Tag: punjab

  • ಸ್ನೇಹಿತರ ಭೇಟಿಗೆಂದು ತೆರಳಿದಾತ ಹಿಂದಿರುಗಲೇ ಇಲ್ಲ- ದುಷ್ಕರ್ಮಿಗಳ ಗುಂಡಿಗೆ ಖ್ಯಾತ ಹಾಡುಗಾರ ಬಲಿ

    ಸ್ನೇಹಿತರ ಭೇಟಿಗೆಂದು ತೆರಳಿದಾತ ಹಿಂದಿರುಗಲೇ ಇಲ್ಲ- ದುಷ್ಕರ್ಮಿಗಳ ಗುಂಡಿಗೆ ಖ್ಯಾತ ಹಾಡುಗಾರ ಬಲಿ

    ಚಂಡೀಗಢ: ಪಂಜಾಬಿ ಗಾಯಕರೊಬ್ಬರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ ಘಟನೆ ಪಂಜಾಬ್‍ನ ದೇರಾ ಬಸ್ಸಿಯಲ್ಲಿ ನಡೆದಿದೆ.

    ನವಜೋತ್ ಸಿಂಗ್(22) ಕೊಲೆಯಾದ ಸಿಂಗರ್. ನವಜೋತ್ ಬೆಹರಾ ಗ್ರಾಮದಲ್ಲಿರುವ ತನ್ನ ಮನೆಗೆ ಹಿಂತಿರುಗುವಾಗ ಈ ಘಟನೆ ನಡೆದಿದೆ. ಗ್ರಾಮದ ಹೊರವಲಯದಲ್ಲಿ ಕಾರ್ ಪಾರ್ಕ್ ಮಾಡಿದ 50 ಮೀ ದೂರದಲ್ಲಿ ನವಜೋತ್ ಮೃತದೇಹ ದೊರೆತಿದೆ.

    ನವಜೋತ್ ಭಾನುವಾರ ಸಂಜೆ ಸುಮಾರು 4 ಗಂಟೆಗೆ ತನ್ನ ಸ್ನೇಹಿತರನ್ನು ಭೇಟಿಯಾಗಲು ಪಂಚಕುಲಕ್ಕೆ ತೆರಳಿ ಬೇಗ ಹಿಂತಿರುಗುವುದ್ದಾಗಿ ಹೇಳಿ ಹೋಗಿದ್ದರು. ನಂತರ ರಾತ್ರಿ 11.15ಕ್ಕೆ ನವಜೋತ್ ತನ್ನ ತಾಯಿಗೆ ಕರೆ ಮಾಡಿ ಊಟದ ಬಗ್ಗೆ ವಿಚಾರಿಸಿ 5 ನಿಮಿಷದಲ್ಲಿ ಮನೆಗೆ ಬರುತ್ತೇನೆ ಎಂದು ತಿಳಿಸಿದ್ದರು. ನವಜೋತ್ ಹಿಂದಿರುಗದಿದ್ದಾಗ ಆತನಿಗೆ ನಾವು ಪದೇ ಪದೇ ಕರೆ ಮಾಡುತ್ತಿದ್ದವು. ಅಲ್ಲದೇ ಆತನ ಬರುವಿಕೆಗಾಗಿ ಕಾಯುತ್ತಿದ್ದೇವು. ಆದರೆ ಫ್ಯಾಕ್ಟರಿ ಬಳಿಕ ಕಾರಿನ ಡೋರ್ ಓಪನ್ ಆಗಿತ್ತು. ಕಾರಿನ ಹತ್ತಿರದಲ್ಲೇ ಆತನ ಮೃತದೇಹ ಪತ್ತೆಯಾಗಿದೆ ಎಂದು ನವಜೋತ್ ತಂದೆ ಸುಖ್‍ದೇವ್ ಸಿಂಗ್ ತಿಳಿಸಿದ್ದಾರೆ.

    ನವಜೋತ್ ಮೃತದೇಹ ಸಿಕ್ಕಾಗ ಆತನ ಚಿನ್ನದ ಸರ, ಚಿನ್ನದ ಖಡ್ಗ ಹಾಗೂ ಆತನ ಪರ್ಸ್ ಹಣವೆಲ್ಲಾ ಆತನ ಜೊತೆ ಇತ್ತು. ಯಾರೂ ಕೂಡ ಅದನ್ನು ಮುಟ್ಟಿರಲಿಲ್ಲ ಎಂದು ಪೊಲೀಸರು ತನಿಖೆ ನಡೆಸಿದ ನಂತರ ಹೇಳಿದ್ದಾರೆ.

    ನವಜೋತ್ ಯುವತಿಯ ಜೊತೆ ಅಂಬಾಲಾ ರೋಡಿನಲ್ಲಿರುವ ಮೆಕ್ಡೊನಾಲ್ಡ್ಸ್ ಹೋಗುತ್ತಿದ್ದನು ಆತನ ಸಹೋದರ ಸಂಬಂಧಿ ನೋಡಿರುವುದರ ಬಗ್ಗೆ ಪೊಲೀಸರ ಹತ್ತಿರ ತಿಳಿಸಿದ್ದಾರೆ. ಸದ್ಯ ಈ ಕೇಸನ್ನು ಎಲ್ಲಾ ಆಯಾಮಗಳಿಂದಲೂ ವಿಚಾರಣೆ ನಡೆಸುತ್ತಿದ್ದೇವೆ. ಆ ಯುವತಿಯ ಬಗ್ಗೆಯೂ ವಿಚಾರಿಸಲಾಗುತ್ತದೆ ಎಂದು ದೇರಾ ಬಸ್ಸಿಯ ಎಎಸ್‍ಪಿ ಹರ್ಮನ್ ದೀಪ್ ಹಾನ್ಸ್ ಹೇಳಿದ್ದಾರೆ.

    ದೇರಾ ಬಸ್ಸಿ ಆಸ್ಪತ್ರೆಯ ಮೂವರು ವೈದ್ಯರು ನವಜೋತ್ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿದ್ದಾರೆ. ನವಜೋತ್ ಎದೆಗೆ 5 ಗುಂಡು ಹಾರಿಸಿದ್ದು, 5 ಗುಂಡುಗಳು ಎದೆಗೆ ಹೊಕ್ಕಿತ್ತು. ಸದ್ಯ ಪೊಲೀಸರು ಮೂರು 9 ಎಂಎಂ ಮದ್ದುಗುಂಡುಗಳನ್ನು ವಶ ಪಡೆದುಕೊಂಡಿದ್ದಾರೆ.

    ಈ ಕೊಲೆ ಕೇಸನ್ನು ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಎಸ್‍ಎಚ್‍ಒ ಮೋಹಿಂದರ್ ಸಿಂಗ್ ತಿಳಿಸಿದ್ದಾರೆ.

  • ಮೈದಾನದಲ್ಲೇ ತಮ್ಮ ಜರ್ಸಿ ಬದಲಿಸಿಕೊಂಡ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ -ವಿಡಿಯೋ ನೋಡಿ

    ಮೈದಾನದಲ್ಲೇ ತಮ್ಮ ಜರ್ಸಿ ಬದಲಿಸಿಕೊಂಡ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ -ವಿಡಿಯೋ ನೋಡಿ

    ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್, ಮುಂಬೈ ನಡುವಿನ ಪಂದ್ಯದ ಬಳಿಕ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ತಮ್ಮ ತಂಡದ ಟಿ-ಶಾರ್ಟ್ ಗಳನ್ನು ಪರಸ್ಪರ ಬದಲಿಸಿಕೊಂಡಿದ್ದಾರೆ.

    ಈ ಹಿಂದೆ ಪುಟ್ಬಾಲ್ ಪಂದ್ಯವಾಳಿಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ಇಂತಹ ದೃಶ್ಯಗಳು ಕ್ರಿಕೆಟ್‍ನಲ್ಲೂ ಕಂಡಿತು. ಇದೇ ಮೊದಲ ಬಾರಿಗೆ ಆಟಗಾರರು ಪರಸ್ಪರ ಗೌರವದ ಸಂಕೇತವಾಗಿ ತಮ್ಮ ತಂಡಗಳ ಜರ್ಸಿಗಳನ್ನು ನೆರೆದಿದ್ದ ಸಾವಿರು ಅಭಿಮಾನಿಗಳ ಮುಂದೆಯೇ ಬದಲಾಯಿಸಿಕೊಂಡರು.

    ಈ ಪಂದ್ಯದಲ್ಲಿ ಪಂಜಾಬ್ ಪರ ಉತ್ತಮ ಪ್ರದರ್ಶನ ನೀಡಿದ್ದ ಕನ್ನಡಿಗ ಕೆಎಲ್ ರಾಹುಲ್ ಕೇವಲ 60 ಎಸೆತಗಳಲ್ಲಿ 94 ರನ್ ಸಿಡಿಸಿದರು. ಇದರಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸೇರಿತ್ತು. ಆದರೆ ಕೆಎಲ್ ರಾಹುಲ್ ಹೋರಟದ ನಡುವೆಯೂ ಮುಂಬೈ 3 ರನ್ ಗಳ ರೋಚಕ ಗೆಲುವು ಪಡೆಯಿತು. ಈ ಮೂಲಕ ಮುಂಬೈ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆಯಿತು.

    ಮುಂಬೈ ಪರ ಮಿಂಚಿನ ಬೌಲಿಂಗ್ ನಡೆಸಿದ ಬುಮ್ರಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಪಂದ್ಯದಲ್ಲಿ ನಾಲ್ಕು ಓವರ್ ಬೌಲ್ ಮಾಡಿದ ಬುಮ್ರಾ ಕೇವಲ 15 ರನ್ ನೀಡಿ 3 ವಿಕೆಟ್ ಪಡೆದರು. ಮುಂಬೈ ತಂಡಕ್ಕೆ ಮುಳುವಾಗಿದ್ದ ಕೆಎಲ್ ರಾಹುಲ್ ವಿಕೆಟ್ ಸಹ ಬುಮ್ರಾ ಉರುಳಿಸಿದ್ದರು. ಸದ್ಯ ಪಾಂಡ್ಯ ಹಾಗೂ ಕೆಎಲ್ ರಾಹುಲ್ ತಂಡದ ಜರ್ಸಿ ಬದಲಾಯಿಸಿದ ವಿಡಿಯೋವನ್ನು ಪಾಂಡ್ಯ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಇಬ್ಬರ ನಡೆಗೆ ಮೆಚ್ಚುಗೆ ಸೂಚಿಸಿದ್ದಾರೆ.

    https://twitter.com/prashan23S/status/996824768656556032?

  • ದೇವರು ಆಡಲು ನನಗೆ ಶಕ್ತಿ ಕೊಟ್ಟಿದ್ದಾನೆ-ಧೋನಿ

    ದೇವರು ಆಡಲು ನನಗೆ ಶಕ್ತಿ ಕೊಟ್ಟಿದ್ದಾನೆ-ಧೋನಿ

    ಮೊಹಾಲಿ: ಕ್ರಿಕೆಟ್ ಆಡಲು ದೇವರು ನನಗೆ ಶಕ್ತಿ ಕೊಟ್ಟಿದ್ದಾನೆ. ಆಟದಲ್ಲಿ ನಾನು ಹೆಚ್ಚು ಸೊಂಟದ ಮೇಲೆ ಒತ್ತಡವನ್ನು ನೀಡುವುದಿಲ್ಲ. ನನ್ನ ಕೈಗಳಿಗೆ ಮಾತ್ರ ಹೆಚ್ಚಿನ ಶ್ರಮ ನೀಡುತ್ತೇನೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಹೇಳಿದ್ದಾರೆ.

    ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಧೋನಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಬಳಿಕವೂ ಚೆನ್ನೈ 4 ರನ್ ಅಂತರದಲ್ಲಿ ಸೋಲುಂಡಿತ್ತು.

    ಪಂಜಾಬ್ ತಂಡದ ನೀಡಿದ್ದ 198 ರನ್ ಗುರಿಯನ್ನು ಬೆನ್ನತ್ತಿದ್ದ ಸಿಎಸ್‍ಕೆ ಗೆಲುವಿಗಾಗಿ ರೋಚಕ ಹೋರಾಟ ನಡೆಸಿತ್ತು. ಈ ಪಂದ್ಯದಲ್ಲಿ ಧೋನಿ 44 ಎಸೆತಗಳಲ್ಲಿ 79 ರನ್ (6 ಬೌಂಡರಿ, 5 ಸಿಕ್ಸರ್) ಸಿಡಿಸಿದ್ದರು. ಆದರೆ ಪಂದ್ಯದ ನಡುವೆ ಧೋನಿ ಬೆನ್ನು ನೋವಿನಿಂದ ಬಳಲಿದ್ದರೂ ಬಳಿಕ ಮೈದಾನದಿಂದಲೇ ಚಿಕಿತ್ಸೆ ಪಡೆದು ಆಟ ಮುಂದುವರೆಸಿದ್ದರು. ಪಂದ್ಯದ ಕೊನೆಯ ಓವರ್ ವರೆಗೂ ಗೆಲುವಿಗಾಗಿ ಧೋನಿ ನಡೆಸಿದ ಹೋರಾಟಕ್ಕೆ ಮೋಹಿತ್ ಶರ್ಮಾ ಉತ್ತಮ ಪ್ರತಿರೋಧ ನಡೆಸಿದ್ದರು. ಧೋನಿ ಪಂದ್ಯದಲ್ಲಿ ಸಮಸ್ಯೆಗೆ ಒಳಗಾದರೂ ಗೆಲುವಿಗಾಗಿ ನಡೆಸಿದ ಹೋರಾಟಕ್ಕೆ ಹಲವು ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಟ್ವೀಟ್ ಮಾಡಿದ್ದಾರೆ.

    ಇದಕ್ಕೂ ಮುನ್ನ ಸಿಎಸ್‍ಕೆ ನ ಎರಡು ಪಂದ್ಯಗಳ ಗೆಲುವಿಗೆ ಸ್ಯಾಮ್ ಬಿಲ್ಲಿಂಗ್ ಮತ್ತು ಬ್ರಾವೋ ಕಾರಣರಾಗಿದ್ದರು. ಆದರೆ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಬ್ರಾವೋ ಅವರ ಸ್ಥಾನದಲ್ಲಿ ಜಡೇಜಾ ಅವರನ್ನು ಬ್ಯಾಟಿಂಗ್ ಕಳುಹಿಸಿದ್ದು ಚರ್ಚೆಗೆ ಕಾರಣವಾಗಿತ್ತು. ಆದರೆ ಆಲ್ ರೌಂಡರ್ ಜಡೇಜಾ ಭಾರೀ ಹೊಡೆತ ಸಿಡಿಸುವ ನಂಬಿಕೆ ಇತ್ತು. ಅದ್ದರಿಂದಲೇ ಅವರ ಬ್ಯಾಟಿಂಗ್ ಕ್ರಮದಲ್ಲಿ ಉನ್ನತಿ ನೀಡಲಾಗಿತ್ತು ಎಂದರು. ಬಳಿಕ ಮುಂದಿನ ಪಂದ್ಯಕ್ಕೆ ಮೂರು ದಿನಗಳ ಸಮಯ ಇರುವುದರಿಂದ ತಮ್ಮ ಸಮಸ್ಯೆಯಿಂದ ಬೇಗ ಹೊರ ಬರುತ್ತೇನೆ ಎಂದು ಹೇಳಿದ್ದಾರೆ.

  • ಖ್ಯಾತ ಪಂಜಾಬಿ ಗಾಯಕ ಪರ್ಮಿಶ್ ಮೇಲೆ ಗುಂಡಿನ ದಾಳಿ – ತಾನೇ ಗುಂಡು ಹಾರಿಸಿದ್ದಾಗಿ ಫೇಸ್ ಬುಕ್ ಪೋಸ್ಟ್ ಹಾಕಿದ ಗ್ಯಾಂಗ್‍ಸ್ಟರ್

    ಖ್ಯಾತ ಪಂಜಾಬಿ ಗಾಯಕ ಪರ್ಮಿಶ್ ಮೇಲೆ ಗುಂಡಿನ ದಾಳಿ – ತಾನೇ ಗುಂಡು ಹಾರಿಸಿದ್ದಾಗಿ ಫೇಸ್ ಬುಕ್ ಪೋಸ್ಟ್ ಹಾಕಿದ ಗ್ಯಾಂಗ್‍ಸ್ಟರ್

    ಚಂಡಿಗಢ :  ಖ್ಯಾತ ಪಂಜಾಬಿ ಗಾಯಕ ಪರ್ಮಿಶ್ ವರ್ಮಾ ಹಾಗೂ ಅವರ ಸ್ನೇಹಿತನ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ.

    ಮೊಹಾಲಿಯ ಸೆಕ್ಟರ್ 74 ರಲ್ಲಿ ಶುಕ್ರವಾರ ತಡ ರಾತ್ರಿ ದಾಳಿ ನಡೆಸಿ ಪರಾರಿಯಾಗಿದ್ದರು. ಈ ದಾಳಿಯಲ್ಲಿ ಗಾಯಗೊಂಡಿರುವ ಪರ್ಮಿಶ್ ಹಾಗೂ ಆತನ ಸ್ನೇಹಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಗುಂಡಿನ ದಾಳಿಯಲ್ಲಿ ಪರ್ಮಿಶ್ ಅವರ ಕಾಲಿಗೆ ಗುಂಡೇಟು ತಗುಲಿದೆ. ರಾತ್ರಿ ವೇಳೆ ಕಾರ್ಯಕ್ರಮವೊಂದರ ಪ್ರಚಾರ ಕಾರ್ಯ ನಡೆಸಿ ಹಿಂದಿರುಗುತ್ತಿದ್ದ ವೇಳೆ ಅವರ ಮೇಲೆ ದಾಳಿ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕುಲ್ ದೀಪ್ ಚಹಲ್ ಮಾಹಿತಿ ನೀಡಿದ್ದಾರೆ.

    ಪರ್ಮಿಶ್ ವರ್ಮಾ ಪಂಜಾಬಿಯ ಖ್ಯಾತ ಗಾಯಕರಾಗಿದ್ದು, ಇವರ ಸೂಪರ್ ಹಿಟ್ ‘ಗಾಲ್ ನಿ ಕದ್ನಿ’ ಹಾಡನ್ನು ಸುಮಾರು 11 ಕೋಟಿ ಬಾರಿ ವಿಕ್ಷಣೆ ಮಾಡಲಾಗಿದೆ. ಇವರ ಇತ್ತೀಚಿನ ಮತ್ತೊಂದು ಹಾಡು ಸಹ ಹಿಟ್ ಲಿಸ್ಟ್ ನಲ್ಲಿ ಸೇರಿತ್ತು. ಪಮಿರ್ಶ್ ಜನಪ್ರಿಯತೆ ಹೆಚ್ಚಾಗುತ್ತಿದಂತೆ ಗ್ಯಾಂಗ್‍ಸ್ಟರ್ ಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

    ಗ್ಯಾಂಗ್ ಸ್ಟರ್ ಕೈವಾಡ?
    ಘಟನೆ ಬಳಿಕ ಪರ್ಮಿಶ್ ಮೇಲೆ ತಾವೇ ಗುಂಡಿನ ದಾಳಿಯನ್ನು ತಾವೇ ನಡೆಸಿದ್ದಾಗಿ ಗ್ಯಾಂಗ್‍ಸ್ಟರ್ ದಿಲ್ ಪ್ರೀತ್ ಸಿಂಗ್ ದಹನ್ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದಾರೆ. ಪೋಸ್ಟ್ ನಲ್ಲಿ ಗ್ಯಾಂಗ್ ನ ವ್ಯಕ್ತಿ ಪಿಸ್ತೂಲ್ ನೊಂದಿಗೆ ಪರ್ಮಿಶ್ ಫೋಟೋವನ್ನು ಹಾಕಿ ದಾಳಿಯ ಕುರಿತು ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಮೊಹಾಲಿ ಪೊಲೀಸರು ತನಿಖೆ ನಡೆಸಿದ್ದಾರೆ.

  • ಐಪಿಎಲ್ 11ರ ಮೊದಲ ಗೆಲುವು ಸವಿದ ರಾಯಲ್ ಚಾಲೆಂಜರ್ಸ್!

    ಐಪಿಎಲ್ 11ರ ಮೊದಲ ಗೆಲುವು ಸವಿದ ರಾಯಲ್ ಚಾಲೆಂಜರ್ಸ್!

    ಬೆಂಗಳೂರು: ಈ ಸಲ ಕಪ್ ನಮ್ಮದೇ ಎಂಬ ಅಭಿಮಾನಿಗಳ ಕನಸಿನೊಂದಿಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಣಕ್ಕಿಳಿದ ರಾಯಲ್ಸ್ ಚಾಲೆಂಜರ್ಸ್ ಬಳಗ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ರೋಚಕ 4 ವಿಕೆಟ್ ಗೆಲುವು ಪಡೆದು ಐಪಿಎಲ್‍ನ 11 ನೇ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆಯಿತು.

    ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಡಿ ಕಾಕ್, ಎಬಿ ಡಿವಿಲಿಯರ್ಸ್ ಆರ್.ಸಿ.ಬಿ ಗೆಲುವಿಗೆ ಕಾರಣರಾದರು. ಪಂಜಾಬ್ ನ 156 ರನ್ ಸುಲಭ ಗುರಿಯನ್ನು ಬೆನ್ನತ್ತಿದ ಆರ್ ಸಿಬಿ ಮೊದಲ ಓವರ್ ನಲ್ಲೇ ಮ್ಯಾಕಲಮ್ ಶೂನ್ಯ ಸುತ್ತುವ ಮೂಲಕ ಅಘಾತ ಎದುರಿಸಿತು. ಬಳಿಕ ನಾಯಕ ಕೊಹ್ಲಿ ಹಾಗೂ ಡಿ ಕಾಕ್ ಜೋಡಿ ಬಿರುಸಿನ ಆಟ ಪ್ರದರ್ಶಿಸಿತು. ಈ ವೇಳೆ 21 ರನ್ ಗಳಿಸಿದ್ದ ಕೊಹ್ಲಿ ರೆಹಮಾನ್ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಡಿ ಕಾಕ್ (34 ಎಸೆತ 45 ರನ್) ರನ್ನು ಪಂಜಾಬ್ ನಾಯಕ ಅಶ್ವಿನ್ ಪೆವಿಲಿಯನ್ ಸೇರುವಂತೆ ಮಾಡಿದರು.

    ಈ ವೇಳೆ ಬ್ಯಾಟಿಂಗ್ ಇಳಿದ ಸ್ಫೋಟಕ ಆಟಗಾರ ಎಬಿಡಿ 40 ಎಸೆಗಳಲ್ಲಿ ಭರ್ಜರಿ ನಾಲ್ಕು ಸಿಕ್ಸರ್, 2 ಬೌಂಡರಿ ನೆರವಿನಿಂದ 57 ರನ್ ಸಿಡಿಸಿ ತಂಡವನ್ನು ಗೆಲುವಿನ ಸನಿಹ ಕೊಂಡೊಯ್ದರು. ಆದರೆ ಈ ವೇಳೆ ಮಿಂಚಿನ ದಾಳಿ ನಡೆಸಿದ ನೈಲ್ ಎಬಿಡಿ, ಮನ್ ದೀಪ್ ವಿಕೆಟ್ ಪಡೆದರು.

    ಕೊನೆಯ 4 ಓವರ್ ನಲ್ಲಿ ರಾಯಲ್ ಚಾಲೆಂಜರ್ಸ್ 41 ರನ್ ಗಳಿಸಬೇಕಿತ್ತು. 17ನೇ ಓವರ್ ನಲ್ಲಿ ಡಿವಿಲಿಯರ್ಸ್ ಎರಡು ಸಿಕ್ಸರ್ ಸಿಡಿಸಿ ದರೆ, ಮನ್ ದೀಪ್ ಸಿಂಗ್ 1 ಬೌಂಡರಿ ಬಾರಿಸಿದರು. ಈ ಓವರ್ ನಲ್ಲಿ ಒಟ್ಟು 19 ರನ್ ಗಳಿಸಿತು. 18ನೇ ಓವರ್ ನಲ್ಲೂ ಎಬಿ ಡಿವಿಲಿಯರ್ಸ್ 1 ಸಿಕ್ಸ್ ಬಾರಿಸಿ ಒಟ್ಟಾರೆ 11 ಗಳಿಸಿದರು. ಆದರೆ 19ನೇ ಓವರ್ ನ  ಮೊದಲ ಬಾಲ್ ನಲ್ಲೇ ಆಕ್ರಮಣಕಾರಿಯಾಗಿ ಆಡಲು ಹೋದ ಡಿವಿಲಿಯರ್ಸ್ ಔಟಾದರು. ಇದೇ ಓವರ್ ನಲ್ಲೇ ಮನ್ ದೀಪ್ ಸಿಂಗ್ ಕೂಡಾ ಔಟಾದರು. ಪಂಜಾಬ್ ತಂಡ ಕೇವಲ 4 ರನ್ ಮಾತ್ರ ಈ ಓವರ್ ನಲ್ಲಿ ಬಿಟ್ಟುಕೊಟ್ಟಿತ್ತು. ಕೊನೆಯ ಓವರ್ ನಲ್ಲಿ ರಾಯಲ್ ಚಾಲೆಂಜರ್ಸ್ ತಂಡ 5 ರನ್ ಗಳಿಸಬೇಕಿತ್ತು. ಈ ವೇಳೆ ಬ್ಯಾಟಿಂಗ್ ಗೆ ಆಗಮಿಸಿದ್ದ ವಾಷಿಂಗ್ಟನ್ ಸುಂದರ್ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದರು. ಕೊನೆಯ ಓವರ್ ನಲ್ಲಿ ಮೂರು ಎಸೆತಗಳು ಬಾಕಿ ಇರುವಂತೆಯೇ ಬೌಂಡರಿ ಬಾರಿಸಿದ ವಾಷಿಂಗ್ಟನ್ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಮೊದಲ ಗೆಲುವಿನ ಸವಿಯುಣಿಸಿದರು.

    ಈ ಮೊದಲು ಟಾಸ್ ಗೆದ್ದು ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡರು. ಕೊಹ್ಲಿ ಆಯ್ಕೆ ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಬೌಲ್ ಮಾಡಿದ ಉಮೇಶ್ ಯಾದವ್ ಓವರ್ ಒಂದರಲ್ಲಿ ಮೂರು ಪಡೆದು ಪಂಜಾಬ್ ಗೆ ಆಘಾತ ನೀಡಿದರು. ನಾಲ್ಕನೇ ಓವರ್ ಬೌಲ್ ಮಾಡಿದ ಯಾದವ್ ಪಂಜಾಬ್ ಓಪನರ್ ಮಯಾಂಕ್ ಅಗರವಾಲ್ (15), ಆರಾನ್ ಪಿಂಚ್ (0) ಹಾಗೂ ಯುವರಾಜ್ ಸಿಂಗ್(4) ವಿಕೆಟ್ ಪಡೆದರು.

    ಕಳೆದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಕನ್ನಡಿಗ ಕೆಎಲ್ ರಾಹುಲ್ ಏಕಾಂಗಿ ಹೋರಾಟ ನಡೆಸಿದರು. 30 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ನೆರವಿನಿಂದ 47 ರನ್ ಗಳಿಸಿದ ರಾಹುಲ್ ವಾಷಿಂಗ್ಟನ್ ಸುಂದರ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ತಂಡದ ಆಸರೆಯಾದ ಕರುಣ್ ನಾಯರ್ ನಿಧಾನಗತಿಯ ಬ್ಯಾಟಿಂಗ್ ನಡೆಸಿ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದರು. 29 ರನ್ ಗಳಿಸಿದ ನಾಯರ್ 12ನೇ ಓವರ್ ಎಸೆದ ಕುಲವಂತ್ ಖೆಜ್ರೊಲಿಯಾ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

    ಬಳಿಕ ಬಂದ ಮಾರ್ಕಸ್ ಸ್ಟಾಯ್ (11)ರನ್ನು ಕ್ವಿಂಟನ್ ಡಿ ಕಾಕ್ ಸ್ಟಂಪ್ ಗೆ ಬಲಿಯಾದರು. ಉಮೇಶ್ ಯಾದವ್ ಗೆ ಸಾಥ್ ನೀಡಿದ ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದು ಪಂಜಾಬ್ ರನ್ ಓಟಕ್ಕೆ ಕಡಿವಾಣ ಹಾಕಿದರು. ನಂತರ ಬಂದ ಅಕ್ಷರ್ ಪಟೇಲ್ (2) ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿದರು. ಈ ವೇಳೆ ಪಂಜಾಬ್ ನಾಯಕ ಆರ್ ಅಶ್ವಿನ್ ಬಿರುಸಿನ ಬ್ಯಾಟಿಂಗ್ ನಡೆಸಿ ಕೇವಲ 21 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ 33 ರನ್ ಸಿಡಿಸಿ ತಂಡದ ಮೊತ್ತ 150 ರನ್ ಗಡಿ ದಾಟಲು ಕಾರಣರಾದರು. ಬಳಿಕ ಬಂದ ಆ್ಯಂಡ್ರ್ಯೂ ಟೈ (7), ರೆಹಮಾನ್ (0) ಔಟ್ ಆಗುವುದರೊಂದಿಗೆ ಇನ್ನು 4 ಬಾಲ್ ಇರುವಂತೆ ಪಂಜಾಬ್ ಆಲೌಟ್ ಆಯಿತು.

    ಆರ್ ಸಿಬಿ ಪರ ಉಮೇಶ್ ಯಾದವ್ 3, ಖೆಜ್ರೊಲಿಯಾ, ಸುಂದರ್, ವೋಕ್ಸ್ ತಲಾ 2 ವಿಕೆಟ್ ಹಾಗೂ ಚಹಾಲ್ 1 ವಿಕೆಟ್ ಪಡೆದು ಮಿಂಚಿದರು. ಒಟ್ಟಾರೆ 19.2 ಓವರ್ ಗಳಲ್ಲಿ ಪಂಜಾಬ್ 155 ರನ್ ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು.

  • ಮಗುವಿಗೆ ಕೋಲಿನಿಂದ ಹೊಡೆದು, ಕೆನ್ನೆ ಕಚ್ಚಿ, ಕಾಲರ್ ಹಿಡಿದು ಎತ್ತಿದ್ಳು- ಹಿಡನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಮನೆಕೆಲಸದವಳ ಕ್ರೂರ ಕೃತ್ಯ

    ಮಗುವಿಗೆ ಕೋಲಿನಿಂದ ಹೊಡೆದು, ಕೆನ್ನೆ ಕಚ್ಚಿ, ಕಾಲರ್ ಹಿಡಿದು ಎತ್ತಿದ್ಳು- ಹಿಡನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಮನೆಕೆಲಸದವಳ ಕ್ರೂರ ಕೃತ್ಯ

    ಚಂಡೀಘಢ: ಮನೆಕೆಲಸದವಳು 1 ವರ್ಷದ ಮಗುವನ್ನ ಅಮಾನುಷವಾಗಿ ಥಳಿಸಿರೋ ಘಟನೆ ಪಂಜಾಬ್‍ನ ಕಪುರ್‍ತಲಾದಲ್ಲಿ ನಡೆದಿದ್ದು, ಕ್ರೂರಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

    1 ವರ್ಷದ ಪುಟ್ಟ ಮಗುವಿಗೆ ಮಹಿಳೆ ಅಮಾನುಷವಾಗಿ ಥಳಿಸಿದ್ದಾಳೆ. ಕೋಲಿನಿಂದ ಮಗುವಿಗೆ ಹೊಡೆದು, ಮಗುವಿನ ಕೆನ್ನೆಯನ್ನ ಕಚ್ಚಿದ್ದಾಳೆ. ಅಲ್ಲದೆ ಮಗುವಿನ ಕಾಲರ್ ಹಿಡಿದು ಮೇಲೆತ್ತಿದ್ದಾಳೆ. ಮಗು ನೋವಿನಿಂದ ಅಳುತ್ತಿದ್ದರೂ ಕ್ರೂರಿ ಮಹಿಳೆಗೆ ಅದು ಯಾವುದೇ ಪರಿಣಾಮ ಬೀರಲಿಲ್ಲ. ಮಗು ಅಳುತ್ತಿರೋ ಧ್ವನಿ ಹೊರಗೆ ಕೇಳಿಸಬಾರದೆಂದು ಟಿವಿಯ ಶಬ್ದವನ್ನ ಜಾಸ್ತಿ ಮಾಡಿದ್ದಾಳೆ. ಈ ಎಲ್ಲಾ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗಿತ್ತು.

    ಮಗುವಿನ ತಂದೆ ಸುಖ್‍ದೇವ್ ಸಿಂಗ್ ನೀಡಿದ ದೂರಿನನ್ವಯ ಇದೀಗ ಪೊಲೀಸರು ಆರೋಪಿ ಮಹಿಳೆಯನ್ನ ಬಂಧಿಸಿದ್ದಾರೆ. ಬಂಧಿತಳನ್ನು ಪರ್ವೀನ್(35) ಎಂದು ಗುರುತಿಸಲಾಗಿದ್ದು, ಈಕೆ ಕಪುರ್‍ತಲಾದ ಮೆಹ್ಟಾಬ್‍ಘರ್ ನಿವಾಸಿಯಾಗಿದ್ದಾಳೆ.

    ತಂದೆ ತಾಯಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರಿಂದ ಮಗುವನ್ನ ನೋಡಿಕೊಳ್ಳಲು ಪರ್ವೀನ್‍ಳನ್ನ ಕೆಲಸಕ್ಕೆ ತೆಗೆದುಕೊಂಡಿದ್ದರು. ಆಕೆಗೆ ತಿಂಗಳಿಗೆ 1500 ರೂ. ಸಂಬಳ ನೀಡಲಾಗುತ್ತಿತ್ತು ಎಂದು ಮಗುವಿನ ತಂದೆ ಸುಖ್‍ದೇವ್ ಸಿಂಗ್ ಪೊಲೀಸರಿಗೆ ಹೇಳಿದ್ದಾರೆ. ನಿರೀಕ್ಷೆಯಂತೆ ತಂದೆ ತಾಯಿ ಸಮ್ಮುಖದಲ್ಲಿ ಪರ್ವೀನ್ ಮಗುವನ್ನ ಚೆನ್ನಾಗೇ ನೋಡಿಕೊಳ್ಳುತ್ತಿದ್ದಳು.

    ಆದ್ರೆ ಮಗುವಿನ ವರ್ತನೆಯಲ್ಲಿ ಬದಲಾವಣೆ ಕಂಡುಬಂದಾಗ, ಜೊತೆಗೆ ಗಾಯದ ಗುರುತುಗಳು ಕಂಡುಬಂದಾಗ ತಂದೆ ತಾಯಿಗೆ ಅನುಮಾನ ಬಂದಿತ್ತು. ಹೀಗಾಗಿ ಗೌಪ್ಯವಾಗಿ ಮನೆಯ ಮೂಲೆಯೊಂದರಲ್ಲಿ ಮೊಬೈಲ್ ಫೋನ್ ಕ್ಯಾಮೆರಾ ಆನ್ ಮಾಡಿ ಇಟ್ಟಿದ್ದರು. ಆಗ ಪರ್ವೀನ್‍ಳ ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

    ಮಗುವನ್ನ ಸುಮ್ಮನಿರಿಸಲು ಹೊಡೆದಿದ್ದಾಗಿ ಪರ್ವೀನ್ ಪೊಲೀಸರಿಗೆ ಹೇಳಿದ್ದಾಳೆ. ಆರೋಪಿ ಪರ್ವೀನ್ ವಿರುದ್ಧ ಐಪಿಸಿ ಸೆಕ್ಷನ್ 323 ಹಾಗೂ 380ರಡಿ ಪ್ರಕರಣ ದಾಖಲಾಗಿದೆ.

  • ನಾನು ಅಪ್ರಾಪ್ತೆಯಲ್ಲ ಎಂದು ಲವ್ವರ್ ನ ಮದ್ವೆಯಾದ್ಳು – ಮದ್ವೆಯಾದ ಕೆಲವೇ ತಿಂಗ್ಳಲ್ಲಿ ಡೆತ್‍ನೋಟ್ ಬರೆದು 18ರ ಯುವತಿ ಆತ್ಮಹತ್ಯೆ

    ನಾನು ಅಪ್ರಾಪ್ತೆಯಲ್ಲ ಎಂದು ಲವ್ವರ್ ನ ಮದ್ವೆಯಾದ್ಳು – ಮದ್ವೆಯಾದ ಕೆಲವೇ ತಿಂಗ್ಳಲ್ಲಿ ಡೆತ್‍ನೋಟ್ ಬರೆದು 18ರ ಯುವತಿ ಆತ್ಮಹತ್ಯೆ

    ಚಂಡೀಗಢ: ನಾನು ಅಪ್ತಾಪ್ತೆಯಲ್ಲ ಎಂದು ಹೇಳಿ ಪ್ರೀತಿಸಿದವನ ಜೊತೆ 18ರ ಯುವತಿ ಮದುವೆಯಾದಳು. ಆದರೆ ಮದುವೆಯಾದ ಒಂದು ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಾಬ್‍ನ ಮೊಹಲಿಯಲ್ಲಿ ನಡೆದಿದೆ.

    18 ವರ್ಷದ ಆವಂತಿಕಾ ತನ್ನ ಮನೆಯಲ್ಲಿ ಫ್ಯಾನಿಗೆ ನೇಣಿ ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಯುವತಿ. ಶುಕ್ರವಾರ ಊಟದ ಸಮಯದಲ್ಲಿ ಅವಳ ಚಿಕ್ಕಮ್ಮ ಕೆಲಸದಿಂದ ಮನೆಗೆ ಬಂದಾಗ ಆವಂತಿಕಾ ರೂಂ ಒಳಗೆ ಸೇರಿಕೊಂಡು ಲಾಕ್ ಮಾಡಿಕೊಂಡಿದ್ದಳು. ಎಷ್ಟೆ ಬಾಗಿಲು ಬಡಿದರೂ ತೆಗೆಯಲಿಲ್ಲ. ಕೊನೆಗೆ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಳು. ತಕ್ಷಣ ಅವಳನ್ನು ಕೆಳಗಿಳಿಸಿ ಸಮೀಪದ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಅಷ್ಟರಲ್ಲಿ ಆವಂತಿಕಾ ಮೃತಪಟ್ಟಿದ್ದಳು.

    ಆವಂತಿಕಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್‍ನೋಟ್ ಬರೆದಿದ್ದು, ಪೋಷಕರು ವಿರೋಧಿಸಿದರು ನಾನು ಪ್ರೀತಿಸಿದ ಹುಡುಗನನ್ನು ವಿವಾಹವಾಗಿ ತಪ್ಪು ಮಾಡಿದೆ. ಈಗ ಈ ಜೀವನದಲ್ಲಿ ನನಗೆ ಜಿಗುಪ್ಸೆಯಾಗಿದೆ. ಕಳೆದ ವರ್ಷ ಕುಟುಂಬದ ವಿರೋಧವಿದ್ದರೂ ನಾನು ಪ್ರೀತಿಸಿದ ಹರ್ದೀಪ್ ನನ್ನು ಗುರುದ್ವಾರದಲ್ಲಿ ಮದುವೆಯಾದೆ. ಆದರೆ ಮದುವೆಯಾದ ಮೊದಲು ಎಲ್ಲವೂ ಸರಿ ಇತ್ತು. ಸ್ವಲ್ಪದಿನಗಳ ನಂತರ ಸಮಸ್ಯೆಗಳು ಪ್ರಾರಂಭವಾದವು.

    ಹರ್ದೀಪ್ ನನ್ನನ್ನು ನಿರಂತರವಾಗಿ ನಿಂದಿಸುತ್ತಿದ್ದನು. ಅತ್ತೆ, ಮಾವ ಸಹ ಅವನಿಗೆ ಸಹಾಯ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಮಾವ ಕೂಡ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದನು. ಒಂದು ಬಾರಿ ಕುತ್ತಿಗೆಯನ್ನು ಹಿಡಿದಿದ್ದ. ತನಗೆ ಆಗುತ್ತಿರುವ ಅನ್ಯಾಯವನ್ನು ಪತಿಗೆ ತಿಳಿಸಿದರೆ ನನಗೆ ಸುಮ್ಮನಿರು ಅಂತಾ ಹೇಳಿದ್ದನು ಎಂದು ಬರೆದಿದ್ದಾಳೆ.

    ಆವಂತಿಕಾ ಸಾವನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಹಾರ್ದೀಪ್, ಮಾವ ಜಗ್ಸೀರ್ ಸಿಂಗ್ ಮತ್ತು ಅತ್ತೆ ಕರ್ಮಜೀತ್ ಕೌರ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಈ ಹಿಂದೆ ಆವಂತಿಕಾ ತಂದೆ 2017 ರಲ್ಲಿ ಹಾರ್ದೀಪ್ ವಿರುದ್ಧ ದೂರು ನೀಡಿದ್ದು, ಜೂನ್ 23 ರಂದು ಆವಂತಿಕಾ ನಮ್ಮ ಸಂಬಂಧಿಗಳ ಮನೆಗೆ ಹೋಗುತ್ತೇನೆ ಎಂದು ಹೋಗಿದ್ದಳು. ಆದರೆ ಅವಳು ಮನೆಗೆ ತಲುಪಲಿಲ್ಲ. ಹಾರ್ದೀಪ್ ಅವಳನ್ನು ಕರೆದೊಯ್ದಿದ್ದನು ಎಂದು ಶಂಕಿಸಿ ದೂರು ನೀಡಿದ್ದರು.

  • 10 ವರ್ಷದ ಬಾಲಕನ ಜೊತೆ 21 ವರ್ಷದ ಯುವತಿಯ ಮದ್ವೆ ಮಾಡಿಸಿದ ಅಣ್ಣ!

    10 ವರ್ಷದ ಬಾಲಕನ ಜೊತೆ 21 ವರ್ಷದ ಯುವತಿಯ ಮದ್ವೆ ಮಾಡಿಸಿದ ಅಣ್ಣ!

    ಚಂಡೀಗಢ: ಆಸ್ತಿಗಾಗಿ ಅಣ್ಣನೇ 21 ವರ್ಷದ ಸಹೋದರಿಯನ್ನು ತನ್ನ ಸೋದರ ಸಂಬಂಧಿ 10 ವರ್ಷದ ಬಾಲಕನ ಜೊತೆ ಮದುವೆ ಮಾಡಿಸಿರುವ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

    ಈ ಘಟನೆ ಪಿಂಡ ಭಟಿಯಾನ್ ನಗರದ ಹೊರವಲಯದಲ್ಲಿರುವ ಭಾಂಗ್ಸಿಕಾ ಗ್ರಾಮದಲ್ಲಿ ನಡೆದಿದ್ದು, ಯುವತಿಯ ಅಣ್ಣ ಮೇಹ್‍ವಿಷ್ ಮುಂದೇ ನಿಂತು ತನ್ನ ಸಹೋದಸಂಬಂಧಿ ಅಲ್ಲಾ ದತ್ತಾ ಬಾಲಕನ ಜೊತೆ ಮದುವೆ ಮಾಡಿಸಿದ್ದಾನೆ. ಇದನ್ನೂ ಓದಿ: ಅತ್ತಿಗೆಯ ಜೊತೆ ಮದುವೆ- ಮನನೊಂದು ಆತ್ಮಹತ್ಯೆಗೆ ಶರಣಾದ 9ನೇ ಕ್ಲಾಸ್ ಬಾಲಕ

    ತಮ್ಮ ಕುಟುಂಬದ ಆಸ್ತಿಯನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಉದ್ದೇಶದಿಂದ ಬಲವಂತವಾಗಿ ಯುವತಿಗೆ ಮದುವೆ ಮಾಡಲಾಗಿದೆ. ಈ ಮದುವೆ ಕುರಿತು ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ವಿವಾಹ ಕಾನೂನು ಬಾಹಿರವಾಗಿದ್ದು, ಇದನ್ನು ತಡೆಯವಲ್ಲಿ ಮಕ್ಕಳ ರಕ್ಷಣಾ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ವಿಫಲವಾಗಿದ್ದಾರೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

    ಪಂಜಾಬ್ ಕಾನೂನು ಪ್ರಕಾರ, 18 ವರ್ಷದೊಳಗೆ ಮದುವೆಯಾದರೆ ಅದನ್ನು ಬಾಲ್ಯವಿವಾಹ ಎಂದು ಪರಿಗಣಿಸಲಾಗುತ್ತದೆ. ಬಾಲ್ಯವಿವಾಹ ಮಾಡಿಸಿದ ಅಪರಾಧಕ್ಕೆ 6 ತಿಂಗಳು ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಲಾಗುತ್ತದೆ.

  • ಈಕೆ ಪೊಲೀಸ್ ಅಧಿಕಾರಿ ಅಂತ ನೀವೂ ನಂಬಿದ್ರಾ?- ವೈರಲ್ ಫೋಟೋ ಹಿಂದಿನ ಅಸಲಿ ಕಥೆ ಓದಿ

    ಈಕೆ ಪೊಲೀಸ್ ಅಧಿಕಾರಿ ಅಂತ ನೀವೂ ನಂಬಿದ್ರಾ?- ವೈರಲ್ ಫೋಟೋ ಹಿಂದಿನ ಅಸಲಿ ಕಥೆ ಓದಿ

    ಚಂಡೀಗಢ: ಪೊಲೀಸ್ ಸಮವಸ್ತ್ರದಲ್ಲಿರೋ ಮಹಿಳೆಯೊಬ್ಬರ ಫೋಟೋ ಇತ್ತೀಚೆಗೆ ವೈರಲ್ ಆಗಿದೆ. ನೀವೂ ಕೂಡ ಅದನ್ನ ನೋಡಿರಬಹುದು.

    ಈ ಫೋಟೋ ನೋಡಿದವರು ಮಹಿಳೆಯ ಅಂದಕ್ಕೆ ಬೆರಗಾಗಿ ದಯವಿಟ್ಟು ನನ್ನನ್ನು ಅರೆಸ್ಟ್ ಮಾಡಿ, ನಿಮ್ಮಿಂದ ಅರೆಸ್ಟ್ ಆಗೋಕೆ ಜನ ಕ್ಯೂ ನಿಂತಿದ್ದಾರೆ, ನಾನು ಶರಣಾಗತಿ ಆಗ್ತೀನಿ ಎಂತೆಲ್ಲಾ ಕಮೆಂಟ್ ಮಾಡಿದ್ದಾರೆ. ಫೇಸ್‍ಬುಕ್, ವಾಟ್ಸಪ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಹರಿದಾಡ್ತಿದ್ದು, ಬಿಸಿ ಬಿಸಿ ಚರ್ಚೆಯಾಗ್ತಿದೆ. ಆದ್ರೆ ಈ ಫೋಟೋ ಹಿಂದೆ ಇರೋ ಕಥೆಯೇ ಬೇರೆ.

    ನಟಿಯೊಬ್ಬರು ಸಿನಿಮಾಕ್ಕಾಗಿ ಪಂಜಾಬ್ ಪೊಲೀಸ್ ಸಮವಸ್ತ್ರವನ್ನು ಧರಿಸಿದ್ರು. ಆದರೆ ಅವರು ನಿಜವಾದ ಪೊಲೀಸ್ ಎಂದು ತಿಳಿದು ಸಾಮಾಜಿಕ ಜಾಲತಾಣದಲ್ಲಿ ಅವರ ಫೋಟೋ ಸಖತ್ ವೈರಲ್ ಆಗಿದೆ. ಫೋಟೋದಲ್ಲಿ ಕಾಣುವ ಯುವತಿ ಪಂಜಾಬ್ ಪೊಲೀಸ್‍ನ ಸ್ಟೇಷನ್ ಹೌಸ್ ಆಫೀಸರ್ ಹರ್ಲೀನ್ ಮನ್ ಎಂದು ಹೇಳಿ ಜನ ಫೋಟೋ ಹಂಚಿಕೊಂಡಿದ್ದಾರೆ.

    ಆದ್ರೆ ಅಸಲಿಗೆ ಈ ನಟಿಯ ಹೆಸರು ಕೈನಾತ್ ಅರೋರಾ. `ಜಗ್ಗ ಜಿಂಡೇ’ ಎಂಬ ಪಂಜಾಬಿ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಹರ್ಲೀನ್ ಮನ್ ಪಾತ್ರವನ್ನು ಮಾಡುತ್ತಿದ್ದಾರೆ. ಈಗಾಗಲೇ ಇವರು ಗ್ರ್ಯಾಂಡ್ ಮಸ್ತಿ ಹಾಗೂ ಕಟ್ಟಾ ಮೀಟಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಫೋಟೋ ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಂದೇಶಗಳು ಬರಲಾರಂಭಿಸಿದ್ದರಿಂದ ಸ್ವತಃ ಕೈನಾತ್ ಇನ್‍ಸ್ಟಾಗ್ರಾಮ್‍ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹರ್ಲೀನಿ ಮನ್ ಎಂಬುದು ನಾನು ನಿರ್ವಹಿಸುತ್ತಿರೋ ಪಾತ್ರದ ಹೆಸರು. ನಾನು ನಿಜವಾದ ಪೊಲೀಸ್ ಅಧಿಕಾರಿ ಅಲ್ಲ ಅಂತ ಹೇಳಿದ್ದಾರೆ.

    ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನ ಹಂಚಿಕೊಳ್ಳೋ ಮುನ್ನ ಅದರ ಹಿನ್ನೆಲೆ ತಿಳಿದುಕೊಳ್ಳೋದು ಅಗತ್ಯ.

    https://twitter.com/SelvaSelya/status/932469502297509888

    https://twitter.com/MrRakeshTiwari/status/932997640576417793

    https://twitter.com/MrRakeshTiwari/status/932146530521194496

    https://twitter.com/dukelko/status/931721148642951168

    https://www.instagram.com/p/BbpLMnhlylQ/?hl=en&taken-by=ikainaatarora

  • ಕೋಳಿ ಜೊತೆ ಸೆಕ್ಸ್ ಮಾಡಿದ್ದ 14ರ ಬಾಲಕ ಬಂಧನ!

    ಕೋಳಿ ಜೊತೆ ಸೆಕ್ಸ್ ಮಾಡಿದ್ದ 14ರ ಬಾಲಕ ಬಂಧನ!

    ಇಸ್ಲಾಮಾಬಾದ್: ಕಾಮುಕರು ನಾಯಿ, ಮೇಕೆ ಹಾಗೂ ದನದ ಜೊತೆ ಸೆಕ್ಸ್ ಮಾಡಿರುವ ಸುದ್ದಿಗಳನ್ನು ಈ ಹಿಂದೆ ಕೇಳಿದ್ದೆವು. ಆದ್ರೆ ಇದೀಗ 14ರ ಬಾಲಕನೊಬ್ಬ ಕೋಳಿ ಜೊತೆ ಸೆಕ್ಸ್ ನಡೆಸಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

    ಈ ಅಚ್ಚರಿಯ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿರುವುದಾಗಿ ಇಂದು ವರದಿಯಾಗಿದೆ. ಬಂಧಿತನನ್ನು ಅನ್ಸಾರ್ ಹುಸೇನ್ ಎಂದು ಗುರುತಿಸಲಾಗಿದೆ.

    ಲಾಹೋರ್‍ನಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಹಫೀಜಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಜಲಪೂರ್ ಭಾತಿಯಾನ್ ಗ್ರಾಮದ ನಿವಾಸಿಯಾಗಿರುವ ಮನ್‍ಸಾಬ್ ಅಲಿ ಎಂಬವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಅನ್ಸಾರ್ ಹುಸೇನ್ ಕಳೆದ ನ.11ರಂದು ತಾನು ಸಾಕಿದ್ದ ಹೆಣ್ಣು ಕೋಳಿಯೊಂದನ್ನು ಅಪಹರಿಸಿ ಅದರ ಮೇಲೆ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಒಂದೂವರೆ ವರ್ಷದ ಕಂದಮ್ಮನ ಮೇಲೆ ರೇಪ್ – ಮನೆಯೊಳಗಿಂದ್ಲೇ ಕೇರ್ ಟೇಕರ್ ಬಂಧನ

    ಅಲ್ಲದೇ ಆರೋಪಿ ಅನ್ಸಾರ್ ಹುಸೇನ್ ರೇಪ್ ಕೃತ್ಯದಿಂದಾಗಿ ಕೋಳಿ ಸತ್ತು ಹೋಗಿತ್ತು. ರೇಪ್ ಕೃತ್ಯವನ್ನು ನಸ್ರುಲ್ಲಾ ಮತ್ತು ತುಫೇಲ್ ಎಂಬವರು ನೋಡಿದ್ದರು. ಅಂತೆಯೇ ಪ್ರತ್ಯಕ್ಷದರ್ಶಿಗಳ ಸಾಕ್ಷ್ಯ ಮತ್ತು ದೂರಿನ ಆಧಾರದಲ್ಲಿ ಪೊಲೀಸರು ಆರೋಪಿ ಅನ್ಸಾರ್ ಹುಸೇನ್ ನನ್ನು ಬಂಧಿಸಿದ್ದರು.

    ಇದನ್ನೂ ಓದಿ: ಡ್ರಾಪ್ ನೆಪದಲ್ಲಿ ಯುವತಿಯ ಅಪಹರಣಗೈದು ಗ್ಯಾಂಗ್ ರೇಪ್ ಮಾಡಿದ್ರು

    ಬಳಿಕ ಪೊಲಿಸರು ವಿಚಾರಣೆ ನಡೆಸಿದ್ದು, ಈ ವೇಳೆ ಆರೋಪಿ ತಾನು ಕೋಳಿಯ ಮೇಲೆಸೆಗಿದ ಕೃತ್ಯ ನಿಜವೆಂದು ಒಪ್ಪಿಕೊಂಡಿದ್ದಾನೆ.