Tag: Public Music

  • ಸಂಗೀತಕ್ಕೆ ನಮ್ಮನ್ನು ಆವರಿಸುವ ಶಕ್ತಿಯಿದೆ: ಹೆಚ್‌ಆರ್‌ ರಂಗನಾಥ್‌

    ಸಂಗೀತಕ್ಕೆ ನಮ್ಮನ್ನು ಆವರಿಸುವ ಶಕ್ತಿಯಿದೆ: ಹೆಚ್‌ಆರ್‌ ರಂಗನಾಥ್‌

    ಬೆಂಗಳೂರು: ವಾಹಿನಿ ಆರಂಭಿಸುವುದು ಸುಲಭ. ಆದರೆ ಅದನ್ನು ಮುನ್ನಡೆಸಿಕೊಂಡು ಹೋಗುವುದು ಬಹಳ ಕಷ್ಟ. ಹೀಗಿರುವಾಗ  11 ವರ್ಷಗಳ ಕಾಲ‌ ಪಬ್ಲಿಕ್‌ ಮ್ಯೂಸಿಕ್‌ ಕೈ ಹಿಡಿದು ಮುನ್ನಡೆಸಿದ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ರೈಟ್‌ಮೆನ್‌ ಮೀಡಿಯಾ ಸಂಸ್ಥೆಯ ಮುಖ್ಯಸ್ಥರಾದ ಹೆಚ್‌.ಆರ್.‌ ರಂಗನಾಥ್‌ (HR Ranganath) ಹೇಳಿದರು.

    ಪಬ್ಲಿಕ್‌ ಟಿವಿ ಕಚೇರಿಯಲ್ಲಿ ನಡೆದ ಪಬ್ಲಿಕ್‌ ಮ್ಯೂಸಿಕ್‌ 11ನೇ ವರ್ಷದ (PUBLiC Music 11 th Anivresray) ವಾರ್ಷಿಕೋತ್ಸವ  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಬ್ಲಿಕ್‌ ಮ್ಯೂಸಿಕ್‌ಗೆ 11 ವರ್ಷ ಆಗಿರುವುದು ನನಗೂ ವಿಶೇಷ. ಇಂದು ಪಬ್ಲಿಕ್‌ ಟಿವಿಯಲ್ಲಿ ರಾಜಕೀಯ, ಸುತ್ತ ಘಟನೆಗಳನ್ನು ನೋಡುವಾಗ ಬಹಳ ಬೇಸರ ಆಗುತ್ತದೆ. ಆದರೆ ಮ್ಯೂಸಿಕ್‌ನಲ್ಲಿ ಆ ರೀತಿಯ ಸಮಸ್ಯೆ ಇಲ್ಲ. ಇಲ್ಲಿ ಹಾಡುಗಳನ್ನು ಆಯ್ಕೆ ಮಾಡಲು ಅವಕಾಶವಿದೆ. ಸಂಗೀತಕ್ಕೆ ನಮ್ಮನ್ನು ಆವರಿಸುವ ಶಕ್ತಿಯಿದೆ ಎಂದು ಬಣ್ಣಿಸಿದರು.

     

    ಸಣ್ಣ ವಯಸ್ಸಿನಲ್ಲಿ ಸಂಗೀತ ಕಲಿಯಲು ಹೋಗುತ್ತಿದ್ದಾಗ ನಾನು ಪತ್ರಕರ್ತನಾಗುತ್ತೇನೆ. ದೊಡ್ಡ ಟಿವಿ ಕಟ್ಟುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ. ಆದರೆ ಸಂಗೀತಗಾರನಾಗಬಹುದು ಅಂತ ಅಂದುಕೊಂಡಿದ್ದೆ. ಆದರೆ ಅದು ಆಗಲಿಲ್ಲ. ಬೇರೆ ಏನೋ ಆಗಿದ್ದೇನೆ. ಈಗ ಹತ್ತಿರ ಹತ್ತಿರ ಪತ್ರಿಕೋದ್ಯಮ ಕ್ಷೇತ್ರಕ್ಕೆ ಬಂದು 40 ವರ್ಷವಾಯಿತು. ಆದರೆ ಏನು ಆಗಬೇಕು ಅಂತ ಅಂದುಕೊಂಡಿದ್ದೇನೋ ಈಗ ಅದೇ ಮ್ಯೂಸಿಕ್‌ ನನ್ನನ್ನು ಕಾಪಾಡುತ್ತಿದೆ. ಮನಸ್ಸಿಗೆ ಸಮಾಧಾನ ನೀಡುತ್ತಿದೆ ಎಂದು ತಿಳಿಸಿದರು.

    ರಾಜ್‌ಕುಮಾರ್‌, ವಿಷ್ಣುವರ್ಧನ್‌, ಸರೋಜಾದೇವಿ, ಭಾರತಿ, ಅಮಿತಾಬ್‌ ಬಚ್ಚನ್‌ ಈ ರೀತಿ ನಾಯಕ, ನಾಯಕಿಯರಾಗಿ ಬರುವ ಪೀಳಿಗೆ ಹೋಯ್ತು. ಈಗ ಮೂರು, ನಾಲ್ಕು ಸಿನಿಮಾ ಮಾಡುವಷ್ಟರಲ್ಲಿ ಹೊಸಬರು ಬರುತ್ತಾರೆ. ಅದೇ ರೀತಿ ಈಗ ಹಾಡುಗಾರರಿಗೆ, ಸಂಗೀತಕ್ಕೆ ಅವಕಾಶ ಸಿಗುತ್ತಿದೆ. ಟೆಕ್ನಾಲಜಿ ಸಹ ಸಹಕಾರ ನೀಡುತ್ತಿದೆ. ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಸಿಗುತ್ತಿದ್ದು ಹೊಸಬರಿಗೆ ಅವಕಾಶ ಸಿಗುತ್ತಿದೆ ಎಂದು ಹೇಳಿದರು.

     

    ಮಧ್ಯೆ ಮಧ್ಯೆ ನಾವು ಎಡವಿರಬಹುದು. ಮತ್ತೆ ನಾವು ಚೇತರಿಸಿಕೊಂಡು ಬಂದಿದ್ದೇವೆ. ಆಡಿಯೋ ಕಂಪನಿಗಳ ಸಹಕಾರದಿಂದ ನಾವು ನಡೆದುಕೊಂಡು ಬಂದಿದ್ದೇವೆ. 11 ವರ್ಷಗಳ ದೀರ್ಘ ಪ್ರಯಾಣಕ್ಕೆ ಸಾಗಲು ಕಾರಣರಾದವರು ಕರ್ನಾಟಕದ ಜನತೆ, ಆಡಿಯೋ ಕಂಪನಿಗಳು, ಕೇಬಲ್ ಕಂಪನಿಗಳು ಮತ್ತು ಜಾಹೀರಾತುದಾರರು. ನಮಗೆ ಸಹಕಾರ ನೀಡಿದ ನಿಮಗೆಲ್ಲರಿಗೂ ಧನ್ಯವಾದಗಳು ಎಂದರು.

    ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮ್ಯೂಸಿಕ್‌ ನಿರ್ದೇಶಕ ಅರ್ಜುನ್‌ ಜನ್ಯಾ, ಜಂಕಾರ್‌ ಮ್ಯೂಸಿಕ್ ಮುಖ್ಯಸ್ಥ ಭರತ್‌ ಜೈನ್‌, ಅಶ್ವಿನಿ ಆಡಿಯೋ ಮುಖ್ಯಸ್ಥ ಅಶ್ವಿನಿ ರಾಮಪ್ರಸಾದ್‌ ಭಾಗವಹಿಸಿ ಪಬ್ಲಿಕ್‌ ಮ್ಯೂಸಿಕ್‌ಗೆ ಶುಭ ಹಾರೈಸಿದರು.

  • ʻಪಬ್ಲಿಕ್‌ ಮ್ಯೂಸಿಕ್‌ʼಗೆ 11ರ ಸಂಭ್ರಮ – ಹಾಡೋಣ.. ಕುಣಿಯೋಣ.. ಸ್ವರ ಮನ್ವಂತರಕ್ಕೆ ಸಾಕ್ಷಿಯಾಗೋಣ!

    ʻಪಬ್ಲಿಕ್‌ ಮ್ಯೂಸಿಕ್‌ʼಗೆ 11ರ ಸಂಭ್ರಮ – ಹಾಡೋಣ.. ಕುಣಿಯೋಣ.. ಸ್ವರ ಮನ್ವಂತರಕ್ಕೆ ಸಾಕ್ಷಿಯಾಗೋಣ!

    ಸಂತಕವಿ ತ್ಯಾಗರಾಜರು ʻನಾದಲೋಲುಡೈ ಬ್ರಹ್ಮಾನಂದಮೊಂದವೇ ಓ ಮನಸಾ!ʼ ಎಂದಿದ್ದಾರೆ. ಅಂದ್ರೆ ʻಓ ಮನವೇ! ನಾದಲೋಲನಾಗಿ ಬ್ರಹ್ಮಾನಂದವನ್ನು ಅನುಭವಿಸುʼ ಎಂದರ್ಥ. ಎಂತಹ ಕಲ್ಲು ಹೃದಯದ ಮನುಷ್ಯನಾದ್ರೂ ಸಂಗೀತಕ್ಕೆ ಒಮ್ಮೆಯಾದ್ರು ತಲೆದೂಗದವರಿಲ್ಲ. ಒಂದಲ್ಲ ಒಂದು ಹಾಡಿಗೆ ಕೈಕಾಲು ಬೆರಳು, ತಾಳ ಹಾಕಿಯೇ ಇರುತ್ತದೆ. ಆ ಸೆಳೆಯುವ ಶಕ್ತಿ ಸಂಗೀತಕ್ಕಿದೆ. ಈ ಸಂಗೀತದ ಸಪ್ತಸ್ವರಗಳನ್ನು ಪಬ್ಲಿಕ್ ಮ್ಯೂಸಿಕ್ (PUBLIC Music) ಕನ್ನಡಿಗರಿಗೆ ನೀಡುತ್ತಲೇ ಬಂದಿದೆ.

    ಭಾಷೆಗೂ ಮೀರಿದ ಭಾವ ಸಂಗೀತ. ಸಂತಸದ ಸಂಭ್ರಮಕ್ಕೆ, ನೋವಿನ ನೆನಪುಗಳಿಗೆ ಸಂಗೀತ ಎಂದಿಗೂ ಸಂಜೀವಿನಿ. ಇಂಥ ಸಂಗೀತವನ್ನು ಸತತವಾಗಿ 11 ವರ್ಷಗಳಿಂದ ಕನ್ನಡಿಗರಿಗೆ ತಲುಪಿಸುತ್ತಿರುವ ʻಪಬ್ಲಿಕ್ ಮ್ಯೂಸಿಕ್‌ʼಗೆ ಇದೀಗ 11ರ ಸಂಭ್ರಮ.

    ಸೆಪ್ಟೆಂಬರ್ 28 ರಂದು ʻಪಬ್ಲಿಕ್ ಟಿ.ವಿʼಯ ಕೂಸು ಪಬ್ಲಿಕ್ ಮ್ಯೂಸಿಕ್‌ಗೆ ಸಡಗರ.. ಸಂಭ್ರಮ. ಪ್ರತೀ ವರ್ಷವೂ ಯೂನಿಕ್ ಆಗಿರೋ ಕಾರ್ಯಕ್ರಮಗಳ ಮೂಲಕ ವಾರ್ಷಿಕೋತ್ಸವ ಆಚರಣೆ ಮಾಡ್ತಿರೋ ಪಬ್ಲಿಕ್ ಮ್ಯೂಸಿಕ್ ಈ ಬಾರಿ 11ನೇ ವರ್ಷ ಮುಗಿಸಿ ಹನ್ನೆರ ವಸಂತಕ್ಕೆ ಕಾಲಿಡುತ್ತಿದೆ. ಈ ಶುಭ ಘಳಿಗೆಯಲ್ಲಿ `ಸ್ವರ ಮನ್ವಂತರ’ ಅನ್ನೋ ಹೆಸರಿನ ಮೂಲಕ ಕನ್ನಡಿಗರ ಪ್ರಪ್ರಥಮ ಮ್ಯೂಸಿಕ್ ಚಾನೆಲ್ ಪಬ್ಲಿಕ್ ಮ್ಯೂಸಿಕ್ 11 ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ತಿದೆ.

    ಬೆಳಗ್ಗೆ 10-30ಕ್ಕೆ ಪಬ್ಲಿಕ್ ಟಿ.ವಿಯ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ ಜೊತೆ ಆಡಿಯೋ ಕಂಪನಿ ಮುಖ್ಯಸ್ಥರಾದ ಲಹರಿ ವೇಲು, ಭರತ್ ಜೈನ್, ಅಶ್ವಿನಿ ರಾಮ್ ಪ್ರಸಾದ್ ಹಾಗೂ ಕನ್ನಡದ ಮ್ಯಾಜಿಕಲ್ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯಾ, ರಾಷ್ಟ್ರ ಪ್ರಶಸ್ತಿ ವಿಜೇತ ನಟ ವಿಜಯ್ ರಾಘವೇಂದ್ರ ಹಾಗೂ ನಿರ್ದೇಶಕ ಜೋಗಿ ಪ್ರೇಮ್ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ಹೆಚ್ಚಿಸ್ತಾರೆ. ತದನಂತರ ಒಂದಷ್ಟು ಹಾಡು-ಹರಟೆಯೂ ಕೂಡ ಇರಲಿದೆ.

    ಇನ್ನು ಯಾವತ್ತು ನಮ್ಮ ಕೈಬಿಡದ ʻಪಬ್ಲಿಕ್ ಮ್ಯೂಸಿಕ್ʼ ವೀಕ್ಷಕರಿಗೋಸ್ಕರ ವಾರ್ಷಿಕೋತ್ಸವದ ಪ್ರಯುಕ್ತ ದಿನಪೂರ್ತಿ ಮನರಂಜನೆ ನೀಡೋಕೆ ಕಲರ್‌ಫುಲ್ ಲೈವ್ ಶೋಗಳು, ಸ್ಪೆಷಲ್ ಕಾರ್ಯಕ್ರಮಗಳು ರೆಡಿ ಇವೆ.

    ನಿಮ್ಮ ಸಹಕಾರಿಂದ ಈ 11 ಮೆಟ್ಟಿಲುಗಳನ್ನು ಪಬ್ಲಿಕ್‌ ಮ್ಯೂಸಿಕ್‌ ಸಲೀಸಾಗಿ ದಾಟಿದೆ. ಪ್ರತೀ ಹೆಜ್ಜೆಯಲ್ಲೂ ಜೊತೆಗಿದ್ದು, ಚಿಕ್ಕಪುಟ್ಟ ತಪ್ಪುಗಳನ್ನು ಮಗುವಂತೆ ತಿದ್ದಿ-ತೀಡಿ ಇಲ್ಲಿಯವರೆಗೂ ತಂದು ನಿಲ್ಲಿಸಿದ್ದೀರಿ. ಮುಂದಿನ ದಿನಗಳಲ್ಲೂ ಕೈ ಹಿಡಿದು ಮುನ್ನಡೆಸುತ್ತೀರಿ ಎಂಬ ಭರವಸೆಯನ್ನೂ ನಮಗೆ ಕೊಟ್ಟಿದ್ದೀರಿ.

    ಹಾಡೋಣ.. ಕುಣಿಯೋಣ.. ಸ್ವರ ಮನ್ವಂತರಕ್ಕೆ ಸಾಕ್ಷಿಯಾಗೋಣ!

  • ಪಬ್ಲಿಕ್‌ ಮ್ಯೂಸಿಕ್‌ ದಶೋತ್ಸವಕ್ಕೆ ವಿದ್ಯುಕ್ತ ಚಾಲನೆ

    ಪಬ್ಲಿಕ್‌ ಮ್ಯೂಸಿಕ್‌ ದಶೋತ್ಸವಕ್ಕೆ ವಿದ್ಯುಕ್ತ ಚಾಲನೆ

    – ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಹೆಚ್‌.ಆರ್‌.ರಂಗನಾಥ್‌
    – ‘ಡೀ ಡೀ ಆಡ್ಯಾನೆ ರಂಗ’ ಹಾಡು ಹಾಡಿ ಗಮನ ಸೆಳೆದ ಪುಟ್ಟ ಬಾಲಕಿ ಶಾಲ್ಮಲಿ

    ಬೆಂಗಳೂರು: ಪಬ್ಲಿಕ್‌ ಮ್ಯೂಸಿಕ್‌ (Public Music) ವಾಹಿನಿಗೆ 10 ವರ್ಷ ಪೂರೈಸಿದ ಸಂಭ್ರಮ. ಈ ಹಿನ್ನೆಲೆಯಲ್ಲಿ ಶನಿವಾರ ಪಬ್ಲಿಕ್‌ ಮ್ಯೂಸಿಕ್‌ ದಶೋತ್ಸವ (Public Music Dashotsava) ಸಮಾರಂಭಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು.

    ಇಂದು ಬೆಳಗ್ಗೆ 10:30ಕ್ಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಉದ್ಘಾಟನಾ ಕಾರ್ಯಕ್ರಮವನ್ನು ಪಬ್ಲಿಕ್‌ ಟಿವಿ ಮುಖ್ಯಸ್ಥರಾದ ಹೆಚ್‌.ಆರ್‌.ರಂಗನಾಥ್‌ (H.R.Ranganath), ಲಹರಿ ಮ್ಯೂಸಿಕ್‌ ಮಾಲೀಕರಾದ ಮನೋಹರ್‌ ನಾಯ್ಡು, ನಟ ಹಾಗೂ ನಿರ್ದೇಶಕರಾದ ಉಪೇಂದ್ರ (Upendra), ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌, ಸಿನಿಮಾ ಗೀತಾ ರಚನಾಕಾರ ನಾಗೇಂದ್ರ ಪ್ರಸಾದ್‌, ಗಾಯಕಿ ಐಶ್ವರ್ಯ ರಂಗರಾಜನ್‌, ಆನಂದ್‌ ಆಡಿಯೋನ ಶ್ಯಾಮ್‌ ಚಾಬ್ರಿಯಾ ಅವರು ನಡೆಸಿಕೊಟ್ಟರು. ಇದನ್ನೂ ಓದಿ: ದಶೋತ್ಸವ ಸಂಭ್ರಮದಲ್ಲಿ ಪಬ್ಲಿಕ್ ಮ್ಯೂಸಿಕ್‌ – ನೀವಿಲ್ಲದೇ ನಾವಿಲ್ಲ, ಮುಂದೆಯೂ ಹರಸಿ ಹಾರೈಸಿ

    ಉದ್ಘಾಟನೆಗೂ ಮುನ್ನ ಮನರಂಜನೆ ನಡೆಯಿತು. ಗಾಯಕ ನವೀನ್‌ ಸಜ್ಜು ಮತ್ತು ತಂಡದವರು ರಾಷ್ಟ್ರಕವಿ ಕುವೆಂಪು ಅವರ ‘ಎಲ್ಲಾದರು ಇರು.. ಎಂತಾದರು ಇರು.. ಎಂದೆಂದಿಗು ನೀ ಕನ್ನಡವಾಗಿರು’ ಹಾಡನ್ನು ಹಾಡಿ ರಂಜಿಸಿದರು.

    ‘ಡೀ ಡೀ ಆಡ್ಯಾನೆ ರಂಗ’ ಗಾಯನದ ಮೂಲಕ ಮನೆಮಾತಗಿರುವ ಪುಟ್ಟ ಬಾಲಕ ಎಸ್‌.ಶಾಲ್ಮಲಿ ತಮ್ಮ ಕ್ಯೂಟ್‌ ಗಾಯನದ ಮೂಲಕ ಗಮನ ಸೆಳೆದರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳು ‘ಪಬ್ಲಿಕ್‌ ಮ್ಯೂಸಿಕ್‌ ದಶೋತ್ಸವ’ಕ್ಕೆ ಶುಭಾಶಯ ತಿಳಿಸಿದರು. ಇದನ್ನೂ ಓದಿ: 10 ವರ್ಷ ಕಾಲ ಮ್ಯೂಸಿಕ್‌ ವಾಹಿನಿ ನಡೆದಿದ್ದೇ ಸಂತೋಷ, ಆಶ್ಚರ್ಯ: ಹೆಚ್‌ ಆರ್‌ ರಂಗನಾಥ್‌

    ವೇದಿಕೆ ಕಾರ್ಯಕ್ರಮದ ಬಳಿಕ ವಾಹಿನಿಯ ಸಿಬ್ಬಂದಿ ಕೇಕ್‌ ಕತ್ತರಿಸಿ ಸಂಭ್ರಮಾಚರಣೆ ಮಾಡಿದರು. ಪಬ್ಲಿಕ್‌ ಮ್ಯೂಸಿಕ್‌ ವಾರ್ಷಿಕೋತ್ಸವದ ಪ್ರಯುಕ್ತ ಇಂದು ಇಡೀ ದಿನ ವಿವಿಧ ಮನರಂಜನ ಕಾರ್ಯಕ್ರಮಗಳು ಜರುಗಲಿವೆ.

  • 10 ವರ್ಷ ಕಾಲ ಮ್ಯೂಸಿಕ್‌ ವಾಹಿನಿ ನಡೆದಿದ್ದೇ ಸಂತೋಷ, ಆಶ್ಚರ್ಯ: ಹೆಚ್‌ ಆರ್‌ ರಂಗನಾಥ್‌

    10 ವರ್ಷ ಕಾಲ ಮ್ಯೂಸಿಕ್‌ ವಾಹಿನಿ ನಡೆದಿದ್ದೇ ಸಂತೋಷ, ಆಶ್ಚರ್ಯ: ಹೆಚ್‌ ಆರ್‌ ರಂಗನಾಥ್‌

    ಬೆಂಗಳೂರು: ಇಂದು ಕೈಯಲ್ಲೇ ಸಂಗೀತ ಸಿಗುವಾಗ 10 ವರ್ಷ ಕಾಲ ಮ್ಯೂಸಿಕ್‌ ವಾಹಿನಿ ನಡೆದಿದ್ದೇ ಸಂತೋಷ ಮತ್ತು ಆಶ್ಚರ್ಯ ಎಂದು ಪಬ್ಲಿಕ್‌ ಟಿವಿ (PUBLiC TV) ಮುಖ್ಯಸ್ಥ ಹೆಚ್‌ಆರ್‌ ರಂಗನಾಥ್‌ (HR Ranganath) ಹೇಳಿದರು.

    ಪಬ್ಲಿಕ್‌ ಮ್ಯೂಸಿಕ್‌ (PUBLiC Music) 10ನೇ ವಾರ್ಷಿಕೋತ್ಸವ ಪ್ರಯುಕ್ತ ಪಬ್ಲಿಕ್‌ ಟಿವಿ ಕಚೇರಿಯಲ್ಲಿ ನಡೆದ ಪಬ್ಲಿಕ್‌ ಮ್ಯೂಸಿಕ್‌ ʼದಶೋತ್ಸವʼ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ತಂತ್ರಜ್ಞಾನ ಸಂಗೀತವನ್ನು ಹೊಸ ಆಯಾಮಕ್ಕೆ ತೆಗೆದುಕೊಂಡು ಹೋಗಿದೆ. ಮೊದಲಿನಂತೆ ಟಿವಿ ಮುಂದೆ ನ್ಯೂಸ್‌, ಸಂಗೀತವನ್ನು ಕೇಳಬೇಕಿಲ್ಲ. ಗಣೇಶೋತ್ಸವ, ರಾಮನವಮಿಯಂತಹ ಹಬ್ಬಗಳಲ್ಲಿ ಕುಳಿತು ಕೇಳಬೇಕಿಲ್ಲ. ಯಾರು ಎಲ್ಲಿರುತ್ತಾರೋ ಅವರು ಅಲ್ಲಿಯೇ ಕುಳಿತುಕೊಂಡು ಬೇಕು ಬೇಕಾದನ್ನು ಆರಿಸಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ತಿಳಿಸಿದರು.

    ಇಂದು ಎಲ್ಲವೂ ಮೊಬೈಲ್‌ ಮೂಲಕ ಕೈಯಲ್ಲೇ ಸಿಗುತ್ತದೆ. ಪರಿಸ್ಥಿತಿ ಹೀಗಿರುವಾಗ 10 ವರ್ಷ ಕಾಲ ಚಾನೆಲ್‌ ನಿಂತುಕೊಂಡಿದ್ದೇ ಒಂದು ದೊಡ್ಡ ಸಾಧನೆ. ನನ್ನ ಲೆಕ್ಕಾಚಾರದಲ್ಲಿ ಇಬ್ಬರಿಗೆ ಧನ್ಯವಾದ ಹೇಳಬೇಕು. ಪಬ್ಲಿಕ್‌ ಮ್ಯೂಸಿಕ್‌ ವಾಹಿನಿಯನ್ನು ಕೇಳಿದ ಜನರಿಗೆ ಮತ್ತು ಟಿವಿ ಮೂಲಕ ಜನರಿಗೆ ಮ್ಯೂಸಿಕ್‌ ಕೇಳುವಂತೆ ಮಾಡಿದ ನನ್ನ ಸಹೋದ್ಯೋಗಿಗಳಿಗೆ ನಾನು ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು.

    ವೇದಿಕೆ ಕಾರ್ಯಕ್ರಮದಲ್ಲಿ ಲಹರಿ ಸಂಸ್ಥೆಯ ಮನೋಹರ್ ನಾಯ್ಡು, ಆನಂದ್ ಆಡಿಯೋದ ಶ್ಯಾಮ್ ಚಾಬ್ರಿಯಾ, ರಿಯಲ್‌ಸ್ಟಾರ್ ಉಪೇಂದ್ರ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್, ಗಾಯಕಿ ಐಶ್ವರ್ಯ ರಂಗರಾಜನ್ ಉಪಸ್ಥಿತರಿದ್ದರು.

     

  • ದಶೋತ್ಸವ ಸಂಭ್ರಮದಲ್ಲಿ ಪಬ್ಲಿಕ್ ಮ್ಯೂಸಿಕ್‌ – ನೀವಿಲ್ಲದೇ ನಾವಿಲ್ಲ, ಮುಂದೆಯೂ ಹರಸಿ ಹಾರೈಸಿ

    ದಶೋತ್ಸವ ಸಂಭ್ರಮದಲ್ಲಿ ಪಬ್ಲಿಕ್ ಮ್ಯೂಸಿಕ್‌ – ನೀವಿಲ್ಲದೇ ನಾವಿಲ್ಲ, ಮುಂದೆಯೂ ಹರಸಿ ಹಾರೈಸಿ

    ಬೆಂಗಳೂರು: ಪಬ್ಲಿಕ್ ಮ್ಯೂಸಿಕ್ (PUBLiC Music) ವಾಹಿನಿ ಶುರುವಾಗಿ ಇಂದಿಗೆ 10 ವರ್ಷವಾಗಿದೆ. ಸಹಜವಾಗಿಯೇ ಸಂಭ್ರಮ ಮೇಳೈಸಿದೆ. ಇಂದು ದಶೋತ್ಸವ (10th Anniversary) ಹೆಸರಲ್ಲಿ ಪಬ್ಲಿಕ್ ಮ್ಯೂಸಿಕ್ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.

    ಪಬ್ಲಿಕ್ ಟಿವಿ (PUBLiC TV) ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (HR Ranganath) ಬೆಳಗ್ಗೆ 10 ಗಂಟೆ 10ನಿಮಿಷ 10 ಸೆಕೆಂಡ್‌ಗೆ ಸರಿಯಾಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪಬ್ಲಿಕ್ ಮ್ಯೂಸಿಕ್ ದಶೋತ್ಸವ ಸಂಭ್ರಮಕ್ಕೆ ಎಂದಿನಂತೆ ಲಹರಿ ಸಂಸ್ಥೆಯ ಮನೋಹರ್ ನಾಯ್ಡು, ಆನಂದ್ ಆಡಿಯೋದ ಶ್ಯಾಮ್ ಚಾಬ್ರಿಯಾ, ಅಶ್ವಿನಿ ರೆಕಾರ್ಡಿಂಗ್ ಕಂಪನಿಯ ಅಶ್ವಿನಿ ರಾಮ್‌ಪ್ರಸಾದ್ ಹಾಗೂ ಝೇಂಕಾರ್ ಮ್ಯೂಸಿಕ್‌ನ ಭರತ್ ಜೈನ್ ಸಾಕ್ಷಿಯಾಗಲಿದ್ದಾರೆ.

     

    View this post on Instagram

     

    A post shared by PublicMusic (@publicmusics)

    ರಿಯಲ್‌ಸ್ಟಾರ್ ಉಪೇಂದ್ರ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್, ಗಾಯಕಿ ಐಶ್ವರ್ಯ ರಂಗರಾಜನ್ ಹಾಗೂ ನಟಿ ರೀಷ್ಮಾ ನಾಣಯ್ಯ ಕಾರ್ಯಕ್ರಮದ ಹೊಳಪನ್ನು ಹೆಚ್ಚಿಸಲಿದ್ದಾರೆ. ಇದನ್ನೂ ಓದಿ: MUDA Case| ರಾಜಧರ್ಮ ಪಾಲಿಸದಿದ್ದರೆ ಅದು ರಾವಣ ರಾಜ್ಯ ಆಗಲಿದೆ: ಕೋರ್ಟ್ ಆದೇಶದಲ್ಲಿ ಏನಿದೆ?

    ದಶೋತ್ಸವದ ಪ್ರಯುಕ್ತ ಹತ್ತು ವಿಶೇಷ ಶೋಗಳು ನಡೆಯಲಿವೆ. ನಟ ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಗಾಯಕರಾದ ನವೀನ್ ಸಜ್ಜು, ಸಂಗೀತ ರಾಜೀವ್ ಸೇರಿ ಸಾಕಷ್ಟು ಸೆಲೆಬ್ರಿಟಿಗಳು ನಮ್ಮೊಂದಿಗೆ ಇರಲಿದ್ದಾರೆ.

     

    View this post on Instagram

     

    A post shared by PublicMusic (@publicmusics)

    ಕಳೆದ ಹತ್ತು ವರ್ಷಗಳಲ್ಲಿ ಪಬ್ಲಿಕ್ ಮ್ಯೂಸಿಕ್ ಸಂಗೀತದ ಮೂಲಕ ಎಲ್ಲಾ ಕಡೆ ಪಸರಿಸಿಕೊಂಡಿದೆ. ಮೊದಲ ವರ್ಷದಿಂದ ಇಂದು ದಶಕದವರೆಗೂ ಪಬ್ಲಿಕ್ ಮ್ಯೂಸಿಕ್ ದಿನದಿಂದ ದಿನಕ್ಕೆ ಆಪ್ಡೇಟ್ ಆಗುತ್ತಾ, ಎಲ್ಲಾ ಜನರೇಶನ್‌ಗೂ ಇಷ್ಟವಾಗುವಂತ ಹಾಡುಗಳನ್ನು ಪ್ರಸಾರ ಮಾಡುತ್ತಿದೆ. ಈ ಸಂಭ್ರಮಕ್ಕೆ ಮುಖ್ಯ ಕಾರಣ ನೀವು. ಮೊದಲ ವರ್ಷದಿಂದ ಇಲ್ಲಿಯವರೆಗೂ ಜೊತೆಗೆ ನಿಂತಿದ್ದೀರಿ, ಬೆನ್ನುತಟ್ಟಿ ಬೆಂಬಲ ಕೊಟ್ಟಿದ್ದೀರಿ. ಇದೇ ರೀತಿ ಮುಂದೆಯೋ ನಿಮ್ಮ ಬೆಂಬಲ, ಹಾರೈಕೆ ನಮ್ಮ ಮೇಲಿರಲಿ.

  • ಪಬ್ಲಿಕ್ ಮ್ಯೂಸಿಕ್ `ದಶೋತ್ಸವ’ – ದಿನಪೂರ್ತಿ ಕಲರ್‌ಫುಲ್ ಕಾರ್ಯಕ್ರಮ

    ಪಬ್ಲಿಕ್ ಮ್ಯೂಸಿಕ್ `ದಶೋತ್ಸವ’ – ದಿನಪೂರ್ತಿ ಕಲರ್‌ಫುಲ್ ಕಾರ್ಯಕ್ರಮ

    ನಗೆ ಈಗ ಎಂಬತ್ತು ದಾಟಿದೆ. ನಡೆಯುವಾಗ, ಊಟ ಮಾಡುವಾಗ, ಮಾತ್ರೆ ತೆಗೆದುಕೊಳ್ಳುವಾಗ ಹಾಗೂ ನಿದ್ರೆ ಮಾಡುವಾಗ ಮಾತ್ರ ನನಗೆ ಮುಪ್ಪು ಬಂದಿರೋದು ಗೊತ್ತಾಗುತ್ತದೆ. ಆದೇ ನೀವು ನನ್ನ ಕೈಗೆ ಪುಟ್ಟ ಪಿಟೀಲು ಕೊಟ್ಟು ನೋಡಿ, ಆಗ ನನ್ನ ವೃದ್ಧಾಪ್ಯ ಮರೆತು, 18ರ ಹುಡುಗನಾಗುತ್ತೇನೆ. ಆದೇ ಸಂಗೀತಕ್ಕಿರುವ ಶಕ್ತಿ” ಎನ್ನುತ್ತಾರೆ ಖ್ಯಾತ ಪಿಟೀಲು ವಾದಕರಾದ ಟಿ.ಎನ್ ಕೃಷ್ಣನ್.

    ಬೇಕಂದಾಗ ಹರೆಯವನ್ನು ಪಡೆದುಕೊಳ್ಳುವ ದೈವಶಕ್ತಿ ಯಾರಿಗೆ ತಾನೆ ಬೇಡ? ಏನು ತಿಂದರೂ ಜೀರ್ಣಿಸಿಕೊಳ್ಳುವ, ಎಷ್ಟು ಬೇಕಾದರೂ ಕುಣಿಯುವ ಓಡುವ ಹಾಗೂ ನಿದ್ರಿಸುವ ಮಂತ್ರಶಕ್ತಿ ಯಾರಿಗೆ ತಾನೆ ಬೇಡ ಹೇಳಿ. ಸಾಕಷ್ಟು ಸ್ನೇಹಿತರನ್ನು ಪಡೆಯುವ ಯೌವನ ಎಲ್ಲರಿಗೂ ಬೇಕು. ಆ ಯೌವನದ ಗುಟ್ಟು ಸಂಗೀತದಲ್ಲಿದೆ. ಮೈಯಲ್ಲಿ ಮಿಂಚು ಹರಿಸುವ ಹಾಗೂ ಹೊಸದೊಂದು ಲೋಕಕ್ಕೆ ಕರೆದೊಯ್ಯುವ ಸಂಗೀತದ ರಸದೌತಣವನ್ನು ಪಬ್ಲಿಕ್ ಮ್ಯೂಸಿಕ್ (PUBLiC Music) ಸತತ ಹತ್ತು ವರ್ಷಗಳಿಂದ ಕರ್ನಾಟಕದ (Karnataka) ಜನತೆಗೆ ಹಾಗೂ ಸಾಗರದಾಚೆಗಿನ ಮ್ಯೂಸಿಕ್ ಅಭಿಮಾನಿಗಳಿಗೆ ನೀಡುತ್ತಾ ಬಂದಿದೆ.   ಇದನ್ನೂ ಓದಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿ ಭಾರತವನ್ನು ಸೇರಿಸಿ: ಫ್ರಾನ್ಸ್ ಅಧ್ಯಕ್ಷ ಒತ್ತಾಯ

     

    View this post on Instagram

     

    A post shared by PublicMusic (@publicmusics)

    ದಶೋತ್ಸವ ಹೆಸರಿನ ಮೂಲಕ ಕನ್ನಡಿಗರ ಪ್ರಪ್ರಥಮ ಮ್ಯೂಸಿಕ್ ಚಾನೆಲ್ ಪಬ್ಲಿಕ್ ಪಬ್ಲಿಕ್ ಮ್ಯೂಸಿಕ್ ಹತ್ತನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಸೆಪ್ಟೆಂಬರ್ 28ರಂದು ಪಬ್ಲಿಕ್ ಮ್ಯೂಸಿಕ್‌ಗೆ ಹಬ್ಬದ ಸಂಭ್ರಮ. ಅಂದು ದಿನಪೂರ್ತಿ ಕಲರ್‌ಫುಲ್ ಕಾರ್ಯಕ್ರಮಗಳು ನಡೆಯುತ್ತವೆ. ಸಂಗೀತವನ್ನು ಮನಸಾರೆ ಅಪ್ಪಿ, ಸಂಗೀತದ ಬಗ್ಗೆ ವಿಶೇಷ ಪ್ರೀತಿ ಇರೋ ಪಬ್ಲಿಕ್ ಟಿ.ವಿಯ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (HR Ranganath) ಬೆಳಗ್ಗೆ 10ಗಂಟೆ 10ನಿಮಿಷ 10 ಸೆಕೆಂಡ್‌ಗೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

    ಈ ದಶೋತ್ಸವದ (10 Anniversary) ಉದ್ಘಾಟನೆಯಲ್ಲಿ ಲಹರಿ ಮ್ಯೂಸಿಕ್‌ನ ಮಾಲೀಕರಾದ ಮನೋಹರ್ ನಾಯ್ಡು, ಆನಂದ್ ಆಡಿಯೋ ಕಂಪನಿಯ ಮುಖ್ಯಸ್ಥರಾದ ಶ್ಯಾಮ್ ಚಾಬ್ರಿಯಾ, ಅಶ್ವಿನಿ ರೆಕಾರ್ಡಿಂಗ್ ಕಂಪನಿಯ ಅಶ್ವಿನಿ ರಾಮ್ ಪ್ರಸಾದ್ ಹಾಗೂ ಝೇಂಕಾರ್ ಮ್ಯೂಸಿಕ್‌ನ ಭರತ್ ಜೈನ್ ಉಪಸ್ಥಿತರಿರುತ್ತಾರೆ.

    ಭಾರತದ ರಿಯಲ್‌ಸ್ಟಾರ್ ಉಪೇಂದ್ರ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್, ಗಾಯಕಿ ಐಶ್ವರ್ಯ ರಂಗರಾಜನ್ ಹಾಗೂ ನಟಿ ರೀಷ್ಮ ನಾಣಯ್ಯ ಕಾರ್ಯಕ್ರಮದ ಹೊಳಪನ್ನು ಹೆಚ್ಚಿಸಲಿದ್ದಾರೆ. ದಶೋತ್ಸವದ ಪ್ರಯುಕ್ತ ಹತ್ತು ವಿಶೇಷ ಲೈವ್ ಶೋಗಳು ನಡೆಯಲಿವೆ.

     

    View this post on Instagram

     

    A post shared by PublicMusic (@publicmusics)


    ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಗಾಯಕ ಹಾಗೂ ಸಂಗೀತ ನಿರ್ದೇಶಕ ನವೀನ್ ಸಜ್ಜು, ಕನ್ನಡದ ಮೊದಲ ಮಹಿಳಾ ಇಂಡಿಪೆಂಡೆಂಟ್‌ ಸಿಂಗರ್ ಸಂಗೀತ ರಾಜೀವ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಸಾಕಷ್ಟು ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಇರಲಿದ್ದಾರೆ.

    ಮಲಯ ಮಾರುತ ಚಿತ್ರದ ಎಲ್ಲೆಲ್ಲೂ ಸಂಗೀತವೇ ಹಾಡಿನಂತೆ ಹತ್ತು ವರ್ಷಗಳಲ್ಲಿ ಪಬ್ಲಿಕ್ ಮ್ಯೂಸಿಕ್ ಸಂಗೀತದ ಮೂಲಕ ಎಲ್ಲಾ ಕಡೆ ಪಸರಿಸಿಕೊಂಡಿದೆ. ಮೊದಲ ವರ್ಷದಿಂದ ಇಂದು ದಶಕದವರೆಗೂ ಪಬ್ಲಿಕ್ ಮ್ಯೂಸಿಕ್ ದಿನದಿಂದ ದಿನಕ್ಕೆ ಆಪ್ಡೇಟ್ ಆಗುತ್ತಾ, ಎಲ್ಲಾ ಜನರೇಶನ್‌ಗೂ ಇಷ್ಟವಾಗುವಂತ ಹಾಡುಗಳನ್ನು ಪ್ರಸಾರ ಮಾಡುತ್ತಾ ದಶೋತ್ಸವದ ಸಂಭ್ರಮದವರೆಗೂ ಬಂದು ನಿಂತಿದ್ದೇವೆ. ಈ ಸಂಭ್ರಮಕ್ಕೆ ಮುಖ್ಯ ಕಾರಣ  ಕನ್ನಡಿಗರು. ಮೊದಲ ವರ್ಷದಿಂದ ಇಲ್ಲಿಯವರೆಗೂ ಜೊತೆಗೆ ನಿಂತಿದ್ದೀರಿ, ಬೆನ್ನುತಟ್ಟಿ ಬೆಂಬಲ ಕೊಟ್ಟಿದ್ದೀರಿ. ಇದೇ ರೀತಿ ಮುಂದೆಯೋ ನಿಮ್ಮ  ಬೆಂಬಲ ಇರುತ್ತೆ ಎನ್ನುವ ಗಟ್ಟಿ ನಂಬಿಕೆಯಲ್ಲಿದ್ದೇವೆ.

  • ಪಬ್ಲಿಕ್‌ ಮ್ಯೂಸಿಕ್‌ ನವ ಸಂಭ್ರಮದಲ್ಲಿ ನವ ತಾರೆಯರ ಮೆರುಗು

    ಪಬ್ಲಿಕ್‌ ಮ್ಯೂಸಿಕ್‌ ನವ ಸಂಭ್ರಮದಲ್ಲಿ ನವ ತಾರೆಯರ ಮೆರುಗು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅದ್ಧೂರಿಯಾಗಿ ನಡೆದ ಪಬ್ಲಿಕ್ ಮ್ಯೂಸಿಕ್ ನವ ಸಂಭ್ರಮ

    ಅದ್ಧೂರಿಯಾಗಿ ನಡೆದ ಪಬ್ಲಿಕ್ ಮ್ಯೂಸಿಕ್ ನವ ಸಂಭ್ರಮ

    ಬೆಂಗಳೂರು: ಆಡು ಮುಟ್ಟದ ಸೊಪ್ಪಿಲ್ಲ, ಸಂಗೀತ ಕೇಳದ ಹೃದಯವಿಲ್ಲ. ವಿಶ್ವದ ಎಲ್ಲಾ ಸಂಸ್ಕೃತಿಗಳಲ್ಲೂ ಬೆರೆತುಕೊಂಡಿರುವ ಸಂಗೀತ ನಮ್ಮೊಳಗೆ ಜೀವಾಮೃತದಂತೆ ಕೆಲಸ ಮಾಡುತ್ತದೆ. ಪಕ್ಷಗಳ ಚಿಲಿಪಿಲಿ ಗಾನಕ್ಕೆ ಮರಗಿಡಗಳು ತಲೆದೂಗುವಂತೆ, ಪ್ರಕೃತಿಯ ರಾಗವನ್ನು ವನ್ಯ ಜೀವಿಗಳು ಆಲಿಸುತ್ತ ತಮ್ಮದೇ ಲೋಕದಲ್ಲಿ ಎಂಜಾಯ್ ಮಾಡುತ್ತವೆ. ನೆಮ್ಮದಿ ನೀಡುವ ಸಾಧನದಂತಿರುವ ಮ್ಯೂಸಿಕ್, ಕೇಳುಗರನ್ನು ಆನಂದದ ಚರಮ ಸೀಮೆಗೊಯ್ಯುವ ಒಂದು ದೇವಕಲೆ ಅಂದರೆ ತಪ್ಪಾಗಲಾರದು. ಯಾವುದಕ್ಕೆ ಕಟ್ಟುಬೀಳದೇ ಸಂಗೀತವನ್ನು ಸತತ ಒಂಭತ್ತು ವರ್ಷಗಳಿಂದ ಪಬ್ಲಿಕ್ ಮ್ಯೂಸಿಕ್ ಕನ್ನಡಿಗರಿಗೆ ಉಣಬಡಿಸುತ್ತಿರೋದು ಹೆಮ್ಮೆಯ ಸಂಗತಿ.

    ಪಬ್ಲಿಕ್ ಮ್ಯೂಸಿಕ್‌ನ (Public Music) ನವ ಸಂಭ್ರಮವನ್ನು ದೀಪ ಬೆಳಗಿಸುವ ಮೂಲಕ ಪಬ್ಲಿಕ್ ಟಿವಿಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಈ ವೇಳೆ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್‌ಆರ್ ರಂಗನಾಥ್, ಲಹರಿ ಮ್ಯೂಸಿಕ್ ಮುಖ್ಯಸ್ಥ ಮನೋಹರ್ ನಾಯ್ಡು ಮತ್ತತು ಲಹರಿ ವೇಲು, ಆನಂದ್ ಆಡಿಯೋಸ್ ಮುಖ್ಯಸ್ಥ ಶ್ಯಾಮ್ ಚಾಬ್ರಿಯಾ, ಅಶ್ವಿನಿ ರೆಕಾರ್ಡಿಂಗ್ ಕಂಪನಿ ಮುಖ್ಯಸ್ಥ ಅಶ್ವಿನಿ ರಾಮ್‌ಪ್ರಸಾದ್, ಝೇಂಕಾರ್ ಮ್ಯೂಸಿಕ್ ಮಾಲೀಕ ಭರತ್ ಜೈನ್ ಉಪಸ್ಥಿತರಿದ್ದರು. ಇದನ್ನೂ ಓದಿ: `ನವ ಸಂಭ್ರಮ’ಕ್ಕೆ ಹೊಸ ಸ್ಟಾರ್ಸ್

    ಸಿನಿಮಾ ತಾರೆಗಳಾದ ವಿಕ್ರಂ ರವಿಚಂದ್ರನ್, ಗಾನವಿ ಲಕ್ಷ್ಮಣ್, ಸಿದ್ದು ಮೂಲಿಮನಿ, ಅಮೃತ ಪ್ರೇಮ್, ಚೈತ್ರಾ ಜೆ. ಆಚಾರ್ ಹಾಗೂ ಬೃಂದಾ ಆಚಾರ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಬ್ಲಿಕ್ ಮ್ಯೂಸಿಕ್‌ಗೆ ಶುಭಹಾರೈಸಿ, ಸಂಗೀತದೊಂದಿಗಿನ ತಮ್ಮ ನಂಟು ಹಾಗೂ ನೆನಪನ್ನು ಹಂಚಿಕೊಂಡರು.

    ಈ ಸಂದರ್ಭ ಮಾತನಾಡಿದ ಪಬ್ಲಿಕ್ ಟಿವಿ (Public TV) ಮುಖ್ಯಸ್ಥ ಹೆಚ್‌ಆರ್ ರಂಗನಾಥ್ (H.R.Ranganath), ನಾವು ಮಾಡುವ ಕೆಲಸವನ್ನು ಪ್ರೀತಿಸಿದಾಗ ಮಾತ್ರ ನಮ್ಮ ಜೀವನದಲ್ಲಿ ಮುಂದೆ ಬರಲು ಸಾಧ್ಯ. ಜೀವನದಲ್ಲಿ ಸೋಲುಗಳು ಸಹಜ. ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ ಅದರ ವಿರುದ್ಧ ಹೋರಾಡಿ. ಸಮಸ್ಯೆಗಳನ್ನು ಎದುರಿಸದೇ ಇದ್ದರೇ ಗೆಲ್ಲಲು ನಾಳೆಗಳೇ ಇರುವುದಿಲ್ಲ ಎಂದರು.

    ನಮ್ಮ ಒತ್ತಡವನ್ನು ಕಡಿಮೆ ಮಾಡುವ ಶಕ್ತಿ ಇರುವುದು ಸಂಗೀತಕ್ಕೆ (Music) ಮಾತ್ರ. ಸಂಗೀತಕ್ಕೆ ಅನೇಕ ಶಕ್ತಿಯಿದೆ. ಇದು ನಮ್ಮ ನೆನಪನ್ನು ಮೆಲುಕು ಹಾಕುವಂತೆ ಮಾಡುತ್ತದೆ ಎಂದು ಈ ಯಶಸ್ಸಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣೀಕರ್ತರಾದವರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಇದನ್ನೂ ಓದಿ: ಪಬ್ಲಿಕ್‌ ಮ್ಯೂಸಿಕ್‌ಗೆ ನವ ಸಂಭ್ರಮ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ನವ ಸಂಭ್ರಮ’ಕ್ಕೆ ಹೊಸ ಸ್ಟಾರ್ಸ್

    `ನವ ಸಂಭ್ರಮ’ಕ್ಕೆ ಹೊಸ ಸ್ಟಾರ್ಸ್

    ಡು ಮುಟ್ಟದ ಸೊಪ್ಪಿಲ್ಲ, ಸಂಗೀತ ಕೇಳದ ಹೃದಯವಿಲ್ಲ. ವಿಶ್ವದ ಎಲ್ಲಾ ಸಂಸ್ಕೃತಿಗಳಲ್ಲೂ ಬೆರೆತುಕೊಂಡಿರುವ ಸಂಗೀತ ನಮ್ಮೊಳಗೆ ಜೀವಾಮೃತದಂತೆ ಕೆಲಸ ಮಾಡುತ್ತದೆ. ಪಕ್ಷಗಳ ಚಿಲಿಪಿಲಿ ಗಾನಕ್ಕೆ ಮರಗಿಡಗಳು ತಲೆದೂಗುವಂತೆ, ಪ್ರಕೃತಿಯ ರಾಗವನ್ನು ವನ್ಯ ಜೀವಿಗಳು ಆಲಿಸುತ್ತ ತಮ್ಮದೇ ಲೋಕದಲ್ಲಿ ಎಂಜಾಯ್ ಮಾಡುತ್ತವೆ. ನೆಮ್ಮದಿ ನೀಡುವ ಸಾಧನದಂತಿರುವ ಮ್ಯೂಸಿಕ್, ಕೇಳುಗರನ್ನು ಆನಂದದ ಚರಮ ಸೀಮೆಗೊಯ್ಯುವ ಒಂದು ದೇವಕಲೆ ಅಂದರೆ ತಪ್ಪಾಗಲಾರದು. ಯಾವುದಕ್ಕೆ ಕಟ್ಟುಬೀಳದೇ ಸಂಗೀತವನ್ನು ಸತತ ಒಂಭತ್ತು ವರ್ಷಗಳಿಂದ ಪಬ್ಲಿಕ್ ಮ್ಯೂಸಿಕ್ (PUBLiC Music) ಕನ್ನಡಿಗರಿಗೆ ಉಣಬಡಿಸುತ್ತಿರೋದು ಹೆಮ್ಮೆಯ ಸಂಗತಿ.

    `ನವ ಸಂಭ್ರಮ’ ಹೆಸರಿನ ಮೂಲಕ ಕನ್ನಡಿಗರ ಪ್ರಪ್ರಥಮ ಮ್ಯೂಸಿಕ್ ಚಾನೆಲ್ ಪಬ್ಲಿಕ್ ಮ್ಯೂಸಿಕ್ ಒಂಭತ್ತನೇ ವರ್ಷದ ವಾರ್ಷಿಕೋತ್ಸವವನ್ನು (9th Anniversary) ಆಚರಿಸಿಕೊಳ್ಳುತ್ತಿದೆ. `ಸೆಪ್ಟೆಂಬರ್ 28’ರಂದು ಪಬ್ಲಿಕ್ ಟಿ.ವಿಯ ಕೂಸು ಪಬ್ಲಿಕ್ ಮ್ಯೂಸಿಕ್‌ಗೆ ಸಡಗರ. ಸಂಭ್ರಮ. ಇಂದು ದಿನಪೂರ್ತಿ ಕಲರ್‌ಫುಲ್ ಕಾರ್ಯಕ್ರಮಗಳು ನಡೆಯುತ್ತವೆ. ಇದನ್ನೂ ಓದಿ: ಪಬ್ಲಿಕ್‌ ಮ್ಯೂಸಿಕ್‌ಗೆ ನವ ಸಂಭ್ರಮ

    ಬೆಳಗ್ಗೆ 10-30ಕ್ಕೆ ಪಬ್ಲಿಕ್ ಟಿ.ವಿಯ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (HR Ranganath) ಜೊತೆ ಲಹರಿ ಮ್ಯೂಸಿಕ್‌ನ ಮಾಲೀಕರಾದ ಮನೋಹರ್ ನಾಯ್ಡು, ಆನಂದ್ ಆಡಿಯೋ ಕಂಪನಿಯ ಮುಖ್ಯಸ್ಥರಾದ ಶ್ಯಾಮ್ ಚಾಬ್ರಿಯಾ, ಅಶ್ವಿನಿ ರೆಕಾರ್ಡಿಂಗ್ ಕಂಪನಿಯ ಅಶ್ವಿನಿ ರಾಮ್ ಪ್ರಸಾದ್ ಹಾಗೂ ಜೆಂಕಾರ್ ಮ್ಯೂಸಿಕ್‌ನ ಭರತ್ ಜೈನ್ ಉಪಸ್ಥಿತರಿರ್ತಾರೆ. ಇವರೆಲ್ಲರ ಜೊತೆ ಸ್ಯಾಂಡಲ್‌ವುಡ್‌ನ ಯುವ ಐಕಾನ್‌ಗಳಾಗಿರೋ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್, ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್, ರ‍್ಯಾಪರ್ ಹಾಗೂ ಸಿಂಗರ್ ಆಲ್ ಓಕೆ, ವೇದ ಚಿತ್ರದ ನಟಿ ಗಾನವಿ ಲಕ್ಷ್ಮಣ್‌, ನಟ ನವೀನ್ ಶಂಕರ್ ಹಾಗೂ ಟೋಬಿ ಸಿನಿಮಾದ ನಟಿ ಹಾಗೂ ಗಾಯಕಿ ಚೈತ್ರಾ ಆಚಾರ್ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಮೆರುಗು ಹೆಚ್ಚಿಸ್ತಾರೆ.

    ಬೆಳಗ್ಗೆ 11ಗಂಟೆಗೆ ಯುವ ಸೆಲೆಬ್ರಿಟಿಗಳ ಜೊತೆ ಸಿನಿಮಾ ಹಾಗೂ ಸಂಗೀತದ ಬಗ್ಗೆ ಮಾತುಕತೆ ನಡೆಯಲಿದೆ. ವಾರ್ಷಿಕೋತ್ಸವದ ಪ್ರಯುಕ್ತ ಪಬ್ಲಿಕ್ ಮ್ಯೂಸಿಕ್ ವೀಕ್ಷಕರಿಗಾಗಿ ದಿನಪೂರ್ತಿ ಸ್ಪರ್ಧೆ ಮಾಡಲಾಗುತ್ತದೆ. ಹಾಡಿನ ಮೇಲೆ ಬರುವಂತ ತುಂಬ ಸಿಂಪಲ್ ಆದ ಪ್ರಶ್ನೆಗಳಿಗೆ ಉತ್ತರ ಕಳುಹಿಸಿದರೆ ಬಂಪರ್ ಗಿಫ್ಟ್ ನಿಮ್ಮದಾಗಲಿದೆ. ನವ ಸಂಭ್ರಮದ ಪ್ರಯುಕ್ತ ದಿನಪೂರ್ತಿ ಕಲರ್‌ಫುಲ್ ಶೋಗಳನ್ನು ನೋಡಬಹುದು. ಮೊದಲ ವರ್ಷದಿಂದ ಇಂದು 9ನೇ ವರ್ಷದವರೆಗೂ ಜೊತೆ ನಿಂತು, ಬೆನ್ನುತಟ್ಟಿದ್ದು ಇದೇ ಕರುನಾಡ ಜನ, ಮುಂದೆಯೂ ನೀವು ಜೊತೆಗಿರುತ್ತೀರಿ ಎಂಬ ಭರವಸೆ ನಮಗಿದೆ. ನಿಮ್ಮ ನಂಬಿಕೆಯನ್ನು ಮುಂದೆಯೂ ನಾವು ಉಳಿಸಿಕೊಂಡು, ಬರಪೂರ ಮನರಂಜನೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ.

    ಹಸುಕಾಯುವ ಗೊಲ್ಲ, ಕುರಿ ಮೇಯಿಸುವ ಕುರುಬ, ನೇಗಿಲ ಯೋಗಿ ರೈತ, ಇವರೆಲ್ಲರಲ್ಲೂ ಒಬ್ಬ ಮಧುರವಾದ ಹಾಡುಗಾರನಿದ್ದಾನೆ. ಎಷ್ಟೋ ಬಾರಿ, ಇಷ್ಟದ ಹಾಡು ಕೇಳುವಾಗ ನೆನಪಿನ ಸುರುಳಿ ಬಿಚ್ಚುವುದು, ಬಯಲಿನಲ್ಲಿ ಬಯಲಾದಂತೆ. ಇನ್ನೆಷ್ಟೋ ಬಾರಿ ಹಾಡು ಕೇಳುತ್ತಾ ಕನಸಿನ ಉಗ್ರಾಣವೇ ಹುಟ್ಟಿಕೊಳ್ಳುವಂತೆ ಮಾಡುವ ಮ್ಯೂಸಿಕ್ ಕ್ಷೇತ್ರ, ಪಬ್ಲಿಕ್ ಮ್ಯೂಸಿಕ್‌ಗೆ 9ರ ಸಡಗರ. ಪಬ್ಲಿಕ್‌ ಮ್ಯೂಸಿಕ್‌ ವಾಹಿನಿಯನ್ನು ವೀಕ್ಷಿಸುತ್ತಾ ಜೊತೆಯಾಗಿ `ನವ ಸಂಭ್ರಮ’ವನ್ನು ಆಚರಿಸೋಣ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಬ್ಲಿಕ್‌ ಮ್ಯೂಸಿಕ್‌ಗೆ ನವ ಸಂಭ್ರಮ

    ಪಬ್ಲಿಕ್‌ ಮ್ಯೂಸಿಕ್‌ಗೆ ನವ ಸಂಭ್ರಮ

    ಬೊಬ್ಬೆ ಹಾಕಿ ಅಳುವ ಮಗುವನ್ನು ಮಲಗಿಸುವ ತಾಯಿ, ಚಿನ್ನ, ಮುದ್ದು, ಬಂಗಾರಿ, ಪುಟ್ಟ ಚಿನ್ನುಮರಿ ಅಂತೆಲ್ಲ ಹೆಸರಿಡಿದು ಕರೆಯುವ ಲಾಲಿ ಹಾಡಿಗೆ ಮಗು ಮಲಗುವುದು, ಎಂತಹ ಕಠಿಣ ಮನುಷ್ಯನಾದರೂ ಸಹ ಸಂಗೀತದ ರಾಗಕ್ಕೆ ಒಮ್ಮೆಯಾದ್ರು ತಲೆದೂಗಿಯೇ ಇರುತ್ತಾನೆ. ಒಂದಲ್ಲ ಒಂದು ಹಾಡಿಗೆ ಕೈಕಾಲು ಬೆರಳು, ತಾಳ ಹಾಕಿಯೇ ಇರುತ್ತಾನೆ. ಆ ಸೆಳೆಯುವ ಶಕ್ತಿ ಸಂಗೀತಕ್ಕಿದೆ. ಈ ಸಂಗೀತದ ಸಪ್ತಸ್ವರಗಳನ್ನು ಪಬ್ಲಿಕ್ ಮ್ಯೂಸಿಕ್ (PUBLIC Music) ಸತತ ಎಂಟು ವರ್ಷಗಳಿಂದ ಕನ್ನಡಿಗರಿಗೆ ನೀಡುತ್ತಲೇ ಬಂದಿದೆ.

    ನಿಮ್ಮ ಸಹಕಾರಿಂದ ಈ ಒಂಭತ್ತು ಮೆಟ್ಟಿಲುಗಳನ್ನು ಪಬ್ಲಿಕ್‌ ಮ್ಯೂಸಿಕ್‌ ಸಲೀಸಾಗಿ ದಾಟಿದೆ. ಪ್ರತೀ ಹೆಜ್ಜೆಯಲ್ಲೂ ಜೊತೆಗಿದ್ದು, ಚಿಕ್ಕಪುಟ್ಟ ತಪ್ಪುಗಳನ್ನು ಮಗುವಂತೆ ತಿದ್ದಿ-ತೀಡಿ ಇಲ್ಲಿಯವರೆಗೂ ತಂದು ನಿಲ್ಲಿಸಿದ್ದೀರಿ. ಮುಂದಿನ ದಿನಗಳಲ್ಲೂ ಕೈ ಹಿಡಿದು ಮುನ್ನಡೆಸುತ್ತೀರಿ ಎಂಬ ಭರವಸೆಯನ್ನೂ ನಮಗೆ ಕೊಟ್ಟಿದ್ದೀರಿ. ನಿಮ್ಮ ಪಬ್ಲಿಕ್ ಮ್ಯೂಸಿಕ್ 9 ವರ್ಷಗಳನ್ನು (9th Anniversary) ಕಳೆದ ಜರ್ನಿ ಹೇಗಿತ್ತು. ನಡೆದು ಬಂದ ಹಾದಿಯನ್ನೊಮ್ಮೆ ಮೆಲುಕು ಹಾಕೋಣ ಬನ್ನಿ. ಇದನ್ನೂ ಓದಿ: ಪಬ್ಲಿಕ್ ಮ್ಯೂಸಿಕ್‍ಗೆ 8ರ ಸಂಭ್ರಮ – ಇಡೀ ದಿನ ಹಲವು ಕಾರ್ಯಕ್ರಮಗಳ ರಸದೌತಣ

    ಪ್ರತೀ ವರ್ಷವೂ ಡಿಫರೆಂಟ್ ಕಾರ್ಯಕ್ರಮಗಳ ಮೂಲಕ ನಿಮ್ಮನ್ನು ಮನರಂಜಿಸಿದ್ದೇವೆ. ಹನಿಯಂತೆ ಶುರುವಾದ ಮೊದಲ ವರ್ಷದ ಮ್ಯೂಸಿಕ್ ದರ್ಬಾರನ್ನು ಮೆಚ್ಚಿಕೊಂಡು ಬೆನ್ನು ತಟ್ಟಿದ್ದೀರಿ. ಎಷ್ಟರ ಮಟ್ಟಿಗೆ ಅಂದರೆ ಎರಡನೇ ವರ್ಷದಲ್ಲಿ ನಮ್ಮ ಹರುಷವನ್ನು ಮುಗಿಲು ಮುಟ್ಟುವಷ್ಟು. ಇನ್ನು ಮೂರನೇ ಮೆಟ್ಟಿಲಿಗೆ ಬಂದಾಗ, ಮೂರು ದಾಟಿ ನಾಲ್ಕಕ್ಕೆ ಬಂದ ಖುಷಿಯಲ್ಲಿ `ಮೂರು ವರುಷ ಪ್ಲಸ್’. ಇನ್ನು ನಾಲ್ಕನೇ ವರ್ಷದ ಪಬ್ಲಿಕ್ ಮ್ಯುಸಿಕ್ ಜರ್ನಿಗೆ ʼಮ್ಯೂಸಿಕ್ ಮ್ಯಾಜಿಕ್ ಸೆಲೆಬ್ರೇಶನ್ ನಾಲ್ಕುʼ. ನಾಲ್ಕನೇ ವರ್ಷದ ವಾರ್ಷಿಕೋತ್ಸವಕ್ಕೆ ನಿಮ್ಮ ರೆಸ್ಪಾನ್ಸ್ ಮ್ಯಾಜಿಕ್ ಥರ ಇತ್ತು. ಇನ್ನು ಐದನೇ ವರ್ಷದ `ಪಬ್ಲಿಕ್ ಸಂಗೀತ ಐದನೇ ವಸಂತ’ ವಂತು ಅರ್ಧ ದಶಕವನ್ನು ಪೂರೈಸಿರುವ ಸಂತಸ ನೀಡಿತ್ತು.

    ʼ6ರ ತೇರು ಮ್ಯೂಸಿಕ್ ಜೋರುʼ, 6ನೇ ವರ್ಷದ ವಾರ್ಷಿಕೋತ್ಸವ ಆಚರಣೆಯಂತೂ ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಿದೆ. ಸೆಪ್ಟೆಂಬರ್ 28ರ ವಾರ್ಷಿಕೋತ್ಸವ ದಿನದಿಂದ ಸತತ ಮೂರು ದಿನಗಳ ಕಾಲ ವಿಶೇಷ ಪ್ರೋಗ್ರಾಮ್ ಮಾಡಿ ನಿಮ್ಮನ್ನು ಮನಂರಜಿಸಿದ್ವಿ. ಏಳನೇ ವರ್ಷದ ʼಸಪ್ತಸ್ವರʼದ ಬಗ್ಗೆ ಕೇಳ್ಬೇಕಾ? ಸಪ್ತಸ್ವರ ಹೆಸರಿಗೆ ತಕ್ಕ ಹಾಗೆ ಕೊರೊನಾ ಸಮಯದಲ್ಲಿ ನೊಂದವರಿಗೆ, ಸಂಕಷ್ಟದಲ್ಲಿರುವವರಿಗೆ ನೆರವಾದ ಏಳು ಜನ ಕೊರೊನಾ ವಾರಿಯರ್ಸ್‌ ಕರೆದು ಮಾತುಕತೆಯ ಜೊತೆಗೆ ಸನ್ಮಾನಿಸಲಾಗಿತ್ತು. ಇದನ್ನೂ ಓದಿ: ಪಬ್ಲಿಕ್ ಮ್ಯೂಸಿಕ್‍ಗೆ 7ರ ಸಂಭ್ರಮ – 7 ಮಂದಿ ಸಾಧಕರಿಗೆ ಗೌರವ

    ಎಂಟನೇ ವರ್ಷದ `ಪಬ್ಲಿಕ್ ಮ್ಯೂಸಿಕೋತ್ಸವ’ವನ್ನು ಉತ್ಸವದಂತೆ ಆಚರಿಸಲಾಗಿತ್ತು. ಕಾಂತಾರ ಸ್ಟಾರ್ ರಿಷಭ್ ಶೆಟ್ಟಿ, ಡೈರೆಕ್ಟರ್ ಜೋಗಿ ಪ್ರೇಮ್, ಕಾಮಿಡಿ ನಟ ಚಿಕ್ಕಣ್ಣ, ಹೆಸರಾಂತ ಚಿತ್ರ ಸಾಹಿತಿ ಕವಿರಾಜ್, ದೊಡ್ಮನೆ ಕುಡಿ ಧನ್ಯಾ ರಾಮ್‌ಕುಮಾರ್, ಯಂಗ್‌ ಹೀರೊ ಶ್ರೇಯಸ್ ಮಂಜು ಹಾಗೂ ಕೆಜಿಎಫ್ ಸಿಂಗರ್ ಸಂತೋಷ್ ವೆಂಕಿ ಅತಿಥಿಗಳಾಗಿ ಬಂದಿದ್ದರು. ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರು ಈ ಎಲ್ಲಾ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳ ಜೊತೆ ಮಾತುಕತೆ ನಡೆಸಿ ಸನ್ಮಾನಿಸಿದ್ರು.

    ಈ ವರ್ಷದ ಸೆ.28 ರಂದು (ಗುರುವಾರ) ನಾವು 9ನೇ ವರ್ಷದ ವಾರ್ಷಿಕೋತ್ಸವದ ಸಂತಸದಲ್ಲಿದ್ದೇವೆ. ಈ ಬಾರಿಯ `ನವ ಸಂಭ್ರಮ’, ಕನ್ನಡ ಚಿತ್ರರಂಗದ ಹೊಸ ಪ್ರತಿಭೆಗಳ ಜೊತೆ ಆಚರಿಸುತ್ತಿದ್ದೇವೆ. ಪಬ್ಲಿಕ್‌ ಮ್ಯೂಸಿಕ್‌ ವಾಹಿನಿಯನ್ನು ವೀಕ್ಷಿಸುತ್ತಾ ಜೊತೆಯಾಗಿ `ನವ ಸಂಭ್ರಮ’ವನ್ನು ಆಚರಿಸೋಣ ಬನ್ನಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]