Tag: Putin

  • ರಷ್ಯಾ ಮಾರಾಟ ಮಾಡಿದ್ದ ಅಲಾಸ್ಕಾ ಈಗ ಅಮೆರಿಕಾದ ಚಿನ್ನದ ಮೊಟ್ಟೆ!

    ರಷ್ಯಾ ಮಾರಾಟ ಮಾಡಿದ್ದ ಅಲಾಸ್ಕಾ ಈಗ ಅಮೆರಿಕಾದ ಚಿನ್ನದ ಮೊಟ್ಟೆ!

    ಸಾಮಾನ್ಯವಾಗಿ ಒಂದಿಲ್ಲೊಂದು ಚರ್ಚೆಯಲ್ಲಿರುವ ಟ್ರಂಪ್ ಇದೀಗ ರಷ್ಯಾದ (Russia) ಜೊತೆಗಿನ ಸಭೆ ಮೂಲಕ ಮತ್ತೊಂದು ಚರ್ಚೆಗಿಳಿದಿದ್ದಾರೆ. ಪುಟಿನ್ (Putin) ಜೊತೆ ನಡೆದ ಸಭೆ ಯಾವುದೇ ಒಪ್ಪಂದಗಳಿಲ್ಲದೆ ಅಂತ್ಯಗೊಂಡರೂ ಕೂಡ ಅಲಾಸ್ಕಾದಲ್ಲಿ ನಡೆದಿದ್ದು ಕೂತುಹಲಕ್ಕೆ ಎಡೆಮಾಡಿಕೊಟ್ಟಿದೆ. 

    ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿಗೆ ಟ್ರಂಪ್ ಹಾಗೂ ಪುಟಿನ್ ಭೇಟಿಯಾಗಿದ್ದಾರೆ. ಆಗಸ್ಟ್‌ 15 ರಂದು ಉಭಯ ನಾಯಕರಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನಡುವೆ ಅಂಕೊರೇಜ್‌ನಲ್ಲಿ ಅಮೆರಿಕದ ಸೇನಾ ಮೂಲಸೌಕರ್ಯವಿರುವ ಜಾಯಿಂಟ್ ಬೇಸ್ ಎಲೆಂಡಾರ್ಫ್–ರಿಚರ್ಡ್‌ಸನ್‌ನಲ್ಲಿ (JBER) ಸುಮಾರು ಮೂರು ಗಂಟೆ ಸಭೆ ನಡೆಯಿತು. ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿ ನಡೆಸಿದರು.  ಈ ಸಭೆಗೆ ಆಗಮಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಸ್ವತಃ ಡೊನಾಲ್ಡ್ ಟ್ರಂಪ್ ಅವರು ವೇದಿಕೆಗೆ ಕರೆದುಕೊಂಡು ಬಂದರು. ಈ ವೇಳೆ ಅಮೆರಿಕ ಸೇನೆಯ ಬಾಂಬರ್ ಫೈಟರ್ ಜೆಟ್ B-2 bomber ಹಾರಾಡಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಪ್ರಶ್ನಿಸಿದಾಗ ಟ್ರಂಪ್‌ ಅವರು ಅತಿಥಿಗಳಿಗೆ ಅಮೆರಿಕದ ಸೇನಾ ಗೌರವ ಎಂದು ತಿಳಿಸಿದ್ದಾರೆ. ಇದು ಜಗತ್ತಿನಾದ್ಯಂತ ವ್ಯಾಪಕ ಟೀಕೆಗೆ ಕಾರಣವಾಗಿದೆ. 

    ಸುದ್ದಿಗೋಷ್ಠಿಯಲ್ಲಿ ಟ್ರಂಪ್‌ ಮಾತನಾಡಿ, ಈ ಸಭೆಯಲ್ಲಿ ಅನೇಕ ಮಾತುಕತೆಗಳಿಗೆ ಒಪ್ಪಿಗೆ ಸೂಚಿಸಿದ್ದು, ಕೆಲವೇ ಕೆಲವು ಬಾಕಿ ಉಳಿದಿವೆ. ರಷ್ಯಾ ಜೊತೆಗೆ ಕೆಲವು ಬಗೆಹರಿಸಲಾಗದ ಸಮಸ್ಯೆಗಳಿವೆ. ಅಲ್ಲಿಗೆ ತಲುಪಲು ನಮಗೆ ಉತ್ತಮ ಅವಕಾಶವೂ ಇದೆ. ಅವೆಲ್ಲದರ ಒಪ್ಪಂದವಾಗುವವರೆಗೆ ಅಮೆರಿಕ ರಷ್ಯಾ ನಡುವೆ ಯಾವುದೇ ಒಪ್ಪಂದವಿಲ್ಲ. ಪುಟಿನ್‌ ಜೊತೆ ಉಕ್ರೇನ್‌ ಕುರಿತ ಮಾತುಕತೆಯಲ್ಲಿ ಒಂದಿಷ್ಟು ಪ್ರಗತಿ ಕಂಡುಬಂದಿದೆ. ಆದ್ರೆ ಗುರಿ ಸಾಧನೆ ಆಗುವವರೆಗೆ ಸಂಪೂರ್ಣ ಒಪ್ಪಂದವಾಗವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ. 

    ಇದೇ ವೇಳೆ ಮಾತನಾಡಿದ ಪುಟಿನ್‌, ದೇಶದ ಭದ್ರತೆಗೆ ಆತಂಕವಿರುವುದರಿಂದ ಉಕ್ರೇನ್‌ಗೆ ಸಂಬಂಧಿಸಿದಂತೆ ನಮ್ಮ ನಿಲುವು ಬದಲಾಗುವುದಿಲ್ಲ ಎಂದು ಖಚಿತಪಡಿಸಿದರು. ಅಲ್ಲದೇ ಮಾತುಕತೆಯು ದೀರ್ಘಕಾಲೀನವಾಗಿಸಬೇಕಾದ್ರೆ, ಸಂಘರ್ಷಕ್ಕೆ ಕಾರಣವಾದ ಎಲ್ಲ ಅಂಶಗಳನ್ನೂ ಸರಿಪಡಿಸಬೇಕು ಎಂಬುದು ನಮಗೆ ಮನವರಿಕೆಯಾಗಿದೆ. ಆ ಮೂಲಕ, ಉಕ್ರೇನ್ ಮತ್ತು ಅದರ ಪ್ರದೇಶ ಪಶ್ಚಿಮದ ಭಾಗವಾಗುವುದನ್ನು ಒಪ್ಪಲಾಗದು ಎಂಬ ರಷ್ಯಾ ನಿಲುವನ್ನು ಮುಂದಿಟ್ಟಿದ್ದಾರೆ.

    ಅಲಾಸ್ಕಾ ಮಿಲಿಟರಿ ನೆಲೆಯನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ? 
    ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ತಮ್ಮ ಭೇಟಿಗಾಗಿ ಅಲಾಸ್ಕಾ ಪ್ರದೇಶವನ್ನು ಆಯ್ಕೆ ಮಾಡಿದ್ದೆ ಯಾಕೆ ಎನ್ನುವಂತಹ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ. ಅಲಾಸ್ಕಾ ಪ್ರದೇಶವು ಎಲ್ಮೆಂಡಾರ್ಫ್ ವಾಯು ಸೇನೆ ಹಾಗೂ ಪೋರ್ಟ್ ರಿಚರ್ಡ್ಸನ್ ಸೇನಾ ನೆಲೆಯನ್ನು ವಿಲೀನಗೊಳಿಸಿದ ಆಂಕಾರೇಜ್‌ನಲ್ಲಿರುವ ಎಲ್ಮೆಂಡಾರ್ಫ್  ರಿಚರ್ಡ್ಸನ್ ಜಂಟಿ ನೆಲೆಯಾಗಿದೆ.

    ಅಲಾಸ್ಕಾ 1867ರಲ್ಲಿ ಅಮೆರಿಕ ಆಡಳಿತಕ್ಕೆ ಬಂದಿತ್ತು. ಹೀಗಾಗಿ ಈ ಐತಿಹಾಸಿಕ ಸಂಬಂಧವನ್ನು ಇದು ಪ್ರತಿಬಿಂಬಿಸುತ್ತದೆ. ಈ ಪ್ರದೇಶ ರಷ್ಯಾ ದೇಶಕ್ಕೆ ಹತ್ತಿರವಾಗಿದ್ದು, ಅಮೆರಿಕಾದ ಪ್ರಮುಖ ರಕ್ಷಣಾ ಕೇಂದ್ರಗಳು ಇಲ್ಲಿವೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವನ್ನ ಕೊನೆಗೊಳಿಸುವ ನಿಟ್ಟಿನಲ್ಲಿ ಈ ಸಭೆ ಪ್ರಮುಖವಾಗಿತ್ತು. ಈ ಪ್ರದೇಶ ಭೌಗೋಳಿಕವಾಗಿ ಸಮೀಪವಾಗಿದ್ದರೂ ಸಾಂಕೇತಿಕ ಮಹತ್ವವನ್ನು ಹೊಂದಿದೆ. ಅದಲ್ಲದೆ ಸುರಕ್ಷಿತ ನಿಯಂತ್ರಣ ಹೊಂದಿದ ಪ್ರದೇಶ ಇದಾಗಿದ್ದು, ಸಭೆ ಕೈಗೊಳ್ಳಲು ಸೂಕ್ತ ಪ್ರದೇಶ. ಅದಲ್ಲದೆ ಶೃಂಗಸಭೆಗೆ ಕೂಡ ಇದೊಂದು ಸೂಕ್ತ ಸ್ಥಳ ಎನ್ನಲಾಗಿದೆ.

    ಅಲಾಸ್ಕಾ ಇತಿಹಾಸ:
    ಒಂದು ಕಾಲದಲ್ಲಿ ರಷ್ಯಾದ ಆಡಳಿತದಲ್ಲಿದ್ದ ಅಲಾಸ್ಕಾ ಪ್ರದೇಶ ಇದೀಗ ಅಮೆರಿಕದ ಒಡೆತನದಲ್ಲಿದೆ. ಅಮೆರಿಕದಲ್ಲಿರುವ ಒಂದು ಅತ್ಯಂತ ವಿಸ್ತೀರ್ಣವುಳ್ಳ ಪ್ರದೇಶವೂ ಇದಾಗಿದೆ. ಉತ್ತರ ಅಮೆರಿಕ ಖಂಡದ ವಾಯುವ್ಯ ತುದಿಯಲ್ಲಿರುವ 15,18,800 ಚದರ ಕಿ.ಮೀ ಇರುವ ಈ  ಪ್ರದೇಶದಲ್ಲಿ ಸ್ಥಳೀಯ ಜನಾಂಗಗಳು ವಾಸವಾಗಿವೆ.

    ಪ್ರಾರಂಭದಲ್ಲಿ ಇನ್ಯೂಟ್, ಯುಪಿಕ್, ಅಲೆಟ್ ಜನಾಂಗಗಳು ವಾಸವಾಗಿದ್ದವು. ರಷ್ಯಾದ ಅನ್ವೇಷಕ ವಿಟಸ್ ಬೇರಿಂಗ್ ಎಂಬುವರು 1741ರಲ್ಲಿ ಈ ಅಲಾಸ್ಕಾವನ್ನು ಕಂಡುಹಿಡಿದರು. ಅದಾದ ಬಳಿಕ ಸುಮಾರು ವರ್ಷಗಳ ಕಾಲ ಚರ್ಮ ವ್ಯಾಪಾರ ನಡೆಸಲು ವ್ಯಾಪಾರಿಗಳು ಇಲ್ಲಿಗೆ ಬರುತ್ತಿದ್ದರು. ಈ ಸಮಯದಲ್ಲಿ ಈ ಪ್ರದೇಶ ರಷ್ಯಾದ ನಿಯಂತ್ರಣದಲ್ಲಿತ್ತು. ಅದಾದ ಬಳಿಕ 1867ರಲ್ಲಿ ಅಮೆರಿಕದ ಕಾರ್ಯದರ್ಶಿ ವಿಲಿಯಂ ಹೆನ್ರಿ ಸಿವರ್ಡ್ ಅವರು ರಷ್ಯಾದಿಂದ ಅಲಾಸ್ಕಾನ್ನು 7.2 ಮಿಲಿಯನ್ ಡಾಲರ್‌ಗೆ ಖರೀದಿಸಿದರು. ಆ ಸಮಯದಲ್ಲಿ ಇದು ಸಿವರ್ಡ್ ಮೂರ್ಖತನ ಎಂದು ಟೀಕಿಸಿದರು. ಕಾರಣ ಹಿಮಾಚ್ಛಾದಿತವಾಗಿದ್ದ ಈ ಪ್ರದೇಶ ಯಾವುದಕ್ಕೂ ಉಪಯೋಗವಿಲ್ಲದೆ ಖರೀದಿಸಿದ್ದು ಮೂರ್ಖತನ ಎನಿಸಿತ್ತು. 1890ರ ದಶಕದಲ್ಲಿ ಇದೇ ಅಲಾಸ್ಕಾ ಪ್ರದೇಶದಲ್ಲಿ ಚಿನ್ನ ಪತ್ತೆಯಾಗಿತ್ತು ಇದಾದ ನಂತರ ಸಾವಿರಾರು ಜನ ಈ ಪ್ರದೇಶಕ್ಕೆ ವಲಸೆ ಬರಲು ಪ್ರಾರಂಭಿಸಿದರು. ಇದು  ಅಲಾಸ್ಕಾದ ಆರ್ಥಿಕತೆಯನ್ನು ಬದಲಾಯಿಸಿತು. ಬಳಿಕ 1959 ರಲ್ಲಿ ಅಲಾಸ್ಕ್ ಅಧಿಕೃತವಾಗಿ ಅಮೆರಿಕಾದ 49ನೇ ರಾಜ್ಯವಾಗಿ ಘೋಷಣೆ ಆಯಿತು.  ಅಲಾಸ್ಕಾದಲ್ಲಿ 2025ರ ಪ್ರಕಾರ ಸುಮಾರು 7.3 ಲಕ್ಷ ಜನರು ವಾಸಿಸುತ್ತಾರೆ. ಜೊತೆಗೆ ಅಮೆರಿಕಾದ ವಾಯುಪಡೆ ಹಾಗೂ ಸೇನಾ ಶಿಬಿರದ ಕೇಂದ್ರಗಳು ಇಲ್ಲಿದೆ.

    20ನೇ ಶತಮಾನದಲ್ಲಿ  ಅಲಾಸ್ಕಾ ಪ್ರದೇಶದಲ್ಲಿ ತೈಲ ಹಾಗೂ ನೈಸರ್ಗಿಕ ಅನಿಲ ಪತ್ತೆಯಾಯಿತು. ಇದರಿಂದ ಈ ಪ್ರದೇಶ ಅಮೆರಿಕಾದ ಪ್ರಮುಖ ಶಕ್ತಿ ಕೇಂದ್ರವಾಗಿ ಪರಿವರ್ತನೆಯಾಯಿತು. ಇಂದಿಗೂ ಕೂಡ ಈ ಪ್ರದೇಶವು ತನ್ನ ಪ್ರಕೃತಿ ಸಂಪತ್ತು, ಹಿಮ ಪರ್ವತಗಳು ಹಾಗೂ ವನ್ಯಜೀವಿ ಸಂಪತ್ತಿಗಾಗಿ ಪ್ರಸಿದ್ಧಿಯನ್ನು ಪಡೆದಿದೆ. ಇದೀಗ ಡೊನಾಲ್ಡ್ ಟ್ರಂಪ್ ಹಾಗೂ ಪುಟಿನ್ ಸಭೆಯು ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದೆ. ಹೀಗಾಗಿ ಪುಟಿನ್  ಅಲಾಸ್ಕಾ ಪ್ರದೇಶವನ್ನು ಮತ್ತೆ ರಷ್ಯಾದ ಭಾಗವಾಗಿ ಹಿಂಪಡೆಯುತ್ತಾರಾ? ಎಂಬ ಪ್ರಶ್ನೆಯು ಕೇಳಿಬಂದಿದೆ.

  • ಮಾಸ್ಕೋ ನಡು ಬೀದಿಯಲ್ಲಿ ಪುಟಿನ್‌ ಕಾರು ಸ್ಫೋಟ – ಹತ್ಯೆಗೆ ಯತ್ನ?

    ಮಾಸ್ಕೋ ನಡು ಬೀದಿಯಲ್ಲಿ ಪುಟಿನ್‌ ಕಾರು ಸ್ಫೋಟ – ಹತ್ಯೆಗೆ ಯತ್ನ?

    ಮಾಸ್ಕೋ: ಕೆಲವೇ ದಿನಗಳಲ್ಲಿ ಪುಟಿನ್‌ ಸಾವನ್ನಪ್ಪುತ್ತಾರೆ ಎಂದು ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಸಿ (Volodymyr Zelenskyy) ಭವಿಷ್ಯ ನುಡಿದ ಬೆನ್ನಲ್ಲೇ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಬಳಸುತ್ತಿದ್ದ ಲಿಮೋಸಿನ್‌ ಕಾರು (Limousine Car) ಸ್ಫೋಟಗೊಂಡಿದೆ.

    ಮಾಸ್ಕೋ ನಗರದ ಫೈನಾನ್ಶಿಯಲ್‌ ಸ್ಟೆಬಿಲಿಟಿ ಬೋರ್ಡ್‌ ರಹಸ್ಯ ಸೇವಾ ಪ್ರಧಾನ ಕಚೇರಿಯ ಬಳಿ 2,75,000 ಪೌಂಡ್‌ (ಅಂದಾಜು 3.04 ಕೋಟಿ ರೂ.) ಮೌಲ್ಯದ ಔರಸ್ ಸೆನಾಟ್ ಕಂಪನಿಯ ಲಿಮೋಸಿನ್‌ ಕಾರು ಸ್ಫೋಟಗೊಂಡಿದೆ. ಈಗ ಈ ಪ್ರದೇಶದಲ್ಲಿ ಭದ್ರತಾ ತಪಾಸಣೆ ಹೆಚ್ಚಾಗಿದೆ ಎಂದು ವರದಿಯಾಗಿದೆ.

    ‍ಸ್ಫೋಟಗೊಂಡ ಸಮಯದಲ್ಲಿ ಕಾರಿನಲ್ಲಿ ಯಾರು ಇದ್ದರು ಮತ್ತು ಸ್ಫೋಟಕ್ಕೆ ಕಾರಣ ಏನು ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.  ಇದನ್ನೂ ಓದಿ: ರಷ್ಯಾ-ಉಕ್ರೇನ್‌ ಯುದ್ಧ; ಅಮೆರಿಕದ ಕದನ ವಿರಾಮ ಪ್ರಸ್ತಾಪಕ್ಕೆ ರಷ್ಯಾ ಒಪ್ಪಿಗೆ

    ಮೊದಲು ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಮುಂಭಾಗದಿಂದ ದಟ್ಟವಾದ ಕಪ್ಪು ಹೊಗೆ ಬಂದಿದೆ. ಇದನ್ನೂ ಓದಿ: ಆಪರೇಷನ್ ಬ್ರಹ್ಮ | ಭೂಕಂಪಕ್ಕೆ ನಲುಗಿದ ಮ್ಯಾನ್ಮಾರ್‌ಗೆ ಭಾರತ ನೆರವು

    72 ವರ್ಷದ ಪುಟಿನ್ ನಿಯಮಿತವಾಗಿ ರಷ್ಯಾ ನಿರ್ಮಿತ ಲಿಮೋಸಿನ್‌ಗಳನ್ನು ಬಳಸುತ್ತಾರೆ. ಈ ಹಿಂದೆ ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್‌ನಂತಹ ನಾಯಕರಿಗೆ ಇದೇ ರೀತಿಯ ವಾಹನಗಳನ್ನು ಉಡುಗೊರೆಯಾಗಿ ನೀಡಿದ್ದರು.

    ಲಿಮೋಸಿನ್ ಒಂದು ಐಷಾರಾಮಿ, ಉದ್ದವಾದ ಚಕ್ರದ ಬೇಸ್ ಹೊಂದಿರುವ ವಾಹನವಾಗಿದ್ದು ಹಲವು ದೇಶಗಳ ಅಧ್ಯಕ್ಷರು ಈ ರೀತಿಯ ಕಾರನ್ನು ಬಳಕೆ ಮಾಡುತ್ತಾರೆ. ಇದು ಚಾಲಕ ಮತ್ತು ಪ್ರಯಾಣಿಕರ ನಡುವೆ ವಿಭಜನೆಯನ್ನು ಹೊಂದಿರುತ್ತದೆ. ಆರಾಮದಾಯಕ ಮತ್ತು ಹೆಚ್ಚಾಗಿ ಐಷಾರಾಮಿ ಪ್ರಯಾಣಕ್ಕಾಗಿ ವಿನ್ಯಾಸ ಮಾಡಲಾಗುತ್ತದೆ. ಸಾಮಾನ್ಯವಾಗಿ ವಿಶೇಷ ಸಂದರ್ಭಗಳಲ್ಲಿ ಅಥವಾ ಕಾರ್ಪೊರೇಟ್ ಕಾರ್ಯಕ್ರಮಗಳಿಗೆ ಮಾತ್ರ ಬಳಸಲಾಗುತ್ತದೆ.

     

  • ರಷ್ಯಾಗೆ ತೆರಳಿದ ಪ್ರಧಾನಿ ಮೋದಿ

    ರಷ್ಯಾಗೆ ತೆರಳಿದ ಪ್ರಧಾನಿ ಮೋದಿ

    ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ರಷ್ಯಾಕ್ಕೆ ತೆರಳಿದ್ದಾರೆ. ಮಾಸ್ಕೋದಲ್ಲಿ ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರನ್ನು ಭೇಟಿಯಾಗಲಿದ್ದಾರೆ.

    ಮೂರು ವರ್ಷಗಳ ನಂತರ ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷರನ್ನು ಭೇಟಿಯಾಗಲಿದ್ದಾರೆ. ಉಕ್ರೇನ್ (Ukraine) ಯುದ್ಧ ಆರಂಭವಾದ ನಂತರ ಇವರಿಬ್ಬರ ಮೊದಲ ಭೇಟಿ ಇದಾಗಿದೆ. ಪ್ರಧಾನಿ ಮೋದಿಯವರ ಈ ಭೇಟಿಯ ಮೇಲೆ ಪಾಶ್ಚಿಮಾತ್ಯ ದೇಶಗಳ ಜೊತೆಗೆ ಚೀನಾ (China) ಕೂಡ ಕಣ್ಣಿಟ್ಟಿದೆ.

    ಈ ಮಹತ್ವದ ಭೇಟಿಯಲ್ಲಿ ಪ್ರಧಾನಿ ಮೋದಿ ಅವರು ರಷ್ಯಾದ ಸೇನೆಯಲ್ಲಿ ಭಾರತೀಯರನ್ನು ಸೇರ್ಪಡೆಗೊಳಿಸುವ ಮತ್ತು S-400 ಕ್ಷಿಪಣಿ ವ್ಯವಸ್ಥೆಯ ಎರಡು ಘಟಕಗಳನ್ನು ವಿಳಂಬಗೊಳಿಸುವ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಸಾಧ್ಯತೆಗಳಿವೆ. ಇತ್ತೀಚೆಗೆ ಅಸ್ತಾನಾದಲ್ಲಿ ನಡೆದ ಶಾಂಘೈ ಸಹಕಾರ ಸಮ್ಮೇಳನದಲ್ಲಿಯೂ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಕೆಲವು ಮಹತ್ವದ ವಿಷಯವನ್ನು ಸ್ಪಷ್ಟವಾಗಿ ಮತ್ತು ಬಲವಾಗಿ ಪ್ರಸ್ತಾಪಿಸಿದ್ದರು. ಇದೀಗ ಪ್ರಧಾನಿ ಮೋದಿ ಅವರೇ ಈ ವಿಷಯವನ್ನು ಪುಟಿನ್ ಅವರ ಬಳಿ ಉನ್ನತ ಮಟ್ಟದಲ್ಲಿ ಪ್ರಸ್ತಾಪಿಸಬಹುದು ಎಂದು ಹೇಳಲಾಗುತ್ತಿದೆ.

    ಉದ್ಯೋಗದ ಆಮಿಷ ಒಡ್ಡಿ ಸುಮಾರು 20 ಭಾರತೀಯರನ್ನು ರಷ್ಯಾ ಸೇನೆಗೆ ಸೇರಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲ ಉಕ್ರೇನ್‌ನಲ್ಲಿ ನಡೆದ ಹೋರಾಟದಲ್ಲಿ ಇಬ್ಬರು ಭಾರತೀಯರೂ ಸಾವನ್ನಪ್ಪಿದ್ದಾರೆ. ಅನೇಕ ಭಾರತೀಯ ನಾಗರಿಕರು ರಷ್ಯಾದ ಸೇನೆಯಲ್ಲಿ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಏಪ್ರಿಲ್‌ನಲ್ಲಿ ದೃಢಪಡಿಸಿತ್ತು. ಈ ಪೈಕಿ 10 ಮಂದಿ ಭಾರತಕ್ಕೆ ಮರಳಿದ್ದಾರೆ.

  • 10 ಮಕ್ಕಳನ್ನು ಹೆರಿ, ಹಣ ಪಡೆಯಿರಿ- ರಷ್ಯಾ ಮಹಿಳೆಯರಿಗೆ ಬಂಪರ್‌ ಆಫರ್‌

    10 ಮಕ್ಕಳನ್ನು ಹೆರಿ, ಹಣ ಪಡೆಯಿರಿ- ರಷ್ಯಾ ಮಹಿಳೆಯರಿಗೆ ಬಂಪರ್‌ ಆಫರ್‌

    ಮಾಸ್ಕೋ: ಕೋವಿಡ್ -19 ಸಾಂಕ್ರಾಮಿಕ ಮತ್ತು ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಹೊರಹೊಮ್ಮಿದ ದೇಶದ ಜನಸಂಖ್ಯಾ ಬಿಕ್ಕಟ್ಟನ್ನು ಸರಿದೂಗಿಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೊಸ ಪ್ಲಾನ್ ಹುಡುಕಿಕೊಂಡಿದ್ದಾರೆ.

    ಹೌದು. 10 ಅಥವಾ ಹೆಚ್ಚಿನ ಮಕ್ಕಳನ್ನು ಹೊಂದಲು ಮಹಿಳೆಯರಿಗೆ ಪುಟಿನ್ ಹಣವನ್ನು ನೀಡುತ್ತಿದ್ದಾರೆ. 10 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡಿದರೆ ಅಂತಹ ಮಹಿಳೆಗೆ 13,500 ಡಾಲರ್ (12,92,861 ರೂ.) ನೀಡುವ ಯೋಜನೆ ಜಾರಿಗೆ ತರಲು ನಿರ್ಧರಿಸಿದ್ದಾರೆ.

    ಸಾಂಕ್ರಾಮಿಕ ರೋಗ ಹಾಗೂ ಯುದ್ಧದ ಪರಿಣಾಮ ರಷ್ಯಾದಲ್ಲಿ ಜನಸಂಖ್ಯೆ ಕ್ಷೀಣಿಸಿದೆ. ಈ ಹಿನ್ನೆಲೆಯಲ್ಲಿ ಪುಟಿನ್, ‘ಮದರ್ ಹೀರೋಯಿನ್’ ಎಂಬ ಯೋಜನೆಯಡಿ ಈ ಗಿಫ್ಟ್ ಮಹಿಳೆಯರಿಗೆ ನೀಡುವ ಕುರಿತು ಘೋಷಣೆ ಮಾಡಿದ್ದಾರೆ ಎಂದು ರಷ್ಯಾದ ರಾಜಕೀಯ ಮತ್ತು ಭದ್ರತಾ ತಜ್ಞ ಡಾ. ಜೆನ್ನಿ ಮಾಥರ್ಸ್ ತಿಳಿಸಿದ್ದಾರೆ. ಇದನ್ನೂ ಓದಿ: ಚಿತ್ರರಂಗದಲ್ಲಿ ಬೆಳೆಯಬೇಕು, ಇಷ್ಟು ಬೇಗ ನಾನು ಮದುವೆ ಆಗಲ್ಲ: ಸೋನು ಶ್ರೀನಿವಾಸ್ ಗೌಡ

    2022ರ ಮಾರ್ಚ್ ನಿಂದ ರಷ್ಯಾದಲ್ಲಿ ಪ್ರತಿ ದಿನ ಹಲವು ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಅಲ್ಲದೆ ಉಕ್ರೇನ್-ರಷ್ಯಾ ನಡುವಿನ ಯುದ್ಧದಿಂದ ಸುಮಾರು 50 ಸಾವಿರ ಸೈನಿಕರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಹೆಚ್ಚು ಸದಸ್ಯರನ್ನು ಒಳಗೊಂಡ ಕುಟುಂಬಗಳನ್ನು ಹೊಂದಿರುವರು ಹೆಚ್ಚು ದೇಶಭಕ್ತರಾಗುತ್ತಾರೆ ಎಂದು ಪುಟಿನ್ ಹೇಳುತ್ತಿದ್ದಾರೆ ಎಂದು ಡಾ ಮ್ಯಾಥರ್ಸ್ ಹೇಳಿದರು.

    ಒಟ್ಟಿನಲ್ಲಿ ಪುಟಿನ್ ಅವರ ಈ ಸ್ಕೀಮ್, ನಿಸ್ಸಂಶಯವಾಗಿ ರಷ್ಯಾದ ಮಹಿಳೆಯರನ್ನು ಪ್ರೋತ್ಸಾಹಿಸಲು ಅಥವಾ ಅವರನ್ನು ಪ್ರೇರೇಪಿಸುವ ಪ್ರಯತ್ನವಾಗಿದೆ. ಆದರೆ ಇಲ್ಲಿನ ಗಮನಿಸಬೇಕಾದ ವಿಚಾರವೆಂದರೆ ಪುಟಿನ್ ನೀಡುವ ಹಣದಲ್ಲಿ 10 ಮಕ್ಕಳನ್ನು ಸಾಕಲು ಸಾಧ್ಯವೇ? ಈಗಾಗಲೇ ರಷ್ಯಾದಲ್ಲಿ ಅನೇಕ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳಿದ್ದು, ಇವುಗಳ ನಡುವೆ ಮಕ್ಕಳನ್ನು ಬೆಳೆಸುವುದು ಹೇಗೆ ಎಂಬ ಪ್ರಶ್ನೆ ಕಾಡಿದೆ ಅವರು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ರುಬೆಲ್ ಮೂಲಕ ಖರೀದಿಸಿದರಷ್ಟೇ ತೈಲ: ವಿರೋಧಿಗಳಿಗೆ ಶಾಕ್ ಕೊಟ್ಟ ಪುಟಿನ್

    ರುಬೆಲ್ ಮೂಲಕ ಖರೀದಿಸಿದರಷ್ಟೇ ತೈಲ: ವಿರೋಧಿಗಳಿಗೆ ಶಾಕ್ ಕೊಟ್ಟ ಪುಟಿನ್

    ಮಾಸ್ಕೋ: ಆರ್ಥಿಕ ನಿರ್ಬಂಧ ಹೇರಿದ ನ್ಯಾಟೋ ರಾಷ್ಟ್ರಗಳಿಗೆ ಈಗ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತೈಲ ಶಾಕ್ ನೀಡಿದ್ದಾರೆ.

    ಉಕ್ರೇನ್ ಮೇಲೆ ಸಮರ ಸಾರಿದ ಬಳಿಕ ಡಾಲರ್ ಮುಂದೆ ದಿನೇ ದಿನೇ ರಷ್ಯದ ಕರೆನ್ಸಿ ರುಬೆಲ್ ಮೌಲ್ಯ ಕಡಿಮೆಯಾಗುತ್ತಿದೆ. ಇದನ್ನು ಸರಿ ಮಾಡಲು ಪುಟಿನ್ ತನ್ನ ವಿರೋಧಿ ರಾಷ್ಟ್ರಗಳು ರುಬೆಲ್ ಮೂಲಕವೇ ತೈಲ ಖರೀದಿ ಮಾಡಬೇಕು ಎಂದು ಆದೇಶ ಪ್ರಕಟಿಸಿದ್ದಾರೆ. ಇದನ್ನೂ ಓದಿ: ರಷ್ಯಾ ಯುದ್ಧವನ್ನು 2ನೇ ಮಹಾಯುದ್ಧಕ್ಕೆ ಹೋಲಿಸಿದ ಝೆಲೆನ್ಸ್ಕಿ

    ಉಕ್ರೇನ್ ಮೇಲೆ ಯುದ್ಧದಿಂದಾಗಿ ಹಲವು ದೇಶಗಳು ರಷ್ಯಾದ ಕಚ್ಚಾತೈಲದ ಮೇಲೆ ನಿರ್ಬಂಧ ಹೇರಿದೆ. ಯುರೋಪಿಯನ್ ಕಮಿಷನ್ ಸಹ ಈ ವರ್ಷ ರಷ್ಯಾದ ಅನಿಲದ ಮೇಲಿನ ಯುರೋಪಿಯನ್ ಅವಲಂಬನೆ 2/3 ರಷ್ಟು ಕಡಿತಗೊಳಿಸಲು ಯೋಜಿಸಿದ್ದು, 2030ರ ವೇಳೆಗೆ ರಷ್ಯಾದ ಮೇಲಿನ ಅವಲಂಬನೆಯನ್ನು ಸಂಪೂರ್ಣ ಸ್ಥಗಿತಗೊಳಿಸಲು ಚಿಂತನೆ ನಡೆಸಿವೆ. ಇದನ್ನೂ ಓದಿ: ವ್ಲಾಡಿಮಿರ್‌ ಪುಟಿನ್‌ ಎಷ್ಟು ಶ್ರೀಮಂತ? ರಷ್ಯಾ ನಾಯಕನ ಜೀವನ ಶೈಲಿ ಹೇಗಿದೆ ಗೊತ್ತಾ?

    ಈ ನಡುವೆಯೂ ಹಲವು ಯುರೋಪಿಯನ್ ದೇಶಗಳು ರಷ್ಯಾದ ತೈಲದ ಮೇಲೆ ಅವಲಂಬಿತವಾಗಿದೆ. ಜರ್ಮನಿಯ ಅನೇಕ ಕಂಪನಿಗಳು ರಷ್ಯಾದದಿಂದ ಭಾರೀ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡುತ್ತಿವೆ. ಹೀಗಾಗಿ ಈಗ ತನ್ನ ವಿರುದ್ಧ ನಿರ್ಬಂಧ ಹೇರಿದ್ದಕ್ಕೆ ಪ್ರತಿಯಾಗಿ ರಷ್ಯಾ ತನ್ನ ಸ್ನೇಹಿಯಲ್ಲದ ರಾಷ್ಟ್ರಗಳು ರುಬೆಲ್ ಮೂಲಕವೇ ತೈಲ ಖರೀದಿಸಬೇಕಿದೆ ಎಂಬ ಷರತ್ತನ್ನು ವಿಧಿಸಿದೆ.

    ಯುರೋಪಿಯನ್ ದೇಶಗಳ ಬಳಕೆಯ ಒಟ್ಟು ಅನಿಲಯದಲ್ಲಿ ಶೇ.40 ರಷ್ಟು ಅನಿಲವನ್ನು ರಷ್ಯಾ ಒಳಗೊಂಡಿದೆ. ಈಗಾಗಲೇ ಜಾಗತಿಕ ಮಟ್ಟದಲ್ಲಿ ಬ್ಯಾರಲ್‍ಗೆ 100 ಡಾಲರ್ (ಸುಮಾರು 7,594.67 ರೂ.) ಇದ್ದ ಕಚ್ಚಾತೈಲ 140 ಡಾಲರ್‍ಗೆ (ಸುಮಾರು 10,632.53 ರೂ.) ತಲುಪಿದೆ. ಅಲ್ಲದೆ, ಕೆಲವು ಯುರೋಪಿಯನ್ ದೇಶಗಳು ಅನಿಲ ಬೆಲೆಯನ್ನು ಬುಧವಾರ ಶೇ.30ರಚ್ಚು ಹೆಚ್ಚಿಸಿದೆ. ಇದು ಗರಿಷ್ಠ ಮಟ್ಟದ ಏರಿಕೆಯಾಗಿದೆ ಎಂದು ತೈಲ ಕಂಪನಿಗಳು ಅಂದಾಜಿಸಿವೆ. ಹಾಗಾಗಿ ಎದುರಾಳಿ ದೇಶಗಳನ್ನು ಬಗ್ಗು ಬಡಿಯಲು ಪುಟಿನ್  ಷರತ್ತನ್ನು ವಿಧಿಸಿದ್ದಾರೆ.

    ವಿರೋಧಿ ರಾಷ್ಟ್ರಗಳು ರಷ್ಯಾ ದೇಶಗಳಿಂದ ಅನಿಲ ಖರೀದಿಯನ್ನು ರುಬೆಲ್ ಮೂಲಕವೇ ಖರೀದಿಸಬೇಕು. ನಮ್ಮ ಅನಿಲ ಬೇಕಾದರೆ, ನಮ್ಮ ದೇಶದ ಕರೆನ್ಸಿಯಲ್ಲೇ ವಹಿವಾಟು ನಡೆಸಬೇಕು. ರಷ್ಯಾವು ಹಿಂದೆ ತೀರ್ಮಾನಿಸಿದ ಒಪ್ಪಂದಗಳಂತೆ ನಿಗದಿತ ಬೆಲೆಗಳಿಗೆ ಅನುಗುಣವಾಗಿ ಕಚ್ಚಾತೈಲ ಪೂರೈಕೆ ಮಾಡುವುದನ್ನು ಮುಂದುವರಿಸುತ್ತದೆ. ಆದರೆ, ನಮ್ಮ ಕರೆನ್ಸಿಯಲ್ಲೇ ಅವರು ವ್ಯವಹರಿಸಬೇಕು ಎಂದು ಪುಟಿನ್ ಷರತ್ತು ವಿಧಿಸಿದ್ದಾರೆ.

    ಯುದ್ಧ ಆರಭದ ಬಳಿಕ ಒಂದು ಡಾಲರ್ ರುಬೆಲ್ ಮೌಲ್ಯ 100ರ ಗಡಿ ದಾಟಿತ್ತು. ಪುಟಿನ್ ನಿರ್ಧಾರದ ಬಳಿಕ ರುಬೆಲ್ ಬಲವಾಗಿದ್ದು ಒಂದು ಡಾಲರ್ ರುಬೆಲ್ ಮೌಲ್ಯ 98 ವಿನಿಮಯವಾಗುತ್ತಿದೆ.

  • ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದ ಬೈಡನ್

    ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದ ಬೈಡನ್

    ವಾಷಿಂಗ್ಟನ್: ಉಕ್ರೇನ್-ರಷ್ಯಾ ನಡುವೆ ಯುದ್ಧ ತೀವ್ರಗತಿಯಲ್ಲಿ ಸಾಗುತ್ತಿದೆ. ಈ ನಡುವೆ ರಷ್ಯಾ ಸೇನೆ 1,500ಕ್ಕೂ ಹೆಚ್ಚು ಜನರಿಗೆ ಆಶ್ರಯ ಕೊಟ್ಟಿದ್ದ ಥಿಯೇಟರ್ ಮೇಲೆ ಬಾಂಬ್ ದಾಳಿ ಮಾಡಿದೆ. ಈ ಹಿನ್ನೆಲೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ರಷ್ಯಾ ಅಧ್ಯಕ್ಷ ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದು ಕರೆದಿದ್ದಾರೆ.

    ಶ್ವೇತಾಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಷ್ಯಾ – ಉಕ್ರೇನ್ ಯುದ್ಧ ಕುರಿತು ಮಾತನಾಡಿದ ಬೈಡನ್, ಉಕ್ರೇನ್‍ನಲ್ಲಿ ರಷ್ಯಾದ ನಾಯಕನ ದಾಳಿಯು ಹೆಚ್ಚು ನಾಗರಿಕರನ್ನು ಬಲಿತೆಗೆದುಕೊಂಡಿತು. ‘ನೂರಾರು’ ಜನರು ಆಶ್ರಯ ಪಡೆದಿದ್ದ ಥಿಯೇಟರ್ ಮೇಲೆ ಬಾಂಬ್ ದಾಳಿ ಮಾಡಿ ಧ್ವಂಸಗೊಳಿಸಿದ್ದಾರೆ. ಇದು ಅಮಾನವೀಯವಾಗಿದೆ. ಈ ಮೂಲಕ ಪುಟಿನ್ ‘ಯುದ್ಧ ಅಪರಾಧಿ’ ಯಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ:‌ ರಷ್ಯಾದ ಪಡೆಯಿಂದ ಕಿಡ್ನಾಪ್ ಆಗಿದ್ದ ಮೇಯರ್ ಬಿಡುಗಡೆ

    Joe Biden

    ಬಂದರು ನಗರವಾದ ಮಾರಿಯುಪೋಲ್‍ನ ಅಧಿಕಾರಿಗಳು ಡ್ರಾಮಾ ಥಿಯೇಟರ್‌ನಲ್ಲಿ ಸತ್ತವರನ್ನು ಎಣಿಸಲು ಹೆಣಗಾಡುತ್ತಿದ್ದರು. ಕಟ್ಟಡದ ಅವಶೇಷಗಳಿಂದ ದಟ್ಟವಾದ ಹೊಗೆ ಹೊರಬರುತ್ತಿದೆ ಎಂದು ಹೇಳಿದ್ದಾರೆ.

    ಫೆಬ್ರವರಿ 24 ರಂದು ಪುಟಿನ್ ಆಕ್ರಮಣ ಮಾಡಿದ ನಂತರ ಉಕ್ರೇನ್‍ನಾದ್ಯಂತ ನಾಗರಿಕರ ಮೇಲಿನ ಹಲ್ಲೆ ನಡೆಯುತ್ತ ಇದೆ. ಇತ್ತೀಚೆಗೆ ಇದು ಅತಿರೇಕಕ್ಕೆ ಹೋಗಿದ್ದು, ಮನೆಗಳು, ಆಸ್ಪತ್ರೆಗಳು ಮತ್ತು ಗಿರಣಿ ಅಂಗಡಿಗಳ ಮೇಲೆಯೇ ರಷ್ಯಾ ಸೈನಿಕರು ದಾಳಿ ಮಾಡುತ್ತಿದ್ದಾರೆ. ಇದರಿಂದ ಅಲ್ಲಿನ ನಾಗರಿಕರು ತಮ್ಮ ಸುರಕ್ಷತೆಯ ಜಾಗ ಹುಡುಕುವುದರಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ‘ಜೇಮ್ಸ್’ ಸಿನಿಮಾ: ಅಭಿಮಾನಿಗಳ ಫಸ್ಟ್ ರಿಯ್ಯಾಕ್ಷನ್ 

    Biden slams 'war criminal' Putin as Ukraine civilian horror grows

    ಉಕ್ರೇನ್‍ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯು ಯುಎಸ್ ಕಾಂಗ್ರೆಸ್ ಮತ್ತು ಅಧ್ಯಕ್ಷರಿಗೆ ಸಹಾಯಕ್ಕಾಗಿ ಒಂದು ದೊಡ್ಡ ಮನವಿಯನ್ನು ಮಾಡಿದ್ದರು. ಅದಕ್ಕೆ ಬೈಡನ್, ರಷ್ಯಾದ ಆಕ್ರಮಣಕಾರಿ ಸೈನ್ಯದ ವಿರುದ್ಧ ಹೋರಾಡಲು 1 ಬಿಲಿಯನ್ ಹೊಸ ಶಸ್ತ್ರಾಸ್ತ್ರಗಳನ್ನು ನೀಡುವುದಾಗಿ ಪ್ರತಿಕ್ರಿಯಿಸಿದ್ದರು.

  • ವಿಶ್ವ ಯುದ್ಧ ನಂತ್ರ ಫಸ್ಟ್ ಟೈಂ ಏಸುಕ್ರಿಸ್ತನ ಶಿಲ್ಪ ಸ್ಥಳಾಂತರ

    ವಿಶ್ವ ಯುದ್ಧ ನಂತ್ರ ಫಸ್ಟ್ ಟೈಂ ಏಸುಕ್ರಿಸ್ತನ ಶಿಲ್ಪ ಸ್ಥಳಾಂತರ

    ಕೀವ್: ರಷ್ಯಾ-ಉಕ್ರೇನ್ ಯುದ್ಧ ನಡೆಯುತ್ತಿರುವಂತೆಯೇ, ಎಲ್ವಿವ್‍ನ ಅರ್ಮೇನಿಯನ್ ಕ್ಯಾಥೆಡ್ರಲ್‍ನಲ್ಲಿರುವ ಯೇಸುಕ್ರಿಸ್ತನ ಶಿಲ್ಪವನ್ನು ಸ್ಥಳಾಂತರ ಮಾಡಲಾಗಿದೆ ಎಂದು ಪೂರ್ವ ಯುರೋಪಿಯನ್ ಮಾಧ್ಯಮ ಸಂಸ್ಥೆ ನೆಕ್ಸ್‌ಟಾ ಮಂಗಳವಾರ ವರದಿ ಮಾಡಿದೆ.

    ಈ ಹಿಂದೆ ವಿಶ್ವ ಸಮರ 2ರ (1939-1945) ಸಮಯದಲ್ಲಿ ಕ್ಯಾಥೆಡ್ರಲ್ ಚರ್ಚ್‍ನಿಂದ ಕೊನೆಯ ಬಾರಿಗೆ ಈ ಯೇಸುಕ್ರಿಸ್ತನ ಪ್ರತಿಮೆಯನ್ನು ಸ್ಥಳಾಂತರಿಸಲಾಗಿತ್ತು. ಫೆಬ್ರವರಿ 24 ರಂದು ರಷ್ಯಾ ಉಕ್ರೇನಿಯನ್ ನಗರಗಳನ್ನು ಆಕ್ರಮಿಸಿದೆ. ಇದನ್ನೂ ಓದಿ: ಬಿಹಾರ ವರನ ಕೈ ಹಿಡಿದ ಜರ್ಮನಿ ಮಹಿಳೆ

    ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಫೆಬ್ರವರಿ 24 ರಂದು ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದರು. ಅಂದಿನಿಂದ ರಷ್ಯಾದ ಮಿಲಿಟರಿ ನೂರಾರು ಕ್ಷಿಪಣಿ ಮತ್ತು ಫಿರಂಗಿ ದಾಳಿಗಳನ್ನು ದೇಶಾದ್ಯಂತ ಮತ್ತು ಇತರ ಸೈಟ್‍ಗಳ ಮೇಲೆ ನಡೆಸಿವೆ. ಇದನ್ನೂ ಓದಿ: ರೇಣುಕಾಚಾರ್ಯ, ಪ್ರತಾಪಸಿಂಹ ವಿರುದ್ಧದ 4 ಕೇಸ್‌ ವಾಪಸ್‌ ಪಡೆದ ಸರ್ಕಾರ- ಹೈಕೋರ್ಟ್‌ ಗರಂ

    ಹೋರಾಟ ಪ್ರಾರಂಭವಾದಾಗಿನಿಂದ ಕನಿಷ್ಠ 331 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ದೃಢಪಡಿಸಲಾಗಿದೆ. ಆದರೆ ನಿಜವಾದ ಸಂಖ್ಯೆ ಬಹುಶಃ ಹೆಚ್ಚು ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಹೇಳಿದೆ. ಇದರ ಮಧ್ಯೆ 1.5 ದಶಲಕ್ಷಕ್ಕೂ ಹೆಚ್ಚು ಜನರು ಉಕ್ರೇನ್‍ನಿಂದ ಪಲಾಯನ ಮಾಡಿದ್ದಾರೆ.

  • ಪುಟಿನ್ ನಮ್ಮ ಚಿಕ್ಕಪ್ಪ, ಯುದ್ಧ ನಡೆಯಲ್ಲ – ಸರ್ಕಾರದ ಸೂಚನೆಯನ್ನು ಲೇವಡಿ ಮಾಡಿದ್ದ ವಿದ್ಯಾರ್ಥಿಗಳು

    ಪುಟಿನ್ ನಮ್ಮ ಚಿಕ್ಕಪ್ಪ, ಯುದ್ಧ ನಡೆಯಲ್ಲ – ಸರ್ಕಾರದ ಸೂಚನೆಯನ್ನು ಲೇವಡಿ ಮಾಡಿದ್ದ ವಿದ್ಯಾರ್ಥಿಗಳು

    ಬೆಂಗಳೂರು: ಉಕ್ರೇನ್‍ನಿಂದ ವಿದ್ಯಾರ್ಥಿಗಳು ಭಾರತದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

    ಪುಟಿನ್ ನಮ್ಮ ಚಿಕ್ಕಪ್ಪ ಇದ್ದಂತೆ. ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡುವುದಿಲ್ಲ. ಮಾಧ್ಯಮಗಳು ಟಿಆರ್‌ಪಿಗಾಗಿ ಯುದ್ಧದ ವರದಿ ಮಾಡುತ್ತಿವೆ ಎಂದು ಹೇಳಿ ವ್ಯಂಗ್ಯಮಾಡಿದ್ದಾರೆ.

    ರಷ್ಯಾ ದಾಳಿ ಮಾಡುವ ಸಾಧ್ಯತೆ ಹೆಚ್ಚಿದ್ದ ಕಾರಣ ಉಕ್ರೇನ್‍ನಲ್ಲಿರುವ ಭಾರತದ ರಾಯಭಾರ ಕಚೇರಿ ಫೆ. 15 ರಂದೇ ದೇಶವನ್ನು ತೊರೆಯುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿತ್ತು. ಆದರೆ ವಿದ್ಯಾರ್ಥಿಗಳು ಈ ಸೂಚನೆಯನ್ನು ಧಿಕ್ಕರಿಸಿ ಇಲ್ಲಿ ಏನು ನಡೆಯುವುದಿಲ್ಲ. ನಾವೆಲ್ಲ ನೃತ್ಯ, ಹಾಡನ್ನು ಹಾಡಿ ಎಂಜಾಯ್ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. 2 ವಾರದ ಹಿಂದೆ ಈ ವಿಡಿಯೋ ಅಪ್ಲೋಡ್ ಆಗಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿ ಏನಿದೆ?
    ಭಾರತೀಯ ಮೂಲದ ವೈದ್ಯಕೀಯ ವಿಧ್ಯಾರ್ಥಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾನೆ. ವೀಡಿಯೋದಲ್ಲಿ ವಿದ್ಯಾರ್ಥಿಯು ಉಕ್ರೇನ್‍ನವೊಂದು ಪ್ರತಿಷ್ಠಿತ ವೈದ್ಯಕೀಯ ಕಾಲೇಜಿಗೆ ತೆರಳಿದ್ದಾನೆ. ಅಲ್ಲಿಯ ಕೆಲ ಭಾರತೀಯ ವಿದ್ಯಾರ್ಥಿಗಳೊಂದಿಗೆ ಚಿಕ್ ಚಾಟ್ ಮಾಡಿದ ಅವನು, ಉಕ್ರೇನ್‍ನಲ್ಲಿ ನಮಗೆ ಯಾವುದೇ ರೀತಿಯ ಸಮಸ್ಯೆಯಾಗಿಲ್ಲ. ಫೆಬ್ರವರಿ 16ರಿಂದ ನಮಗೆ ಯಾವುದೇ ಸಮಸ್ಯೆ ಆಗಿಲ್ಲ. ನಾವೆಲ್ಲರೂ ಅಂದು ತರಗತಿಗೆ ತೆರಳಿ ಪಾಠ ಕೇಳಿ, ಆರಾಮವಾಗಿ ಮನೆಗೆ ತೆರಳಿ ವಿಶ್ರಾಂತಿ ಪಡೆದಿದ್ದೇವೆ ಸಮಯ ಹೋಗಿದ್ದೇ ಗೊತ್ತಾಗಿಲ್ಲ ಎಂದಿದ್ದಾಳೆ.

    ರಷ್ಯಾವು ಉಕ್ರೇನ್‍ನಿಂದ ಟ್ಯಾಂಕರ್‌ಗಳನ್ನು ಹಿಂಪಡೆದ ವಿಚಾರವಾಗಿ ಮಾತನಾಡಿದ ಅವಳು, ಹಾಗೇನಿಲ್ಲ ಮಾಧ್ಯಮಗಳಿಗೆ ಮಾಡೋಕೆ ಬೇರೆನು ಕೆಲಸವಿಲ್ಲ. ಇಂತಹ ಕೆಲ ವಿಚಾರಗಳು ಸಿಕ್ಕರೆ ಟಿಆರ್‌ಪಿಗೋಸ್ಕರ್ ಏನೇನಾದರೂ ಮಾಡತ್ತಾರೆ. ಅವರಿಗೆ ಮಾಡೋಕೆ ಬೇರೆ ಯಾವ ಸುದ್ದಿಯಿಲ್ಲ. ಅದಕ್ಕೆ ಏನೇನೂ ಸುಳ್ಳು ಸುದ್ದಿ ಹಬ್ಬಿಸುತ್ತಾರೆ ಎಂದಳು. ಇದೇ ವೇಳೆ ವೀಡಿಯೋದಲ್ಲಿ ಮತ್ತೋರ್ವ ವಿದ್ಯಾರ್ಥಿನಿ ಮಾತನಾಡಿ, ಎನು ಆಗಿಲ್ಲ ಆದರೆ ಮನೆಯಲ್ಲಿ ಪೋಷಕರು ಸ್ವಲ್ಪ ಭಯಪಡುತ್ತಿದ್ದಾರೆ ಎಂದಳು.

    ಮತ್ತೊಬ್ಬ ವಿದ್ಯಾರ್ಥಿ ಮಾತನಾಡಿ, ಉಕ್ರೇನ್‍ನಲ್ಲಿ ಯಾವುದೇ ಯುದ್ಧವೇ ಆಗಿಲ್ಲ. ರಷ್ಯಾದವರು ಉಕ್ರೇನ್ ಮೇಲೆ ದಾಳಿ ನಡೆಸುತ್ತಾರೆಂದು ಕಾಯುತ್ತಾ ಕುಳಿತ್ತಿದ್ದೆವು. ನನಗೆ ಯುದ್ಧ ನೋಡುವ ಆಸೆ ತುಂಬಾ ಇತ್ತು. ರಷ್ಯಾದ ಪುಟಿನ್‍ಗೆ ನಾನು ಕರೆ ಮಾಡಿ ಯುದ್ಧ ಬೇಡ ಎಂದು ಹೇಳಿದ್ದೇನೆ. ಪುಟಿನ್ ನಮ್ಮ ಚಿಕ್ಕಪ್ಪ ಇದ್ದಂತೆ ಎಂದು ವ್ಯಂಗ್ಯವಾಡಿದ್ದಾನೆ.

    ಮತ್ತೊಬ್ಬ ವಿದ್ಯಾರ್ಥಿ ಮಾತನಾಡಿ, ಯುದ್ಧ ಏನೋ ನಡಿಯುತ್ತಿದೆ ನಡೆಯಲಿ ಬಿಡಿ. ಮುಖ್ಯವಾಗಿ ಹೇಳುವದಾದರೆ ಇಡೀ ದೇಶವೇ ಇಷ್ಟೊಂದು ಇಕ್ಕಟ್ಟಿನ ಪರಿಸ್ಥಿತಿಯಲ್ಲಿದೆ ಆದರೆ ನಮ್ಮ ವಿಶ್ವವಿದ್ಯಾಲಯದಿಂದ ಯಾರಿಗೆ ಡ್ಯಾನ್ಸ್ ಹಾಗೂ ಹಾಡಲು ಬರುತ್ತೆ ಹೇಳಿ ಎಂದು ಕೆಲವು ಸೂಚನೆಗಳು ಬರುತ್ತಿದ್ದವು ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೇ ವೀಡಿಯೋದ ಕೊನೆಯಲ್ಲಿ ಇಲ್ಲಿ ನಮಗೆ ಇಲ್ಲದ ಸಮಸ್ಯೆ ನಿಮಗ್ಯಾಕೆ ಎಂದು ಪ್ರಶ್ನಿಸಿ ಅಹಂಕಾರ ಮೆರೆದಿದ್ದಾರೆ.‌

  • ಉಕ್ರೇನ್ ಮೇಲೆ ಕಣ್ಣು ಯಾಕೆ? ರಷ್ಯಾಗೆ ಯಾಕೆ ಯಾರ ಭಯವಿಲ್ಲ?

    ಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ವಿರುದ್ಧ ಯುದ್ಧ ಸಾರಿದ್ದಾರೆ. ತಮ್ಮ ಭಾಷಣದಲ್ಲಿ ತಮ್ಮ ಈ ವಿಚಾರದಲ್ಲಿ ಬೇರೆಯವರು ಮಧ್ಯ ಪ್ರವೇಶ ಮಾಡಿದರೆ ರಷ್ಯಾ ಕೂಡಲೇ ಪ್ರತಿದಾಳಿ ನಡೆಸಲಿದೆ ಮತ್ತು ಇತಿಹಾಸದಲ್ಲಿ ಕೇಳರಿಯದ ರೀತಿ ತಿರುಗೇಟು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಇಲ್ಲಿ ಉಕ್ರೇನ್ ಮೇಲೆ ರಷ್ಯಾದ ಕಣ್ಣು ಯಾಕೆ? ಉಕ್ರೇನ್ ಎಷ್ಟು ಶ್ರೀಮಂತ ಇತ್ಯಾದಿ ವಿಚಾರಗಳ ಬಗ್ಗೆ ಕಿರು ಮಾಹಿತಿಯನ್ನು ನೀಡಲಾಗಿದೆ.

    ಪ್ರಜಾಪ್ರಭುತ್ವ ದೇಶ:
    ರಷ್ಯಾ-ಉಕ್ರೇನ್ ನಿವಾಸಿಗಳ ಧರ್ಮ, ಆಚಾರ, ವಿಚಾರ, ಆಹಾರ, ಉಡುಗೆ ಎಲ್ಲವೂ ಒಂದೇ. ಇದರ ಜೊತೆ ಉಕ್ರೇನ್‌ನಲ್ಲಿ ಫಲವತ್ತಾದ ಭೂಮಿ, ಖನಿಜ ಸಂಪತ್ತು ಹೇರಳವಾಗಿದೆ. ಪ್ರಾಚೀನ ನಾಗರಿಕತೆಯ ಪರಂಪರೆ ಉಳ್ಳ ಉಕ್ರೈನ್, ಕಮ್ಯುನಿಸ್ಟ್ ಸೋವಿಯತ್ ತೆಕ್ಕೆಯಲ್ಲಿ ಬಹುಕಾಲ ಇತ್ತು. 1991 ರಲ್ಲಿ ಸೋವಿಯತ್ ಪತನವಾಗಿ 15 ಹೋಳುಗಳಾದಾಗ ಮರಳಿ ಜನಿಸಿದ ಉಕ್ರೈನ್ ಸಮೃದ್ಧವಾಗಿ ಬೆಳೆಯತೊಡಗಿತು.

    ಸ್ಟಾಲಿನ್‌ನಂತಹ ಸರ್ವಾಧಿಕಾರಿಯ ಕಾಲದಲ್ಲಿ ಉಕ್ರೇನ್‌ನಲ್ಲಿ ಬರಗಾಲವನ್ನುಂಟುಮಾಡಿ ಉಕ್ರೇನಿಯನ್ನರನ್ನು ಉಪವಾಸದಲ್ಲಿರಿಸಿ, ಸಾಯಿಸಿ, ಆ ಜಾಗದಲ್ಲಿ ರಷ್ಯನ್ನರನ್ನು ವಲಸೆ ಕಳುಹಿಸಿದಂತಹ ಕೆಲಸವನ್ನೂ ರಷ್ಯಾ ಮಾಡಿತ್ತು. ರಷ್ಯಾದ ಹಿಡಿತದಲ್ಲಿದ್ದಷ್ಟು ದಿನವೂ ರಷ್ಯನ್ ನುಡಿಯ ಹೇರಿಕೆಯನ್ನು ಅನುಭವಿಸಿದ್ದ ಉಕ್ರೇನ್ ಸೋವಿಯತ್ ಪತನದ ಬಳಿಕ ಒಂದು ಆಧುನಿಕ ಪ್ರಜಾಪ್ರಭುತ್ವ ದೇಶವಾಗಿ ಬೆಳೆಯತೊಡಗಿತು.

    ರಷ್ಯಾದಲ್ಲಿ ಪ್ರಜಾಪ್ರಭುತ್ವವನ್ನು ಕೊನೆಗೊಳಿಸಿ ತನ್ನ ಎದುರಾಳಿಗಳನ್ನು ಕೊಂದು ಇಲ್ಲವೇ ಜೈಲಿಗೆ ದಬ್ಬಿ ಮೆರೆಯುತ್ತಿದ್ದ ಪುಟಿನ್‌ಗೆ ಪಕ್ಕದಲೇ ಒಂದು ಯಶಸ್ವಿ ಪ್ರಜಾಪ್ರಭುತ್ವ ನೆಲೆಯಾಗಿ ಉಕ್ರೇನ್ ಬದಲಾಗುತ್ತಿರುವುದು ಇಷ್ಟವಾಗುತ್ತಿರಲಿಲ್ಲ. ಉಕ್ರೇನಿಯನ್ನರನ್ನು ನೋಡಿ ಎಲ್ಲಿ ರಷ್ಯನ್ನರು ಬಂಡೇಳುತ್ತಾರೋ ಎನ್ನುವ ಆತಂಕ ರಷ್ಯಾಗೆ ಇತ್ತು. ಇದನ್ನೂ ಓದಿ: ರಷ್ಯಾ ದಾಳಿಯಿಂದ ಉಕ್ರೇನ್‍ನಲ್ಲಿ ನಾಶವಾಗಿದ್ದು ಏನೇನು? ಇಲ್ಲಿದೆ ವಿವರ

    ಪುಟಿನ್ ಮಾಡಿದ್ದು ಏನು?
    ಸಂಪತ್ಭರಿತ ದೇಶವಾಗಿರುವ ಉಕ್ರೇನ್ ಮೇಲೆ ಕಣ್ಣು ಹಾಕಿದ್ದ ಪುಟಿನ್ ಉಕ್ರೇನ್‌ನಲ್ಲಿರುವ ಬಂಡಾಯ ಹೋರಾಟಗಾರರಿಗೆ ಸಹಕಾರ ನೀಡತೊಡಗಿದರು. ಒಂದು ದೇಶವನ್ನು ಕೆಡವಬೇಕಾದರೆ ಆ ದೇಶದ ಸರ್ಕಾರದ ವಿರುದ್ಧವೇ ಜನರನ್ನು ದಂಗೆ ಏಳುವಂತೆ ಮಾಡುವು ತಂತ್ರ ಹೊಸದೆನಲ್ಲ. ಈ ತಂತ್ರವನ್ನೇ ಬಳಸಿಕೊಂಡ ರಷ್ಯಾ ಉಕ್ರೇನ್ ಬಂಡಾಯ ಹೋರಾಟಗಾರರಿಗೆ ಆರ್ಥಿಕ ಸಹಕಾರ, ಶಸ್ತ್ರಾಸ್ತ್ರವನ್ನು ನೀಡಿ ಬಂಡಾಯ ಏಳುವಂತೆ ಮಾಡಿ ಯಶಸ್ವಿಯಾಯಿತು.

    ನ್ಯಾಟೋ ಸಹಕಾರ:
    ರಷ್ಯಾದಿಂದ ಕಿರಿಕ್ ಜಾಸ್ತಿ ಆಗುತ್ತಿದ್ದಂತೆ ಉಕ್ರೇನ್ ಯುರೋಪ್ ರಾಷ್ಟ್ರಗಳ ಪರ ವಾಲತೊಡಗಿತು. ಯುರೋಪಿನ ನ್ಯಾಟೋ ಒಕ್ಕೂಟಕ್ಕೆ ಉಕ್ರೇನ್ ಸೇರಲು ಯತ್ನಿಸುತ್ತಿದ್ದಂತೆ ಪುಟಿನ್ ಸಿಟ್ಟಿಗೆ ಕಾರಣವಾಗಿತು. ಯಾವುದೇ ಕಾರಣಕ್ಕೂ ಉಕ್ರೇನ್ ನ್ಯಾಟೋಗೆ ಸೇರಬಾರದು ಮೊದಲು ಹೇಗಿತ್ತೋ ಅದೇ ರೀತಿಯಾಗಿ ಮುಂದುವರಿಯಬೇಕು ಎನ್ನುವುದು ಪುಟಿನ್ ವಾದ. ಈ ವಾದಕ್ಕೆ ಉಕ್ರೇನ್ ಸೊಪ್ಪು ಹಾಕದ ಕಾರಣ ಪುಟಿನ್ ಈಗ ಯುದ್ಧ ಘೋಷಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ಗೆ ಹೋಗುತ್ತಿದ್ದ ಏರ್ ಇಂಡಿಯಾ ಮಾರ್ಗಮಧ್ಯದಲ್ಲೇ ವಾಪಸ್

    ರಷ್ಯಾಗೆ ಭಯ ಯಾಕಿಲ್ಲ?
    ಪ್ರಸ್ತುತ ವಿಶ್ವದ ಸೂಪರ್ ಪವರ್ ದೇಶವಾದ ಅಮೆರಿಕ ಈಗಾಗಲೇ ಕೋವಿಡ್‌ನಿಂದ ಆರ್ಥಿಕವಾಗಿ ಭಾರೀ ನಷ್ಟವಾಗಿದೆ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿದ್ದ ಯುರೋಪ್ ದೇಶಗಳು ಕೊರೊನಾದಿಂದ ಈಗಷ್ಟೇ ಚೇತರಿಕೆ ಕಾಣುತ್ತಿದೆ.

    ಆರ್ಥಿಕತೆ ನೆಲಕಚ್ಚಿರುವ ಯುರೋಪ್ ದೇಶಗಳು ಯುದ್ಧಕ್ಕೆ ಆಸಕ್ತಿ ತೋರಿಸಿದರೂ ಭಾರೀ ನಷ್ಟ ಅನುಭವಿಸಲಿದೆ. ರಷ್ಯಾಗೆ ವಿವಿಧ ದೇಶಗಳು ನಿರ್ಬಂಧ ಹೇರಿದರೂ ರಷ್ಯಾ ಈಗಾಗಲೇ ತನ್ನ ಕಾಲ ಮೇಲೆ ನಿಂತುಕೊಂಡಿದೆ. ತೈಲವನ್ನು ತಾನೇ ಉತ್ಪಾದನೆ ಮಾಡುತ್ತದೆ. ಆಹಾರ ಸಾಮಾಗ್ರಿಗಳಿಗೆ ಯಾವುದೇ ಸಮಸ್ಯೆ ಆಗಲಾರದು. ಇದನ್ನೂ ಓದಿ: Russia-Ukraine Crisis: ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಉಕ್ರೇನ್ ಮನವಿ

    Vladimir Putin

    ಉಕ್ರೇನ್ ಮೇಲಿನ ಯುದ್ಧ ಘೋಷಣೆಯ ಭಾಷಣದಲ್ಲಿ ಪುಟಿನ್ ದೇಶದ ಆರ್ಥಿಕತೆಯ ಬಗ್ಗೆ ಪುಟಿನ್ ಗಮನ ಹರಿಸದೇ ಇರುವ ವಿಚಾರ ಸ್ಪಷ್ಟವಾಗುತ್ತದೆ. ಆರ್ಥಿಕತೆ ಪೆಟ್ಟು ಬಿದ್ದರೂ ಉಕ್ರೇನ್ ವಶಪಡಿಸಲೇಬೇಕೆಂಬ ಹಠಕ್ಕೆ ಪುಟಿನ್ ಬಿದ್ದಿದ್ದಾರೆ. ಇದನ್ನೂ ಓದಿ: ಏನಿದು ಎಸ್-400 ಟ್ರಯಂಫ್? ಹೇಗೆ ಕೆಲಸ ಮಾಡುತ್ತೆ? ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ ಆತಂಕ ಯಾಕೆ?

    ಚೀನಾ ಈಗಾಗಲೇ ರಷ್ಯಾಗೆ ಸಹಕಾರ ನೀಡಿದೆ. ಎಸ್ 400 ವಾಯು ರಕ್ಷಣಾ ವ್ಯವಸ್ಥೆ ಹೊಂದಿರುವ ಏಕೈಕ ರಾಷ್ಟ್ರ ರಷ್ಯಾ. ಮಿಲಿಟರಿ, ವಾಯು, ನೌಕಾ ಸೇನೆ ವಿಚಾರದಲ್ಲೂ ರಷ್ಯಾ ಪ್ರಭಲ ದೇಶವಾಗಿ ಹೊರಹೊಮ್ಮಿದೆ. ಈ ಎಲ್ಲ ಕಾರಣದಿಂದ ಪುಟಿನ್ ಅಮೆರಿಕ, ನ್ಯಾಟೋ ಪಡೆಗಳ ಬೆದರಿಕೆಗೆ ಜಗ್ಗದೇ ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿದ್ದಾರೆ.

  • ರಷ್ಯಾದ ವಿರೋಧ ಪಕ್ಷದ ನಾಯಕನಿಗೆ ವಿಷ ಪ್ರಾಶನ – ಕೋಮಾಗೆ ಜಾರಿದ ನಾಯಕ

    ರಷ್ಯಾದ ವಿರೋಧ ಪಕ್ಷದ ನಾಯಕನಿಗೆ ವಿಷ ಪ್ರಾಶನ – ಕೋಮಾಗೆ ಜಾರಿದ ನಾಯಕ

    ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರನ್ನು ಪ್ರಬಲವಾಗಿ ಟೀಕಿಸುತ್ತಿದ್ದ ವಿಪಕ್ಷ ನಾಯಕ ಏಕಾಏಕಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಕೋಮಾದಲ್ಲಿದ್ದಾರೆ.

    ರಷ್ಯಾ ಆಫ್‌ದ ಫ್ಯೂಚರ್‌ನ ನಾಯಕ ಅಲೆಕ್ಸಿ ನವಲ್ನಿ (44) ಸೈಬೀರಿಯಾದ ಟೋಮ್ಸ್‌ನಿಂದ ಮಾಸ್ಕೋಗೆ ವಿಮಾನದಲ್ಲಿ ಬರುತ್ತಿದ್ದಾಗ ಅಸ್ವಸ್ಥಗೊಂಡಿದ್ದಾರೆ. ಸದ್ಯ ಅವರು ಸೈಬೀರಿಯಾದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಅಲೆಕ್ಸಿ ನವಲ್ನಿ ಆರೋಗ್ಯವಾಗಿದ್ದರು. ಅವರಿಗೆ ಆಹಾರದಲ್ಲಿ ವಿಷವನ್ನು ನೀಡಿರುವ ಸಾಧ್ಯತೆಯಿದೆ ಎಂದು ನವಲ್ನಿ ಅವರ ವಕ್ತಾರೆ ಕಿರಾ ಯರ್ಮೈಶ್‌ ಗಂಭೀರ ಆರೋಪ ಮಾಡಿದ್ದಾರೆ.

    ಮಾಸ್ಕೋಗೆ ಬರುತ್ತಿದಾಗ ದಿಢೀರ್‌ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿದೆ. ಹೀಗಾಗಿ ವಿಮಾನವನ್ನು ತುರ್ತು ಲ್ಯಾಂಡಿಗ್‌ ಮಾಡಿ ನವಲ್ನಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ನವಲ್ನಿ ಅವರು ಬೆಳಗ್ಗೆ ಚಹಾ ಮಾತ್ರ ಸೇವಿಸಿದ್ದಾರೆ. ಹೀಗಾಗಿ ಚಹಾದಲ್ಲಿ ವಿಷ ಹಾಕಿರುವ ಸಾಧ್ಯತೆಯಿದೆ ಎಂದು ವಕ್ತಾರೆ ಸಂಶಯ ವ್ಯಕ್ತ ಪಡಿಸಿದ್ದಾರೆ. ವಕ್ತಾರೆಯ ಆರೋಪದ ಹಿನ್ನೆಲೆಯಲ್ಲಿ ಈಗ ಕೆಫೆಯಲ್ಲಿರುವ ಸಿಸಿಟಿವಿ ಪರೀಶಲನೆ ನಡೆಸಲಾಗುತ್ತಿದೆ.

    ಆಸ್ಪತ್ರೆಯ ವೈದ್ಯರು ಮಾಧ್ಯಮಗಳ ಜತೆಗೆ ಮಾತನಾಡಿ ಅಲೆಕ್ಸಿ ನವಲ್ನಿ ಅವರಿಗೆ ವಿಷ ಪ್ರಾಶನ ಮಾಡಲಾಗಿದೆ ಎಂಬ ಅಂಶ ಇದುವರೆಗೆ ದೃಢಪಟ್ಟಿಲ್ಲ ಎಂದು ಹೇಳಿದ್ದಾರೆ.

    ಪುಟಿನ್‌ ನೇತೃತ್ವದ ಯುನೈಟೆಡ್‌ ರಷ್ಯಾ ಪಕ್ಷ ಕಳ್ಳರು ಮತ್ತು ವಂಚರ ಪಕ್ಷವೆಂದು ದೂರಿದ್ದ ನವಲ್ನಿ ಭ್ರಷ್ಟಾಚಾರದ ಆರೋಪ ಮಾಡಿದ್ದರು. 2011ರಲ್ಲಿ ಅವರನ್ನು ಬಂಧಿಸಿ 15 ದಿನಗಳ ಕಾಲ ಜೈಲಿನಲ್ಲಿ ಇರಿಸಲಾಗಿತ್ತು. 2013ರಲ್ಲಿ ಪ್ರಕರಣವೊಂದರಲ್ಲಿ ಶಿಕ್ಷೆ ಅನುಭವಿಸಿದ್ದರು.