Tag: puppy

  • ಕೋಳಿ ಜಗಳಕ್ಕೆ ನಾಯಿ ಎಂಟ್ರಿ- ಫೈಟ್ ಬಿಡಿಸಲು ಸರ್ಕಸ್ ಮಾಡಿದ ಶ್ವಾನದ ವಿಡಿಯೋ ವೈರಲ್

    ಕೋಳಿ ಜಗಳಕ್ಕೆ ನಾಯಿ ಎಂಟ್ರಿ- ಫೈಟ್ ಬಿಡಿಸಲು ಸರ್ಕಸ್ ಮಾಡಿದ ಶ್ವಾನದ ವಿಡಿಯೋ ವೈರಲ್

    ಚೆನ್ನೈ: ನಾಯಿಗಳೆಂದರೆ ಹೆಚ್ಚಿನವರಿಗೆ ಬಲುಪ್ರೀತಿ. ಆದ್ರೆ ಕೆಲವರು ಇವುಗಳನ್ನು ದ್ವೇಷಿಸುತ್ತಾರೆ. ಯಾಕೆ ಅಂತ ಗೊತ್ತಿಲ್ಲ. ಆದ್ರೆ ನಾಯಿಗಳ ಆ ಮುಗ್ಧ ಮುಖವನ್ನು ಕಂಡಾಗ ಎಲ್ಲರ ಮುಖದಲ್ಲೂ ಒಂದು ಬಾರಿ ನಗು ಮೂಡುತ್ತೆ. ಕೆಲವೊಮ್ಮೆ ನಾಯಿಗಳು ಜನರಿಗೆ ಹಾನಿಯುಂಟು ಮಾಡುತ್ತವೆ. ಆದ್ರೆ ನಾಯಿಮರಿಗಳು ಏನೇ ಮಾಡಿದ್ರೂ ಚಂದವೇ. ನಾಯಿ ಮರಿಗಳ ತುಂಟಾಟದ ಸಾಕಷ್ಟು ವಿಡಿಯೋಗಳನ್ನು ನಾವು ನೋಡಿರುತ್ತೇವೆ. ಹಾಗೆಯೇ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದ ಕೋಳಿಗಳ ಜಗಳಕ್ಕೆ ನಾಯಿಮರಿಯೊಂದು ಎಂಟ್ರಿ ಕೊಟ್ಟಿದೆ.

    ಹೌದು. ಕೊಯಂಬತ್ತೂರು ಉದ್ಯಮಿ ಮುರಳೀಧರನ್ ಎಂಬವರ ಎರಡು ಹುಂಜಗಳು ಸಖತ್ ಫೈಟ್ ಮಾಡಿವೆ. ಈ ವೇಳೆ ಕಪ್ಪು ಬಣ್ಣದ ನಾಯಿ ಮರಿಯೊಂದು ಜಗಳ ಬಿಡಿಸಲು ಹರಸಾಹಸ ಪಟ್ಟಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.

    ವಿಡಿಯೋದಲ್ಲೇನಿದೆ?
    2 ಹುಂಜಗಳ ಪರಸ್ಪರ ಸಖತ್ ಫೈಟ್ ಮಾಡುತ್ತಿರುತ್ತವೆ. ನಾಯಿಮರಿ ಇವುಗಳ ಜಗಳದ ಮಧ್ಯಸ್ಥಿಕೆ ವಹಿಸಲು ಬಂದಿದ್ದು, ಗಲಾಟೆ ಬಿಡಿಸಲು ಹರಸಾಹಸ ಪಡುತ್ತದೆ. ಕೋಳಿಗಳ ಕಾಲು ಹಾಗೂ ರೆಕ್ಕೆಯನ್ನು ಕಚ್ಚಿ ಎಳೆಯುತ್ತದೆ. ಆದ್ರೂ ಅವುಗಳ ಜಗಳ ನಿಲ್ಲಿಸಿಲ್ಲ.

    ಇದರಿಂದ ಕಂಗಾಲಾದ ನಾಯಿ ಮರಿ ಒಂದು ಹುಂಜದ ಪುಕ್ಕವನ್ನು ಮೆಲ್ಲಗೆ ಕಚ್ಚಿ ಅಷ್ಟು ದೂರ ಎಳೆದುಕೊಂಡು ಹೋಗುತ್ತದೆ. ಇದರಿಂದ ಕೋಪಗೊಂಡ ಇನ್ನೊಂದು ಹುಂಜ ಮತ್ತೆ ಜಗಳವಾಡಲು ಮುಂದಾಗುತ್ತಿದೆ. ವಿಶೇಷವೆಂದರೆ ಜಗಳ ಬಿಡಿಸಲು ಮಧ್ಯೆ ಬರುತ್ತಿರುವ ನಾಯಿ ಮರಿಗೆ ಹುಂಜಗಳು ಏನೂ ಮಾಡದೇ ತಮ್ಮ ಜಗಳ ಮುಂದುವರಿಸುತ್ತಿವೆ. ಆದ್ರೂ ಬಿಡದೇ ನಾಯಿ ಮರಿ ಹುಂಜಗಳನ್ನು ಬೇರೆ ಬೇರೆ ಮಾಡಲು ಯತ್ನಿಸಿದೆ. ಆದ್ರೆ ನಾಯಿಮರಿಯ ಪ್ರಯತ್ನ ಮಾತ್ರ ವಿಫಲವಾಗಿದೆ.

    ಒಟ್ಟಿನಲ್ಲಿ ಹುಂಜಗಳ ಜಗಳ ಬಿಡಿಸಲು ಹರಸಾಹಸ ಪಡುತ್ತಿರುವ ಮುದ್ದಾದ ನಾಯಿ ಮರಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೊಯಂಬತ್ತೂರು ಉದ್ಯಮಿ ಮುರಳೀಧರನ್ ಎಂಬವರು ಜಗಳವಾಡುತ್ತಿರೋ ಕೊಳಿಗಳ ಮಾಲಕರಾಗಿದ್ದಾರೆ. ಪ್ರಾಣಿಪ್ರಿಯರಾಗಿರೋ ಇವರು, ಮೊಲ, ಬೆಕ್ಕು, ನಾಯಿ ಮೊದಲಾದವುಗಳನ್ನು ಸಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=MHHnNu40ml8

     

  • ಕಿರಿಕ್ ಹುಡುಗಿ ಸಂಯುಕ್ತಾ ಈಗ ತಮಿಳಲ್ಲಿ ಬ್ಯುಸಿ!

    ಕಿರಿಕ್ ಹುಡುಗಿ ಸಂಯುಕ್ತಾ ಈಗ ತಮಿಳಲ್ಲಿ ಬ್ಯುಸಿ!

    ಬೆಂಗಳೂರು: ಕಿರಿಕ್ ಪಾರ್ಟಿ ಚಿತ್ರದ ಮೂಲಕವೇ ನಾಯಕಿಯಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದವರು ಸಂಯುಕ್ತಾ ಹೆಗ್ಡೆ. ಆ ನಂತರ ಕಾಲೇಜು ಕುಮಾರ ಚಿತ್ರದಲ್ಲಿಯೂ ನಟಿಸಿದ್ದ ಸಂಯುಕ್ತಾ ಬಿಗ್‍ಬಾಸ್ ಶೋ ಸ್ಪರ್ಧಿಯಾದ ನಂತರದ ವಿದ್ಯಮಾನದ ಬಳಿಕ ದೂರ ಉಳಿದಿದ್ದರು. ಆ ನಂತರದಲ್ಲಿ ಅವರು ಕನ್ನಡದ ಯಾವ ಚಿತ್ರಗಳಲ್ಲಿಯೂ ನಟಿಸಿರಲಿಲ್ಲ. ಆದರೀಗ ಸಂಯುಕ್ತಾ ತಮಿಳು ಚಿತ್ರರಂಗದಲ್ಲಿ ಸದ್ದು ಮಾಡಲು ಮುಂದಾಗಿದ್ದಾರೆ!

    ಬಹು ಹಿಂದಿನಿಂದಲೇ ಸಂಯುಕ್ತಾಗೆ ತಮಿಳು ಚಿತ್ರರಂಗದಿಂದ ಆಫರುಗಳು ಬರಲಾರಂಭಿಸಿದ್ದವಂತೆ. ಆದರೆ ಸಂಯುಕ್ತಾ ಅಳೆದೂ ತೂಗಿ ಇದೀಗ ಒಂದು ತಮಿಳು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ನಟ್ಟುದೇವ್ ಜೊತೆ ಸಂಯುಕ್ತಾ ಜೋಡಿಯಾಗಿ ನಟಿಸಲಿರೋ ಈ ಚಿತ್ರ ‘ಪಪ್ಪಿ’.

    ಒಂದು ಪ್ರೇಮ ಕಥನ, ಪ್ರಾಣಿ ಪ್ರೀತಿ ಹಾಗೂ ಡಾಗ್ ಬ್ರೀಡಿಂಗ್ ಸುತ್ತ ಹೆಣೆದಿರೋ ಮಾನವೀಯ ಅಂಶಗಳ ಥ್ರಿಲ್ಲಿಂಗ್ ಕಥೆಯನ್ನು ಈ ಚಿತ್ರ ಹೊಂದಿದೆಯಂತೆ. ಇವತ್ತಿನ ಸಂದರ್ಭದಲ್ಲಿ ಮನುಷ್ಯ ಸಂಬಂಧಗಳೇ ಸವಕಲಾಗುತ್ತಿವೆ. ಈ ಜನರೇಷನ್ನಿನ ಕಣ್ಣಿನಲ್ಲಿ ಸಂಬಂಧಗಳು ಬೇರೆಯದ್ದೇ ಛಾಯೆಯಲ್ಲಿ ಕಾಣಿಸಲಾರಂಭಿಸಿವೆ. ಈ ಸೂಕ್ಷ್ಮ ಸಂಗತಿಯ ನೆಲೆಗಟ್ಟಿನಲ್ಲಿ ಈ ಚಿತ್ರದ ಕಥೆ ಹೆಣೆಯಲ್ಪಟ್ಟಿದೆಯಂತೆ.

    ಈ ಚಿತ್ರದ ಬಗ್ಗೆ ಸಂಯುಕ್ತಾ ಖುಷಿಯ ಮೂಡಿನಲ್ಲಿದ್ದಾರೆ. ತಮಿಳಿನಿಂದ ಸಾಲು ಸಾಲು ಅವಕಾಶಗಳು ಬರುತ್ತಿವೆ. ಆದರೆ ಈ ಚಿತ್ರದಲ್ಲಿ ಕಥೆ ಅದ್ಭುತವಾಗಿರೋ ಕಾರಣದಿಂದ ನಟಿಸಲು ಒಪ್ಪಿರೋದಾಗಿ ಹೇಳಿಕೊಂಡಿರುವ ಸಂಯುಕ್ತಾ ತಮಿಳಿನಲ್ಲಿ ನೆಲೆಗೊಳ್ಳುವ ಆಸೆ ಹೊಂದಿರುವಂತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಯಿ ಮರಿಯಿಂದಾಗಿ 13 ಸಾವಿರ ಎತ್ತರದಲ್ಲಿ ಹಾರಾಡುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ!

    ನಾಯಿ ಮರಿಯಿಂದಾಗಿ 13 ಸಾವಿರ ಎತ್ತರದಲ್ಲಿ ಹಾರಾಡುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ!

    ಮಾಸ್ಕೋ: ನಾಯಿ ಮರಿಯಿಂದಾಗಿ ಪ್ಯಾಸೆಂಜರ್ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿರುವ ಘಟನೆ ರಷ್ಯಾದಲ್ಲಿ ನಡೆದಿದೆ.

    ವಿಮಾನವು ಸೈಂಟ್ ಪೀಟರ್ಸ್ ಬರ್ಗ್ ನಿಂದ ಮಾಸ್ಕೋಗೆ ಹೊರಟಿತ್ತು. ಇನ್ನೇನು ರಷ್ಯಾದ ರಾಜಧಾನಿ ಮಾಸ್ಕೋ ಸಮೀಪಿಸುತ್ತೆ ಅನ್ನೋವಷ್ಟರಲ್ಲಿ ನಾಯಿ ಮರಿಯಿಂದ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.

    ಏನಿದು ಘಟನೆ?: 
    ವಿಮಾನದ ಲಗೇಜ್ ಕಂಪಾರ್ಟ್ ಮೆಂಟ್‍ನಲ್ಲಿ ನಾಯಿ ಮರಿಯನ್ನು ಪಂಜರದಲ್ಲಿ ಕೂಡಿಟ್ಟಿರಲಾಗಿತ್ತು. ಆದರೆ ಪಂಜರವನ್ನು ಸರಿಯಾಗಿ ಮುಚ್ಚದೇ ಇದ್ದ ಕಾರಣ ನಾಯಿ ಮರಿ ಹೊರಗೆ ಬಂದಿದೆ. ಬಳಿಕ ಅಲ್ಲೆಲ್ಲಾ ಓಡಾಡಿ ಲಗೇಜ್ ಕಂಪಾರ್ಟ್ ಮೆಂಟ್ ಬಾಗಿಲನ್ನು ತೆಗೆಯಲು ಪ್ರಯತ್ನ ಮಾಡಿದೆ. ಕೊನೆಗೆ ನಾಯಿ ಮರಿ ತನ್ನ ಹಲ್ಲು ಮತ್ತು ಉಗುರಿನಿಂದ ಪರಚಿ ಕಾಲಿನಿಂದ ವಿಮಾನದ ಕಂಪಾರ್ಟ್ ಮೆಂಟಿನ ಅರ್ಧ ಬಾಗಿಲನ್ನು ತೆರೆದಿದೆ. ನಾಯಿ ಮರಿ ಎಷ್ಟೇ ಪ್ರಯತ್ನಿಸಿದರೂ ಕಂಪಾರ್ಟ್ ಮೆಂಟಿನ ಪೂರ್ಣ ಬಾಗಿಲು ತೆಗೆಯಲು ಸಾಧ್ಯವಾಗಿಲ್ಲ. ಯಾಕಂದ್ರೆ ವಿಮಾನದೊಳಗೆ ತಂತ್ರಜ್ಞಾನಗಳನ್ನು ಅಳವಡಿಸಲಾಗಿರುತ್ತದೆ.

    ವಿಮಾನದಲ್ಲಿ ಏನಾದರೂ ಸಮಸ್ಯೆ ಉಂಟಾದರೆ ಭದ್ರತಾ ಸಿಬ್ಬಂದಿಯ ಅರಿವಿಗೆ ಬರಲು ಎಚ್ಚರಿಕೆಯ ಗಂಟೆಯನ್ನು ಅಳವಡಿಸಿರಲಾಗಿರುತ್ತದೆ. ವಿಮಾನದ ಬಾಗಿಲು ಅರ್ಧ ತೆಗೆದಿದ್ದ ಕಾರಣ ಎಚ್ಚರಿಕೆಯ ಗಂಟೆ ಬಡಿದುಕೊಳ್ಳಲು ಪ್ರಾರಂಭಿಸಿತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಈ ವೇಳೆ ವಿಮಾನ ಭೂಮಿಯಿಂದ ಸುಮಾರು 13,000 ಅಡಿಗಳ ಮೇಲೆ ಹಾರಾಟ ಮಾಡುತ್ತಿತ್ತು. ಮುಂಜಾಗೃತ ಕ್ರಮವಾಗಿ ಪೈಲೆಟ್ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ. ನಂತರ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಆಗ ನಾಯಿ ಮರಿಯಿಂದ ಬಾಗಿಲು ಅರ್ಧ ತೆರೆದುಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.

    ಸದ್ಯ ಈ ಅವಘಡದಿಂದ ಪ್ರಯಾಣಿಕರಿಗೆ ಯಾವುದೇ ರೀತಿಯ ಸಮಸ್ಯೆಯಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ನಾಯಿ ಮರಿಯ ಜೀವಕ್ಕೆ ಯಾವುದೇ ಪ್ರಣಾಪಾಯವಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

  • ಏಳು.. ಎದ್ದೇಳು ಕಂದ, ಹೋಗೋಣ ನಡೆ- ಅಪಘಾತದಲ್ಲಿ ಸಾವನ್ನಪ್ಪಿದ ಮರಿಗಾಗಿ ತಾಯಿ ನಾಯಿಯ ಆಕ್ರಂದನ

    ಏಳು.. ಎದ್ದೇಳು ಕಂದ, ಹೋಗೋಣ ನಡೆ- ಅಪಘಾತದಲ್ಲಿ ಸಾವನ್ನಪ್ಪಿದ ಮರಿಗಾಗಿ ತಾಯಿ ನಾಯಿಯ ಆಕ್ರಂದನ

    ಬೆಂಗಳೂರು: ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಸತ್ತು ಬಿದ್ದಿದ್ದ ಮರಿ ನಾಯಿಯ ಬಳಿ, ತಾಯಿ ನಾಯಿಯೊಂದು ತನ್ನ ರೋಧನೆ ವ್ಯಕ್ತಪಡಿಸುತ್ತಿದ್ದ ಮನಕಲುಕುವ ಘಟನೆಯೊಂದು ನಡೆದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಜ್ಯೋತಿ ನಗರದಲ್ಲಿ ಈ ಘಟನೆ ನಡೆದಿದ್ದು, ಅಪರಿಚಿತ ವಾಹನವೊಂದು ನಾಯಿ ಮರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದೆ. ಈ ಘಟನೆಯ ನಂತರ ತಾಯಿ ನಾಯಿ, ಮೃತ ಪಟ್ಟಿದ್ದ ತನ್ನ ಮರಿಯನ್ನು ಕಂಡು ರೋಧನೆ ವ್ಯಕ್ತಪಡಿಸಿದೆ.

    ಮುಂಜಾನೆಯ ನಸುಕಿನಲ್ಲಿ ಈ ಘಟನೆ ನಡೆದಿದ್ದು, ಅಪಘಾತವಾದ ಒಂದು ಗಂಟೆಯಾದರೂ ತಾಯಿ ಮರಿ ನಾಯಿಯ ಬಳಿ ಅತ್ತು ಕರೆದು ತನ್ನ ಆಕ್ರಂದನ ವ್ಯಕ್ತಪಡಿಸಿದೆ. ಮನಿಷ್ಯನಿಗಿಲ್ಲದ ಮಾನವೀಯತೆ ನಾಯಿಯಲ್ಲಿ ಕಂಡು, ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದು, ಈ ಮನಕಲುಕುವ ಘಟನೆಗೆ ಸ್ಥಳೀಯರು ಮರುಕ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=S3LFHi-iT-4

  • ಎರಡು ವರ್ಷದ ಹಿಂದೆ ತಂದಿದ್ದ ನಾಯಿ ಮರಿ, ಕರಡಿ ಆಯಿತು-ಕುಟುಂಬಸ್ಥರೆಲ್ಲಾ ಶಾಕ್!

    ಎರಡು ವರ್ಷದ ಹಿಂದೆ ತಂದಿದ್ದ ನಾಯಿ ಮರಿ, ಕರಡಿ ಆಯಿತು-ಕುಟುಂಬಸ್ಥರೆಲ್ಲಾ ಶಾಕ್!

    ಬೀಜಿಂಗ್: ಎರಡು ವರ್ಷದಿಂದ ತಾವು ಸಾಕಿದ್ದು ನಾಯಿ ಮರಿಯಲ್ಲ, ಕರಡಿ ಎಂದು ಗೊತ್ತಾಗಿ ಕುಟುಂಬವೊಂದು ತಬ್ಬಿಬ್ಬಾದ ಘಟನೆ ಚೀನಾದಲ್ಲಿ ನಡೆದಿದೆ.

    ಇಲ್ಲಿನ ಯುನ್ನಾನ್ ನಗರ ನಿವಾಸಿ ಸುಯುನ್ ಎಂಬವರು ಎರಡು ವರ್ಷಗಳ ಹಿಂದೆ ನಾಯಿ ಮರಿಯೊಂದನ್ನು ಖರೀದಿಸಿದ್ರು. ಅದು ದಿನವೂ ಒಂದು ಬಾಕ್ಸ್ ಹಣ್ಣು ಮತ್ತು 2 ಬಕೆಟ್ ನೂಡಲ್ಸ್ ಅನ್ನು ತಿನ್ನುತ್ತಿದ್ದನ್ನು ಕಂಡು ಮನೆಯ ಸದಸ್ಯರಿಗೆ ವಿಚಿತ್ರ ಅನ್ನಿಸಿತ್ತು.

    ತಾವು ತಂದಿದ್ದ ಪಪ್ಪಿ(ನಾಯಿ ಮರಿ) ದಿನದಿಂದ ದಿನಕ್ಕೆ ಅದರ ಬೆಳವಣಿಗೆ ಹೆಚ್ಚುತ್ತಲೇ ಹೋಗಿದ್ದು, ಸುಮಾರು 134 ಕೆ.ಜಿ ಯಷ್ಟು ತೂಕ ಪಡೆದುಕೊಂಡಿದೆ. ಅಲ್ಲದೇ ಅದು ಎರಡು ಕಾಲುಗಳ ಮೂಲಕ ನಡೆದಾಡಲು ಪ್ರಾರಂಭಿಸಿದನ್ನು ಕಂಡ ಕುಟುಂಬಸ್ಥರಿಗೆ ಸಂದೇಹ ಬಂದಿದೆ.

    ಪ್ರಾಣಿಯು ಉದ್ದ ಕೂದಲು ಹೊಂದಿದ್ದರಿಂದ ಟಿಬೆಟಿಯನ್ ಮಾಸ್ಟಿಫ್ ನಾಯಿ ಜಾತಿಗೆ ಸೇರಿದ್ದು ಎಂದು ತಿಳಿದಿದ್ದರಂತೆ. ಆದರೆ ಅದರ ಬೆಳವಣಿಗೆ ಹಾಗೂ ವರ್ತನೆಯಿಂದ ಕುಟುಂಬದವರಲ್ಲಿ ಅನುಮಾನ ಮೂಡಿಸಿದ್ದು, ನಂತರ ಅದು ನಾಯಿಯಲ್ಲ ‘ಏಷ್ಯಾಟಿಕ್ ಕಪ್ಪು ಕರಡಿ’ ಎಂದು ಗೊತ್ತಾಗಿದೆ. ಕೊನೆಗೆ ಕುಟುಂಬಸ್ಥರು ಕರಡಿಯನ್ನು ಪಂಜರದಲ್ಲಿ ಹಾಕಿ ವನ್ಯಜೀವಿ ಸಂರಕ್ಷಣಾ ಕೇಂದ್ರಕ್ಕೆ ಒಪ್ಪಿಸಿದ್ದಾರೆ.

    ಸದ್ಯ ಸುಯುನ್ ಅವರ ಸಾಕಿದ್ದ ಕರಡಿಯು ಯುನ್ನಾನ್‍ನ ವನ್ಯಜೀವಿ ಸಂರಕ್ಷಣಾ ಕೇಂದ್ರ ಸೇರಿದೆ.

  • ಅಪಘಾತದಲ್ಲಿ ಸಾವನ್ನಪ್ಪಿದ ಮರಿಯ ಬಳಿ ರೋಧಿಸಿದ ತಾಯಿ ನಾಯಿ

    ಅಪಘಾತದಲ್ಲಿ ಸಾವನ್ನಪ್ಪಿದ ಮರಿಯ ಬಳಿ ರೋಧಿಸಿದ ತಾಯಿ ನಾಯಿ

    ತುಮಕೂರು: ತನ್ನ ಮರಿಯೊಂದು ಅಪಘಾತದಲ್ಲಿ ಸಾವನ್ನಪ್ಪಿದ್ದನ್ನು ಕಂಡ ತಾಯಿ ನಾಯಿ ವೇದನೆ ಪಟ್ಟ ಮನಕಲಕುವ ಘಟನೆ ತುಮಕೂರಿನಲ್ಲಿ ನಡೆದಿದೆ.

    ನಗರದ ಹನುಮಂತಪುರದಲ್ಲಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ನಾಯಿ ಮರಿಯೊಂದು ಸಾವನಪ್ಪಿತ್ತು. ಇದನ್ನು ಕಂಡ ತಾಯಿ ನಾಯಿ ತನ್ನ ಮರಿಯ ಮೈ ಸವರಿ ಒಂದೇ ಸಮನೆ ರೋಧಿಸಿದೆ. ನಡುರಸ್ತೆಯಲ್ಲಿ ಬಿದ್ದ ಮೃತದೇಹವನ್ನು ಬೇರೆಡೆ ಸಾಗಿಸಿ ತಾಯಿ ನಾಯಿ ಪ್ರಯತ್ನಿಸುತ್ತಿತ್ತು. ಹಾಗಾಗಿ ತನ್ನ ಇತರ ಬಳಗವನ್ನು ಕರೆದಿದ್ದು, ಸಾಧ್ಯವಾಗಲಿಲ್ಲ.

    ನಾಯಿಯ ಕಷ್ಟ ಕಂಡ ಪೀಟರ್ ಎಂಬವರು ನಾಯಿಮರಿಯ ಮೃತದೇಹವನ್ನು ಬೇರೆಡೆ ಸಾಗಿಸಿದ್ದಾರೆ. ಆಗ ತಾಯಿ ನಾಯಿ ಮೃತದೇಹದ ಹಿಂದೆ ಓಡಿಹೋಗುತ್ತಿದ್ದುದು ಕಂಡರೆ ಹೆತ್ತಕರುಳಿನ ನೋವಿನ ಅರಿವಾಗುತ್ತಿತ್ತು.

  • ಮೊಸಳೆಗಳಿದ್ದ ಕೆರೆಯೊಳಗೆ ಜೀವಂತ ನಾಯಿಮರಿಯನ್ನ ಎಸೆದ ಕ್ರೂರಿ

    ಮೊಸಳೆಗಳಿದ್ದ ಕೆರೆಯೊಳಗೆ ಜೀವಂತ ನಾಯಿಮರಿಯನ್ನ ಎಸೆದ ಕ್ರೂರಿ

    ಜಕಾರ್ತಾ: ನಿರ್ದಯಿ ವ್ಯಕ್ತಿಯೊಬ್ಬ ಮೊಸಳೆಗಳಿಂದ ತುಂಬಿದ್ದ ಕೆರೆಯೊಳಗೆ ಜೀವಂತ ನಾಯಿಮರಿಯನ್ನ ಎಸೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ ಎನ್ನಲಾಗಿದೆ.

    ವ್ಯಕ್ತಿ ಬ್ಯಾಗಿನಿಂದ ನಾಯಿಮರಿಯನ್ನ ತೆಗೆದುಕಂಡು ನದಿಯ ಕಡೆಗೆ ಹೋಗಿದ್ದಾನೆ. ಆತ ನಾಯಿಮರಿಯ ಕತ್ತನ್ನು ಹಿಡಿದುಕೊಂಡಿದ್ದು, ಹಿಂದೆ ಇದ್ದವರು ನಗುತ್ತಾ, ಕೂಗಾಡುತ್ತಾ ಆತನನ್ನು ಪ್ರೋತ್ಸಾಹಿಸಿದ್ದಾರೆ. ನಂತರ ಆ ವ್ಯಕ್ತಿ ನಾಯಿಮರಿಯನ್ನ ಕೆರೆಯೊಳಗೆ ಎಸೆದಿದ್ದಾನೆ. ನಾಯಿಮರಿ ಒದ್ದಾಡುತ್ತಾ ದಡದ ಕಡೆಗೆ ಈಜಲು ಯತ್ನಿಸಿದೆ. ಆದ್ರೆ ಅದರ ಪುಟ್ಟ ಕಾಲಿನಿಂದ ಈಜಲು ಸಾಧ್ಯವಾಗಿಲ್ಲ. ನಂತರ ಮೊಸಳೆಯೊಂದು ಬಂದು ನಾಯಿಮರಿಯನ್ನ ತಿಂದಿದೆ.

    ನಾಯಿಮರಿಯನ್ನ ಕೆರೆಗೆ ಎಸೆದ ವ್ಯಕ್ತಿ ಯಾರು ಹಾಗೂ ಆತ ಈ ರೀತಿ ಮಾಡಿದ್ದು ಯಾಕೆ ಎಂಬುದು ತಿಳಿದುಬಂದಿಲ್ಲ. ಆದ್ರೆ ಅಮಾನವೀಯವಾಗಿ ನಾಯಿಮರಿಯನ್ನ ಮೊಸಳೆ ಬಾಯಿಗೆ ಕೊಟ್ಟ ಆತನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಕಿಡಿ ಕಾರಿದ್ದಾರೆ.

    https://www.youtube.com/watch?v=bb4HkBQdeTg

  • ರಕ್ಷಿತ್ ಶೆಟ್ಟಿಗೂ ಈ ನಾಯಿ ಮರಿಗೂ ಏನು ಸಂಬಂಧ?

    ರಕ್ಷಿತ್ ಶೆಟ್ಟಿಗೂ ಈ ನಾಯಿ ಮರಿಗೂ ಏನು ಸಂಬಂಧ?

    ಬೆಂಗಳೂರು: ಒಂದು ನಾಯಿ ಮತ್ತು ಮನುಷ್ಯರ ನಡುವಿನ ಸಂಬಂಧವನ್ನು ಕಟ್ಟಿಕೊಡುವ ಸಿನಿಮಾ 777 ಚಾರ್ಲಿ. ಈ ಸಿನಿಮಾದ ಕಥೆ ರಕ್ಷಿತ್ ಶೆಟ್ಟಿ ಮತ್ತು ಒಂದು ನಾಯಿಯನ್ನು ಪ್ರಧಾನವಾಗಿರಿಸಿಕೊಂಡು ಕಟ್ಟಿಕೊಡಲಾಗಿದೆ. ಖಿನ್ನತೆಗೆ ಗುರಿಯಾಗಿ ಏಕಾಂಗಿಯಂತೆ ಓಡಾಡಿಕೊಂಡಿರುವ ಯುವಕನ ಬದುಕಿಗೆ ಒಂದು ಲ್ಯಾಬ್ರಡಾರ್ ನಾಯಿಯ ಪ್ರವೇಶವಾಗುತ್ತದೆ! ಆ ನಂತರ ಆತನ ಬದುಕು ಬೇರೆಯದ್ದೇ ದಿಕ್ಕಿಗೆ ಸಾಗುತ್ತದೆ. ಇದು ಚಾರ್ಲಿ ಕತೆಯ ಎಳೆ.

    ಈ ಚಿತ್ರದಲ್ಲಿ ಅರವಿಂದ್ ಅಯ್ಯರ್ ಹೀರೋ ಆಗಿ ಕಾಣಿಸಿಕೊಳ್ಳಬೇಕಿತ್ತು. ಕಾರಣಾಂತರಗಳಿಂದ ಅರವಿಂದ್ ಆ ಪಾತ್ರದಿಂದ ಹೊರಗುಳಿದಿದ್ದಾರೆ ಮತ್ತು ಆ ಪಾತ್ರವನ್ನು ನಿರ್ಮಾಣ ಮಾಡಬೇಕಿದ್ದ ರಕ್ಷಿತ್ ಶೆಟ್ಟಿ ಅವರೇ ನಿಭಾಯಿಸುತ್ತಿದ್ದಾರೆ.

    ಈ ಚಿತ್ರಕ್ಕಾಗಿ ಅರವಿಂದ್ ಮತ್ತು ನಾಯಿಮರಿಗೆ ಊಟಿಯಲ್ಲಿ ವಿಶೇಷ ತರಬೇತಿಯನ್ನೂ ನೀಡಲಾಗಿತ್ತು. ಈ ಚಿತ್ರದಲ್ಲಿ ನಟಿಸುತ್ತಿರುವ ಲ್ಯಾಬ್ರಡಾರ್ ನಾಯಿಮರಿ ಮನುಷ್ಯರನ್ನು ಹೋಲುವ ಹಾವಭಾವವನ್ನು ಪ್ರದರ್ಶಿಸಬೇಕಿದೆ. ಈವರೆಗೂ ಯಾವ ಸಿನಿಮಾದಲ್ಲೂ ನಾಯಿಯೊಂದು ಇಷ್ಟು ಸಹಜವಾಗಿ ನಟಿಸಿಲ್ಲವಂತೆ. ಆ ಮಟ್ಟಕ್ಕೆ ನಾಯಿಯನ್ನು ತರಬೇತಿಗೊಳಿಸಲಾಗುತ್ತಿದೆ. ಇದಕ್ಕೆಂದು ವಿದೇಶದಿಂದ ಟ್ರೈನರ್ ಒಬ್ಬರನ್ನು ಕರೆಸಿಕೊಳ್ಳಲಾಗಿದೆ.

    ಹೀರೋ ಜೊತೆ ಅಪೂರ್ವ ಬಾಂಧವ್ಯವಿರಲೇಬೇಕಿದ್ದರಿಂದ ನಾಯಿ ಮರಿ ಸದ್ಯ ಇಪ್ಪತ್ನಾಲ್ಕು ಗಂಟೆಯೂ ರಕ್ಷಿತ್ ಅವರೊಟ್ಟಿಗೇ ವಾಸಿಸುವ ಯೋಗ ಪಡೆದಿದೆ!

  • ಟಿಕೆಟ್ ಇಲ್ಲದೆ ಪ್ರಯಾಣಿಸಿದ 45 ದಿನಗಳ ನಾಯಿಮರಿಗೆ ದಂಡ!

    ಟಿಕೆಟ್ ಇಲ್ಲದೆ ಪ್ರಯಾಣಿಸಿದ 45 ದಿನಗಳ ನಾಯಿಮರಿಗೆ ದಂಡ!

    ಆಗ್ರಾ: ರೈಲಿನ ಜನರಲ್ ಬೋಗಿಗೆ ಟಿಸಿ ಬರುವುದಿಲ್ಲ ಎಂಬ ಉದಾಸೀನದಿಂದ ಟಿಕೆಟ್ ಇಲ್ಲದೆ ಪ್ರಯಾಣಿಸುವವರೇ ಹೆಚ್ಚು. ಕೆಲವೊಮ್ಮೆ ಗ್ರಹಚಾರ ಕೆಟ್ಟಾಗ ಟಿಸಿಗೆ ಸಿಕ್ಕಿಬಿದ್ದು ಪ್ರಯಾಣಿಕರು ದಂಡ ಕಟ್ಟೋದು ತಪ್ಪಿದ್ದಲ್ಲ. ಆದರೆ ಇಲ್ಲೊಬ್ಬರು ಟಿಸಿ ನಾಯಿಗೂ ದಂಡ ಹಾಕಿದ್ದಾರೆ.

    ರೈಲಿನಲ್ಲಿ ತನ್ನೊಂದಿಗೆ 45 ದಿನಗಳ ನಾಯಿಮರಿಯನ್ನ ಕೊಂಡೊಯ್ಯುತ್ತಿದ್ದ ವ್ಯಕ್ತಿಗೆ ಟಿಸಿ ದಂಡ ವಿಧಿಸಿದ್ದಾರೆ. ದೆಹಲಿಯಿಂದ ಹೈದರಾಬಾದ್‍ಗೆ ಆ ವ್ಯಕ್ತಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಆತ ತನಗೆ ಮಾತ್ರ ಟಿಕೆಟ್ ತೆಗೆದುಕೊಂಡು ನಾಯಿಗೆ ಟಿಕೆಟ್ ತೆಗೆದುಕೊಂಡಿರಲಿಲ್ಲ. ಈ ವೇಳೆ ಆಗ್ರಾದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಟಿಸಿ ಶಿವಕುಮಾರ್ ಎಂಬುವರು ಬಂದಿದ್ದು, ವ್ಯಕ್ತಿ ಸಿಕ್ಕಿ ಬಿದ್ದಿದ್ದಾರೆ. ಆಗ ಟಿಸಿ ಶಿವಕುಮಾರ್ ನಾಯಿಯ ಟಿಕೆಟ್ ಇಲ್ಲದಿರೋದಕ್ಕೆ ರೂಲ್ಸ್ ಪ್ರಕಾರ ದಂಡ ಹಾಕಿ, ನಾಯಿ ಮಾಲೀಕನಿಂದ ದಂಡ ವಸೂಲಿ ಮಾಡಿದ್ದಾರೆ.


    ಆಗ್ರಾ ಕಂಟೋನ್ಮೆಂಟ್ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ ಪಿ)ಗೆ ಕಂಟ್ರೋಲ್ ರೂಮ್ ನಿಂದ ಕರೆ ಮಾಡಿ ದಕ್ಷಿಣ ಎಕ್ಸ್ ಪ್ರೆಸ್ ನಲ್ಲಿ ಒಬ್ಬ ವ್ಯಕ್ತಿ ನಾಯಿಯ ಜೊತೆ ಪ್ರಯಾಣಿಸುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದರು. ಆ ರೈಲು ಶನಿವಾರ ಮಧ್ಯರಾತ್ರಿ ಸುಮಾರು 2 ಗಂಟೆಗೆ ಆಗ್ರಾ ತಲುಪಿದ್ದು, ಅಲ್ಲಿ ಪೊಲೀಸರು ನಾಯಿ ಮತ್ತು ಆ ವ್ಯಕ್ತಿಯನ್ನು ವಶಕ್ಕೆ ಪಡೆದು, ರೈಲ್ವೆ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

    ಹೈದರಾಬಾದ್ ಮೂಲದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಈ ನಾಯಿಯನ್ನ 33,000 ರೂ. ಕೊಟ್ಟು ಹರಿಯಾಣದಿಂದ ಖರೀದಿಸಿದ್ದರು. ಆದರೆ ನಾಯಿಯ ಪ್ರಯಾಣಕ್ಕಾಗಿ ಟಿಕೆಟ್ ಖರೀದಿಸಲು ಮರೆತಿದ್ದರು ಎಂದು ಪೊಲೀಸರು ತಿಳಿಸಿದರು. ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಕ್ಕೆ 27.30 ರೂ. ಜಿಎಸ್‍ಟಿ ಸೇರಿದಂತೆ 575 ರೂ. ದಂಡ ವಿಧಿಸಲಾಗಿದೆ. ನಾಯಿಯ ಮಾಲೀಕ ಸಾಮಾನ್ಯ ಟಿಕೆಟ್ ಹೊಂದಿದ್ದರಿಂದ, ಅವರಿಗೆ ದಂಡ ವಿಧಿಸಿಲ್ಲ. ಇದೇ ಮೊದಲ ಬಾರಿಗೆ ಸಾಕುಪ್ರಾಣಿಗಾಗಿ ದಂಡ ವಿಧಿಸಿ ರಶೀದಿ ನೀಡಲಾಗಿದೆ ಎಂದು ರೈಲು ನಿಲ್ದಾಣದ ಅಧಿಕಾರಿ ಅಶ್ವಿನಿ ಕೌಶಿಕ್ ತಿಳಿಸಿದ್ದಾರೆ.

    ನಂತರ ನಾಯಿ ಮಾಲೀಕರು ಆಂಧ್ರಪ್ರದೇಶ ಎಕ್ಸ್ ಪ್ರೆಸ್ ನಲ್ಲಿ ನಾಯಿಮರಿಗಾಗಿ ಎಸಿ ಟೈರ್ ನಲ್ಲಿ ಟಿಕೆಟ್ ಪಡೆದಿದ್ದಾರೆ. ರೈಲ್ವೆ ಮೂಲಗಳು ದೃಢಪಡಿಸಿದ ಪ್ರಕಾರ ಎ2 ಕೋಚ್, ಬರ್ತ್ 21 ಅನ್ನು ನಾಯಿಮರಿಗಾಗಿ ಬುಕ್ ಮಾಡಲಾಗಿದೆ.

    ಸಾಕುಪ್ರಾಣಿಗಳನ್ನ ರೈಲಿನಲ್ಲಿ ಕೊಂಡೊಯ್ಯುವಾಗ ಟಿಕೆಟ್ ಪಡೆಯಬೇಕು. ಎಸಿ ಫಸ್ಟ್ ಕ್ಲಾಸ್‍ನಲ್ಲಿ ಮಾತ್ರ, ಅದರಲ್ಲೂ ಇತರೆ ಪ್ರಯಾಣಿಕರ ಸಮ್ಮತಿ ಇದ್ದರೆ ಮಾತ್ರ ನಾಯಿಯನ್ನ ಜೊತೆಯಲ್ಲಿ ಕೊಂಡೊಯ್ಯಬಹುದು. ಇಲ್ಲವಾದ್ರೆ ಅದನ್ನ ಬೋಗಿಯ ಬ್ರೇಕ್ ವ್ಯಾನ್‍ಗೆ ಕಳಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಪ್ರಯಾಣಿಕ ತನ್ನ ಸಾಕು ಪ್ರಾಣಿಯ ರೈಲು ಪ್ರಯಾಣಕ್ಕಾಗಿ ಟಿಕೆಟ್ ಖರೀದಿಸದೆ ಸಿಕ್ಕಿಬಿದ್ದರೆ ಟಿಕೆಟ್ ದರದ 6 ಪಟ್ಟು ದಂಡ ಹಾಕಲಾಗುತ್ತದೆ. ದೆಹಲಿ ಮತ್ತು ಆಗ್ರಾ ನಡುವೆ ಸಾಕುಪ್ರಾಣಿಯ ಪ್ರಯಾಣದ ಟಿಕೆಟ್ ದರ 90 ರೂ. ಆಗಿರುವುದರಿಂದ ಟಿಸಿ 575 ರೂ. ದಂಡ ವಿಧಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

  • ಹಸಿವಿನಿಂದ ನಾಯಿಮರಿ ನುಂಗಲು ಯತ್ನಿಸಿದ ನಾಗರಹಾವು!

    ಹಸಿವಿನಿಂದ ನಾಯಿಮರಿ ನುಂಗಲು ಯತ್ನಿಸಿದ ನಾಗರಹಾವು!

    ಧಾರವಾಡ: ಹೊಟ್ಟೆ ಹಸಿವಿನಿಂದಾಗಿ ನಾಗರಹಾವೊಂದು ನಾಯಿ ಮರಿಯನ್ನು ನುಂಗಲು ಯತ್ನಿಸಿರುವ ಘಟನೆ ಜಿಲ್ಲೆಯ ವೀರಭದ್ರೇಶ್ವರ ನಗರದಲ್ಲಿ ನಡೆದಿದೆ.

    ನಗರದ ಶೇಖರ ಬಿಜಲಿ ಎಂಬುವರ ಮನೆ ಬಳಿ ನಾಗರಹಾವು ನಾಯಿ ಮರಿಯನ್ನ ನುಂಗಲು ಯತ್ನ ನಡೆಸಿದೆ. ಮರದ ಸೌದೆ ಕೆಳಗೆ ನಾಯಿ ಮರಿಗಳ ಗುಂಪು ವಾಸವಿತ್ತು. ಅಲ್ಲೇ ಪಕ್ಕದಲ್ಲಿದ್ದ ನಾಗರಹಾವೊಂದು ಅವುಗಳ ಬಳಿ ಹೋಗಿ ಹಸಿವಿನಿಂದ ನಾಯಿ ಮರಿಯನ್ನು ತಿನ್ನಲು ಯತ್ನಿಸಿದ್ದು, ಒಂದು ನಾಯಿಮರಿಯನ್ನು ಹಿಡಿದುಕೊಂಡಿದೆ. ಇದನ್ನ ನೋಡಿದ ಶೇಖರ ಎಂಬವರು ತಕ್ಷಣ ಉರಗ ತಜ್ಞ ಎಲ್ಲಪ್ಪ ಜೋಡಳ್ಳಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದು ಎಲ್ಲಪ್ಪ ಬರುವಷ್ಟರಲ್ಲಿ ನಾಗರಹಾವು ನಾಯಿಮರಿಯನ್ನ ಅರ್ಧದಷ್ಟು ನುಂಗಿತ್ತು. ಎರಡು ದಿನಗಳ ಹಿಂದೆಯಷ್ಟೆ ನಾಯಿ 4 ಮರಿಗಳನ್ನ ಹಾಕಿತ್ತು. ಸ್ಥಳಕ್ಕೆ ಬಂದ ಎಲ್ಲಪ್ಪ ನಾಯಿ ಮರಿ ನುಂಗಿದ್ದ ನಾಗರ ಹಾವನ್ನ ಹಿಡಿದು, ಆ ನಾರಿಮರಿಯನ್ನ ನಾಗರ ಹಾವಿನ ಬಾಯಿಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ನಾಯಿ ಮರಿ ಅಷ್ಟೊತ್ತಿಗೆ ಸಾವನ್ನಪ್ಪಿದೆ.

    ಉರಗತಜ್ಞ ಎಲ್ಲಪ್ಪ ರಕ್ಷಣೆ ಮಾಡಿದ ಹಾವನ್ನ ಕಾಡಿಗೆ ಬಿಟ್ಟು ಬಂದಿದ್ದಾರೆ.