Tag: Questions

  • ಕಾಂಗ್ರೆಸ್ ಟೀಕಿಸುತ್ತಿರುವ ಮೋದಿಗೆ ಪ್ರಶ್ನೆಗಳ ಸುರಿಮಳೆಗೈದ ದಿನೇಶ್ ಗುಂಡೂರಾವ್

    ಕಾಂಗ್ರೆಸ್ ಟೀಕಿಸುತ್ತಿರುವ ಮೋದಿಗೆ ಪ್ರಶ್ನೆಗಳ ಸುರಿಮಳೆಗೈದ ದಿನೇಶ್ ಗುಂಡೂರಾವ್

    ಬೆಂಗಳೂರು: ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ನೀಡುತ್ತಿರುವ ಬೆಂಬಲ, ನಿಮ್ಮ ಪಕ್ಷದ ತೇಜಸ್ವಿನಿ ಅನಂತ್‍ಕುಮಾರ್ ಅವರಿಗೆ ಯಾಕೆ ನೀಡುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರು ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಅವರ ಸಾಧನೆ ಏನು ಇಲ್ಲ. ಕೆಲವು ಪ್ರಮುಖ ವಿಚಾರಗಳ ಬಗ್ಗೆ ನಾನು ಮೋದಿ ಅವರನ್ನ ಕೇಳುತ್ತೇನೆ. ಅವರು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

    ಮೋದಿ ಅವರೇ ನೀವು ಮಂಡ್ಯ ಪಕ್ಷೇತರ ಅಭ್ಯರ್ಥಿ ಬಗ್ಗೆ ಬೆಂಬಲ ಸೂಚಿಸಿ ಭಾಷಣ ಮಾಡಿದ್ದೀರಾ, ಅಂಬರೀಶ್ ಅವರ ಹೆಸರು ಬಳಸಿ ಅಲ್ಲಿಯ ಅಭ್ಯರ್ಥಿ ಬಗ್ಗೆ ಬೆಂಬಲ ಸೂಚಿಸಿದ್ದೀರಾ. ಆದ್ರೆ ನಿಮ್ಮದೇ ಪಕ್ಷದವರಾದ ತೇಜಸ್ವಿನಿ ಅನಂತ್‍ಕುಮಾರ್ ಅವರನ್ನು ಯಾಕೆ ಮರೆತಿದ್ದೀರಿ? ಅನಂತ್‍ಕುಮಾರ್ ಅವರು ಬಿಜೆಪಿಯಲ್ಲಿ ನಿಮಗಿಂತಲೂ ದೊಡ್ಡ ನಾಯಕರಾಗಿದ್ದವರು. ಅವರ ಬಗ್ಗೆ ಎಲ್ಲೂ ಯಾಕೆ ಉಲ್ಲೇಖ, ಸ್ಮರಣೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿ ಕಿಡಿಕಾರಿದರು.

    ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 2ಜಿ ಹಗರಣ ನಡೆದಿದ್ದು ಎಂದು ಭಾಷಣ ಮಾಡಿದ್ರಿ. ಆದ್ರೆ ಬಳಿಕ ನಿಮ್ಮದೇ ಸರ್ಕಾರ ಇತ್ತು, ಆಗ ಯಾಕೆ ಅದು ಹಗರಣ ಅಂತ ಪ್ರೂ ಮಾಡಲಿಲ್ಲ? ನೀವು ಯಾಕೆ ರಫೇಲ್ ಹಗರಣ ಬಗ್ಗೆ ಮಾತನಾಡುತ್ತಿಲ್ಲ? ಹೃದಯಾಂತರಾಳದಲ್ಲಿ ನೋವು ಹುದುಗಿದೆ ಎಂದು ಭಾಷಣ ಮಾಡಿದ್ದೀರಿ. ಉಗ್ರರು ಪಠಾಣ್‍ಕೋಟ್ ಮೇಲೆ ನಡೆಸಿದ ದಾಳಿ ಸೇರಿ ಹಲವಾರು ದಾಳಿ ನಿಮ್ಮ ಆಡಳಿತದಲ್ಲಿ ಆಗಿದೆ. ನಿಮ್ಮ ಕಾಲದಲ್ಲಿ ನಡೆದ ದಾಳಿಯಲ್ಲಿ ಹೆಚ್ಚು ಸೈನಿಕರು ಸಾವನ್ನಪ್ಪಿದ್ದಾರೆ, ಅದರಲ್ಲೂ ಕಾಶ್ಮೀರದಲ್ಲಿ ನಾಗರಿಕರು ಸಾವನ್ನಪ್ಪಿದರು. ಬಿಜೆಪಿ ಅವಧಿಯಲ್ಲಿ 428 ಸೈನಿಕರು ಮೃತಪಟ್ಟಿದ್ದಾರೆ. ಜಮ್ಮು- ಕಾಶ್ಮೀರದಲ್ಲಿ ದಿನನಿತ್ಯ ದಾಳಿ ನಡೆಯುತ್ತಲೇ ಇದೆ. ಇದಕ್ಕೆಲ್ಲಾ ಮೋದಿ ಉತ್ತರಿಸಬೇಕು ಎಂದು ಆಗ್ರಹಿಸಿದರು.

    `ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ಅಂತ ಹೇಳುತ್ತಿರಿ ಆ ರೀತಿ ಯಾವುದು ಆಗಿಲ್ಲ. 28 ಕ್ಷೇತ್ರದಲ್ಲಿ ಬಿಜೆಪಿಯಿಂದ ಹಿಂದುಳಿದ ವರ್ಗಗಳಿಗೆ ಒಂದು ಸೀಟ್ ನೀಡಿಲ್ಲ. ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರನ್ನು ಬಿಜೆಪಿ ಕಡೆಗಣಿಸಿದ್ದು ಯಾಕೆ? `ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ಬರೀ ಭಾಷಣಕ್ಕೆ ಸೀಮಿತ. ನೀವು ವಿಷಯಾಧಾರಿತ ಭಾಷಣ ಯಾಕೆ ಮಾಡುತ್ತಿಲ್ಲ? ಬರೀ ಸುಳ್ಳು ಭಾಷಣಗಳನ್ನು ಮಾಡುತ್ತೀರಿ. ಪತ್ರಕರ್ತರನ್ನು ಉದ್ದೇಶಿಸಿ ನೀವು ಒಂದು ದಿನವೂ ಮಾತನಾಡಿಲ್ಲ. ನನ್ನ ಪ್ರಶ್ನೆಗಳಿಗೆ ಮೋದಿ ಅವರಿಗೆ ಉತ್ತರ ಕೊಡಲು ಆಗುವುದಿಲ್ಲ. ಆದರೂ ಜನರಿಗಾಗಿ ನಾನು ಮೋದಿಗೆ ಪ್ರಶ್ನೆ ಕೇಳ್ತಿದ್ದೇನೆ. ನಾಳೆ ಮೋದಿ ಈ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೆ ಅಂದುಕೊಂಡಿದ್ದೇನೆ ಎಂದು ಹೇಳಿದರು.

  • ಬಿಎಸ್‍ವೈ ಡೈರಿ ಪ್ರಕರಣ- ಕಾಂಗ್ರೆಸ್ ಮುಂದೆ 10 ಪ್ರಶ್ನೆಗಳನ್ನಿಟ್ಟ ಸಿ.ಟಿ.ರವಿ

    ಬಿಎಸ್‍ವೈ ಡೈರಿ ಪ್ರಕರಣ- ಕಾಂಗ್ರೆಸ್ ಮುಂದೆ 10 ಪ್ರಶ್ನೆಗಳನ್ನಿಟ್ಟ ಸಿ.ಟಿ.ರವಿ

    ಬೆಂಗಳೂರು: ಕಾಂಗ್ರೆಸ್ಸಿನಿಂದ ಬಿಜೆಪಿ ನಾಯಕ ಬಿ.ಎಸ್ ಯಡಿಯೂರಪ್ಪ ವಿರುದ್ಧ ಡೈರಿ ಆರೋಪ ವಿಚಾರ, ಕಾಂಗ್ರೆಸ್ಸಿಗೆ 10 ಪ್ರಶ್ನೆ ಕೇಳಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡೈರಿಯ ಪ್ರತಿ ಹಾಳೆಯಲ್ಲೂ ಯಾರೂ ಸಹಿ ಮಾಡಲ್ಲ. ಡೈರಿಯಲ್ಲಿ ಹಣ ಕೊಟ್ಟಿರೋದು ಬರೆದಿರೋರು, ತಮ್ಮಗೆ ಬಂದಿರೋ ಹಣದ ಬಗ್ಗೆಯೂ ಬರೆಯಬೇಕಲ್ಲವಾ? 2010 ಪೂರ್ವದಲ್ಲಿ ಯಡಿಯೂರಪ್ಪ ಅವರು ಸಂಖ್ಯಾಶಾಸ್ತ್ರದ ಪ್ರಕಾರ ‘ಯಡ್ಯೂರಪ್ಪ’ ಅಂತಾ ಸಹಿ ಮಾಡುತ್ತಿದ್ದರು. ಇದೊಂದು ಕಾಂಗ್ರೆಸ್ ಸಂಚು. ಚೌಕಿದಾರರು ವರ್ಸಸ್ ಚೋರ್‍ದಾರರ ನಡುವಿನ ಚುನಾವಣೆ ಇದು ಎಂದು ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:ಬಿಎಸ್ ವೈ ಡೈರಿ ಪ್ರಕರಣ- ಇದು ಜೋಕ್ ಆಫ್ ದಿ ಇಯರ್ ಅಂದ್ರು ಬಿ.ವೈ.ರಾಘವೇಂದ್ರ

    ಮೂರು ಬಾರಿ ಸಹಿ ಬದಲಾವಣೆ:
    ಮೊದಲು ಬಿಎಸ್‍ವೈ “ಯಡಿಯೂರಪ್ಪ ” ಎಂದು ಸಹಿ ಮಾಡುತ್ತಿದ್ದರು. ಬಳಿಕ ಸಂಖ್ಯಾಶಾಸ್ತ್ರದ ಪ್ರಕಾರ “ಯಡ್ಯೂರಪ್ಪ” ಎಂದು ಬದಲಾಯಿಸಿಕೊಂಡರು. ಆದರೇ ಇತ್ತೀಚಿಗೆ ಮತ್ತೆ “ಬಿ.ಎಸ್.ಯಡಿಯೂರಪ್ಪ” ಎಂದು ಮತ್ತೆ ಹಳೆಯ ಸಹಿಯನ್ನೇ ಮಾಡುತ್ತಿದ್ದಾರೆ ಎಂದು ಸಿ.ಟಿ ರವಿ ತಿಳಿಸಿದ್ದಾರೆ.  ಇದನ್ನೂ ಓದಿ:ಫೇಕ್ ಡೈರಿ ಮುದ್ರಿಸುವ ಅವಸರದಲ್ಲಿ ಕಾಂಗ್ರೆಸ್ ತಪ್ಪು ಮಾಡಿದೆ: ಬಿಎಸ್‍ವೈ ವ್ಯಂಗ್ಯ

    ಕಾಂಗ್ರೆಸ್ ಮುಂದಿಟ್ಟ ಪ್ರಶ್ನೆಗಳು:
    1. ಡೈರಿ ನಿಮಗೆ ಸಿಕ್ಕಿದ್ದು ಯಾವಾಗ?
    2. ಯಾರು ಈ ಡೈರಿಯನ್ನು ತಂದುಕೊಟ್ಟರು?
    3. ಡೈರಿಯನ್ನು ಎಲ್ಲಿ ಕೊಟ್ಟರು?
    4. ಒರಿಜಿನಲ್ ಡೈರಿ ಎಲ್ಲಿ?
    5. ಏಕೆ ಇದುವರೆಗೂ ಈ ಡೈರಿ ಆದರಿಸಿ ಲೋಕಾಯುಕ್ತ ಅಥವಾ ಎಸಿಬಿಗೆ ದೂರು ಕೊಡಲಿಲ್ಲ?


    6. 2013 ಮೇ ತಿಂಗಳಿನಿಂದ ನಿಮ್ಮದೇ ಪಕ್ಷದ ಆಡಳಿತ ಇದ್ದರೂ ಯಾವುದೇ ತನಿಖೆ ನಡೆಸದೇ ಇರಲು ಕಾರಣವೇನು?
    7. ಯಡಿಯೂರಪ್ಪನವರದ್ದೆಂದು ಹೇಳಲಾದ ಡೈರಿಯು ಡಿ.ಕೆ.ಶಿವಕುಮಾರ್ ಮನೆಯಲ್ಲಿ ಪತ್ತೆಯಾಗಿದ್ದು ಹೇಗೆ? ಇದಕ್ಕೆ ಡಿ.ಕೆ.ಶಿವಕುಮಾರ್ ಉತ್ತರಿಸಬೇಕಾಗಿದೆ.
    8. ಈ ಹಿಂದೆ ಪ್ರಕರಣವೊಂದರ ಬಗ್ಗೆ ಎಸಿಬಿಗೆ ದೂರು ನೀಡಿದ್ದ ಕಾಂಗ್ರೆಸ್ ಈಗ ಏಕೆ ದೂರು ನೀಡದಿರಲು ಕಾರಣವೇನು?
    9 ಎಂಎಲ್ ಸಿ ಗೋವಿಂದರಾಜುಮನೆಯಲ್ಲಿ ಐಟಿ ಅಧಿಕಾರಿಗಳು ವಶಪಡಿಸಿಕೊಂಡ ಡೈರಿಯಲ್ಲಿ ಕಾಂಗ್ರೆಸ್ ನಾಯಕರಿಗೆ ಹಣ ಸಂದಾಯವಾಗಿತ್ತು ಎಂದು ನಮೂದಾಗಿತ್ತು. ಆಗ ಯಡಿಯೂರಪ್ಪ ಡೈರಿ ಕಾಂಗ್ರೆಸ್ ಪ್ರಾಯೋಜಕತ್ವದಲ್ಲಿ ಸೃಷ್ಟಿಯಾಗಿದ್ದು ನಿಜವಲ್ಲವೇ?
    10. ಡೈರಿ ಪ್ರಕರಣ ಜನಲೋಕಪಾಲ್ ತನಿಖೆಗೆ ಸೂಕ್ತವಾದುದು ಎಂದು ಕಾಂಗ್ರೆಸ್ ಹೇಳುತ್ತಿದೆ. ಆರೋಪ ಮಾಡಿದವರು ದೂರು ನೀಡಬೇಕೆ ಅಥವಾ ದೂರಿಗೆ ಒಳಗಾದವರು ನೀಡಬೇಕೆ? ಎಂದು ಪ್ರಶ್ನಿಸಿದ್ದಾರೆ.

    ಬಿಎಸ್‍ವೈ ಡೈರಿ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಒಂದೆಡೆ ಕಾಂಗ್ರೆಸ್ ಬಿಎಸ್‍ವೈ ವಿರುದ್ಧ ಆರೋಪಿಸುತ್ತಿದ್ದಾರೆ. ಆದ್ರೆ ಇನ್ನೊಂದೆಡೆ ಬಿಜೆಪಿ ನಾಯಕರು ಬಿಎಸ್‍ವೈ ಪರ ನಿಂತು ಇದು ಕಾಂಗ್ರೆಸ್ ಅವರ ಸಂಚು ಎಂದು ಕಿಡಿಕಾರುತ್ತಿದ್ದಾರೆ.

  • ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರಿಸಿದ ಸ್ಟಾರ್ ನಟರು

    ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರಿಸಿದ ಸ್ಟಾರ್ ನಟರು

    ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ಗಳ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು, ಇಂದು ಅಧಿಕಾರಿಗಳು ಸ್ಟಾರ್ ನಟರ ವಿಚಾರಣೆ ನಡೆಸುತ್ತಿದ್ದಾರೆ. ಐಟಿ ಅಧಿಕಾರಿಗಳ ಪ್ರಶ್ನೆಗೆ ಸ್ಟಾರ್ ನಟರು ಖಡಕ್ ಆಗಿ ಉತ್ತರ ನೀಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಗುರುವಾರ ಐಟಿ ಅಧಿಕಾರಿಗಳು ಯಶ್, ಸುದೀಪ್, ಪುನೀತ್, ಶಿವಣ್ಣ ಹಾಗೂ ರಾಧಿಕಾ ಅವರ ಮನೆ ಮೇಲೆ ನಡೆಸಿದ್ದರು. ಈ ವೇಳೆ ಹಲವು ದಾಖಲೆಗಳು ಸಿಕ್ಕಿದ್ದು, ಸ್ಟಾರ್ ನಟರು ಸಾಕಷ್ಟು ವ್ಯವಹಾರಗಳನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ವ್ಯವಹಾರಗಳ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಎರಡನೇ ದಿನವೂ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಪ್ರಶ್ನೆ ಕೇಳುತ್ತಿದ್ದಾರೆ.

    * ಐಟಿ ಕೇಳಿದ ಪ್ರಶ್ನೆಗೆ ಯಶ್ ಉತ್ತರವೇನು….?
    ಐಟಿ ಪ್ರಶ್ನೆ: 70 ಕೋಟಿ ವೆಚ್ಚದಲ್ಲಿ ಕೆಜಿಎಫ್ ನಿರ್ಮಿಸಲಾಗಿದೆ. ಹೂಡಿಕೆ ಬಗ್ಗೆ ನಿಮಗೇನು ಗೊತ್ತು?
    ಯಶ್ ಉತ್ತರ: ಹಣಕಾಸಿನ ವ್ಯವಹಾರ ಬಗ್ಗೆ ನನಗೇನೂ ಗೊತ್ತಿಲ್ಲ. ನಿರ್ಮಾಪಕರನ್ನೇ ಕೇಳಬೇಕು
    ಐಟಿ: ನಿಮಗೆ ಸ್ವಲ್ಪನೂ ಮಾಹಿತಿ ಇಲ್ಲದೆ ಬಹುಕೋಟಿ ಸಿನಿಮಾದಲ್ಲಿ ನಟಿಸಿದ್ರಾ?
    ಯಶ್: ನಿರ್ಮಾಪಕರ ವ್ಯವಹಾರ ಬಗ್ಗೆ ನನಗೇನೂ ತಿಳಿದಿಲ್ಲ. ನಾನು ಒಬ್ಬ ನಟನಷ್ಟೇ.
    ಐಟಿ: ನೀವು ಕನ್ನಡದ ಸೂಪರ್ ಸ್ಟಾರ್. ನಿಮ್ಮ ಸಂಭಾವನೆ ಎಷ್ಟು?
    ಯಶ್: ಒಂದೊಂದು ಸಿನಿಮಾಕ್ಕೆ ಒಂದೊಂದು ಸಂಭಾವನೆ ಇರುತ್ತೆ. ಅದು ಬದಲಾಗುತ್ತಿರುತ್ತದೆ.
    ಐಟಿ: ನಿಮ್ಮ ಹಣಕಾಸಿನ ವ್ಯವಹಾರದ ಬಗ್ಗೆ ಮಾಹಿತಿ ನೀಡಬಹುದೇ?
    ಯಶ್: ನನಗೆ 40 ಕೋಟಿ ಸಾಲವಿದೆ. 2 ಬ್ಯಾಂಕ್‍ನಲ್ಲಿ ಸಾಲ ಮಾಡಿದ್ದೇನೆ.
    ಐಟಿ: ನೀವು ಹೊಸ ಮನೆ ಖರೀದಿ ಮಾಡಿದ್ದೀರಿ. ಇದರ ಬಗ್ಗೆ ದಾಖಲೆ ಕೊಡಬಹುದಾ?
    ಯಶ್: ಸಾಲ ಪಡೆದು ಮನೆ ಖರೀದಿಸಲಾಗಿದೆ. ಇದರ ಬಗ್ಗೆ ನಮ್ಮ ಅಕೌಂಟೆಂಟ್ ಮಾಹಿತಿ ನೀಡಲಿದ್ದಾರೆ.

    * ಐಟಿ ಕೇಳಿದ ಪ್ರಶ್ನೆಗೆ ಪುನೀತ್ ಉತ್ತರವೇನು….?
    ಐಟಿ ಪ್ರಶ್ನೆ: ನೀವು ಬಹು ಬೇಡಿಕೆಯ ನಟ. ನಿಮ್ಮ ಸಿನಿಮಾಗಳ ಸಂಭಾವನೆ ಎಷ್ಟು?
    ಪುನೀತ್ ಉತ್ತರ: ಒಂದೊಂದು ಸಿನಿಮಾಗಳಿಗೆ ಒಂದು ಸಂಭಾವನೆ ಇದೆ.
    ಐಟಿ: ನಿಮ್ಮ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಬಹುದಾ?
    ಪುನೀತ್: ಎಲ್ಲದಕ್ಕೂ ರಸೀತಿ ಇದೆ. ಸ್ವಲ್ಪ ಟೈಂ ಬೇಕು.
    ಐಟಿ: ನೀವು ಕೋರಮಂಗಲದಲ್ಲಿ ಆಸ್ತಿ-ಪಾಸ್ತಿ ಹೊಂದಿದ್ದೀರಿ. ಇದರ ವಿವರಣೆ ನೀಡಿ.
    ಪುನೀತ್: ಎಲ್ಲದಕ್ಕೂ ದಾಖಲಾತಿಗಳಿವೆ. ನನ್ನ ಅಕೌಂಟೆಂಟ್ ಮಾಹಿತಿ ನೀಡ್ತಾರೆ.
    ಐಟಿ: ಇತ್ತೀಚೆಗೆ ಹೊಸ ಪ್ರಾಜೆಕ್ಟ್‍ಗಳನ್ನು ಆರಂಭಿಸಿದ್ದೀರಿ. ಏನದು?
    ಪುನೀತ್: ಪಿಆರ್ ಕೆ ಆಡಿಯೋ ಹಾಗೂ ಪಿಆರ್ ಕೆ ಪ್ರೊಡಕ್ಷನ್ ಆರಂಭಿಸಿದ್ದೇವೆ.
    ಐಟಿ: ದೊಡ್ಡ ದೊಡ್ಡ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದೀರಾ. ಅದರ ಮಾಹಿತಿ ಕೊಡಿ.
    ಪುನೀತ್: ದೊಡ್ಡ ವ್ಯವಹಾರ ಆಗುತ್ತಿರೋದ್ರಿಂದ ಮಾಹಿತಿಗೆ ಕಾಲಾವಕಾಶ ಬೇಕು.

    * ಐಟಿ ಕೇಳಿದ ಪ್ರಶ್ನೆಗೆ ಸುದೀಪ್ ಉತ್ತರವೇನು….?
    ಐಟಿ ಪ್ರಶ್ನೆ: ನಿಮ್ಮ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿ.
    ಸುದೀಪ್ ಉತ್ತರ: ನನಗೆ ಸ್ವಲ್ಪ ಕಾಲಾವಕಾಶ ಬೇಕಾಗಿದೆ.
    ಐಟಿ: ನಿಮ್ಮಲ್ಲಿ ಐಷಾರಾಮಿ ಕಾರುಗಳಿವೆ. ಅದರ ಮಾಹಿತಿ ನೀಡಿ.
    ಸುದೀಪ್: ಹೊಸದಾಗಿ ಯಾವುದು ಖರೀದಿಸಿಲ್ಲ. ಇವೆಲ್ಲಾ ಹಳೆಯದ್ದು
    ಐಟಿ: ನೀವು ಬೆಳ್ಳಿತೆರೆ ಅಲ್ಲದೆ, ಕಿರುತೆರೆಯಲ್ಲೂ ನಟನೆ ಮಾಡುತ್ತಿದ್ದೀರಿ. ಎಷ್ಟು ಸಂಭಾವನೆ ಪಡೆಯುತ್ತೀರಿ?
    ಸುದೀಪ್: ಸಂಭಾವನೆ, ವ್ಯವಹಾರ ಬಗ್ಗೆ ನಮ್ಮ ಅಕೌಂಟೆಂಟ್ ಮಾಹಿತಿ ಕೊಡಲಿದ್ದಾರೆ
    ಐಟಿ: ಚಿತ್ರರಂಗವಲ್ಲದೆ ಇತರ ವ್ಯವಹಾರಗಳ ಬಗ್ಗೆ ಮಾಹಿತಿ ಕೊಡಿ.
    ಸುದೀಪ್: ಎಲ್ಲವನ್ನೂ ಲಿಖಿತ ರೂಪದಲ್ಲಿ ನಮ್ಮ ಅಕೌಂಟೆಂಟ್ ನೀಡಲಿದ್ದಾರೆ.

    * ಐಟಿ ಕೇಳಿದ ಪ್ರಶ್ನೆಗೆ ಶಿವಣ್ಣ ಉತ್ತರವೇನು….?
    ಐಟಿ ಪ್ರಶ್ನೆ: ಮೋಸ್ಟ್ ಬ್ಯುಸಿ ನಟ ನೀವು. ವರ್ಷಕ್ಕೆ ಎಷ್ಟು ಸಿನಿಮಾಗಳ ನಟಿಸುತ್ತೀರಾ?
    ಶಿವಣ್ಣ ಉತ್ತರ: ವರ್ಷಕ್ಕೆ 7ರಿಂದ 8 ಸಿನಿಮಾಗಳಲ್ಲಿ ನಟಿಸುತ್ತೇನೆ.
    ಐಟಿ: ನಿಮ್ಮ ಪುತ್ರಿಯ ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್ ಇದೆ. ಇದರ ಮಾಹಿತಿ ಕೊಡಿ.
    ಶಿವಣ್ಣ: ನಮ್ಮ ಅಕೌಂಟೆಂಟ್ ಸಂಪರ್ಕಿಸಿ ಕೊಡುತ್ತೇನೆ.
    ಐಟಿ: ನೀವು ಸಿನಿಮಾವಲ್ಲದೆ, ಸೀರಿಯಲ್ ನಿರ್ಮಾಣದಲ್ಲಿ ತೊಡಗಿದ್ದೀರಾ?
    ಶಿವಣ್ಣ: ಹೌದು, ಅದರ ವ್ಯವಹಾರವನ್ನೆಲ್ಲಾ ಪತ್ನಿ ನೋಡಿಕೊಳ್ಳುತ್ತಾರೆ.
    ಐಟಿ: ರಿಯಲ್ ಎಸ್ಟೇಟ್‍ನಲ್ಲಿ ಎಷ್ಟು ಹೂಡಿಕೆ ಮಾಡಿದ್ದೀರಾ?
    ಶಿವಣ್ಣ: ಹೂಡಿಕೆಯ ಬಗ್ಗೆ ನನ್ನ ಅಕೌಂಟೆಂಟ್ ಮಾಹಿತಿ ಕೊಡುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಿಕೆಶಿಗೆ ಸಂಕಷ್ಟದ ಮೇಲೆ ಸಂಕಷ್ಟ- ಪವರ್ ಮಿನಿಸ್ಟರ್‍ಗೆ ಐಟಿ ಅಧಿಕಾರಿಗಳು ಕೇಳಿದ ಪ್ರಶ್ನಾವಳಿ ಇಲ್ಲಿದೆ

    ಡಿಕೆಶಿಗೆ ಸಂಕಷ್ಟದ ಮೇಲೆ ಸಂಕಷ್ಟ- ಪವರ್ ಮಿನಿಸ್ಟರ್‍ಗೆ ಐಟಿ ಅಧಿಕಾರಿಗಳು ಕೇಳಿದ ಪ್ರಶ್ನಾವಳಿ ಇಲ್ಲಿದೆ

    – ಇಸ್ಪೀಟ್ ಆಟದ ಬಗ್ಗೆಯೂ ಬರೆದಿದ್ದರಂತೆ ಪವರ್ ಮಿನಿಸ್ಟರ್
    – ಲಕ್ಷ್ಮಿ ಹೆಬ್ಬಾಳ್ಕರ್ ಜೊತೆಗಿನ ವ್ಯವಹಾರದ ಬಗ್ಗೆಯೂ ಪ್ರಶ್ನಿಸಿದ ಐಟಿ

    ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್‍ಗೆ ಆದಾಯ ತೆರಿಗೆ ಇಲಾಖೆ ಆಸ್ತಿ, ವ್ಯವಹಾರದ ಬಗ್ಗೆ ಕೇಳಿರೋ ಪ್ರಶ್ನಾವಳಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಲಕ್ಷ್ಮಿ ಹೆಬ್ಬಾಳ್ಕರ್ ಜೊತೆಗಿನ ವ್ಯವಹಾರದ ಬಗ್ಗೆಯೂ ಐಟಿ ಕೆದಕಿದ್ದು, ಈ ಬಗೆಗಿನ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಐಟಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳೇನು? ಅದಕ್ಕೆ ಡಿಕೆಶಿ ಉತ್ತರಿಸಿದ್ದೇನು ಎಂಬ ವಿವರ ಇಲ್ಲಿದೆ.

    1 ಐಟಿ ಪ್ರಶ್ನೆ: ನಿಮ್ಮ ಬಗ್ಗೆ ಪರಿಚಯಿಸಿಕೊಳ್ಳಿ.
    ಡಿಕೆಶಿ ಉತ್ತರ: ನಾನು ಡಿಕೆ ಶಿವಕುಮಾರ್, 56 ವರ್ಷ, ಕೆಂಪೇಗೌಡ ನಮ್ಮ ತಂದೆ #252, 18ನೇ ಮೇನ್ ಸದಾಶಿವ ನಗರ. ನಾನು ಪ್ರಸ್ತುತ ಸರ್ಕಾರದಲ್ಲಿ ಇಂಧನ ಸಚಿವನಾಗಿ ಕೆಲಸ ಮಾಡ್ತಾ ಇದ್ದೀನಿ. ನನ್ನ ಸ್ಟೇಟ್‍ಮೆಂಟ್ ಇಂಗ್ಲೀಷ್‍ನಲ್ಲಿ ರೆಕಾರ್ಡ್ ಮಾಡಲಿಕ್ಕೆ ನನ್ನದೇನು ಅಭ್ಯಂತರ ಇಲ್ಲ. ನಾನು ಎಂಎ ಪದವೀಧರ.

    2 ಐಟಿ ಪ್ರಶ್ನೆ: ಸಂವಿಧಾನದ ಮೇಲೆ ನಂಬಿಕೆ ಇಟ್ಟು ಹೇಳಿ, ನೀವು ಕೊಡುವ ಎಲ್ಲಾ ಹೇಳಿಕೆಗಳು ಸತ್ಯವಾಗಿದೆ ಎಂದು ಈ ಮೂಲಕ ದೃಢೀಕರಿಸಿ. ತಪ್ಪೇನಾದ್ರೂ ಹೇಳಿದ್ರೆ ದಂಡ ತೆರಬೇಕಾಗುತ್ತೆ ಅಂತ ನಿಮಗೆ ತಿಳಿದಿದೆ ಅಲ್ವಾ?
    ಡಿಕೆಶಿ ಉತ್ತರ: ಹೌದು, ನನಗೆ ಅದರ ಅರಿವಿದೆ

    3 ಐಟಿ ಪ್ರಶ್ನೆ: ತಪ್ಪೇನಾದ್ರೂ ಹೇಳಿದ್ರೆ ದಂಡ ತೆರಬೇಕಾಗುತ್ತೆ ಅಂತ ನಿಮಗೆ ತಿಳಿದಿದೆ ಅಲ್ವಾ. ಯಾವ್ಯಾವ ಸೆಕ್ಷನ್‍ನಲ್ಲಿ ಎಷ್ಟು ಶಿಕ್ಷೆ ಅನ್ನೋದು ಗೊತ್ತಿದೆ ಅಲ್ವಾ?
    ಡಿಕೆಶಿ ಉತ್ತರ: ನನಗೆ ಅದರ ಅರಿವಿದೆ. ನಾನು ಈ ಮೂಲಕ ದೃಢೀಕರಿಸುತ್ತಾ ಇದ್ದೇನೆ, ತಪ್ಪೇನಾದ್ರೂ ಹೇಳಿದ್ರೆ ಅದರ ದಂಡ ತೆರುತ್ತೇನೆ.

    4 ಐಟಿ ಪ್ರಶ್ನೆ: ನಿಮ್ಮ ಕುಟುಂಬವನ್ನು ಪರಿಚಯಿಸಿ. ಮತ್ತು ಕುಟುಂಬ ಸದಸ್ಯರ ಆದಾಯದ ಮೂಲ ತಿಳಿಸಿ.
    ಡಿಕೆಶಿ ಉತ್ತರ: ನನ್ನ ಪೋಷಕರು ಕೆಂಪೇಗೌಡ ನನ್ನ ತಂದೆ, ಅವರು ನಿಧನರಾಗಿದ್ದಾರೆ. ತಾಯಿ ಗೌರಮ್ಮ, ನಾವು ಇಬ್ಬರು ಗಂಡು ಮಕ್ಕಳು. ನನ್ನ ತಮ್ಮನ ಹೆಸರು ಡಿ.ಕೆ ಸುರೇಶ್, ಪ್ರಸ್ತುತ ಸಂಸದರಾಗಿದ್ದಾರೆ. ನನಗೆ ಒಬ್ಬರು ಚಿಕ್ಕ ತಂಗಿ ಇದ್ದಾರೆ. ಅವರು ಮದುವೆಯಾಗಿದ್ದು, ಗೃಹಿಣಿಯಾಗಿದ್ದಾರೆ. ನನ್ನ ಹೆಂಡತಿಯ ಹೆಸರು ಉಷಾ, ಮಗಳ ಹೆಸರು ಐಶ್ವರ್ಯ, ಎಂಜಿನಿಯರಿಂಗ್ ಮುಗಿಸಿದ್ದಾಳೆ. ಆಭರಣ ಎಂಬ ಮಗಳು ಇದ್ದಾಳೆ. ಹನ್ನೊಂದನೇ ತರಗತಿ ಓದುತ್ತಿದ್ದಾಳೆ. ನನ್ನ ಮಗ ಆಕಾಶ್, ಒಂಬತ್ತನೇ ತರಗತಿಯಲ್ಲಿ ಓದುತ್ತಾ ಇದ್ದಾನೆ. ನನ್ನ ಹೆಂಡತಿ ಉಷಾ ಆದಾಯ ತೆರಿಗೆಯನ್ನು ಪ್ರತಿ ವರ್ಷ ಪಾವತಿ ಮಾಡ್ತಾ ಇದ್ದಾಳೆ. ನನ್ನ ಹೆಂಡತಿ ಮತ್ತು ನನ್ನ ಆದಾಯದ ಮೂಲದ ಮಾಹಿತಿಗಳನ್ನು ಈಗಾಗಲೇ ನಿಮಗೆ ನೀಡಿದ್ದೇನೆ. ನನ್ನ ಮಗಳು ಐಶ್ವರ್ಯ ಪ್ರತ್ಯೇಕ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡ್ತಾ ಇದ್ದಾಳೆ. 2016 -17ರಲ್ಲಿ ಆದಾಯ ತೆರಿಗೆ ಪಾವತಿ ಮಾಡಿದ್ದಾಳೆ. ಕೆಲವೊಂದು ರಿಯಲ್ ಎಸ್ಟೇಟ್‍ನಲ್ಲಿ ಶೇರುಗಳನ್ನು ಖರೀದಿ ಮಾಡಿದ್ದಾಳೆ. ಅದರ ಬಗ್ಗೆಯೂ ನಿಮಗೆ ಮಾಹಿತಿ ನೀಡಲಾಗಿದೆ. ಇನ್ನು ಇಬ್ಬರು ಮಕ್ಕಳು ಅಪ್ರಾಪ್ತರಾಗಿ ಇರೋದ್ರಿಂದ ಯಾವುದೇ ಆದಾಯದ ಮೂಲಗಳು ಇಲ್ಲ.

    5 ಐಟಿ ಪ್ರಶ್ನೆ: ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರು, ಆದಾಯ ತೆರಿಗೆಯನ್ನು ಪ್ರತಿ ವರ್ಷ ಪಾವತಿ ಮಾಡ್ತಾ ಇದ್ದೀರಾ. ಎಲ್ಲದರ ಬಗ್ಗೆ ಮಾಹಿತಿಯನ್ನು ನೀಡಿ. ಮತ್ತು ನಿಮ್ಮ ಪಾನ್‍ಕಾರ್ಡ್ ಮಾಹಿತಿ ನೀಡಿ
    ಡಿಕೆಶಿ ಉತ್ತರ: ಹೌದು, ನಾವು ಪ್ರತಿವರ್ಷ ಆದಾಯ ತೆರಿಗೆ ಪಾವತಿ ಮಾಡ್ತಾ ಇದ್ದೀವಿ. ನಾನು ಪಾವತಿ ಮಾಡುತ್ತಾ ಇರೋ ಪಾನ್ ಸಂಖ್ಯೆ ****6ಎಫ್

    6 ಐಟಿ ಪ್ರಶ್ನೆ: ನಿಮ್ಮ ಮತ್ತು ನಿಮ್ಮ ಕುಟುಂಬ ಹೊಂದಿರುವ ಬ್ಯಾಂಕ್ ಅಕೌಂಟ್ ಮಾಹಿತಿಯನ್ನು ತಿಳಿಸಿ.
    ಡಿಕೆಶಿ ಉತ್ತರ: ನನಗೆ ಸದ್ಯಕ್ಕೆ ಬ್ಯಾಂಕ್ ಅಕೌಂಟ್‍ಗಳ ಮಾಹಿತಿ ನೆನಪಿಗೆ ಬರ್ತಿಲ್ಲ. ಸಕಾಲದಲ್ಲಿ ಎಲ್ಲದರ ಬಗ್ಗೆ ಮಾಹಿತಿ ನೀಡ್ತೀನಿ.

    7 ಐಟಿ ಪ್ರಶ್ನೆ: ನಿಮ್ಮ ಮತ್ತು ನಿಮ್ಮ ಕುಟುಂಬದ ಸದಸ್ಯರ ಹೆಸರಲ್ಲಿ ಯಾವುದಾದರು ಬ್ಯಾಂಕ್ ಲಾಕರ್‍ಗಳು ಇದ್ದಾವಾ? ಇದ್ರೆ ಅದರ ಬಗ್ಗೆ ಮಾಹಿತಿ ನೀಡಿ.
    ಡಿಕೆಶಿ ಉತ್ತರ: ನನ್ನದಾಗಲಿ ಮತ್ತು ನನ್ನ ಕುಟುಂಬದ್ದಾಗಲೀ ಯಾವುದೇ ಬ್ಯಾಂಕ್ ಲಾಕರ್‍ಗಳು ಇಲ್ಲ.

    8 ಐಟಿ ಪ್ರಶ್ನೆ: ನೀವು ಮತ್ತು ನಿಮ್ಮ ಭಾಗಿದಾರರಾಗಿರುವ ಕಂಪನಿಗಳಲ್ಲಿ ನಿಮ್ಮ ಪಾತ್ರ ಏನು? ಯಾವ ರೀತಿ ಹುದ್ದೆಯನ್ನು ಅಲಂಕರಿಸಿದ್ದೀರಿ? ಅದರ ಬಗ್ಗೆ ಹೇಳಿ
    ಡಿಕೆಶಿ ಉತ್ತರ: ನಾನು ಕಂಪನಿಗಳ ಆದಾಯ ತೆರಿಗೆಯನ್ನು ಪ್ರತಿ ವರ್ಷ ಪಾವತಿ ಮಾಡ್ತಾ ಇದ್ದೀನಿ. ಅದನ್ನೆಲ್ಲಾ ಕೊಡ್ತೀನಿ, ಆಗ ಎಲ್ಲಾ ಮಾಹಿತಿ ನಿಮಗೆ ತಿಳಿಯುತ್ತೆ.

    9. ಐಟಿ ಪ್ರಶ್ನೆ: ನಿಮ್ಮ ಕಂಪನಿಗಳು ಯಾವ ರೀತಿ ಕೆಲಸ ಮಾಡುತ್ತೆ. ಅದು ಏನೇನು ಪಾತ್ರ ನಿರ್ವಹಣೆ ಮಾಡುತ್ತೆ ಮಾಹಿತಿಯನ್ನು ನೀಡಿ.
    ಡಿಕೆಶಿ ಉತ್ತರ: ನಾನು ಈಗಾಗಲೇ ಹೇಳಿದಂತೆ, ನಾನು ಯಾವುದರ ಬಗ್ಗೆಯೂ ಮುಚ್ಚಿಡೋದಿಲ್ಲ. ಎಲ್ಲದರ ಬಗ್ಗೆಯೂ ನಿಮಗೆ ಮಾಹಿತಿಯನ್ನು ನೀಡುತ್ತೇನೆ.

    10 ಐಟಿ ಪ್ರಶ್ನೆ: ನಾನು ಈಗಾಗಲೇ ಹೇಳಿದಂತೆ ತಪ್ಪು ಮಾಹಿತಿ ನೀಡಿದ್ರೆ ಯಾವ ಶಿಕ್ಷೆಯಾಗುತ್ತೆ ಅಂತ ನಿಮಗೆ ಅರಿವಿದೆ ಅಲ್ವಾ? ಇಲ್ಲಿವರೆಗೂ ನೀಡಿದ ಮಾಹಿತಿ ಸರಿಯಿದೆ ಎಂದು ದೃಢಿಕರಿಸ್ತೀರಾ?
    ಡಿಕೆಶಿ ಉತ್ತರ: ಹೌದು, ನಾನು ಇದುವರೆಗೂ ಕೂಡ ಸತ್ಯವನ್ನೇ ಹೇಳಿದ್ದೇನೆ. ಶಿಕ್ಷೆಯ ಬಗ್ಗೆಯೂ ಅರಿವಿದೆ.

    11 ಐಟಿ ಪ್ರಶ್ನೆ: ನಿಮ್ಮ ಮತ್ತು ನಿಮ್ಮ ಕುಟುಂಬದ ಚರಾಸ್ತಿಯ ಬಗ್ಗೆ ಮಾಹಿತಿಯನ್ನು ನೀಡಿ.
    ಡಿಕೆಶಿ ಉತ್ತರ: ಸದ್ಯಕ್ಕೆ ಯಾವುದರ ಬಗ್ಗೆಯೂ ನೆನಪಿಲ್ಲ. ಕ್ರಮೇಣ ನಿಮಗೆ ಎಲ್ಲದರ ಬಗ್ಗೆ ಮಾಹಿತಿಯನ್ನು ನೀಡ್ತೀನಿ.

    12 ಐಟಿ ಪ್ರಶ್ನೆ: ನಿಮ್ಮ ಮತ್ತು ನಿಮ್ಮ ಕುಟುಂಬದ ಸ್ಥಿರಾಸ್ತಿಯ ಬಗ್ಗೆ ಮಾಹಿತಿಯನ್ನು ನೀಡಿ.
    ಡಿಕೆಶಿ ಉತ್ತರ: ಸದ್ಯಕ್ಕೆ ಯಾವುದರ ಬಗ್ಗೆಯೂ ನೆನಪಿಲ್ಲ, ಕ್ರಮೇಣ ನಿಮಗೆ ಎಲ್ಲದರ ಬಗ್ಗೆ ಮಾಹಿತಿಯನ್ನು ನೀಡುತ್ತೇನೆ. ಅದರ ಪಟ್ಟಿ ದೊಡ್ಡದಾಗಿ ಇರೋದ್ರಿಂದ ಸದ್ಯದಲ್ಲಿ ಮಾಹಿತಿ ನೀಡುತ್ತೇನೆ.

    13 ಐಟಿ ಪ್ರಶ್ನೆ: ನೀವು ಯಾವ ರೀತಿಯ ವ್ಯವಹಾರವನ್ನು ಮಾಡ್ತಿರಾ. ನಿಮಗೆ ಆದಾಯದ ಮೂಲ ಯಾವುದು ಸ್ಪಷ್ಟ ಮಾಹಿತಿಯನ್ನು ನೀಡಿ.
    ಡಿಕೆಶಿ ಉತ್ತರ: ನಾನು ರೈತ, ನನ್ನದೇ ಆದಂತಹ ರಿಯಲ್ ಎಸ್ಟೇಟ್ ವ್ಯವಹಾರ ಇದೆ. ಬೆಂಗಳೂರಿನಲ್ಲಿ ನನ್ನದೇ ಆದಂತಹ ಕೆಲವು ಆಸ್ತಿ- ಪಾಸ್ತಿಯಿದೆ. ಗ್ರಾನೈಟ್ ಕ್ವಾರಿಗಳು ಇವೆ. ನನ್ನ ಆದಾಯ ಈ ಎರಡೂ ವ್ಯವಹಾರಗಳಿಂದ ಪಡೆಯುತ್ತಿದ್ದೇನೆ. ಇವಾಗಿನ ದೊಡ್ಡ ಆದಾಯ ಅಂದರೆ ಜಂಟಿ ಪಾಲುದಾರಿಕೆ ಹೊಂದಿದ್ದೇನೆ. ಆ ಆದಾಯ ಬರಬೇಕಿದೆ, ಇನ್ನು ಸಹ ಅದರ ಆದಾಯ ನನ್ನ ಕೈಸೇರಿಲ್ಲ.

    14 ಐಟಿ ಪ್ರಶ್ನೆ: ನಿಮ್ಮ ನ್ಯಾಷನಲ್ ಎಜುಕೇಷನ್ ಟ್ರಸ್ಟ್ ಮತ್ತು ಅಪೋಲೋ ಎಜುಕೇಷನ್ ಟ್ರಸ್ಟ್ ಬಗ್ಗೆ ವಿವರಣೆ ನೀಡಿ.
    ಡಿಕೆಶಿ ಉತ್ತರ: ನಾನು ಎರಡೂ ಸಂಸ್ಥೆಗಳಲ್ಲಿ ಛೇರಮನ್, ನನ್ನ ಹೆಸರಿನಲ್ಲಿ ಇನ್ನೊಂದು ಡಿಕೆಎಸ್ ಎಂಬ ಚಾರಿಟಬಲ್ ಟ್ರಸ್ಟ್ ಇದೆ. ಎನ್‍ಇಎಫ್ ಟ್ರಸ್ಟ್‍ನಲ್ಲಿ ಎಂಜಿನಿಯರಿಂಗ್ ಕಾಲೇಜ್, ನರ್ಸಿಂಗ್ ಕಾಲೇಜ್ ಎಂಬಿಎ ಸ್ಕೂಲ್‍ಗಳು ಇವೆ. ಅಪೋಲೋ ಎಜುಕೇಷನ್ ಟ್ರಸ್ಟ್‍ನಲ್ಲಿ ಐಸಿಎಸ್‍ಸಿ ಸ್ಕೂಲ್ ಇದೆ. ನಾನು ಬಿಟಿಎಲ್ ಎಜುಕೇಷನ್ ಟ್ರಸ್ಟ್‍ನಲ್ಲಿ ಕಾರ್ಯಾಧ್ಯಕ್ಷನಾಗಿದ್ದೇನೆ ಮತ್ತು ಜ್ಞಾನವಿಕಾಸ್ ಎಜುಕೇಷನ್ ಸೊಸೈಟಿಯಲ್ಲಿ ನಾನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ.

    15 ಐಟಿ ಪ್ರಶ್ನೆ: ನಿಮಗೆ ಬರುವ ಆದಾಯದ ವ್ಯವಹಾರಗಳ ಬಗ್ಗೆ ಮಾಹಿತಿಯನ್ನು ನೀಡಿ.
    ಡಿಕೆಶಿ ಉತ್ತರ: ಅವುಗಳ ಬಗ್ಗೆ ನನ್ನ ಆಡಿಟರ್ ಜೊತೆ ಮಾತನಾಡಿ ನಿಮಗೆ ಎಲ್ಲಾ ಮಾಹಿತಿಗಳನ್ನು ನೀಡುತ್ತೇನೆ.

    16 ಐಟಿ ಪ್ರಶ್ನೆ: ನೀವು ಎಲ್ಲಿಂದಾದರೂ ಸಾಲವನ್ನು ಪಡೆದುಕೊಂಡಿದ್ದೀರಾ ಎಂಬ ಮಾಹಿತಿಯನ್ನು ನೀಡಿ?
    ಡಿಕೆಶಿ ಉತ್ತರ: ಅವುಗಳ ಬಗ್ಗೆ ನನ್ನ ಆಡಿಟರ್ ಜೊತೆ ಮಾತನಾಡಿ ನಿಮಗೆ ಎಲ್ಲಾ ಮಾಹಿತಿಗಳನ್ನು ನೀಡುತ್ತೇನೆ.

    17 ಐಟಿ ಪ್ರಶ್ನೆ: ನಿಮ್ಮ ಮನೆಯಲ್ಲಿ ದಾಳಿ ನಡೆಸಿದಾಗ 1 ಲಕ್ಷ 88 ಸಾವಿರ ಹಣ ಸಿಕ್ಕಿದೆ. ಅದನ್ನು ನಿಮ್ಮ ಪತ್ನಿ ಉಷಾ ಅವರ ಉಪಸ್ಥಿತಿಯಲ್ಲಿ ಸೀಜ್ ಮಾಡಿದ್ದೇವೆ ದೃಢೀಕರಿಸಿ.
    ಡಿಕೆಶಿ ಉತ್ತರ: ಹೌದು, ನನಗೆ ಮಾಹಿತಿ ಇದೆ.

    18 ಐಟಿ ಪ್ರಶ್ನೆ: ನಿಮ್ಮ ಮನೆಯಲ್ಲಿ ದಾಳಿ ನಡೆಸಿದಾಗ ಹಣ ಸಿಕ್ಕಿದೆ ಜೊತೆಗೆ ಚಿನ್ನಾಭರಣಗಳು ವಜ್ರದ ಆಭರಣಗಳು ಸಿಕ್ಕಿದೆ. ಅದನ್ನು ನಿಮ್ಮ ಪತ್ನಿ ಉಷಾ ಅವರ ಉಪಸ್ಥಿತಿಯಲ್ಲಿ ಸೀಜ್ ಮಾಡಿದ್ದೇವೆ ದೃಢೀಕರಿಸಿ.
    ಡಿಕೆಶಿ ಉತ್ತರ: ಹೌದು, ನನಗೆ ಮಾಹಿತಿ ಇದೆ. ಅದನ್ನು ನೀವು ವಾಪಸ್ಸು ನೀಡಿದ್ದೀರಿ.

    19 ಐಟಿ ಪ್ರಶ್ನೆ: ನೀವು ಮನೆಯನ್ನು ಹೊರತುಪಡಿಸಿ ಬೇರೆ ಎಲ್ಲಾದರೂ ಚಿನ್ನಾಭರಣ ಇಟ್ಟಿದ್ದೀರಾ?
    ಡಿಕೆಶಿ ಉತ್ತರ: ನನಗೆ ಮಾಹಿತಿ ಸದ್ಯಕ್ಕೆ ನೆನಪಿಲ್ಲ.

    20 ಐಟಿ ಪ್ರಶ್ನೆ: ಈಗಲ್‍ಟನ್ ರೆಸಾರ್ಟ್‍ನ ಮೇಲೆ ದಾಳಿ ನಡೆಸಿದಾಗ ನೀವು ಇದ್ದಂತಹ ರೂಂ ನಂಬರ್ 216ರಲ್ಲಿ ಸಿಕ್ಕಂತಹ ಲೂಸ್ ಶೀಟ್‍ಗಳನ್ನು ತೋರಿಸ್ತಾ ಇದ್ದೇನೆ ಅದರ ಬಗ್ಗೆ ಮಾಹಿತಿಯನ್ನು ನೀಡಿ.
    ಡಿಕೆಶಿ ಉತ್ತರ: ನೀವು ತೋರಿಸುತ್ತಿರುವ ಪತ್ರಗಳು ರೂಂ ನಂಬರ್ 216ರಲ್ಲಿ ಸಿಕ್ಕಿದೆ. ಅದನ್ನು ನೀವು ಸೀಜ್ ಮಾಡಿದ್ದೀರಿ. ನಾನು ಸಚಿವನಾಗಿರೋದ್ರಿಂದ ಸಾಕಷ್ಟು ಜನ ತಮ್ಮ ಕಷ್ಟ ಕಾರ್ಪಣ್ಯಗಳನ್ನು ತೋಡಿಕೊಳ್ಳಲು, ಭೇಟಿ ಮಾಡಲು ಕೊಟ್ಟಿರುವ ಪತ್ರಗಳು. ಅದರ ಬಗ್ಗೆ ನೋಡಿ ನಿಮಗೆ ಮಾಹಿತಿಯನ್ನು ನೀಡುತ್ತೇನೆ. ಪೇಜ್ ನಂಬರ್ 1ರಲ್ಲಿ ಇರುವಂತೆ, ನನ್ನ ಕುಟುಂಬಕ್ಕೆ ಆಭರಣಗಳನ್ನು ಖರೀದಿ ಮಾಡಲು ಲೆಕ್ಕಾಚಾರ ಮಾಡಿದ್ದೆ. ನಾನು ಕೇವಲ ಲೆಕ್ಕವನ್ನು ಮಾಡಿದ್ದೆ ಹೊರತು ಇನ್ನೂ ಖರೀದಿ ಮಾಡಿಲ್ಲ. ಇನ್ನುಳಿದಂತೆ ಇರುವ ಪತ್ರಗಳು ಪಾರ್ಟಿಗೆ ಸಂಬಂಧಪಟ್ಟವು ಮತ್ತು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಂಬಂಧಪಟ್ಟವು.

    21. ಐಟಿ ಪ್ರಶ್ನೆ: ನಿಮ್ಮ ಸದಾಶಿವನಗರ ಮನೆಯ ಮೇಲೆ ದಾಳಿ ನಡೆಸಿದಾಗ ಸಿಕ್ಕಂತಹ ಪತ್ರಗಳ ಬಗ್ಗೆ ಪ್ರಶ್ನೆ ಮಾಡ್ತಾ ಇದ್ದೀನಿ. ಅದನ್ನು ನೀವು ಉತ್ತರ ನೀಡುವ ಮೂಲಕ ದೃಢೀಕರಿಸಿ.
    ಡಿಕೆಶಿ ಉತ್ತರ: ಹೌದು, ನಮ್ಮ ಮನೆಯಲ್ಲಿ ಸಾಕಷ್ಟು ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದೀರಿ. ಅವೆಲ್ಲವೂ ಕೂಡ ಆಸ್ತಿಯ ಪತ್ರಗಳು. ಒಂದಷ್ಟು ಪಾಲುದಾರಿಕೆಯ ಬಗ್ಗೆ ಪತ್ರಗಳನ್ನು ಇಟ್ಟುಕೊಂಡಿದ್ದೇನೆ. ಎಜುಕೇಷನ್ ಸೊಸೈಟಿಗೆ ಸಂಬಂಧಪಟ್ಟ ಪತ್ರಗಳು. ಶೋಭಾ ಡೆವಲಪರ್ಸ್ ಸಹಭಾಗಿತ್ವದ ಪತ್ರಗಳು ಮತ್ತು ನನ್ನ ಮಗಳಿಗೆ ಫ್ಲ್ಯಾಟ್ ಖರೀದಿ ಮಾಡಲು ಇಟ್ಟುಕೊಂಡಿದ್ದ ಪತ್ರಗಳಾಗಿವೆ.

    22. ಐಟಿ ಪ್ರಶ್ನೆ: ನಿಮ್ಮ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಹಾಗು ಚೆನ್ನರಾಜ ನಡುವಿನ ವ್ಯವಹಾರಿಕ ಸಂಬಂಧದ ಬಗ್ಗೆ ಕಳೆದ 10 ವರ್ಷಗಳ ಮಾಹಿತಿ ನೀಡಿ.
    ಡಿಕೆಶಿ ಉತ್ತರ: ಲಕ್ಷ್ಮಿ ಹೆಬ್ಬಾಳ್ಕರ್ ನನ್ನ ಪಕ್ಷದ ಒಬ್ಬ ರಾಜಕಾರಣಿಯಾಗಿದ್ದಾರೆ. ಚೆನ್ನರಾಜ, ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರ. ಇಬ್ಬರ ನಡುವೆಯು ಸಹ ವ್ಯವಹಾರಿಕ ಸಂಬಂಧಗಳು ಇಲ್ಲ

    23. ಐಟಿ ಪ್ರಶ್ನೆ: ನಾನು ನಿಮ್ಮ ಮನೆಯಲ್ಲಿ ವಶಪಡಿಸಿಕೊಂಡ ಕೆಲವು ಪೇಜ್‍ಗಳನ್ನ ತೋರಿಸುತ್ತಿದ್ದೇನೆ. ಇದರಲ್ಲಿರುವಂತೆ ನಿಮ್ಮ ಅಕೌಂಟ್‍ನಲ್ಲಿ 32 ಕೋಟಿ ರೂ. ತೋರಿಸುತ್ತಿದೆ. ಅದ್ರಲ್ಲಿ 15.92 ಕೋಟಿ ರೂ. ಕೆಲವರಿಗೆ ಟ್ರಾನ್ಸ್ ಫರ್ ಮಾಡಿರೋ ಬಗ್ಗೆ ತಿಳಿಸಿ.
    ಡಿಕೆಶಿ ಉತ್ತರ: ಅದು ನಾನು ಬರೆದಿದ್ದಲ್ಲ. ನನಗೂ ಅದಕ್ಕೂ ಸಂಬಂಧವಿಲ್ಲ.

    24. ಐಟಿ ಪ್ರಶ್ನೆ: ನಾವು ನಿಮಗೆ ಕೆಲವೊಂದು ನೋಟ್ ಬುಕ್‍ಗಳನ್ನ ತೋರಿಸುತ್ತಿದ್ದೇವೆ. ಅದ್ರಲ್ಲಿರೋ ಬಗ್ಗೆ ಮಾಹಿತಿ ತಿಳಿಸಿ.
    ಡಿಕೆಶಿ ಉತ್ತರ: ಇಸ್ಪೀಟ್ ಆಟದ ಬಗ್ಗೆ ಒಂದಷ್ಟು ಮಾಹಿತಿಯನ್ನು ಬರೆದಿಟ್ಟಿದ್ದೆ. ಅದಕ್ಕೂ ನನ್ನ ವ್ಯವಹಾರಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ.

    25. ಐಟಿ ಪ್ರಶ್ನೆ: ಗ್ಲೋಬಲ್ ಮಾಲ್ ಪ್ರಾಜೆಕ್ಟ್‍ನಲ್ಲಿ ನಿಮ್ಮ ಪಾತ್ರ ಏನು? ನಿಮಗೆ ಅದರ ಜೊತೆ ಯಾವ ರೀತಿಯ ವ್ಯವಹಾರಿಕ ಸಂಬಂಧ ಇದೆ ತಿಳಿಸಿ.
    ಡಿಕೆಶಿ ಉತ್ತರ: ಈ ಪ್ರಪೋಸಲ್ ಗ್ಲೋಬಲ್ ಮಾಲ್ ಪ್ರಾಜೆಕ್ಟ್ ಕುರಿತಾಗಿದ್ದು, ಶೋಭಾ ಡೆವಲಪರ್ಸ್ ಜೊತೆ ಸಹಭಾಗಿತ್ವವನ್ನು ಹೊಂದಿದ್ದೇವೆ. ಜೊತೆಗೆ ದುಬೈನ ಒಬ್ಬ ಉದ್ಯಮಿ ಪ್ರಕಾಶ್‍ನೊಂದಿಗೆ ಸೇರಿ ಅಮ್ಯೂಸ್‍ಮೆಂಟ್ ಪಾರ್ಕ್ ಕುರಿತು ಮಾತುಕತೆ ನಡೆಸಿದ್ದೇವೆ. ಜೊತೆಗೆ ಇದಕ್ಕೆ ತಗುಲುವ ವೆಚ್ಚದ ಬಗ್ಗೆ ಮಾತುಕತೆ ನಡೆಸಿದ್ದೇವೆ.

    26. ಐಟಿ ಪ್ರಶ್ನೆ: ಕಳೆದ 10 ವರ್ಷಗಳಿಂದ ನೀವು ಯಾವ್ಯಾವ ವ್ಯವಹಾರಿಕ ಸಹಭಾಗಿತ್ವವನ್ನು ಹೊಂದಿದ್ದೀರಿ ತಿಳಿಸಿ. ಜೊತೆಗೆ ಅವುಗಳ ತೆರಿಗೆಯನ್ನು ಪಾವತಿ ಮಾಡಿದ್ದೀರಾ? ಅದರ ಬಗ್ಗೆ ಮಾಹಿತಿ ನೀಡಿ.
    ಡಿಕೆಶಿ ಉತ್ತರ: ನಾನು ಏಕಾಂಗಿಯಾಗಿ ಹಾಗೂ ನನ್ನ ಕುಟುಂಬದ ಸದಸ್ಯರ ಹತ್ತು ಹಲವು ಪ್ರಾಜೆಕ್ಟ್‍ಗಳಲ್ಲಿ ಸಹಭಾಗಿತ್ವವನ್ನು ಹೊಂದಿದ್ದೇವೆ. ನನಗೆ ತಿಳಿದಿರುವ ಮಟ್ಟಿಗೆ ಎಲ್ಲದಕ್ಕೂ ನಾನು ತೆರಿಗೆ ಪಾವತಿ ಮಾಡಿದ್ದೇನೆ. ಹಾಗೇನಾದ್ರೂ ಮಿಸ್ ಆಗಿದ್ರೆ ನಾನು ಆಡಿಟರ್ ಜೊತೆ ಮಾತಾಡಿ ಪಾವತಿ ಮಾಡುತ್ತೇನೆ. ಇನ್ನೂ ಕೆಲವು ಹೊಸ ಸಹಭಾಗಿತ್ವ ಹೊಂದಿದ್ದೇವೆ. ಅದರಿಂದ ಆದಾಯ ಬಂದಿಲ್ಲ. ಬಳಿಕ ಆದಾಯ ತೆರಿಗೆ ಪಾವತಿಯನ್ನು ಮಾಡುತ್ತೇನೆ.

    27. ಐಟಿ ಪ್ರಶ್ನೆ: ನಿಮ್ಮ ಬ್ಯಾಲೆನ್ಸ್ ಶೀಟ್ ಪ್ರಕಾರ ಗೌರಮ್ಮ ಅವರಿಗೆ 21.61 ಕೋಟಿ ರೂ. ಹಾಗೂ ದಿವಂಗತ ಕೆಂಪೇಗೌಡ ಅವರಿಗೆ 5.05 ಕೋಟಿ ರೂ. ಸಾಲ ಮತ್ತು ಮುಂಗಡ ಹಣ ಕೊಟ್ಟಿರುತ್ತೀರಿ. ಈ ಹಣದ ಮೂಲವನ್ನು ತಿಳಿಸಿ.
    ಡಿಕೆಶಿ ಉತ್ತರ: ಇವರಿಬ್ಬರೂ ನನ್ನ ತಂದೆ-ತಾಯಿ. ಇವರಿಗೆ ಪಾವತಿ ಮಾಡಿರೋ ಹಣದ ಬಗ್ಗೆ ಎಲ್ಲಾ ದಾಖಲಾತಿಗಳು ಇಟ್ಟುಕೊಂಡಿದ್ದೇನೆ. ಇದು ಒಂದು ರನ್ನಿಂಗ್ ಅಕೌಂಟ್ ಹಾಗು ಇದನ್ನು ನಾನು ಭೂಮಿ ಖರೀದಿ ಮಾಡಲು ಬೇರೆ ಬೇರೆ ದಿನಗಳಲ್ಲಿ ಕೊಟ್ಟಿದ್ದೇನೆ.

    28. ಐಟಿ ಪ್ರಶ್ನೆ: ಕ್ವಾಲಿಟಿ ಬಿಸ್ಕೆಟ್ ಕಂಪನಿ ಜೊತೆ ನಿಮ್ಮ ವ್ಯವಹಾರಿಕ ಸಂಬಂಧಗಳೇನು?
    ಡಿಕೆಶಿ ಉತ್ತರ: ವೈಯುಕ್ತಿಕವಾಗಿ ನನಗೆ ಯಾವುದೇ ಸಂಬಂಧ ಇಲ್ಲ. ಆದರೆ ನನ್ನ ಕೆಲವು ಸ್ನೇಹಿತರು ಆ ಕಂಪನಿಯ ಜೊತೆ ವ್ಯವಹಾರಿಕ ಸಂಬಂಧ ಹೊಂದಿದ್ದಾರೆ. ಅಲ್ಲದೇ ಶೇರು ಖರೀದಿ ಮಾಡಿ ಮಾರಾಟ ಮಾಡಿರುತ್ತಾರೆ. ಇನ್ನು ಹೆಚ್ಚಿನ ಮಾಹಿತಿ ಇಲ್ಲ.

    29. ಐಟಿ ಪ್ರಶ್ನೆ: ಎಸ್.ಚಂದ್ರಶೇಖರ್ ಅವರ ಕಚೇರಿ ಪರಿಶೀಲನೆ ಮಾಡಿದಾಗ, ಕ್ವಾಲಿಟಿ ಬಿಸ್ಕೆಟ್ಸ್ ನಿಂದ 75 ಲಕ್ಷ ರೂ. ಬಡ್ಡಿ ಇಲ್ಲದ ಸಾಲವನ್ನು ಪಡೆದುಕೊಂಡಿದ್ದೀರಿ. ಸಾಲವನ್ನು ಮರುಪಾವತಿಯೂ ಮಾಡಿಲ್ಲ. ನಷ್ಟದಲ್ಲಿ ಇರುವ ಕಂಪನಿ ನಿಮಗೆ ಯಾವುದೇ ಬಡ್ಡಿ ಇಲ್ಲದೇ ಸಾಲ ಯಾಕೆ ನೀಡುತ್ತದೆ?
    ಡಿಕೆಶಿ ಉತ್ತರ: ಈ ವ್ಯವಹಾರ ಬಹಳ ವರ್ಷಗಳ ಹಿಂದಿನದ್ದು. ಅದನ್ನು ನಾನು ಮರೆತಿದ್ದೇನೆ. ನಾನು ಅಕೌಂಟ್ಸ್ ಪರಿಶೀಲನೆ ಮಾಡಿ ನಿಮಗೆ ಉತ್ತರ ನೀಡುತ್ತೇನೆ.

    30. ಐಟಿ ಪ್ರಶ್ನೆ: ಶ್ರೀರಾಂ ಪ್ರಾಪರ್ಟಿಸ್‍ನಿಂದ ನಿಮ್ಮ ಪತ್ನಿ ಉಷಾ ಹಾಗೂ ಸತ್ಯನಾರಾಯಣ್ ಗೆ 68 ಕೋಟಿ ರೂ. ಹಣ ಬೈಬ್ಯಾಕ್ ಸ್ಕೀಂನಲ್ಲಿ ಬಿಲ್ಟಪ್ ಏರಿಯಾದ 33% ಶೇರಿನ ಬದಲಾಗಿ ನಾಲ್ಕು ವರ್ಷದ ಹಿಂದೆ ಬಂದಿದೆ. ನಿಮಗೆ ಶ್ರೀರಾಂ ಪ್ರಾಪರ್ಟಿಸ್ ಸಹಾಯ ಮಾಡಿದೆ. ಆದ್ರೆ ಕ್ಯಾಪಿಟಲ್ ಗೇನ್ಸ್ ಯಾಕೆ ಪಾವತಿ ಮಾಡಿಲ್ಲ ಮತ್ತು ಯಾವಾಗ ಪಾವತಿ ಮಾಡ್ತೀರಿ?
    ಡಿಕೆಶಿ ಉತ್ತರ: ಶ್ರೀರಾಂ ಪ್ರಾಪರ್ಟಿಸ್‍ನಿಂದ ನಮಗೆ ಹಣ ಬಂದಿದ್ದು ನಿಜ. ಆದ್ರೆ ಆ ಸಂದರ್ಭದಲ್ಲಿ ಮಾರ್ಕೆಟ್ ವ್ಯಾಲ್ಯೂ ಕಡಿಮೆ ಇತ್ತು. ಮೊದಲು ನಾವು ಕಮರ್ಷಿಯಲ್ ಪ್ರಾಪರ್ಟಿಸ್ ಅಂತ ಶೇರು ಪಡೆದಿದ್ವಿ. ಆದ್ರೆ ನಂತರ ಅದು ರೆಸಿಡೆನ್ಶಿಯಲ್ ಆಗಿ ಬದಲಾಯಿತು. ಈಗ ಸಿಕ್ಕಿದ 68 ಕೋಟಿಯನ್ನೇ ಲಾಭ ಎಂದು ಆದಾಯ ತೆರಿಗೆ ಪಾವತಿ ಮಾಡ್ತೀವಿ.

    31. ಐಟಿ ಪ್ರಶ್ನೆ: ಮಿನರ್ವ ಮಿಲ್ಸ್ ಪ್ರಾಜೆಕ್ಟ್ ಕುರಿತಾದ ಎಲ್ಲಾ ಮಾಹಿತಿಗಳನ್ನು ಕೊಡಿ.
    ಡಿಕೆಶಿ ಉತ್ತರ: ನಾನು, ನನ್ನ ತಂದೆ ಮತ್ತು ಧವನಂ ಕನ್ಸ್‍ಟ್ರಕ್ಷನ್ಸ್ ಜೊತೆ ಒಂದು ಪಾಲುದಾರಿಕಾ ಸಹಭಾಗಿತ್ವವನ್ನು ಹೊಂದಿಕೊಂಡ್ವಿ. 2005ರಲ್ಲಿ ಶೇರುಗಳ ಹಂಚಿಕೆ ಮಾಡಿಕೊಂಡ್ವಿ. ಮುಂಗಡ ಹಣದಲ್ಲಿಯೂ ಕೂಡ ನಮಗೆ ಯಾವುದೇ ಲಾಭ ಪಡೆದುಕೊಳ್ಳಲಾಗಲಿಲ್ಲ. ಪ್ರಾಜೆಕ್ಟ್ ಮುಗಿದ ಬಳಿಕ ಲಾಭ ಬಂದರೆ ಆದಾಯ ತೆರಿಗೆ ಪಾವತಿ ಮಾಡಿಕೊಡುತ್ತೇನೆ.

    32. ಐಟಿ ಪ್ರಶ್ನೆ: ಉಷಾ ಶಿವಕುಮಾರ್ ಮತ್ತು ಸತ್ಯನಾರಾಯಣ್ 2016-17ರ ಸಾಲಿನ ಆದಾಯ ತೆರಿಗೆ ರಿಟನ್ರ್ಸ್‍ಯನ್ನು ಫೈಲ್ ಮಾಡಿಲ್ಲ. ಆದರೆ ಸೋಮೇಶ್ ಆಫೀಸ್‍ನಲ್ಲಿ ಸಿಕ್ಕ ದಾಖಲಾತಿಗಳಲ್ಲಿ ಉಷಾ ಶಿವಕುಮಾರ್ ಹೆಸರಲ್ಲಿ 19,04,41,070 ಸತ್ಯನಾರಾಯಣ್ ಹೆಸರಲ್ಲಿ 45 ಕೋಟಿ ಎಂದು ಕಂಡುಬಂದಿದೆ. ಆದ್ರೂ ಆದಾಯ ತೆರಿಗೆ ಪಾವತಿ ಮಾಡಿಲ್ಲ ಏಕೆ?
    ಡಿಕೆಶಿ ಉತ್ತರ: ಅದು ನಾನು ಕಟ್ಟಬೇಕೆಂದು ತಯಾರು ಮಾಡಿ ಇಟ್ಟುಕೊಂಡಿದ್ದ ದಾಖಲಾತಿಗಳು ಅಷ್ಟೇ. ಇದುವರೆಗೂ ನಾವು ಪಾವತಿಯನ್ನು ಮಾಡಿಲ್ಲ. ಲೀಗಲ್ ಅಡ್ವೈಸ್ ಬೇಕಿತ್ತು. ಅದಕ್ಕಾಗಿ ಕಾಯುತ್ತಾ ಇದ್ವಿ. ಜೊತೆಗೆ ಶ್ರೀರಾಂ ಪ್ರಾಪರ್ಟಿಸ್ ಕೂಡ ನಮ್ಮ ಬಳಿ ಹೇಳಿಕೊಂಡಿದ್ರು. ಆದ್ರಿಂದ ಮುಂದಿನ ವರ್ಷ 68 ಕೋಟಿಯ ತೆರಿಗೆಯನ್ನು ಪಾವತಿ ಮಾಡುತ್ತೇವೆ.

    33. ಐಟಿ ಪ್ರಶ್ನೆ: ದೆಹಲಿಯಲ್ಲಿ ರಾಜೇಂದ್ರನ್ ಮನೆಗೆ ದಾಳಿ ನಡೆಸಿದಾಗ, ರಾಜೇಂದ್ರನ್ ಸ್ವಇಚ್ಛಾ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಪ್ರಕಾರ ನಿಮ್ಮ ಪರವಾಗಿ ಅವರು ಕ್ಯಾಶ್ ಕಲೆಕ್ಷನ್ ಮಾಡುತ್ತೇನೆ ಎಂದಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
    ಡಿಕೆಶಿ ಉತ್ತರ: ಆತ ನನ್ನ ಸಹೋದ್ಯೋಗಿಯೂ ಅಲ್ಲ. ಅಲ್ಲದೆ ಆತ ನನಗೆ ಸಂಬಂಧಪಟ್ಟ ಯಾವುದೇ ಹಣವನ್ನು ಕಲೆಕ್ಟ್ ಮಾಡಿಲ್ಲ.

    34. ಐಟಿ ಪ್ರಶ್ನೆ: ಚಂದ್ರಶೇಖರ್ ಹೇಳಿಕೆಯ ಪ್ರಕಾರ 4 ಕೋಟಿ ನಗದು ಹಣವನ್ನು ವಿಶಾಲಾಕ್ಷಿದೇವಿ ಅವರಿಗೆ ಶಶಿಕುಮಾರ್ ಅವರು ಕೊಟ್ಟಿದ್ದಾರೆ ಅಂತ ಹೇಳಿದ್ದಾರೆ. ಅಲ್ಲದೇ ಹಣದ ಮೂಲ ನಿಮ್ಮದೇ ಇರಬಹುದು ಎಂದಿದ್ದಾರೆ ಇದಕ್ಕೆ ನೀವೇನು ಹೇಳ್ತೀರಿ?
    ಡಿಕೆಶಿ ಉತ್ತರ: ನಾನು ಈ ನಿವೇಶನ ವಿಚಾರದಲ್ಲಿ ಯಾವುದೇ ಅಗ್ರಿಮೆಂಟ್ ಮಾಡಿಲ್ಲ. ನನ್ನ ಸ್ನೇಹಿತನೊಬ್ಬ ಈ ಎಲ್ಲಾ ವ್ಯವಹಾರಗಳನ್ನು ಮಾಡಿದ್ದಾನೆ. ಈ ಹಣ ಅವನದಾಗಿರೋದ್ರಿಂದ ಅವನು ಇದನ್ನು ತಿಳಿಸಲು ಅರ್ಹ.

    35. ಐಟಿ ಪ್ರಶ್ನೆ: ಲೋಕಾಯುಕ್ತ ಮತ್ತು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿರುವ ಆದಾಯ ಪ್ರಮಾಣಪತ್ರದಲ್ಲಿ ಏನಾದರೂ ವ್ಯತ್ಯಾಸಗಳು ಇದೆಯಾ?
    ಡಿಕೆಶಿ ಉತ್ತರ: ನನಗೆ ತಿಳಿದಿರುವ ಹಾಗೆ ಯಾವುದೇ ವ್ಯತ್ಯಾಸಗಳು ಕೂಡ ಇಲ್ಲ. ಆ ರೀತಿ ವ್ಯತ್ಯಾಸ ಇದ್ರೆ ನಿಮಗೆ ತಿಳಿಸುತ್ತೇನೆ.

    36. ಐಟಿ ಪ್ರಶ್ನೆ: ನೀವು ಪ್ರಸ್ತುತ ವಾಸವಾಗಿರುವ ಸದಾಶಿವನಗರದ #252 ಬಂಗಲೆಯ ನಿರ್ಮಾಣದಲ್ಲಿ ಹಣ ಹೂಡಿಕೆಯ ಬಗ್ಗೆ ತಿಳಿಸಿ.
    ಡಿಕೆಶಿ ಉತ್ತರ: ನಾನು ವಾಸವಾಗಿರುವ ಮನೆಯನ್ನು ಶೋಭಾ ಡೆವಲಪರ್ಸ್ ಅವರು ನಿರ್ಮಾಣ ಮಾಡಿದ್ದಾರೆ. ಆದ್ರೆ, ಹೆಚ್ಚಿನ ಮಾಹಿತಿ ಇಲ್ಲ. ಒಂದು ವಾರ ಕಾಲಾವಕಾಶ ನೀಡಿ.

    37. ಐಟಿ ಪ್ರಶ್ನೆ: ನವದೆಹಲಿಯ ಹಲವು ನಿವಾಸಗಳಲ್ಲಿ ನಮಗೆ 8 ಕೋಟಿ 83 ಲಕ್ಷ ರೂ. ನಗದು ಹಣ ಸಿಕ್ಕಿದೆ. ಇದರ ಬಗ್ಗೆ ಮಾಹಿತಿ ನೀಡಿ
    ಡಿಕೆಶಿ ಉತ್ತರ: ಬಿ2 ಸಪ್ತರ್‍ಜಂಗ್ ಎನ್‍ಕ್ಲೈವ್ 41.03 ಲಕ್ಷ ರೂ., ಬಿ4 ಸಪ್ತರ್‍ಜಂಗ್ ಎನ್‍ಕ್ಲೈವ್ 1.37 ಕೋಟಿ ರೂ., ಬಿ5 ಸಪ್ತರ್‍ಜಂಗ್ ಎನ್‍ಕ್ಲೈವ್ 6.68 ಕೋಟಿ ರೂ., ಆಂಜನೇಯಲು ಮನೆಯಲ್ಲಿ 12.44 ಲಕ್ಷ ರೂ., ಜೋವಿನ್ ಜೋಸೆಫ್ ನಿವಾಸ 23.38 ಲಕ್ಷ ರೂ.,

    38. ಐಟಿ ಪ್ರಶ್ನೆ: ಆಂಜನೇಯಲು ಹೇಳಿಕೆ ಪ್ರಕಾರ ಈ ಎಲ್ಲಾ ನಗದು ನಿಮಗೆ ಸೇರಿದ್ದು ಎಂದಿದ್ದಾರೆ. ಈ ಬಗ್ಗೆ ತಿಳಿಸಿ.
    ಡಿಕೆಶಿ ಉತ್ತರ: ಸರ್, ಇದೆಲ್ಲ ಹಣದಲ್ಲಿ ಬಿ2 ಅಲ್ಲಿ ಸಿಕ್ಕಿರುವ 41.03 ಲಕ್ಷ ಹಣ ಮಾತ್ರ ನನ್ನದು. ಬೇರೆಯ ಹಣದ ಬಗ್ಗೆ ನನಗೆ ಮಾಹಿತಿ ಇಲ್ಲ. ನನ್ನ ಕುಟುಂಬಕ್ಕೆ 100 ಎಕರೆ ಕೃಷಿ ಭೂಮಿ ಇದ್ದು ಇದರ ಆದಾಯದ ಹಣವೇ ದೆಹಲಿಯಲ್ಲಿ ಸಿಕ್ಕಿರೋದು. ಬೇರೆ ಹಣ ಸಿಕ್ಕಿದೆ ಅಂದಿದ್ದೀರಿ, ಅದ್ಯಾವುದು ನನ್ನ ಮಾಲೀಕತ್ವದ ಮನೆಯಲ್ಲಿ ಸಿಕ್ಕಿರುವುದಿಲ್ಲ.

    39. ಐಟಿ ಪ್ರಶ್ನೆ: ಆಂಜನೇಯಲು ಸ್ವಇಚ್ಛಾ ಹೇಳಿಕೆ ಪ್ರಕಾರ ಎಎನ್ ಪ್ರಾಪ್ ಬಿಲ್ಡ್ ಎಎಲ್‍ಪಿ ಮಾಲೀಕ ಅಜಯ್ ಖನ್ನಾ ಮೂಲಕ ನೀವು 4 ಕೋಟಿ ನಗದು ಹಣವನ್ನು ಸಫ್ದರ್‍ಜಂಗ್ ಎನ್‍ಕ್ಲೇವ್‍ನ ಬಿ1 ಫ್ಲಾಟ್ ಖರೀದಿಗೆ ನೀಡಿರುತ್ತೀರಿ. ಮುಂದೆ ಇದೇ 4 ಕೋಟಿ ರಾವತ್ ಎಂಬವರಿಂದ ಆಂಜನೇಯಲು ಮತ್ತು ರಾಜೇಂದ್ರನ್ ಪಡೆದು ಇನ್ಸ್‍ಸ್ಟಾಲ್ಮೆಂಟ್ ಮೂಲಕ ನೀಡಿರುತ್ತಾರೆ. ಇದರ ಬಗ್ಗೆ ತಿಳಿಸಿ.
    ಡಿಕೆಶಿ ಉತ್ತರ: ನಾನು ಈ ಫ್ಲ್ಯಾಟ್ ಖರೀದಿ ಮಾಡಲು ಚೆಕ್ ಮೂಲಕ 3 ಕೋಟಿ ನೀಡಿರುತ್ತೇನೆ. ನಗದು ಹಣ ವ್ಯವಹಾರದ ಬಗ್ಗೆ ನನಗೇನು ಗೊತ್ತಿಲ್ಲ.

    40. ಐಟಿ ಪ್ರಶ್ನೆ: ಚಂದ್ರಶೇಖರ್ ಅವರು ಸ್ವಇಚ್ಛಾ ಹೇಳಿಕೆ ಪ್ರಕಾರ, ಅವರಿಗೆ ನೀವು 3.5 ಕೋಟಿ ಮುಂಗಡ ಹಣವನ್ನು ನೀಡಿರುತ್ತೀರಿ. ಇದ್ರಲ್ಲಿ ಚಂದ್ರಶೇಖರ್ ನಿಮ್ಮ ಮಾರ್ಗದರ್ಶನದ ಮೇರೆಗೆ 2.65 ಕೋಟಿ ರೂ. ಹಣವನ್ನು ಎಸ್‍ಬಿಜಿ ಹೌಸಿಂಗ್ ಲಿಮಿಟೆಡ್‍ಗೆ ನೀಡಿರುತ್ತಾರೆ. ಉಳಿದ ಹಣದಲ್ಲಿ 3 ಸೈಟ್, ಎರಡು ಭಾಗ ಕೃಷಿ ಭೂಮಿ ಖರೀದಿ ಮಾಡಿರುತ್ತಾರೆ. ಈ ಎಲ್ಲಾ ಆಸ್ತಿಯ ವಿವರಗಳು ನಿಮ್ಮ ಅಕೌಂಟ್ ಬುಕ್ ಅಲ್ಲಿ ಆಗಲಿ ಚಂದ್ರಶೇಖರ್ ಬುಕ್ ಅಲ್ಲಿ ಆಗಲಿ ಸಿಕ್ಕಿಲ್ಲ ಏನು ಹೇಳ್ತೀರಿ.?
    ಡಿಕೆಶಿ ಉತ್ತರ: ನಾನು ಇದನ್ನು ಲೀಗಲ್ ಆಗಿಯೇ ಮಾಡಿದ್ದೇನೆ. ಆದ್ರೆ ಚಂದ್ರಶೇಖರ್ ಅವರ ಅಕೌಂಟ್ ಬುಕ್‍ಗಳಲ್ಲಿ ಇದ್ಯಾವುದೂ ಯಾಕೆ ಇಲ್ಲ ಅಂತ ನನಗೂ ಗೊತ್ತಿಲ್ಲ. ಅವರ ಬಳಿ ಮಾಹಿತಿ ಪಡೆದು ನಿಮಗೆ ತಿಳಿಸುತ್ತೇನೆ.

     

    41. ಐಟಿ ಪ್ರಶ್ನೆ: ನಿಮ್ಮ ಮನೆಯನ್ನು ಹುಡುಕಾಡಿದಾಗ ನಿಮ್ಮ ತಂದೆ ಇಲ್ಲಿಯವರೆಗೂ ಯಾವುದೇ ಆದಾಯ ತೆರಿಗೆ ಪಾವತಿ ಮಾಡಿಲ್ಲ. ಅದಾಗಿಯೂ ಮಿನರ್ವ ಮಿಲ್ಸ್‍ನಲ್ಲಿ 10% ಪಾಲುದಾರಿಕೆಯನ್ನು ಹೊಂದಿದ್ದಾರೆ ಹೇಗೆ? ಹಾಗಾದ್ರೆ ನಿಮ್ಮ ತಂದೆ ಹೇಗೆ ಭೂಮಿ ಖರೀದಿ ಮಾಡಿದ್ರು? ಆದಾಯದ ಮೂಲ ಯಾವುದು? ಯಾರ ಅಕೌಂಟ್ ಬುಕ್‍ನಲ್ಲಿ ದಾಖಲಾಗಿದೆ?
    ಡಿಕೆಶಿ ಉತ್ತರ: ಸರ್ ಇದು 2004ರಲ್ಲಿ ನಡೆದ ವ್ಯವಹಾರ. ನನ್ನ ತಂದೆಗೆ ಕೃಷಿಯಿಂದ ಆದಾಯ ಬರುತ್ತಿತ್ತು. ಅವರು ಸ್ನೇಹಿತರಿಂದ ಸಾಲವನ್ನು ಪಡೆದು ಈ ಶೇರನ್ನು ಹೊಂದಿದ್ದಾರೆ.

    42. ಐಟಿ ಪ್ರಶ್ನೆ: ನೀವು ನಿಮ್ಮ ಕುಟುಂಬದ ಜೊತೆ ಜುಲೈನಲ್ಲಿ ಸಿಂಗಾಪುರಕ್ಕೆ ಹೋಗಿರುತ್ತೀರಿ. ಆ ಸಮಯದಲ್ಲಿ ನಿಮ್ಮ ಹೆಸರಲ್ಲಿ ಮತ್ತು ನಿಮ್ಮ ಮಗಳು ಐಶ್ವರ್ಯ ಹೆಸರಲ್ಲಿ ಸಿಂಗಾಪುರದಲ್ಲಿ ಯಾವುದಾದ್ರೂ ವ್ಯವಹಾರ ನಡೆಸಿದ್ರಾ?
    ಡಿಕೆಶಿ ಉತ್ತರ: ನಾನು ನನ್ನ ಮದುವೆ ವಾರ್ಷಿಕೋತ್ಸವದ ಸಂಭ್ರಮಾಚರಣೆಗೆ ಅಲ್ಲಿಗೆ ಹೋಗಿದ್ದೆ. ನನ್ನ ಮಕ್ಕಳು ಕೂಡ ಬಂದಿದ್ರು. ಆ ಸಂದರ್ಭದಲ್ಲಿ ಸಿಂಗಾಪುರದಲ್ಲಿ ಇರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್‍ಗೆ ಭೇಟಿ ನೀಡಿದ್ವಿ. ಈ ಭೇಟಿ ನನ್ನ ಮಗಳ ಶಾಲೆ ನಡೆಸುವ ವ್ಯವಹಾರಿಕ ಜ್ಞಾನಕ್ಕೆ ಅನುಕೂಲ ಆಗೋದ್ರಿಂದ ಹೋಗಿದ್ದೇ ಹೊರತು ಯಾವುದೇ ವ್ಯವಹಾರಗಳನ್ನು ಇಟ್ಟುಕೊಂಡಿಲ್ಲ.

    43. ಐಟಿ ಪ್ರಶ್ನೆ: ಬೇರೆ ಏನಾದ್ರು ಹೇಳೋದು ಇದೆಯಾ?
    ಡಿಕೆಶಿ ಉತ್ತರ: ನನಗೆ ತಿಳಿದಿರುವಂತಹ ಎಲ್ಲ ಮಾಹಿತಿಗಳನ್ನ ನೀಡಿದ್ದೇನೆ. ನಿಮ್ಮ ಎಲ್ಲ ಪ್ರಶ್ನೆಗಳಿಗೆ ತಿಳಿದ ಮಟ್ಟಿಗೆ ಉತ್ತರ ನೀಡಿದ್ದೇನೆ. ನನಗೆ ಮತ್ತು ನನ್ನ ಪತ್ನಿಗೆ ಕೆಲವೊಂದು ರಿಯಲ್ ಎಸ್ಟೇಟ್ ಕಂಪನಿಗಳ ಒಪ್ಪಂದದಲ್ಲಿ ಬಂದ ಆದಾಯ 102.46 ಕೋಟಿ ರೂ. ನಾನು ಆದಾಯ ತೆರಿಗೆ ಪಾವತಿಸಬೇಕಾಗಿದೆ. ಅಷ್ಟೇ ಅಲ್ಲದೆ ನನ್ನ ಮನೆಯಲ್ಲಿ ವಶಪಡಿಸಿಕೊಂಡ 88 ಕೋಟಿಗೆ ನಾನು ಆದಾಯ ತೆರಿಗೆ ಕಟ್ಟಬೇಕಾಗಿದೆ. ನನಗೆ ಇನ್ನು ಒಂದು ವಾರಗಳ ಕಾಲ ಸಮಯವನ್ನು ನೀಡಿದ್ರೆ ಸೀಜ್ ಮಾಡಿದ ಎಲ್ಲಾ ದಾಖಲಾತಿಗಳ ಬಗ್ಗೆ ಮಾಹಿತಿ ನೀಡುತ್ತೇನೆ. ನಾನು ನಿಮ್ಮ ಎಲ್ಲಾ ಕಾರ್ಯಗಳಿಗೆ ಸಹಕಾರ ನೀಡುತ್ತೇನೆ.

    Usha Wife of Minister DK Shivakumar with son and daughter seen at the house at Sadashivanagar in Bengaluru 

    Usha Wife of Minister DK Shivakumar seen at the house at Sadashivanagar in Bengaluru

    Usha Wife of Minister DK Shivakumar seen at the house at Sadashivanagar in Bengaluru

    Police security seen at the House of Minister DK Shivakumar at Sadashivanagar in Bengaluru

    Usha Wife of Minister DK Shivakumar seen at Ministers House at Sadashivanagar in Bengaluru

  • ಜಯಾ ಆಸ್ಪತ್ರೆ ವಿಡಿಯೋ ರಿಲೀಸ್: ಮತ್ತೆ ಎದ್ದಿದೆ ಉತ್ತರವಿಲ್ಲದ ಪ್ರಶ್ನೆಗಳು

    ಜಯಾ ಆಸ್ಪತ್ರೆ ವಿಡಿಯೋ ರಿಲೀಸ್: ಮತ್ತೆ ಎದ್ದಿದೆ ಉತ್ತರವಿಲ್ಲದ ಪ್ರಶ್ನೆಗಳು

    ಚೆನ್ನೈ: ಜಯಲಲಿತಾ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋ ರಿಲೀಸ್ ಆಗಿದೆ. ಆದರೆ ಈ ವಿಡಿಯೋದ ಬಗ್ಗೆ ಅನೇಕರು ಸಂಶಯ ಕೂಡ ವ್ಯಕ್ತಪಡಿಸಿದ್ದಾರೆ. ಉತ್ತರವಿಲ್ಲದ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.

    ಆಸ್ಪತ್ರೆಯ ಬೆಡ್ ಮೇಲೆ ಜಯಲಲಿತಾ ಆಹಾರ ಸೇವನೆ ಮಾಡುತ್ತಿರೋ 20 ಸೆಕೆಂಡ್‍ಗಳ ವಿಡಿಯೋ ಇದಾಗಿದೆ. ವಿಡಿಯೋದಲ್ಲಿ ಜಯಲಲಿತಾ ಜ್ಯೂಸ್ ಕುಡಿಯುತ್ತಾ ಟಿವಿ ನೋಡುತ್ತಿರೋದನ್ನ ಕಾಣಬಹುದು. ಗುರುವಾರ ರಾಧಾಕೃಷ್ಣ ನಗರ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು, ಈ ಹೊತ್ತಲ್ಲೇ ಶಶಿಕಲಾ ಬಣ ಆಸ್ಪತ್ರೆ ವಿಡಿಯೋವನ್ನ ಬಿಡುಗಡೆ ಮಾಡಿದೆ. ಜಯಲಲಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಫೋಟೋ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದರೂ ಯಾವುದೇ ಫೋಟೋ ರಿಲೀಸ್ ಆಗಿರಲಿಲ್ಲ.

    ಜಯಲಲಿತಾ ಕೊನೆಯ ದಿನಗಳಲ್ಲಿ ಹೇಗಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ನಮ್ಮಲ್ಲಿ ಕೆಲವು ವಿಡಿಯೋಗಳಿದ್ದು, ಅವುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಶಶಿಕಲಾ ಸೋದರ ಸಂಬಂಧಿ ಜಯನಾಥ್ ದಿವಾಕರನ್ ಈ ಹಿಂದೆ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದರು. ಪನ್ನಿರ್ ಸೆಲ್ವಂ ಅವರ ಗುಂಪಿನ ಟೀಕೆಗಳಿಗೆ ಉತ್ತರ ಎಂಬಂತೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು.

    ಜಯಲಲಿತಾ ಸಾವು ನಿಗೂಢವಾಗಿದ್ದು, ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಪನ್ನೀರ್ ಸೆಲ್ವಂ ಬಣ ಒತ್ತಾಯಿಸಿತ್ತು. ಅಲ್ಲದೆ ಜಯಲಲಿತಾ ಅವರನ್ನ ಕೊಲೆ ಮಾಡಲಾಗಿದೆ ಎಂದು ಕೂಡ ಆರೋಪಿಸಲಾಗಿತ್ತು. ಇದನ್ನು ತಮ್ಮ ಫೇಸ್ ಬುಕ್ ಹೇಳಿಕೆಯಲ್ಲಿ ಉಲ್ಲೇಖಿಸಿದ್ದ ದಿವಾಕರನ್, ”ಜಯಲಲಿತಾ ಹಾಗೂ ಶಶಿಕಲಾ ನಡುವಿನ ಅನ್ಯೋನ್ಯತೆ ಎಷ್ಟಿತ್ತು ಎಂಬುದು ನನಗೆ ಗೊತ್ತು. ಅದಕ್ಕೆ ಸಾಕ್ಷಿಯಾಗಿ ಜಯಲಲಿತಾ ಅವರ ಕೊನೆಯ ದಿನಗಳಲ್ಲಿ ಅವರ ಹಾಗೂ ಶಶಿಕಲಾ ನಡುವಿನ ಬಾಂಧವ್ಯವನ್ನು ಬಿಂಬಿಸುವ ವೀಡಿಯೋಗಳು ನನ್ನಲ್ಲಿವೆ. ಜಯಲಲಿತಾ ತಮ್ಮ ಕೊನೆಯ ದಿನಗಳನ್ನು ಕಳೆದ ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಅವುಗಳನ್ನು ಚಿತ್ರೀಕರಿಸಲಾಗಿದೆ. ನಾನು ಆ ವಿಡಿಯೋಗಳನ್ನು ಫೇಸ್ ಬುಕ್ ನಲ್ಲಿ ಹಾಕಿದರೆ ಹೇಗಿರುತ್ತೆ? ಜಯಲಲಿತಾ ಅವರದ್ದು ಸಹಜ ಸಾವಲ್ಲ ಎಂದು ದನಿಯೆತ್ತಿದ್ದ ಪನ್ನೀರ್ ಸೆಲ್ವಂ ಬಣದ ಪಿಎಚ್ ಪಾಂಡಿಯನ್ ಹಾಗೂ ಮನೋಜ್ ಕೆ. ಪಾಂಡಿಯನ್ ಅವರ ಪರಿಸ್ಥಿತಿ ಹೇಗಿರುತ್ತೆ?” ಎಂದು ದಿವಾಕರನ್ ಹೇಳಿಕೊಂಡಿದ್ದರು. ಇದನ್ನೂ ಓದಿ: ತಮಿಳುನಾಡು ಚುನಾವಣೆಯ ದಿಕ್ಕನ್ನೆ ಬದಲಾಯಿಸುವ ಶಕ್ತಿ ಫೋಟೋ, ವಿಡಿಯೋಗಳಿಗಿದೆ!

    ಉತ್ತರವಿಲ್ಲದ ಪ್ರಶ್ನೆಗಳು
    1. ವಿವಿಐಪಿಗಳಿಗೆ ಆಸ್ಪತ್ರೆಯಲ್ಲಿ ಎಕ್ಸಿಕ್ಯೂಟಿವ್ ಕೊಠಡಿ ನೀಡಲಾಗುತ್ತದೆ. ಆದರೆ ಇದು ಸ್ಪೆಷಲ್ ವಾರ್ಡ್ ಜಯಾಗೆ ಯಾಕೆ ಹೀಗೆ?
    2. ಶ್ವಾಸಕೋಶದಲ್ಲಿ ಸೋಂಕು ಇರುವಾಗ ರೋಗಿಗೆ ನೈಟಿ ಹಾಕಿಕೊಳ್ಳೋಕೆ ಹೇಗೆ ಅವಕಾಶ ಕೊಡಲಾಯಿತು?
    3. ಜಯಾ ವಾರ್ಡ್‍ನಲ್ಲಿ ಮೊಬೈಲ್ ಬಳಕೆಗೆ ಅವಕಾಶ ಇರಲಿಲ್ಲ? ಇಷ್ಟು ಹತ್ತಿರದಿಂದ ವಿಡಿಯೋ ಮಾಡಲು ಹೇಗೆ ಸಾಧ್ಯ?
    4.ಜಯಲಲಿತಾ ಸಾವನ್ನಪ್ಪಿದ ಒಂದು ವರ್ಷದ ಬಳಿಕ ವಿಡಿಯೋ ಬಿಡುಗಡೆ ಮಾಡಿದ್ದು ಯಾಕೆ..?
    5. ಜಯಲಲಿತಾ ಸಾವನ್ನಪ್ಪಿದಾಗ ಇದ್ದ ಅವರ ಮುಖದ ಬಣ್ಣಕ್ಕೂ, ಈ ವಿಡಿಯೋದಲ್ಲಿರೋ ಮುಖದ ಬಣ್ಣಕ್ಕೂ ಸಾಮ್ಯತೆ ಇಲ್ಲ?
    6. ಈ ವಿಡಿಯೋದಲ್ಲಿರುವ ಅಮ್ಮಾ ತುಂಬಾ ಸಣ್ಣ ಇದ್ದಾರೆ. ಜಯಾ ಮೃತದೇಹಕ್ಕೂ ಈ ವಿಡಿಯೋದಲ್ಲಿರೋ ದೇಹಕ್ಕೂ ಸಾಮ್ಯತೆ ಇಲ್ಲ.
    7. ಸಕ್ಕರೆ ಕಾಯಿಲೆಯಿಂದ ಗ್ಯಾಂಗ್ರೀನ್ ಆಗಿ ಒಂದು ಕಾಲನ್ನ ಕತ್ತರಿಸಲಾಗಿತ್ತು ಅಂತಾ ಹೇಳುತ್ತಾರೆ.ಆದ್ರೆ ಈ ವಿಡಿಯೋದಲ್ಲಿ ಎರಡು ಕಾಲುಗಳು ಚೆನ್ನಾಗಿವೆ.
    8. ದೃಶ್ಯದಲ್ಲಿ ಅರ್ಧ ಮುಖ ಮಾತ್ರ ಕಾಣಿಸುತ್ತಿದೆ. ಈ ಅರ್ಧ ಮುಖಗಳು ಕೆಲವು ಬಾರಿ ಕೆಲವರಿಗೆ ಸಾಮ್ಯತೆ ಆಗೋ ಸಾಧ್ಯತೇ ಹೆಚ್ಚು.
    9.ಜಯಾರನ್ನ ಆಸ್ಪತ್ರೆಗೆ ದಾಖಲಿಸಿದ ಕ್ಷಣದಿಂದಲೂ ಅವರು ಐಸಿಯುನಲ್ಲಿದ್ದಾರೆ ಅನ್ನೋ ಮಾಹಿತಿ ಇತ್ತು…? ಆದ್ರೆ, ಇಲ್ಲಿ ಆರಾಮಾಗಿದ್ದಾರೆ..?