

    ಪೋಷಕರು ಅದು ರಾಹುಲ್. ಅವನ ತಲೆಯಲ್ಲಿ ಏನಾದರೂ ಇತ್ತ ಏಕೆ ಈ ರೀತಿ ಮಾಡಿಕೊಂಡ ಎಂದು ಪೋಷಕರು ಆತನ ಅಕ್ಕನನ್ನು ಕೇಳುತ್ತಿದ್ದರು. ಆದರೆ ಇದರ ಪರಿವೇ ಇಲ್ಲದೆ ಆಕೆ ಮಾತ್ರ ತನ್ನ ತಮ್ಮ ಮೃತನಾದ ಸ್ಥಳವನ್ನು ದಿಟ್ಟಿಸುತ್ತ ನಿಂತಿದ್ದರು. ಇಲ್ಲ ಅವನಿಗೆ ಏನೂ ಆಗಿಲ್ಲ. ಅವನು ಚೆನ್ನಾಗಿಯೇ ಇದ್ದಾನೆ. ನಾನು ಇಲ್ಲಿಂದ ಎಲ್ಲಿಯೂ ಹೋಗಲ್ಲ. ಅವನು ನನ್ನ ತಮ್ಮ ಅವನಿಗೆ ಏನೂ ಆಗುವುದಿಲ್ಲ. ಅಮ್ಮ ಅವನು ಚೆನ್ನಾಗಿ ಇದ್ದ. ಈಗ ಏನಾಯಿತು ಎಂದು ಸತ್ಯವನ್ನು ಒಪ್ಪಿಕೊಳ್ಳಲಾದೆ ಒದ್ದಾಡುತ್ತಿದ್ದರು. ಅಮ್ಮ ರಕ್ಷಾಬಂಧನ ದಿನ ಯಾರಿಗೆ ರಾಖಿಯನ್ನು ಕಟ್ಟಲಿ ಎಂದು ಕೇಳಿ ತಾಯಿಯನ್ನು ಗಟ್ಟಿಯಾಗಿ ಅಪ್ಪಿಕೊಂಡು ಅಳುತ್ತಿದ್ದರು. ಇದನ್ನೂ ಓದಿ:  10ನೇ ತರಗತಿಯಲ್ಲಿ ಶೇ.90 ಅಂಕ ಗಳಿಸಿದ ವಿದ್ಯಾರ್ಥಿ, ನಿವೃತ್ತ ಹವಾಲ್ದಾರ್ ಪುತ್ರ ಶೂಟ್ ಮಾಡಿಕೊಂಡು ಆತ್ಮಹತ್ಯೆ

    ಉತ್ತರಾಖಂಡ್ ಮೂಲದ ಕುಟುಂಬ ಕಳೆದ 20 ವರ್ಷದ ಹಿಂದೆ ಬೆಂಗಳೂರಿಗೆ ಬಂದಿತ್ತು. ತಂದೆ ಭಗತ್ ಸಿಂಗ್ ಹವಾಲ್ದಾರ್ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು.

  • ಭಾಸ್ಕರ್ ರಾವ್ ಜೊತೆಗೂ ರಾಹುಲ್ ಫೋಟೋ ಇದೆ, ಅವರು ಅಪರಾಧಿನಾ: ಅಶೋಕ್ ಪ್ರಶ್ನೆ

    ಭಾಸ್ಕರ್ ರಾವ್ ಜೊತೆಗೂ ರಾಹುಲ್ ಫೋಟೋ ಇದೆ, ಅವರು ಅಪರಾಧಿನಾ: ಅಶೋಕ್ ಪ್ರಶ್ನೆ

    – ಪ್ರಶಾಂತ್ ಸಂಬರಗಿ ಜೊತೆಯೂ ರಾಹುಲ್ ಫೋಟೊ ಇದೆ
    – ಮೈ ಕ್ಯಾಪ್ಟಮ್ ಈಸ್ ಯಡಿಯೂರಪ್ಪ

    ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ರಾಹುಲ್ ಜೊತೆ ತಮ್ಮ ಫೋಟೋ ಇರುವುದಕ್ಕೆ ಕಂದಾಯ ಸಚಿವ ಆರ್ ಅಶೋಕ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ಈ ವಿಚಾರವಾಗಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪದ್ಮನಾಭನಗರದ ನಾಮಕರಣದ ವೇಳೆ ಫೋಟೋ ತೆಗೆಸಿಕೊಂಡಿದ್ದಾನೆ. ನಾನು ನಮ್ಮ ಕಾರ್ಯಕರ್ತನ ನಾಮಕರಣಕ್ಕೆ ಹೋಗಿದ್ದೆ ಅಷ್ಟೇ. ಈ ವೇಳೆ ಆತ ಫೋಟೋ ತೆಗೆಸಿಕೊಂಡಿದ್ದಾನೆ. ಆದರೆ ನನಗೂ ಅವನಿಗೂ ಸಂಬಂಧವಿಲ್ಲ. ಬೆಂಗಳೂರು ಮಾಜಿ ಕಮಿಷನರ್ ಭಾಸ್ಕರ್ ರಾವ್ ಅವರ ಜೊತೆಯೂ ಫೋಟೋ ಇದೆ ಅದಕ್ಕೆ ಅವರು ಅಪರಾಧಿನಾ ಎಂದು ಅಶೋಕ್ ಪ್ರಶ್ನೆ ಮಾಡಿದ್ದಾರೆ.

    ರಾಗಿಣಿ ಜೊತೆಯೂ ನಮ್ಮ ಫೋಟೋ ಇದೆ. ಮಾಸ್ಕ್ ಅರಿವು ಮೂಡಿಸೋ ಜಾಗೃತಿ ಅಭಿಯಾನದ ಕಾರ್ಯಕ್ರಮಕ್ಕೆ ರಾಗಿಣಿ ಬಂದಿದ್ದರು. ಈ ವೇಳೆ ಸಿಎಂ ಮತ್ತು ನಮ್ಮ ಜೊತೆ ರಾಗಿಣಿ ಫೋಟೋ ತೆಗಿಸಿಕೊಂಡಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ಸೇರಿದಂತೆ ಹಲವಾರು ನಾಯಕರ ಜೊತೆ ಅವರ ಫೋಟೋ ಇದೆ. ಹಾಗಾದರೆ ಅವರು ಅಪರಾಧಿನಾ. ರಾಹುಲ್ ಫೋಟೋ ಪ್ರಶಾಂತ್ ಸಂಬರಗಿ ಜೊತೆಯೂ ಇದೆ ಎಂದು ಹೇಳಿದ್ದಾರೆ.

    ಸಾರ್ವಜನಿಕ ಬದುಕಿನಲ್ಲಿ ಇದ್ದಾಗ ಫೋಟೋ ತೆಗೆಸಿಕೊಳ್ಳುತ್ತಾರೆ. ತೆಗೆಸಿಕೊಳ್ಳದಿದ್ದರೆ ಗರ್ವ ಅಂತಾರೆ. ನಮಗೂ ಅವರಿಗೂ ಸಂಬಂಧವಿಲ್ಲ. ರಾಹುಲ್ ಜೊತೆಗೆ ಇರುವ ಫೋಟೋ ನಾಲ್ಕು ವರ್ಷದ ಹಿಂದಿನ ಫೋಟೋ ಇರಬೇಕು. ಕೊರೊನಾ ಬಂದಾಗಿನಿಂದ ಯಾವುದೇ ನಾಮಕರಣಕ್ಕೆ ನಾನು ಹೋಗಿಲ್ಲ ಎಂದು ಹೇಳುವ ಮೂಲಕ ಆರ್ ಅಶೋಕ್ ಅವರು ಅನುಮಾನಗಳಿಗೆ ತೆರೆ ಎಳೆದಿದ್ದಾರೆ.

    ನಾನು ಇಸ್ಪೀಟ್ ಎಲೆಯನ್ನೇ ನೋಡಿಲ್ಲ. ನನ್ನ ಲೈಫಲ್ಲೇ ಸುಮ್ನೆನೂ ಇಸ್ಪೀಟು ಎಲೆಯನ್ನ ನೋಡಿಲ್ಲ. ಇನ್ನು ಕ್ಯಾಸಿನೋ ಏನ್ ನೋಡಲಿ. ಜಮೀರ್ ಗೆ ಮುಸ್ಲಿಂ ನಾಯಕನಾಗಬೇಕೆಂಬ ಆಸೆ. ಎಲ್ಲ ವಿಚಾರದಲ್ಲಿಯೂ ಮುಂದೆ ಬರಬೇಕು ಎಂದು ಬರುತ್ತಾರೆ. ಕೆಜೆ.ಹಳ್ಳಿ, ಡಿಜೆ ಹಳ್ಳಿ ಪ್ರಕರಣದಲ್ಲೂ ಅವರೇ ಕಾಣಿಸಿಕೊಳ್ಳುತ್ತಾರೆ. ಜಾಫರ್ ಷರೀಫ್ ನಂತರ ಲೀಡರ್ ಆಗಬೇಕು ಎಂಬ ಆಸೆ ಅವರಿಗಿದೆ. ವಿದೇಶಕ್ಕೆ ಹೋಗೋದು ತಪ್ಪಲ್ಲ. ಆದರೆ ಕ್ಯಾಸಿನೋ ವಿಚಾರದಲ್ಲಿ, ಹವಾಲಾ ನಡೆದಿದ್ದರೆ ತಪ್ಪಾಗುತ್ತೆ ಎಂದರು.

    ಇದೇ ವೇಳೆ ಬಿಜೆಪಿಯಲ್ಲಿ ನಾಯಕ್ವದ ಬದಲಾವಣೆ ವಿಚಾರವಾಗಿ ಮಾತನಾಡಿ, ಮೈ ಕ್ಯಾಪ್ಟನ್ ಈಸ್ ಯಡಿಯೂರಪ್ಪ. ಯಾವುದೇ ಬಾಲ್ ಹಾಕಿದರೂ ಯಡಿಯೂರಪ್ಪ ಅರಾಮಾವಾಗಿ ಸಿಕ್ಸ್, ಫೋರ್ ಹೊಡೆಯುತ್ತಾರೆ. ಸ್ಪಿನ್ ಹಾಕಲಿ, ನೋಬಾಲ್ ಹಾಕಲಿ ಹೊಡೆಯುತ್ತಾರೆ. ಯಡಿಯೂರಪ್ಪ ಸೀಸನ್ ರಾಜಕಾರಣಿ, ಅಗ್ರಗಣ್ಯರು. ಅವರ ಅಗ್ರಗಣ್ಯ ಪದವಿ ಹಾಗೆ ಇರುತ್ತೆ. ಮೂರು ವರ್ಷ ಸಿಎಂ ಆಗಿಯೇ ಇರುತ್ತಾರೆ. ಬಿಜೆಪಿ ಹೈಕಮಾಂಡ್ ಕೂಡ ನಾಯಕತ್ವ ಬದಲಾವಣೆ ವಿಚಾರವನ್ನು ಪ್ರಸ್ತಾಪಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.

  • ಆರ್ ಅಶೋಕ್, ಕೆ ಮಂಜು, ಉಪೇಂದ್ರ ಜೊತೆ ಡ್ರಗ್ ಡೀಲರ್ ರಾಹುಲ್

    ಆರ್ ಅಶೋಕ್, ಕೆ ಮಂಜು, ಉಪೇಂದ್ರ ಜೊತೆ ಡ್ರಗ್ ಡೀಲರ್ ರಾಹುಲ್

    – ಹಲವು ಸೆಲೆಬ್ರಿಟಿಗಳ ಜೊತೆ ಇತ್ತು ರಾಹುಲ್‍ಗೆ ನಂಟು

    ಬೆಂಗಳೂರು: ಡ್ರಗ್ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಡ್ರಗ್ ಡೀಲರ್ ರಾಹುಲ್ ಜೊತೆ ಕಂದಾಯ ಸಚಿವರಾದ ಆರ್ ಅಶೋಕ್ ಇರುವ ಫೋಟೋ ಪಬ್ಲಿಕ್ ಟಿವಿಗೆ ದೊರಕಿದೆ.

    ಡ್ರಗ್ ಪ್ರಕರಣದಲ್ಲಿ ನಟಿ ಸಂಜನಾ ಆಪ್ತನಾಗಿದ್ದ ರಾಹುಲ್ ನನ್ನು ಸಿಸಿಬಿ ಪೊಲೀಸರು ಸೆಪ್ಟಂಬರ್ 3ರಂದು ಬಂಧಿಸಿದ್ದರು. ಈ ಪ್ರಕರಣ ಈಗ ಬಗೆದಷ್ಟು ಬಯಲಾಗುತ್ತಿದ್ದು, ರಾಹುಲ್ ಶ್ರೀಮಂತ ಲೋಕ ಅನಾವರಣಕೊಂಡಿದೆ. ಸ್ಯಾಂಡಲ್‍ವುಡ್‍ನ ಬಹುತೇಕ ನಟ-ನಟಿಯರ ಜೊತೆಗೆ ರಾಹುಲ್‍ಗೆ ನಂಟಿರುವುದು ಬಟಾಬಯಲಾಗಿದೆ. ಇದನ್ನು ಓದಿ: ರಾಗಿಣಿ ಡ್ರಗ್ಸ್ ಸೇವಿಸಿರೋದಕ್ಕೆ ‘ಬಿಗ್’ ಸಾಕ್ಷ್ಯ – ಆರೋಪಿ ರವಿಶಂಕರ್ ತಪ್ಪೊಪ್ಪಿಗೆ

    ವೀಕೆಂಡ್‍ಗಳಲ್ಲಿ ಪಾರ್ಟಿ ಆಯೋಜನೆ ಮಾಡುತ್ತಿದ್ದ ರಾಹುಲ್, ಸ್ಯಾಂಡಲ್‍ವುಡ್‍ನ ಎಲ್ಲ ತಾರೆಯರನ್ನು ಆಹ್ವಾನ ಮಾಡುತ್ತಿದ್ದ. ಈತನ ಜೊತೆ ನಟ ಉಪೇಂದ್ರ ಮತ್ತು ಕ್ರಿಕೆಟಿಗ ಮತ್ತು ನಟ ಶ್ರೀಶಾಂತ್, ಶ್ರೀನಗರ ಕಿಟ್ಟಿ, ನಿರ್ಮಾಪಕ ಕೆ.ಮಂಜು, ರಘು ಮುಖರ್ಜಿ, ಸಂಗೀತ ನಿರ್ದೇಶಕ ಗುರುಕಿರಣ್, ನಟಿಯರಾದ ಐಂದ್ರಿತಾ ರೇ, ಪ್ರಿಯಾಂಕ ಉಪೇಂದ್ರ, ಹರ್ಷಿಕಾ ಪೂಣಚ್ಚ, ಸಂಜನಾ ಗಲ್ರಾನಿ, ನಿವೃತ್ತ ಐಜಿ ಬಿಎನ್‍ಎಸ್ ರೆಡ್ಡಿಯವರ ಜೊತೆಯೂ ರಾಹುಲ್ ಫೋಟೋ ತೆಗೆಸಿಕೊಂಡಿದ್ದಾರೆ.

    ಇದೇ ವೇಳೆ ನಿರ್ಮಾಪಕ ಕೆ. ಮಂಜು ಅವರು ರಾಹುಲ್‍ಗೆ ಕೈತುತ್ತು ತಿನ್ನಿಸುತ್ತಿರುವ ಫೋಟೋ ವೈರಲ್ ಆಗಿದ್ದು, ಇದರ ಬಗ್ಗೆ ಪಬ್ಲಿಕ್ ಟಿವಿಯ ಜೊತೆ ಮಾತನಾಡಿರುವ ಕೆ.ಮಂಜು ಅವರು, ಆತ ನನಗೆ ಬಹಳ ವರ್ಷದಿಂದ ಪರಿಚಯ. ಆತ ನನ್ನ ಗೆಳೆಯರೊಬ್ಬರ ಆಫೀಸ್‍ನಲ್ಲಿ ಪರಿಚಯವಾಗಿದ್ದ. ಬಹಳ ಒಳ್ಳೆಯ ಹುಡುಗ, ಒಂದು ಪಾರ್ಟಿಗೆ ಹೋದಾಗ ಆತನ ಬಳಿ ಒಂದು ಫೋಟೋ ತೆಗೆಸಿಕೊಂಡಿದ್ದೆ ಎಂದು ಹೇಳಿದ್ದಾರೆ.

    ಇದರ ಜೊತೆಗೆ ರಾಹುಲ್ ಶ್ರೀಲಂಕಾದ ಕ್ಯಾಸಿನೋವೊಂದಕ್ಕೆ ಇಲ್ಲಿಂದ ಸೆಲೆಬ್ರಿಟಿಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ. ರಾಹುಲ್ ಜೊತೆಗೆ ಸಚಿವ ಆರ್ ಅಶೋಕ್ ಅವರ ಫೋಟೋ ಕೂಡ ವೈರಲ್ ಆಗಿದ್ದು, ಈ ಫೋಟೋದಲ್ಲಿ ರಾಹುಲ್‍ಗೆ ಅಶೋಕ್ ಕೇಕ್ ತಿನ್ನಿಸುತ್ತಿದ್ದಾರೆ. ಇನ್ನು ರ್ಯಾಪರ್ ಚಂದನ್ ಶೆಟ್ಟಿ, ನಟಿ ಕಾರಣ್ಯ ರಾವ್ ಅವರ ಜೊತೆ ಕೂಡ ರಾಹುಲ್ ಫೋಟೋ ಕ್ಲಿಕಿಸಿಕೊಂಡಿದ್ದಾನೆ. ಇದನ್ನು ಓದಿ: ಖನ್ನಾ ಪೂಲ್ ಪಾರ್ಟಿಯಲ್ಲಿ ಮತ್ಸ್ಯಕನ್ಯೆಯಂತೆ ಈಜಿದ್ದ ಸಂಜನಾ

    ಈ ಹಿಂದೆ ರಾಹುಲ್ ಬಗ್ಗೆ ಮಾತನಾಡಿದ್ದ ನಟಿ ಸಂಜನಾ, ರಾಹುಲ್ ತುಂಬಾ ಒಳ್ಳೆಯ ಹುಡುಗ, ಅವನು ರಿಯಲ್ ಎಸ್ಟೇಟ್ ಮಾಡುತ್ತಾನೆ. ಜೇಕರ್ಬ್ ವರ್ಗಿಸ್ ನಿರ್ದೇಶನದ ಚಂಬಲ್ ಸಿನಿಮಾದಲ್ಲಿ ರಾಹುಲ್ ಸಣ್ಣ ಪಾತ್ರ ಮಾಡಿದ್ದಾನೆ. ರಾಹುಲ್‍ನನ್ನು ನಾನು ರಾಖೀ ಭಾಯ್ ಅಂತಾನೇ ಕರೆಯುತ್ತೇನೆ. ನಾವು ತುಂಬಾ ಕ್ಲೋಸ್ ಫ್ರೆಂಡ್ ಅವನು ನನ್ನ ರಾಖೀ ಅಣ್ಣ. ರಾಹುಲ್ ಆದಷ್ಟು ಬೇಗ ಈ ಎಲ್ಲಾ ಸಮಸ್ಯೆಗಳಿಂದ ಹೊರಗಡೆ ಬರುತ್ತಾನೆ ಎಂದು ಸಂಜನಾ ತಿಳಿಸಿದ್ದರು.

  • ಸಂಜನಾ ಪತಿ ನನಗೆ ಚಿಕಿತ್ಸೆ ನೀಡಿದ್ರು – ಡಾಕ್ಟರ್ ಜೊತೆ ಸಂಜನಾ ಮದ್ವೆ ಆಗಿದ್ದಾರಾ?

    ಸಂಜನಾ ಪತಿ ನನಗೆ ಚಿಕಿತ್ಸೆ ನೀಡಿದ್ರು – ಡಾಕ್ಟರ್ ಜೊತೆ ಸಂಜನಾ ಮದ್ವೆ ಆಗಿದ್ದಾರಾ?

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ನಟಿ ಸಂಜನಾ ಮನೆಯ ಮೇಲೆ ದಾಳಿದ್ದರು. ಇದೀಗ ಸಂಜನಾರನ್ನು ಬಂಧಿಸಿ ಸಿಸಿಬಿ ಕಚೇರಿಗೆ ಅಧಿಕಾರಿಗಳು ಕರೆದುಕೊಂಡು ಹೋಗಿದ್ದಾರೆ. ಆದರೆ ಈ ಮಧ್ಯೆ ನಟಿ ನ್ಯೂರೋ ಸರ್ಜನ್ ಕರೆಯಲು ಗಲಾಟೆ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

    ಸಿಸಿಬಿ ಅಧಿಕಾರಿಗಳು ನಟಿ ಸಂಜನಾ ಮನೆಯಲ್ಲಿ ಶೋಧ ಕಾರ್ಯಾಚರಣೆ ಮಾಡುತ್ತಿದ್ದ ವೇಳೆ ನ್ಯೂರೋ ಸರ್ಜನ್ ಕರೆಯಲು ಗಲಾಟೆ ಮಾಡಿದ್ದರು ಎನ್ನಲಾಗಿದೆ. ಅದೇ ಅಪಾರ್ಟ್ ಮೆಂಟ್ ಅಲ್ಲಿ ಡಾಕ್ಟರ್ ವಾಸಿಸುತ್ತಿದ್ದು, ಆತನ ಜೊತೆ ಸಂಜನಾ ಸ್ನೇಹ ಇಟ್ಟುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಅವರಿಬ್ಬರು ಅಮೆರಿಕಾಗೆ ಹೋಗಿ ಮದುವೆ ಆಗಿದ್ದಾರೆ ಎಂದು ಗುಮಾನಿ ಸಹ ಇದೆ. ಹೀಗಾಗಿ ಸಂಜನಾ ಡಾಕ್ಟರ್ ಕರೆಯಲು ಒತ್ತಾಯಿಸಿದ್ದರು ಎನ್ನಲಾಗಿದೆ.

    ವೈದ್ಯ ಸಂಜನಾರನ್ನು ಮದುವೆ ಆಗಿದ್ದಾರೋ ಅಥವಾ ಲಿವ್ ಇನ್ ಸಂಬಂಧ ಇಟ್ಟುಕೊಂಡಿದ್ದಾರೋ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ರಾಹುಲ್ ತಂದೆ ರಾಮಚಂದ್ರ ಮೂರು ದಿನಗಳ ಹಿಂದೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡುವ ವೇಳೆ ಸಂಜನಾ ಪತಿ ಚಿಕಿತ್ಸೆ ನೀಡಿದ್ದರು ಎಂದು ಹೇಳಿಕೆ ನೀಡಿದ್ದರು.

    ಮೂರು ದಿನಗಳ ಹಿಂದೆ ರಾಹುಲ್ ತಂದೆ ಪಬ್ಲಿಕ್ ಟಿವಿ ಜೊತೆ ಮಾತನಾಡುವ ವೇಳೆ, ನನ್ನ ಮಗನಿಗೆ ಸಂಜನಾ ಒಬ್ಬರೇ ಪರಿಚಯ ಇರುವುದು. ರಾಹುಲ್ ಎಂಜಿನಿಯರ್ ಮಾಡಿ ಆರ್ಕಿಟೆಕ್ಚರ್ ಕೆಲಸ ಮಾಡುತ್ತಿದ್ದಾನೆ. ಒಮ್ಮೆ ಸಂಜನಾ ಮನೆಗೆ ಹೋಗಿ ಇಂಟಿರಿಯರ್ ಡಿಸೈನರ್ ಕೆಲಸ ಮಾಡಿಕೊಟ್ಟಿದ್ದನು. ಅಂದಿನಿಂದ ಇಬ್ಬರಿಗೂ ಪರಿಚಯವಾಗಿದೆ. ಅವರ ಮನೆ ಇವನು, ನಮ್ಮ ಮನೆಗೆ ಸಂಜನಾ ಬಂದು ಹೋಗುತ್ತಿದ್ದರು ಎಂದು ಹೇಳಿದ್ದರು.

     

    ಅಲ್ಲದೇ ಅವರ ಬರ್ತ್ ಡೇ ಪಾರ್ಟಿಗೆ ಇವನು ಹೋಗುತ್ತಿದ್ದನು. ಇವನ ಹುಟ್ಟುಹಬ್ಬಕ್ಕೆ ಸಂಜನಾ ಕೂಡ ಬರುತ್ತಿದ್ದಳು. ಅವರಿಬ್ಬರದ್ದು ಅಣ್ಣ-ತಂಗಿ ಸಂಬಂಧ ಬೇರೆ ಏನು ಇಲ್ಲ. ನನಗೆ ಹೃದಯ ಸಂಬಂಧಿ ಕಾಯಿಲೆ ಇದೆ. ಒಮ್ಮೆ ಸಂಜನಾ ಪತಿಯೇ ನನಗೆ ಚಿಕಿತ್ಸೆ ನೀಡಿದ್ದರು. ಸಂಜನಾ ಪತಿ ಕೂಡ ರಾಹುಲ್‍ಗೆ ಪರಿಚಯ, ಸಂಜನಾ ಪತಿ ಡಾಕ್ಟರ್ ಆಗಿದ್ದು, ನಮಗೆ ಸಹಾಯ ಮಾಡಿದ್ದರು ಎಂದು ರಾಮಚಂದ್ರ ಪ್ರತಿಕ್ರಿಯಿಸಿದ್ದರು.

  • ಡ್ರಗ್ಸ್ ಕೇಸ್ – ಸಂಜನಾಗೆ ಉರುಳಾದ ಮೂರು ವ್ಯಕ್ತಿಗಳು

    ಡ್ರಗ್ಸ್ ಕೇಸ್ – ಸಂಜನಾಗೆ ಉರುಳಾದ ಮೂರು ವ್ಯಕ್ತಿಗಳು

    ಬೆಂಗಳೂರು: ನಟಿ ಸಂಜನಾ ಮನೆಯ ಮೇಲೆ ಸಿಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದು, ಶೋಧ ಕಾರ್ಯಾಚರಣೆ ಮಾಡುತ್ತಿದ್ದಾರೆ. ಸಂಜನಾ ಮನೆ ಮೇಲಿನ ದಾಳಿಗೆ ಮೂವರು ವ್ಯಕ್ತಿಗಳ ಜೊತೆಗಿನ ಒಡನಾಟ ಕಾರಣ ಎನ್ನಲಾಗುತ್ತಿದೆ. ಇದನ್ನೂ ಓದಿ: ಏಕಾಏಕಿ ದಾಳಿ ಮಾಡಿದ್ದೀರಿ, ನಾನು ಬರೋದಿಲ್ಲ – ಸಿಸಿಬಿ ಮುಂದೆ ಸಂಜನಾ ರಂಪಾಟ

    ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿರುವ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ನೀಡಿದ ಹೇಳಿಕೆಯ ಆಧಾರದ ಮೇಲೆ ನಟಿ ಸಂಜನಾ ನಿವಾಸದ ಮೇಲೆ ಸಿಸಿಬಿ ದಾಳಿ ನಡೆಸಿದೆ ಎನ್ನಲಾಗಿದೆ. ಈ ಹಿಂದೆ ನಟಿ ಸಂಜನಾ ಆಪ್ತ ರಾಹುಲ್, ಪ್ರಶಾಂತ್ ರಾಂಕಾ ಕೊಟ್ಟ ಹೇಳಿಕೆಯ ಎಲ್ಲಾವನ್ನ ಇಟ್ಟುಕೊಂಡು ಸಿಸಿಬಿ ಸೋಮವಾರ ರಾತ್ರಿ ಸರ್ಚ್ ವಾರೆಂಟ್ ಪಡೆದಿತ್ತು. ಹೀಗಾಗಿ ಬೆಳ್ಳಂಬೆಳಗ್ಗೆ ನಟಿ ಸಂಜನಾ ಮನೆಯ ಮೇಲೆ ಸಿಸಿಬಿ ದಾಳಿ ಮಾಡಿದೆ. ಇದನ್ನೂ ಓದಿ: ಪೃಥ್ವಿ ಶೆಟ್ಟಿ ಹೇಳಿಕೆಯ ಆಧಾರದ ಮೇಲೆ ಸಂಜನಾ ನಿವಾಸದ ಮೇಲೆ ದಾಳಿ?

    ಸಂಜನಾ-ಪೃಥ್ವಿ ಶೆಟ್ಟಿ:
    ಬೆಂಗಳೂರಿನಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿದ್ದ ಪೃಥ್ವಿ ಶೆಟ್ಟಿ ಕಂಪನಿಯಲ್ಲಿ ಸಂಜನಾ ಸಹ ಪಾಲುದಾರೆ ಎಂಬ ಮಾಹಿತಿ ಸಿಕ್ಕಿದೆ. ಇಬ್ಬರ ನಡುವೆ ಲಕ್ಷಾಂತರ ರೂಪಾಯಿ ವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ದಾಖಲೆಗಳನ್ನು ಕೆದಕಿದಾಗ ದೊಡ್ಡ ದೊಡ್ಡ ಹೋಟೆಲ್‍ಗಳಲ್ಲಿ ಪಾರ್ಟಿಗಳನ್ನು ಆಯೋಜನೆ ಮಾಡಿದ ಬಗ್ಗೆ ಮಾಹಿತಿ ಸಿಕ್ಕಿದೆ. ಇವರಿಬ್ಬರು ಬರೀ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದರೇ ಅಥವಾ ಬೇರೆ ಯಾವೆಲ್ಲಾ ವ್ಯವಹಾರಗಳನ್ನು ನಡೆಸುತ್ತಿದ್ದರು ಎಂಬುದರ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದೆ. ಸದ್ಯಕ್ಕೆ ಪೃಥ್ವಿ ಶೆಟ್ಟಿ ತಿಳಿಸಿದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ.

    ಸಂಜನಾ-ರಾಹುಲ್ ಲಿಂಕ್:
    ರಾಹುಲ್ ನಟಿ ಸಂಜನಾ ಗಲ್ರಾನಿ ಆಪ್ತನಾಗಿದ್ದು, ರಾಹುಲ್‍ನನ್ನು ರಾಕಿ ಬ್ರದರ್ ಎನ್ನುತ್ತಾರೆ. ರಾಹುಲ್ ಶ್ರೀಲಂಕಾದಲ್ಲಿ ಕ್ಯಾಸಿನೋ ಹೊಂದಿದ್ದು, ರಾಹುಲ್ ಜೊತೆ ಶ್ರೀಲಂಕಾ ಕ್ಯಾಸಿನೋಗಳಲ್ಲಿ ಸಂಜನಾ ಕಾಣಿಸಿಕೊಂಡಿದ್ದರು. ಜೊತೆಗೆ ರಾಹುಲ್ ಡ್ರಗ್ ಪೆಡ್ಲರ್ ಆಗಿದ್ದು, ಸೆಲೆಬ್ರಿಟಿ ಪಾರ್ಟಿಗಳಿಗೆ ಡ್ರಗ್ ಪೂರೈಸುತ್ತಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ವಿಚಾರಣೆ ವೇಳೆ ಸಂಜನಾ ಹೆಸರು ಬಾಯಿಬಿಟ್ಟಿದ್ದನು. ಅಲ್ಲದೇ ರಾಹುಲ್ ಮೊಬೈಲ್‍ನಲ್ಲಿದ್ದ ಪಾರ್ಟಿ ಫೋಟೋ ಕೂಡ ಸೀಜ್ ಮಾಡಲಾಗಿದೆ.

     

    ಸಂಜನಾ_ಪ್ರಶಾಂತ್ ರಾಂಕಾ ಲಿಂಕ್:
    ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಪ್ರಶಾಂತ್ ರಾಂಕಾ ನಾಲ್ಕನೇಯ ಆರೋಪಿಯಾಗಿದ್ದು, ವಿದೇಶಿಯೊಂದಿಗೆ ಡ್ರಗ್ಸ್ ವ್ಯವಹಾರದಲ್ಲಿ ನೇರ ಸಂಪರ್ಕ ಹೊಂದಿದ್ದನು ಎಂದು ತಿಳಿದು ಬಂದಿದೆ. ಪ್ರಶಾಂತ್ ರಾಂಕಾ ಜೊತೆ ನಟಿ ಸಂಜನಾ ಹಲವು ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದು, ಇಬ್ಬರ ನಡುವೆ ಸಂಪರ್ಕ ಇದ್ದ ಬಗ್ಗೆ ಮೊಬೈಲ್‍ನಲ್ಲಿರುವ ಫೋಟೋ, ಕರೆ ಸಾಕ್ಷ್ಯ ಸುಳಿವು ನೀಡಿದೆ. ಈ ಸುಳಿವನ್ನು ಬೆನ್ನತ್ತಿದ ಸಿಸಿಬಿ ಅಧಿಕಾರಿಗಳು ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದಾರೆ.

    ನಟಿ ಸಂಜನಾಗೆ ನೋಟಿಸ್ ಕೊಟ್ಟರೆ ಎಚ್ಚೆತ್ತುಕೊಳ್ಳುತ್ತಾರೆ ಎಂದು ತನಿಖೆಯ ವೇಳೆ ಸಿಕ್ಕಿರುವ ಮಾಹಿತಿಯನ್ನ ಇಟ್ಟುಕೊಂಡು ಸಿಸಿಬಿ ದಿಢೀರ್ ದಾಳಿ ಮಾಡಿದೆ.

  • ಪೃಥ್ವಿ ಶೆಟ್ಟಿ ಹೇಳಿಕೆಯ ಆಧಾರದ ಮೇಲೆ ಸಂಜನಾ ನಿವಾಸದ ಮೇಲೆ ದಾಳಿ?

    ಪೃಥ್ವಿ ಶೆಟ್ಟಿ ಹೇಳಿಕೆಯ ಆಧಾರದ ಮೇಲೆ ಸಂಜನಾ ನಿವಾಸದ ಮೇಲೆ ದಾಳಿ?

    ಬೆಂಗಳೂರು: ಇವೆಂಟ್‌ ಮ್ಯಾನೇಜ್ಮೆಂಟ್‌ ಕಂಪನಿ ನಡೆಸುತ್ತಿರುವ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ನೀಡಿದ ಹೇಳಿಕೆಯ ಆಧಾರದ ಮೇಲೆ ನಟಿ ಸಂಜನಾ ನಿವಾಸದ ಮೇಲೆ ಸಿಸಿಬಿ ದಾಳಿ ನಡೆಸಿದೆ ಎನ್ನಲಾಗಿದೆ.

    ಇಂದಿರಾನಗರದಲ್ಲಿರುವ ನಟಿ ಸಂಜನಾ ನಿವಾಸದ ಮೇಲೆ ಇಂದು ಬೆಳ್ಳಬೆಳಗ್ಗೆ ಇನ್ಸ್‌ಪೆಕ್ಟರ್‌ ಪುನೀತ್‌ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಬಂದ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

    ಕಳೆದ ವಾರ ನಟಿ ರಾಗಿಣಿ ಮನೆ ಮೇಲೆ ದಾಳಿ ನಡೆಸಿ ಬಳಿಕ ಸಿಸಿಬಿ ಬಂಧಿಸಿತ್ತು. ಕಳೆದ ವಾರವೇ ಸಂಜನಾ ಹೆಸರು ಕೇಳಿ ಬಂದಿತ್ತು. ಆದರೆ ಸಿಸಿಬಿ ಎಫ್‌ಐಆರ್‌ನಲ್ಲಿ ಸಂಜನಾ ಹೆಸರು ಉಲ್ಲೇಖವಾಗಿರಲಿಲ್ಲ. ಆದರೆ ಈಗ ಆಪ್ತೆ ಪೃಥ್ವಿ ಶೆಟ್ಟಿ ಮತ್ತು ಆಪ್ತ ರಾಹುಲ್‌ ನೀಡಿದ ಹೇಳಿಕೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

    ಆರೋಪ ಏನು?
    ಡ್ರಗ್ಸ್‌ ಪ್ರಕರಣದಲ್ಲಿ ಸಂಜನಾ ವಿರುದ್ಧ ಕಳೆದ ವಾರ ಯಾವುದೇ ಸಾಕ್ಷ್ಯಗಳು ಸಿಕ್ಕಿರಲಿಲ್ಲ. ಹೀಗಾಗಿ ಸೂಕ್ತ ಸಾಕ್ಷ್ಯಕ್ಕಾಗಿ ಕಾಯುತ್ತಿದ್ದರು. ಈ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ಹಲವು ಮಾಹಿತಿಗಳನ್ನು ತಿಳಿಸಿದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.

    ಬೆಂಗಳೂರಿನಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿದ್ದ ಪೃಥ್ವಿ ಶೆಟ್ಟಿ ಕಂಪನಿಯಲ್ಲಿ ಸಂಜನಾ ಸಹ ಪಾಲುದಾರೆ ಎಂಬ ಮಾಹಿತಿ ಸಿಕ್ಕಿದೆ. ಇಬ್ಬರ ನಡುವೆ ಲಕ್ಷಾಂತರ ರೂಪಾಯಿ ವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ದಾಖಲೆಗಳನ್ನು ಕೆದಕಿದಾಗ ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಪಾರ್ಟಿಗಳನ್ನು ಆಯೋಜನೆ ಮಾಡಿದ ಬಗ್ಗೆ ಮಾಹಿತಿ ಸಿಕ್ಕಿದೆ.

    ಇವರಿಬ್ಬರು ಬರೀ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದರೇ ಅಥವಾ ಬೇರೆ ಯಾವೆಲ್ಲಾ ವ್ಯವಹಾರಗಳನ್ನು ನಡೆಸುತ್ತಿದ್ದರು ಎಂಬುದರ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದೆ. ಪಾರ್ಟಿಗಳಲ್ಲಿ ಏನು ಬಳಕೆ ಆಗುತ್ತಿತ್ತು? ಯಾರೆಲ್ಲ ಬರುತ್ತಿದ್ದರು ಎಂಬುದರ ಬಗ್ಗೆ ಪೃಥ್ವಿ ಶೆಟ್ಟಿ ತಿಳಿಸಿದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ.

    ಆಪ್ತನ ಮೇಲೆ ಎಫ್‌ಐಆರ್‌ :
    ಸಿಸಿಬಿಯ ನಾರ್ಕೊಟಿಕ್ಸ್ ಎಸಿಪಿ ಗೌತಮ್ ಸೆ.4 ರಂದು ನೀಡಿದ ಸ್ವಯಂಪ್ರೇರಿತ ದೂರಿನ ಆಧಾರದ ಮೇಲೆ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಬಂಧಿತ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದ ಬಗ್ಗೆ ಸಾಕ್ಷಿ ಹಾಗೂ ಪುರಾವೆಗಳು ಸಿಕ್ಕಿರುವ ಹಿನ್ನೆಯಲ್ಲಿ ಗೌತಮ್‌ ಅವರು ದೂರು ನೀಡಿದ್ದರು. ವಾಟ್ಸಾಪ್ ಮೆಸೇಜ್‍ಗಳು ಹಾಗೂ ಪೆಡ್ಲರ್ ಗಳ ನೀಡಿರುವ ಮಾಹಿತಿ ಅನ್ವಯ ನಟಿ ರಾಗಿಣಿ ಅವರ ಕೈವಾಡದ ಬಗ್ಗೆ ಸಾಕ್ಷಿ ಲಭ್ಯವಾಗಿದ್ದು, ಡ್ರಗ್ ಡೀಲರ್ ಗಳ ಜೊತೆ ಒಡನಾಟವನ್ನು ಹೊಂದಿದ್ದಾರೆ. ಅನೇಕ ಬಾರಿ ಡ್ರಗ್ ಡೀಲ್ ಮಾಡಿರುವ ಬಗ್ಗೆ ಮಾಹಿತಿ ಖಚಿತವಾದ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

    ಈ ಎಫ್‌ಐಆರ್‌ನಲ್ಲಿ ಸಂಜನಾ ಆಪ್ತ ರಾಹುಲ್‌ ಹೆಸರು ಸಹ ಉಲ್ಲೇಖವಾಗಿತ್ತು. ಒಟ್ಟು 12 ಮಂದಿ ಆರೋಪಿಗಳ ಪೈಕಿ ರಾಹುಲ್‌ 11ನೇ ಆರೋಪಿಯಾಗಿದ್ದಾನೆ. ವಿಚಾರಣೆಯ ವೇಳೆ ಈತ ಸಂಜನಾ ಪಾಲ್ಗೊಳ್ಳುತ್ತಿದ್ದ ಹೈ ಎಂಡ್‌ ಪಾರ್ಟಿ ಬಗ್ಗೆ ಮಾಹಿತಿ ನೀಡಿದ್ದಾನೆ. ಮಹತ್ವದ ಸ್ಯಾಕ್ಷ್ಯಗಳು ಲಭ್ಯವಾದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಸಂಜನಾ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.