Tag: purchase

  • ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಕೇಂದ್ರ ಸರ್ಕಾರದ ಬಂಪರ್ ಗಿಫ್ಟ್

    ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಕೇಂದ್ರ ಸರ್ಕಾರದ ಬಂಪರ್ ಗಿಫ್ಟ್

    ನವದೆಹಲಿ: ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಭಾರತವನ್ನು ಗ್ಲೋಬಲ್ ಹಬ್ ಮಾಡುವತ್ತ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಮುಖ್ಯಾಂಶಗಳು:
    – ಕಡಿಮೆ ದರದಲ್ಲಿ ಜನರಿಗೆ ಎಲೆಕ್ಟ್ರಿಕ್ ವಾಹನ ದೊರೆಯುವಂತಾಗಲು ಈಗ ಇರುವ ಶೇ.12 ತೆರಿಗೆ ವ್ಯಾಪ್ತಿಯ ಬದಲು ಶೇ.5ರ ತೆರಿಗೆ ವ್ಯಾಪ್ತಿ ಒಳಗಡೆ ತರಲು ಜಿಎಸ್‍ಟಿ ಕೌನ್ಸಿಲ್ ಬಳಿ ಮನವಿ ಮಾಡಲಾಗಿದೆ.

    – 2023ರ ಮಾರ್ಚ್ 31ರ ಒಳಗಡೆ ಸಾಲ ಮಾಡಿ 1.50 ಲಕ್ಷ ರೂ. ಮೌಲ್ಯದ ವಾಹನದ ಖರೀದಿಸಿದರೆ ಅದಕ್ಕೆ ಯಾವುದೇ ಬಡ್ಡಿ ಇಲ್ಲ.

    – ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಹೆಚ್ಚಿಸುವ ಸಂಬಂಧ 2018ರಲ್ಲಿ ಫೇಮ್ ಯೋಜನೆಯನ್ನು ಪರಿಚಯಿಸಿರುವ ಕೇಂದ್ರ ಸರ್ಕಾರವು 2019-21ರ ಅವಧಿಗೆ 2ನೇ ಹಂತದ ಯೋಜನೆಯನ್ನು ಘೋಷಣೆ ಮಾಡಿದ್ದು, ಇದಕ್ಕೆ 10 ಸಾವಿರ ಕೋಟಿ ಅನುದಾನ ನೀಡಲಾಗಿದೆ.

    – ಹೆಚ್ಚಿನ ಸುಧಾರಿತ ಬ್ಯಾಟರಿ ಮತ್ತು ನೋಂದಾಯಿತ ಇ-ವಾಹನಗಳಿಗೆ ಯೋಜನೆಯಡಿ ಪ್ರೋತ್ಸಾಹ. ಜನ ಸಾಮಾನ್ಯರಿಗೆ ಕೈಗೆಟುಕುವ ಮತ್ತು ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆ ಆಯ್ಕೆ ಮಾಡಲು ಒತ್ತು.

    – ಆರ್ಥಿಕ ಬೆಳವಣಿಗೆ ಮತ್ತು ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ಕ್ಷೇತ್ರದಲ್ಲಿ ಲಿಥಿಯಂ ಬ್ಯಾಟರಿ, ಸೌರ ವಿದ್ಯುತ್ ಚಾರ್ಜಿಂಗ್ ಉತ್ಪಾದನೆ ಕ್ಷೇತ್ರಗಳಲ್ಲಿ ಹೂಡಿಕೆ ಸಂಬಂಧಿತವಾಗಿ ಆದಾಯ ತೆರಿಗೆ ವಿನಾಯಿತಿಗಳನ್ನು ನೀಡುವುದು.

  • 114 ಯುದ್ಧ ವಿಮಾನಗಳ ಖರೀದಿಗೆ ಸಿದ್ಧತೆ-ವಿಶ್ವದಲ್ಲೇ ಬೃಹತ್ ಡೀಲ್‍ಗೆ ಮುಂದಾದ ಭಾರತ

    114 ಯುದ್ಧ ವಿಮಾನಗಳ ಖರೀದಿಗೆ ಸಿದ್ಧತೆ-ವಿಶ್ವದಲ್ಲೇ ಬೃಹತ್ ಡೀಲ್‍ಗೆ ಮುಂದಾದ ಭಾರತ

    ನವದೆಹಲಿ: ಯುದ್ಧ ವಿಮಾನ ಖರೀದಿಸುವ ನಿಟ್ಟಿನಲ್ಲಿ ಭಾರತ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, 114 ಯುದ್ಧ ವಿಮಾನಗಳ ಖರೀದಿಗೆ ಮುಂದಾಗಿದೆ. ಈ ಮೂಲಕ ವಿಶ್ವದಲ್ಲೇ ಅತಿ ದೊಡ್ಡ ಡೀಲ್‍ಗೆ ಭಾರತ ಮುಂದಾಗಿದೆ.

    114 ವಿಮಾನಗಳನ್ನು ಖರೀದಿಸುವ ಕುರಿತು ಈಗಾಗಲೇ ಬಿಡ್ಡಿಂಗ್ ಆಹ್ವಾನಿಸಲು ಸಿದ್ಧತೆ ಮಾಡಿಕೊಂಡಿದ್ದು, ಇದು ವಿಶ್ವದಲ್ಲೇ ಬೃಹತ್ ಡೀಲ್ ಆಗಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಹಳೆಯ ಯುದ್ಧ ವಿಮಾನಗಳನ್ನು ಬದಲಿಸುವುದು ಹಾಗೂ ಹೊಸದಾಗಿ ಹೆಚ್ಚು ವಿಮಾನಗಳನ್ನು ಖರೀದಿಸುವ ಮೂಲಕ ದೇಶದ ಸಶಸ್ತ್ರ ಪಡೆಗಳ ಸಾಮಥ್ರ್ಯವನ್ನು ಹೆಚ್ಚಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

    ಈ ಬೃಹತ್ ಡೀಲ್‍ನ ಬೆಲೆ ಸುಮಾರು 15 ಬಿಲಿಯನ್ ಯುಎಸ್ ಡಾಲರ್‍ಗಿಂತ ಹೆಚ್ಚಾಗಿದೆ. ಇದಕ್ಕಾಗಿ ಅಧಿಕಾರಿಗಳು ವಿವಿಧ ತಯಾರಿಸಿ ನಡೆಸಿದ್ದಾರೆ. ಬೋಯಿಂಗ್ ಕಂ., ಲಾಕ್‍ಹೀಡ್ ಮಾರ್ಟೀನ್ ಕಾರ್ಪೋರೇಷನ್ ಹಾಗೂ ಸ್ವೀಡನ್‍ನ ಸಾಬ್ ಎಬಿ ಸೇರಿದಂತೆ ವಿವಿಧ ಪ್ರಮುಖ ಯುದ್ಧ ನೌಕೆಗಳ ಉತ್ಪಾದಕರನ್ನು ರಕ್ಷಣಾ ಅಧಿಕಾರಿಗಳು ಸೆಳೆಯುತ್ತಿದ್ದಾರೆ. ಇವುಗಳಲ್ಲಿ ಶೇ.85ರಷ್ಟು ಉತ್ಪಾದನೆ ಭಾರತದಲ್ಲೇ ಆಗಬೇಕು ಎಂದು ಕಳೆದ ವರ್ಷವೇ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

    ದೇಶದ ರಕ್ಷಣಾ ಪಡೆಗಳನ್ನು ಅಧುನಿಕರಣಗೊಳಿಸುವುದು ಪ್ರಧಾನಿ ಮೋದಿ ಅವರಿಗೆ ಸವಾಲಾಗಿ ಪರಿಣಮಿಸಿದ್ದು, ನೆರೆಯ ಚೀನಾ ಹಾಗೂ ಪಾಕಿಸ್ತಾನಗಳಿಂದ ಬೆದರಿಕೆ ಎದುರಾದರೂ ಮೊದಲ ಅವಧಿಯಲ್ಲಿ ಯಾವುದೇ ಹೊಸ ಪ್ರಮುಖ ಶಸ್ತ್ರಾಸ್ತ್ರ ಒಪ್ಪಂದಗಳಿಗೆ ಸಹಿ ಹಾಕಲಿಲ್ಲ. ಇತ್ತೀಚೆಗೆ ಸೋವಿಯತ್ ನಿರ್ಮಿತ ಭಾರತ ಹಳೆಯ ಮಿಗ್-21 ಯುದ್ಧ ವಿಮಾನ ಪಾಕಿಸ್ತಾನದ ಅಧುನಿಕ ಎಫ್-16 ಯುದ್ಧ ವಿಮಾನವನ್ನೇ ಹೊಡೆದುರುಳಿಸಿತ್ತು.

    ಖರೀಸುವ ಪ್ರಕ್ರಿಯೆ ಪ್ರಾರಂಭ
    ವಿವಿಧ ಯುದ್ಧ ವಿಮಾನಗಳ ಉತ್ಪಾದಕರಿಂದ ಬಿಡ್ಡಿಂಗ್ ಆಹ್ವಾನಿಸಲು ಈಗಾಗಲೇ ಭಾರತೀಯ ವಾಯು ಸೇನೆಯ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಕಿರಿಯ ರಕ್ಷಣಾ ಸಚಿವ ಶ್ರೀಪಾದ್ ನಾಯಕ್ ಅವರು ಸಂಸತ್‍ನಲ್ಲಿ ಪ್ರಸ್ತಾಪಿಸಿದ್ದು, ಟ್ಯಾಂಕ್‍ಗಳು, ಶಸ್ತ್ರಸಜ್ಜಿತ ವಾಹನಗಳನ್ನು ಖರೀದಿಸಲು ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದು, ವಿದೇಶಿ ಹಡಗು ನಿರ್ಮಾಣ ಮಾಡುವವರಿಂದ ಭಾರತದಲ್ಲಿ ಜಲಾಂತರ್ಗಾಮಿ ನೌಕೆಗಳನ್ನು ತಯಾರಿಸಲು ಕೇಳಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ ಗಡಿಯ ಭದ್ರತೆ ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಭಾರತ ನೌಕಾಪಡೆ ಹಾಗೂ ಕರಾವಳಿ ಕಾವಲುಗಾರರಿಗೆ ಯುದ್ಧ ನೌಕೆಗಳು ಹಾಗೂ ಹಡಗುಗಳನ್ನು ಖರೀದಿಸಲು ಬಿಡ್ ಕರೆಯಲಾಗಿದೆ. 150(2.2ಬಿಲಿಯನ್ ಡಾಲರ್) ಬಿಲಿಯನ್ ಮೌಲ್ಯದ 6 ಕ್ಷಿಪಣಿ ಯುದ್ಧ ನೌಕೆಗಳು ಹಾಗೂ ಇತರ ಸಣ್ಣ ಹಡಗುಗಳ ನಿರ್ಮಾಣಕ್ಕೆ ಮುಂದಾಗಿದೆ. ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಪ್ರಧಾನಿ ಮೋದಿ ಆಡಳಿತ ಸೋಮವಾರ 7 ಶಿಪ್‍ಯಾರ್ಡ್ ಗಳಿಗೆ ತಿಳಿಸಿದೆ ಎಂದು ನಾಯಕ್ ತಿಳಿದ್ದಾರೆ.

    ಭಾರತೀಯ ವಾಯು ಸೇನೆ ಹಾಗೂ ನೌಕಾಪಡೆಗೆ ಒಟ್ಟು 400 ಸಿಂಗಲ್ ಹಾಗೂ ಡಬಲ್ ಎಂಜಿನ್ ಯುದ್ಧ ವಿಮಾನಗಳ ಅಗತ್ಯವಿದೆ ಎಂದು ಸರ್ಕಾರ ತಿಳಿಸಿದೆ.

    ಬೋಯಿಂಗ್‍ಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನಡೆಸುವ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‍ಎಎಲ್) ಹಾಗೂ ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್ ಲಿ., ಫೈಟರ್ ಜೆಟ್‍ಗಳ ಖರೀದಿಗೆ ಎಫ್/ಎ-18, ಲಾಕ್‍ಹೀಡ್ ತನ್ನ ಎಫ್-21 ಜೆಟ್‍ಗಳಿಗಾಗಿ ಟಾಟಾ ಗ್ರೂಪ್‍ನೊಂದಿಗೆ ಜಂಟಿಯಾಗಿ ಬಿಡ್ ಮಾಡಲಿದೆ. ಸಾಬ್ ತನ್ನ ಗ್ರಪೆನ್ ಜೆಟ್‍ಗಳನ್ನು ತಯಾರಿಸಲು ಗೌತಮ್ ಅದಾನಿಯೊಂದಿಗೆ ಕೈ ಜೋಡಿಸಲಿದೆ.

    2015ರಲ್ಲಿ 11 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ 126 ರಫೇಲ್ ಯುದ್ಧ ವಿಮಾನಗಳನ್ನು ಡಸಾಲ್ಟ್ ಏವಿಯೇಷನ್‍ನೊಂದಿಗಿನ ಆದೇಶವನ್ನು ರದ್ದುಗೊಳಿಸಿದ ನಂತರ ಮತ್ತೆ ರಫೇಲ್ ಖರೀದಿಸಲು ಒಂದು ದಶಕವೇ ಬೇಕಾಯಿತು. ಕಳೆದ ಬಾರಿಯ ಮೋದಿ ಸರ್ಕಾರದ ಆಡಳಿತಾವಧಿಯಲ್ಲಿ 36 ಜೆಟ್‍ಗಳನ್ನು ಪ್ರತ್ಯೇಕವಾಗಿ ಖರೀದಿಸಲಾಯಿತು. ಆದರೆ, ಈ ಬಾರಿಯ ಟೆಂಡರ್‍ನಲ್ಲಿ ಆಯ್ಕೆಯಾದವರು ಒಪ್ಪಂದ ಮಾಡಿಕೊಂಡ ಮೂರು ವರ್ಷಗಳಲ್ಲಿ ಮೊದಲ ಜೆಟ್‍ನಲ್ಲಿ ಹಸ್ತಾಂತರಿಸಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ.

  • OLX ನಲ್ಲಿ ವಾಹನ ಖರೀದಿಸುವಾಗ ಎಚ್ಚರ..!

    OLX ನಲ್ಲಿ ವಾಹನ ಖರೀದಿಸುವಾಗ ಎಚ್ಚರ..!

    ಬೆಂಗಳೂರು: OLXನಲ್ಲಿ ವಾಹನ ಖರೀದಿಸುವಾಗ ಎಚ್ಚರವಾಗಿರಿ. ಯಾಕೆಂದರೆ ಇಲ್ಲೊಬ್ಬ ಭೂಪ ಸೈನಿಕನಂತೆ ವೇಷ ಹಾಕಿ ಜನರನ್ನು ಮೋಸ ಮಾಡುತ್ತಿದ್ದಾನೆ.

    ಸೈನಿಕ ಅಂತ ಹೇಳಿಕೊಂಡಿರುವ ವಿಕಾಸ್ ಪಟೇಲ್ ಎಂಬಾತ OLXನಲ್ಲಿ ಜನರಿಗೆ ಮೋಸ ಮಾಡಿದ್ದಾನೆ. ಬೆಂಗಳೂರಿನ ಆರ್ ಟಿಓ ಕಚೇರಿಯಲ್ಲಿ ರಿಜಿಸ್ಟರ್ ಆಗಿರುವ ಗಾಡಿಯನ್ನು OLXನಲ್ಲಿ ಸೇಲ್ ಮಾಡಿದ್ದು, ಈಗಾಗಲೇ ಸಾಕಷ್ಟು ವಾಹನಗಳನ್ನು OLXನಲ್ಲಿ ಸೇಲ್‍ಗಿಟ್ಟು ಜನರಿಗೆ ಟೋಪಿ ಹಾಕಿದ್ದಾನೆ.

    ಮೋಸ ಹೇಗೆ ಮಾಡುತ್ತಿದ್ದ;
    ಮೊದಲಿಗೆ ವಾಹನವನ್ನು OLX ನಲ್ಲಿ ಸೇಲ್‍ಗಿಡುತ್ತಾನೆ. ಇದನ್ನು ನೋಡಿದ ಗ್ರಾಹಕರು ಖರೀದಿ ಮಾಡಲು ಮುಂದಾಗುತ್ತಾರೆ. ಬಳಿಕ ನೀವು ಪೇಟಿಯಂ ಮೂಲಕ ಹಣ ಕಳುಹಿಸಿ, ನಾನು ಸೈನಿಕನಾಗಿರುವುದರಿಂದ ತುರ್ತು ಕೆಲಸದಲ್ಲಿದ್ದೇನೆ. ಟ್ರಾನ್ಸ್ ಪೋರ್ಟ್ ಮೂಲಕ ನಿಮಗೆ ವಾಹನ ಕಳಿಸುವೆ ಅಂತ ಹೇಳುತ್ತಾನೆ. ಅಷ್ಟೇ ಅಲ್ಲದೇ ಜನರನ್ನು ನಂಬಿಸಲು ತನ್ನ ನಕಲಿ ಆರ್ಮಿಕಾರ್ಡ್, ಫೋಟೋ, ಪಾನ್ ಕಾರ್ಡ್ ಜೊತೆಗೆ ಸೇನೆಯಲ್ಲಿರುವ ಫೋಟೋವನ್ನು ಕಳಿಸುತ್ತಾನೆ. ಯೋಧ ಯಾವತ್ತು ಮೋಸ ಮಾಡಲಾರ ಅಂತ ಅಂದುಕೊಂಡ ಜನ ಈತನಿಗೆ ಪೇಟಿಯಂ ಮೂಲಕ ಹಣ ಕಳಿಸುತ್ತಾರೆ. ಆದರೆ ಇತ್ತ ತನ್ನ ಖಾತೆಗೆ ಹಣ ಬರುತ್ತಿದ್ದಂತೆ ತನ್ನ ನಂಬರನ್ನು ಬದಲಾಯಿಸುತ್ತಿದ್ದನು.

    ಬೆಂಗಳೂರು ಮೂಲದವ ಅಂತ ಹೇಳಿಕೊಂಡಿರುವ ವಿಕಾಸ್, ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಕೆಲಸ ಮಾಡೋದಾಗಿ ಹೇಳಿ ಜನರಿಗೆ ಮೋಸ ಮಾಡಿದ್ದಾನೆ. ಈತ ಸೇಲ್‍ಗಿಟ್ಟಿರುವ ವಾಹನ ಬೆಂಗಳೂರು ಆರ್ ಟಿಓದಲ್ಲಿ ನೋಂದಾಣಿಯಾಗಿರುವಂತದ್ದು. ಈಗಾಗಲೇ ಗುರುಮೂರ್ತಿ ಹಾಗೂ ಫೈಜಲ್ ಸೇರಿದಂತೆ ಅನೇಕರು ಈತನನ್ನು ನಂಬಿ ಲಕ್ಷಾಂತರ ದುಡ್ಡು ಕಳೆದುಕೊಂಡಿದ್ದಾರೆ. ಸದ್ಯ ನಕಲಿ ಸೈನಿಕನ ವಿರುದ್ಧ ಸಾರಿಗೆ ಇಲಾಖೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೂಗಲ್ ತೆಕ್ಕೆಗೆ ಬೆಂಗಳೂರಿನ ‘ವೇರ್ ಈಸ್ ಮೈ ಟ್ರೈನ್’ ಆ್ಯಪ್ ಕಂಪನಿ

    ಗೂಗಲ್ ತೆಕ್ಕೆಗೆ ಬೆಂಗಳೂರಿನ ‘ವೇರ್ ಈಸ್ ಮೈ ಟ್ರೈನ್’ ಆ್ಯಪ್ ಕಂಪನಿ

    ಬೆಂಗಳೂರು: ಭಾರತೀಯ ರೈಲುಗಳು ಈಗ ಎಲ್ಲಿ ಸಂಚರಿಸುತ್ತಿದೆ ಎನ್ನುವ ನಿಖರ ಮಾಹಿತಿಯನ್ನು ತಿಳಿಸುವ ‘ವೇರ್ ಈಸ್ ಮೈ ಟ್ರೈನ್’ ಅಪ್ಲಿಕೇಶನ್‍ನನ್ನು ಗೂಗಲ್ ಖರೀದಿಸಿದೆ.

    ಟೆಕ್ ವಿಶ್ಲೇಷಕರ ಪ್ರಕಾರ, ಗೂಗಲ್ ಭಾರತದಲ್ಲಿ ಜನಪ್ರಿಯ ಹೊಂದುತ್ತಿರುವ ‘ವೇರ್ ಈಸ್ ಮೈ ಟ್ರೈನ್’ ಆ್ಯಪನ್ನು ಅಭಿವೃದ್ಧಿ ಪಡಿಸಿದ ಸಿಗ್ಮಯಿಡ್ ಕಂಪನಿಯನ್ನು ಅಂದಾಜು 40 ಮಿಲಿಯನ್ ಡಾಲರ್ (288 ಕೋಟಿ ರೂಪಾಯಿ) ಖರೀದಿಸುವ ಸಂಬಂಧ ಮಾತುಕತೆ ನಡೆಸಿತ್ತು. ಈಗ ಈ ಕಂಪನಿಯನ್ನು ಎಷ್ಟು ಕೋಟಿ ರೂ. ನೀಡಿ ಖರೀದಿಸಿದೆ ಎನ್ನುವ ಮಾಹಿತಿ ಬಹಿರಂಗವಾಗಿಲ್ಲ.

    ಗೂಗಲ್ ಸಂಸ್ಥೆ ಖರೀದಿಸಿದ ಎರಡನೇ ಖರೀದಿ ಇದಾಗಿದ್ದು, ಇದಕ್ಕೂ ಮೊದಲು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕಂಪನಿ ‘ಹಳ್ಳಿ ಲ್ಯಾಬ್ಸ್’ ಖರೀದಿಸಿತ್ತು.

    ಏನಿದು `ವೇರ್ ಈಸ್ ಮೈ ಟ್ರೈನ್’ ಆ್ಯಪ್?
    ಭಾರತೀಯ ರೈಲುಗಳ ಮಾಹಿತಿಯನ್ನು ಒಳಗೊಂಡಿರುವ ಈ ಆ್ಯಪ್, ಪ್ರಯಾಣಿಕರ ರೈಲು ಯಾವ ನಿಲ್ದಾಣದ ಬಳಿ ಇದೆ ಎಂದು ನಿಖರವಾಗಿ ಹೇಳುತ್ತದೆ. ಇಂಟರ್‍ನೆಟ್ ಸೌಲಭ್ಯವಿಲ್ಲದಿದ್ದರೂ, ಗ್ರಾಹಕರು ರೈಲಿನ ಸಂಪೂರ್ಣ ಮಾಹಿತಿಯನ್ನು ರೈಲಿನ ಒಳಗಡೆ ಕುಳಿತು ಪಡೆದುಕೊಳ್ಳಬಹುದು. ಈ ಆ್ಯಪ್ ಆಫ್‍ಲೈನ್ ಜಿಪಿಎಸ್ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಕಾರಣ ರೈಲು ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿತ್ತು.

    ಈ ಆ್ಯಪ್ ಭಾರತೀಯ ರೈಲ್ವೇ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ರೈಲುಗಳ ಮಾಹಿತಿಯನ್ನು ಒಳಗೊಂಡಿದೆ. ಪ್ರಯಾಣಿಕರು ಆ್ಯಪ್ ನಲ್ಲಿ ಕೇವಲ ತಮ್ಮ ರೈಲು ಸಂಖ್ಯೆಯನ್ನು ನಮೂದಿಸಿದರೆ, ರೈಲು ಯಾವ ಸ್ಟೇಷನ್ ನಲ್ಲಿದೆ? ಮುಂದಿನ ನಿಲ್ದಾಣ ಯಾವುದು? ಎಷ್ಟು ಸಮಯಕ್ಕೆ ಬರುತ್ತದೆ? ಎನ್ನುವ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ.

    ‘ವೇರ್ ಈಸ್ ಮೈ ಟ್ರೇನ್’ ಆ್ಯಪ್ ಇಂಗ್ಲೀಷ್, ಹಿಂದಿ, ಮರಾಠಿ, ಬಂಗಾಳಿ, ತಮಿಳು, ತೆಲುಗು, ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ಲಭ್ಯವಿದ್ದು, ಇತ್ತೀಚೆಗೆ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ

    ಗೂಗಲ್ ಪ್ಲೇ ಸ್ಟೋರ್ ನಿಂದ 2018ರಲ್ಲಿ ಅತಿ ಹೆಚ್ಚು ಡೌನ್‍ಲೋಡ್ ಆಗಿರುವ ಆ್ಯಪ್ ಗಳ ಪೈಕಿ ವೇರ್ ಈಸ್ ಮೈ ಟ್ರೈನ್ ಸ್ಥಾನ ಪಡೆದುಕೊಂಡಿದ್ದು, ಇದೂವರೆಗೂ 50 ಲಕ್ಷಕ್ಕೂ ಅಧಿಕ ಮಂದಿ ಈ ಆ್ಯಪ್ ಡೌನ್‍ಲೋಡ್ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬೆಂಗ್ಳೂರಲ್ಲಿ ಮನೆ ಖರೀದಿ ಮಾಡ್ತೀರಾ? ಯಾವ ಪ್ರದೇಶದಲ್ಲಿ ಡಬಲ್ ಬೆಡ್ ರೂಂಗೆ ಎಷ್ಟು ಲಕ್ಷ? ಇಲ್ಲಿದೆ ಮಾಹಿತಿ

    ಬೆಂಗ್ಳೂರಲ್ಲಿ ಮನೆ ಖರೀದಿ ಮಾಡ್ತೀರಾ? ಯಾವ ಪ್ರದೇಶದಲ್ಲಿ ಡಬಲ್ ಬೆಡ್ ರೂಂಗೆ ಎಷ್ಟು ಲಕ್ಷ? ಇಲ್ಲಿದೆ ಮಾಹಿತಿ

    ಬೆಂಗಳೂರು: ರಾಜಧಾನಿಯಲ್ಲಿ ಮನೆ ಖರೀದಿಸುವುದೇ ದೊಡ್ಡ ಕಷ್ಟ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ದರ ನಿಗದಿಯಾಗಿದೆ. ಹೀಗಾಗಿ ಯಾವ ಪ್ರದೇಶದಲ್ಲಿ ಎಷ್ಟು ರೂ. ದರ ಇದೆ ಎನ್ನುವ ಮಾಹಿತಿಯನ್ನು ಮನೆ ಖರೀದಿಸುವ ಜನ ಹುಡುಕುತ್ತಿರುತ್ತಾರೆ.

    ದೇಶದ ರಿಯಲ್ ಎಸ್ಟೇಟ್ ವ್ಯವಹಾರದ ಬಗ್ಗೆ ಮಾಹಿತಿ datalabs.proptiger.ಯಾವ ಪ್ರದೇಶದಲ್ಲಿ ಎಷ್ಟು ದರ ಇದೆ ಎನ್ನುವುದನ್ನು ಅಂದಾಜಿಸಿದೆ. ಇದರಲ್ಲಿ ಸಿಂಗಲ್ ಬೆಡ್ ರೂಂ, ಡಬ್ಬಲ್ ಬೆಡ್ ರೂಂ ಹಾಗೂ ತ್ರಿಬ್ಬಲ್ ಬೆಡ್ ರೂಂ ಮನೆಗಳ ದರವನ್ನು ಪ್ರಕಟಿಸಿದೆ.

    50 ಲಕ್ಷ ರೂಪಾಯಿ, 50 ರಿಂದ 75 ಲಕ್ಷ ರೂಪಾಯಿಯೊಳಗಿನ ಮನೆಗಳು ಹಾಗೂ 75 ಲಕ್ಷ ರೂಪಾಯಿಗಿಂತ ಹೆಚ್ಚಿರುವ ಮನೆಗಳು ಎಂದು ವಿಂಗಡಿಸಿ ಈ ಮಾಹಿತಿಯನ್ನು ಪ್ರಕಟಿಸಿದೆ.

    ಯಾವ ಪ್ರದೇಶದಲ್ಲಿ ಎಷ್ಟು?
    ಚಂದಾಪುರ ಏರಿಯಾದ 1 ಬೆಡ್ ರೂಂನ 970 ಚದರ ಅಡಿಯಲ್ಲಿನ ಮನೆಯ ಪ್ರತಿ ಅಡಿಗೆ 2,550 ರೂಪಾಯಿಯಂತೆ ಅಂದಾಜು 24.76 ಲಕ್ಷ ರೂಪಾಯಿ ಇದ್ದರೆ, ಎಲೆಕ್ಟ್ರಾನಿಕ್ ಸಿಟಿ ಪೇಸ್ 1 ರಲ್ಲಿ 1 ಬೆಡ್ ರೂಂನ 990 ಚದರ ಅಡಿ ಮನೆಯ ಪ್ರತಿ ಅಡಿಗೆ 3,400 ರೂಪಾಯಿಯಂತೆ ಅಂದಾಜು 33.66 ಲಕ್ಷ ರೂಪಾಯಿ ನಿಗದಿಯಾಗಿದೆ.

    ಎಲೆಕ್ಟ್ರಾನಿಕ್ ಸಿಟಿ ಪೇಸ್ 2 ರಲ್ಲಿ 1 ಬೆಡ್ ರೂಂನ 1,030 ಚದರ ಅಡಿ ಮನೆಯ ಪ್ರತಿ ಅಡಿಗೆ 3,600 ರೂಪಾಯಿಯಂತೆ, ಅಂದಾಜು 37.08 ಲಕ್ಷ ರೂಪಾಯಿ ಆಗಲಿದೆ. ಗೊಟ್ಟಿಗೆರೆಯಲ್ಲಿ 2 ಬೆಡ್ ರೂಂನ 1,140 ಚದರ ಅಡಿ ಮನೆಯ ಪ್ರತಿ ಅಡಿಗೆ 3,450 ರೂಪಾಯಿಯಂತೆ ಅಂದಾಜು 39.33 ಲಕ್ಷ ರೂಪಾಯಿ ಆಗಲಿದೆ.

    ಜಕ್ಕೂರು ಪ್ರದೇಶದಲ್ಲಿ 2 ಬೆಡ್ ರೂಂನ 1,110 ಚದರ ಅಡಿ ಮನೆಯ ಪ್ರತಿ ಅಡಿಗೆ 3,900 ರೂಪಾಯಿಯಂತೆ ಅಂದಾಜು 43.29 ಲಕ್ಷ ರೂಪಾಯಿ ಆಗಲಿದೆ. ನಾಗರಭಾವಿ ಪ್ರದೇಶದಲ್ಲಿ 1 ಬೆಡ್ ರೂಂನ 930 ಚದರ ಅಡಿ ಮನೆಯ ಪ್ರತಿ ಅಡಿಗೆ 4,450 ರೂಪಾಯಿಯಂತೆ ಅಂದಾಜು 41.38 ಲಕ್ಷ ರೂಪಾಯಿ ನಿಗದಿಯಾಗಿದೆ

    ಸರ್ಜಾಪುರ ಪ್ರದೇಶದಲ್ಲಿ 1 ಬೆಡ್ ರೂಂನ 1,050 ಚದರ ಅಡಿ ಮನೆಯ ಪ್ರತಿ ಅಡಿಗೆ 3,050 ರೂಪಾಯಿಯಂತೆ ಅಂದಾಜು 32.02 ಲಕ್ಷ ರೂಪಾಯಿ ಆಗಲಿದ್ದು, ಥಣಿಸಂದ್ರ ಪ್ರದೇಶದಲ್ಲಿ 1 ಬೆಡ್ ರೂಂನ 1,020 ಚದರ ಅಡಿ ಮನೆಯ ಪ್ರತಿ ಅಡಿಗೆ 4,300 ರೂಪಾಯಿಯಂತೆ ಅಂದಾಜು 43.86 ಲಕ್ಷ ರೂಪಾಯಿ ಆಗಲಿದೆ.

    ವರ್ತೂರು ಪ್ರದೇಶದಲ್ಲಿ 1 ಬೆಡ್ ರೂಂನ 1,040 ಚದರ ಅಡಿ ಮನೆಯ ಪ್ರತಿ ಅಡಿಗೆ 3,900 ರೂಪಾಯಿಯಂತೆ ಅಂದಾಜು 40.56 ಲಕ್ಷ ರೂಪಾಯಿ ಆಗಲಿದ್ದು, ಯಲಹಂಕ ಪ್ರದೇಶದಲ್ಲಿ 1 ಬೆಡ್ ರೂಂನ 970 ಚದರ ಅಡಿ ಮನೆಯ ಪ್ರತಿ ಅಡಿಗೆ 4,250 ರೂಪಾಯಿಯಂತೆ ಅಂದಾಜು 41.22 ಲಕ್ಷ ರೂಪಾಯಿ ನಿಗದಿಯಾಗಿದೆ.

    50 ರಿಂದ 75 ಲಕ್ಷ ರೂ.:
    ಥಣಿಸಂದ್ರ ಮುಖ್ಯ ರಸ್ತೆ ಕಣ್ಣೂರಿನ ಪ್ರದೇಶದಲ್ಲಿ 2 ಬೆಡ್ ರೂಂನ 1,350 ಚದರ ಅಡಿ ಮನೆಯ ಪ್ರತಿ ಅಡಿಗೆ 4,550 ರೂಪಾಯಿಯಂತೆ ಅಂದಾಜು 61.42 ಲಕ್ಷ ರೂಪಾಯಿ ಆದರೆ, ಕೆಂಗೇರಿ ಪ್ರದೇಶದಲ್ಲಿ 2 ಬೆಡ್ ರೂಂನ 1,440 ಚದರ ಅಡಿ ಮನೆಯ ಪ್ರತಿ ಅಡಿಗೆ 4,050 ರೂಪಾಯಿಯಂತೆ ಅಂದಾಜು 58.32 ಲಕ್ಷ ರೂಪಾಯಿ ನಿಗದಿಯಾಗಿದೆ.

    ಕೆ.ಆರ್.ಪುರಂ ಪ್ರದೇಶದಲ್ಲಿ 2 ಬೆಡ್ ರೂಂನ 1,320 ಚದರ ಅಡಿ ಮನೆಯ ಪ್ರತಿ ಅಡಿಗೆ 4,550 ರೂಪಾಯಿಯಂತೆ ಅಂದಾಜು 60.06 ಲಕ್ಷ ರೂಪಾಯಿ ನಿಗದಿಯಾಗಿದ್ದರೆ, ಸುಬ್ರಹ್ಮಣ್ಯಪುರ ಪ್ರದೇಶದಲ್ಲಿ 2 ಬೆಡ್ ರೂಂನ 1,260 ಚದರ ಅಡಿ ಮನೆಯ ಪ್ರತಿ ಅಡಿಗೆ 5,100 ರೂಪಾಯಿಯಂತೆ ಅಂದಾಜು 64.26 ಲಕ್ಷ ರೂಪಾಯಿ ಆಗಲಿದೆ.

    ವೈಟ್‍ಫೀಲ್ಡ್‍ನ ಹೋಪ್ ಫಾರ್ಮ್ ಜಂಕ್ಷನ್ ಪ್ರದೇಶದಲ್ಲಿ 2 ಬೆಡ್ ರೂಂನ 1,350 ಚದರ ಅಡಿ ಮನೆಯ ಪ್ರತಿ ಅಡಿಗೆ 4,450 ರೂಪಾಯಿಯಂತೆ ಅಂದಾಜು 60.07 ಲಕ್ಷ ರೂಪಾಯಿ ಆಗಲಿದೆ.

    75 ಲಕ್ಷ ರೂ. ಮೇಲ್ಪಟ್ಟು ಎಲ್ಲಿ ಮನೆ ಸಿಗುತ್ತೆ?
    ಹೆಣ್ಣೂರು ಮುಖ್ಯ ರಸ್ತೆಯ ಅಂಗಾಲಾಪುರ ಪ್ರದೇಶದಲ್ಲಿ 3 ಬೆಡ್ ರೂಂನ 2,020 ಚದರ ಅಡಿ ಮನೆಯ ಪ್ರತಿ ಅಡಿಗೆ 6,400 ರೂಪಾಯಿಯಂತೆ ಅಂದಾಜು 129.28 ಲಕ್ಷ ರೂಪಾಯಿ ಆಗಲಿದೆ. ಹೊಸ ರೋಡ್ ಪ್ರದೇಶದಲ್ಲಿ 2 ಬೆಡ್ ರೂಂನ 1,770 ಚದರ ಅಡಿ ಮನೆಯ ಪ್ರತಿ ಅಡಿಗೆ 5,500 ರೂಪಾಯಿಯಂತೆ ಅಂದಾಜು 93.35 ಲಕ್ಷ ರೂಪಾಯಿ ಆಗಲಿದೆ.

    ಕಲ್ಯಾಣ ನಗರ ಪ್ರದೇಶದಲ್ಲಿ 2 ಬೆಡ್ ರೂಂನ 1,870 ಚದರ ಅಡಿ ಮನೆಯ ಪ್ರತಿ ಅಡಿಗೆ 6,400 ರೂಪಾಯಿಯಂತೆ ಅಂದಾಜು 119.68 ಲಕ್ಷ ರೂಪಾಯಿ ಆಗಲಿದೆ. ಕುಮಾರಸ್ವಾಮಿ ಲೇಔಟ್ ಪ್ರದೇಶದಲ್ಲಿ 2 ಬೆಡ್ ರೂಂನ 1,990 ಚದರ ಅಡಿ ಮನೆಯ ಪ್ರತಿ ಅಡಿಗೆ 6,650 ರೂಪಾಯಿಯಂತೆ ಅಂದಾಜು 132.33 ಲಕ್ಷ ರೂಪಾಯಿ ಆಗಲಿದೆ.

    ಮಾರತಹಳ್ಳಿ ಪ್ರದೇಶದಲ್ಲಿ 3 ಬೆಡ್ ರೂಂನ 2,440 ಚದರ ಅಡಿ ಮನೆಯ ಪ್ರತಿ ಅಡಿಗೆ 7,350 ರೂಪಾಯಿಯಂತೆ ಅಂದಾಜು 179.34 ಲಕ್ಷ ರೂಪಾಯಿ ಆಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 2.5 ಕೋಟಿ ರೂ. ಮೌಲ್ಯದ ಭತ್ತ ಖರೀದಿಸಿ ಎಸ್ಕೇಪ್

    2.5 ಕೋಟಿ ರೂ. ಮೌಲ್ಯದ ಭತ್ತ ಖರೀದಿಸಿ ಎಸ್ಕೇಪ್

    ಕೊಪ್ಪಳ: ಕಳೆದೆರಡು ತಿಂಗಳಿನಿಂದ ಮಳೆ ಕೈ ಕೊಟ್ಟಿದ್ದರಿಂದ ಜಿಲ್ಲೆಯ ಮಳೆಯಾಶ್ರಿತ ಕೃಷಿಕರು ಕಂಗಾಲಾಗಿದ್ದಾರೆ. ಶಿವಮೊಗ್ಗ ಭಾಗದಲ್ಲಿ ಮಳೆಯಾಗಿ ತುಂಗಭದ್ರಾ ಡ್ಯಾಂ ತುಂಬಿದ್ದು, ಆ ಜಿಲ್ಲೆಯ ಒಂದಷ್ಟು ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಒಂದು ಕಡೆ ಕೊಪ್ಪಳದ ಗಂಗಾವತಿ ಹಾಗೂ ಕಾರಟಗಿ ಭಾಗದ ಭತ್ತ ಬೆಳೆಗಾರರಿಗೆ ತಮ್ಮ ಭತ್ತ ಮಾರಾಟ ಮಾಡಿದ್ದ ಹಣ ಸಿಕ್ಕಿಲ್ಲ. ಭತ್ತ ಖರೀದಿಸಿದ್ದ ವ್ಯಾಪಾರಿ ಉತ್ಪನ್ನದ ಜೊತೆ ಪರಾರಿಯಾಗಿದ್ದಾನೆ.

    ಬಳ್ಳಾರಿ ಮೂಲದ ವೀರೇಶ್ ಎಂಬಾತ ರೈತರಿಗೆ ಮೋಸ ಮಾಡಿದ ವ್ಯಾಪಾರಿ. ವೀರೇಶ್ ಎರಡು ವರ್ಷಗಳಿಂದ ಗಂಗಾವತಿಯ ರಾಂಪುರದಲ್ಲಿ ವಿಶ್ವಾಸ್ ಟ್ರೇಡರ್ಸ್ ಹೆಸರಿನಲ್ಲಿ ಭತ್ತ ವ್ಯಾಪಾರ ನಡೆಸುತ್ತಿದ್ದನು. ಈ ವರ್ಷದ ಜನವರಿ ತಿಂಗಳಿಂದ ಜೂನ್‍ವರೆಗೆ ಸುಮಾರು 100ಕ್ಕೂ ಹೆಚ್ಚು ರೈತರಿಂದ 2.5 ಕೋಟಿ ಮೌಲ್ಯದ ಭತ್ತ ಖರೀದಿಸಿದ್ದ. ಮಾರುಕಟ್ಟೆಯಲ್ಲಿ ಪ್ರತಿ ಭತ್ತದ ಚೀಲಕ್ಕೆ 1100 ರೂಪಾಯಿ ಇತ್ತು. ಆದರೆ ವೀರೇಶ್ 1,250 ರೂಪಾಯಿಗೆ ಭತ್ತ ಖರೀದಿ ಮಾಡಿದ್ದನು.

    ಭತ್ತ ಖರೀದಿಸುವ ವೇಳೆ ಸ್ಥಳೀಯರಾದ ನಾಸೀರ್ ಮತ್ತು ನಾಗೇಶ್ವರ್ ರಾವ್ ಇಬ್ಬರು ವೀರೇಶ್‍ನಿಗೆ ಸಾಥ್ ನೀಡಿದ್ದರು. ರೈತರಿಗೆ ಹಣ ನೀಡುವ ಬದಲು ವೀರೇಶ್ ಚೆಕ್ ನೀಡಿದ್ದನು. ಎರಡು ತಿಂಗಳ ನಂತರ ಹಣ ಡ್ರಾ ಮಾಡುವಂತೆ ಹೇಳಿ ನಾಪತ್ತೆಯಾಗಿದ್ದಾನೆ.

    ಎರಡು ತಿಂಗಳು ನಂತರ ಬ್ಯಾಂಕಿಗೆ ಹೋದಾಗ ಚೆಕ್ ಬೌನಸ್ ಆಗಿದೆ. ನಂತರ ರೈತರು ವೀರೇಶ್‍ನನ್ನು ಸಂಪರ್ಕಿಸಿದ್ರೆ ಆತ ಊರು ತೊರೆದಿರುವ ವಿಚಾರ ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾದ ರೈತರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ನಾಸಿರ್ ಮತ್ತು ನಾಗೇಶ್ವರರಾವ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.