Tag: Radha

  • ಅದೃಷ್ಟ, ಸಂತೋಷ ಎರಡೂ ಅವಳ ಸ್ನೇಹಿತರಾಗಿರಲಿ – ಮುದ್ದಿನ ಮಗಳಿಗೆ ಶ್ರಿಯಾ ವಿಶ್

    ಅದೃಷ್ಟ, ಸಂತೋಷ ಎರಡೂ ಅವಳ ಸ್ನೇಹಿತರಾಗಿರಲಿ – ಮುದ್ದಿನ ಮಗಳಿಗೆ ಶ್ರಿಯಾ ವಿಶ್

    ಬೆಂಗಳೂರು: ನಟಿ ಶ್ರಿಯಾ ಶರಣ್ ಪುತ್ರಿಗೆ ಇಂದು ಒಂದು ವರ್ಷ ತುಂಬಿದ್ದು, ಇದೇ ಖುಷಿಯಲ್ಲಿ ಶ್ರಿಯಾ ಪುತ್ರಿ ಜೊತೆಗಿರುವ ಕೆಲವೊಂದು ಕ್ಯೂಟ್ ಫೋಟೋ ಹಾಗೂ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    shriya_saran

    ಒಂದು ಕಾಲದಲ್ಲಿ ಟಾಲಿವುಡ್‍ನ ಟಾಪ್ ನಟಿಯರಲ್ಲಿ ಒಬ್ಬರಾಗಿ ಸ್ಟಾರ್ ನಟರೊಂದಿಗೆ ಮಿಂಚಿದ್ದ ನಟಿ ಶ್ರಿಯಾ ಸದ್ಯ ಮದುವೆಯ ಬಳಿಕ ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೂ ಸೋಶಿಯಲ್ ಮೀಡಿಯಾದಲ್ಲಿ ಆಗಾಗಾ ಫೋಟೋ ಹಾಗೂ ವೀಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸಖತ್ ಆ್ಯಕ್ಟೀವ್ ಆಗಿರುವ ಶ್ರಿಯಾ ಇದೀಗ ಪುತ್ರಿ ರಾಧಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

    shriya_saran

    ಸದ್ಯ ಈ ಕುರಿತಂತೆ ಶ್ರಿಯಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ರಾಧಾ ನಿದ್ರೆ ಮಾಡುತ್ತಿದ್ದ ವೇಳೆ ಮುದ್ದಾಡುತ್ತಿರುವ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಮಗಳು ಹಾಗೂ ಪತಿ ಜೊತೆಗೆ ಕ್ಲಿಕ್ಕಿಸಿಕೊಂಡಿರುವ ಕೆಲವು ಒಂದೆರಡು ಫೋಟೋವನ್ನು ಹಂಚಿಕೊಂಡಿದ್ದಾರೆ. ಮತ್ತೊಂದರಲ್ಲಿ ಮಗಳನ್ನು ತಮ್ಮ ಎದೆಯ ಮೇಲೆ ಮಲಗಿಸಿಕೊಂಡು ಮುದ್ದಾಡುತ್ತಿರುವ ಹಾಗೂ ಮಗಳ ಪುಟ್ಟ ಬೆರಳಿಗೆ ಹೂವಿನಿಂದ ರಿಂಗ್ ಮಾಡಿ ಹಾಕಿರುವ ಪುಟ್ಟ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನಟಿ, ಭರತನಾಟ್ಯ ಕಲಾವಿದೆ ಶೋಬನಾಗೆ ಓಮಿಕ್ರಾನ್ ಪಾಸಿಟಿವ್

    shriya_saran

    ವೀಡಿಯೋ ಹಾಗೂ ಫೋಟೋಗಳ ಜೊತೆಗೆ ಇಂದು ನನ್ನ ಮಗಳಿಗೆ ಒಂದು ವರ್ಷ ತುಂಬಿದೆ. ಕಳೆದ ವರ್ಷ 7.40ಕ್ಕೆ ಜನಿಸಿದ ನನ್ನ ಮಗಳು ನಮ್ಮ ಹೃದಯದಲ್ಲಿ ಶಾಶ್ವತವಾಗಿ ನೆಲೆಯುರಿದಳು. ನಮ್ಮನ್ನು ತಂದೆ, ತಾಯಿಯನ್ನಾಗಿ ಮಾಡಿ, ಇಡೀ ಕುಟುಂಬಕ್ಕೆ ಅವಳು ನೀಡಿದ ಪ್ರೀತಿಗೆ ಧನ್ಯವಾದ. ನಾನು ಗರ್ಭಿಣಿಯಾಗಿದ್ದ ಸಮಯದಲ್ಲಿ ನನಗೆ ಸಹಾಯ ಮತ್ತು ಸಲಹೆ ನೀಡಿದ ನಾಟಾಕೊಶ್ಚೆವ್, ನಿರ್ಜ ಶರಣ್, ಆರತಿ ಶರಣ್, ಶೌರ್ಯ, ಧೃತಿದಾವೆ ನನ್ನ ಎಲ್ಲಾ ಸ್ನೇಹಿತರಿಗೂ ಧನ್ಯವಾದಗಳು. ನಮಗೆ ನಿಮ್ಮೆಲ್ಲರ ಆಶೀರ್ವಾದಬೇಕು. ರಾಧಾ ನೋಡಲು ಆಂಡ್ರೆ ಕೊಶ್ಚೆವ್‍ನಂತೆ ಕಾಣುತ್ತಾಳೆ ಎಂದು ರಿಯಾಜಮ್ಲಾನಿ ಹೇಳುತ್ತಾರೆ ಎಂದಿದ್ದಾರೆ.

     

    View this post on Instagram

     

    A post shared by Shriya Saran (@shriya_saran1109)

    ಅವಳು ಎಲ್ಲಾ ಕಡೆಯೂ ಸ್ನೇಹಿತರನ್ನು ಮಾಡಿಕೊಂಡು ವಿಶ್ವದಲ್ಲಿ ಎಲ್ಲರ ಪ್ರೀತಿಗಳಿಸಲಿ. ಅದೃಷ್ಟ ಮತ್ತು ಸಂತೋಷ ಎರಡು ಅವಳ ಸ್ನೇಹಿತರಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಾನಸಿಕವಾಗಿ ಕುಗ್ಗಿ, ಸುಧಾರಿಸಿಕೊಂಡು ಮತ್ತೆ ಯಶಸ್ವಿಯಾಗಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಸಮಂತಾ

    ಇತ್ತೀಚೆಗಷ್ಟೇ ಶ್ರಿಯಾ ಶರಣ್ ಪತಿ ಆಂಡ್ರೆ ಕೊಶ್ಚೆವ್ ಮತ್ತು ಪುತ್ರಿ ರಾಧಾ ಜೊತೆ ಹೊಸ ವರ್ಷ ಸೆಲೆಬ್ರಿಟ್ ಮಾಡಲು ಗೋವಾಗೆ ತೆರಳಿದ್ದರು. ಈ ವೇಳೆ ಶ್ರಿಯಾ ಪತಿಗೆ ರೊಮ್ಯಾಂಟಿಕ್ ಆಗಿ ಕಿಸ್ ನೀಡಿದ್ದ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದನ್ನೂ ಓದಿ: ‘ಪುಷ್ಪ-2’ಗೆ ಶೇ.50 ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ!

  • ಮೋಹದ ಮಬ್ಬಿನಲ್ಲಿ ಮನುಷ್ಯತ್ವದ ಖನನ!

    ಮೋಹದ ಮಬ್ಬಿನಲ್ಲಿ ಮನುಷ್ಯತ್ವದ ಖನನ!

    ಬೆಂಗಳೂರು: ವಿಶಿಷ್ಟವಾದ ಶೀರ್ಷಿಕೆಯ ಕಾರಣದಿಂದಲೇ ಗಮನ ಸೆಳೆದು ಆ ನಂತರ ತನ್ನದೇ ಆದ ರೀತಿಯಲ್ಲಿ ಸದ್ದು ಮಾಡುತ್ತಾ ಬಂದಿದ್ದ ಖನನ ಚಿತ್ರ ತೆರೆ ಕಂಡಿದೆ. ಆರಂಭಿಕವಾಗಿ ಈ ಟೈಟಲ್ಲಿನ ಮೇಲೊಂದು ಕುತೂಹಲ ಹುಟ್ಟಿಕೊಂಡಿತ್ತಲ್ಲಾ? ಅದನ್ನು ನೂರ್ಮಡಿಸುವಂಥಾ ಅಮೋಘವಾದ ಕಥೆ, ಹೊಸಾ ಶೈಲಿಯ ನಿರೂಪಣೆ ಮತ್ತು ಕ್ಷಣ ಕ್ಷಣವೂ ಬೆರಗಾಗಿಸುವಂಥಾ ಕಸುಬುದಾರಿಕೆಯೊಂದಿಗೆ ಖನನ ನೋಡುಗರನ್ನೆಲ್ಲ ಮೋಡಿಗೀಡು ಮಾಡುವಲ್ಲಿ ಯಶ ಕಂಡಿದೆ.

    ಸಸ್ಪೆನ್ಸ್ ಥ್ರಿಲ್ಲರ್ ಮತ್ತು ರಿವೆಂಜ್ ಕಥನಗಳೇನು ಕನ್ನಡಕ್ಕೆ ಹೊಸತಲ್ಲ. ಆದರೆ ಹೊಸಾ ಆಲೋಚನೆ, ಕ್ರಿಯೇಟಿವಿಟಿ ಮತ್ತು ಹೊಸತೇನನ್ನೋ ಸೃಷ್ಟಿಸಬೇಕೆಂಬ ಇಂಗಿತವೇ ಮಾಮೂಲಾಗಿ ದಾಖಲಾಗ ಬಹುದಾದ ಕಥೆಯನ್ನು ಡಿಫರೆಂಟಾಗಿಸುತ್ತದೆ. ಇದೇ ರೀತಿ ನಿರ್ದೇಶಕ ರಾಧಾ ಅವರು ಖನನವನ್ನು ಮಾಮೂಲಿ ಜಾಡಿನಲ್ಲಿ ಕಳೆದು ಹೋಗದಂತೆ ಪ್ರತೀ ಕ್ಷಣವೂ ಎಚ್ಚರ ವಹಿಸುತ್ತಲೇ ರೂಪಿಸಿದ್ದಾರೆ. ನಾಯಕ ಆರ್ಯವರ್ಧನ್ ಸೇರಿದಂತೆ ತಾರಾ ಬಳಗ ಮತ್ತು ತಾಂತ್ರಿಕ ವರ್ಗವೂ ರಾಧಾರ ಕನಸಿಗೆ ಸಾಥ್ ನೀಡಿದ್ದಾರೆ. ಈ ಕಾರಣದಿಂದಲೇ ಖನನ ಪ್ರೇಕ್ಷಕರನ್ನೆಲ್ಲ ಹೊಸ ಜಾಡಿನಲ್ಲಿಯೇ ತಾಕಿ ಮುದಗೊಳಿಸಿದೆ.

    ಆರ್ಯವರ್ಧನ್ ಅಜಯ್ ಎಂಬ ಪಾತ್ರಕ್ಕೆ ಜೀವ ತುಂಬಿದರೆ, ನಾಯಕಿ ಕರಿಷ್ಮಾ ಬರುಹಾ ನೈನಾ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಕಥೆ ಆರಂಭದಲ್ಲಿ ರೊಮ್ಯಾಂಟಿಕ್ ಮೂಡಿನಲ್ಲಿಯೇ ಬಿಚ್ಚಿಕೊಳ್ಳುತ್ತೆ. ನಾಯಕ ಅಜೇಯ್ ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಅನಾಥ ಪ್ರಜ್ಞೆ ತುಂಬಿಕೊಂಡು ಬೆಳೆದ ಹುಡುಗ. ಆತನಿಗೆ ನೈನಾ ಜೊತೆಯಾಗಿ ಎಲ್ಲವೂ ಸುಂದರವಾಗಿರುತ್ತೆ. ನಾಯಕನ ಪಾಲಿಗೆ ತನ್ನನ್ನು ಆರ್ಥಿಕವಾಗಿ ತಲೆ ಎತ್ತಿ ನಿಲ್ಲುವಂತೆ ಮಾಡಿದ ಬ್ಯುಸಿನೆಸ್ ಮತ್ತು ಮುದ್ದಿನ ಮಡದಿಯೇ ಪ್ರಪಂಚ. ಆದರೆ ಹೆಂಡತಿ ಮಾತ್ರ ಮೆಲ್ಲಗೆ ಗಂಡನಿಂದ ದೂರ ಸರಿಯಲಾರಂಭಿಸುತ್ತಾಳೆ. ಆಕೆ ಗಂಡನ ಪ್ರಾಂಜಲ ಪ್ರೀತಿಯೂ ಉಸಿರುಗಟ್ಟಿಸಿದಂತಾಗಿ ಕೊಸರಾಡಲಾರಂಭಿಸುತ್ತಾಳೆ.

    ಇದಕ್ಕೆ ಕಾರಣ ಆಕೆಯ ಪ್ರಪಂಚಕ್ಕೆ ಎಂಟ್ರಿ ಕೊಟ್ಟ ಪರ ಪುರುಷ. ಈ ಅನೈತಿಕ ಸಂಬಂಧದಿಂದಲೇ ಕಥೆಯ ದಿಕ್ಕು ದೆಸೆಗಳೇ ಬದಲಾಗುತ್ತೆ. ಆ ಪರಪುರುಷನಿಗೆ ಕೇವಲ ನೈನಾ ಮೇಲಷ್ಟೇ ಮೋಹವಿರೋದಿಲ್ಲ, ಆಕೆಯ ಗಂಡ ಅಂದರೆ ನಾಯಕನ ಆಸ್ತಿಯ ಮೇಲೂ ಕಣ್ಣಿರುತ್ತೆ. ಆದ್ದರಿಂದಲೇ ಆತನನ್ನು ಕೊಲ್ಲುವಂತೆ ಪ್ರೇಯಸಿಗೆ ದುಂಬಾಲು ಬೀಳುತ್ತಿರುತ್ತಾನೆ. ಮೋಹಕ್ಕೆ ಬಿದ್ದ ಈಕೆ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸೋ ಗಂಡನನ್ನು ಕೊಲೆ ಮಾಡಲೂ ಮುಂದಾಗುತ್ತಾಳೆ. ಆ ನಂತರ ಏನಾಗುತ್ತೆ ಎಂಬ ಕುತೂಹಲವನ್ನು ಥೇಟರಿನಲ್ಲಿಯೇ ಶಮನ ಮಾಡಿಕೊಂಡರೊಳಿತು. ಈ ಕುತೂಹಲವಿಟ್ಟುಕೊಂಡು ಥೇಟರು ಹೊಕ್ಕವರನ್ನೆಲ್ಲ ಖನನದ ಕಥೆ ಬೇರೆಯದ್ದೇ ರೀತಿಯಲ್ಲಿ ಕಾಡುತ್ತದೆ. ಮೋಹದ ಮಬ್ಬಿನಲ್ಲಿ ಕಡೆಯಾದರೂ ಮನುಷ್ಯತ್ವ ಬದುಕಿಕೊಳ್ಳುತ್ತಾ ಅನ್ನೋದು ಪ್ರಧಾನ ಆಕರ್ಷಣೆ.

    ಈ ಮೂಲಕ ರಾಧಾ ಅವರು ನಿರ್ದೇಶಕರಾಗಿಯೂ ಗಮನ ಸೆಳೆದಿದ್ದಾರೆ. ನಾಯಕ ಆರ್ಯವರ್ಧನ್ ಮೊದಲ ಚಿತ್ರದಲ್ಲಿಯೇ ಚೆಂದದ ನಟನೆ ಕೊಟ್ಟಿದ್ದಾರೆ. ಹೀರೋ ಆಗಿ ನೆಲೆ ನಿಲ್ಲುವ ಸೂಚನೆಯನ್ನೂ ರವಾನಿಸಿದ್ದಾರೆ. ನಿರ್ಮಾಪಕ ಶ್ರೀನಿವಾಸ ರಾವ್ ಅವರ ಶ್ರಮವೂ ಸಾರ್ಥಕವಾದಂತಾಗಿದೆ. ಒಟ್ಟಾರೆಯಾಗಿ ಖನನ ಬೇರೆಯದ್ದೇ ರೀತಿಯ ಥ್ರಿಲ್ಲರ್ ಅನುಭವವೊಂದನ್ನು ನೋಡುಗರಿಗೆ ದಾಟಿಸುತ್ತೆ. ಅಪ್ಪಟ ಮನರಂಜನಾತ್ಮಕ ಚಿತ್ರವಾಗಿ ಗಮನ ಸೆಳೆಯುತ್ತೆ.

    ರೇಟಿಂಗ್: 3.5/5

  • ಏನೋ ಹೇಳ ಹೊರಟಿದ್ದಾರೆ ಖನನ ಹೀರೋ!

    ಏನೋ ಹೇಳ ಹೊರಟಿದ್ದಾರೆ ಖನನ ಹೀರೋ!

    ಬೆಂಗಳೂರು: ಇದೀಗ ಖನನ ಎಂಬ ವಿಶಿಷ್ಟವಾದ ಟೈಟಲ್ ಹೊಂದಿರೋ ಚಿತ್ರವೊಂದು ಎಲ್ಲೆಡೆ ಸದ್ದು ಮಾಡುತ್ತಿದೆ. ಹೆಸರು ಕೇಳಿದಾಕ್ಷಣವೇ ಇದು ಯಾವ ಬಗೆಯ ಚಿತ್ರ, ಆರ್ಟ್ ಮೂವಿಯಾ ಅಂತೆಲ್ಲ ನಾನಾ ಪ್ರಶ್ನೆಗಳಿಗೆ ಕಾರಣವಾಗೋ ಖನನ ಅಪ್ಪಟ ಕಮರ್ಶಿಯಲ್ ಸೂತ್ರಗಳೊಂದಿಗೆ ಬಿಡುಗಡೆಗೆ ಸಜ್ಜಾಗಿರೋ ಚಿತ್ರ. ಇದೇ ಮೇ ತಿಂಗಳಲ್ಲಿ ರಿಲೀಸ್ ಆಗಲಿರುವ ಖನನ ತನ್ನೊಳಗೆ ಅನೇಕ ನಿಗೂಢಗಳನ್ನು ಬಚ್ಚಿಟ್ಟುಕೊಂಡಿದೆ.

    ರಾಧಾ ನಿರ್ದೇಶನ ಮಾಡಿರೋ ಖನನ ಮೂಲಕ ಹೀರೋ ಆಗಿ ಎಂಟ್ರಿ ಕೊಡಲು ಆರ್ಯವರ್ಧನ್ ಸಜ್ಜಾಗಿದ್ದಾರೆ. ಈಗಾಗಲೇ ಮಾರ್ಚ್ 22 ಚಿತ್ರದ ಸಲ್ಮಾನ್ ಎಂಬ ಪಾತ್ರದ ಮೂಲಕ ಪ್ರತಿಭಾವಂತ ನಟನಾಗಿ ಗುರುತಿಸಿಕೊಂಡಿರೋ ಆರ್ಯವರ್ಧನ್ ಪಾಲಿಗೆ ಹೀರೋ ಆಗಿ ಇದು ಮೊದಲ ಚಿತ್ರ. ತಾನು ಹೀರೋ ಆಗಿ ಲಾಂಚ್ ಆಗೋ ಚಿತ್ರ ವಿಶೇಷ ಕಥೆ ಹೊಂದಿರಬೇಕು ಮತ್ತು ಅದು ಸಂದೇಶವನ್ನೂ ಕೂಡಾ ರವಾನಿಸುವಂತಿರಬೇಕು ಅನ್ನೋದು ಆರ್ಯವರ್ಧನ್ ಅವರ ಆಳದ ಕನಸು. ಅದಕ್ಕೆ ತಕ್ಕುದಾದ ಕಥೆಯನ್ನು ಖನನ ಒಳಗೊಂಡಿದೆಯಂತೆ.

    ಇದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ನೋಡಿದವರನ್ನೆಲ್ಲ ಅಚ್ಚರಿಗೀಡು ಮಾಡಲಿರೋ ಇದರಲ್ಲಿ ಆರ್ಯವರ್ಧನ್ ಹಲವಾರು ಶೇಡುಗಳಿರೋ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರವೇ ಎಲ್ಲರಿಗೂ ಬದುಕಿನ ಕೆಲ ಗುಟ್ಟುಗಳನ್ನು ಹೇಳುವಂತಿದೆ. ಪ್ರತಿಕ್ಷಣವೂ ಕುತೂಹಲ ಆಚೀಚೆ ಆಗದಂತೆ ಬಿಚ್ಚಿಕೊಳ್ಳುತ್ತಾ ಸಾಗಲಿರೋ ಈ ಚಿತ್ರದಲ್ಲಿ ಹೀರೋ ಪ್ರೇಕ್ಷಕರೊಂದಿಗೆ ನೇರಾ ನೇರ ಕನೆಕ್ಟ್ ಆಗುತ್ತಾನೆ. ಅದೇ ಹೊತ್ತಲ್ಲಿ ಪ್ರೇಕ್ಷಕರಿಗೇನೋ ಹೇಳಲಿದ್ದಾನೆ. ಆ ರೋಚಕ ವಿಚಾರವೇನು ಅನ್ನೋದು ಇದೇ ಮೇ 10ರಂದು ಜಾಹೀರಾಗಲಿದೆ.

  • ಮೂರು ಭಾಷೆಗಳಲ್ಲಿ ಅಬ್ಬರಿಸಲು ಅಣಿಯಾಯ್ತು ಕನ್ನಡದ ಖನನ!

    ಮೂರು ಭಾಷೆಗಳಲ್ಲಿ ಅಬ್ಬರಿಸಲು ಅಣಿಯಾಯ್ತು ಕನ್ನಡದ ಖನನ!

    ಬೆಂಗಳೂರು: ಹೊಸಬರ ಚಿತ್ರ ಎಂದರೆ ಒಂದು ಭಾಷೆಯಲ್ಲಿ ತೆರೆ ಕಾಣಲು ಹತ್ತಾರು ಸವಾಲುಗಳೆದುರಾಗುತ್ತವೆ. ಅಂಥಾದ್ದರಲ್ಲಿ ಹೊಸಾ ಹೀರೋ ಎಂಟ್ರಿ ಕೊಡುತ್ತಿರೋ ಚಿತ್ರವೊಂದು ಏಕಕಾಲದಲ್ಲಿಯೇ ಮೂರು ಭಾಷೆಗಳಲ್ಲಿ ತಯಾರಾಗಿದೆ ಅಂದರೆ ಅಚ್ಚರಿಯಾಗದಿರಲು ಸಾಧ್ಯವೇ ಇಲ್ಲ. ಸದ್ಯ ಬಿಡುಗಡೆಗೆ ತಯಾರಾಗಿರುವ ಖನನ ಚಿತ್ರವೂ ಅದೇ ಥರದ ಅಚ್ಚರಿಗೆ ಕಾರಣವಾಗಿದೆ.

    ಶ್ರೀನಿವಾಸ್ ನಿರ್ಮಾಣ ಮಾಡಿರುವ ಖನನ ಚಿತ್ರದ ಮೂಲಕ ಆರ್ಯವರ್ಧನ್ ನಾಯಕ ನಟನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಈ ಸಿನಿಮಾ ಬಗ್ಗೆ ಎಲ್ಲೆಡೆ ಪಾಸಿಟಿವ್ ಟಾಕ್‍ಗಳೇ ಕೇಳಿ ಬರಲಾರಂಭಿದೆ. ಚಿತ್ರರಂಗ ಪಾಲಿಗೆ ತೀರಾ ಹೊಸತಾದ ಕಥೆಯೂ ಸೇರಿದಂತೆ ಖನನ ಪ್ರೇಕ್ಷಕರಿಗೆ ಹತ್ತಿರಾಗಿರೋದರ ಹಿಂದೆ ನಾನಾ ಕಾರಣಗಳಿವೆ. ಅದರಲ್ಲಿ ಈ ಚಿತ್ರ ರೂಪುಗೊಂಡಿರೋ ಅದ್ದೂರಿತನದ್ದು ಪ್ರಧಾನ ಪಾತ್ರ.

    ರಾಧಾ ನಿರ್ದೇಶನ ಮಾಡಿರುವ ಈ ಚಿತ್ರ ಏಕ ಕಾಲದಲ್ಲಿಯೇ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ತಯಾರಾಗಿದೆ. ಹೊಸ ಹೀರೋ ಎಂಟ್ರಿ ಕೊಡುತ್ತಿರೋ ಚಿತ್ರವೊಂದನ್ನು ಈ ರೀತಿ ಮೂರು ಭಾಷೆಗಳಲ್ಲಿ ನಿರ್ಮಾಣ ಮಾಡಲು ಧೈರ್ಯ ಬೇಕಾಗುತ್ತದೆ. ಆದರೆ ನಿರ್ಮಾಪಕರು ಈ ಕಥೆಯನ್ನು ಮೆಚ್ಚಿಕೊಂಡು ಅಂಥಾದ್ದೊಂದು ಧೈರ್ಯ ಮಾಡಿದ್ದಾರೆ.

    ಖನನ ಮೂಲಕ ಹೀರೋ ಆಗುತ್ತಿರುವ ಆರ್ಯವರ್ಧನ್ ನಿರ್ಮಾಪಕರ ಪುತ್ರ. ಆದ್ದರಿಂದಲೇ ತಮ್ಮ ಪುತ್ರನನ್ನು ಮೂರು ಭಾಷೆಗಳಲ್ಲಿ ಭರ್ಜರಿಯಾಗಿಯೇ ಲಾಂಚ್ ಮಾಡಲು ನಿರ್ಮಾಪಕ ಶ್ರೀನಿವಾಸ್ ಅವರು ಮುಂದಾಗಿದ್ದಾರೆ.

    ಕನ್ನಡದ ಮಟ್ಟಿಗೆ ಹೊಸಾ ಹೀರೋ ಎಂಟ್ರಿ ಕೊಡುವ ಚಿತ್ರವೊಂದು ಈ ಪಾಟಿ ದೊಡ್ಡ ಮೊತ್ತದ ಬಜೆಟ್ಟಿನಲ್ಲಿ ನಿರ್ಮಾಣಗೊಂಡಿದ್ದು ಅಪರೂಪ. ನುರಿತ, ಕ್ರಿಯಾಶೀಲ ತಾಂತ್ರಿಕ ವರ್ಗ, ಎಲ್ಲದರಲ್ಲಿಯೂ ಅಚ್ಚುಕಟ್ಟುತನ ಹೊಂದಿರೋ ಈ ಚಿತ್ರ ತುಸು ತಡವಾದರೂ ಅದ್ಧೂರಿಯಾಗಿಯೇ ರೆಡಿಯಾಗಿ ಬಿಡುಗಡೆಗೆ ತಯಾರಾಗಿದೆ. ಖನನ ಇದೇ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ.

  • ಖನನ ಮೂಲಕ ನಿರ್ದೇಶಕರಾಗಿ ಬಂದ್ರು ರಾಯಚೂರಿನ ರಾಧಾ!

    ಖನನ ಮೂಲಕ ನಿರ್ದೇಶಕರಾಗಿ ಬಂದ್ರು ರಾಯಚೂರಿನ ರಾಧಾ!

    ಬೆಂಗಳೂರು: ಎಸ್. ನಲಿಗೆ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಶ್ರೀನಿವಾಸ ರಾವ್ ನಿರ್ಮಾಣ ಮಾಡಿರುವ ಖನನ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಆರ್ಯವರ್ಧನ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಈ ಚಿತ್ರವನ್ನು ನಿರ್ದೇಶನ ಮಾಡಿರುವವರು ರಾಧಾ. ರಾಯಚೂರು ಮೂಲದ ಅಪ್ಪಟ ಕನ್ನಡಿಗರಾದರೂ ತೆಲುಗು ಚಿತ್ರರಂಗದಲ್ಲಿ ಛಾಪು ಮೂಡಿಸಿರೋ ರಾಧಾ ಕೂಡಾ ಈ ಚಿತ್ರದ ಮೂಲಕವೇ ನಿರ್ದೇಶಕರಾಗಿ ಕನ್ನಡಕ್ಕೆ ಪರಿಚಯವಾಗುತ್ತಿದ್ದಾರೆ.

    ತೆಲುಗು ಚಿತ್ರರಂಗದಲ್ಲಿ ರಾಧಾ ಎಂದೇ ಜನಪ್ರಿಯರಾಗಿರೋ ಇವರ ಪೂರ್ತಿ ಹೆಸರು ರಾಧಾ ಕೃಷ್ಣ. ಆದರೆ ರಾಧಾ ಎಂಬ ನಾಮಧೇಯದೊಂದಿಗೇ ಕನ್ನಡಕ್ಕೂ ಆಗಮಿಸಿರೋ ಅವರು ತಮ್ಮ ಜನರಿಗೆ ಒಂದೊಳ್ಳೆ ಕಂಟೆಂಟಿನ ಚಿತ್ರವನ್ನು ಕೊಡುವ ಕಾತರದಲ್ಲಿದ್ದಾರೆ. ರಾಧಾ ಮೂಲತಃ ರಾಯಚೂರಿನ ಸಿಂಧಗಿ ತಾಲೂಕಿನ ಪುಟ್ಟ ಹಳ್ಳಿಯವರು. ಅಪ್ಪಟ ರೈತಾಪಿ ವರ್ಗದಲ್ಲಿಯೇ ಹುಟ್ಟಿ ಬೆಳೆದ ಅವರು ಹೈಸ್ಕೂಲುವರೆಗಿನ ವ್ಯಾಸಂಗವನ್ನು ಮುದನೂರು ಮುಂತಾದೆಡೆಗಳಲ್ಲಿ ಪೂರೈಸಿಕೊಂಡು ಡಿಗ್ರಿ ಮಗಿಸಿಕೊಂಡಿದ್ದು ಮೈಸೂರಿನ ಜೆಎಸ್ ಎಸ್ ಕಾಲೇಜಿನಲ್ಲಿ. ಅವರೊಳಗಿನ ನೈಜ ಆಸಕ್ತಿಗೆ ವೇದಿಕೆ ಮತ್ತು ಪ್ರೋತ್ಸಾಹ ಸಿಕ್ಕಿದ್ದೂ ಕೂಡಾ ಇಲ್ಲಿಯೇ.

    ರಾಧಾ ಅವರಿಗೆ ಅಕ್ಷರಗಳ ಪರಿಚಯವಾದ ಘಳಿಗೆಯಿಂದಲೇ ಸಾಹಿತ್ಯದತ್ತ ಕಣ್ಣಾಡಿಸುವ, ತಮ್ಮ ಸುತ್ತಲಿನ ವಾತಾವರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಕಥೆ ಬರೆಯುವ ಹವ್ಯಾಸ ಬೆಳೆದು ಬಂದಿತ್ತು. ಇವರ ತಾಯಿಯ ತಂದೆಯವರಾದ ವೆಂಕಟರಾವ್ ಅವರೂ ಕೂಡಾ ಕಥೆಗಾರರೇ. ಬ್ರಿಟಿಷರ ವಿರುದ್ಧ ಕಥೆ ಬರೆದು ಆಕ್ರೋಶ ಹೊರ ಹಾಕೋ ಕ್ರಾಂತಿಕಾರಿ ಮನಸ್ಥಿತಿ ಹೊಂದಿದ್ದ ವೆಂಕಟರಾಯರು ಬರೆದ ಅದೆಷ್ಟೋ ಕಥೆಗಳನ್ನು ಬ್ರಿಟಿಷ್ ಅಧಿಕಾರಿಗಳ ದರ್ಪಕ್ಕೆ ಬೆದರಿ ಮನೆ ಮಂದಿ ಸುಟ್ಟು ಹಾಕುತ್ತಿದ್ದರಂತೆ. ಆ ತಾತನ ಕಥೆ ಬರೆಯೋ ಪ್ರತಿಭೆಯೇ ಮೊಮ್ಮಗ ರಾಧಾಗೂ ಬಂದಿದೆ ಅಂತ ಆಗಾಗ ಅಪ್ಪ ಅಮ್ಮ ಹೇಳುತ್ತಿದ್ದರಂತೆ. ಶಾಲೆಯಲ್ಲಿ ರಾಧಾರ ಈ ಪ್ರತಿಭೆಗೆ ಮೇಸ್ಟರಾಗಿದ್ದ ವೆಂಕೋಬ ಪಾಟೀಲರೂ ಕೂಡಾ ಪ್ರೋತ್ಸಾಹ ಕೊಡುತ್ತಾ ಬಂದಿದ್ದರಿಂದಲೇ ಕಾಲೇಜು ತಲುಪೋ ಹೊತ್ತಿಗೆಲ್ಲ ಅವರೊಳಗೊಬ್ಬ ಕಥೆಗಾರ ಜೀವ ಪಡೆದು ಬಿಟ್ಟಿದ್ದ.

    ಶಾಲಾ ದಿನಗಳಲ್ಲಿಯೇ ರಾಧಾ ಯಾವ ಪರಿಯಾಗಿ ಬರವಣಿಗೆಯ ಗುಂಗಿಗೆ ಬಿದ್ದಿದ್ದರೆಂದರೆ ಪ್ರತೀ ದಿನವೂ ಏನಾದರೊಂದು ಬರೆಯದಿದ್ದರೆ ನಿದ್ದೆ ಹತ್ತದಂತಾಗುತ್ತಿದ್ದರು, ಕಡೆಯ ಪಕ್ಷ ಡೈರಿಯಾದರೂ ಗೀಚಿದರೇನೇ ಸಮಾಧಾನ. ಮಗ ಚೆಂದಗೆ ಓದಿ ದೊಡ್ಡ ಕೆಲಸ ಹಿಡಿಯ ಬೇಕೆಂಬ ಆಸೆ ಹೊಂದಿದ್ದ ತಂದೆ ಇದರಿಂದ ಗಾಬರಿಗೀಡಾಗುತ್ತಿದ್ದದ್ದೂ ಇದೆ. ಆದರೂ ಬರವಣಿಗೆಯನ್ನೇ ನೆಚ್ಚಿಕೊಂಡಿದ್ದ ಅವರು ಶಾಲಾ ಕಾಲೇಜು ದಿನಗಳಲ್ಲಿ ಲೇಖನಗಳ ಮೂಲಕ ಸುತ್ತಲಿನವರಿಗೆ ವಿಶೇಷ ವ್ಯಕ್ತಿಯಾಗಿ ಕಾಣಿಸಲಾರಂಭಿಸಿದ್ದರು. ಹೀಗೆ ಬರೆಯೋ ಹವ್ಯಾಸ ಬೆಳೆಸಿಕೊಳ್ಳುತ್ತಲೇ ತಾನು ಸಿನಿಮಾ ರಂಗದಲ್ಲಿ ಏನಾದರೊಂದು ಸಾಧಿಸಲೇ ಬೇಕೆಂಬ ಕನಸು ಅವರೊಳಗೆ ಚಿಗುರಿಕೊಂಡಿತ್ತು. ಅದುವೇ ಅವರನ್ನು ಅನಾಯಾಸವಾಗಿ ಚಿತ್ರರಂಗದ ಸಂಪರ್ಕಕ್ಕೂ ಪಕ್ಕಾಗಿಸಿತ್ತು.

    ರಾಯಚೂರು ಸೀಮೆಯಲ್ಲಿ ತೆಲುಗು ಚಿತ್ರರಂಗದ ನಂಟು ಹೊಂದಿರೋ ಅನೇಕರಿದ್ದಾರೆ. ಬಾಹುಬಲಿ ಖ್ಯಾತಿಯ ರಾಜಮೌಳಿಯವರೂ ಕೂಡಾ ರಾಧಾರ ದೂರದ ಸಂಬಂಧಿಕರೇ. ಈ ನಂಟಿನೊಂದಿಗೇ ರಾಧಾ ತೆಲುಗು ಚಿತ್ರರಂಗಕ್ಕೆ ರೈಟರ್ ಆಗಿ ಪಾದಾರ್ಪಣೆ ಮಾಡಿದ್ದರು. 2006ರಲ್ಲಿ ಹೀಗೆ ಪಾದಾರ್ಪಣೆ ಮಾಡಿದ್ದ ಅವರು ಈವರೆಗೆ ಎಂಬತ್ತಕ್ಕೂ ಹೆಚ್ಚು ತೆಲುಗು ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಅಲ್ಲಿ ಹೀಗೆ ಯಶಸ್ವಿಯಾದರೂ ಕನ್ನಡ ಚಿತ್ರವೊಂದನ್ನು ಮಾಡಬೇಕೆಂಬ ಆಸೆ ಅವರಿಗೆ ಇದ್ದೇ ಇತ್ತು. ಅದಕ್ಕೆ ಸರಿಯಾದ ಮುಹೂರ್ತ ಕೂಡಿ ಬಂದಿದ್ದು ಖನನ ಚಿತ್ರದ ಮೂಲಕ.

    ಶ್ರೀನಿವಾಸ್ ರಾವ್ ಅವರು ತಮ್ಮ ಮಗನ ಎಂಟ್ರಿಗೆ ವಿಶೇಷವಾದೊಂದು ಕಥೆಗಾಗಿ ಕಾದು ಕೂತಿದ್ದರಲ್ಲಾ? ಅದು ಹೇಗೋ ಅವರ ಸಂಪರ್ಕವಾಗಿ, ಅವರಿಗೆ ರಾಧಾ ಹೇಳಿದ ಕಥೆ ಇಷ್ಟವಾಗಿ ಹೋಗಿತ್ತು. ತೀರಾ ಮೂವತ್ತು ನಲವತ್ತು ಕೋಟಿ ಬಜೆಟ್ಟಿನ ಚಿತ್ರಗಳಿಗೆ ಕೆಲಸ ಮಾಡಿದ್ದ ರಾಧಾ ಸಣ್ಣ ಮೊತ್ತದ ಚಿತ್ರ ಮಾಡೋದು ಹೇಗೆಂದು ಆರಂಭದಲ್ಲಿ ಚಿಂತೆಗೆ ಬಿದ್ದಿದ್ದರಂತೆ. ಆದರೆ ಕಥೆ ಚೆನ್ನಾಗಿದ್ದುದರಿಂದಾಗಿ ಏಕಕಾಲದಲ್ಲಿ ಮೂರು ಭಾಷೆಗಳಲ್ಲಿ ಖನನವನ್ನು ನಿರ್ಮಾಣ ಮಾಡಲೂ ನಿರ್ಮಾಪಕರು ಮುಂದಾಗಿದ್ದರು. ಯಾವ ಕೊರತೆಯೂ ಆಗದಂತೆ ನೋಡಿಕೊಂಡಿದ್ದರಂತೆ. ಈ ಕಾರಣದಿಂದಲೇ ಈಗ ಖನನ ಬಿಡುಗಡೆಗೆ ತಯಾರಾಗಿ ನಿಂತಿದೆ.

    ತೆಲುಗಿನಲ್ಲಿ ಎಂಬತ್ತಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿದ್ದರೂ ರಾಧಾ ಖನನ ಮೂಲಕವೇ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಯಾವ ಭಾಷೆಗೇ ಆದರೂ ಹೊಸತಾಗುವಂಥಾ ಖನನ ಎಲ್ಲ ವರ್ಗದವರಿಗೂ ಇಷ್ಟವಾಗುವ, ಬದುಕಿನ ವಾಸ್ತವವನ್ನು ತೆರೆದಿಡುವ ಭಿನ್ನ ಮಾದರಿಯಲ್ಲಿ ಮೂಡಿ ಬಂದಿದೆಯಂತೆ. ಹೇಳಿಕೇಳಿ ರಾಧಾ ತೆಲುಗು ಚಿತ್ರರಂಗದಲ್ಲಿ ಪಳಗಿಕೊಂಡಿರುವವರು. ಆದ್ದರಿಂದ ವಿಶಿಷ್ಟವಾದ ಈ ಕಥೆಯನ್ನು ಅವರು ಪಕ್ಕಾ ಕಮರ್ಶಿಯಲ್ ಶೈಲಿಯಲ್ಲಿಯೇ ನಿರ್ದೇಶನ ಮಾಡಿದ್ದಾರಂತೆ. ಈ ಚಿತ್ರದ ಅಸಲೀ ಮಜಾ ಏನೆಂಬುದು ಮುಂದಿನ ತಿಂಗಳ ಹೊತ್ತಿಗೆಲ್ಲ ತಿಳಿಯಲಿದೆ.

  • ಮಳೆಗೆ ಕಾರಿನ ಮೇಲೆ ಬಿದ್ದ ಮರ- ಕ್ಯಾನ್ಸರ್ ಗೆದ್ದಿದ್ದ ಮಹಿಳೆ ಸಾವು

    ಮಳೆಗೆ ಕಾರಿನ ಮೇಲೆ ಬಿದ್ದ ಮರ- ಕ್ಯಾನ್ಸರ್ ಗೆದ್ದಿದ್ದ ಮಹಿಳೆ ಸಾವು

    ಬೆಂಗಳೂರು: ಶುಕ್ರವಾರ ಸುರಿದ ಧಾರಾಕಾರ ಮಳೆ ಹಿನ್ನಲೆಯಲ್ಲಿ ಕಾರಿನ ಮೇಲೆ ಮರ ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ನಗರದ ಮಿನರ್ವ ಸರ್ಕಲ್ ನಲ್ಲಿ ನಡೆದಿದೆ.

    ಹೋಂ ಗಾರ್ಡ್ ಆಗಿದ್ದ ಭಾರತಿ ಕಾರು ಕೆಟ್ಟೋಗಿದೆ ಎಂದು ಹೋಗಿದ್ದರು. ಭಾರತಿಯವರಿಗೆ ಕ್ಯಾನ್ಸರ್ ಇತ್ತು ಹಾಗೂ ಅವರು ಕ್ಯಾನ್ಸರ್ ಗೆದ್ದು ಬಂದಿದ್ದರು. ರಾಚೇನಹಳ್ಳಿಯ ಕೆರೆ ಬಳಿ ಹೋಂ ಗಾರ್ಡ್ ಡ್ಯೂಟಿ ಮಾಡುತ್ತಿದ್ದರು. ಮೂಲತಃ ತುಮಕೂರಿನವರಾಗಿರುವ ಇವರು ಹತ್ತು ವರ್ಷಗಳಿಂದ ಇಲ್ಲೇ ವಾಸಿಸುತ್ತಿದ್ದರು.

    ನನ್ನ ಸೊಸೆ ಕಾರು ರಿಪೇರಿಗೆ ಬಿಟ್ಟಿದ್ದರು. ಆ ಸಂದರ್ಭದಲ್ಲಿ ಈ ಘಟನೆ ನಡೆದು ಹೋಗಿದೆ. ಮೊದಲನೇ ಮಗ ವಿವೇಕಾನಂದ ಕಾಲೇಜಿನಲ್ಲಿ ಓದುತ್ತಿದ್ದಾನೆ. ಎರಡನೇ ಮಗ ಸುಂಕದಕಟ್ಟೆಯಲ್ಲಿ ಓದುತ್ತಿದ್ದಾನೆ. ನಮ್ಮವರ ಸಾವಿಗೆ ಬಿಬಿಎಂಪಿಯವರೇ ಕಾರಣ. ಐದು ಲಕ್ಷ ರೂ. ಕೊಟ್ಟು ಕೈ ತೊಳೆದುಕೊಂಡರೆ ಹೇಗೆ? ಬಿಬಿಎಂಪಿ ಮೊದಲೇ ಮರಗಳ ಬಗ್ಗೆ ಗಮನ ಕೊಡಬೇಕಿತ್ತು. ಕುಟುಂಬದ ಉದ್ಧಾರಕ್ಕಾಗಿ ಹೋಂ ಗಾರ್ಡ್ ಕೆಲಸ ಮಾಡುತ್ತಿದ್ದರು. ಸರ್ಕಾರ ದೊಡ್ಡ ಮಗನಿಗೆ ಸರ್ಕಾರಿ ಕೆಲಸ ಕೊಡಬೇಕು ಮತ್ತು ಚಿಕ್ಕ ಮಗನಿಗೆ ವಿದ್ಯಾಭ್ಯಾಸ ಕೊಡಿಸಬೇಕು ಎಂದು ಮೃತರ ಸಂಬಂಧಿ ರಾಧಾ ಹೇಳಿದ್ರು.