Tag: Punjab Elections

  • ಗೌಪ್ಯತೆ ಕಾಪಾಡಲು ಕನ್ನಡಕ ಧರಿಸಿ ಮತ ಚಲಾಯಿಸಿದ ಟ್ವಿನ್ಸ್!

    ಚಂಡೀಗಢ: ಪಂಜಾಬ್‌ನ 117 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಈ ಸಂದರ್ಭದಲ್ಲಿ ಸಯಾಮಿ ಅವಳಿಗಳಾದ ಸೋಹನ್ ಸಿಂಗ್ ಹಾಗೂ ಮೋಹನ್ ಸಿಂಗ್ ಅಮೃತಸರ ಜಿಲ್ಲೆಯ ಮನ್ವಾಲ್ ಪ್ರದೇಶದಲ್ಲಿ ಮತ ಚಲಾಯಿಸಿದ್ದಾರೆ.

    ಸಯಾಮಿ ಅವಳಿಯನ್ನು ಪ್ರತ್ಯೇಕ ಮತದಾರರನ್ನಾಗಿ ಪರಿಗಣಿಸಿ ಮತದಾನಕ್ಕೆ ಅವಕಾಶ ನೀಡಲಾಗಿದೆ. ಚುನಾವಣಾ ಅಧಿಕಾರಿ ಅವರಿಗೆ (ಆರ್‌ಒ) ಮತ ಚಲಾವಣೆಯ ಗೌಪ್ಯತೆ ಕಾಪಾಡಲು ಕನ್ನಡಕಗಳನ್ನು ನೀಡಿದ್ದಾರೆ.

    ಸೋಹನ್ ಹಾಗೂ ಮೋಹನ್ 2021ರಲ್ಲಿ 18 ವರ್ಷಕ್ಕೆ ಕಾಲಿಟ್ಟಿದ್ದು, ಅವರು ಸಯಾಮಿ ಅವಳಿಗಳಾಗಿದ್ದರೂ ಎರಡು ಪ್ರತ್ಯೇಕ ಚುನಾವಣಾ ಗುರುತಿನ ಚೀಟಿ ಪಡೆದಿದ್ದಾರೆ. ಇದು ಅವರಿಬ್ಬರ ಮೊದಲ ಮತದಾನವೂ ಆಗಿದೆ. ಇದನ್ನೂ ಓದಿ: 58 ವರ್ಷದ ಸಮಸ್ಯೆ ಬಗೆಹರಿಸಿದ ಬಸಪ್ಪ – ಪವಾಡ ನೋಡಿ ನಿಬ್ಬೆರಗಾದ ಜನರು

    ಸೋಹನ್ ಹಾಗೂ ಮೋಹನ್ 2003ರ ಜೂನ್ 13ರಂದು ಜನಿಸಿದ್ದು, ಪೋಷಕರು ಅವಳಿ ಮಕ್ಕಳ ಕೈಬಿಟ್ಟಿದ್ದರು. ಹೀಗಾಗಿ ಅಮೃತಸರದ ಅನಾಥಾಶ್ರಮ ಈ ಅವಳಿಗಳನ್ನು ದತ್ತು ತೆಗೆದುಕೊಂಡಿತ್ತು. ಇದೀಗ ಈ ಸಯಾಮಿ ಅವಳಿಗಳು ಮತ ಚಲಾಯಿಸಿರುವುದೇ ವಿಶೇಷ ಪ್ರಕರಣವಾಗಿದೆ. ಇದನ್ನೂ ಓದಿ: ಚೀನಾ-ಭಾರತದ ಸಂಬಂಧ ಬಿಗಡಾಯಿಸುತ್ತಿದೆ: ಜೈಶಂಕರ್

    ಭಾನುವಾರ ಪ್ರಾರಂಭವಾದ ಮತದಾನ ಬೆಳಗ್ಗೆ 8 ಗಂಟೆಯಿAದ ಸಂಜೆ 6 ಗಂಟೆವರೆಗೆ ನಡೆಯಲಿದೆ. ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.

  • ಆಮ್ ಆದ್ಮಿ, ಕಾಂಗ್ರೆಸ್ ಪಕ್ಷದ Xerox Copy: ಮೋದಿ ವ್ಯಂಗ್ಯ

    ಆಮ್ ಆದ್ಮಿ, ಕಾಂಗ್ರೆಸ್ ಪಕ್ಷದ Xerox Copy: ಮೋದಿ ವ್ಯಂಗ್ಯ

    ಚಂಡೀಗಢ: ಪಂಜಾಬ್ ಚುನಾವಣೆ ಅಖಾಡಕ್ಕೆ ಇಳಿದಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಇಂದು ಫಾಜಿಲ್ಕಾ ಜಿಲ್ಲೆಯ ಅಬೋಹರ್ ನಗರದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷವೂ ಕಾಂಗ್ರೆಸ್‍ನ ಜೆರಾಕ್ಸ್ ಕಾಪಿ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ಮತ್ತು ಆಮ್ ಆದ್ಮಿ ಭ್ರಷ್ಟಾಚಾರದ ಪಾಲುದಾರರು. ಒಬ್ಬರು ಪಂಜಾಬ್ ಲೂಟಿ ಮಾಡುತ್ತಿದ್ದರೇ ಮತ್ತೊಬ್ಬರು ದೆಹಲಿಯಲ್ಲಿ ಲೂಟಿ ಆರಂಭಿಸಿದ್ದಾರೆ ಎಂದು ಕುಟುಕಿದ್ದಾರೆ.

    ಈ ಎರಡು ಪಕ್ಷಗಳು ಪ್ರಸ್ತುತ ಪಂಜಾಬ್ ನಲ್ಲಿ WWF ಆಡುತ್ತಿವೆ ಎಂದು ವ್ಯಂಗ್ಯ ಮಾಡಿದ್ದು, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಪ್ರಶ್ನೆ ಮಾಡುತ್ತಿವೆ. ರಾಮನನ್ನು ವಿರೋಧಿಸುತ್ತವೆ. ಮತ್ತೊಂದು ಕಡೆ ನಮ್ಮ ಸೈನಿಕರ ಶೌರ್ಯವನ್ನು ಪ್ರಶ್ನೆ ಮಾಡುತ್ತವೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಿಭಜಕ ಮನಸ್ಥಿತಿಯ ಜನರನ್ನು ಪಂಜಾಬ್‍ನಲ್ಲಿ ಆಳಲು ಬಿಡಬೇಡಿ: ಮೋದಿ

    ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹ: ಆ.5ರಂದು 'ಆಪ್' ನಾಯಕರಿಂದ ಉಪವಾಸ ಸತ್ಯಾಗ್ರಹ- Kannada Prabha

    ಪಂಜಾಬ್‍ಗೆ ಈಗ ಅಭಿವೃದ್ಧಿಗೆ ಪೂರಕವಾದ ಮತ್ತು ದೇಶಭಕ್ತಿಯ ಸರ್ಕಾರದ ಅವಶ್ಯಕತೆ ಇದೆ. ಹೀಗಾಗಿ ಹೊಸ ಅಭಿವೃದ್ಧಿಯ ಸಂಕಲ್ಪದೊಂದಿಗೆ ಬಿಜೆಪಿ ಬಂದಿದ್ದು, ಮತ ನೀಡುವ ಮೂಲಕ ಬೆಂಬಲಿಸಬೇಕು ಎಂದು ಜನರಿಗೆ ಮನವಿ ಮಾಡಿಕೊಂಡಿದ್ದಾರೆ.