Tag: Raghu Gowda

  • ರಘು ಕಿವಿಯಲ್ಲಿ ಹೂ ಇಟ್ಟ ಬಿಗ್‍ಬಾಸ್ ಸ್ಪರ್ಧಿಗಳು

    ರಘು ಕಿವಿಯಲ್ಲಿ ಹೂ ಇಟ್ಟ ಬಿಗ್‍ಬಾಸ್ ಸ್ಪರ್ಧಿಗಳು

    ಬಿಗ್‍ಬಾಸ್ ಮನೆಯ ಸ್ಪರ್ಧಿಗಳು ಎಲ್ಲರ ಜೊತೆಗೆ ತಮಾಷೆ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ಬಿಗ್‍ಬಾಸ್ ಅಸಲಿ ಆಟ ಆರಂಭಗೊಂಡಿದ್ದು, ಸ್ಪರ್ಧಿಗಳು ರಘುಗೆ ಚಮಕ್‍ಕೊಟ್ಟು ಕಿಮಿ ಮೇಲೆ ಹೂ ಇಡುವ ಪ್ರಯತ್ನವನ್ನು ಮಾಡಿದ್ದಾರೆ.

    ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್ ಆಟ ಶುರುವಾಗಿದೆ. ರೋಸ್, ಪಂಚಿಂಗ್ ಗ್ಲೌಸ್, ಹುಂಡಿಯನ್ನು ಮನೆಗೆ ಬಿಗ್‍ಬಾಸ್ ಕಳುಹಿಸಿಕೊಟ್ಟಿದ್ದಾರೆ. ಇದನ್ನು ನೋಡಿದ ಸ್ಪರ್ಧಿಗಳು ಒಂದೊಂದು ರೀತಿಯಾಗಿ ಯೋಚನೆ ಮಾಡಿದ್ದಾರೆ. ಈ ವೇಳೆ ರಘು ಕಿವಿ ಮೇಲೆ ಹೂ ಇಡುವ ಯೋಚನೆಯನ್ನು ಮಾಡಿದ್ದಾರೆ.

    ರಘು ಅಲ್ಲಿ ಇರಲಿಲ್ಲ. ಹೀಗಾಗಿ ರಘುಗೆ ಟಾಸ್ಕ್ ಎಂದು ಹೇಳಿ ಮಜಾ ಮಾಡುವ ಏನೂ ಹೇಳುತ್ತಾನೆ ನೋಡೋಣ ಎಂದು ಮನೆಮಂದಿ ಪ್ಲ್ಯಾನ್ ಮಾಡಿದ್ದಾರೆ. ಆಗ ರಘು ಟಾಸ್ಕ್ ಎಂದು ನಂಬಿಕೊಂಡು ಕೆಲವು ಕಾರಣಗಳನ್ನು ಕೊಟ್ಟು ಒಂದೊಂದು ವಸ್ತುವನ್ನು ಒಬ್ಬೊಬ್ಬರಿಗೆ ಕೊಡುವುದಾಗಿ ಹೇಳಿದ್ದಾರೆ. ಸಂಬರಗಿ ಮಾತ್ರ ನಿಜವಾಗಿಯೂ ಜಗಳ ಮಾಡುವಂತೆ ಸಖತ್ ಆಗಿ ಆ್ಯಕ್ಟ್ ಮಾಡಿದ್ದಾರೆ.

    ಹಿಂದಿನ ಸೀಸನ್‍ನಂತೆ ಈಗಲೂ ಮಾಡುತ್ತಿದ್ದಾನೆ ಎಂದು ಸಂಬರಗಿ ಹೇಳಿದ್ದಾರೆ. ಆಗ ರಘು ಸಿಟ್ಟಿನಿಂದ ವಾಯ್ಸ್ ರೈಸ್ ಮಾಡುವುದು ನನಗೂ ಗೊತ್ತಿರುವ ವಿಚಾರವಾಗಿದೆ. ನಾನು ಇನ್ನು ಹತ್ತು ಸೀಸನ್ ಬಂದ್ರೂ ಕೂಡ ಹೀಗೆ ಇರುತ್ತೇನೆ ಎಂದು ಹೇಳಿದ್ದಾರೆ. ಆಗ ರಘು ಕಿವಿಗೆ ಹೂ ಮೂಡಿಸಿದ್ದು ಎಂದು ಮನೆ ಮಂದಿ ಹೇಳುತ್ತಾ ಜೋರಾಗಿ ಕೂಗಿದ್ದಾರೆ. ಆಗ ರಘುಗೆ ತನ್ನ ಕಿವಿ ಮೇಲೆ ಹೂ ಇಟ್ಟಿರುವ ವಿಚಾರ ತಿಳಿದು ನಕ್ಕು ಸುಮ್ಮನಾಗಿದ್ದಾರೆ.

    ಬಿಗ್‍ಬಾಸ್ ಸ್ಪರ್ಧಿಗಳ ಸೂತ್ರವನ್ನು ಹಿಡಿದು ಆಟ ಆಡಲು ಪ್ರಾರಂಭಿಸಿದ್ದಾರೆ. ಈಗ ತಾನೇ ಮನೆಗೆ ಎಂಟ್ರಿಕೊಟ್ಟ ಸ್ಪರ್ಧಿಗಳು ಮನೆಯಿಂದ ಆಚೆ ಹೋದ ಮೇಲೆ ಏನಾಯ್ತು? ಯಾರಿಂದ ಬೇಜಾರ್ ಆಗಿದೆ ಎಂದು ಹೇಳುತ್ತಾ ತಮ್ಮ ಮನಸ್ಸಿನ ಬೇಸರವನ್ನು ಹೊರ ಹಾಕುತ್ತಾ ಕೆಲವು ಘಟನೆಗಳನ್ನು ಮೆಲುಕು ಹಾಕುತ್ತಿದ್ದಾರೆ.

  • ವೈಯಕ್ತಿಕ ವಿಷಯ ಇಟ್ಟುಕೊಂಡು ರಘು, ಚಕ್ರವರ್ತಿ ಕಿತ್ತಾಟ

    ವೈಯಕ್ತಿಕ ವಿಷಯ ಇಟ್ಟುಕೊಂಡು ರಘು, ಚಕ್ರವರ್ತಿ ಕಿತ್ತಾಟ

    ಬಿಗ್‍ಬಾಸ್ ಮನೆಯಲ್ಲಿ ದಿನಕ್ಕೊಂದು ವಿಶೇಷ ಸುದ್ದಿಗಳಿರುತ್ತವೆ. ಜಗಳ, ಗಾಸಿಪ್, ಡ್ರಾಮಾ, ಗುಸು ಗುಸು ಇರುತ್ತವೆ. ವೈಲ್ಡ್‍ಕಾರ್ಡ್ ಮೂಲಕವಾಗಿ ಎಂಟ್ರಿಕೊಟ್ಟ ಚಕ್ರವರ್ತಿ ಚಂದ್ರಚೂಡ್ ಮೊದಲಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ. ಇದೀಗ ಆಟದ ವಿಚಾರವಾಗಿ ರಘು ಮತ್ತು ಚಕ್ರವರ್ತಿ ನಡುವೆ ಡೊಡ್ಡ ಜಗಳವೇ ಆಗಿದೆ.

    ಚಕ್ರವರ್ತಿ ಚಂದ್ರಚೂಡ್ ಹಾಗೂ ರಘು ಗೌಡ ಅವರು ವೈಯಕ್ತಿಕ ವಿಷಯ ಇಟ್ಟುಕೊಂಡು ಜಗಳ ಆಡಿದ್ದಾರೆ. ರಘು ಮಾತು ಕೇಳಿ ಕೋಪಗೊಂಡ ಚಕ್ರವರ್ತಿ ಅವರು ಇನ್ಮುಂದೆ ಯಾರಿಗೂ ಸಹಾಯ ಮಾಡೋದಿಲ್ಲ ಎಂದಿದ್ದಾರೆ.

    ಬಿಗ್‍ಬಾಸ್ ನೀಡಿರುವ ಟಾಸ್ಕ್‍ನಲ್ಲಿ ಯಾರು ಏಜೆಂಟ್ ಅಂತ ದೊಡ್ಡ ಚರ್ಚೆ ನಡೆಯುತ್ತಿದೆ. ಅದರ ಜೊತೆಗೆ ಆಟವನ್ನು ಗೆಲ್ಲಬೇಕು. ಇಲ್ಲಿ ಆಟ ಗೆಲ್ಲಿಸುವವರೂ ಇದ್ದಾರೆ, ಸೋಲಿಸುವವರೂ ಇದ್ದಾರೆ. ಆ ವೇಳೆ ಚಕ್ರವರ್ತಿ ಚಂದ್ರಚೂಡ್ ಅವರು ಏಜೆಂಟ್ ಆಗಿ ಆಟ ಹಾಳು ಮಾಡಿದ್ದಾರೆ ಎಂಬ ಆರೋಪವನ್ನು ರಘು ಮಾಡಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ.

    ಚಕ್ರವರ್ತಿ ಅವರು ಸೈಕಲಾಜಿಕಲ್ ಆಗಿ ಆಟ ಆಡಿದ್ದಾರೆ ಅಂತ ರಘು ಆರೋಪ ಮಾಡಿದ್ದಾರೆ. ರಘು ಮಾತ್ರ ಯಾರಿಗೂ ಸಪೋರ್ಟ್ ಮಾಡಲಿಲ್ಲ ಅಂತ ಚಕ್ರವರ್ತಿ ಹೇಳಿದ್ದಾರೆ. ವೈಷ್ಣವಿಯಂತೆ ಚಕ್ರವರ್ತಿ ಅವರಿಗೆ ಫಿಟ್‍ನೆಸ್ ಇದೆ ಅಂತ ರಘು ನಂಬಿದ್ದೇನು. ಆದರೂ ಆಟ ಆಡಲಿಲ್ಲ ಹೀಗಾಗಿ ಚಕ್ರವರ್ತಿ ಅವರೇ ಏಜೆಂಟ್ ಅಂತ ರಘು ಹೇಳಿದ್ದಾರೆ.

    ನಾನು ಸಹಾಯ ಮಾಡಿದ್ದು ತಪ್ಪೇ? ಎಷ್ಟು ನೀಚ ಆಟ ಆಡ್ತಿದ್ದೀಯಾ? ವೈಯಕ್ತಿಕವಾಗಿ ಯಾಕೆ ವಿಷಯ ತರುತ್ತಿದೀಯಾ? ಸೈಕಾಲಜಿ, ಕೌನ್ಸಿಲಿಂಗ್ ಮಾಡಿದ್ದು ವೈಯಕ್ತಿಕವಾದ ವಿಷಯ. ವೈಯಕ್ತಿಕವಾಗಿ ಸಹಾಯ ಮಾಡಿದ್ದಕ್ಕೆ, ಆಟದಲ್ಲಿ ಸಹಾಯ ಮಾಡಿದ್ದಕ್ಕೆ ಮೋಸ ಅಂದರೆ ನಾನು ಏನು ಮಾಡೋಕೆ ಆಗಲ್ಲ ಎಂದು ಚಕ್ರವರ್ತಿ ಹೇಳಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಅರವಿಂದ್ ಮತ್ತು ವಿಶ್ವನಾಥ್ ಮಧ್ಯಪ್ರವೇಶಿಸಿ ಸುಮ್ಮನಾಗಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.

    ವೈಯಕ್ತಿಕವಾಗಿ ವಿಷಯ ಎತ್ತಬೇಡಿ, ಪರ್ಸನಲ್ ಮ್ಯಾಟರ್ ಎತ್ತಬೇಡಿ, ಸರಿ ಅಲ್ಲ, ನಾನು ಪರ್ಸನಲ್ ಮ್ಯಾಟರ್ ಎತ್ತಿದ್ದು ತಪ್ಪು. ನೀವು ಏಜೆಂಟ್ ಅಲ್ಲ ಅಂತ ನಿರೂಪಿಸಿ ಅಂತ ರಘು ಗೌಡ ಹೇಳಿದ್ದಾರೆ. ನನ್ನ ಜೀವನದಲ್ಲಿ ನಾನು ಯಾರಿಗೂ ಸಹಾಯ ಮಾಡಲ್ಲ. ಇದು ನಾನು ಕಲಿತ ಪಾಠ ಅಂತ ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ.

    ಬಿಗ್‍ಬಾಸ್‍ಮನೆಯ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರ ಸುದ್ದಿಯಾಗುತ್ತಲೇ ಇರುತ್ತಾರೆ. ಸಣ್ಣ ಪುಟ್ಟ ವಿಚಾರಗಳನ್ನು ಡೊಡ್ಡದಾಗಿ ಮಾಡುಕೊಂಡು ಅವರಿಗೆ ಅನ್ನಿಸಿದ ಮಾತುಗಳನ್ನಾಡುತ್ತಾ ಸುದ್ದಿಯಾಗುವ ಒಂಟಿಮನೆಯ ಸ್ಪರ್ಧಿಗಳ ಹಿಂದೆ ನಿಂತು ಆಟ ಆಡುಸುತ್ತಿರುವವರು ಬಿಗ್‍ಬಾಸ್.

  • ದಿವ್ಯಾ-ರಘು ನೋಡಿ ಕಟಕಟ ಹಲ್ಲು ಕಡಿದಿದ್ದೇಕೆ ಮಂಜು?

    ದಿವ್ಯಾ-ರಘು ನೋಡಿ ಕಟಕಟ ಹಲ್ಲು ಕಡಿದಿದ್ದೇಕೆ ಮಂಜು?

    ಬಿಗ್‍ಬಾಸ್ ಮನೆ ಅಂದ್ರೆ ಫುಲ್ ಸೆಕ್ಯೂರ್ ಇರುತ್ತೆ. ಕಂಟೆಸ್ಟೆಂಟ್ ಗೆ ಏನೇ ತೊಂದ್ರೆ ಆದ್ರು ಬಿಗ್ ಬಾಸ್ ಇರ್ತಾರೆ. ಮನೆ ತುಂಬಾ ಕ್ಯಾಮೆರಾಗಳಿವೆ. ಅಲ್ಲದೇ ಮನೆಯ ಕಂಟೆಸ್ಟೆಂಟ್ ಎಲ್ಲರೂ ಒಟ್ಟಾಗಿ ಇರ್ತಾರೆ. ಹೀಗಿರುವಾಗ ಬಿಗ್‍ಬಾಸ್ ಸೀಸನ್-8ರಲ್ಲಿ ಪ್ರಾಣ ಬೆದರಿಕೆ ಆಪಾದನೆಯೊಂದು ಕೇಳಿ ಬಂದಿದೆ. ಒಂಟಿ ಮನೆಯ ಸ್ಟ್ರಾಂಗೆಸ್ಟ್ ಕಂಟೆಸ್ಟೆಂಟ್ ಎನಿಸಿಕೊಂಡಿರುವ ದಿವ್ಯಾ ಉರುಡುಗ ಹಾಗೂ ರಘು ಗೌಡಗೆ ಪ್ರಾಣ ಬೆದರಿಕೆ ಹಾಕಲಾಗಿದೆ. ಅಷ್ಟಕ್ಕೂ ಇವರಿಬ್ಬರಿಗೆ ಪ್ರಾಣ ಬೆದರಿಕೆ ಹಾಕಿರೋದು ಬೇರೆ ಯಾರೂ ಅಲ್ಲ ಬಿಗ್ ಮನೆಯ ಮತ್ತೊಬ್ಬ ಕಂಟೆಸ್ಟೆಂಟ್.

    ಬಿಗ್ ಬಾಸ್, ಮಾತುಗಾರ ಚಟುವಟಿಕೆ ವೇಳೆ ಹೆಚ್ಚಾಗಿ ಮಾತನಾಡುವ ಕಂಟೆಸ್ಟೆಂಟ್ ಲ್ಯಾಗ್ ಮಂಜುಗೆ ಮುಂದಿನ ಆದೇಶ ಬರುವವರೆಗೂ ಮಾತನಾಡದಂತೆ ಆದೇಶ ನೀಡಿದ್ದರು. ಅವರು ಯಾರ ಬಳಿಯಾದ್ರೂ ಏನೇ ಮಾತಾಡಬೇಕು ಅಂದ್ರೂ ವೈಷ್ಣವಿ ಮೂಲಕ ಸನ್ನೆ ಸೂಚನೆ ಮಾತನಾಡಬೇಕು ಎಂದು ಬಿಗ್ ಬಾಸ್ ಹೇಳಿದ್ದರು. ಹೀಗಾಗಿ ಮಂಜು ಯಾರ ಬಳಿಯೂ ಮಾತನಾಡುತ್ತಿರಲಿಲ್ಲ. ಇದನ್ನೇ ಇಟ್ಕೊಂಡು ಮನೆಯ ಕೆಲ ಕಂಟೆಸ್ಟೆಂಟ್ ಮಂಜು ಕಾಲೆಳೆಯುತ್ತಿದ್ದರು.

    ನಿನ್ನೆ ಗಾರ್ಡನ್ ಏರಿಯಾದಲ್ಲಿ ದಿವ್ಯಾ ಉರುಡುಗ, ರಘು, ಅರವಿಂದ್, ಲ್ಯಾಗ್ ಮಂಜು ಹಾಗೂ ವಿಶ್ವ ಕುಳಿತುಕೊಂಡಿದ್ದರು. ಈ ವೇಳೆ ದಿವ್ಯಾ ಮಂಜುಗೆ ಹೀಯಾಳಿಸುತ್ತಿದ್ದರು. ನೀನು ಕುಳಿತುಕೊಳ್ಳೋ ಸ್ಟೈಲ್ ತುಂಬಾ ಚೆನ್ನಾಗಿದೆ.. ಹಾಗೇ ಹೀಗೆ ಅಂತಾ ಟೀಸ್ ಮಾಡ್ತಿದ್ದರು. ಆಗ ಮಂಜು, ಅಲ್ಲಿಯೇ ಇದ್ದ ಮರಳಿನ ಮೇಲೆ ನಿಮಗೆ ಐತಿ ಎಂದು ಬರೆದರು. ಆಗ ರಘು, ಬಿಗ್ ಬಾಸ್ ನಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳ್ತಿದ್ದಂತೆ ದಿವ್ಯಾ ಉರುಡುಗ, ಬಿಗ್ ಬಾಸ್ ಪ್ರಾಣ ಬೆದರಿಕೆ ಹಾಕ್ತಿದ್ದಾರೆ ಎಂದು ಮಂಜು ಬಗ್ಗೆ ಆರೋಪ ಮಾಡಿದರು.

    ಅಷ್ಟರಲ್ಲಿ ವೈಷ್ಣವಿ ಎಂಟ್ರಿ ಕೊಡ್ತಾರೆ ಆಗ ಮಂಜು ವೈಷ್ಣವಿ ಮೂಲಕ ಮಾತಾಡಿಸ್ತಾರೆ. ರಘು ದಿವ್ಯಾ ಮುಗಿಸಿಬೇಡ್ತೇನೆ. ತಿಂದು ಹಾಕ್ತೇನೆ ಎಂದು ಮಂಜು ಸನ್ನೆ ಮಾಡ್ತಾರೆ. ಆಗ ವೈಷ್ಣವಿ ಅವರೇನು ಕಡಲೇ ಕಾಯಿ ತಿನ್ನೋದಿಕ್ಕೆ ಎಂದು ಕಾಮಿಡಿ ಮಾಡ್ತಾರೆ. ಕಟಕಟ ಹಲ್ಲು ಕಡಿಯುತ್ತಾ ಮಂಜು ದಿವ್ಯಾ ಉರುಡುಗ ಹಾಗೂ ರಘು ಗೌಡ ಸೀಳಿ ಬೆಂಕಿಗೆ ಹಾಕುತ್ತೇನೆ ಎಂದು ಸನ್ನೆ ಮಾಡ್ತಾರೆ. ಆಗ ದಿವ್ಯಾ ಉರುಡುಗ, ಬಿಗ್ ಬಾಸ್ ನನ್ನ ಜೀವಕ್ಕೆ ಏನಾದ್ರೂ ಆದ್ರೆ ಮಂಜು ಕಾರಣ ಅಂತಾ ಹೇಳಿ ಜೋರಾಗಿ ನಕ್ಕಿದರು. ಒಟ್ನಲ್ಲಿ ಮಂಜು ಮಾತಾಡದೇ ಇದ್ರೂ ತಮ್ಮ ಆ?ಯಕ್ಷನ್ ಮೂಲಕವೇ ಸಖತ್ ಕಾಮಿಡಿ ಮಾಡ್ತಾ ಮನೆಯವರನ್ನು ನಗಿಸುವ ಪ್ರಯತ್ನ ಮಾಡಿದ್ದಂತೂ ಸುಳ್ಳಲ್ಲ.