Tag: Rachita Ram

  • ಸೀತಾರಾಮನದ್ದು ಅರ್ಥಪೂರ್ಣ ಕಲ್ಯಾಣ!

    ಸೀತಾರಾಮನದ್ದು ಅರ್ಥಪೂರ್ಣ ಕಲ್ಯಾಣ!

    ಬೆಂಗಳೂರು: ನಿಖಿಲ್ ನಾಯಕನಾಗಿ ನಟಿಸಿರೋ ಸೀತಾರಾಮ ಕಲ್ಯಾಣ ಚಿತ್ರ ಬಿಡುಗಡೆಯಾಗಿದೆ. ಆರಂಭದಿಂದಲೂ ಭರ್ಜರಿ ಫ್ಯಾಮಿಲಿ ಎಂಟರ್ ಟೇನರ್ ಎಂಬ ಸುಳಿವಿನೊಂದಿಗೆ ಎಲ್ಲರನ್ನು ಈ ಸಿನಿಮಾ ಸೆಳೆದುಕೊಂಡಿತ್ತು. ಅಂಥಾ ಅಗಾಧ ನಿರೀಕ್ಷೆಯಿಟ್ಟುಕೊಂಡು ಥೇಟರು ಹೊಕ್ಕ ಪ್ರತೀ ಪ್ರೇಕ್ಷಕರನ್ನೂ ಸೀತಾರಾಮ ಖುಷಿಗೊಳಿಸಿದ್ದಾನೆ.

    ಇಡೀ ಚಿತ್ರದಲ್ಲಿ ಪ್ರಧಾನವಾಗಿ ಗಮನ ಸೆಳೆಯುವಂತಿರೋದು ನಿರ್ದೇಶಕ ಎ ಹರ್ಷ ಅವರ ಜಾಣ್ಮೆ ಬೆರೆತ ಕಸುಬುದಾರಿಕೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಮುದ ನೀಡುವಂತೆ, ಸಿಎಂ ಮಗನೇ ನಾಯಕನಾದ್ದರಿಂದ ಆ ದೃಷ್ಟಿಯಲ್ಲಿಯೂ ಕುಂದುಂಟಾಗದಂತೆ ಮತ್ತು ಯಾವುದನ್ನೂ ಉದ್ದೇಶಪೂರ್ವಕವಾಗಿ ತುರುಕಲಾಗಿದೆ ಎಂಬಂಥಾ ಭಾವವೇ ಕಾಡದಂತೆ ಹರ್ಷ ಇಡೀ ಚಿತ್ರವನ್ನ ರೂಪಿಸಿದ್ದಾರೆ.

    ಸೀತಾರಾಮ ಕಲ್ಯಾಣ ದೊಡ್ಡ ಕ್ಯಾನ್ವಾಸಿನ ಸಿನಿಮಾ. ನಿಖಿಲ್ ಇಲ್ಲಿ ಆರ್ಯ ಎಂಬ ಲವಲವಿಕೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಆರ್ಯ ಗೆಳೆಯನ ಮದುವೆಯ ನಿಮಿತ್ತವಾಗಿ ಆತನ ದೊಡ್ಡ ಕುಟುಂಬವೊಂದರ ಪರಿಸರಕ್ಕೆ ಎಂಟ್ರಿ ಕೊಡುತ್ತಾನೆ. ಮದುವೆ ಮುಗಿಯೋ ಹೊತ್ತಿಗೆಲ್ಲ ಆರ್ಯನಿಗೆ ಆ ದೊಡ್ಡ ಮನೆ ಯಜಮಾನನ ಮಗಳ ಮೇಲೆಯೇ ಪ್ರೀತಿ ಮೂಡಿ ಬಿಟ್ಟಿರುತ್ತೆ. ನಂತರವೂ ಪವಾಡವೆಂಬಂತೆ ಆ ಹುಡುಗಿಯೊಂದಿಗೇ ಆರ್ಯನ ಪ್ರೇಮ ಮುಂದುವರೆಯುತ್ತೆ. ಆದರೆ ಈ ಪ್ರೀತಿಯ ಹಿನ್ನೆಲೆಯಲ್ಲಿಯೇ ಆ ಎರಡು ಕುಟುಂಬಗಳ ನಂಟು, ದ್ವೇಷದ ಪ್ಲ್ಯಾಶ್ ಬ್ಯಾಕೂ ತೆರೆದುಕೊಳ್ಳುತ್ತೆ. ಅದೆಂಥಾದ್ದೆಂಬುದನ್ನ ಸೀತಾರಾಮ ಕಲ್ಯಾಣವನ್ನ ನೋಡಿಯೇ ತಿಳಿದುಕೊಳ್ಳೋದು ಉತ್ತಮ.

    ಇನ್ನುಳಿದಂತೆ ಫ್ಯಾಮಿಲಿಯಾಚೆಗೆ ಜನನಾಯಕನಾಗಿಯೂ ನಿಖಿಲ್ ಮಿಂಚಿದ್ದಾರೆ. ರೈತಪರವಾದ ಸೀನುಗಳೂ ಸ್ಫೂರ್ತಿದಾಯಕವಾಗಿವೆ. ರಘು ನಿಡುವಳ್ಳಿಯವರ ಸಂಭಾಷಣೆಯೂ ಕಥೆಯ ಓಘಕ್ಕೆ ಪೂರಕವಾಗಿದೆ. ಸಾಹಸ, ಸೆಂಟಿಮೆಂಟು ಸೇರಿದಂತೆ ಎಲ್ಲವೂ ಬೆರಗಾಗುವಂತಿವೆ. ಶರತ್ ಕುಮಾರ್, ರವಿಶಂಕರ್, ಮಧುಬಾಲಾ ಮುಂತಾದವರೂ ಕೂಡಾ ಬೇರೆಯದ್ದೇ ಥರದ ಪಾತ್ರಗಳಲ್ಲಿ ಆವರಿಸಿಕೊಳ್ಳುತ್ತಾರೆ. ರಚಿತಾ ಕೂಡಾ ಮುದ್ದಾಗಿ ನಟಿಸಿದ್ದಾರೆ. ನಿಖಿಲ್ ಎಲ್ಲ ರೀತಿಯಲ್ಲಿಯೂ ಫುಲ್ ಮಾಕ್ರ್ಸ್ ಪಡೆದುಕೊಳ್ಳುತ್ತಾರೆ. ಸಂಗೀತ, ಸಾಹಸ, ಛಾಯಾಗ್ರಹಣ… ಹೀಗೆ ಎಲ್ಲ ವಿಭಾಗಗಳಲ್ಲಿಯೂ ಹೊಸತನವಿದೆ. ಅದುವೇ ಸೀತಾರಾಮ ಕಲ್ಯಾಣವನ್ನು ಮತ್ತಷ್ಟು ಆಕರ್ಷಕವಾಗಿದೆ.

    https://www.youtube.com/watch?v=GaXuYAfqGQg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೋಡಿ ಮಾಡಿದ ಸೀತಾರಾಮ ಕಲ್ಯಾಣ ಟ್ರೇಲರ್

    ಮೋಡಿ ಮಾಡಿದ ಸೀತಾರಾಮ ಕಲ್ಯಾಣ ಟ್ರೇಲರ್

    ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ ಎರಡನೇ ಚಿತ್ರ ‘ಸೀತಾರಾಮ ಕಲ್ಯಾಣ’ ಬರುವ ಶುಕ್ರವಾರ ತೆರೆ ಕಾಣಲಿದ್ದು, ಶನಿವಾರ ಸಂಜೆ ಮೈಸೂರಿನಲ್ಲಿ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.

    ಮೈಸೂರಿನ ಬನ್ನಿಮಂಟಪದ ಮೈದಾನದಲ್ಲಿ ಅದ್ಧೂರಿಯಾಗಿ ‘ಸೀತಾರಾಮ ಕಲ್ಯಾಣ’ದ ಟ್ರೇಲರ್ ಬಿಡುಗಡೆಯಾಗಿದೆ. ಇನ್ನೂ ಟ್ರೇಲರ್ ನಲ್ಲಿ ತುಂಟತನ ಪ್ರೀತಿ, ಕುಟುಂಬದವರ ನಡುವಿನ ಬಾಂಧವ್ಯ ತುಂಬಿದೆ. ಜೊತೆಗೆ ನಿಖಿಲ್ ಕುಮಾರಸ್ವಾಮಿ ಅವರ ಮಾಸ್ ಫೈಟ್ ಇದ್ದು, ಇದು ಪಕ್ಕಾ ಒಂದು ಸಾಂಪ್ರದಾಯಕ ಸಿನಿಮಾವಾಗಿದೆ. ಟ್ರೇಲರ್ ನಲ್ಲಿ ತಂದೆಯ ಪ್ರೀತಿಗೆ ನೀಡಿರುವ ಗೌರವ ಸಿನಿಮಾದ ವಿಶೇಷತೆ ಎಂದು ಹೇಳಬಹುದಾಗಿದೆ. ಟ್ರೇಲರ್ ನೋಡಿದ ಅಭಿಮಾನಿಗಳು ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

    ಇನ್ನೂ ಸಮಾರಂಭಕ್ಕೆ ಸ್ಯಾಂಡಲ್‍ ವುಡ್ ತಾರೆಯರ ಭರ್ಜರಿ ಡ್ಯಾನ್ಸ್, ನಾಯಕ ನಿಖಿಲ್ ಕುಮಾರ್, ಚಿತ್ರದ ನಾಯಕಿ ರಚಿತ್ ರಾಮ್, ರಾಗಿಣಿ, ಆಶಿಕಾ ರಂಗನಾಥ್ ಸೇರಿದಂತೆ ಹಲವರು ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಅಭಿಮಾನಿಗಳ ದಂಡೆ ಹರಿದು ಬಂದಿತ್ತು. ಹಲವು ನಟ – ನಟಿಯರು ಹಾಗೂ ಜೆಡಿಎಸ್ ಶಾಸಕರು ಸಾಕ್ಷಿಯಾಗಿದ್ದು, ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಎಚ್.ಡಿ. ಕುಮಾರಸ್ವಾಮಿ, ಚಿತ್ರ ಅದ್ಧೂರಿಯಾಗಿ ಮೂಡಿ ಬಂದಿದ್ದು, ಒಂದೊಳ್ಳೆಯ ಕೌಟುಂಬಿಕ ಚಿತ್ರವನ್ನು ನಿರ್ಮಿಸಿದ ತೃಪ್ತಿ ಇದೆ ಎಂದು ಹೇಳಿದ್ದಾರೆ.

    ಮೈಸೂರು, ಹಾಸನ, ಮಂಡ್ಯ ಭಾಗದಲ್ಲೇ ಸೀತಾರಾಮ ಕಲ್ಯಾಣ ಚಿತ್ರದ ಚಿತ್ರೀಕರಣ ಮಾಡಲಾಗಿದ್ದು, ಪಕ್ಕಾ ಫ್ಯಾಮಿಲಿ ಎಂಟರ್‍ಟೈನರ್ ಚಿತ್ರ ಇದಾಗಿದೆ. ಜಾಗ್ವಾರ್ ನಂತರ ಬಹಳ ನಿರೀಕ್ಷೆಯೊಂದಿಗೆ ಸಿಎಂ ಪುತ್ರ ಮತ್ತೆ ತೆರೆ ಮೇಲೆ ಬರ್ತಿದ್ದು, ಸಾಕಷ್ಟು ನಿರೀಕ್ಷೆ ಮೂಡಿಸಿದೆ.

    https://www.youtube.com/watch?time_continue=6&v=gKsX2IUC_vI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೀತಾರಾಮ ಕಲ್ಯಾಣ: ಹರ್ಷ ಎಂಟನೇ ಹಾದಿ ತುಂಬಾ ಸ್ಪೆಷಲ್!

    ಸೀತಾರಾಮ ಕಲ್ಯಾಣ: ಹರ್ಷ ಎಂಟನೇ ಹಾದಿ ತುಂಬಾ ಸ್ಪೆಷಲ್!

    ಬೆಂಗಳೂರು: ನೃತ್ಯ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು ಎ ಹರ್ಷ. ನೃತ್ಯ ನಿರ್ದೇಶಕರಾಗಿ ಬಹು ಬೇಡಿಕೆಯಲ್ಲಿರುವಾಗಲೇ ನಿರ್ದೇಶನಕ್ಕಿಳಿದಿದ್ದ ಹರ್ಷ ಅವರದ್ದು ನಿಜಕ್ಕೂ ಕಲರ್ ಫುಲ್ ಜರ್ನಿ. ಯುವ ಆವೇಗದ ಕಥಾ ಹಂದರದಿಂದಲೇ ಗೆಲ್ಲುತ್ತಾ ಬಂದಿರೋ ಹರ್ಷ ಪಾಲಿಗೆ ನಿರ್ದೇಶಕರಾಗಿ ಸೀತಾರಾಮ ಕಲ್ಯಾಣ ಎಂಟನೇ ಸಿನಿಮಾ.

    ಇದುವರೆಗೂ ಮಾಸ್ ಶೈಲಿಯ ಸಿನಿಮಾಗಳನ್ನೇ ನಿರ್ದೇಶನ ಮಾಡಿರುವವರು ಹರ್ಷ. ಅವರು ಸೀತಾರಾಮ ಕಲ್ಯಾಣ ಸಿನಿಮಾ ಮೂಲಕ ಮೊದಲ ಬಾರಿಗೆ ಫ್ಯಾಮಿಲಿ ಕಥಾನಕವೊಂದನ್ನ ಹೇಳ ಹೊರಟಿದ್ದಾರೆ. ಈ ಮೂಲಕವೇ ಅವರ ಪಾಲಿಗೆ ತಮ್ಮ ಎಂಟನೇ ಚಿತ್ರ ಬಲು ಮಹತ್ವದ್ದು.

    ಸೀತಾರಾಮ ಕಲ್ಯಾಣ ಮಾಸ್ ಮತ್ತು ಫ್ಯಾಮಿಲಿ ಎಂಟರ್‍ಟೈನರ್ ಚಿತ್ರ. ಇದೇ ಮೊದಲ ಸಲ ಹರ್ಷ ಎಮೋಷನಲ್ ಸನ್ನಿವೇಶಗಳ ಮೂಲಕ ಹೊಸಾ ಬಗೆಯ ಪಾತ್ರಗಳನ್ನು ಕಟ್ಟಿದ್ದಾರಂತೆ. ಹೆಸರೇ ಸೀತಾರಾಮ ಕಲ್ಯಾಣ ಅಂತಿರೋದರಿಂದ ಇದು ಲವ್, ಮದುವೆ ಸುತ್ತಮುತ್ತ ನಡೆಯೋ ಕಥೆ ಅಂತ ಬಹುತೇಕರು ಅಂದುಕೊಂಡಿದ್ದರೂ ಅಚ್ಚರಿಯೇನಿಲ್ಲ. ಆದರೆ ಸೀತಾರಾಮನ ಕಥೆ ಕಲ್ಯಾಣದಾಚೆಗೂ ಹಬ್ಬಿಕೊಂಡಿದೆ.

    ಮೊದಲ ಸಿನಿಮಾ ಜಾಗ್ವಾರ್ ನಲ್ಲಿ ನಿಖಿಲ್ ಸಕಲ ತಯಾರಿ ಮಾಡಿಕೊಂಡು ಅಖಾಡಕ್ಕಿಳಿದಿದ್ದರು. ಸೀತಾರಾಮ ಕಲ್ಯಾಣದ ಪಾತ್ರದ ಮೂಲಕ ಅವರು ತಾನೋರ್ವ ಅದ್ಭುತ ಪರ್ಫಾರ್ಮರ್ ಅನ್ನೋದನ್ನೂ ಸಾಬೀತು ಪಡಿಸಿದ್ದಾರಂತೆ. ಫ್ಯಾಮಿಲಿ, ಮಾಸ್ ಮತ್ತು ಎಮೋಷನಲ್ ಸನ್ನಿವೇಶಗಳಿಗೆಲ್ಲ ನಿಖಿಲ್ ಬೆರಗಾಗುವಂತೆ ಜೀವ ತುಂಬಿದ್ದಾರಂತೆ. ಇನ್ನು ಈವರೆಗೆ ಒಂದು ವೆರೈಟಿ ಪಾತ್ರಗಳಿಗೆ ಹೆಸರಾಗಿದ್ದ ನಟ ನಟಿಯರನೇಕರು ಭಿನ್ನವಾದ ಪಾತ್ರಗಳಲ್ಲಿ ನಟಿಸಿದ್ದಾರೆ.

    ಇಂಥಾ ನಾನಾ ವಿಶೇಷತೆಗಳೊಂದಿಗೆ ಮೂಡಿ ಬಂದಿರೋ ಸೀತಾರಾಮ ಪ್ರೇಕ್ಷಕರಿಗೆ ಕ್ಷಣ ಕ್ಷಣವೂ ಸರ್‍ಪ್ರೈಸ್ ಕೊಡೋವಂತೆ ಮೂಡಿ ಬಂದಿದೆ ಅನ್ನೋದು ಹರ್ಷ ಭರವಸೆ.

    https://www.youtube.com/watch?v=IgY3WB1V1wM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗುಳಿಕೆನ್ನೆ ಸುಂದರಿಗೆ ತಾತನಾಗಲಿದ್ದಾರೆ ಅನಂತ್ ನಾಗ್!

    ಗುಳಿಕೆನ್ನೆ ಸುಂದರಿಗೆ ತಾತನಾಗಲಿದ್ದಾರೆ ಅನಂತ್ ನಾಗ್!

    ಪಿ.ವಾಸು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗಾಗಿ ಚಿತ್ರವೊಂದನ್ನು ನಿರ್ದೇಶನ ಮಾಡಲು ತಯಾರಾಗುತ್ತಿದ್ದಾರೆ. ಈ ಚಿತ್ರಕ್ಕೆ ಈಗಾಗಲೇ ರಚಿತಾ ರಾಮ್ ನಾಯಕಿಯಾಗಿಯೂ ಆಯ್ಕೆಯಾಗಿದ್ದಾರೆ. ಇದೀಗ ಈ ಚಿತ್ರದ ಪ್ರಮುಖವಾದ ರಚಿತಾ ತಾತನ ಪಾತ್ರಕ್ಕೆ ಅನಂತನಾಗ್ ಆಗಮನವಾಗಿದೆ!

    ಈ ಚಿತ್ರದಲ್ಲಿ ತನಗೆ ಇದುವರೆಗೂ ಸಿಗದಂಥಾ ಪಾತ್ರವೊಂದು ಸಿಕ್ಕಿದೆ ಅಂತರ ರಚಿತಾ ಖುಷಿಗೊಂಡಿದ್ದಾರೆ. ಈ ಪಾತ್ರವನ್ನೇ ಅಷ್ಟು ಸೊಗಸಾಗಿ ರೂಪಿಸಿರೋ ವಾಸು ತಾತನ ಪಾತ್ರವನ್ನೂ ಕೂಡಾ ವಿಶೇಷವಾಗಿಯೇ ಕಟ್ಟಿದ್ದಾರಂತೆ. ಅಂದಹಾಗೆ ಈ ಪಾತ್ರವನ್ನು ವಾಸು ಅನಂತ್ ನಾಗ್ ಅವರನ್ನು ಮನಸಲ್ಲಿಟ್ಟುಕೊಂಡೇ ಸೃಷ್ಟಿಸಿದ್ದರು. ಇದನ್ನು ಅನಂತ್ ಕೂಡಾ ಅಷ್ಟೇ ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ.

    ಈ ಚಿತ್ರದ ಮೂಲಕ ರಚಿತಾ ರಾಮ್ ಮೊದಲ ಸಲ ಶಿವರಾಜ್ ಕುಮಾರ್ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ. ಈಗಾಗಲೇ ವಾಸು ಎಲ್ಲ ತಯಾರಿಯನ್ನೂ ಮುಗಿಸಿಕೊಂಡಿದ್ದಾರೆ. ತಾರಾಗಣದ ಆಯ್ಕೆ ಕಾರ್ಯ ಕೂಡಾ ಅಂತಿಮ ಹಂತ ತಲುಪಿಕೊಂಡಿದೆ. ಇಷ್ಟರಲ್ಲಿಯೇ ಈ ಚಿತ್ರದ ಚಿತ್ರೀಕರಣವೂ ಚಾಲೂ ಆಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ವಿವೇಕ್ ಒಬೆರಾಯ್ ಜೊತೆಗಿನ ಫೋಟೋ ರಚಿತಾ ಫೇವರಿಟ್!

    ವಿವೇಕ್ ಒಬೆರಾಯ್ ಜೊತೆಗಿನ ಫೋಟೋ ರಚಿತಾ ಫೇವರಿಟ್!

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಯಶಸ್ಸಿನ ನಾಗಾಲೋಟದಲ್ಲಿರೋ ನಟಿ ರಚಿತಾ ರಾಮ್. ಕಮರ್ಶಿಯಲ್ ಚಿತ್ರಗಳಲ್ಲಿಯೂ ಭಾರೀ ಬೇಡಿಕೆ ಹಿಂದಿರೋ ಘಳಿಗೆಯಲ್ಲಿಯೇ ಭಿನ್ನ ಬಗೆಯ ಚಿತ್ರಗಳಲ್ಲಿಯೂ ನಟಿಸುತ್ತಿರುವ ರಚಿತಾ ರಾಮ್‍ಗೆ ಇದೀಗ ತಾವೇ ನಟಿಸಿರೋ ಚಿತ್ರವೊಂದರ ಸೀನು ಮತ್ತು ಫೋಟೋವೊಂದು ತುಂಬಾ ಫೇವರಿಟ್ ಆಗಿದೆ. ಮತ್ತದನ್ನು ರಚಿತಾ ಖುಷಿಯಿಂದಲೇ ಹೇಳಿಕೊಂಡಿದ್ದಾರೆ.

    ಬಹುಶಃ ಡಬ್ಬಿಂಗ್ ಹಂತದಲ್ಲಿ ಸೆರೆ ಹಿಡಿದ ಚಿತ್ರವೊಂದನ್ನು ರಚಿತಾ ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರು ಮಾಡಿದ್ದಾರೆ. ಜೊತೆಗೆ ಇದು ತುಂಬಾ ಮುದ್ದು ಮುದ್ದಾಗಿರುವ, ತನಗೆ ತುಂಬಾ ಇಷ್ಟವಾದ ಫೋಟೋ ಅಂತಲೂ ರಚಿತಾ ಹೇಳಿಕೊಂಡಿದ್ದಾರೆ.

    ಇದು ರಚಿತಾ ರಾಮ್ ನಟಿಸಿರೋ ರುಸ್ತುಂ ಚಿತ್ರದ ದೃಶ್ಯ. ಡಬ್ಬಿಂಗ್ ಹಂತದಲ್ಲಿ ರಚಿತಾ ಸೆರೆ ಹಿಡಿದಿರೋ ಈ ಚಿತ್ರದಲ್ಲಿ ವಿವೇಕ್ ಒಬೆರಾಯ್ ರಚಿತಾ ಕೆನ್ನೆ ಸವರಿ ಮುದ್ದು ಮಾಡುತ್ತಿರೋವಂಥಾ ರೊಮ್ಯಾಂಟಿಕ್ ಸೀನಿದೆ. ಇದು ಇದುವರೆಗಿನ ಅಷ್ಟೂ ಚಿತ್ರಗಳಲ್ಲಿ ರಚಿತಾಗೆ ತುಂಬಾ ಹಿಡಿಸಿರೋ ಚಿತ್ರವಂತೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಚಿತಾಗೆ ಕಮರ್ಶಿಯಲ್ ಇಮೇಜ್ ಕಳಚಿಕೊಳ್ಳೋ ಬಯಕೆಯಂತೆ!

    ರಚಿತಾಗೆ ಕಮರ್ಶಿಯಲ್ ಇಮೇಜ್ ಕಳಚಿಕೊಳ್ಳೋ ಬಯಕೆಯಂತೆ!

    ಬೆಂಗಳೂರು: ಕಮರ್ಶಿಯಲ್ ಹೀರೋಯಿನ್ ಆಗಿ ಮಿಂಚಬೇಕು, ಅದರಲ್ಲಿಯೇ ನಂಬರ್ ಒನ್ ಆಗಿ ನೆಲೆ ಕಂಡುಕೊಳ್ಳಬೇಕೆಂಬುದು ಬಹುತೇಕ ನಟಿಯರ ಏಕ ಮಾತ್ರ ಕನಸು. ಆದರೆ ನಿಜವಾದ ಕಲಾವಿದೆಯರಿಗೆ ಒಂದೇ ಟ್ರ್ಯಾಕಿನಲ್ಲಿ ಬಹು ದಿನ ನಡೆದರೆ ಮತ್ತೆತ್ತಲೋ ಹೊರಳಿಕೊಳ್ಳಬೇಕೆನ್ನಿಸುತ್ತೆ. ಸದ್ಯ ರಚಿತಾ ರಾಮ್ ಕೂಡಾ ಅದೇ ಮೂಡಿನಲ್ಲಿರೋ ವಿಚಾರ ಅವರದ್ದೇ ಮಾತುಗಳ ಮೂಲಕ ಅನಾವರಣಗೊಂಡಿದೆ.

    ರಚಿತಾ ರಾಮ್ ಆರಂಭದಲ್ಲಿ ಸೀರಿಯಲ್ ನಟಿಯಾಗಿ ಬೆಳಕಿಗೆ ಬಂದವರು. ಸೀರಿಯಲ್ಲಿನಲ್ಲಿ ನಟಿಸುತ್ತಿರುವಾಗಲೇ ಏಕಾಏಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜೋಡಿಯಾಗಿ ನಟಿಸೋ ಮೂಲಕ ರಚಿತಾ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ನೆಲೆ ಕಂಡುಕೊಂಡಿದ್ದರು. ಆ ಬಳಿಕ ಸುದೀಪ್ ಅವರಂಥಾ ನಟರ ಜೊತೆಗೂ ನಟಿಸಿದ ರಚಿತಾ ಈಗ ಕನ್ನಡದ ಮುಖ್ಯ ನಾಯಕಿ. ಆದರೆ ಬಹು ಹಿಂದಿನಿಂದಲೇ ಕಮರ್ಶಿಯಲ್ ಇಮೇಜಿನಾಚೆಗೆ ಗುರುತಿಸಿಕೊಳ್ಳುವ ಬಯಕೆಯೊಂದು ಅವರಲ್ಲಿ ಮೂಡಿಕೊಂಡಿತ್ತಂತೆ. ಅದರ ಫಲವಾಗಿಯೇ ಅವರು ಏಪ್ರಿಲ್ ಎಂಬ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದರಂತೆ!

    ಮೊನ್ನೆ ರಚಿತಾ ಅವರ ಹುಟ್ಟು ಹಬ್ಬವಿತ್ತಲ್ಲಾ? ಇದಕ್ಕೆ ಏಪ್ರಿಲ್ ಚಿತ್ರತಂಡ ಈ ಚಿತ್ರದ ಪೋಸ್ಟರ್ ಒಂದನ್ನು ಬಿಡುಗಡೆಗೊಳಿಸಿ ಶುಭ ಕೋರಿತ್ತು. ಈ ಸಂದರ್ಭದಲ್ಲಿ ರಚಿತಾ ತಮ್ಮ ಮನದಾಳವನ್ನು ತೆರೆದಿಟ್ಟಿದ್ದಾರೆ. ಈ ಚಿತ್ರ ಮಹಿಳಾ ಪ್ರಧಾನವಾದದ್ದು. ಇದರಲ್ಲಿನ ಏಪ್ರಿಲ್ ಡಿಸೋಜಾ ಎಂಬ ಪಾತ್ರ ಸವಾಲಿನದ್ದಂತೆ. ಅದನ್ನು ಖುಷಿಯಿಂದಲೇ ಸ್ವೀಕರಿಸಿರುವ ರಚಿತಾ ಈ ಮೂಲಕ ತಮ್ಮ ಮನದಾಸೆ ಈಡೇರುವ ಭರವಸೆ ಹೊಂದಿದ್ದಾರೆ. ಕಮರ್ಶಿಯಲ್ ಜಾಡಿನಲ್ಲಿಯೂ ಹೀಗೆಯೇ ಸವಾಲಿನ, ಅಪರೂಪದ ಪಾತ್ರಗಳನ್ನು ಆರಿಸಿಕೊಳ್ಳಲು ನಿರ್ಧರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಐ ಲವ್ ಯೂ ಅಂದ ರಚಿತಾ ರಾಮ್ ಸಖತ್ ಹಾಟ್!

    ಐ ಲವ್ ಯೂ ಅಂದ ರಚಿತಾ ರಾಮ್ ಸಖತ್ ಹಾಟ್!

    ಬೆಂಗಳೂರು: ಆರಂಭದಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗಿ ನಟಿಸಿದ್ದವರು ರಚಿತಾ ರಾಮ್. ಸ್ಟಾರ್ ನಟರ ಜೊತೆ ನಟಿಸಿದರೂ ಕೂಡಾ ಪಕ್ಕಾ ಹಾಟ್ ಪಾತ್ರಗಳಲ್ಲಿ ಅವರು ಈವರೆಗೂ ಕಾಣಿಸಿರಲಿಲ್ಲ. ಆದರೆ ರಚಿತಾರನ್ನು ಅಂಥಾದ್ದೊಂದು ಲುಕ್ಕಿನಲ್ಲಿ ಅನಾವರಣಗೊಳಿಸಲು ನಿರ್ದೇಶಕ ಆರ್.ಚಂದ್ರು ಮುಂದಾಗಿದ್ದಾರಾ ಅಂತೊಂದು ಅನುಮಾನ ಎಲ್ಲರಲ್ಲಿಯೂ ಇದೆ!

    ಇದಕ್ಕೆ ಕಾರಣವಾಗಿರೋದು ಉಪ್ಪಿ ನಾಯಕರಾಗಿ ನಟಿಸುತ್ತಿರೋ ಐ ಲವ್ ಯೂ ಚಿತ್ರ. ಆರ್ ಚಂದ್ರು ನಿರ್ದೇಶನದ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮೊನ್ನೆಯಷ್ಟೇ ಬಿಡುಗಡೆಯಾಗಿತ್ತು. ಇದರಲ್ಲಿ ಉಪೇಂದ್ರ ಅವರೇ ಸಿಂಗಲ್ ಪೀಸ್‍ನಲ್ಲಿ ಕಂಗೊಳಿಸಿದ್ದಾರೆ. ನಾಯಕ ನಟ ಉಪ್ಪಿಯೇ ಈ ಪಾಟಿ ಹಾಟ್ ಆಗಿ ಕಾಣಿಸಿಕೊಂಡಿರೋವಾಗ ನಾಯಕಿ ರಚಿತಾ ರಾಮ್ ಇನ್ನೆಷ್ಟು ಮಾದಕವಾಗಿ ಕಾಣಿಸಿಕೊಳ್ಳಬಹುದು ಅಂತ ಅಭಿಮಾನಿಗಳೆಲ್ಲ ಕುತೂಹಲಗೊಂಡಿದ್ದರು.

    ನಿರ್ದೇಶಕ ಚಂದ್ರು ಅವರೇ ಕೊಟ್ಟೊಂದು ಸುಳಿವಿನ ಪ್ರಕಾರವಾಗಿ ಹೇಳೋದಾದರೆ ಈ ಚಿತ್ರದಲ್ಲಿ ರಚಿತಾ ಹಿಂದೆಂದೂ ಕಂಡಿರದಂಥಾ ಹಾಟ್ ಲುಕ್ಕಿನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದೀಗ ರಚಿತಾ ಕುಣಿಯಲಿರೋ ಒಂದು ಹಾಡನ್ನು ಚಿತ್ರೀಕರಿಸಿಕೊಳ್ಳಲು ಚಂದ್ರು ತಯಾರಿ ನಡೆಸಿದ್ದಾರೆ. ಕಿರಣ್ ಸಂಗೀತ ನಿರ್ದೇಶನ ಮಾಡಿರೋ ಈ ಹಾಡಿನಲ್ಲಿ ಡಿಂಪಲ್ ಕ್ವೀನ್ ಅಭಿಮಾನಿಗಳನ್ನೆಲ್ಲ ಹುಚ್ಚೆಬ್ಬಿಸುವಂತೆ ಕಾಣಿಸಲಿದ್ದಾರೆಂದು ನಿರ್ದೇಶಕರು ಸುಳಿವು ಕೊಟ್ಟಿದ್ದಾರೆ! ಇದನ್ನೂ ಓದಿ:  ಸಿಂಗಲ್ ಪೀಸಲ್ಲಿ ಐ ಲವ್ ಯೂ ಅಂದ್ರು ಉಪ್ಪಿ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿವರಾಜ್ ಕುಮಾರ್ ಚಿತ್ರಕ್ಕೆ ರಚಿತಾ ರಾಮ್ ನಾಯಕಿ?

    ಶಿವರಾಜ್ ಕುಮಾರ್ ಚಿತ್ರಕ್ಕೆ ರಚಿತಾ ರಾಮ್ ನಾಯಕಿ?

    ಅಯೋಗ್ಯ ಚಿತ್ರದ ಭರ್ಜರಿ ಯಶಸ್ಸಿನ ಖುಷಿಯಲ್ಲಿರುವ ರಚಿತಾ ರಾಮ್ ಅವರಿಗೆ ಇನ್ನೊಂದಷ್ಟು ಒಳ್ಳೆಯ ಅವಕಾಶಗಳು ಹುಡುಕಿ ಬರಲಾರಂಭಿಸಿವೆ. ಅತ್ತ ಸೀತಾರಾಮ ಕಲ್ಯಾಣ, ಮತ್ತೊಂದೆಡೆ ರುಸ್ತುಂ ಚಿತ್ರದಲ್ಲಿನ ಪಾತ್ರದಲ್ಲಿ ತೊಡಗಿಸಿಕೊಂಡಿರೋ ರಚಿತಾ ಇದೀಗ ಶಿವಣ್ಣನ ಚಿತ್ರವೊಂದಕ್ಕೆ ನಾಯಕಿಯಾಗಿದ್ದಾರೆ.

    ಶಿವರಾಜ್ ಕುಮಾರ್ ಈಗ ಸಣ್ಣ ವಿರಾಮವೂ ಇಲ್ಲದಷ್ಟು ಬ್ಯುಸಿಯಾಗಿದ್ದಾರೆ. ರುಸ್ತುಂ, ದ್ರೋಣ ಸೇರಿದಂತೆ ಅವರ ಕೈಲಿರೋ ಚಿತ್ರಗಳ ಪಟ್ಟಿ ದೊಡ್ಡದಿದೆ. ಅದಾಗಲೇ ಅವರು ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ದ್ವಾರಕೀಶ್ ಚಿತ್ರ ಬ್ಯಾನರಿನಡಿಯಲ್ಲಿ ನಿರ್ಮಾಣಗೊಳ್ಳಲಿರುವ ಈ ಚಿತ್ರವನ್ನು ಪಿ ವಾಸು ನಿರ್ದೇಶನ ಮಾಡಲಿದ್ದಾರೆ.

    ಈ ಚಿತ್ರಕ್ಕೆ ಇದೀಗ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆಂಬ ಮಾತುಗಳೂ ಕೇಳಿ ಬರುತ್ತಿವೆ. ಶಿವಣ್ಣನ ಜೊತೆ ನಟಿಸಲು ಥ್ರಿಲ್ ಆಗಿಯೇ ಒಪ್ಪಿಕೊಂಡಿರೋ ರಚಿತಾ ಈ ಬಗ್ಗೆ ಹೊರ ಬೀಳಲಿರೋ ಅಧಿಕೃತ ಸುದ್ದಿಗಾಗಿ ಎದುರು ನೋಡುತ್ತಿದ್ದಾರೆ. ಆದರೆ ಈ ಚಿತ್ರ ಈ ವರ್ಷವೇ ಆರಂಭವಾಗೋದಿಲ್ಲ. ಶಿವರಾಜ್ ಕುಮಾರ್ ಈಗ ಒಪ್ಪಿಕೊಂಡಿರೋ ಚಿತ್ರಗಳನ್ನು ಮುಗಿಸಿಕೊಂಡ ನಂತರ ಹೊಸ ವರ್ಷದ ಆರಂಭದಲ್ಲಿಯೇ ಇನ್ನೂ ಹೆಸರಿಡದ ಈ ಚಿತ್ರ ಚಿತ್ರೀಕರಣ ಆರಂಭಿಸಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೀತಾರಾಮ ಕಲ್ಯಾಣ ಟೀಸರ್ ನಲ್ಲಿ ಯಾಕೆ ಕಾಣಿಸಿಕೊಂಡಿಲ್ಲ?- ರಚಿತಾ ರಾಮ್ ಸ್ಪಷ್ಟನೆ

    ಸೀತಾರಾಮ ಕಲ್ಯಾಣ ಟೀಸರ್ ನಲ್ಲಿ ಯಾಕೆ ಕಾಣಿಸಿಕೊಂಡಿಲ್ಲ?- ರಚಿತಾ ರಾಮ್ ಸ್ಪಷ್ಟನೆ

    ಬೆಂಗಳೂರು: ಚಂದನವನದಲ್ಲಿ ಸೀತಾರಾಮ ಕಲ್ಯಾಣ ಟೀಸರ್ ಬಿಡುಗಡೆಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹವಾ ಕ್ರಿಯೇಟ್ ಮಾಡಿದೆ. ಆದ್ರೆ ಟೀಸರ್‍ನಲ್ಲಿ ಗುಳಿಕೆನ್ನೆಯ ಮುದ್ದಾದ ಬೆಡಗಿ ರಚಿತಾ ರಾಮ್ ಕಾಣಿಸಿಕೊಂಡಿರಲಿಲ್ಲ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ರಚಿತಾ ರಾಮ್ ತಾವು ಏಕೆ ಕಾಣಿಸಿಕೊಂಡಿಲ್ಲ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ಟೀಸರ್‍ನಲ್ಲಿ ಯಾರು ಕಾಣಿಸಿಕೊಂಡಿದ್ದಾರೆ ಎಂಬುದು ಮುಖ್ಯವಲ್ಲ. ಸಿನಿಮಾದಲ್ಲಿ ನಾನು ನಟಿಸಿದ್ದೇನೆ ಎಂಬುದು ಮುಖ್ಯ. ಚಿತ್ರದ ಟೀಸರ್ ಚೆನ್ನಾಗಿ ಮೂಡಿ ಬರಲಿ ಎಂದು ನಿಖಿಲ್ ಕುಮಾರ್ ಪಾತ್ರದ ಪರಿಚಯವನ್ನು ಅಲ್ಲಿ ತಿಳಿಸಲಾಗಿದೆ. ಟೀಸರ್ ಬಿಡುಗಡೆಯಾದಾಗ ಬಹಳ ಜನರು ನನ್ನನ್ನು ಈ ಪ್ರಶ್ನೆ ಕೇಳಿದ್ದರು ಅಂತ ಹೇಳಿದ್ರು.

    ಸೀತಾರಾಮ ಕಲ್ಯಾಣದಲ್ಲಿ ಎಲ್ಲ ಭಾಷೆಯ ಕಲಾವಿದರು ಇದ್ದಾರೆ. ಎಲ್ಲರೂ ತಮ್ಮ ಭಾಷೆಯಲ್ಲಿ ದೊಡ್ಡ ಸಾಧನೆ ಮಾಡಿದವರು. ಪ್ರತಿಯೊಂದು ಸೀನ್‍ಗಳನ್ನು ಮಾಡುವಾಗ ತುಂಬಾ ಚಾಲೆಂಜಿಂಗ್ ಆಗಿರುತ್ತದೆ. ಆದ್ರೆ ಪ್ರತಿಯೊಂದು ಶೂಟ್‍ನಲ್ಲಿ ಎಲ್ಲರಿಂದಲೂ ಕಲಿಯುವ ಅವಕಾಶ ಲಭಿಸಿದೆ. ಇನ್ನೇನು ಕೆಲವು ದಿನಗಳಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಟೀಸರ್ ಬಿಡುಗಡೆ ಬಳಿಕ ಚಂದನವನದಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಯೂಟ್ಯೂಬ್‍ನಲ್ಲಿ ನಂಬರ್ 01 ಟ್ರೆಂಡಿಂಗ್‍ನಲ್ಲಿ ನಮ್ಮ ಟೀಸರ್ ಇತ್ತು. ಜನರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ಚಿತ್ರತಂಡ ಹಾಗು ನನ್ನ ಪರವಾಗಿ ಎಲ್ಲ ಅಭಿಮಾನಿಗಳಿಗೆ ರಚಿತಾ ರಾಮ್ ಧನ್ಯವಾದ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

    https://www.youtube.com/watch?v=vmW64rkvPiU&feature=youtu.be

    https://www.youtube.com/watch?v=3pYwtl-VD-Y&feature=youtu.be

  • ರಚಿತಾ ರಾಮ್ ಈಗ ಏಪ್ರಿಲ್ ಡಿಸೋಜಾ – ಗುಳಿಕೆನ್ನೆಯಲ್ಲಿ ಅರಳಲಿದೆ ವಸಂತಮಾಸ!

    ರಚಿತಾ ರಾಮ್ ಈಗ ಏಪ್ರಿಲ್ ಡಿಸೋಜಾ – ಗುಳಿಕೆನ್ನೆಯಲ್ಲಿ ಅರಳಲಿದೆ ವಸಂತಮಾಸ!

    ಬೆಂಗಳೂರು: ಸೀರಿಯಲ್ ಗಳಲ್ಲಿ ನಟಿಸುತ್ತಲೇ ಚಿತ್ರರಂಗಕ್ಕೆ ಬಂದು ದರ್ಶನ್ ರಂಥಾ ಸ್ಟಾರ್ ನಟರಿಗೆ ನಾಯಕಿಯಾಗಿ ನಟಿಸಿದವರು ರಚಿತಾ ರಾಮ್. ಆ ನಂತರದಲ್ಲಿ ಬಹುತೇಕ ಸ್ಟಾರ್ ನಟರ ಜೊತೆ ನಟಿಸಿರೋ ರಚಿತಾ ಈ ಕ್ಷಣದಲ್ಲಿಯೂ ಸೀತಾರಾಮ ಕಲ್ಯಾಣ, ಅಯೋಗ್ಯ ಸೇರಿದಂತೆ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗಲೇ ಮಹಿಳಾ ಪ್ರಧಾನ ಚಿತ್ರವೊಂದರಲ್ಲಿ ನಟಿಸಲು ರಚಿತಾ ಒಪ್ಪಿಕೊಂಡಿದ್ದಾರೆ.

    ಈ ವಿಚಾರವನ್ನು ಖುಷಿಯಿಂದಲೇ ರಚಿತಾ ಹೇಳಿಕೊಂಡಿದ್ದಾರೆ. ಇದು 8 ಎಂಎಂ ಎಂಬ ಚಿತ್ರ ನಿರ್ದೇಶನ ಮಾಡಿದ್ದ ಸತ್ಯ ನಿರ್ದೇಶನದ ಎರಡನೇ ಚಿತ್ರ. ಒಂದು ಹೆಣ್ಣಿನ ಸುತ್ತಾ ನಡೆಯೋ ಥ್ರಿಲ್ಲರ್ ಕತೆ ಹೊಂದಿರೋ ಈ ಚಿತ್ರದಲ್ಲಿ ರಚಿತಾ ಕೇಂದ್ರ ಬಿಂದುವಾಗಿ ನಟಿಸಲಿದ್ದಾರೆ. ಇದುವರೆಗಿನ ಪಾತ್ರಗಳಿಗಿಂತಲೂ ಚಾಲೆಂಜಿಂಗ್ ಆಗಿರೋ ಈ ಪಾತ್ರವನ್ನು ಬಹಳಷ್ಟು ಇಷ್ಟಪಟ್ಟೇ ಅವರು ಒಪ್ಪಿಕೊಂಡಿದ್ದಾರಂತೆ.

    ಈ ಚಿತ್ರಕ್ಕೆ ಏಪ್ರಿಲ್ ಎಂಬ ಹೆಸರಿಡಲಾಗಿದೆಯಂತೆ. ಏಪ್ರಿಲ್ ತಿಂಗಳಿಗೂ ಈ ಚಿತ್ರಕ್ಕೂ ಏನಾದರೂ ಲಿಂಕಿದೆಯಾ ಅಂತ ನೋಡ ಹೋದರೆ, ಈ ಚಿತ್ರದಲ್ಲಿ ರಚಿತಾ ನಟಿಸಲಿರೋ ಪಾತ್ರದ ಹೆಸರೇ ಏಪ್ರಿಲ್ ಡಿಸೋಜಾ ಎಂಬ ಕುತೂಹಲಕಾರಿ ವಿಚಾರವೂ ಬಯಲಾಗುತ್ತದೆ. ಇನ್ನು ವಸಂತ ಮಾಸದ ಎರಡನೇ ತಿಂಗಳಾದ ಏಪ್ರಿಲ್ ಗೆ ಋತುಮಾನದ ವಿಶೇಷ ಗುಣಗಳೂ ಇರೋದರಿಂದ ಅದನ್ನೇ ಈ ಚಿತ್ರದ ಶೀರ್ಷಿಕೆಯಾಗಿಸಲಾಗಿದೆಯಂತೆ.

    ಇದುವರೆಗೂ ಪಕ್ಕಾ ಕಮರ್ಷಿಯಲ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದ ರಚಿತಾಗೆ ಈ ಚಿತ್ರ ಹೊಸ ಅನುಭವವಾಗಲಿದೆ. ಇಡೀ ಚಿತ್ರ ಇವರ ಪಾತ್ರದ ಸುತ್ತಲೇ ಸುತ್ತೋದರಿಂದ ಈ ಚಿತ್ರಕ್ಕೆ ರಚಿತಾ ಅವರೇ ಹೀರೋ ಕಮ್ ಹೀರೋಯಿನ್. ಈಗಾಲೇ ಬಿಡುಗಡೆಯಾಗಿರೋ ಫಸ್ಟ್ ಲುಕ್ಕಿನಲ್ಲಿ ರಚಿತಾ ಪಾತ್ರದ ತೂಕದ ಅಂದಾಜು ಸಿಕ್ಕಿದೆ.