Tag: Profit

  • ಅದಾನಿ ಷೇರು ಶಾರ್ಟ್‌ ಸೆಲ್ಲಿಂಗ್‌, 16 ಕಂಪನಿಗಳಿಗೆ ಭಾರೀ ಲಾಭ – ಇಡಿ ತನಿಖಾ ವರದಿಯಲ್ಲಿ ಏನಿದೆ?

    ಅದಾನಿ ಷೇರು ಶಾರ್ಟ್‌ ಸೆಲ್ಲಿಂಗ್‌, 16 ಕಂಪನಿಗಳಿಗೆ ಭಾರೀ ಲಾಭ – ಇಡಿ ತನಿಖಾ ವರದಿಯಲ್ಲಿ ಏನಿದೆ?

    ನವದೆಹಲಿ: ಹಿಂಡೆನ್‌ಬರ್ಗ್ ಸಂಶೋಧನಾ ವರದಿ (Hindenburg Research Report) ಬಿಡುಗಡೆಯಾಗುವ ಸಮಯದಲ್ಲಿ ಅದಾನಿ (Adani) ಸಮೂಹದ ಷೇರುಗಳನ್ನು ಶಾರ್ಟ್ ಸೆಲ್ಲಿಂಗ್ (Short Selling ) ಮಾಡುವ ಮೂಲಕ ಒಂದು ಖಾಸಗಿ ಬ್ಯಾಂಕ್‌ ಸೇರಿದಂತೆ 16 ಸಂಸ್ಥೆಗಳು ಭಾರೀ ಲಾಭ ಮಾಡಿರುವ ವಿಷಯ ಜಾರಿ ನಿರ್ದೇಶನಾಲಯದ (ED) ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ವಿದೇಶಿ ಬಂಡವಾಳ ಹೂಡಿಕೆದಾರರು ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FPIs/FIIs) ಸೇರಿದಂತೆ ಒಂದು ಡಜನ್ ಕಂಪನಿಗಳು ಅದಾನಿ ಗ್ರೂಪ್‌ನ ಷೇರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಲಾಭ ಮಾಡಿರುವ ವಿಷಯ ಇಡಿ ನಡೆಸಿದ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

    ಲಾಭ ಮಾಡಿದ ಸಂಸ್ಥೆಗಳ ಪೈಕಿ ಮೂರು ಭಾರತದಲ್ಲಿ ನೆಲೆಗೊಂಡಿದ್ದರೆ, ನಾಲ್ಕು ಮಾರಿಷಸ್‌, ಮತ್ತು ಫ್ರಾನ್ಸ್, ಹಾಂಕಾಂಗ್‌, ಕೇಮನ್ ದ್ವೀಪಗಳು, ಐರ್ಲೆಂಡ್ ಮತ್ತು ಲಂಡನ್‌ನಲ್ಲಿ ತಲಾ ಒಂದು ಸಂಸ್ಥೆಗಳು ನೆಲೆಗೊಂಡಿವೆ ಎಂದು ಇಡಿ ತನ್ನ ವರದಿಯಲ್ಲಿ ಹೇಳಿದೆ. ಇದನ್ನೂ ಓದಿ: ಇದು ಭಾರತದ ಮೇಲೆ ನಡೆಸಿದ ವ್ಯವಸ್ಥಿತ ದಾಳಿ – ಆರೋಪಗಳಿಗೆ 413 ಪುಟಗಳ ಉತ್ತರ ನೀಡಿದ ಅದಾನಿ ಗ್ರೂಪ್‌

    ಹಿಂಡೆನ್‌ಬರ್ಗ್‌ ವರದಿ ಜನವರಿ 24ರಂದು ಪ್ರಕಟವಾಗಿತ್ತು. ವರದಿ ಪ್ರಕಟವಾಗುವ 2-3 ದಿನಗಳ ಹಿಂದೆ ಕೆಲ ಕಂಪನಿಗಳು ಶಾರ್ಟ್‌ ಸೆಲ್ಲಿಂಗ್‌ ಮಾಡಿವೆ. ಅದರಲ್ಲೂ ಕೆಲ ಕಂಪನಿಗಳು ಇದೇ ಮೊದಲ ಬಾರಿಗೆ ಶಾರ್ಟ್‌ ಸೆಲ್ಲಿಂಗ್‌ ಮಾಡಿದೆ ಎಂದು ಇಡಿ ಜುಲೈನಲ್ಲಿ ಸಲ್ಲಿಸಿದ ತನಿಖಾ ವರದಿಯಲ್ಲಿ ಸೆಬಿಗೆ (SEBI) ತಿಳಿಸಿದೆ. ಎರಡು ಭಾರತೀಯ ಕಂಪನಿಗಳು ‘ಟಾಪ್ ಶಾರ್ಟ್ ಸೆಲ್ಲರ್’ಗಳಲ್ಲಿ ಕಾಣಿಸಿಕೊಂಡಿವೆ. ಈ ಪೈಕಿ ಒಂದು ದೆಹಲಿಯಲ್ಲಿ ಮತ್ತು ಇನ್ನೊಂದು ಮುಂಬೈನಲ್ಲಿ ನೋಂದಾಯಿಸಲಾಗಿದೆ.

    ಕಡಿಮೆ ಅವಧಿಯಲ್ಲಿ ಲಾಭ ಮಾಡಿದ 16 ಸಂಸ್ಥೆಗಳ ಮೇಲೆ ಸದ್ಯ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಸಂಸ್ಥೆಗಳ ಮೇಲೆ ಕ್ರಿಮಿನಲ್‌ ತನಿಖೆ ನಡೆಸುವ ಸಂಪೂರ್ಣ ಅಧಿಕಾರ ಸೆಬಿಗೆ ಇದ್ದು ಒಂದು ವೇಳೆ ಅನುಮಾನಾಸ್ಪದ ವ್ಯವಹಾರ ನಡೆದಿದ್ದರೆ ದೂರು ದಾಖಲಿಸಬಹುದು. ದೂರು ದಾಖಲಾದ ಬಳಿಕ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (PMLA) ಅಡಿ ಇಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಿದೆ. ಇದನ್ನೂ ಓದಿ: ಷೇರು ವಿವಾದ; ಅದಾನಿ ಗ್ರೂಪ್‌ಗೆ ಸುಪ್ರೀಂ ಕೋರ್ಟ್ ಸಮಿತಿ ಕ್ಲೀನ್ ಚಿಟ್

    ಏನಿದು ಶಾರ್ಟ್‌ ಸೆಲ್ಲಿಂಗ್‌?
    ಶಾರ್ಟ್ ಸೆಲ್ಲಿಂಗ್ ಎನ್ನುವುದು ಹೂಡಿಕೆಯ ತಂತ್ರವಾಗಿದ್ದು, ಮುಂದಿನ ದಿನಗಳಲ್ಲಿ ಕಂಪನಿಯ ಷೇರು ಮೌಲ್ಯ ಕುಸಿಯಬಹುದು ಎಂಬುದನ್ನು ಮೊದಲೇ ಊಹಿಸಿ ನಿಗದಿತ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿ ನಂತರ ಆ ಕಂಪನಿಯ ಷೇರು ಮೌಲ್ಯ ಕುಸಿತಗೊಂಡಾಗ ಅವುಗಳನ್ನು ಕಡಿಮೆ ಬೆಲೆಗೆ ಮರು ಖರೀದಿಸಿ ಲಾಭ ಮಾಡುವುದಕ್ಕೆ ಶಾರ್ಟ್‌ ಸೆಲ್ಲಿಂಗ್‌ ಎಂದು ಕರೆಯಲಾಗುತ್ತದೆ.

    ಲಾಭ ಮಾಡಿರುವ ಒಂದು ಸಂಸ್ಥೆ 2020ರಲ್ಲಿ ಆರಂಭಗೊಂಡಿದ್ದರೂ 2021 ರವರೆಗೆ ನಿಷ್ಕ್ರಿಯವಾಗಿತ್ತು. ಹೀಗಿದ್ದರೂ ಇದು ಸೆಪ್ಟೆಂಬರ್ 2021 ರಿಂದ ಮಾರ್ಚ್ 2022 ರವರೆಗಿನ ಕೇವಲ ಆರು ತಿಂಗಳೊಳಗೆ 31,000 ಕೋಟಿ ರೂ. ವಹಿವಾಟಿನ ಮೇಲೆ 1,100 ಕೋಟಿ ರೂಪಾಯಿಗಳ ಗಳಿಕೆಯನ್ನು ಘೋಷಿಸಿದೆ. ಇದನ್ನೂ ಓದಿ: ಅದಾನಿ ಸಮೂಹ ಕಂಪನಿಗಳಲ್ಲಿ 15,446 ಕೋಟಿ ಹೂಡಿಕೆ – ಅದಾನಿ ಕೈ ಹಿಡಿದ ರಾಜೀವ್‌ ಜೈನ್‌ ಯಾರು?

    ಭಾರತದಲ್ಲಿ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತಿರುವ ಮತ್ತೊಂದು ಹಣಕಾಸು ಸೇವೆಗಳ ಗುಂಪು 122 ಕೋಟಿ ರೂಪಾಯಿಗಳ ಅಲ್ಪ ಆದಾಯವನ್ನು ದಾಖಲಿಸಿದೆ. ಹೀಗಿದ್ದರೂ ಎಫ್‌ಐಐ ಆಗಿ ಯಾವುದೇ ತೆರಿಗೆ ಹೊಣೆಗಾರಿಕೆಯಿಲ್ಲದೆ 9,700 ಕೋಟಿ ರೂ. ಆದಾಯಗಳಿಸಿ ಅಚ್ಚರಿ ಮೂಡಿಸಿದೆ ಎಂದು ಇಡಿ ಹೇಳಿದೆ.

    ಈ ಎಫ್‌ಪಿಐಗಳು ಮತ್ತು ಎಫ್‌ಐಐಗಳು ನಿಜವಾದ ಫಲಾನುಭವಿಗಳಲ್ಲ. ಇವುಗಳು ವಿದೇಶಿ ಹೂಡಿಕೆದಾರರರಿಗೆ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಿರಬಹುದು ಎಂದು ಇಡಿ ಸಂಶಯ ವ್ಯಕ್ತಪಡಿಸಿದೆ.

    ಅದಾನಿಯಿಂದ ಎಫ್‌ಪಿಒ ರದ್ದು:
    20,000 ಕೋಟಿ ರೂ. ಮೌಲ್ಯದ ಎಫ್‌ಪಿಒಗೆ (ಮುಂದುವರಿದ ಸಾರ್ವಜನಿಕ ಕೊಡುಗೆ ಅಥವಾ ಹೊಸದಾಗಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ) ಅದಾನಿ ಕಂಪನಿ ಈ ಜನವರಿಯಲ್ಲಿ ಚಾಲನೆ ನೀಡಿತ್ತು. ಪ್ರತಿ ಷೇರಿಗೆ 3,112ರಿಂದ 3,276 ರೂ. ಆಫರ್‌ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹಿಂಡೆನ್‌ಬರ್ಗ್‌ ಅದಾನಿ ಕಂಪನಿ ವಿರುದ್ಧ ಸಂಶೋಧನಾ ವರದಿ ಬಿಡುಗಡೆ ಮಾಡಿತ್ತು. ವರದಿ ಬಳಿಕ ಅದಾನಿ ಕಂಪನಿಯ ಷೇರಿನ ಮೌಲ್ಯ ಕುಸಿತ ಕಂಡಿದ್ದರೂ ಎಫ್‌ಪಿಒ ಬಿಡ್‌ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿತ್ತು.

    ಷೇರುಗಳ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ನಂತರ 20 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದ್ದ ಎಫ್‌ಪಿಒ ಪ್ರಕ್ರಿಯೆಯನ್ನೇ ಅದಾನಿ ಸಮೂಹ ರದ್ದು ಮಾಡಿತ್ತು. ನಮ್ಮ ಷೇರು (Share) ಮೌಲ್ಯ ಕುಸಿದಿದೆ. ಈ ಸಂದರ್ಭದಲ್ಲಿ ಎಫ್‌ಪಿಒನೊಂದಿಗೆ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂದು ಹೇಳಿ ಹೂಡಿಕೆದಾರರ ಹಣವನ್ನು ಮರಳಿಸಲಾಗುವುದು ಎಂದು ಗೌತಮ್‌ ಅದಾನಿ ತಿಳಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಷ್ಟದಲ್ಲಿ ಸಾಗುತ್ತಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆ ನಡುವೆ ಲಾಭದ ಹಳಿ ಏರಿದ `ನಮ್ಮ ಮೆಟ್ರೋ’

    ನಷ್ಟದಲ್ಲಿ ಸಾಗುತ್ತಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆ ನಡುವೆ ಲಾಭದ ಹಳಿ ಏರಿದ `ನಮ್ಮ ಮೆಟ್ರೋ’

    ಬೆಂಗಳೂರು: ಕರ್ನಾಟಕ (Karnataka) ಮಾತ್ರವಲ್ಲ ದೇಶದ ಬಹುತೇಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮುಚ್ಚುವ ಸ್ಥಿತಿಗೆ ಬಂದು ನಿಂತಿವೆ. ನಷ್ಟದ ಮೇಲೆ ನಷ್ಟವಾಗುತ್ತ ಸಾಗುತ್ತಿದೆ. ಏರ್ ಇಂಡಿಯಾದಿಂದ (Air India) ಹಿಡಿದು ಬಿಎಂಟಿಸಿವರೆಗೂ (BMTC) ಇದೇ ಕತೆ. ಆದ್ರೆ ನಮ್ಮ ಮೆಟ್ರೋ (Namma Metro) ಮಾತ್ರ ಲಾಭದ ಹಳಿ ಏರಿದೆ.

    ಬಿಎಂಟಿಸಿ (BMTC) ಬಹುತೇಕ ಬಾಗಿಲು ಮುಚ್ಚುವ ಸ್ಥಿತಿಗೆ ತಲುಪುತ್ತಿದೆ. ಕೆಎಸ್‍ಆರ್‌ಟಿಸಿ (KSRTC) ಆರ್ಥಿಕ ಸ್ಥಿತಿಯೂ ಹೆಚ್ಚೇನು ಸದೃಢವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮೆಟ್ರೋ ಮಾತ್ರ ಲಾಭದ ಟ್ರ್ಯಾಕ್‍ನಲ್ಲಿ ಓಡ್ತಿದೆ. ಬಿಎಂಆರ್‌ಸಿಎಲ್‌ (BMRCL) ಕೋವಿಡ್ (Covid-19) ಬಳಿಕ ಕಂಪ್ಲೀಟ್ ಲಾಭಕ್ಕೆ ತಿರುಗಿದ್ದು, ನಿತ್ಯ 1 ಕೋಟಿ 20 ಲಕ್ಷ ರೂ.ಗೂ ಹೆಚ್ಚಿನ ಗಳಿಕೆ ಮಾಡುತ್ತಿದೆ. ಇದರಲ್ಲಿ 1 ಕೋಟಿಯಷ್ಟು ನಿರ್ವಹಣಾ ವೆಚ್ಚ ಆಗ್ತಿದ್ರೆ ಉಳಿದ 20 ಲಕ್ಷ ರೂ. ಉಳಿತಾಯ ಖಾತೆ ಸೇರುತ್ತಿದೆ. ಇದನ್ನೂ ಓದಿ: ಚಂದ್ರಶೇಖರ್ ಗುರೂಜಿ ಹತ್ಯೆಗೆ ಟ್ವಿಸ್ಟ್ – ವಾಟ್ಸಾಪ್ ಚಾಟ್ ತೆರೆದಿಡ್ತು ಕೊಲೆ ರಹಸ್ಯ

    ನಮ್ಮ ಮೆಟ್ರೋಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿದೆ. ಆದರೂ ಕಳೆದ ಕೆಲ ವರ್ಷಗಳಿಂದ ನಷ್ಟದ ಮೇಲೆ ನಷ್ಟ ಅನುಭವಿಸುತ್ತಿತ್ತು. ಅದ್ರಲ್ಲೂ ಕೋವಿಡ್ ಸಮಯದಲ್ಲಿ ಮೆಟ್ರೋ ಸಂಕಷ್ಟದ ಸುಳಿಗೆ ಸಿಲುಕಿತ್ತು. ನಾಲ್ಕೂವರೆ ಲಕ್ಷ ಇದ್ದ ಮೆಟ್ರೋ ಪ್ರಯಾಣಿಕರ ಸಂಖ್ಯೆ 1 ಲಕ್ಷಕ್ಕೂ ಕಡಿಮೆಗೆ ಇಳಿದಿತ್ತು. ಇನ್ನೇನು ಮೆಟ್ರೋ ಸಹ ನಷ್ಟದ ಸುಳಿಗೆ ಸಿಲುಕಿ ಹೋಗುತ್ತೆ ಅನ್ನೋವಾಗ್ಲೇ ಮತ್ತೆ ಮೇಲೆದ್ದು ನಿಂತಿದೆ. ಸದ್ಯ ಐಟಿ ಬಿಟಿ ಕಂಪ್ಲೀಟಾಗಿ ವರ್ಕ್ ಫ್ರಂ ಹೋಂ ಎಂಡ್ ಮಾಡಿಲ್ಲ. ಒಂದು ವೇಳೆ ಐಟಿ ಕ್ಷೇತ್ರ ಪೂರ್ತಿ ಆರಂಭವಾಗಿದ್ದೇ ಆದ್ರೆ ಮೆಟ್ರೋ ಇನ್ನಷ್ಟು ಲಾಭ ಗಳಿಸಲಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಕೆಲ್ಸ- ಸಿಎಂಗೆ ಧನ್ಯವಾದ ಹೇಳಿದ ಪ್ರವೀಣ್ ನೆಟ್ಟಾರು ಪತ್ನಿ

    namma metro

    ಲಾಭದ ಹಳಿ:
    ನಮ್ಮ ಮೆಟ್ರೋಗೆ ಪ್ರತಿ ದಿನ 1 ಕೋಟಿ 20 ಲಕ್ಷ ರೂ.ಗೂ ಹೆಚ್ಚು ಆದಾಯ ಬರುತ್ತಿದ್ದು, ಈ ಪೈಕಿ 1 ಕೋಟಿ ರೂ. ಪ್ರತಿ ದಿನ ಖರ್ಚಾಗುತ್ತಿದೆ. ಉಳಿದ 20 ಲಕ್ಷ ರೂ. ಅಧಿಕ ಮೊತ್ತ ನಮ್ಮ ಮೆಟ್ರೋಗೆ ಲಾಭವಾಗುತ್ತಿದೆ. ತಿಂಗಳಿಗೆ 36 ಕೋಟಿ ರೂ. ಆದಾಯ ಬರುತ್ತಿದ್ದು, 6 ಕೋಟಿ ಲಾಭವಾಗುತ್ತಿದೆ. ಪ್ರತಿ ನಿತ್ಯ ಸರಾಸರಿ 5 ಲಕ್ಷ ಜನರಿಂದ ಮೆಟ್ರೋ ಬಳಕೆಯಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಕಡಿಮೆ ದರಕ್ಕೆ ಖರೀದಿಸಿ ದುಬಾರಿ ಬೆಲೆಗೆ ಖಾಸಗಿ ಆಸ್ಪತ್ರೆಗಳಿಗೆ ಪಂಜಾಬ್ ಸರ್ಕಾರದಿಂದಲೇ ಲಸಿಕೆ ಮಾರಾಟ

    ಕಡಿಮೆ ದರಕ್ಕೆ ಖರೀದಿಸಿ ದುಬಾರಿ ಬೆಲೆಗೆ ಖಾಸಗಿ ಆಸ್ಪತ್ರೆಗಳಿಗೆ ಪಂಜಾಬ್ ಸರ್ಕಾರದಿಂದಲೇ ಲಸಿಕೆ ಮಾರಾಟ

    – ಸಿಎಂ ಅಮರೀಂದರ್ ಸರ್ಕಾರದ ನಡೆಗೆ ಟೀಕೆ
    – ತನ್ನ ನಡೆಯನ್ನು ಸಮರ್ಥಿಸಿಕೊಂಡ ಸರ್ಕಾರ

    ನವದೆಹಲಿ: ಕೇಂದ್ರ ಸರ್ಕಾರ ಸರಿಯಾಗಿ ಲಸಿಕೆ ವಿತರಣೆ ಮಾಡುತ್ತಿಲ್ಲ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಕಾಂಗ್ರೆಸ್ ದೂರುತ್ತಿದೆ. ಆದರೆ ಕಾಂಗ್ರೆಸ್ ಆಡಳಿತ ಇರುವ ಪಂಜಾಬ್ ಕಡಿಮೆ ದರದಲ್ಲಿ ಲಸಿಕೆ ಖರೀದಿಸಿ ಅದನ್ನು ದುಬಾರಿ ಬೆಲೆಗೆ ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡುತ್ತಿರುವ ವಿಷಯ ಈಗ ವಿವಾದಕ್ಕೆ ಕಾರಣವಾಗಿದೆ.

    ಹೌದು. ಸಿಎಂ ಅಮರೀಂದರ್ ನೇತೃತ್ವದ ಸರ್ಕಾರ ಇತ್ತೀಚೆಗೆ ಹೈದರಾಬಾದ್‍ನಲ್ಲಿರುವ ಭಾರತ್ ಬಯೋಟೆಕ್ ಕಂಪನಿಯಿಂದ 1 ಲಕ್ಷ ಡೋಸ್ ಲಸಿಕೆಯನ್ನು 600 ರೂ.ನಂತೆ ಖರೀದಿಸಿದೆ. ಖರೀದಿಸಿದ ಲಸಿಕೆಯನ್ನು ಜನರಿಗೆ ಉಚಿತವಾಗಿ ನೀಡುವ ಬದಲು ಕನಿಷ್ಠ 20 ಸಾವಿರ ಡೋಸ್‍ಗಳನ್ನು ಖಾಸಗಿ ಆಸ್ಪತ್ರೆಗಳಿಗೆ 1,060 ರೂ.ನಂತೆ ಮಾರಾಟ ಮಾಡಿದೆ.

    ಸರ್ಕಾರ ಒಂದು ಲಸಿಕೆಯನ್ನು ಮಾರಾಟ ಮಾಡಿ 660 ರೂ. ಲಾಭ ಮಾಡಿದರೆ ಖಾಸಗಿ ಆಸ್ಪತ್ರೆಗಳು ಈ ಲಸಿಕೆಯನ್ನು 1,560 ರೂ.ಗೆ ಮಾರಾಟ ಮಾಡುತ್ತಿವೆ. ಈ ಮೂಲಕ 500 ರೂ. ಲಾಭ ಮಾಡುತ್ತಿವೆ. ಈಗ ಈ ವಿಚಾರ ಬಿಜೆಪಿಗೆ ಸಿಕ್ಕಿದ್ದೆ ತಡ ಭಾರೀ ಟೀಕೆ ಮಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಆರಂಭಿಸಿದೆ. ಇದನ್ನೂ ಓದಿ: ಜೂನ್‍ನಲ್ಲಿ ಕರ್ನಾಟಕಕ್ಕೆ ಬರಲಿದೆ 58.71 ಲಕ್ಷ ಲಸಿಕೆ – ಕೇಂದ್ರ, ರಾಜ್ಯದ ಪಾಲು ಎಷ್ಟು?

    ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಟ್ವೀಟ್ ಮಾಡಿ, ಕೇಂದ್ರ ಸರ್ಕಾರ ಉತ್ಪಾದಕರಿಂದ ಲಸಿಕೆಯನ್ನು ಖರೀದಿಸಿ 400 ರೂ.ಗೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದೆ. ಆದರೆ ಪಂಜಾಬ್ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಇದನ್ನು 1,060 ರೂ.ಗೆ ಮಾರಾಟ ಮಾಡಿದರೆ, ಖಾಸಗಿ ಆಸ್ಪತ್ರೆಗಳು ಈ ಲಸಿಕೆಯನ್ನು 1,560 ರೂ.ಗೆ ಮಾರಾಟ ಮಾಡುತ್ತಿದೆ. ಉಚಿತವಾಗಿ ನೀಡಬೇಬೇಕಾದ ಲಸಿಕೆಯನ್ನು 3,120 ರೂ. ನೀಡುತ್ತಿದೆ. ಇದುವೇ ಕಾಂಗ್ರೆಸ್ ಪಕ್ಷದ ನೆಚ್ಚಿನ “ಎರಡಕ್ಕೆ ನಾಲ್ಕು ಪಾಲಿಸಿ” ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

    ಸರ್ಕಾರ ಹೇಳೋದು ಏನು?
    ಈ ವಿಚಾರಕ್ಕೆ ಪಂಜಾಬ್ ಸರ್ಕಾರ ಲಸಿಕೆಯ ನೋಡಲ್ ಅಧಿಕಾರಿ ವಿಕಾಸ್ ಗಾರ್ಗ್ ಪ್ರತಿಕ್ರಿಯಿಸಿ, ಲಸಿಕೆ ಸಾಮಾಜಿಕ ಹೊಣೆಗಾರಿಕಾ ನಿಧಿ ಹೆಸರಿನಲ್ಲಿ ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆದಿದ್ದೇವೆ. ಖಾಸಗಿ ಆಸ್ಪತ್ರೆಗಳು ಈ ನಿಧಿಯಲ್ಲಿ ಹಣವನ್ನು ಠೇವಣಿ ಇಡುತ್ತವೆ. ಲಸಿಕೆ ಮಾರಾಟದಿಂದ ಬಂದ ಹಣವನ್ನು ಈ ಖಾತೆಗೆ ಹಾಕಿ ಮತ್ತೆ ಹೊಸ ಲಸಿಕೆ ಖರೀದಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜುಲೈ ಮಧ್ಯ, ಆಗಸ್ಟ್ ಆರಂಭದಲ್ಲಿ ದಿನಕ್ಕೆ 1 ಕೋಟಿ ಲಸಿಕೆ ಲಭ್ಯ – ಕೇಂದ್ರ

    ಪಂಜಾಬ್ ಸರ್ಕಾರದ ಈ ನೀತಿಗೆ ಈಗ ಭಾರೀ ಟೀಕೆಗೆ ಬಂದಿದೆ. ಸರ್ಕಾರ ಜನರಿಗೆ ಉಚಿತವಾಗಿ ಲಸಿಕೆಯನ್ನು ನೀಡಬೇಕು. ಆದರೆ ಇಲ್ಲಿ ಖಾಸಗಿ ಆಸ್ಪತ್ರೆಗಳಿಗೆ ನೆರವಾಗಲು ಈ ರೀತಿಯ ನಿಧಿಯನ್ನು ಸ್ಥಾಪನೆ ಮಾಡಿ ಲಾಭ ಮಾಡಲು ಮುಂದಾಗಿರುವುದು ಸರಿಯಲ್ಲ. ಖಾಸಗಿ ಆಸ್ಪತ್ರೆಗಳು ಉತ್ಪಾದಕರಿಂದ ನೇರವಾಗಿ ಲಸಿಕೆ ಖರೀದಿ ಮಾಡಬೇಕೇ ಹೊರತು ಸರ್ಕಾರದ ಮೂಲಕ ಖರೀದಿ ಮಾಡುವುದು ಸರಿಯಲ್ಲ ಎಂದು ಪಟಿಯಾಲದ ಆಪ್ ನಾಯಕ ಡಾ. ಬಲ್ಬೀರ್ ಸಿಂಗ್ ಟೀಕಿಸಿದ್ದಾರೆ.

    ಕಾಂಗ್ರೆಸ್ ವಿರುದ್ಧ ಟೀಕೆ ಮುಂದುವರಿಸಿದ ಅನುರಾಗ್ ಠಾಕೂರ್ 11.50 ಲಕ್ಷ ಲಸಿಕೆ ವ್ಯರ್ಥ ಮಾಡಿದ ವಿಚಾರನ್ನು ಉಲ್ಲೇಖಿಸಿ, ಪಂಜಾಬ್ ಸರ್ಕಾರಕ್ಕಿಂತ ರಾಜಸ್ಥಾನ ಸರ್ಕಾರ ಎರಡು ಹೆಜ್ಜೆ ಮುಂದಿದೆ. ಸಾವಿರಾರು ಲಸಿಕೆಗಳು ಕಸದ ತೊಟ್ಟಿಗೆ ಸೇರಿದೆ. ಈ ಮೂಲಕ ಕಾಂಗ್ರೆಸ್ ಜನರ ನಂಬಿಕೆಯನ್ನು ಕಸದ ತೊಟ್ಟಿಗೆ ಎಸೆದಿದೆ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

  • ಖರೀದಿಸಿದ ದರದಲ್ಲೇ RSSನಿಂದ ತರಕಾರಿ ಮಾರಾಟ

    ಖರೀದಿಸಿದ ದರದಲ್ಲೇ RSSನಿಂದ ತರಕಾರಿ ಮಾರಾಟ

    – ಮನೆಬಾಗಿಲಿಗೆ ತರಕಾರಿ ಹಂಚಿಕೆ

    ಚಿಕ್ಕಮಗಳೂರು: ಜಿಲ್ಲೆಯ ಆರ್‌ಎಸ್‌ಎಸ್ ಸಂಚಾಲಿತ ಸೇವಾಭಾರತಿ ವತಿಯಿಂದ ಪ್ರತಿ ದಿನ 12 ಲಗೇಜ್ ಆಟೋಗಳಲ್ಲಿ ಇಡೀ ಚಿಕ್ಕಮಗಳೂರು ನಗರಕ್ಕೆ  ತರಕಾರಿ ಹಂಚುತ್ತಿದ್ದು, ಯಾವುದೇ ಲಾಭ ಪಡೆಯದೆ ಎಪಿಎಂಸಿ ಹಾಗೂ ರೈತರ ಬಳಿ ಖರೀದಿಸಿದ ದರಕ್ಕೆ ಮನೆ ಬಾಗಿಲಿಗೆ ತಲುಪಿಸುತ್ತಿದೆ.

    ಕೊರೊನಾ ಆತಂಕದಿಂದ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಒಂದೆಡೆ ಪೊಲೀಸರ ಭಯ, ಮತ್ತೊಂದೆಡೆ ಕೊರೊನಾದ ಆತಂಕ. ಇನ್ನೊಂದೆಡೆ ಇದನ್ನೇ ಲಾಭವಾಗಿಸಿಕೊಂಡ ಕೆಲ ವ್ಯಾಪಾರಿಗಳು ಬೇಕಾಬಿಟ್ಟಿಯಾಗಿ ದರ ಹೆಚ್ಚಿಸಿ ತರಕಾರಿ ಮಾರುತ್ತಿದ್ದಾರೆ. ಅಲ್ಲದೆ ಸಾಮಾಜಿಕ ಅಂತರವನ್ನು ಸಹ ಕಾಯ್ದುಕೊಳ್ಳುತ್ತಿಲ್ಲ. ಹೀಗಾಗಿ ಜನಸಾಮಾನ್ಯರು ಮನೆಯಿಂದ ಹೊರಬರೋದಕ್ಕೂ ಹಿಂದೇಟು ಹಾಕುತ್ತಿದ್ದಾರೆ.

    ಇದನ್ನು ತಪ್ಪಿಸಲು ಆರ್‌ಎಸ್‌ಎಸ್ ಸಂಚಾಲಿತ ಸೇವಾಭಾರತಿ ತಂಡ ಜನರಿಗೆ ಸಹಾಯ ಮಾಡುತ್ತಿದ್ದು, ಕೊಂಡ ರೇಟಿಗೆ ಮನೆ ಬಾಗಿಲಿಗೆ ತರಕಾರಿ ತಲುಪಿಸುತ್ತಿದೆ. ಕೆಲ ತರಕಾರಿಗಳನ್ನು ಹೊಲಗದ್ದೆಗಳಿಗೆ ಹೋಗಿ ರೈತರಿಂದ ಖರೀದಿಸುತ್ತಾರೆ. ಮತ್ತೆ ಕೆಲವನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಖರೀದಿಸುತ್ತಿದ್ದಾರೆ. ಪ್ರತಿ ದಿನ 12 ಲಗೇಜ್ ಆಟೋಗಳಲ್ಲಿ ತರಕಾರಿ ಪೂರೈಸುತ್ತಿದ್ದು, ದಿನಕ್ಕೆ ಎರಡ್ಮೂರು ರೌಂಡ್ ಹೊಡೆದು ತರಕಾರಿ ಮಾರುತ್ತಿದ್ದಾರೆ.

    ರೈತರಿಂದ ತಂದ ಹಾಗೂ ಎಪಿಎಂಸಿ ಮಾರುಕಟ್ಟೆಯಲ್ಲಿ ಕೊಂಡ ತರಕಾರಿಯನ್ನ ಸೇವಾಭಾರತಿ ಕಾರ್ಯಕರ್ತರು ಅದೇ ರೇಟಿಗೆ ಜನರಗೆ ಮಾರುತ್ತಿದ್ದಾರೆ. ಸಂತೋಷ್ ಕೊಟ್ಯಾನ್, ಮಲ್ಲಿಕಾರ್ಜುನ್, ಶಾಮ, ರಮೇಶ್ ಗವನಹಳ್ಳಿ ನೇತೃತ್ವದ ಈ ಸೇವಾಭಾರತಿ ತಂಡದಲ್ಲಿ ಸುಮಾರು 70 ಜನ ಯುವಕರು ಕೆಲಸ ಮಾಡುತ್ತಿದ್ದು, ಚಿಕ್ಕಮಗಳೂರು ನಗರದ ಜನರಿಗೆ ಸಹಕಾರಿಗಳಾಗಿದ್ದಾರೆ. ವ್ಯಾಪಾರಿಗಳು 10-20 ರೂಪಾಯಿಗೆ ತಂದು 40-50-60 ರೂಪಾಯಿಗೆ ಮಾರುತ್ತಿದ್ದ ತರಕಾರಿಯನ್ನ ಈ ತಂಡ 10 ರೂಪಾಯಿಗೆ ತಂದು 10 ರೂಪಾಯಿಗೆ ಮಾರುತ್ತಿದೆ. ಇದರಿಂದಾಗಿ ಜನಸಾಮಾನ್ಯರಿಗೆ ಅನುಕೂಲವಾಗಿದ್ದು, ಸಂತಸ ವ್ಯಕ್ತಪಡಿಸುತ್ತಿದ್ದಾರೆ.

  • ಜೆನೆರಿಕ್ ಔಷಧಿಗಳಿಂದ ಜನಸಾಮಾನ್ಯರಿಗೆ ಬರೋಬ್ಬರಿ 2 ಸಾವಿರ ಕೋಟಿ ಲಾಭ

    ಜೆನೆರಿಕ್ ಔಷಧಿಗಳಿಂದ ಜನಸಾಮಾನ್ಯರಿಗೆ ಬರೋಬ್ಬರಿ 2 ಸಾವಿರ ಕೋಟಿ ಲಾಭ

    ನವದೆಹಲಿ: ಜೆನೆರಿಕ್ ಔಷಧಿಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದ ಬಳಿಕ ಈವರೆಗೆ ಜನಸಾಮಾನ್ಯರಿಗೆ ಬರೋಬ್ಬರಿ 2 ಸಾವಿರ ಕೋಟಿ ರೂ. ಉಳಿತಾಯವಾಗಿದೆ ಎಂದು ಮಂಗಳವಾರದಂದು ಸರ್ಕಾರ ತಿಳಿಸಿದೆ.

    ಈ ಬಗ್ಗೆ ಮಾತನಾಡಿದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು, ಬ್ರಾಂಡ್ ಅಥವಾ ಜೆನೆರಿಕ್ ಗುಂಪಿಗೆ ಸೇರುವ ನಿಗದಿತ ಔಷಧಿಗಳ ಎಲ್ಲಾ ತಯಾರಕರು ತಮ್ಮ ಉತ್ಪನ್ನಗಳನ್ನು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್‍ಪಿಪಿಎ) ನಿಗದಿಪಡಿಸಿದ ಸೀಲಿಂಗ್ ಬೆಲೆಯಲ್ಲಿ ಮಾರಾಟ ಮಾಡಬೇಕಾಗುತ್ತದೆ. ಇದರೊಂದಿಗೆ ಸ್ಥಳೀಯ ತೆರಿಗೆಗಳು ಕೂಡ ಔಷಧಿಗಳ ಮೇಲೆ ಅನ್ವಯವಾಗುತ್ತವೆ ಎಂದು ತಿಳಿಸಿದರು.

    ಸರ್ಕಾರ ಹೃದಯ ಸಂಬಂಧಿ ಕಾಯಿಲೆಗಳಿಗೆ ಉಪಯುಕ್ತವಾಗುವ 1000 ಔಷಧಗಳ ಬೆಲೆ ಕಡಿತಗೊಳಿಸಿ ನಿರ್ದಿಷ್ಟ ದರ ನಿಗದಿಪಡಿಸಿದೆ. ಇದರಿಂದ ಜನೌಷಧ ಮಳಿಗೆಗಳಲ್ಲಿ ಸಿಗುವ ಜೆನೆರಿಕ್ ಔಷಧಗಳಿಂದ ಜನರಿಗೆ 2 ಸಾವಿರ ಕೋಟಿ ರೂಪಾಯಿಯಷ್ಟು ಉಳಿತಾಯವಾಗಿದೆ. ಅಲ್ಲದೆ ಈ ಸಂಬಂಧ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಮನ್ಸುಕ್ ಮಾಂಡವಿಯ ಅವರು ಲೋಕಸಭೆಯಲ್ಲಿ ಪ್ರಶ್ನಾವಳಿ ವೇಳೆ ಮಾಹಿತಿ ನೀಡಿದರು.

    ಪ್ರಧಾನಮಂತ್ರಿ ಜನೌಷಧ ಮಳಿಗೆಗಳಲ್ಲಿ ಜೆನೆರಿಕ್ ಔಷಧಿಗಳು ಇತರೇ ಬ್ರಾಂಡ್ ಔಷಧಿಗಳಿಂತ 50-90ಶೇ. ಕಡಿಮೆ ಬೆಲೆಗೆ ಗ್ರಾಹಕರಿಗೆ ಲಭ್ಯವಾಗುತ್ತಿದೆ. ಹೀಗಾಗಿ ಸರ್ಕಾರ ಪ್ರಧಾನಮಂತ್ರಿ ಜನೌಷಧ ಮಳಿಗೆಗಳಲ್ಲಿ ಇವುಗಳನ್ನು ಹೆಚ್ಚು ಮಾಡಲು ಯೋಚಿಸುತ್ತಿದೆ. ಇದರಿಂದ ಇನ್ನೂ ಅನೇಕ ಜನರಿಗೆ ಸಹಾಯವಾಗುತ್ತದೆ ಎಂದರು.

    ಅಲ್ಲದೆ ಕಳೆದ 5 ವರ್ಷಗಳಲ್ಲಿ ಸುಮಾರು 5, 028 ಪ್ರಧಾನಮಂತ್ರಿ ಜನೌಷಧ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಪ್ರಸ್ತುತ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನ(ಪಿಎಂಬಿಜೆಪಿ)ಯ ಉತ್ಪನ್ನ ಪಟ್ಟಿಯಲ್ಲಿ 900 ಔಷಧಿಗಳು ಮತ್ತು 154 ಶಸ್ತ್ರಚಿಕಿತ್ಸೆಗೆ ಬಳಕೆಯಾಗುವ ವಸ್ತುಗಳು ಒಳಗೊಂಡಿದೆ. ಅವುಗಳಲ್ಲಿ 714 ಔಷಧಿಗಳು ಮತ್ತು 53 ಶಸ್ತ್ರಚಿಕಿತ್ಸೆಗೆ ಬಳಸುವ ವಸ್ತುಗಳು ಜನೌಷಧ ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ಸಚಿವರು ಹೇಳಿದರು.

  • ಪ್ರತಿ ದಿನ ಬರೋಬ್ಬರಿ 20 ಕೋಟಿ ಗಳಿಸುತ್ತೆ ಪಬ್‍ಜಿ!

    ಪ್ರತಿ ದಿನ ಬರೋಬ್ಬರಿ 20 ಕೋಟಿ ಗಳಿಸುತ್ತೆ ಪಬ್‍ಜಿ!

    ನವದೆಹಲಿ: ಸದ್ಯ ಎಲ್ಲಡೆ ಸುದ್ದಿಯಲ್ಲಿರುವ ಹೆಸರಾಂತ ಗೇಮ್ ಪಬ್‍ಜಿ, ಈ ಯುದ್ಧಭೂಮಿಯ ಗೇಮ್ ಕಂಡುಹಿಡಿದಿರುವ ಕಂಪನಿ ದಿನಕ್ಕೆ ಬರೋಬ್ಬರಿ 20 ಕೋಟಿ ರೂ. ಲಾಭ ಪಡೆಯುತ್ತಿದೆ ಎಂದು ಸೂಪರ್ ಡಾಟಾ ತಿಳಿಸಿದೆ.

    ಹೌದು, ಇತ್ತೀಚಿಗೆ ಯುವ ಪೀಳಿಗೆಯವರಲ್ಲಿ ಸಖತ್ ಕ್ರೇಜ್ ಹುಟ್ಟಿಸಿರೋ ಗೇಮ್ ಅಂದ್ರೆ ಪಬ್‍ಜಿ. ಈ ಗೇಮ್ ಆಡುವವರು ಎಷ್ಟು ಲಾಭ ಪಡೆದಿದ್ದಾರೋ ಗೊತ್ತಿಲ್ಲ. ಆದ್ರೆ ಯುವ ಪೀಳಿಗೆ ಪ್ರತಿದಿನ ಈ ಗೇಮ್ ಆಡುತ್ತಿರುವುದರಿಂದ ಕಂಪನಿಗೆ ಮಾತ್ರ ಸಖತ್ತಾಗಿ ಲಾಭವಾಗುತ್ತಿದೆ. ಎಲ್ಲೆಡೆ ಪಬ್‍ಜಿ ಗೇಮ್ ಮೂಡಿಸಿರುವ ಕ್ರೇಜ್‍ನಿಂದ್ ಕಂಪನಿ ಮಾತ್ರ ತನ್ನ ಖಜಾನೆಯನ್ನು ಆರಾಮಾಗಿ ತುಂಬಿಸಿಕೊಳ್ಳುತ್ತಿದೆ ಅಂದರೆ ತಪ್ಪಾಗಲ್ಲ. ಯಾಕೆಂದರೇ ಪಬ್‍ಜಿ ಗೇಮ್ ಕಂಪನಿಗೆ ತಂದು ಕೊಟ್ಟ ಲಾಭ ಅಷ್ಟಿದೆ. ಏನಿಲ್ಲಾ ಅಂದರೂ ಪ್ರತಿ ದಿನ ಪಬ್‍ಜಿ ಗೇಮ್ 20 ಕೋಟಿ ರೂ. ಗಳಿಕೆ ಮಾಡುತ್ತಿದೆ.

    ಸೂಪರ್ ಡಾಟಾದ ಪ್ರಕಾರ, 2018ರಲ್ಲಿ ಪಬ್‍ಜಿ ಗೇಮ್ ಕಂಪನಿ ಬರೋಬ್ಬರಿ 7 ಸಾವಿರ ಕೋಟಿ ರೂ. ವಾರ್ಷಿಕ ಆದಾಯ ಗಳಿಸಿತ್ತು. ಅಂದರೆ ದಿನಕ್ಕೆ ಸರಿಸುಮಾರು 20 ಕೋಟಿ ರೂ. ಅಲ್ಲದೆ 2018ರ ನವೆಂಬರ್ ಒಂದೇ ತಿಂಗಳಲ್ಲಿ ಪಬ್‍ಜಿಯಿಂದ ಕಂಪನಿ 32.5 ಮಿಲಿಯಲ್ ಡಾಲರ್(230 ಕೋಟಿ ರೂ.) ಲಾಭ ಗಳಿಸಿತ್ತು. ಅಂದಿನಿಂದ ಪಬ್‍ಜಿ ಕಂಪನಿಗೆ ದಿನಕ್ಕೆ ಕನಿಷ್ಠ 28 ಕೋಟಿ ರೂ. ಆದಾಯ ಬರುತ್ತಿದೆ. ಅಂದರೆ ಪ್ರತಿ ಗಂಟೆಗೆ 1 ಕೋಟಿಗೂ ಅಧಿಕ ಹಣವನ್ನು ಕಂಪನಿ ಸಲೀಸಾಗಿ ಗಳಿಸುತ್ತಿದೆ.

    ಏನಿದು ಪಬ್ ಜಿ?
    ಪಬ್ ಜಿ ಎನ್ನುವುದು ಒಂದು ಬ್ಯಾಟಲ್ ಫೀಲ್ಡ್ ಗೇಮ್ (ಯುದ್ಧ ಭೂಮಿ ಆಟ). ಈ ಆಟದ ಸಂಪೂರ್ಣ ಭೂಪಟವನ್ನು ಆಟಗಾರಿಗೆ ಮೊದಲು ತೋರಿಸಲಾಗುತ್ತದೆ. ಬಳಿಕ ಆಟಗಾರರು ತಮಗೆ ಬೇಕಾದ ಪ್ರದೇಶವನ್ನು ಆಯ್ದುಕೊಂಡು ಆ ಪ್ರದೇಶಕ್ಕೆ ವಿಮಾನದಿಂದ ಕೆಳಗೆ ಹಾರಿ ಮನೆಗಳತ್ತ ಓಡ್ತಾರೆ. ಆಟಗಾರರಿದ್ದ ಪ್ರದೇಶದಲ್ಲಿ ಸಿಕ್ಕ ಶಸ್ತ್ರಾಸ್ತ್ರಗಳನ್ನು, ಮೆಡಿಕಲ್ ಕಿಟ್‍ಗಳನ್ನು, ಯುದ್ಧಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಆಯ್ದುಕೊಂಡು ಮುಂದೆ ಸಾಗುತ್ತಾರೆ. ಆಟಗಾರರು ಇಳಿದ ಪ್ರದೇಶದ ಸುತ್ತ ವೃತ್ತವೊಂದು ಸಣ್ಣದಾಗುತ್ತೆ. ಆಗ ಅಲ್ಲಿದ್ದ ನೂರಾರು ಜನರ ಜೊತೆ ಹೋರಾಡಿ ಉಳಿದರೇ ಗೆದ್ದಂತೆ, ಮೃತಪಟ್ಟರೆ ಸೋತಂತೆ. ಈ ಆಟದ ವಿಶೇಷ ಏನೆಂದರೆ ಸ್ನೇಹಿತರ ಜೊತೆ ಸೇರಿ ಆಡಬಹುದು.

    ಸದ್ಯ ಗುಜರಾತ್‍ನಲ್ಲಿ ಪಬ್‍ಜಿ ಗೇಮ್ ಬ್ಯಾನ್ ಮಾಡಲಾಗಿದ್ದು, ಅಲ್ಲಿ ಈ ಗೇಮ್ ಆಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೂ ಕೂಡ ಪಬ್‍ಜಿ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಈ ಗೇಮ್ ಆಡುವವವರ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತಾಗಿ ಕಡಿಮೆಯಾಗುತ್ತಿಲ್ಲ.

  • ನಷ್ಟ ಸರಿದೂಗಿಸಿಕೊಳ್ಳಲು ಆ್ಯಪಲ್ ಕಂಪನಿಯ ಹೊಸ ಪ್ಲಾನ್

    ನಷ್ಟ ಸರಿದೂಗಿಸಿಕೊಳ್ಳಲು ಆ್ಯಪಲ್ ಕಂಪನಿಯ ಹೊಸ ಪ್ಲಾನ್

    ನವದೆಹಲಿ: ಕಳೆದ ಒಂದು ವರ್ಷದಲ್ಲಿ ಭಾರತ ಮತ್ತು ಚೀನಾಗಳಲ್ಲಿ ಐ-ಫೋನ್ ಮಾರುಕಟ್ಟೆ ಕುಸಿತ ಕಾಣುತ್ತಿದೆ. ಈ ಸಂಬಂಧ ಕಂಪನಿ ಸಹ ತನ್ನ ಉತ್ಪನ್ನಗಳಲ್ಲಿ ಬದಲಾವಣೆ ಸೇರಿದಂತೆ ಹಲವು ಮಾರುಕಟ್ಟೆ ತಂತ್ರಗಳ ಬಳಕೆಗೆ ಮುಂದಾಗಿದೆ. ಈಗಾಗಲೇ ಐ-ಫೋನ್ ಚೀನಾದಲ್ಲಿ ತನ್ನ ಉತ್ಪನ್ನ ಖರೀದಿದಾರರಿಗೆ ಬಡ್ಡಿ ರಹಿತ ಸಾಲ ನೀಡಲು ಮುಂದಾಗಿದೆ.

    ಚೀನಾದ ಅಲಿಬಾಬಾ ಗ್ರೂಪ್ ಮಾಲೀಕತ್ವದ ಏಂಟ್ ಫೈನಾನಿಶಿಯಲ್ ಸರ್ವಿಸ್ ಸಹಯೋಗದಿಂದ ಸಾವಿರಾರು ಸರ್ವಿಸ್ ಸೆಂಟರ್ ಗಳ ಮೂಲಕ ಸಾಲ ನೀಡಲಾಗುತ್ತಿದೆ. ಈ ಸಾಲದಿಂದ ಐ-ಫೋನ್ ಖರೀದಿಯಲ್ಲಿ ತಿಂಗಳ ಕಂತು ಕಡಿಮೆಯಾಗಲಿದೆ. ಅತಿ ಹೆಚ್ಚು ಸ್ಮಾರ್ಟ್ ಫೋನ್ ಬಳಕೆದಾರರನ್ನು ಹೊಂದಿರುವ ಚೀನಾದಲ್ಲಿ ಒಂದು ತಿಂಗಳಿನಿಂದ ಐ-ಫೋನ್ ಮಾರುಕಟ್ಟೆ ಕುಸಿತ ಕಾಣಲಾರಂಭಿಸಿತು. ಈ ಹೊಸ ಸ್ಕೀಮ್ ನಿಂದಾಗಿ ಐ-ಫೋನ್ ಚೇತರಿಸಿಕೊಳ್ಳುತ್ತಿದೆ.

    ಐ-ಫೋನ್ ಗಾಗಿ ಬಡ್ಡಿ ರಹಿತ ಸಾಲ ಪಡೆಯಲು ಇಚ್ಛಿಸುವ ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚಿಸಕೊಳ್ಳಬೇಕೆಂದು ಚೀನಾದ ಮೂರು ದೊಡ್ಡ ಬ್ಯಾಂಕ್ ಗಳು ತಿಳಿಸಿವೆ. 12 ರಿಂದ 24 ಕಂತುಗಳಲ್ಲಿ ಗ್ರಾಹಕರು ಹಣವನ್ನು ಪಾವತಿಸಬೇಕಾಗುತ್ತದೆ.

    24 ತಿಂಗಳು ಕಂತಿನ ಸೌಲಭ್ಯ ಮಾರ್ಚ್ ತಿಂಗಳಿಗೆ ಅಂತ್ಯವಾಗಲಿದೆ. ಇನ್ನು ಐ-ಫೋನ್ ಬಳಕೆ ಮಾಡುತ್ತಿರುವ ಬಳಕೆದಾರರು ತಮ್ಮ ಹಳೆ ಫೋನ್ ಬದಲಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಹಳೆ ಫೋನ್ ಗಳನ್ನು ಬದಲಿಸಿಕೊಳ್ಳುವ ಗ್ರಾಹಕರಿಗೆ ಹೆಚ್ಚುವರಿ ರಿಯಾಯ್ತಿಯನ್ನು ಆ್ಯಪಲ್ ಕಂಪನಿ ನೀಡಲು ಮುಂದಾಗಿದೆ. ಈ ವಿಶೇಷ ಆಫರ್ ನಿಂದ 2018ರ ಡಿಸೆಂಬರ್ ನಲ್ಲಾದ ನಷ್ಟ ಸರಿದೂಗಿಸಿಕೊಳ್ಳಲು ಕಂಪನಿ ಚಿಂತಿಸಿದೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಖರೀದಿಸಿದ್ದು 6 ಸಾವಿರಕ್ಕೆ ಮಾರಿದ್ದು 25 ಲಕ್ಷಕ್ಕೆ!

    ಖರೀದಿಸಿದ್ದು 6 ಸಾವಿರಕ್ಕೆ ಮಾರಿದ್ದು 25 ಲಕ್ಷಕ್ಕೆ!

    ಆಂಸ್ಟರ್ಡ್ಯಾಮ್: ನೆದರ್ಲ್ಯಾಂಡ್ ವ್ಯಕ್ತಿಯೊಬ್ಬ ಕೇವಲ 75 ಯೂರೋ (6 ಸಾವಿರ ಸಾವಿರ)ಕ್ಕೆ ಚಿತ್ರಕಲೆಯನ್ನು ಖರೀದಿಸಿ ಅದನ್ನೂ ಬರೋಬ್ಬರಿ 30,000 ಯೂರೋ(24 ಲಕ್ಷ ರೂ.) ಮಾರಾಟ ಮಾಡಿದ್ದಾರೆ.

    ಹೆಂಕ್ ಲಾರ್ಮನ್ಸ್ ಎಂಬವರು ಥ್ರಿಫ್ಟ್ ಅಂಗಡಿಯಲ್ಲಿ 75 ಯೂರೋಗಳನ್ನು ಕೊಟ್ಟು ಒಂದು ಪೇಂಟಿಂಗ್ ಖರೀದಿಸಿದ್ದರು. ಬಳಿಕ ಅದನ್ನು ಲಾರ್ಮನ್ಸ್ ತಜ್ಞರ ಬಳಿ ತೆಗೆದುಕೊಂಡು ಹೋಗಿದ್ದಾರೆ. ಆಗ ತಜ್ಞರು ಆ ಪೇಂಟಿಂಗ್ ಪರಿಶೀಲನೆ ಮಾಡಿ ಅದನ್ನು ಡಚ್ ಕಲಾವಿದ ಜೋಹಾನ್ ಆರ್ಟ್ಸ್ ರಚಿಸಿದ್ದಾರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ಪೇಂಟಿಂಗ್ ತುಂಬಾ ಮೌಲ್ಯವಾದುದ್ದು ಎಂದು ತಿಳಿಸಿದ್ದಾರೆ.

    ಪೇಂಟಿಂಗ್ ಮೌಲ್ಯವನ್ನು ತಿಳಿದ ಲಾರ್ಮನ್ಸ್ ಮತ್ತೆ ಅದೇ ಅಂಗಡಿಗೆ ಹೋಗಿದ್ದು, ಹರಾಜಿನ ಮೂಲಕ ಮಾರಾಟ ಮಾಡಿದ್ದಾರೆ. ಆಗ ಹರಾಜಿನಲ್ಲಿ ಈ ಪೇಂಟಿಂಗ್ 30,000 ಯುರೋಗೆ (25 ಲಕ್ಷ) ಮಾರಾಟವಾಗಿದೆ. ಈ ಪೇಂಟಿಂಗ್ ನಲ್ಲಿ ಮರ ಗಿಡಗಳಿದ್ದು, ಬಣ್ಣ ಬಣ್ಣದ ಚುಕ್ಕೆಗಳು, ಹೂವುಗಳು ಕಾಣಿಸುತ್ತದೆ.

    ನೆದರ್ಲ್ಯಾಂಡ್ ನಲ್ಲಿ ವ್ಯಾನ್ ಗಾಗ್, ಟೂರೋಪ್, ವಿಲ್ಲ್ ಬ್ರೀಫ್ ಮತ್ತು ಆರ್ಟ್ಸ್ ಸೇರಿದಂತೆ ಕೆಲವರು ಈ ಚಿತ್ರಕಲೆಯಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಈ ಪೇಂಟಿಂಗ್ ಗೆ 25 ಲಕ್ಷ ರೂ ಕೊಟ್ಟು ಡಚ್ ಸಂಗ್ರಾಹಕರೊಬ್ಬರು ಖರೀದಿಸಿದ್ದಾರೆ. ಈ ಪೇಂಟಿಂಗ್ ಮಾರಾಟ ಮಾಡಿದ ಲಾರ್ಮನ್ಸ್ ಗೆ ಊಹಿಸಲಾಗದಷ್ಟು ಲಾಭ ಬಂದಿದ್ದು, ಸಂತೋಷ ಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜಿಯೋ ನಿವ್ವಳ ಲಾಭ ಏರಿಕೆ: ಪ್ರತಿ ಬಳಕೆದಾರರನಿಂದ ಎಷ್ಟು ಆದಾಯ ಬಂದಿದೆ?

    ಜಿಯೋ ನಿವ್ವಳ ಲಾಭ ಏರಿಕೆ: ಪ್ರತಿ ಬಳಕೆದಾರರನಿಂದ ಎಷ್ಟು ಆದಾಯ ಬಂದಿದೆ?

    ಮುಂಬೈ: ದೇಶದ ನಂ.1 ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಪ್ರತಿ ಬಳಕೆದಾರನಿಂದ ಸೆಪ್ಟೆಂಬರ್ ಅಂತ್ಯಕ್ಕೆ ಮುಕ್ತಾಯಗೊಂಡ ಎರಡನೇ ತ್ರೈಮಾಸಿಕದಲ್ಲಿ 131.7 ರೂ. ಆದಾಯ ಗಳಿಸಿದೆ.

    ಬಾಂಬೆ ಶೇರು ಮಾರುಕಟ್ಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಜಿಯೋ ಶೇ.11 ರಷ್ಟು ಪ್ರಗತಿ ಸಾಧಿಸಿದ್ದು, 681 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಒಟ್ಟು ಆದಾಯದಲ್ಲಿ ಶೇ.13.9 ಏರಿಕೆಯಾಗಿದ್ದು 9,240 ಕೋಟಿ ರೂ. ಗಳಿಸಿದೆ. ಕಾರ್ಯಾಚರಣಾ ಲಾಭ ಶೇ.13.5 ಏರಿಕೆಯಾಗಿದ್ದು 3,563 ಕೋಟಿ ರೂ. ಗಳಿಸಿದೆ.

    ಪ್ರತಿ ಬಳಕೆದಾರನಿಂದ 131.7 ರೂ. ಆದಾಯ ಬಂದಿದ್ದು, ಕಳೆದ 4 ತ್ರೈಮಾಸಿಕಕ್ಕೆ ಹೋಲಿಸಿದರೆ ಕಡಿಮೆ ಆದಾಯ ಬಂದಿದೆ. ಜಿಯೋ ಫೋನ್ ಮೂಲಕ ಗ್ರಾಹಕರನ್ನು ಹೆಚ್ಚಿಸಲು ಮುಂದಾಗಿದ್ದರ ಜೊತೆಗೆ ಕಡಿಮೆ ಬೆಲೆಗೆ ಡೇಟಾ ಪ್ಯಾಕ್ ನೀಡಿದ ಪರಿಣಾಮ ಆದಾಯ ಕುಸಿದಿದೆ. ಇದರ ಜೊತೆಗೆ 501 ರೂ. ನೀಡಿ ಹೊಸ ಜಿಯೋ ಫೋನ್ ಖರೀದಿಸಲು ನೀಡಿದ ಆಫರ್ ನಿಂದಾಗಿಯೂ ಈ ಆದಾಯದಲ್ಲಿ ಕುಸಿತ ಕಂಡಿದೆ.

    ಈ ಹಿಂದಿನ ನಾಲ್ಕು ತ್ರೈಮಾಸಿಕದಲ್ಲಿ ಜಿಯೋ ಅನುಕ್ರಮವಾಗಿ 156 ರೂ., 154 ರೂ., 137 ರೂ., 135 ರೂ., ಸೆಪ್ಟೆಂಬರ್‍ನಲ್ಲಿ ಮುಕ್ತಾಯವಾದ ಎರಡನೇ ತ್ರೈಮಾಸಿಕದಲ್ಲಿ ಪ್ರತಿ ಬಳಕೆದಾರನಿಂದ 131.7 ರೂ. ಆದಾಯಗಳಿಸಿದೆ.

    ಎರಡನೇ ತ್ರೈಮಾಸಿಕದಲ್ಲಿ ಒಟ್ಟು 3 ಕೋಟಿ ಗ್ರಾಹಕರನ್ನು ಹೆಚ್ಚಿಸಿಕೊಂಡಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ 25.2 ಕೋಟಿ ಜಿಯೋ ಗ್ರಾಹಕರಿದ್ದಾರೆ. ಫೀಚರ್ ಫೋನ್‍ಗಳ ಪೈಕಿ ಈಗ 4ಜಿ ಜಿಯೋ ಫೋನ್2 ಅತಿ ಹೆಚ್ಚು ಮಾರಾಟವಾಗುತ್ತಿದ್ದು, ಈ ಸೆಟ್ ವಾಟ್ಸಪ್, ಫೇಸ್‍ಬುಕ್, ಯೂ ಟ್ಯೂಬ್ ಅಪ್ಲಿಕೇಶನ್ ಗಳನ್ನೂ ಸಪೋರ್ಟ್ ಮಾಡುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೊಸ ವರ್ಷಕ್ಕೆ ಪ್ರಯಾಣಿಕರಿಗೆ ಶಾಕ್ ಕೊಟ್ಟ ನಮ್ಮ ಮೆಟ್ರೋ

    ಹೊಸ ವರ್ಷಕ್ಕೆ ಪ್ರಯಾಣಿಕರಿಗೆ ಶಾಕ್ ಕೊಟ್ಟ ನಮ್ಮ ಮೆಟ್ರೋ

    ಬೆಂಗಳೂರು: ಹಬ್ಬ ಹರಿದಿನಗಳಲ್ಲಿ ಖಾಸಗಿ ಬಸ್ ಗಳು, ಕೆಎಸ್‍ಆರ್ ಟಿಸಿ ಪ್ರಯಾಣಿಕರಿಗೆ ದುಬಾರಿ ಟಿಕೆಟ್ ವಿಧಿಸುವುದು ನಿಮಗೆ ಗೊತ್ತೇ ಇದೆ. ಈಗ ಇದೇ ತಂತ್ರವನ್ನು ಬಿಎಂಆರ್ ಸಿಎಲ್ ಮಾಡಿದ್ದು ಹೊಸ ವರ್ಷದಂದು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿ ಲಾಭ ಮಾಡಲು ಮುಂದಾಗಿದೆ.

    ಹೌದು, ಪ್ರತಿದಿನ ಬೆಳಗ್ಗೆ 5 ರಿಂದ ರಾತ್ರಿ 11ರ ವರೆಗೆ ಕಾರ್ಯನಿರ್ವಹಿಸುವ ಮೆಟ್ರೋ ಡಿಸೆಂಬರ್ 31ರ ರಾತ್ರಿ ಬೆಳಗ್ಗಿನ ಜಾವ 2 ಗಂಟೆಯವರೆಗೆ ಸಾರ್ವಜನಿಕರಿಗೆ ಸಂಚಾರ ವ್ಯವಸ್ಥೆ ನೀಡುವುದಾಗಿ ಹೇಳಿದೆ. ಆದರೆ ಡಿಸೆಂಬರ್ 31ರ ರಾತ್ರಿ 11 ಗಂಟೆಯ ನಂತರ ಟ್ರಿನಿಟಿ, ಎಂಜಿ ರೋಡ್, ಮತ್ತು ಕಬ್ಬನ್ ಪಾರ್ಕ್ ನಿಲ್ದಾಣದಿಂದ ಪ್ರಯಾಣಿಕರು ಯಾವುದೇ ನಿಲ್ದಾಣಕ್ಕೆ ಪ್ರಯಾಣಿಸಿದರೂ 50 ರೂ. ದರವನ್ನು ನಿಗದಿ ಪಡಿಸಿದೆ.

    ಡಿಸೆಂಬರ್ 31ರ ರಾತ್ರಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ ಹೀಗಾಗಿ ಚಿಲ್ಲರೆ ನೀಡಲು ನಮಗೆ ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ 50 ರೂ. ದರವನ್ನು ನಿಗದಿ ಮಾಡಲಾಗಿದೆ ಎಂದು ಅಧಿಕಾರಿಗಳು ತಮ್ಮ ನಡೆಯ ಬಗ್ಗೆ ಸಮರ್ಥನೆ ನೀಡಿದ್ದಾರೆ.

    ಸಾರ್ವಜನಿಕರಿಂದ ವಿರೋಧ:
    ಸಾರ್ವಜನಿಕರ ಸೇವೆ ನೀಡಬೇಕಾದ ಮೆಟ್ರೋ ಚಿಲ್ಲರೆ ನೆಪದಲ್ಲಿ ಈ ರೀತಿ ದರ ಏರಿಸಿ ಲಾಭಕ್ಕೆ ಮುಂದಾಗಿರುವುದು ಎಷ್ಟು ಸರಿ? ನಾವು ಒಂದು ಟಿಕೆಟ್ ಗೆ ಎಷ್ಟು ದರ ಆಗುತ್ತದೋ ಅಷ್ಟೇ ಹಣವನ್ನು ನೀಡುತ್ತೇವೆ. ನಮಗೆ ಚಿಲ್ಲರೆ ನೀಡುವುದೇ ಬೇಡ. ಈಗ ಹೇಗೆ ಟಿಕೆಟ್ ನೀಡುತ್ತಿರೋ ಅಷ್ಟೇ ದರಲ್ಲಿ ಟಿಕೆಟ್ ನೀಡಬಹುದಲ್ಲವೇ ಎಂದು ಪ್ರಶ್ನೆ ಮಾಡಿ ಮೆಟ್ರೋ ದರ ಏರಿಕೆಯನ್ನು ಟೀಕಿಸುತ್ತಿದ್ದಾರೆ.

    https://www.youtube.com/watch?v=xDbb1xHdrZ4