Tag: protection

  • ಮದ್ರಸಾದಲ್ಲಿ 51 ಹುಡುಗಿಯರನ್ನು ಒತ್ತೆಯಿರಿಸಿಕೊಂಡು ಲೈಂಗಿಕ ಕಿರುಕುಳ- ಪೊಲೀಸರಿಂದ ರಕ್ಷಣೆ

    ಮದ್ರಸಾದಲ್ಲಿ 51 ಹುಡುಗಿಯರನ್ನು ಒತ್ತೆಯಿರಿಸಿಕೊಂಡು ಲೈಂಗಿಕ ಕಿರುಕುಳ- ಪೊಲೀಸರಿಂದ ರಕ್ಷಣೆ

    ಲಕ್ನೋ: ಮದ್ರಸಾದ ಮ್ಯಾನೇಜರ್‍ವೊಬ್ಬ 51 ಹುಡುಗಿಯರನ್ನು ಒತ್ತೆಯಾಗಿರಿಸಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ ಆಘಾತಕಾರಿ ಘಟನೆ ಲಕ್ನೋದ ಶಹದತ್‍ಗಂಜ್‍ನಲ್ಲಿ ನಡೆದಿದೆ. ಶುಕ್ರವಾರದಂದು ಪೊಲೀಸರು ಹುಡುಗಿಯರನ್ನು ರಕ್ಷಣೆ ಮಾಡಿದ್ದು, ಮ್ಯಾನೇಜರ್ ನನ್ನು ಬಂಧಿಸಿದ್ದಾರೆ.

    ಮದ್ರಸಾದಲ್ಲಿ ಸುಮಾರು 125 ಹುಡುಗಿಯರು ವ್ಯಾಸಂಗ ಮಾಡುತ್ತಿದ್ದರು. ಕೆಲವು ಹುಡುಗಿಯರು ಮ್ಯಾನೇಜರ್ ತಮಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲಕ್ನೋ ಪೊಲೀಸರ ಜಂಟಿ ತಂಡ ದಾಳಿ ಮಾಡಿದ ವೇಳೆ ಮದ್ರಸಾದೊಳಗೆ 51 ಹುಡುಗಿಯರನ್ನು ಒತ್ತೆಯಾಗಿರಿಸಿಕೊಳ್ಳಲಾಗಿತ್ತು. ಎಲ್ಲಾ ಹುಡುಗಿಯರನ್ನ ರಕ್ಷಣೆ ಮಾಡಲಾಗಿದೆ.

    ಸಂತ್ರಸ್ತ ಹುಡುಗಿಯರು ತಮ್ಮ ಪರಿಸ್ಥಿಯ ಬಗ್ಗೆ ಕಾಗದದಲ್ಲಿ ಬರೆದು ನೆರೆಹೊರೆಯ ಮನೆಗೆ ಪೇಪರ್ ಪೀಸ್‍ಗಳನ್ನ ಬಿಸಾಕಿದ್ದಾರೆ. ನಂತರ ನೆರೆಹೊರೆಯವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಿಕೊಂಡ ಬಳಿಕ ಪ್ರಕರಣವನ್ನ ಮಕ್ಕಳ ಕಲ್ಯಾಣ ಸಮಿತಿಗೆ ವರದಿ ಮಾಡಿದ್ದಾರೆ.

    ದೂರು ಬಂದ ಕೂಡಲೇ ನಾವು ಕಠಿಣ ಕ್ರಮ ತೆಗೆದುಕೊಂಡಿದ್ದೇವೆ. ದಾಳಿ ಮಾಡಲು ನಮ್ಮ ತಂಡ ಮದ್ರಸಾಗೆ ಹೋದಾಗ 51 ಹುಡುಗಿಯರನ್ನ ಒತ್ತೆಯಾಗಿರಿಸಿಕೊಳ್ಳಲಾಗಿತ್ತು. ಆರೋಪಿಯನ್ನ ಬಂಧಿಸಿದ್ದು, ತನಿಖೆ ಮಾಡುತ್ತಿದ್ದೇವೆ. ಆತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಜೊತೆಗೆ ಅವರನ್ನ ಹೊಡೆಯುತ್ತಿದ್ದ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಕುಮಾರ್ ತಿಳಿಸಿದ್ದಾರೆ.

    ಮದ್ರಸಾದ ಮ್ಯಾನೇಜರ್ ಹುಡುಗಿಯರನ್ನು ಹೊಡೆದು ಬಲವಂತವಾಗಿ ಡ್ಯಾನ್ಸ್ ಮಾಡುವಂತೆ ಹೇಳುತ್ತಿದ್ದ ಎಂದು ಸಂತ್ರಸ್ತರ ಕುಟುಂಬದವರು ಹೇಳಿದ್ದಾರೆ.

    ಕೆಲವು ಹುಡುಗಿಯರನ್ನ ಒತ್ತೆಯಾಗಿರಿಸಿಕೊಂಡಿರುವ ಬಗ್ಗೆ ನಮಗೆ ದೂರು ಬಂದಿತ್ತು. ವಿದ್ಯಾರ್ಥಿಗಳಿಂದ ಕೂಡ ವಿವಿಧ ದೂರುಗಳು ಬಂದಿದ್ದವು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಜಂಟಿ ತಂಡದೊಂದಿಗೆ ಇಲ್ಲಿಗೆ ದಾಳಿ ಮಾಡಲು ಬಂದೆವು. ತನಿಖೆ ನಂತರ ದೂರುಗಳು ಸರಿ ಎಂಬುದು ಗೊತ್ತಾಯಿತು. ಹೀಗಾಗಿ ಎಫ್‍ಐಆರ್ ದಾಖಲಿಸಿದ್ದೇವೆ. ಆರೋಪಿಯನ್ನ ಬಂಧಿಸಲಾಗಿದೆ ಎಂದು ಪಶ್ಚಿಮ ಉತ್ತರ ಪ್ರದೇಶದ ಎಸ್‍ಪಿ ವಿಕಾಶ್ ತಿರುಪತಿ ಹೇಳಿದರು.

  • ಮನೆ ಹೊರಗಡೆ ಬಿಚ್ಚಿಟ್ಟ ಶೂನಲ್ಲಿ ಸೇರಿಕೊಂಡಿತು ನಾಗರಹಾವು!

    ಮನೆ ಹೊರಗಡೆ ಬಿಚ್ಚಿಟ್ಟ ಶೂನಲ್ಲಿ ಸೇರಿಕೊಂಡಿತು ನಾಗರಹಾವು!

    ಮೈಸೂರು: ನಗರದ ಬಡಾವಣೆಯೊಂದರಲ್ಲಿ ಬಿಚ್ಚಿಟ್ಟಿದ್ದ ಶೂನಲ್ಲಿ ನಾಗರಹಾವು ಒಂದು ಸೇರಿಕೊಂಡಿದ್ದು, ಶೂ ಧರಿಸಲು ಬಂದ ವ್ಯಕ್ತಿ ಸ್ಪಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪರಾರಿಗಿರುವ ಘಟನೆ ನಡೆದಿದೆ.

    ಮೈಸೂರಿನ ಆರ್ ಎಂಪಿ ಬಡಾವಣೆಯ ಮಹೇಶ್ ಎಂಬುವರು ಸಂಜೆ ತಮ್ಮ ಶೂವನ್ನು ಮನೆಯ ಹೊರಗಡೆ ಬಿಟ್ಟು ತೆರಳಿದ್ದು, ರಾತ್ರೋರಾತ್ರಿ ಶೂ ಒಳಗೆ ನಾಗರ ಹಾವು ಬಂದು ಸೇರಿಕೊಂಡಿತ್ತು.

    ಈ ವೇಳೆ ಎಂದಿನಂತೇ ಮಹೇಶ್ ಅವರು ಶೂ ಧರಿಸಲು ಕೈಗೆತ್ತಿ ಗೊಂಡಾಗ ನಾಗರ ಹಾವು ಕಂಡು ತಬ್ಬಿಬ್ಬಾಗಿದ್ದಾರೆ. ತಕ್ಷಣ ಉರಗತಜ್ಞ ಕೆಂಪರಾಜು ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅವರು ನಾಗರ ಹಾವನ್ನು ಹಿಡಿದು ರಕ್ಷಿಸಿ, ಆತಂಕವನ್ನು ದೂರ ಮಾಡಿದ್ದಾರೆ.

  • ನಿಮ್ಮ ಮನೆಯಲ್ಲಿ ವೆಸ್ಟರ್ನ್ ಟಾಯ್ಲೆಟ್ ಇದ್ಯಾ? ಹಾಗಾದ್ರೆ ಈ ಸುದ್ದಿ ಓದ್ಲೇಬೇಕು

    ನಿಮ್ಮ ಮನೆಯಲ್ಲಿ ವೆಸ್ಟರ್ನ್ ಟಾಯ್ಲೆಟ್ ಇದ್ಯಾ? ಹಾಗಾದ್ರೆ ಈ ಸುದ್ದಿ ಓದ್ಲೇಬೇಕು

    ಬೆಂಗಳೂರು: ನಿಮ್ಮ ಮನೆಯಲ್ಲಿ ವೆಸ್ಟರ್ನ್ ಟಾಯ್ಲೆಟ್ ಇದ್ಯಾ ಹಾಗಾದರೆ ಟಾಯ್ಲೆಟ್‍ಗೆ ಹೋಗುವ ಮುನ್ನ ಎಚ್ಚರವಾಗಿರಿ.

    ವೆಸ್ಟರ್ನ್ ಶೈಲಿಯ ಟಾಯ್ಲೆಟ್ ಕಮೋಡಲ್ಲಿ ಹಾವು ಕಾಣಿಸಿಕೊಂಡಿರುವ ಘಟನೆ ನಗರದ ಜೀವನ್ ಭೀಮಾ ನಗರದ ಕೇಂದ್ರಿಯಾ ವಿಶ್ವವಿದ್ಯಾಲಯದ ಶೌಚಾಲಯದಲ್ಲಿ ನಡೆದಿದೆ.

    ವಿಶ್ವವಿದ್ಯಾಲಯದ ಶಿಕ್ಷಕರು ಬಳಸುವ ಶೌಚಾಲಯ ಇದಾಗಿದ್ದು, ಸ್ವಲ್ಪ ಎಚ್ಚರ ತಪ್ಪಿದ್ದರೂ ಶಿಕ್ಷಕರ ಜೀವಕ್ಕೆ ಆಪಾಯ ಕಾದಿತ್ತು. ಟಾಯ್ಲೆಟ್‍ನಲ್ಲಿ ಹಾವು ಕಾಣಿಸಿಕೊಂಡ ಕೂಡಲೇ ಬಿಬಿಎಂಪಿ ಅರಣ್ಯ ಘಟಕಕ್ಕೆ ವಿವಿ ಅಧಿಕಾರಗಳು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಘಟಕದ ಸಂರಕ್ಷಕರಾದ ಸುಭಾಷ್ ಹಾವನ್ನು ರಕ್ಷಿಸಿ ಸುರಕ್ಷಿತವಾಗಿ ಅರಣ್ಯದಲ್ಲಿ ಬಿಟ್ಟಿದ್ದಾರೆ.

  • ಕೊಡದಲ್ಲಿ ಸಿಲುಕಿಕೊಂಡಿದ್ದ ನಾಯಿಯನ್ನು ರಕ್ಷಿಸಿದ್ರು ಬೆಂಗ್ಳೂರು ಪೊಲೀಸರು

    ಕೊಡದಲ್ಲಿ ಸಿಲುಕಿಕೊಂಡಿದ್ದ ನಾಯಿಯನ್ನು ರಕ್ಷಿಸಿದ್ರು ಬೆಂಗ್ಳೂರು ಪೊಲೀಸರು

    ಬೆಂಗಳೂರು: ಕೊಡದಲ್ಲಿ ಸಿಲುಕಿಕೊಂಡಿದ್ದ ನಾಯಿಯನ್ನು 15 ಮಂದಿ ಕೆಎಸ್ಆರ್‌ಪಿ  ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

    ಈ ಘಟನೆ ಇದೇ ತಿಂಗಳ 24 ರ ಶುಕ್ರವಾರದಂದು ನಡೆದಿದ್ದು, ನಾಯಿಯನ್ನು ಕಾಪಾಡುತ್ತಿರುವ ಫೋಟೋವನ್ನು ಪೂರ್ವ ವಲಯದ ಡಿಸಿಪಿ ಅಭಿಷೇಕ್ ಗೋಯಲ್ ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ.

    ತಮ್ಮ ಟ್ವೀಟ್ ನಲ್ಲಿ ಅಭಿಷೇಕ್ ಗೋಯಲ್, ಮೊದಲು ನಾಯಿಯ ತಲೆಯನ್ನು ಕೊಡದಿಂದ ಬಿಡಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ಪ್ರಯತ್ನ ವಿಫಲವಾಯ್ತು. ನಂತರ ನಾಯಿಯ ಉಸಿರಾಟಕ್ಕೆ ತೊಂದರೆಯಾಗಬಾರದು ಎಂದು ಮೊದಲಿಗೆ ಕೊಡಕ್ಕೆ ಒಂದು ಸಣ್ಣ ರಂಧ್ರವನ್ನು ಮಾಡಲಾಯಿತು. ನಂತರ ನಿಧಾನವಾಗಿ ಕೊಡವನ್ನು ಕತ್ತರಿಸಿ ನಾಯಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

    ಡಿಸಿಪಿ ಅವರು ಮಾಡಿದ ಟ್ವೀಟ್‍ಗೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿ ಧನ್ಯವಾದಗಳನ್ನು ತಿಳಿಸಿ ಮರು ಟ್ವೀಟ್ ಮಾಡುತ್ತಿದ್ದಾರೆ.

  • ಓವರ್ ಟೇಕ್ ಮಾಡಲು ಹೋಗಿ ಲಾರಿ-ಮಿನಿ ಲಾರಿ ಡಿಕ್ಕಿ : 30 ಕರುಗಳ ರಕ್ಷಣೆ

    ಓವರ್ ಟೇಕ್ ಮಾಡಲು ಹೋಗಿ ಲಾರಿ-ಮಿನಿ ಲಾರಿ ಡಿಕ್ಕಿ : 30 ಕರುಗಳ ರಕ್ಷಣೆ

    ಹಾಸನ: ಲಾರಿ ಮತ್ತು ಮಿನಿ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಸುಮಾರು 30 ಕರುಗಳನ್ನು ರಕ್ಷಿಸಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದ ಹಿರಿಸಾವೆ ಬಳಿ ನಡೆದಿದೆ.

    ಹಾಸನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಮಿನಿ ಲಾರಿಯಲ್ಲಿ ಸುಮಾರು 30 ಕರುಗಳನ್ನು ಬೆಂಗಳೂರಿನ ಕಡೆಗೆ ಸಾಗಿಸಲಾಗುತ್ತಿತ್ತು. ಆದರೆ ಇದರ ಹಿಂದೆ ಇನ್ನೊಂದು ಲಾರಿ ಬಂದಿದ್ದು, ಚಾಲಕ ಮಿನಿ ಲಾರಿಯನ್ನು ಓವರ್ ಟೇಕ್ ಮಾಡಿ ಮುಂದೆ ಹೋಗಲು ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಹಿರಿಸಾವೆ ಪೊಲೀಸ್ ಠಾಣಾ ವ್ಯಾಪ್ತಿಯ ಬಳಿ ಎರಡು ವಾಹನಗಳ ಮಧ್ಯೆ ಅಪಘಾತ ಸಂಭವಿಸಿದೆ.

    ಅಪಘಾತ ಸಂಭವಿಸಿದ ಸ್ಥಳ್ಕಕೆ ಬೀಟ್ ಪೊಲೀಸರು ಬಂದಿದ್ದು, ಈ ವೇಳೆ ಕರುಗಳನ್ನು ಬಿಟ್ಟು ಎರಡು ವಾಹನಗಳ ಚಾಲಕರು ಪರಾರಿಯಾಗಿದ್ದಾರೆ. ಸದ್ಯಕ್ಕೆ ಲಾರಿಯಲ್ಲಿದ್ದ ಕರುಗಳನ್ನು ಹಿರಿಸಾವೆ ಪೊಲೀಸ್ ಠಾಣೆಯ ಬಳಿ ಕರೆದುಕೊಂಡು ಬಂದು ಆರೈಕೆ ಮಾಡಲಾಗುತ್ತಿದೆ.

    ಗೃಹರಕ್ಷಕ ದಳದ ಸಿಬ್ಬಂದಿ ಇಂದು ಬೆಳಗ್ಗೆ ಕರುಗಳಿಗೆ ಸುಮಾರು 50 ಲೀಟರ್ ಹಾಲನ್ನು ತಂದು ಕುಡಿಸಿವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಈ ವೀರಗಲ್ಲು ಈಗ ದಾಸರಹಳ್ಳಿಯ ಜನರಿಗೆ ಪವರ್ ಫುಲ್ ದೇವರು

    ಈ ವೀರಗಲ್ಲು ಈಗ ದಾಸರಹಳ್ಳಿಯ ಜನರಿಗೆ ಪವರ್ ಫುಲ್ ದೇವರು

    ಬೆಂಗಳೂರು: ಅದೊಂದು ನಿಗೂಢ ವೀರಗಲ್ಲು. ಆ ವೀರಗಲ್ಲನ್ನು ಯಾರೂ ಅಲುಗಾಡಿಸುವ ಹಾಗಿಲ್ಲ. ಇದನ್ನು ಸ್ಥಳಾಂತರ ಮಾಡೋದಕ್ಕೆ ಹೋದರೆ ಅನಾಹುತ ಫಿಕ್ಸ್ ಅಂತ ಇಲ್ಲಿನ ಜನ ನಂಬಿದ್ದಾರೆ.

    ಎರಡು ಬಿಳಿಯ ಕಲ್ಲು, ಕಲ್ಲಿನಲ್ಲಿ ಅದೇನೋ ಕೆತ್ತನೆ. ದಾಸರಹಳ್ಳಿಯ ಜಮೀನಿನಲ್ಲಿ ಸಾಕಷ್ಟು ವರ್ಷದ ಹಿಂದೆ ಸಿಕ್ಕ ರಾಜರ ಕಾಲದ ವೀರಗಲ್ಲು ಇದು. ಬರೋಬ್ಬರಿ 700ರ ಇಸವಿಯಲ್ಲಿದ್ದ ಅರಸಿಂಗ ಎನ್ನುವ ಸೈನಿಕನ ಸ್ಮಾರಕವಿದೆ. ಆದರೆ ಆ ಸ್ಮಾರಕವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡೋದಕ್ಕೆ ಸಾಧ್ಯವೇ ಇಲ್ವಂತೆ. ಈ ಹಿಂದೆ ಸ್ಥಳಾಂತರ ಮಾಡೋದಕ್ಕೆ ಮುಂದಾದಾಗ ಸಾಲು ಸಾಲು ಅನಾಹುತ ಸಂಭವಿಸಿದೆಯಂತೆ. ಹೀಗಾಗಿ ಆ ವೀರಗಲ್ಲಿನ ಬಗ್ಗೆ ಜನರಿಗೆ ಭಯವುಂಟಾಗಿದೆ.

    ಇನ್ನು ಆ ಕಲ್ಲಿನ ಮೇಲೆ ಕನ್ನಡ ಲಿಪಿಯಲ್ಲಿ ಆ ಶಾಸನ ಉಳಿಸಿಕೊಂಡು ಹೋದವರಿಗೆ ಒಳ್ಳೆಯದಾಗುತ್ತೆ, ಹಾಳು ಮಾಡಿದವರಿಗೆ ಶಾಪ ಸಿಗುತ್ತೆ ಎಂದು ಕೆತ್ತಲಾಗಿದೆ. ಅದ್ದರಿಂದ ಈ ವೀರಗಲ್ಲನ್ನು ಸೈಟ್‍ ನಲ್ಲಿಯೇ ಬಿಟ್ಟು ಪೂಜೆ ಮಾಡೋದಕ್ಕೆ ಶುರು ಮಾಡಿದ್ದಾರೆ. ವಿಶೇಷ ಅಂದರೆ ಈ ವೀರಗಲ್ಲಿನ ಮುಂದೆ ಏನು ಬೇಡಿದರೂ ಇಷ್ಟಾರ್ಥ ನೇರವೇರುತ್ತೆ ಎನ್ನುವ ನಂಬಿಕೆ ಇಲ್ಲಿನ ಸ್ಥಳೀಯ ಜನರದ್ದು.

    ಅಷ್ಟಕ್ಕೂ ಆ ವೀರಗಲ್ಲು ಗೋವನ್ನು ಕದಿಯಲು ಬಂದಾಗ ರಕ್ಷಣೆ ಮಾಡೋದಕ್ಕೆ ಹೋಗಿ ಸತ್ತ ಯುವಕನೊಬ್ಬನದಂತೆ. ಅವನ ನೆನಪಿಗೆ ಆ ವೀರಗಲ್ಲು ನಿರ್ಮಾಣ ಮಾಡಲಾಗಿದೆ. ಆದರೆ ಇದು ಬೇರೆ ಶಾಸನದಂತೆ ಅಲ್ಲ. ಯಾವುದೋ ಅತೀತ ಶಕ್ತಿ ಇದರಲ್ಲಿದೆ ಎನ್ನುವ ನಂಬಿಕೆ ಊರ ಜನರದು. ಆದರೆ ಇತಿಹಾಸ ತಜ್ಞರು ಇದೆಲ್ಲ ಮೂಢನಂಬಿಕೆ, ಇದು ಒಂದು ವ್ಯಕ್ತಿಯ ಸ್ಮಾರಕದ ಶಾಸನವಷ್ಟೇ ಎಂದು ಹೇಳುತ್ತಾರೆ.

     

  • ಬೇಲಿ ಪಕ್ಕ ಒದ್ದಾಡ್ತಾ ತೆವಳ್ತಿದ್ದ ನಾಗರಹಾವು- ಬಾಲ ಹಿಡಿದು ಮೇಲೆತ್ತಿದಾಗ ಮತ್ತೊಂದು ನಾಗರಹಾವನ್ನ ಕಕ್ಕಿತು

    ಬೇಲಿ ಪಕ್ಕ ಒದ್ದಾಡ್ತಾ ತೆವಳ್ತಿದ್ದ ನಾಗರಹಾವು- ಬಾಲ ಹಿಡಿದು ಮೇಲೆತ್ತಿದಾಗ ಮತ್ತೊಂದು ನಾಗರಹಾವನ್ನ ಕಕ್ಕಿತು

    ಚಿಕ್ಕಮಗಳೂರು: ಒಂದು ಹಾವು ಮತ್ತೊಂದು ಹಾವನ್ನು ನುಂಗೋದು ಸಹಜ. ಆದರೆ ಒಂದು ನಾಗರಹಾವು ಮತ್ತೊಂದು ನಾಗರಹಾವನ್ನು ನುಂಗೋದಿಲ್ಲ. ಒಂದು ವೇಳೆ ನುಂಗಿದರೂ ಅದು ಅಪರೂಪ. ಅಂತಹಾ ಒಂದು ಅಪರೂಪದ ಘಟನೆಗೆ ಕಾಫಿನಾಡು ಚಿಕ್ಕಮಗಳೂರು ಸಾಕ್ಷಿಯಾಗಿದೆ.

    ನಗರದ ಹೌಸಿಂಗ್ ಬೋರ್ಡ್‍ನಲ್ಲಿ ನಾಗರ ಹಾವೊಂದು ಮತ್ತೊಂದು ನಾಗರಹಾವನ್ನು ನುಂಗಿ ಸಂಚರಿಸೋಕೆ ಆಗದೆ ಬೇಲಿಯ ಪಕ್ಕದಲ್ಲಿ ನಿಧಾನವಾಗಿ ಒದ್ದಾಡಿಕೊಂಡು ತೆವಳುತ್ತಿತ್ತು. ಕೂಡಲೇ ಸ್ಥಳೀಯರು ಇದನ್ನು ಗಮನಿಸಿದ್ದು, ತಕ್ಷಣ ಸ್ನೇಕ್ ನರೇಶ್ ಎಂಬವರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.

    ವಿಚಾರ ತಿಳಿದ ನರೇಶ್ ಅವರು ಸ್ಥಳಕ್ಕೆ ಬಂದು ಹಾವನ್ನು ನೋಡಿ ರಕ್ಷಣೆ ಮಾಡಿದ್ದಾರೆ. ಆದರೆ ಅದು ಮತ್ತೊಂದು ಹಾವನ್ನು ನುಂಗಿದೆ ಎಂದು ಅವರಿಗೂ ಕೂಡ ಮೊದಲು ತಿಳಿದಿರಲಿಲ್ಲ. ನಂತರ ಹಾವಿನ ಬಾಲವನ್ನು ಹಿಡಿದು ಮೇಲೆತ್ತಿದ ಕೂಡಲೇ ಹೊಟ್ಟೆಯೊಳಗಿದ್ದ ಹಾವನ್ನು ಕಕ್ಕಿ ಹೊರಬೀಳಿಸಿದೆ.

    ಹೊಟ್ಟೆ ಒಳಗಿದ್ದ ಹಾವು ಸತ್ತು ಹೋಗಿತ್ತು. ಬದುಕಿರುವ ನಾಗರಹಾವನ್ನು ಸ್ನೇಕ್ ನರೇಶ್ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.


     

  • ಬಾವಿಗೆ ಬಿದ್ದಿದ್ದ 3 ವರ್ಷದ ಬಾಲಕಿಯನ್ನು ಬಕೆಟ್‍ನಲ್ಲಿ ಕೂರಿಸಿ ರಕ್ಷಿಸಿದ್ರು: ವಿಡಿಯೋ ನೋಡಿ

    ಬಾವಿಗೆ ಬಿದ್ದಿದ್ದ 3 ವರ್ಷದ ಬಾಲಕಿಯನ್ನು ಬಕೆಟ್‍ನಲ್ಲಿ ಕೂರಿಸಿ ರಕ್ಷಿಸಿದ್ರು: ವಿಡಿಯೋ ನೋಡಿ

    ಭೋಪಾಲ್: ಬಾವಿಗೆ ಬಿದ್ದಿದ್ದ ಮೂರು ವರ್ಷದ ಬಾಲಕಿಯನ್ನು ಗ್ರಾಮಸ್ಥರು ರಕ್ಷಣೆ ಮಾಡಿರುವ ಘಟನೆ ಮಧ್ಯಪ್ರದೇಶದ ಡಿಂಡೋರಿ ಜಿಲ್ಲೆಯ ದೇವಾಲ್ಪುರ ಗ್ರಾಮದಲ್ಲಿ ನಡೆದಿದೆ.

    ದೇವಾಲ್ಪುರ ಗ್ರಾಮದ ನಿವಾಸಿಗಳಾದ ರಾಹುಲ್ ಮತ್ತು ಸುರೇಂದ್ರ ಎಂಬುವವರು ಬಾವಿಗೆ ಹಾರಿ ಬಾಲಕಿಯನ್ನು ಕಾಪಾಡಿದ್ದಾರೆ. ಬಾಲಕಿ ತನ್ನ ಅಮ್ಮ ಮತ್ತು ಚಿಕ್ಕಮ್ಮನ ಜೊತೆ ಸ್ನಾನ ಮಾಡಲು ನೀರನ್ನು ತೆಗೆದುಕೊಂಡು ಬರಲು ಬಾವಿಗೆ ಬಂದಿದ್ದಳು. ಬಾವಿಯಿಂದ ನೀರು ಎಳೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದಿದ್ದಾಳೆ. ತಕ್ಷಣ ತಾಯಿ ಕೂಗಿಕೊಂಡಿದ್ದು, ಅಲ್ಲೇ ಸಮೀಪದಲ್ಲಿದ್ದ ರಾಹುಲ್ ಹಾಗೂ ಸುರೇಂದ್ರ ತಮ್ಮ ಜೀವದ ಹಂಗು ತೊರೆದು ಬಾಲಕಿಯನ್ನು ರಕ್ಷಣೆ ಮಾಡಲು ಬಾವಿಗೆ ಹಾರಿದ್ದಾರೆ.

    ನಂತರ ಗ್ರಾಮಸ್ಥರು ಮೇಲಿಂದ ಒಂದು ಹಗ್ಗಕ್ಕೆ ಬಕೆಟ್ ಕಟ್ಟಿ ಕೆಳಗೆ ಬಿಟ್ಟಿದ್ದಾರೆ. ಬಾವಿ ಒಳಗೆ ಇದ್ದ ಇಬ್ಬರು ಆ ಬಕೆಟ್‍ನಲ್ಲಿ ಬಾಲಕಿಯನ್ನು ಕೂರಿಸಿದ್ದಾರೆ. ನಂತರ ಬಾವಿಯ ಮೇಲಿದ್ದವರು ನಿಧಾನವಾಗಿ ಹಗ್ಗವನ್ನು ಎಳೆದುಕೊಂಡು ಬಾಲಕಿಯನ್ನು ಮೇಲೆಕ್ಕೆತ್ತಿದ್ದಾರೆ. ಈ ಎಲ್ಲಾ ಸಾಹಸ ದೃಶ್ಯಗಳು ವಿಡಿಯೋದಲ್ಲಿ ರೆಕಾರ್ಡ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    https://www.youtube.com/watch?v=B4Oo6rnK9vQ

  • ತನ್ನ ಮಾಲಕಿಯ ಮೇಲೆ ಅತ್ಯಾಚಾರ ನಡೆಯೋದನ್ನ ತಪ್ಪಿಸಿದ ನಾಯಿ

    ತನ್ನ ಮಾಲಕಿಯ ಮೇಲೆ ಅತ್ಯಾಚಾರ ನಡೆಯೋದನ್ನ ತಪ್ಪಿಸಿದ ನಾಯಿ

    ಇಂಗ್ಲೆಂಡ್: ನಾಯಿಗಳಿಗೆ ಮತ್ತೊಂದು ಹೆಸರೇ ನಿಯತ್ತು. ಅವುಗಳ ನಿಷ್ಠೆಗೆ ಯಾವುದೇ ಪ್ರಾಣಿಯೂ ಸರಿಸಾಟಿ ಇಲ್ಲ. ಇದಕ್ಕೆ ಮತ್ತೊಂದು ನಿದರ್ಶನವೆಂಬಂತೆ ತನ್ನ ಯಜಮಾನಿಯ ಮೇಲೆ ಆಗುತ್ತಿದ್ದ ಅತ್ಯಾಚಾರವನ್ನು ನಾಯಿಯೊಂದು ತಡೆದಿದೆ.

    ಇಂಗ್ಲೆಂಡಿನ ಬರ್ಕ್‍ಶೈರ್‍ನ ವಿನ್ನೇರ್ಶ್‍ನ ಪಾರ್ಕ್‍ನಲ್ಲಿ ಈ ಘಟನೆ ನಡೆದಿದೆ.

    ಶುಕ್ರವಾರ ಸಂಜೆ ಸುಮಾರು 6 ಗಂಟೆಗೆ 36 ವರ್ಷದ ಮಹಿಳೆ ತನ್ನ ನಾಯಿ ಜೊತೆ ಸಮೀಪದ ಪಾರ್ಕ್‍ವೊಂದರಲ್ಲಿ ವಾಕಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕಾಮುಕನೋಬ್ಬ ಹಿಂಬದಿಯಿಂದ ಬಂದು ಆಕೆಯನ್ನು ಪಕ್ಕಕ್ಕೆ ಎಳೆದೊಯ್ದಿದ್ದಾನೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

    ಕಾಮುಕ ಸಂತ್ರಸ್ತೆಯ ಜೊತೆ ಅಸಭ್ಯವಾಗಿ ನಡೆದುಕೊಂಡು ಆಕೆಯ ಬಟ್ಟೆಯನ್ನು ತೆಗೆಯಲು ಹಾಗೂ ಅತ್ಯಾಚಾರ ಮಾಡಲು ಪ್ರಯತ್ನ ಮಾಡಿದ್ದಾನೆ. ಈ ವೇಳೆ ನಾಯಿ ರೋಷದಿಂದ ಕಾಮುಕನ ಮೇಲೆ ಆಕ್ರಮಣ ಮಾಡಿದೆ. ನಂತರ ನಾಯಿ ದಾಳಿಯಿಂದ ಭಯಗೊಂಡು ಆರೋಪಿ ಪರಾರಿಯಾಗಿದ್ದಾನೆ.


    ಈ ಘಟನೆಯಿಂದ ಸಂತ್ರಸ್ತ ಮಹಿಳೆ ಆಘಾತಗೊಂಡಿದ್ದು, ನಂತರ ಅಧಿಕಾರಿಗಳು ಆಕೆಯನ್ನು ಸಂತೈಸಿ ಧೈರ್ಯ ತುಂಬಿದ್ದಾರೆ. ಆರೋಪಿಯ ರೇಖಾಚಿತ್ರವನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಆದಷ್ಟು ಬೇಗ ಆತನನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ.

    ಇದನ್ನು ಓದಿ: 7 ವರ್ಷದ ನಂತರ ತನ್ನ ಪೋಷಕನನ್ನು ಗುರುತಿಸಿದ ಬಳ್ಳಾರಿಯ ಜಿಂಕೆ!

  • ರೈಲ್ವೆ ಸ್ಟೇಷನ್‍ನಲ್ಲಿ 15 ಅಡಿ ಉದ್ದದ ಹೆಬ್ಬಾವು ಕಂಡು ಹೌಹಾರಿದ್ರು ಜನ- ವಿಡಿಯೋ ವೈರಲ್

    ರೈಲ್ವೆ ಸ್ಟೇಷನ್‍ನಲ್ಲಿ 15 ಅಡಿ ಉದ್ದದ ಹೆಬ್ಬಾವು ಕಂಡು ಹೌಹಾರಿದ್ರು ಜನ- ವಿಡಿಯೋ ವೈರಲ್

    ಶ್ರೀನಗರ: ಸುಮಾರು 15 ಅಡಿ ಉದ್ದದ ಹೆಬ್ಬಾವೊಂದು ಜಮ್ಮುವಿನ ಕಾತ್ರ ರೈಲ್ವೇ ನಿಲ್ದಾಣದಲ್ಲಿ ಕಾಣಿಸಿಕೊಂಡಿದೆ. ಇದನ್ನು ವೈಷ್ಣೋ ದೇವಿಯ ಭಕ್ತರು ನೋಡಿ ಭಯಭೀತರಾಗಿದ್ದರು. ಈ ಘಟನೆ ಸುಮಾರು 2 ವಾರಗಳ ಹಿಂದೆಯೇ ನಡೆದಿದ್ದು, ಅದರ ವಿಡಿಯೋ ಇಂದಿಗೂ ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ವಿಡಿಯೋದ ಪ್ರಕಾರ, ಈ ಘಟನೆ ದೀಪಾವಳಿ ಹಬ್ಬದ ಮುಂಚೆಯೇ ಅಂದರೆ ಅಕ್ಟೋಬರ್ 18 ರಂದು ನಡೆದಿದೆ. ಜನಸಂದಣಿ ಇದ್ದ ರೈಲ್ವೇ ನಿಲ್ದಾಣದ ಒಂದು ಕಂಬಕ್ಕೆ ಬೃಹದಾಕಾರದ ಹೆಬ್ಬಾವು ಸುತ್ತಿಕೊಂಡಿರುವುದು ಸೆರೆಯಾಗಿದೆ.

    ಸ್ಟೇಷನ್ ಕಂಬದಲ್ಲಿ ಸುತ್ತಿಕೊಂಡಿರುವ ಹೆಬ್ಬಾವನ್ನು ನೋಡಲು ಸುತ್ತಲು ಜನರ ದೊಡ್ಡ ಗುಂಪೇ ಇರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ನಂತರ ಪ್ರತ್ಯಕ್ಷದರ್ಶಿಗಳು ಯಾವುದೇ ಅಪಾಯಕಾರಿ ಘಟನೆ ನಡೆಯಬಾರದು ಎಂದು ತಕ್ಷಣ ಅರಣ್ಯ ಇಲಾಖೆಗೆ ಕರೆ ಮಾಡಿ ಎಚ್ಚರಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿಗೆ ಹೆಬ್ಬಾವನ್ನು ಸೆರೆ ಹಿಡಿಯಲು ಸಮೀಪದಲ್ಲಿದ್ದ ಸ್ಥಳೀಯರು ಸಹಾಯ ಮಾಡಿದ್ದಾರೆ. ನಂತರ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟು ಬರಲಾಗಿದೆ.

    ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ ನಂತರ ಕೆಲವರು ಇದು ಮುಂಬೈನ ಬಾದರ್ ರೈಲ್ವೇ ನಿಲ್ದಾಣದಲ್ಲಿ ರೆಕಾರ್ಡ್ ಮಾಡಲಾಗಿದೆ. ಇದು ಹೆಬ್ಬಾವಲ್ಲ ಅನಕೊಂಡ ಎಂದು ಸುಳ್ಳು ವದಂತಿ ಹಬ್ಬಿಸಿದ್ದರು. ಆದರೆ ಅನಕೊಂಡ ದಕ್ಷಿಣ ಅಮೆರಿಕದಲ್ಲಿ ಕಂಡುಬರುತ್ತದೆ. ಇದು ಹೆಬ್ಬಾವಾಗಿದ್ದು, ಈ ವಿಡಿಯೋವನ್ನು ಜಮ್ಮುವಿನ ಬಾಂಗಾಂಗ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ ಎಂದು ಪೊಲೀಸರು ಖಚಿತ ಪಡಿಸಿದ್ದಾರೆ.

    https://www.youtube.com/watch?v=lNalB63wh20