ರಾಯಚೂರು: ಮಂತ್ರಾಲಯ ಶ್ರೀಗುರು ರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿಗಳಿಗೆ ಈಗಲೂ ಭಕ್ತರು ಲಕ್ಷಾಂತರ ರೂಪಾಯಿ ರದ್ದಾದ 500, 1000 ರೂ ಮುಖಬೆಲೆ ನೋಟುಗಳನ್ನೇ ಹಾಕುತ್ತಿದ್ದಾರೆ. ಜನವರಿ ಅಂತ್ಯಕ್ಕೆ ಎಣಿಸಲಾದ ಮಠದ ಹುಂಡಿಗಳ ಒಂದು ತಿಂಗಳ ಒಟ್ಟು ಕಾಣಿಕೆ 1 ಕೋಟಿ 49 ಲಕ್ಷ ರೂಪಾಯಿ ಇದ್ದು, ಇದರಲ್ಲಿ 4 ಲಕ್ಷ 28 ಸಾವಿರದ 500 ರೂಪಾಯಿ ರದ್ದಾದ ನೋಟುಗಳಿವೆ. 1000 ರೂ. ಮುಖಬೆಲೆಯ 157 ನೋಟು ಹಾಗೂ 500 ರೂ. ಮುಖಬೆಲೆಯ 543 ನೋಟುಗಳಿವೆ.

ಕಳೆದ ವರ್ಷ ಡಿಸೆಂಬರ್ ನಲ್ಲಿ 14 ಲಕ್ಷ 74 ಸಾವಿರ ರೂಪಾಯಿ ರದ್ದಾದ ನೋಟುಗಳು ಪತ್ತೆಯಾಗಿದ್ದವು. ಹಳೆಯ ನೋಟುಗಳು ಕಳೆದ ತಿಂಗಳಿಗಿಂತ 10 ಲಕ್ಷ ರೂಪಾಯಷ್ಟು ಕಡಿಮೆಯಾದ್ರು, ನೋಟು ಬದಲಾವಣೆ ಮಠಕ್ಕೆ ತಲೆನೋವಾಗಿದೆ. ಚೆನೈನ ಆರ್ ಬಿ ಐ ಕಚೇರಿಗೆ ಮಠದ ಆಡಳಿತ ಮಂಡಳಿ ಪತ್ರ ಬರೆದಿದ್ದು, ಮಾಹಿತಿ ಬಂದ ಬಳಿಕ ಹಣ ಬದಲಾವಣೆ ಮಾಡಲಾಗುವುದು ಅಂತ ಮಠದ ವ್ಯವಸ್ಥಾಪಕ ಶ್ರೀನಿವಾಸರಾವ್ ತಿಳಿಸಿದ್ದಾರೆ.

ಇನ್ನೂ ದೊಡ್ಡ ಮೊತ್ತದ ನೋಟುಗಳು ರದ್ದಾಗಿರುವುದು ಮಠದ ಆದಾಯದ ಮೇಲೆ ಇದುವರೆಗೆ ಯಾವುದೇ ಪರಿಣಾಮ ಬೀರಿಲ್ಲ. ಪ್ರತಿ ತಿಂಗಳು ಸರಾಸರಿ 1 ಕೋಟಿ 30 ಲಕ್ಷದಷ್ಟು ಕಾಣಿಕೆ ಸಂಗ್ರಹವಾಗುತ್ತಲೇ ಇದೆ. ನಗದು ಕಾಣಿಕೆ ಜೊತೆಗೆ ಜನವರಿ ತಿಂಗಳಲ್ಲಿ ಭಕ್ತರು 76 ಗ್ರಾಂ ಚಿನ್ನ. 650 ಗ್ರಾಂ.ಬೆಳ್ಳಿ ಹಾಗೂ 2764 ರೂ.ವಿದೇಶಿ ಕರೆನ್ಸಿಯನ್ನೂ ದೇಣಿಗೆಯಾಗಿ ನೀಡಿದ್ದಾರೆ.



ಫೆಬ್ರವರಿ 3 ರಿಂದ ಫೆಬ್ರವರಿ 8ರ ವರೆಗೆ ಬೆಂಗಳೂರಿನ ಹಲವೆಡೆ ವಿವಿಧ ಸ್ಕ್ರೀನ್ಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ. ಬಂಗಾಲಿ ನಿರ್ದೇಶಕ ಬುದ್ಧದೇವ ದಾಸ್ಗುಪ್ತಾ, ಈಜಿಪ್ಟ್ ನ ಖ್ಯಾತ ನಿರ್ದೇಶಕಿ ಹಲಾ ಖಲೀಲ್, ನಟ ಪುನೀತ್ ರಾಜ್ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.








