Tag: publictv

  • ಬೆಂಗ್ಳೂರಿನ ಲೋಹದ ಹಕ್ಕಿಗಳನ್ನು ನಾಚಿಸುವಂತಿದೆ ಚಿಕ್ಕಬಳ್ಳಾಪುರದ ಈ ಏರ್ ಶೋ!

    ಬೆಂಗ್ಳೂರಿನ ಲೋಹದ ಹಕ್ಕಿಗಳನ್ನು ನಾಚಿಸುವಂತಿದೆ ಚಿಕ್ಕಬಳ್ಳಾಪುರದ ಈ ಏರ್ ಶೋ!

    ಚಿಕ್ಕಬಳ್ಳಾಪುರ: ಇತ್ತೀಚೆಗೆ ಬೆಂಗಳೂರಿನ ಯಲಹಂಕದಲ್ಲಿ ಬಾನಂಗಳದಲ್ಲಿ ಲೋಹದ ಹಕ್ಕಿಗಳು ಬಗೆ ಬಗೆಯ ಚಿತ್ತಾರ ಬರೆದು ಚಮತ್ಕಾರ ಪ್ರದರ್ಶಿಸಿ ಎಲ್ಲರ ಮನಸೂರೆಗೊಂಡಿದ್ದವು. ಇದೀಗ ಲೋಹದ ಹಕ್ಕಿಗಳಿಗೂ ಸೆಡ್ಡು ಹೊಡೆದಿರೋ ನಿಜವಾದ ಹಕ್ಕಿಗಳು ನಾವು ಯಾರಿಗೇನು ಕಮ್ಮಿ ಇಲ್ಲ ಅಂತ ಏರ್ ಶೋ ನಡೆಸುತ್ತಿವೆ.

    ಹೌದು. ಚಿಕ್ಕಬಳ್ಳಾಪುರದ ಸೂಸೆಪಾಳ್ಯದ ಬಳಿ ವಾವ್…! ಎಷ್ಟೊಂದು ಸುಂದರ ಅನ್ನೊವಂತೆ ಬಾನಂಗಳದಲ್ಲಿ ನಾ ಮುಂದು ತಾ ಮುಂದು ಎನ್ನುತ್ತಾ ಒಮ್ಮೆಲೇ ಬಾನಂಗಳಕ್ಕೆ ಚಿಮ್ಮಿ ಹಾರುವ ಮೂಲಕ ಇದೀಗ ಜನರ ಮನಸೂರೆಗೊಂಡಿವೆ. ಇತ್ತೀಚೆಗೆ ಬೆಂಗಳೂರಿನ ಯಲಹಂಕದಲ್ಲಿ ಹಾರಾಟ ಮಾಡಿದ್ದ ಲೋಹದ ಹಕ್ಕಿಗಳಿಗೂ ಸೆಡ್ಡು ಹೊಡೆದಿರೋ ನಿಜವಾದ ಹಕ್ಕಿಗಳು ನಾವು ಯಾರಿಗೇನು ಕಮ್ಮಿ ಇಲ್ಲ ಅಂತ ಏರ್ ಶೋ ನಡೆಸುತ್ತಿವೆ.

    ಸಂಜೆ ಸೂರ್ಯ ಮರೆಯಾಗ್ತಿದ್ದಂತೆ ಕಪ್ಪು ಕಂದು ಕೇಸರಿ ಮಿಶ್ರಿತ ಈ ಪಕ್ಷಿಗಳು ಗುಂಪು ಗುಂಪಾಗಿ ಹಾಜರಾಗ್ತಾವೆ. ಗ್ರಾಮದ ಪಕ್ಕದಲ್ಲೇ ಇರುವ ಕೆರೆಯಂಗಳವೇ ಇವುಗಳಿಗೆ ವೈಮಾನಿಕ ತಾಣ. ಹತ್ತಾರು ನಿಮಿಷಗಳ ಕಾಲ ಬಾನಂಗಳದಲ್ಲಿ ಚಿತ್ತಾರ ಮೂಡಿಸೋ ಈ ಹಕ್ಕಿಗಳು ಎಲ್ಲರನ್ನೂ ಒಮ್ಮೆ ಮೂಕವಿಸ್ಮಿತರನ್ನಾಗಿ ಮಾಡ್ತಿವೆ.

    `3 ದಿನದಿಂದ ಸಂಜೆ ನಾನು ಇಲ್ಲಗೆ ಬರ್ತಾ ಇದ್ದೇನೆ. ನನ್ನ ಜೊತೆ ಮಗಳು ಬರ್ತಾ ಇದ್ದಾಳೆ. ಬಾನಂಗಳದಲ್ಲಿ ಹಕ್ಕಿಗಳ ಚಿತ್ತಾರ ನಮಗಿಬ್ಬರಿಗೂ ಸಂತಸ ನೀಡಿದೆ. ಇಲ್ಲಿನ ಜನ ಹಕ್ಕಿಗಳಿಗಂದೇ ಜಾಗ ಮಾಡಿಕೊಟ್ಟಿದ್ದಾರೆ. ಆಕಾಶ ನೋಡಿದ್ರೆ ಬರೀ ಹಕ್ಕಿಗಳೇ ಕಾಣಿಸ್ತಾವೆ ಹೊರತು ಆಕಾಶ ಕಾಣಿಸಲ್ಲ’ ಅಂತಾ ಗ್ರಾಮಸ್ಥ ಸುರೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಸಂತಸ ವ್ಯಕ್ತಪಡಿಸಿದ್ರು.

    ಮೈನಾ ತರ ಇರೋ ಈ ಹಕ್ಕಿಗಳು 10 ಲಕ್ಷದಿಂದ 20 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ. ಗ್ರಾಮದ ಜನ ಈ ಹಕ್ಕಿಗಳಿಗೆ ಯಾವುದೇ ರೀತಿಯ ತೊಂದರೆ ನೀಡುತ್ತಿಲ್ಲ. ಬೆಳ್ಳಂಬೆಳ್ಳಗೆ ಪಕ್ಷಿಗಳ ಕಿರುಚಾಟದಿಂದಲೇ ನಾವು ಎದ್ದೇಳ್ತೀವಿ. ಹೀಗಾಗಿ ಈ ಮೂಲಕ ನಮಗೆ ಹಕ್ಕಿಗಳಿಂದ ತುಂಬಾನೇ ಅನುಕೂಲವಾಗಿದೆ ಅಂತಾ ಸ್ಥಳೀಯ ನಿವಾಸಿ ರಾಜು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಒಟ್ಟಿನಲ್ಲಿ ಈ ರಿಯಲ್ ಹಕ್ಕಿಗಳ ಹಾರಾಟ ಲೋಹದ ಹಕ್ಕಿಗಳ ಏರ್ ಶೋವನ್ನು ನಾಚಿಸುವಂತಿದೆ ಅಂದ್ರೆ ತಪ್ಪಾಗಲಾರದು.

  • ವಿಜಯಪುರ ಜಿಲ್ಲಾಸ್ಪತ್ರೆಯನ್ನು ರಾಜ್ಯದ ನಂಬರ್ 1 ಆಸ್ಪತ್ರೆಯನ್ನಾಗಿಸಿದ್ರು ಈ ಸರ್ಜನ್!

    ವಿಜಯಪುರ ಜಿಲ್ಲಾಸ್ಪತ್ರೆಯನ್ನು ರಾಜ್ಯದ ನಂಬರ್ 1 ಆಸ್ಪತ್ರೆಯನ್ನಾಗಿಸಿದ್ರು ಈ ಸರ್ಜನ್!

    ವಿಜಯಪುರ: ಸರ್ಕಾರಿ ಆಸ್ಪತ್ರೆ ಅಂತಂದ್ರೆ ಮೂಗು ಮುರಿಯೋರೇ ಜಾಸ್ತಿ ಅನ್ನೋ ಮಾತನ್ನು ನಾವು ಹಲವು ಬಾರಿ ಕೇಳಿದ್ದೀವಿ. ಆದ್ರೆ, ವಿಜಯಪುರ ಜಿಲ್ಲಾಸ್ಪತ್ರೆಯ ಸರ್ಜನ್ ಅನಂತ ದೇಸಾಯಿ ಅವ್ರು ಆಸ್ಪತ್ರೆಯ ಚಿತ್ರಣವನ್ನೇ ಬದಲಿಸಿ, ರಾಜ್ಯದ ನಂಬರ್ 1 ಆಸ್ಪತ್ರೆಯನ್ನಾಗಿಸಿದ್ದಾರೆ.

    ಹೌದು. ವಿಜಯಪುರದ ಜಿಲ್ಲಾ ಆಸ್ಪತ್ರೆಗೆ ಕಳೆದ ಎರಡು ವರ್ಷಗಳ ಹಿಂದೆ ರೋಗಿಗಳು ಬರೋದಕ್ಕೆ ಹಿಂಜರಿತಿದ್ರು. ಆದ್ರೆ ಇದೀಗ ಈ ಜಿಲ್ಲಾಸ್ಪತ್ರೆ ರಾಜ್ಯದಲ್ಲೇ ಪ್ರಥಮ ಸ್ವಚ್ಛತಾ ಆಸ್ಪತ್ರೆ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

    2015 ಅಕ್ಟೋಬರ್‍ನಲ್ಲಿ ಆಸ್ಪತ್ರೆಗೆ ಬಂದ ಅನಂತ ದೇಸಾಯಿ ಆಸ್ಪತ್ರೆಯಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆ ಇದ್ದರೂ ಎಲ್ಲರನ್ನು ಒಗ್ಗೂಡಿಸಿ ಸ್ವಚ್ಛತೆಯ ಬಗ್ಗೆ ತಿಳುವಳಿಕೆ ನೀಡುವ ಮೂಲಕ ಇಡೀ ಆಸ್ಪತ್ರೆಯ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಹೀಗಾಗಿ ಆಸ್ಪತ್ರೆಯ ಸ್ವಚ್ಛತೆಗೆ ಕೇಂದ್ರ ಆರೋಗ್ಯ ಇಲಾಖೆ ರಾಜ್ಯದ ನಂ.1 ಸ್ವಚ್ಛ ಆಸ್ಪತ್ರೆ ಅಂತಾ 2015-16 ಹಾಗೂ 2016-17 ಸಾಲಿನಲ್ಲಿ ಸತತವಾಗಿ ಕಾಯಕಲ್ಪ ಪ್ರಶಸ್ತಿ ನೀಡಿ ಗೌರವಿಸಿದೆ. ಮಾತ್ರವಲ್ಲದೇ ಈಗ ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛತೆ ಹಾಗೂ ಸಿಬ್ಬಂದಿ ಬಗ್ಗೆ ಜನ ಹೊಗಳ್ತಿದ್ದಾರೆ.

    ಸರ್ಕಾರದ ಎಲ್ಲ ಸೌಲಭ್ಯಗಳನ್ನು ರೋಗಿಗಳಿಗೆ ತಲುಪುವಂತೆ ಮಾಡಲಾಗ್ತಿದೆ. ಅಲ್ಲದೆ, ಸರ್ಜನ್ ದೇಸಾಯಿ ಅವರ ಕಾರ್ಯ ಇತರಿಗೂ ಮಾದರಿಯಾಗಲಿ ಅಂತಾ ಬಾಣಂತಿ ಶಿವಲೀಲಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=LxqLz5CF02s

  • ಈಶ್ವರ ದೇವಾಲಯ ನಿರ್ಮಿಸಲು ಸಹಕರಿಸಿದ್ರು ಮುಸ್ಲಿಮರು: ರಾಯಚೂರಿನಲ್ಲೊಂದು ಭಾವೈಕ್ಯತಾ ಕೇಂದ್ರ

    ಈಶ್ವರ ದೇವಾಲಯ ನಿರ್ಮಿಸಲು ಸಹಕರಿಸಿದ್ರು ಮುಸ್ಲಿಮರು: ರಾಯಚೂರಿನಲ್ಲೊಂದು ಭಾವೈಕ್ಯತಾ ಕೇಂದ್ರ

    ರಾಯಚೂರು: ನಗರದ ಎಚ್.ಆರ್.ಬಿ ಬಡಾವಣೆಯಲ್ಲಿರುವ ಬೃಂದಾವನ ಹೌಸಿಂಗ್ ಕಾಲೋನಿಯಲ್ಲಿ ನೂತನವಾಗಿ ನಿರ್ಮಾಣವಾದ ಶ್ರೀ ಅನಂತೇಶ್ವರ ದೇವಾಲಯ ನಿಜಕ್ಕೂ ಹಿಂದೂ-ಮುಸ್ಲಿಂ ಸಂಗಮದ ಕೇಂದ್ರವಾಗಿದೆ.

    ಬಡಾವಣೆಯ ಜನತೆ ಉದ್ಯಾನವನದಲ್ಲಿದ್ದ ಹಳೆಯ ಪುಟ್ಟ ದೇವಾಲಯವನ್ನು ಜೀರ್ಣೊದ್ಧಾರ ಮಾಡಿ ನೂತನ ದೇವಸ್ಥಾನ ನಿರ್ಮಿಸಿದ್ದಾರೆ. ಈ ಕಾಲೋನಿಯಲ್ಲಿ ಸುಮಾರು 215 ಮನೆಗಳಿದ್ದು ಇದರಲ್ಲಿ ಅರ್ಧಕ್ಕೂ ಹೆಚ್ಚು ಮುಸಲ್ಮಾನರೇ ಇದ್ದು, ದೇವಾಲಯ ಪುನರ್ ನಿರ್ಮಾಣಕ್ಕೆ ಹಿಂದೂ ನಿವಾಸಿಗಳು ಮುಂದಾದಾಗ ಮುಸ್ಲಿಮರು ಸಾಥ್ ಕೊಟ್ಟಿದ್ದಾರೆ. ತಮ್ಮ ಕೈಲಾದಷ್ಟು ತನು-ಮನ-ಧನಗಳನ್ನ ಅರ್ಪಿಸಿ ದೇವಾಲಯ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

    ನಂದಿ, ಆಂಜನೇಯ, ಗಣಪತಿ, ಶೇಷ ದೇವರು, ರುದ್ರದೇವರ ಮೂರ್ತಿಗಳನ್ನು ಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಮೂಲಕ ಬೃಂದಾವನ ಹೌಸಿಂಗ್ ಕಾಲೋನಿ ನಿವಾಸಿಗಳ ಸಂಘದಿಂದ ನಗರದಲ್ಲಿ ಹೊಸದೊಂದು ಭಾವೈಕ್ಯತೆಯ ಅಧ್ಯಾಯ ಆರಂಭವಾಗಿದೆ.

    ಉದ್ಯಾನವನದಲ್ಲಿ ದೇವಾಲಯ ನಿರ್ಮಾಣವಾಗಿರುವ ಹಾಗೇ ಮುಸ್ಲಿಂ ಮಕ್ಕಳಿಗಾಗಿ ಮದರಸಾ ಕೂಡ ನಿರ್ಮಿಸಲಾಗಿದೆ. ಅಕ್ಕಪಕ್ಕದಲ್ಲೇ ಮದರಸಾ ಹಾಗೂ ದೇವಾಲಯಗಳಿದ್ದು ಹಿಂದೂ-ಮುಸಲ್ಮಾನರು ನಿಜಕ್ಕೂ ಅಣ್ಣತಮ್ಮಂದಿರಂತೆ ಇಲ್ಲಿ ವಾಸವಾಗಿದ್ದಾರೆ. ಸಂಜೆಯಾದ್ರೆ ಉದ್ಯಾನವನದಲ್ಲಿ ಎಲ್ಲರೂ ಒಟ್ಟಾಗಿ ಸೇರುತ್ತಾರೆ. ಕೋಮು ಸೌಹಾರ್ದತೆಯನ್ನು ಕಾಪಾಡಿಕೊಂಡು ಪರಸ್ಪರ ಆಚರಣೆಗಳನ್ನು ಗೌರವಿಸುತ್ತಾ ಬಂದಿದ್ದಾರೆ.

    ನಿಜಾಮರು, ರಜಾಕರ ಆಡಳಿತಕ್ಕೊಳಪಟ್ಟ ರಾಯಚೂರು ಮೊದಲಿನಿಂದಲೂ ಗಲಭೆಗಳಿಂದ ದೂರ ಉಳಿದು ಹಿಂದೂ-ಮುಸ್ಲಿಂರ ಭಾವೈಕ್ಯದ ಕೇಂದ್ರದಂತೆಯೇ ಇದೆ. ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಎರಡು ಧರ್ಮದವರು ಒಟ್ಟಾಗಿ ದೇವಾಲಯ ನಿರ್ಮಿಸುವ ಮೂಲಕ ಮಾದರಿಯಾಗಿದ್ದಾರೆ.

  • ಎಲ್ಲಿ ಹೋದ್ರೂ ನಾನು ಕೊಂದಿರೋದು ಮಹಿಳೆಯರನ್ನೇ- ಎಟಿಎಂ ಹಂತಕ ಬಿಚ್ಚಿಟ್ಟ ಭಯಾನಕ ಸತ್ಯ

    ಎಲ್ಲಿ ಹೋದ್ರೂ ನಾನು ಕೊಂದಿರೋದು ಮಹಿಳೆಯರನ್ನೇ- ಎಟಿಎಂ ಹಂತಕ ಬಿಚ್ಚಿಟ್ಟ ಭಯಾನಕ ಸತ್ಯ

    ಬೆಂಗಳೂರು: ಬೆಂಗಳೂರಿನ ಕಾರ್ಪೋರೇಷನ್ ಬ್ಯಾಂಕ್ ಎಟಿಎಂ ನಲ್ಲಿ ಹಣಕ್ಕಾಗಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿ ಮಧುಕರ್ ಪೊಲೀಸ್ ವಶದಲ್ಲಿದ್ದು, ಇದೀಗ ಭಯಾನಕ ಮಾಹಿತಿಯೊಂದನ್ನ ಹೊರಹಾಕಿದ್ದಾನೆ.

    `ನನಗೆ ಮಹಿಳೆಯರನ್ನು ಕಂಡ್ರೇ ಆಗಲ್ಲ. ಎಲ್ಲಿ ಹೋದ್ರೂ ನಾನು ಕೊಂದಿರೋದು ಮಹಿಳೆಯರನ್ನೇ’ ಅಂತಾ ಎಟಿಎಂ ಹಂತಕ ಮಧುಕರ್‍ರೆಡ್ಡಿ ಹೊಸ ಸ್ಟೇಟ್‍ಮೆಂಟ್ ಕೊಟ್ಟಿದ್ದಾನೆ. ಅದಕ್ಕೆ ಮಹಿಳಾ ಜೆಡ್ಜ್ ಕಾರಣವಂತೆ..!

    ಆಂಧ್ರದ ಧರ್ಮಾವರಂ, ಪಿಲೆರೋ, ವಿಜಯವಾಡ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮಧುಕರ ರೆಡ್ಡಿ ನಡೆಸಿರೋ ಅಟ್ಟಹಾಸ ಒಂದೆರೆಡಲ್ಲ. ಎರಡು ಮರ್ಡರ್ ಕೇಸ್‍ಗಳು, ಒಂದು ಕೊಲೆ ಯತ್ನ ಕೇಸ್‍ಗಳ ವಿಚಾರಣೆ ನಡೆಯುತ್ತಿವೆ. ಈ ಕೇಸ್‍ಗಳಿಗೂ ಮುನ್ನ ತನ್ನ ಹುಟ್ಟೂರಿನಲ್ಲಿ ಜಮೀನು ವಿವಾದವೊಂದಕ್ಕೆ ಸಂಬಂಧಪಟ್ಟಂತೆ, ಚಿಕ್ಕಪ್ಪನ ಮಗನ ಮೇಲೆ ಬಾಂಬ್ ಹಾಕಿ ಕೊಲೆ ಮಾಡಿದ್ದ. ಈ ಪ್ರಕರಣದ ತೀರ್ಪಿನ ವೇಳೆ ಮಹಿಳಾ ಜಡ್ಜ್‍ವೊಬ್ಬರು ಮಧುಕರ್ ರೆಡ್ಡಿಗೆ ಕಠಿಣ ಶಿಕ್ಷೆ ವಿಧಿಸಿದ್ದರಂತೆ. ಆಗ ಮಧುಕರ್ ರೆಡ್ಡಿ ಹಲ್ಲು ನೋವಿನ ನೆಪ ಹೇಳಿ ಎಸ್ಕೇಪ್ ಆಗಿದ್ದ. ಅಲ್ಲಿಂದೀಚೆಗೆ ಆಂಧ್ರದ ಮೂರು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹಣಕ್ಕಾಗಿ ಇಬ್ಬರು ಮಹಿಳೆಯನ್ನು ಕೊಲೆ ಮಾಡಿದ್ರೆ, ಒಬ್ಬರ ಮೇಲೆ ಕೊಲೆ ಯತ್ನ ಮಾಡಿದ್ದ. ಆಗಿನಿಂದ ನನಗೆ ಮಹಿಳೆಯರನ್ನ ಕಂಡ್ರೆ ಆಗೋದಿಲ್ಲ ಎಂದಿದ್ದಾನೆ.

    ಇದೇ ಮನಸ್ಥಿತಿಯಲ್ಲಿದ್ದ ಈ ಪಾತಕಿ, ಬೆಂಗಳೂರಿನ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆಯನ್ನು ಹಣಕ್ಕಾಗಿ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ. ಬೆಂಗಳೂರು ಪೊಲೀಸರ ಕೈಗೆ ಸಿಕ್ಕ ಮೇಲಷ್ಟೇ ಈ ವಿಕೃತ ಮನಸ್ಥಿಯ ಮತ್ತಷ್ಟು ಭಯಾನಕ ವಿಷಯಗಳು ಬಹಿರಂಗವಾಗಬೇಕಿದೆ.

    ಎಟಿಎಂ ಹಲ್ಲೆಕೋರ ಮಧುಕರ್ ರೆಡ್ಡಿ ಇನ್ನೇನು ಬೆಂಗಳೂರು ಪೊಲೀಸರ ವಶಕ್ಕೆ ಬಂದೇ ಬಿಟ್ಟ ಅಂತ ಅಂದುಕೊಳ್ಳುವಾಗಲೇ ಸೀಮಾಂದ್ರ ಪೊಲೀಸ್ರು ಕೋರ್ಟಿಗೆ ಮತ್ತೊಂದು ಅರ್ಜಿ ಹಾಕಿದ್ದಾರೆ. ನಮ್ಮ ಕೇಸ್‍ಗಳು ಇವೆ. ಹಾಗಾಗಿ ನಮ್ಮ ಅರ್ಜಿಗೆ ಆದ್ಯತೆ ಕೊಡಿ ಅಂತಾ ಪಟ್ಟು ಹಿಡಿದಿದ್ದಾರೆ. ಆದ್ರೆ ಫೆಬ್ರವರಿ 28ರ ವರೆಗೆ ಮಧುಕರ್ ರೆಡ್ಡಿ ಬೆಂಗಳೂರು ಪೊಲೀಸರಿಗೆ ಸಿಗೋದು ಅನುಮಾನ.

  • ಬೆಂಗ್ಳೂರಾಯ್ತು ಇದೀಗ ಮೈಸೂರು ಸರದಿ- ವಿದೇಶಿ ಮಹಿಳೆಯ ತುಟಿ ಕಚ್ಚಿದ ಕಾಮುಕ

    ಬೆಂಗ್ಳೂರಾಯ್ತು ಇದೀಗ ಮೈಸೂರು ಸರದಿ- ವಿದೇಶಿ ಮಹಿಳೆಯ ತುಟಿ ಕಚ್ಚಿದ ಕಾಮುಕ

    ಮೈಸೂರು: ಬೆಂಗಳೂರಿನಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಸುದ್ದಿಯಾದ ಬೆನ್ನಲ್ಲೇ ಇದೀಗ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಕಾಮುಕನೊಬ್ಬ ವಿದೇಶಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಜಿಲ್ಲೆಯ ಚಾಮುಂಡಿ ಬೆಟ್ಟದ ನಂದಿ ಬಳಿ ಸೋಮವಾರ ಸಂಜೆ ಈ ಘಟನೆ ನಡೆದಿದೆ. ಜರ್ಮನಿ ದೇಶದ ಮಹಿಳೆ ಪ್ರವಾಸಕ್ಕಾಗಿ ಚಾಮುಂಡಿ ಬೆಟ್ಟಕ್ಕೆ ಬಂದಿದ್ದು, ಬೆಟ್ಟದಿಂದ ಮೆಟ್ಟಿಲುಗಳನ್ನು ಇಳಿದುಕೊಂಡು ಬರುತ್ತಿದ್ದ ವೇಳೆ ಕಾಮುಕ ಮಹಿಳೆಯ ತುಟಿ ಹಾಗೂ ಮೈ ಕಚ್ಚಿದ್ದಾನೆ. ಮಾತ್ರವಲ್ಲದೇ ಅವರ ಬಳಿಯಿದ್ದ 2,500 ರೂ. ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.

    ಈ ಬಗ್ಗೆ ಕೆ.ಆರ್. ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸ್ರು ಬಲೆ ಬೀಸಿದ್ದಾರೆ.

  • ಯಾದಗಿರಿಯಲ್ಲಿ ಜವರಾಯನ ಅಟ್ಟಹಾಸ – 2 ಎರಡು ಲಾರಿಗಳ ಮುಖಾಮುಖಿಗೆ 9 ಬಲಿ

    ಯಾದಗಿರಿಯಲ್ಲಿ ಜವರಾಯನ ಅಟ್ಟಹಾಸ – 2 ಎರಡು ಲಾರಿಗಳ ಮುಖಾಮುಖಿಗೆ 9 ಬಲಿ

    ಯಾದಗಿರಿ: ಎರಡು ಲಾರಿಗಳು ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ 9 ಮಂದಿ ಮೃತಪಟ್ಟ ಘೋರ ದುರಂತ ಯಾದಗಿರಿ ತಾಲೂಕಿನ ರಾಮಸಮುದ್ರದ ಬಳಿ ನಡೆದಿದೆ.

    ಮೃತರನ್ನು ಯಾದಗಿರಿ ತಾಲೂಕಿನ ಗಣಪೂರ ನಿವಾಸಿಗಳಾದ ಸಾಬಣ್ಣ ಮಣಿಗೇರಿ(55), ವಿಷ್ಣು ಮಣಿಗೇರಿ(15), ಲಕ್ಷ್ಮೀ ಮಣಿಗೇರಿ(12), ಸಿಂಚನಾ(12), ಆಫ್ರೀನಾ(15), ತಿಪ್ಪಣ್ಣ(60), ಬನ್ನಪ್ಪ(45), ಶಂಕ್ರಮ್ಮ(50) ಎಂದು ಗುರುತಿಸಲಾಗಿದೆ.

    ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಈ ಭೀಕರ ಅಪಘಾತ ನಡೆದಿದ್ದು, ಗಣಪುರ ಗ್ರಾಮದ ಮಣಿಗೇರಿ ಕುಟುಂಬವು ಶಹಾಪುರ ನಗರದಲ್ಲಿ ನಿಶ್ಚಿತಾರ್ಥ ಕಾರ್ಯ ಮುಗಿಸಿ ತಮ್ಮೂರಿಗೆ ಹಿಂದಿರುವ ವೇಳೆ ದುರ್ಘಟನೆ ನಡೆದಿದೆ. ರಾಯಚೂರಿನ ಶಕ್ತಿನಗರದಿಂದ ಹಾರು ಬೂದಿ ತುಂಬಿಕೊಂಡು ವಾಡಿ ಪಟ್ಟಣಕ್ಕೆ ಹೊರಟಿದ್ದ ಲಾರಿಯು, ಎದುರಿನಂದ ನಿಶ್ಚಿತಾರ್ಥ ಕಾರ್ಯ ಮುಗಿಸಿಕೊಂಡು ಸುಮಾರು 60ಕ್ಕೂ ಹೆಚ್ಚು ಜನರಿದ್ದ ಲಾರಿಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ 8 ಜನ ಸಾವನಪ್ಪಿದ್ದಾರೆ. 44 ಕ್ಕೂ ಹೆಚ್ಚು ಗಂಭೀರ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಒಂದೇ ಕುಟುಂಬದ 3 ಜನರು ಮೃತಪಟ್ಟಿದ್ದು, ಬಾಳಿ ಬದುಕಬೇಕಾದ ಮಕ್ಕಳು ಕೂಡ ಸಾವನ್ನಪ್ಪಿದ್ದಾರೆ.

    ಗಾಯಾಳುಗಳನ್ನು ಕೂಡಲೇ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಪ್ರಥಮ ಚಿಕಿತ್ಸೆ ನಂತರ ರಾಯಚೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ರಾಯಚೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತೊಬ್ಬ ಸಾವನಪ್ಪಿದ್ದಾನೆ. ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ಸರ್ಕಾರಿ ಆಸ್ಪತ್ರೆಗೆ ಹಸ್ತಾಂತರ ಮಾಡಲಾಗಿದೆ.

    ಯಾದಗಿರಿ ಜಿಲ್ಲಾಧಿಕಾರಿ ಖುಷ್ಬೂ ಗೋಯಲ್, ಪೊಲೀಸ್ ವರಿಷ್ಠಾಧಿಕಾರಿ ಎಡಾ ಮಾರ್ಟೀನ್ ಸೇರಿದಂತೆ ಹಲವಾರು ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ಕುರಿತು ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ ಸಣ್ಣ ಸಣ್ಣ ಮಕ್ಕಳೂ ಕೂಡಾ ಗಂಭೀರ ಗಾಯಗಳಾಗಿ ನರಳಾಡುವ ದೃಶ್ಯಗಳು ಮಾತ್ರ ಸಮಯವನ್ನು ಶಪಿಸುವಂತೆ ಮಾಡಿದೆ.

  • ಬೆಂಗ್ಳೂರಲ್ಲಿ ಮತ್ತೆ ಕಾಮುಕರ ಅಟ್ಟಹಾಸ- ಗಗನ ಸಖಿ ಎದೆ ಮೇಲಿನ ಬಟ್ಟೆ ಎಳೆದು ಎಸ್ಕೇಪ್ ಆದ್ರು!

    ಬೆಂಗ್ಳೂರಲ್ಲಿ ಮತ್ತೆ ಕಾಮುಕರ ಅಟ್ಟಹಾಸ- ಗಗನ ಸಖಿ ಎದೆ ಮೇಲಿನ ಬಟ್ಟೆ ಎಳೆದು ಎಸ್ಕೇಪ್ ಆದ್ರು!

    ಬೆಂಗಳೂರು:  ಕಮ್ಮನಹಳ್ಳಿಯಲ್ಲಿ ಯುವತಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಘಟನೆ ಮಾಸುವ ಮುನ್ನವೇ ನಗರದ ಹೆಚ್ ಆರ್ ಬಿಆರ್ ಲೇಔಟ್ ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

    ಭಾನುವಾರ ರಾತ್ರಿ ಹೆಚ್ ಬಿಆರ್ ಲೇಔಟ್‍ನ 99 ದೋಸಾ ಹೋಟೆಲ್ ನಿಂದ ಊಟ ಮುಗಿಸಿದ ಯುವತಿ ತನ್ನ ಗೆಳೆಯ ಅನೀಶ್ ಜೊತೆ ನಡೆದುಕೊಂಡು ಬರುತ್ತಿದ್ದಾಗ ಎರಡು ಬೈಕಿನಲ್ಲಿ ಬಂದಂತಹ ಹೆಲ್ಮೆಟ್ ಧಾರಿ ದುಷ್ಕರ್ಮಿಗಳು ಗಗನಸಖಿಯ ಎದೆಯ ಮೇಲಿನ ಬಟ್ಟೆ ಎಳೆದು ಅಸಭ್ಯವಾಗಿ ವರ್ತನೆ ಮಾಡಿದ್ದಾರೆ.

    ಕೂಡಲೇ ಯುವತಿ ಕಿರಿಚಿಕೊಂಡಿದ್ದರಿಂದ ಬೈಕ್‍ನಲ್ಲಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಅಲ್ಲದೇ ಆಕೆಯ ಸ್ನೇಹಿತ ಅನೀಶ್ ಕೂಡ ದುಷ್ಕರ್ಮಿಗಳನ್ನು ತಡೆದಿದ್ದರಿಂದ ಹೆಚ್ಚಿನ ಅನಾಹುತವಾಗಲಿಲ್ಲ. ಇನ್ನು ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಯಲಿಗೆ ಬರುತ್ತಿವೆ ತುಂಗಭದ್ರಾ ಜಲಾಶಯದಲ್ಲಿನ ಮೊಸಳೆಗಳು!

    ಬಯಲಿಗೆ ಬರುತ್ತಿವೆ ತುಂಗಭದ್ರಾ ಜಲಾಶಯದಲ್ಲಿನ ಮೊಸಳೆಗಳು!

    ಬಳ್ಳಾರಿ: ಜಿಲ್ಲೆಯಲ್ಲಿರುವ ತುಂಗಭದ್ರಾ ಜಲಾಶಯದ ನೀರಿನ ಮಟ್ಟ ದಿನೇ ದಿನೇ ತಳ ಮುಟ್ಟುತ್ತಿದೆ. 100 ಟಿಎಂಸಿ ಸಾಮಥ್ರ್ಯದ ಜಲಾಶಯದಲ್ಲೀಗ ಕೇವಲ 4 ಟಿಎಂಸಿ ನೀರು ಮಾತ್ರ ಬಾಕಿ ಉಳಿದಿದ್ದು, ಡ್ಯಾಂನಲ್ಲಿದ್ದ ಮೊಸಳೆಗಳು ಬಯಲಿಗೆ ಬರುತ್ತಿವೆ.

    ಟಿಬಿ ಡ್ಯಾಂನಲ್ಲಿ ಹತ್ತಕ್ಕೂ ಹೆಚ್ಚು ಮೊಸಳೆಗಳಿವೆ. ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆಯಾದ ಪರಿಣಾಮ ಜಲಾಶಯದಲ್ಲಿನ ಮೊಸಳೆಗಳು ಇದೀಗ ಒಂದೊಂದಾಗಿ ನೀರಿನಿಂದ ಹೊರಬರುತ್ತಿವೆ. ಇದು ಡ್ಯಾಂ ನೋಡಲು ಆಗಮಿಸುವ ಪ್ರವಾಸಿಗರಲ್ಲಿ ಭಯ ಮೂಡಿಸಿದೆ.

    ಮೊಸಳೆಗಳು ನೀರಿನಿಂದ ಹೊರಗೆ ಬರುತ್ತಿರುವ ಪರಿಣಾಮ ಅನಾಹುತವಾಗುವ ಮುನ್ನವೇ ಟಿಬಿ ಬೋರ್ಡ್ ಅಧಿಕಾರಿಗಳು ಎಚ್ಚೆತ್ತುಕೊಂಡು ಮೊಸಳೆಗಳನ್ನು ಬೇರೆಡೆ ಸಾಗಿಸಬೇಕಾಗಿದೆ. ಡ್ಯಾಂನಲ್ಲಿ ಡೆಡ್ ಸ್ಟೋರೇಜ್ ನೀರು ಬಾಕಿಯಿರುವ ಪರಿಣಾಮ ಮೊಸಳೆಗಳಿಗೆ ಆಹಾರ ಸಿಗದೆ ನೀರಿನಿಂದ ಹೊರಬರುತ್ತಿವೆ ಎನ್ನಲಾಗಿದೆ. ಆದ್ರೆ ಅಧಿಕಾರಿಗಳು ಅನಾಹುತವಾಗುವ ಮುನ್ನವೇ ಕ್ರಮ ಕೈಗೊಳ್ಳಬೇಕಾಗಿರುವುದು ಅವಶ್ಯವಾಗಿದೆ.

  • ಕಲ್ಲಿನಿಂದ ಜಜ್ಜಿ ಪತ್ನಿ ಕೊಲೆಗೈದ ಪತಿ!

    ಕಲ್ಲಿನಿಂದ ಜಜ್ಜಿ ಪತ್ನಿ ಕೊಲೆಗೈದ ಪತಿ!

    ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಆಕೆಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳೂರಿನ ರಾಜಾನುಕುಂಟೆಯಲ್ಲಿ ನಡೆದಿದೆ.

    25 ವರ್ಷದ ಸುಶೀಲ ಕೊಲೆಯಾದ ದುರ್ದೈವಿ. ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಕೋಟೆಯಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ. ಸುಶೀಲಾ ಗಂಡನಾದ 35 ವರ್ಷದ ಸತೀಶ್, ಹೆಂಡತಿಯ ಮೇಲಿನ ಅನುಮಾನದಿಂದ ಆಕೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಆರೋಪಿ ಸತೀಶ್‍ನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

    ಮೃತ ಸುಶೀಲ ಮನೆ ಕೆಲಸ ಮಾಡುತ್ತಿದ್ದು, ಸತೀಶ್ ಗಾರೆ ಕೆಲಸಕ್ಕೆ ಹೋಗುತ್ತಿದ್ದ. ಈ ದಂಪತಿಗೆ 6 ಮತ್ತು 4 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

    ಘಟನೆ ಕುರಿತು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಂಬುಲೆನ್ಸ್ ಇಲ್ಲದೆ ಟಿವಿಎಸ್‍ನಲ್ಲೇ ಮಗಳ ಶವ ಸಾಗಿಸಿದ್ರು!

    ಆಂಬುಲೆನ್ಸ್ ಇಲ್ಲದೆ ಟಿವಿಎಸ್‍ನಲ್ಲೇ ಮಗಳ ಶವ ಸಾಗಿಸಿದ್ರು!

    ತುಮಕೂರು: ಒಡಿಸ್ಸಾದಲ್ಲಿ ವ್ಯಕ್ತಿಯೊಬ್ಬರು ತನ್ನ ಪತ್ನಿಯ ಶವವನ್ನು ಹೆಗಲ ಮೇಲೆ ಸಾಗಿಸಿದ್ದಂತೆ ನಮ್ಮ ರಾಜ್ಯದಲ್ಲಿಯೂ ಅಂತದ್ದೇ ದುರಂತವೊಂದು ನಡೆದಿದೆ. ಅದೂ ಇಬ್ಬರು ಪ್ರಭಾವಿ ಸಚಿವರ ತವರು ಜಿಲ್ಲೆ, ದಕ್ಷ ಹಾಗೂ ಅಭಿವೃದ್ಧಿ ಪರ ಶಾಸಕ ಎಂಬ ಹೆಸರು ಪಡೆದಿರುವ ಕೆ.ಎನ್ ರಾಜಣ್ಣ ಅವರ ಕ್ಷೇತ್ರದಲ್ಲಿಯೇ ಈ ಘಟನೆ ನಡೆದಿರುವುದು ವಿಪರ್ಯಾಸ.

    ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಭಾನುವಾರದಂದು ಈ ಘಟನೆ ನಡೆದಿದೆ. ತಿಮ್ಮಪ್ಪ ಎಂಬ ಬಡ ಕೂಲಿ ಕಾರ್ಮಿಕರ ಮಗಳು 20 ವರ್ಷದ ರತ್ನಮ್ಮ ತೀವ್ರ ಜ್ವರದಿಂದ ಬಳಲುತ್ತಿದ್ದರು. ಈ ಮಧ್ಯೆ ಅವರಿಗೆ ಉಸಿರಾಟದ ಸಮಸ್ಯೆ ಕೂಡ ಇತ್ತು. ಹೀಗಾಗಿ ಆಕೆಯನ್ನು ಮಧುಗಿರಿ ತಾಲೂಕಿನ ಕೊಡುಗೇನಹಳ್ಳಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ನಂತರ ರತ್ನಮ್ಮ ಪೋಷಕರು ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿದ್ರು. ಆದ್ರೆ ಅಷ್ಟರಲ್ಲಾಗಲೇ ರತ್ನಮ್ಮ ಸಾವನ್ನಪ್ಪಿದ್ದರು. ಮಗಳ ಶವವನ್ನು ತನ್ನ ಗ್ರಾಮ ವೀರಾಪುರಕ್ಕೆ ಸಾಗಿಸಲು ಹೋಬಳಿ ಕೇಂದ್ರದ ಈ ಸರ್ಕಾರಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಕೂಡ ಇರಲಿಲ್ಲ.

    ಇದರಿಂದ ತಿಮ್ಮಪ್ಪ ಪರಿಚಯಸ್ಥರೊಬ್ಬರ ಸಹಾಯ ಪಡೆದು ಟಿವಿಎಸ್ ಬೈಕ್‍ನಲ್ಲಿಯೇ ಶವವನ್ನು ಸಾಗಿಸಿದ್ದಾರೆ. ಖಾಸಗಿ ಕಾರ್ ಬಾಡಿಗೆಗೆ ಪಡೆದು ಶವವನ್ನು ತೆಗೆದುಕೊಂಡು ಹೋಗುವಂತೆ ಸ್ಥಳೀಯರು ಸಲಹೆ ನೀಡಿದರಾದ್ರೂ ರತ್ನಮ್ಮ ಪೋಷಕರ ಬಳಿ ಹಣವಿಲ್ಲದ ಕಾರಣ ಟಿವಿಎಸ್ ಹಿಂಭಾಗ ಶವವನ್ನು ಕೂರಿಸಿ ಅದನ್ನು ಮತ್ತೊಬ್ಬರು ಹಿಡಿದುಕೊಂಡು ಸಾಗಿಸಿದ್ದಾರೆ. ಈ ಹೃದಯವಿದ್ರಾವಕ ದೃಶ್ಯವನ್ನ ಪ್ರತ್ಯಕ್ಷದರ್ಶಿಯೊಬ್ಬರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.