Tag: Rabindra Chandrasekhar

  • ಗಂಡನಿಗೆ ಜೈಲಿನಲ್ಲಿ ವಿಐಪಿ ಸೆಲ್ ಬೇಡಿಕೆ ಇಟ್ಟ ನಟಿ ಮಹಾಲಕ್ಷ್ಮಿ

    ಗಂಡನಿಗೆ ಜೈಲಿನಲ್ಲಿ ವಿಐಪಿ ಸೆಲ್ ಬೇಡಿಕೆ ಇಟ್ಟ ನಟಿ ಮಹಾಲಕ್ಷ್ಮಿ

    ನ್ನ ಗಂಡನಿಗೆ ಜೈಲಿನಲ್ಲಿ ವಿಐಪಿ ಸೆಲ್ ನೀಡುವಂತೆ ನಟಿ ಮಹಾಲಕ್ಷ್ಮಿ  ಕೋರ್ಟಿಗೆ ಮನವಿ ಮಾಡಿದ್ದರು. ತನ್ನ ಪತಿಯು ಸಿಲೆಬ್ರಿಟಿ ಆಗಿರುವುದರಿಂದ ಅವರಿಗೆ ಎ ಕ್ಲಾಸ್ ಸೆಲ್ ನೀಡಬೇಕು ಎಂದು ಮಹಾಲಕ್ಷ್ಮಿ ಎಗ್ಮೋರ್ ನ್ಯಾಯಾಲಕ್ಕೆ ಮನವಿ ಮಾಡಿಕೊಂಡಿದ್ದರು. ಜೊತೆಗೆ ಜಾಮೀನು (Bail) ಕೂಡ ಕೋರಿ ಅರ್ಜಿ ಸಲ್ಲಿಸಿದ್ದರು. ಎರಡೂ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ.

    ಜೈಲಿನಲ್ಲಿ ಪತಿಯನ್ನು ನೋಡಿ ಕಣ್ಣೀರು ಹಾಕಿರುವ ಮಹಾಲಕ್ಷ್ಮಿ, ಶತಾಯಗತಾಯ ಅವರನ್ನು ಬಂಧನದಿಂದ ಬಿಡಿಸಿಕೊಳ್ಳುವುದಕ್ಕಾಗಿ ಸಾಕಷ್ಟು ಕಾನೂನು ಹೋರಾಟ ಮಾಡುತ್ತಿದ್ದಾರೆ. ತನ್ನ ಪತಿಯಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ವಾದ ಮಾಡುತ್ತಿದ್ದಾರೆ. ಸದ್ಯ ಜಾಮೀನು ಸಿಗದೇ ಇರುವ ಕಾರಣದಿಂದಾಗಿ ಪತಿ ರವೀಂದರ್ ಇನ್ನಷ್ಟು ದಿನ ಜೈಲಿನಲ್ಲಿ(Jail)  ಇರಬೇಕಾಗಿದೆ.

    ಏನಿದು ಪ್ರಕರಣ?

    ಕಿರುತೆರೆ ನಟಿ ಮಹಾಲಕ್ಷ್ಮಿ (Mahalakshmi) ಪತಿ ರವೀಂದ್ರ ಚಂದ್ರಶೇಖರ್ (Ravindra Chandrashekar) ಅವರನ್ನು ವಂಚನೆ ಆರೋಪದ ಮೇಲೆ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. 16 ಕೋಟಿ ರೂ. ವಂಚಿಸಿದ ಆರೋಪದಲ್ಲಿ ನಿರ್ಮಾಪಕ ರವೀಂದ್ರ ಅವರನ್ನು ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ನಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡ ‘ಸೀತಾರಾಮಂ’ ಬೆಡಗಿ

     

    ಮಾಧವ ಮೀಡಿಯಾ ಪ್ರೈ. ಲಿಮಿಟೆಡ್‍ನ ಬಾಲಾಜಿ ಕಾಪಾ ಎಂಬ ಉದ್ಯಮಿಗೆ ನಿರ್ಮಾಪಕ ರವೀಂದ್ರ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ತಮ್ಮ ಲಿಬ್ರಾ ಪ್ರೊಡಕ್ಷನ್ಸ್‌ ಅಡಿ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಹಣ ಹೂಡಿಕೆ ಮಾಡುವಂತೆ ಉದ್ಯಮಿ ಬಾಲಾಜಿ ಅವರನ್ನು ಕೇಳಿದ್ದರು. ಅದರಂತೆ ಉದ್ಯಮಿ ಬಾಲಾಜಿ ಅವರು ರವೀಂದ್ರಗೆ 2020ರ ಸೆಪ್ಟೆಂಬರ್‌ನಲ್ಲಿ 16 ಕೋಟಿ ರೂ. ಹಣ ವರ್ಗಾವಣೆ ಮಾಡಿದ್ದರು. ಉದ್ಯಮಿ ಬಳಿ ಹಣ ಪಡೆದು ಯೋಜನೆಗೆ ಚಾಲನೆ ನೀಡಿಲ್ಲ. ಪಡೆದ ಹಣವನ್ನು ಹಿಂತಿರುಗಿಸಿಲ್ಲ ಎಂದು ತಮಿಳುನಾಡು ಪೊಲೀಸರಿಗೆ ಉದ್ಯಮಿ ದೂರು ನೀಡಿದ್ದರು.

    ಅವರ ದೂರಿನ ಮೇಲೆ ತನಿಖೆ ನಡೆಸಲಾಗಿದ್ದು, ರವೀಂದ್ರ ಅವರು ದಾಖಲೆಗಳನ್ನು ನಕಲು ಮಾಡಿದ್ದು ಬೆಳಕಿಗೆ ಬಂದಿದೆ. ಈ ಸಂಬಂಧ ರವೀಂದ್ರ ಚಂದ್ರಶೇಖರ್ ಅವರನ್ನ ಬಂಧಿಸಿದ್ದಾರೆ. ಈ ಬೆನ್ನಲ್ಲೇ ಅವರ ಮೇಲೆ ಹಲವು ವಂಚನೆ ಪ್ರಕರಣಗಳು ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಾಲಕ್ಷ್ಮಿ ಮದುವೆಗೆ ಶತದಿನೋತ್ಸವ: ಹೆಂಡ್ತಿಗೆ ಹ್ಯಾಪಿ ಕ್ರೆಡಿಟ್ ಕೊಟ್ಟ ರವೀಂದ್ರ

    ಮಹಾಲಕ್ಷ್ಮಿ ಮದುವೆಗೆ ಶತದಿನೋತ್ಸವ: ಹೆಂಡ್ತಿಗೆ ಹ್ಯಾಪಿ ಕ್ರೆಡಿಟ್ ಕೊಟ್ಟ ರವೀಂದ್ರ

    ಕಾಲಿವುಡ್ ನಟಿ ಮಹಾಲಕ್ಷ್ಮಿ ಹಾಗೂ ರವೀಂದ್ರ ಚಂದ್ರಶೇಖರ್ ಮದುವೆಯಾಗಿ ನೂರು ದಿನಗಳನ್ನು ಪೂರೈಸಿದ್ದಾರೆ. ಈ ಸಂಭ್ರಮವನ್ನು ಸ್ವತಃ ರವೀಂದ್ರ ಅವರೇ ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿದ್ದಾರೆ. ನಾನು ಇಂದು ಹ್ಯಾಪಿ ಆಗಿ ಇದ್ದೇನೆ ಅಂದರೆ, ಅದಕ್ಕೆ ನೀನೇ ಕಾರಣ ಅಮ್ಮು ಎಂದು ಅವರು ಬರೆದುಕೊಂಡಿದ್ದಾರೆ. ಕಿರುತೆರೆ ನಟಿಯಾಗಿ ಸಾಕಷ್ಟು ಫೇಮಸ್ ಆಗಿದ್ದ ಮಹಾಲಕ್ಷ್ಮಿ, ನಿರ್ಮಾಪಕ ರವೀಂದ್ರ ಅವರನ್ನು ಮದುವೆಯಾದಾಗ ಅಭಿಮಾನಿಗಳು ಅಚ್ಚರಿ ವ್ಯಕ್ತ ಪಡಿಸಿದ್ದಾರೆ.

    ಈ ಜೋಡಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ಮಿಸ್ ಮ್ಯಾಚ್ ಜೋಡಿ ಎಂದು ಟ್ರೆಂಡ್ ಕೂಡ ಆಗಿತ್ತು. ಕೆಲ ದಿನಗಳ ನಂತರ  ಈ ಜೋಡಿಯ ಹಿನ್ನೆಲೆಯನ್ನು ಕೆದಕಲಾಗಿತ್ತು. ಇಬ್ಬರಿಗೂ ಇದು ಎರಡನೇ ಮದುವೆ ಎಂದು ಹೇಳಲಾಗಿತ್ತು. ಏನೆಲ್ಲ ನೆಗೆಟಿವ್ ಕಾಮೆಂಟ್ ಬಂದರೂ, ಇಬ್ಬರೂ ನಗು ನಗುತ್ತಲೇ ಅವುಗಳನ್ನು ತಗೆದುಕೊಂಡರು. ಇದನ್ನೂ ಓದಿ: ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾ ಫಸ್ಟ್ ಲುಕ್ ರಿಲೀಸ್

    ಮದುವೆ ನಂತರದ ದಿನಗಳನ್ನು ರವೀಂದ್ರ ಆಗಾಗ್ಗೆ ಅಪ್ ಡೇಟ್ ಮಾಡುತ್ತಲೇ ಇರುತ್ತಾರೆ. ತಮ್ಮ ಬದುಕಿಗೆ ಮಹಾಲಕ್ಷ್ಮಿ ಬಂದ ನಂತರ ಸಾಕಷ್ಟು ಬದಲಾವಣೆಗಳನ್ನು ಕಂಡೆ ಎಂದು ಮೊನ್ನೆಯಷ್ಟೇ ಅವರು ಬರೆದುಕೊಂಡಿದ್ದರು. ಇದೀಗ ನೂರರ ಸಂಭ್ರಮಕ್ಕೂ ಅವರು ಭಾವುಕ ಪೋಸ್ಟ್ ಹಾಕಿದ್ದಾರೆ. ಅವರ ಬದುಕಿನಲ್ಲಿ ಉಲ್ಲಾಸ ಬರುವುದಕ್ಕೆ ಕಾರಣ ಪತ್ನಿ ಮಹಾಲಕ್ಷ್ಮಿ ಎಂದು ಅವರಿಗೆ ಕ್ರೆಡಿಟ್ ಕೊಟ್ಟಿದ್ದಾರೆ.

    ದುಡ್ಡಿಗಾಗಿ ಮಹಾಲಕ್ಷ್ಮಿ ಮದುವೆಯಾಗಿದ್ದಾರೆ ಎಂದು ಸುದ್ದಿ ಹರಿ ಬಿಡಲಾಯಿತು. ರವೀಂದ್ರ ಅವರ ಬಾಡಿ ಶೇಮಿಂಗ್ ಮಾಡಲಾಯಿತು. ಅಲ್ಲದೇ, ಇಬ್ಬರ ಬಗ್ಗೆಯೂ ಹಲವು ಗಾಸಿಪ್ ಗಳನ್ನು ಹಂಚಲಾಯಿತು. ಏನೇ ಮಾಡಿದರೂ, ಇಬ್ಬರೂ ಜೋಡಿಯೂ ಖುಷಿ ಖುಷಿಯಾಗಿ ತಗೆದುಕೊಂಡರು. ಹಲವರಿಗೆ ಉತ್ತರವನ್ನೂ ಕೊಟ್ಟರು. ಏನೇ ಆಗಲಿ ಬದುಕು ನಗುನಗುತ್ತಲೇ ಇರುಬೇಕು ಎನ್ನುವುದು ಇವರ ಫಿಲಾಸಫಿ.

    Live Tv
    [brid partner=56869869 player=32851 video=960834 autoplay=true]