Tag: Professor

  • ಮೈಸೂರು ವಿವಿ ಪ್ರಾಧ್ಯಾಪಕನಿಂದ ಸಂಶೋಧನಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

    ಮೈಸೂರು ವಿವಿ ಪ್ರಾಧ್ಯಾಪಕನಿಂದ ಸಂಶೋಧನಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

    ಮೈಸೂರು: ಪ್ರಾಧ್ಯಾಪಕನೇ ಸಂಶೋಧನಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದ್ದು, ಕಾಮುಕ ಪ್ರಾಧ್ಯಾಪಕ ಪತ್ನಿ ಎದುರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

    ಈ ಮೂಲಕ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮತ್ತೊಂದು ಕಾಮಕಾಂಡ ಬಯಲಾಗಿದ್ದು, ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೋ.ರಾಮಚಂದ್ರ ವಿರುದ್ಧ ಆರೋಪ ಕೇಳಿ ಬಂದಿದೆ. ಸಂತ್ರಸ್ತೆ ಜಯಲಕ್ಷ್ಮಿಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇದನ್ನೂ ಓದಿ: ಫೋನ್‍ನಲ್ಲಿ ಪರಿಚಯವಾಗಿ ಪ್ರೀತಿಸಿ ಮದುವೆ – ವರ್ಷ ಆಗುವುದರೊಳಗೆ ಯುವತಿ ಆತ್ಮಹತ್ಯೆ!

    ಸಂತ್ರಸ್ತೆ ರಾಮಚಂದ್ರ ಬಳಿ ಪಿಎಚ್ ಡಿ ಮಾರ್ಗದರ್ಶನ ಪಡೆಯುತ್ತಿದ್ದಳು. ಹೀಗಾಗಿ ರಾಮಚಂದ್ರ ವಿದ್ಯಾರ್ಥಿನಿಯನ್ನು ಮನೆಗೆ ಕರೆಸಿಕೊಂಡಿದ್ದ, ಈ ವೇಳೆ ಸಂತ್ರಸ್ತೆ ಕೂಗಾಟ, ಚೀರಾಟ ನಡೆಸಿದ್ದಾಳೆ. ಇದೇ ಸಂದರ್ಭದಲ್ಲಿ ಪ್ರಾಧ್ಯಾಪಕ ರಾಮಚಂದ್ರ ಪತ್ನಿ ಲೋಲಾಕ್ಷಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಸಂತ್ರಸ್ತ ಯುವತಿ ಹಾಗೂ ಪತಿಯನ್ನು ಠಾಣೆಗೆ ಕರೆತಂದಿದ್ದಾರೆ.

    ರಾಮಚಂದ್ರ ಪತ್ನಿ ಲೋಲಾಕ್ಷಿ ಕೂಡ ವಿವಿಯಲ್ಲಿ ಪ್ರಾಧ್ಯಾಪಕಿಯಾಗಿದ್ದು, ಇದೀಗ ಪೊಲೀಸರು ಆರೋಪಿ ರಾಮಚಂದ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

  • ಅನುಚಿತ ವರ್ತನೆ- ಬುದ್ಧಿ ಹೇಳಿದ್ದಕ್ಕೆ ಪ್ರಾಧ್ಯಾಪಕರ ಮೇಲೇ ಗುಂಡು ಹಾರಿಸಿದ ವಿದ್ಯಾರ್ಥಿ

    ಅನುಚಿತ ವರ್ತನೆ- ಬುದ್ಧಿ ಹೇಳಿದ್ದಕ್ಕೆ ಪ್ರಾಧ್ಯಾಪಕರ ಮೇಲೇ ಗುಂಡು ಹಾರಿಸಿದ ವಿದ್ಯಾರ್ಥಿ

    ಲಕ್ನೋ: ಇತರೆ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕೆ ಪ್ರಾಧ್ಯಾಪಕರು ಗದರಿಸಿದ್ದು, ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿ ತನ್ನ ಮೂವರು ಸ್ನೇಹಿತರೊಂದಿಗೆ ಪ್ರಾಧ್ಯಾಕರ ಮೇಲೆಯೇ ಗುಂಡು ಹಾರಿಸಿದ್ದಾರೆ.

    ಉತ್ತರ ಪ್ರದೇಶದ ಗಾಜಿಯಾಬಾದ್‍ನ ಸರಸ್ವತಿ ವಿಹಾರದ ಕಾಲೋನಿಯ ಖಾಸಗಿ ಶಾಲೆಯ ಬಳಿ ಮಧ್ಯಾಹ್ನ 1.30ರ ಸುಮಾರಿಗೆ ಘಟನೆ ನಡೆದಿದ್ದು, ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಸಚಿನ್ ತ್ಯಾಗಿ ಅವರು ತರಗತಿ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಗುಂಡು ಹಾರಿಸಲಾಗಿದೆ.

    ಗ್ರಾಮಾಂತರ ಎಸ್‍ಪಿ ಇರಾಜ್ ರಾಜಾ ಈ ಕುರಿತು ಮಾಹಿತಿ ನೀಡಿದ್ದು, ವಿದ್ಯಾರ್ಥಿ ತರಗತಿಯಲ್ಲಿ ಇತರ ಸಹಪಾಠೀಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಈ ಬಗ್ಗೆ ಪ್ರಾಧ್ಯಾಪಕರು ಎಚ್ಚರಿಕೆ ನೀಡಿದ್ದಾರೆ. ಇದರಿಂದಾಗಿ ವಿದ್ಯಾರ್ಥಿ ದ್ವೇಷ ಬೆಳೆಸಿಕೊಂಡಿದ್ದು, ಈ ಅವಮಾನಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ನಿರ್ಧರಿಸಿದ್ದಾನೆ. ಇದಕ್ಕಾಗಿ ಪ್ಲಾನ್ ಮಾಡಿದ್ದು, ತನ್ನ ಮೂವರು ಸಹಪಾಠಿಗಳೊಂದಿಗೆ ಸೇರಿ ಪ್ರಾಧ್ಯಾಪಕರ ಮೇಲೆಯೇ ಗುಂಡು ಹಾರಿಸಿದ್ದಾರೆ. ಅದೃಷ್ಟವಶಾತ್ ಪ್ರಾಧ್ಯಾಪಕರು ಪ್ರಾಣಾಪಾಯದಿಂದ ಪಾರಾಗಿದ್ದು, ಗಂಭೀರ ಗಾಯಗೊಂಡಿದ್ದಾರೆ.

    ಹತ್ತಿರದ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯದಿಂದ ಗುರುತಿಸಲಾಗಿದ್ದು, ವಿಚಾರಣೆಗೆ ಹಾಜರುಪಡಿಸುವಂತೆ ವಿದ್ಯಾರ್ಥಿಗಳ ಪೋಷಕರಿಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಅವರ ಮೊಬೈಲ್ ಫೋನ್‍ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ವಿರುದ್ಧ ಪ್ರಾಧ್ಯಾಪಕರು ದೂರು ನೀಡಿದ್ದು, ಎಫ್‍ಐಆರ್ ದಾಖಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

  • ಬೆಂಗಳೂರು ಯೂನಿವರ್ಸಿಟಿ ನಿವೃತ್ತ ಪ್ರೊಫೆಸರ್ ನೇಣಿಗೆ ಶರಣು

    ಬೆಂಗಳೂರು ಯೂನಿವರ್ಸಿಟಿ ನಿವೃತ್ತ ಪ್ರೊಫೆಸರ್ ನೇಣಿಗೆ ಶರಣು

    ಬೆಂಗಳೂರು: ನಿವೃತ್ತ ಪ್ರೊಫೆಸರೊಬ್ಬರು ನೇಣಿಗೆ ಶರಣಾದ ಘಟನೆ ಸಿಲಿಕಾನ್ ಸಿಟಿಯ ಮೈಕೋ ಲೇಔಟ್ ನಲ್ಲಿ ನಡೆದಿದೆ.

    ಅಶೋಕ್ ಕುಮಾರ್ ನೇಣಿಗೆ ಶರಣಾದ ರಿಟೈರ್ಡ್ ಪ್ರೊಫೆಸರ್. ಮೈಕೋ ಲೇಔಟ್ ನ ಕೆಎಎಸ್ ಕಾಲೋನಿಯಲ್ಲಿ ವಾಸವಾಗಿದ್ದ ಇವರು ಬೆಂಗಳೂರು ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡಿದ್ದರು. ಇಂದು ಮೈಕೋಲೇಔಟ್ ಠಾಣಾ ವ್ಯಾಪ್ತಿಯ ಸಿಲ್ಕ್ ಬೋರ್ಡ್ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

    ಮೂಲತಃ ಶಿವಮೊಗ್ಗದವರಾಗಿರುವ ಅಶೋಕ್, ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ನಂತರ ಬೆಂಗಳೂರಿನ ಯ್ಯೂನಿರ್ವಸಿಟಿಯಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ಅಶೋಕ್, ರಾತ್ರಿ ಹನ್ನೆರಡು ಗಂಟೆವರೆಗೂ ಪತ್ನಿ ಜೊತೆಗೆ ಮಾತಾಡುತ್ತಿದ್ದರು. ಆದರೆ ಬೆಳಗ್ಗಿನ ಜಾವ 7 ಗಂಟೆ ಸುಮಾರಿಗೆ ರೂಮ್ ಬಾಗಿಲು ತೆರೆದಾಗ ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ.

    ಮೈಕೋಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿರುವ ಅಶೋಕ್. ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದಾರೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಂಟ್ ಜಾನ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಸಂಜೆ ವೇಳೆ ಬೆಂಗಳೂರಿನಲ್ಲೇ ಅಂತ್ಯಕ್ರಿಯೆ ಮಾಡಲು ತಿರ್ಮಾನ ಮಾಡಲಾಗಿದೆ.

    ಅಶೋಕ್ ಅವರಿಗೆ ಅನಾರೋಗ್ಯ, ಹಣಕಾಸಿನ ಯಾವುದೇ ಸಮಸ್ಯೆ ಇರಲಿಲ್ಲ. ಹೀಗಾಗಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಈ ಸಂಬಂಧ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಗಿದೆ.

  • ಮಸೀದಿಯಲ್ಲಿ ಅಡಗಿಕೊಂಡಿದ್ದ ಪ್ರೊಫೆಸರ್ ಸೇರಿದಂತೆ 30 ಮಂದಿ ತಬ್ಲಿಘಿಗಳು ಅರೆಸ್ಟ್

    ಮಸೀದಿಯಲ್ಲಿ ಅಡಗಿಕೊಂಡಿದ್ದ ಪ್ರೊಫೆಸರ್ ಸೇರಿದಂತೆ 30 ಮಂದಿ ತಬ್ಲಿಘಿಗಳು ಅರೆಸ್ಟ್

    – ದೆಹಲಿ ಸಭೆಗೆ ಹಾಜರಾಗಿದ್ದ ಆರೋಪಿಗಳು
    – ಬಂಧಿತರಲ್ಲಿ 16 ವಿದೇಶಿಯರು

    ಲಕ್ನೋ: ದೆಹಲಿಯಲ್ಲಿ ಕಳೆದ ತಿಂಗಳು ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿ ಮಸೀದಿಯಲ್ಲಿ ಬಚ್ಚಿಟ್ಟುಕೊಂಡಿದ್ದ ಅಲಹಾಬಾದ್ ವಿಶ್ವವಿದ್ಯಾಲಯದ ಪ್ರೊಫೆಸರ್, 16 ವಿದೇಶಿಯರನ್ನು ಸೇರಿದಂತೆ ಒಟ್ಟು 30 ಮಂದಿಯನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

    ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರೊಫೆಸರ್ ಮೊಹಮ್ಮದ್ ಶಾಹಿದ್, ಲಾಕ್‍ಡೌನ್ ಘೋಷಿಸಿದ ನಂತರವೂ ಪ್ರಯಾಗರಾಜ್‍ನ ಮಸೀದಿಯಲ್ಲಿ ತಮ್ಮ `ಅಕ್ರಮ’ ವಾಸ್ತವ್ಯವನ್ನು ಏರ್ಪಡಿಸಿದ್ದರು. ಈ ಮೂಲಕ ವಿದೇಶಿಗರಿಗೆ ಉದ್ದೇಶಪೂರ್ವಕವಾಗಿ ಸಹಾಯ ಮಾಡಿದ್ದರು. ಹೀಗಾಗಿ ಅವರನ್ನು ಪ್ರಯಾಗರಾಜ್ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

    ತಬ್ಲಿಘಿ ಕಾರ್ಯಕ್ರಮಕ್ಕೆ ಹಾಜರಾದ ಜಮಾತಿಗಳ ಉಪಸ್ಥಿತಿಯನ್ನು ಜಿಲ್ಲಾಡಳಿತಕ್ಕೆ ತಿಳಿಸಿಲ್ಲ ಎಂಬ ಆರೋಪ ಪ್ರೊ. ಮೊಹಮ್ಮದ್ ಶಾಹಿದ್ ಮೇಲಿದೆ. ಬಂಧಿತ 16 ವಿದೇಶಿ ಪ್ರಜೆಗಳಲ್ಲಿ ಒಂಬತ್ತು ಮಂದಿ ಥೈಲ್ಯಾಂಡ್ ಮೂಲದವರು ಮತ್ತು ಆರು ಜನರು ಇಂಡೋನೇಷ್ಯಾದವರು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಅಷ್ಟೇ ಅಲ್ಲದೆ ಬಂಧಿತ ಆರೋಪಿಗಳಲ್ಲಿ ಕೇರಳ ಮತ್ತು ಪಶ್ಚಿಮ ಬಂಗಾಳದ ತಲಾ ಒಬ್ಬರಿದ್ದಾರೆ.

    ಪೊಲೀಸ್ ಮೂಲಗಳ ಪ್ರಕಾರ, ಎಲ್ಲಾ ಜಮಾತಿಗಳು ಶಹಗಂಜ್‍ನ ಅಬ್ದುಲ್ಲಾ ಮಸೀದಿ ಮತ್ತು ಪ್ರಯಾಗರಾಜ್‍ನ ಕರೇಲಿ ಪ್ರದೇಶದ ಹೇರಾ ಮಸೀದಿಯೊಳಗೆ ಅಡಗಿಕೊಂಡಿದ್ದರು. ಹೆಚ್ಚಿನ ತನಿಖೆಯಲ್ಲಿ ಎಲ್ಲಾ ವಿದೇಶಿಯರು, ವಿಶೇಷವಾಗಿ ಇಂಡೋನೇಷಿಯನ್ನರು ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಭೇಟಿ ನೀಡಿದ್ದರೂ ಧಾರ್ಮಿಕ ಉಪದೇಶದಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.

    ಆರೋಪಿಗಳಿಗೆ ಪ್ರಯಾಗರಾಜ್‍ಗೆ ಭೇಟಿ ನೀಡಲು ಅನುಮತಿ ಇರಲಿಲ್ಲ. ಆದರೂ ಅವರು ನಗರಕ್ಕೆ ಭೇಟಿ ನೀಡಿದ್ದಷ್ಟೇ ಅಲ್ಲದೆ ಮಸೀದಿಯಲ್ಲಿ ಅಡಗಿಕೊಂಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಈ ಸಂಬಂಧ ಶಹಗಂಜ್ ಪೊಲೀಸ್ ಠಾಣೆಯಲ್ಲಿ ಎಲ್ಲಾ ವಿದೇಶಿಯರು ಮತ್ತು ಪ್ರೊಫೆಸರ್ ಶಾಹಿದ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಈವರೆಗೆ ಪ್ರಯಾಗರಾಜ್‍ನಲ್ಲಿ ಕೇವಲ ಒಂದು ಕೋವಿಡ್-19 ಸೋಂಕಿತರಿದ್ದು, ಚಿಕಿತ್ಸೆಯ ನಂತರ ರೋಗಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಆದರೆ ಉತ್ತರ ಪ್ರದೇಶದಲ್ಲಿ ಶೇಕಡಾ 79ರಷ್ಟು ಕೊರೊನಾ ವೈರಸ್ ರೋಗಿಗಳು ತಬ್ಲಿಘಿ ಜಮಾತ್‍ಗೆ ಸಂಬಂಧಿಸಿದವರೇ ಆಗಿದ್ದಾರೆ.

  • ಪ್ರೊಫೆಸರ್ ಕೆಲಸ ಬಿಟ್ಟು ಫಿಶ್ ಫ್ರೈ ಮಾರಾಟ- ತಿಂಗಳಿಗೆ 1 ಲಕ್ಷ ರೂ. ಸಂಪಾದನೆ

    ಪ್ರೊಫೆಸರ್ ಕೆಲಸ ಬಿಟ್ಟು ಫಿಶ್ ಫ್ರೈ ಮಾರಾಟ- ತಿಂಗಳಿಗೆ 1 ಲಕ್ಷ ರೂ. ಸಂಪಾದನೆ

    – ಮೆಕ್ಯಾನಿಕಲ್ ಎಂಜಿನಿಯರಿಂಗ್‍ನಲ್ಲಿ ಪದವಿ

    ಚೆನ್ನೈ: ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬರು ಪ್ರೊಫೆಸರ್ ಕೆಲಸ ಬಿಟ್ಟು ಫಿಶ್ ಫ್ರೈ ಮಾರಾಟ ಮಾಡಿ ತಿಂಗಳಿಗೆ ಒಂದು ಲಕ್ಷ ರೂ. ಸಂಪಾದಿಸುತ್ತಿದ್ದಾರೆ.

    27 ವರ್ಷದ ಮೋಹನ್ ಕುಮಾರ್ ತಮಿಳುನಾಡಿನ ಕರೂರ್ ನಿವಾಸಿಯಾಗಿದ್ದು, ಅವರ ಕುಟುಂಬಸ್ಥರು ಮೀನಿನ ವ್ಯವಹಾರ ನಡೆಸುತ್ತಿದ್ದು, ಅದಕ್ಕಾಗಿ ಮೋಹನ್ ತಮ್ಮ ಪ್ರೊಫೆಸರ್ ಕೆಲಸವನ್ನು ಬಿಟ್ಟಿದ್ದಾರೆ. ಮೋಹನ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದು, ಕರೂರ್ ಖಾಸಗಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು.

    ಪಲಾನಿವೇಲ್ ಹಾಗೂ ಸೆಲ್ವಿ ರಾಣಿ, ಮೋಹನ್ ಅವರ ತಂದೆ-ತಾಯಿ ಆಗಿದ್ದು, ಗಾಂಧಿಗ್ರಾಮದಲ್ಲಿ ಫಿಶ್ ಫ್ರೈ ಅಂಗಡಿ ಇಟ್ಟುಕೊಂಡಿದ್ದಾರೆ. ಮೋಹನ್ ಅವರಿಗೆ ಪ್ರೊಫೆಸರ್ ಕೆಲಸ ಬದಲು ಮೀನು ಫೈ ಮಾಡಿ ಮಾರಾಟ ಮಾಡುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು.

    ಈ ಬಗ್ಗೆ ಮೋಹನ್ ಮಾತನಾಡಿ, ಕಾಲೇಜು ಮುಗಿದ ನಂತರ ನಾನು ನನ್ನ ಪೋಷಕರಿಗೆ ಸಹಾಯ ಮಾಡುತ್ತಿದ್ದೆ. ಆದರೆ ನನ್ನ ಪೋಷಕರಿಗೆ ಅದು ಇಷ್ಟವಿರಲ್ಲ. ಅವರಿಗೆ ನಾನು ಮೀನು ಮಾರಾಟ ಮಾಡುವುದು ಇಷ್ಟವಿಲ್ಲ. ನಾನು ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ತುಂಬಾ ಆಸೆ ಇಟ್ಟುಕೊಂಡಿದ್ದರು. ಅಲ್ಲದೆ ಎಂಜಿನಿಯರಿಂಗ್ ನಂತರ ನಾನು ಮೀನು ಮಾರಾಟ ಮಾಡುವುದನ್ನು ನೋಡಿ ಹಲವರು ನನಗೆ ಹುಚ್ಚ ಎಂದು ಹೇಳಿದ್ದರು. ಆದರೆ ನಾನು ನನ್ನ ಪ್ರೊಫೆಸರ್ ವೃತ್ತಿಗಿಂತ ಈ ಕೆಲಸವನ್ನು ತುಂಬಾ ಇಷ್ಟಪಡುತ್ತೇನೆ ಎಂದರು.

    ನನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಈ ಅಂಗಡಿಯನ್ನು ಮುಚ್ಚಬೇಕಾಯಿತು. ಆಗ ಈ ವ್ಯವಹಾರದಲ್ಲಿ ಬಂದ ಲಭ ಅದನ್ನು ನಿವಾರಿಸಲು ಸಹಾಯ ಮಾಡಿತು. ನಾನು ಈ ಕೆಲಸದಲ್ಲಿ ತುಂಬಾನೇ ಕಷ್ಟಪಟ್ಟಿದ್ದೇನೆ. ನನ್ನ ಕುಟುಂಬಸ್ಥರು ಕೂಡ ನನಗೆ ಸಹಾಯ ಮಾಡಿಲ್ಲ. ನಾನು ಮೀನುಗಳನ್ನು ಕರೂರ್‍ನ ಹಲವು ಹೋಟೆಲ್‍ಗಳಿಗೆ ಹಾಗೂ ಸಣ್ಣ ಅಂಗಡಿಗಳಿಗೆ ಎರಡು ಮೂರು ಟನ್ ಮೀನು ಹಾಗೂ ಮಾಂಸವನ್ನು ಒದಗಿಸಿ ತಿಂಗಳಿಗೆ ಸುಮಾರು 1 ಲಕ್ಷ ರೂ. ಸಂಪಾದಿಸುತ್ತೇನೆ ಎಂದು ಮೋಹನ್ ತಿಳಿಸಿದರು.

  • ಸುಳ್ಳು ದಾಖಲೆ ನೀಡಿ ಪ್ರೊಫೆಸರ್ ಹುದ್ದೆ ಗಿಟ್ಟಿಸಿಕೊಂಡ ಡಾಕ್ಟರ್?

    ಸುಳ್ಳು ದಾಖಲೆ ನೀಡಿ ಪ್ರೊಫೆಸರ್ ಹುದ್ದೆ ಗಿಟ್ಟಿಸಿಕೊಂಡ ಡಾಕ್ಟರ್?

    ಹಾಸನ: ಸುಳ್ಳು ದಾಖಲೆ ನೀಡಿ ಹಾಸನ ಮೆಡಿಕಲ್ ಕಾಲೇಜಿನಲ್ಲಿ (ಹಿಮ್ಸ್) ಡಾಕ್ಟರ್ ರವಿಕುಮಾರ್ ಪ್ರೊಫೆಸರ್ ಹುದ್ದೆ ಗಿಟ್ಟಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ನ್ಯಾಯಾಲಯ ವಿಚಾರಣೆಗೆ ಆದೇಶ ನೀಡಿದೆ.

    ಡಾಕ್ಟರ್ ರವೀಂದ್ರ ಸುಳ್ಳು ಸೇವಾನುಭವ ದಾಖಲೆ ಪತ್ರ ನೀಡಿ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರೊಫೆಸರ್ ಹುದ್ದೆ ಗಿಟ್ಟಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಹಾಸನದ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ವಕೀಲ ಧರ್ಮೇಂದ್ರ ನೇತೃತ್ವದಲ್ಲಿ ಖಾಸಗಿ ಕೇಸ್ ಹಾಕಲಾಗಿತ್ತು. ಹೀಗಾಗಿ ನ್ಯಾಯಾಲಯ ಡಾಕ್ಟರ್ ರವಿಕುಮಾರ್ ವಿರುದ್ಧ ವಿಚಾರಣೆಗೆ ಆದೇಶ ನೀಡಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಕೀಲ ಧರ್ಮೇಂದ್ರ, ಸುಳ್ಳು ದಾಖಲೆ ಪತ್ರ ನೀಡಿರುವ ಡಾಕ್ಟರ್ ರವೀಂದ್ರ ವಿರುದ್ಧ ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ಮೋಸ ಮಾಡಿದ್ದಾರೆ ಎಂದು ಕೋರ್ಟ್ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿಕೊಂಡಿದೆ. ಒಂದು ವೇಳೆ ಆರೋಪ ಸಾಬೀತಾದರೆ ಡಾಕ್ಟರ್ ರವಿಕುಮಾರ್ ತಮ್ಮ ಹುದ್ದೆ ಕಳೆದುಕೊಂಡು, ಏಳು ವರ್ಷದವರೆಗೆ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ ಎಂದು ಹೇಳಿದರು.

  • ಬಟ್ಟೆಯಂತೆ ಧರಿಸಿರುವ ವಿಶ್ವದ ಮೊದಲ ಉದ್ಯಾನ- ಇದರಲ್ಲಿದೆ 22 ಬಗೆಯ ತರಕಾರಿ ಬೆಳೆ

    ಬಟ್ಟೆಯಂತೆ ಧರಿಸಿರುವ ವಿಶ್ವದ ಮೊದಲ ಉದ್ಯಾನ- ಇದರಲ್ಲಿದೆ 22 ಬಗೆಯ ತರಕಾರಿ ಬೆಳೆ

    ಕ್ಯಾಲಿಫೋರ್ನಿಯಾ: ಬಟ್ಟೆಯಂತೆ ಧರಿಸಿರುವ ವಿಶ್ವದ ಮೊದಲ ಉದ್ಯಾನವನ್ನು ಪರಿಚಯಿಸಲಾಗಿದ್ದು, ಇದರಲ್ಲಿದೆ 22 ಬಗೆಯ ತರಕಾರಿ ಬೆಳೆಯಲಾಗಿದೆ.

    ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅರುಸಿಯಕ್ ಗೇಬ್ರಿಯಲ್ ಅವರು ಉದ್ಯಾನವನ್ನು ವಿನ್ಯಾಸಗೊಳಿಸಿದ್ದು, ಅದನ್ನು ಬಟ್ಟೆಯಂತೆ ಧರಿಸಬಹುದಾಗಿದೆ. ಇದನ್ನು ವಿಶ್ವದ ಮೊದಲ ಬಟ್ಟೆಯಂತೆ ಧರಿಸುವ ಮೊದಲ ಉದ್ಯಾನ ಎಂದು ಕರೆಯಲಾಗುತ್ತಿದೆ.

    ನಿಮ್ಮ ಆಹಾರವನ್ನು ನೀವೇ ಬೆಳೆಸಿಕೊಳ್ಳಿ ಎಂದು ಪ್ರಾಧ್ಯಾಪಕ, ಉದ್ಯಾನದ ವಿನ್ಯಾಸಕಾರ ಗೇಬ್ರಿಯಲ್ ಹೇಳುತ್ತಾರೆ. ಈ ಉದ್ಯಾನದಲ್ಲಿ ಗೇಬ್ರಿಯಲ್ ಅವರು ಎಲೆಕೋಸು, ಕ್ಯಾರೆಟ್, ಸ್ಟ್ರಾಬೆರಿ, ಕಡಲೆಕಾಯಿ ಸೇರಿದಂತೆ 22ಕ್ಕೂ ಹೆಚ್ಚು ಬಗೆಯ ತರಕಾರಿಗಳನ್ನು ಬೆಳೆದಿದ್ದು, ಅದನ್ನು ಬಟ್ಟೆಯಾಗಿ ಧರಿಸುತ್ತಾರೆ. ಈ ಎಲ್ಲ ಸಸಿಗಳು ಒಟ್ಟಿಗೆ ಬೆಳೆದಾಗ, ಅವು ಬಟ್ಟೆಯನ್ನು ವರ್ಣಮಯವಾಗಿಸುತ್ತವೆ. ಮತ್ತೊಂದು ವಿಶೇಷವೆಂದರೆ ಗೇಬ್ರಿಯಲ್ ಅವರು ಈ ಸಸ್ಯಗಳನ್ನು ತಮ್ಮ ಮೂತ್ರದಿಂದ ನೀರಾವರಿ ಮಾಡಿಕೊಂಡಿದ್ದಾರೆ. ಹೀಗಾಗಿ ಇದಕ್ಕೆ ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ.

    ಗೇಬ್ರಿಯಲ್ ಅವರ ಈ ಯೋಜನೆಯು ಫ್ರೆಂಚ್ ಸಸ್ಯವಿಜ್ಞಾನಿ ಪ್ಯಾಟ್ರಿಕ್ ಬ್ಲಾಂಕ್ ಅವರ ಸಸ್ಯೋದ್ಯಾನಗಳಿಂದ ಬಲವಾಗಿ ಪ್ರಭಾವಿತವಾಗಿದೆ ಎಂದು ಹೇಳಲಾಗುತ್ತಿದೆ. ಬ್ಲಾಂಕ್ ಅವರು ಸ್ಥಳಾವಕಾಶದ ಕೊರತೆಯಿಂದ ಲಂಬ ಉದ್ಯಾನವನ್ನು ಬೆಳೆಸಿದ್ದರು.

    ಹೇಗಿದೆ ಉದ್ಯಾನ?:
    ಗೇಬ್ರಿಯಲ್ ಅವರು ಬಟ್ಟೆಯ ಪದರವನ್ನು ತಯಾರಿಸಿ, ಅದರ ಮೇಲೆ ಸಸ್ಯಗಳ ಬೀಜಗಳು ಅಂಟಿಸಿದ್ದಾರೆ. ಒದ್ದೆಯಾದ ಬಟ್ಟೆಯ ಪದರದಲ್ಲಿರುವ ಬೀಜಗಳು ಎರಡು ವಾರಗಳ ಬಳಿಕ ಮೊಳಕೆಯೊಡೆಯುತ್ತವೆ. ನಂತರ ಬೆಳೆಯಲು ಆರಂಭಿಸುತ್ತದೆ. ಜೊತೆಗೆ ಮೂತ್ರದಿಂದ ಉಂಟಾಗುವ ತೇವಾಂಶವು ಸಸ್ಯಗಳ ಬೆಳೆವಣಿಗೆಗೆ ಸಹಾಯ ಮಾಡುತ್ತದೆ. ಈ ಮೂಲಕ ಬೆಳೆದು ಒಂದು ಹಂತಕ್ಕೆ ಬಂದ ಸಸ್ಯಗಳು ಹಣ್ಣು, ತರಕಾರಿ ಕೊಡುತ್ತವೆ.

  • ಎಂಗೇಜ್ ಆಗಿದ್ರೂ ವಿದ್ಯಾರ್ಥಿ ಜೊತೆ ಪ್ರಾಧ್ಯಾಪಕಿ ಲವ್ವಿಡವ್ವಿ – ಲಾಡ್ಜ್‌ನಲ್ಲಿ ಪ್ರೇಮಿಗಳು ಆತ್ಮಹತ್ಯೆ

    ಎಂಗೇಜ್ ಆಗಿದ್ರೂ ವಿದ್ಯಾರ್ಥಿ ಜೊತೆ ಪ್ರಾಧ್ಯಾಪಕಿ ಲವ್ವಿಡವ್ವಿ – ಲಾಡ್ಜ್‌ನಲ್ಲಿ ಪ್ರೇಮಿಗಳು ಆತ್ಮಹತ್ಯೆ

    -28ರ ಮಹಿಳೆ ಸಾವು, 19ರ ವಿದ್ಯಾರ್ಥಿ ಗಂಭೀರ

    ಹೈದರಾಬಾದ್: ಮನೆಯಲ್ಲಿ ಮದುವೆಗೆ ಒಪ್ಪದ್ದಕ್ಕೆ ಪ್ರೇಮಿಗಳಿಬ್ಬರು ಲಾಡ್ಜಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗೆಳತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಪ್ರಿಯಕರನ ಸ್ಥಿತಿ ಗಂಭೀರವಾಗಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

    ಗೌತಮಿ(28) ಮೃತ ಪ್ರಾಧ್ಯಾಪಕಿ. ಈಕೆ ವಿದ್ಯಾರ್ಥಿಯಾಗಿದ್ದ ಲೋಕೇಶ್ (19) ನನ್ನು ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಮನೆಯವರು ಒಪ್ಪಿಲ್ಲವೆಂದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಏನಿದು ಪ್ರಕರಣ?
    ಮೃತ ಗೌತಮಿ ಗನ್ನವರಂ ಮಂಡಲ ತೆಂಪಲ್ಲಿ ನಿವಾಸಿಯಾಗಿದ್ದು, ಈಕೆ ಉಷಾರಾಮ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದರು. ಲೋಕೇಶ್ ಅದೇ ಕಾಲೇಜಿನಲ್ಲಿ ಪಾಲಿಟೆಕ್ನಿಕ್ ವ್ಯಾಸಂಗ ಮಾಡುತ್ತಿದ್ದನು. ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ಇಷ್ಟಪಟ್ಟಿದ್ದರು. ನಂತರ ತಮ್ಮ ಪ್ರೀತಿಯ ಬಗ್ಗೆ ಮನೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಆದರೆ ಇಬ್ಬರ ಮಧ್ಯೆ ವಯಸ್ಸಿನ ಅಂತರ ಇದ್ದುದ್ದರಿಂದ ಎರಡೂ ಕುಟುಂಬದವರು ಇವರ ಮದುವೆಗೆ ಒಪ್ಪಲಿಲ್ಲ.

    ಇದರಿಂದ ನೊಂದ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ನಂತರ ವಿಜಯವಾಡದ ಗಾಂಧಿನಗರದ ಜಗಪತಿ ಲಾಡ್ಜ್‌ಗೆ ಹೋಗಿ ರೂಮ್‍ ಬುಕ್ ಮಾಡಿದ್ದಾರೆ. ಹಬ್ಬಕ್ಕೆ ಶಾಪಿಂಗ್ ಮಾಡಲು ಆಗಮಿಸಿದ್ದಾಗಿ ಹೋಟೆಲ್ ಸಿಬ್ಬಂದಿಗೆ ತಿಳಿಸಿದ್ದರು. ರೂಮಿಗೆ ತೆರಳಿದ್ದ ಇಬ್ಬರು ಜ್ಯೂಸಿನಲ್ಲಿ ಕೀಟನಾಶಕ ಔಷಧಿಯನ್ನು ಬೆರೆಸಿಕೊಂಡು ಕುಡಿದಿದ್ದಾರೆ.

    ರಾತ್ರಿಯಾದರೂ ರೂಮಿನಿಂದ ಇಬ್ಬರು ಹೊರ ಬರದಿದ್ದಕ್ಕೆ ಹೋಟೆಲ್‍ನ ಸಿಬ್ಬಂದಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ್ದ ಪೊಲೀಸ್ ಸಿಬ್ಬಂದಿ ಬಾಗಿಲು ಮುರಿದು ಒಳಗೆ ಹೋಗಿ ನೋಡಿದ್ದಾರೆ. ಆಗ ಇಬ್ಬರು ವಿಷ ಸೇವಿಸಿರುವುದು ಕಂಡು ಬಂದಿದೆ. ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗೌತಮಿ ಅಷ್ಟರಲ್ಲಿಯೇ ಮೃತಪಟ್ಟಿದ್ದರು. ಇನ್ನೂ ಲೋಕೇಶ್ ಸಾವಿನಿಂದ ಪಾರಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.

    ಪ್ರಕರಣದ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೃತ ಗೌತಮಿಗೆ ಈಗಾಗಲೇ ಮನೆಯಲ್ಲಿ ಬೇರೆ ಹುಡುಗನ ಜೊತೆಗೆ ನಿಶ್ಚಿತಾರ್ಥ ಆಗಿತ್ತು. ಮುಂದಿನ ತಿಂಗಳು ಮದುವೆ ಕೂಡ ನಿಶ್ಚಯವಾಗಿತ್ತು. ಅಷ್ಟರಲ್ಲಿಯೇ ಮನೆಯಲ್ಲಿ ಪ್ರೀತಿಸಿದ ಹುಡುಗನ ಜೊತೆ ಮದುವೆಗೆ ಒಪ್ಪದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  • ಕಟ್ಟಡ ಕಾಮಗಾರಿ ಸ್ಥಳದಲ್ಲಿಯೇ ವಿದ್ಯಾರ್ಥಿಗಳಿಗೆ ಉಪನ್ಯಾಸಕರ ಪಾಠ

    ಕಟ್ಟಡ ಕಾಮಗಾರಿ ಸ್ಥಳದಲ್ಲಿಯೇ ವಿದ್ಯಾರ್ಥಿಗಳಿಗೆ ಉಪನ್ಯಾಸಕರ ಪಾಠ

    ಕೊಪ್ಪಳ: ಜಿಲ್ಲೆಯ ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜಿನ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಂಡು ಎರಡು ವರ್ಷಗಳು ಕಳೆದಿವೆ. ಆದರೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಅಲ್ಲಿಯೇ ಕುಳಿತು ವಿದ್ಯಾರ್ಥಿಗಳು ಉಪನ್ಯಾಸಕರಿಂದ ಪಾಠ ಆಲಿಸುತ್ತಿದ್ದಾರೆ. ಕೆಲ ತರಗತಿಗಳು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆಯುತ್ತಿವೆ.

    ಕಟ್ಟಡ ನಿರ್ಮಾಣಕ್ಕೆ ಎರಡು ವರ್ಷಗಳ ಹಿಂದೆಯೇ ಹಣ ಬಿಡುಗಡೆಯಾಯಿತು. ಆದರೆ ಗುತ್ತಿಗೆದಾರರು ತೋರಿದ ನಿರಾಸಕ್ತಿಯಿಂದ ಕಾಮಗಾರಿ ಬೇಗನೇ ಪೂರ್ಣಗೊಳ್ಳಲಿಲ್ಲ. ಇದರ ಪರಿಣಾಮ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಉಪನ್ಯಾಸಕರೂ ಸಹ ತೊಂದರೆ ಅನುಭವಿಸುವಂತಾಗಿದೆ.

    ಕಾಲೇಜಿನಲ್ಲಿ ಕಲಾ ವಿಭಾಗ ಒಂದೇ ಇದ್ದು, 50 ವಿದ್ಯಾರ್ಥಿಗಳು ಇದ್ದಾರೆ. ಆದರೆ ಕಟ್ಟಡವು ನಿರ್ಮಾಣ ಹಂತದಲ್ಲಿ ಇರುವ ಕಾರಣ ಕೊಠಡಿ, ಬೆಂಚ್, ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ ಇಲ್ಲ. ಕಾಯಂ ಉಪನ್ಯಾಸಕರು ಇಲ್ಲದ ಕಾರಣ ಅತಿಥಿ ಉಪನ್ಯಾಸಕರಿಂದಲೇ ಕಾಲೇಜು ನಡೆಯುತ್ತಿದೆ. ಆದರೆ ಆರು ತಿಂಗಳನಿಂದ ಸರಿಯಾಗಿ ಗೌರವಧನ ಸಿಗದ ಕಾರಣ ಅತಿಥಿ ಉಪನ್ಯಾಸಕರಿಗೆ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ.

    ಕಾಲೇಜಿನ ಅವ್ಯವಸ್ಥೆ ಮತ್ತು ಮೂಲಸೌಕರ್ಯ ಕೊರತೆ ಕುರಿತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಯಾರೂ ಸಹ ಇಚ್ಛಿಸುತ್ತಿಲ್ಲ. ಸಮಸ್ಯೆ ಆಲಿಸಲು ಮತ್ತು ಮೂಲಸೌಕರ್ಯ ಪೂರೈಸಲು ಸಹ ಯಾರೂ ಗಮನ ಹರಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ತಿಳಿಸಿದರು.

  • ನೆರೆ ನಂತ್ರ ಬರಗಾಲದ ಭಯದಲ್ಲಿ ಉಡುಪಿ ಜನತೆ

    ನೆರೆ ನಂತ್ರ ಬರಗಾಲದ ಭಯದಲ್ಲಿ ಉಡುಪಿ ಜನತೆ

    – ಪರೀಕ ಗ್ರಾಮದಲ್ಲಿ ಪ್ರಾಕೃತಿಕ ವಿಸ್ಮಯ
    – ಕಾಡಿನ ನಡುವೆ ಹೂ ಬಿಟ್ಟಿದೆ ಶ್ರೀತಾಳೆ ಮರ

    ಉಡುಪಿ: ಕಳೆದ ಮಳೆಗಾಲದಲ್ಲಿ ನೆರೆ ಬಂದು ರಾಜ್ಯದ ಬಹುಭಾಗಗಳು ಕೊಚ್ಚಿಕೊಂಡು ಹೋಗಿದೆ. ಆ ನಂತರ ಕರಾವಳಿಯಲ್ಲಿ ಬೀಸಿದ ಮೂರು ಚಂಡಮಾರುತಗಳು ಸಾಕಷ್ಟು ಸಮಸ್ಯೆ ತಂದೊಡ್ಡಿತು. ಗಾಯದ ಮೇಲೆ ಬರೆ ಎಳೆದಂತೆ ಬರಗಾಲ ಎದುರಾಗುತ್ತಾ ಎನ್ನುವ ಭಯ ಉಡುಪಿ ಜನರಲ್ಲಿ ಶುರುವಾಗಿದೆ. ಇದಕ್ಕೆ ಕಾರಣ ಕಾಡಿನ ನಡುವೆ ಹೂ ಬಿಟ್ಟಿರುವ ಶ್ರೀತಾಳೆ ಮರ.

    ಉಡುಪಿ ಜಿಲ್ಲೆಯ ಪರೀಕದಲ್ಲಿ ಪ್ರಾಕೃತಿಕ ವಿಸ್ಮಯವೊಂದು ನಡೆದಿದೆ. ಈ ವಿಸ್ಮಯ ಏನೆಂದರೆ ಖಾಲಿ ಜಾಗದಲ್ಲಿ ಆಗಸದತ್ತ ಬೆಳೆದಿರುವ ಶ್ರೀತಾಳೆ ಮರ ಹೂವು ಬಿಟ್ಟಿರುವುದು. ಶ್ರೀತಾಳೆ ಮರ ಭಾರತದಲ್ಲಿ ಕಾಣಸಿಗುವುದು ಬಲು ಅಪರೂಪ, ಅದರಲ್ಲೂ 62 ವರ್ಷದ ಮರ ಹೂವು ಬಿಟ್ಟಿರುವುದು ಇನ್ನೂ ವಿಶೇಷ. ಶ್ರೀತಾಳೆ ಮರ ಹೂವು ಬಿಡುವುದು ಬರಗಾಲದ ಸಮಯದಲ್ಲಿ ಎಂಬ ನಂಬಿಕೆಯಿದೆ. ಶ್ರೀತಾಳೆ ಹೂವು ಬಿಟ್ಟಾಗ ಬರಗಾಲವಿತ್ತೋ ಎಂಬ ಜಿಜ್ಞಾಸೆ ಜನರಲ್ಲಿದೆ. ಹಾಗಾಗಿ ಶ್ರೀತಾಳೆ ಮರ ಮೂಢನಂಬಿಕೆಗೆ ತುತ್ತಾಗಿ ಸರ್ವನಾಶವಾಗಿದೆ.

    ಶ್ರೀತಾಳೆ ಮರ ಹೂವು ಬಿಟ್ಟ ಸುದ್ದಿ ಕೇಳಿ ಪ್ರಾಚ್ಯವಸ್ತು ಸಂಶೋಧಕ ಪ್ರೊಫೆಸರ್ ಕೃಷ್ಣಯ್ಯ ಸ್ಥಳಕ್ಕೆ ದೌಡಾಯಿಸಿದ್ದಾರೆ. ಶ್ರೀತಾಳೆ ಮರದ ಬಗ್ಗೆ ಈಗಾಗಲೇ 40 ವರ್ಷಗಳಿಂದ ಅಧ್ಯಯನ ಮಾಡಿರುವ ಕೃಷ್ಣಯ್ಯ, ಮರದ ರಕ್ಷಣೆಗೆ ಮುಂದಾಗಿದ್ದಾರೆ. ಶ್ರೀ ತಾಳೆಮರದ ಗರಿ, ಓಲೆಗಳು ಅದರ ಇತಿಹಾಸವನ್ನೆಲ್ಲಾ ಸುತ್ತಮುತ್ತಲಿನ ಜನರಲ್ಲಿ ಮಾಹಿತಿ ತುಂಬಿಸುತ್ತಿದ್ದಾರೆ. ಮರ ಇರುವ ಜಮೀನಿನ ಮಾಲಕ ಜಗಜ್ಜೀವನ್ ಕುಟುಂಬದ ಮನವೊಲಿಸಿ ಮರ ಕಡಿಯದಂತೆ ವಿನಂತಿಸಿದ್ದಾರೆ. ಹೂವು ಕಾಯಿಯಾಗಲು ಎಂಟು ತಿಂಗಳು ಕಾಯಬೇಕು. 30 ಸಾವಿರದಿಂದ 3 ಲಕ್ಷದವರೆಗೂ ಈ ಮರ ಕಾಯಿಗಳನ್ನು ಉದುರಿಸುತ್ತದೆ. ಇದನ್ನು ಸಂಗ್ರಹಿಸಿ ದೇಶಾದ್ಯಂತ ಶ್ರೀತಾಳೆ ಮರ ನೆಟ್ಟು ಕಾರ್ಗಿಲ್ ಕಾಡು ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಸ್ಥಳದಲ್ಲೇ ಮಾಹಿತಿ ಕಣಜ ನಿರ್ಮಾಣ ಮಾಡುವ ಆಲೋಚನೆಯೂ ಹಾಕಲಾಗಿದೆ.

    ಈ ಬಗ್ಗೆ ಮಾತನಾಡಿದ ಕೃಷ್ಣಯ್ಯ ಅವರು, ಹಸಿರು, ಹಸಿವು ಅಕ್ಷರ ಪ್ರತೀಕ ಈ ಮರ. ಬೆಟ್ಟ-ಗುಡ್ಡಗಳು ಜಾರದಂತೆ ಈ ಮರಗಳು ಇರುತ್ತಿದ್ದವು. ಆದರೆ ಈಗ ಈ ಮರಗಳು ನಾಶವಾಗಿರುವುದರಿಂದ ಬೆಟ್ಟ-ಗುಡ್ಡಗಳು ಜಾರುತ್ತಿದೆ. ಇದು ಔಷಧಿಯ ಮರ. ಶ್ರೀರಾಮ ಚಂದ್ರ ತನ್ನ ವನವಾಸದ ಕಾಲದಲ್ಲಿ ಈ ಮರದ ಕೆಳಗೆ ವಾಸಿಸುತ್ತಿದ್ದರು ಎಂದು ಪ್ರತಿಕ್ರಿಯಿಸಿದರು.

    ಶಾಸನಗಳು, ಪುರಾಣ- ಪಾಡ್ದನಗಳು ಎಲ್ಲವೂ ಇದೇ ಮರದ ಗರಿಯಲ್ಲಿ ಸಂಗ್ರಹಿಸಲ್ಪಟ್ಟಿರುತ್ತದೆ. ಶ್ರೀರಾಮಚಂದ್ರ ಪರ್ಣಕುಟೀರ ಮಾಡಿದ್ದು ಈ ಮರದ ಎಲೆಗಳಿಂದಲೇ. ಈ ಮರದ ತಿರುಳಿನಲ್ಲಿ ಅತೀ ಹೆಚ್ಚು ಪ್ರೊಟೀನ್ ಇದೆ. ಶ್ರೀಲಂಕಾದ ರಾಷ್ಟ್ರೀಯ ಮರವನ್ನು ಭಾರತದ ಉದ್ದಗಲಕ್ಕೂ ಸಂರಕ್ಷಿಸಿ- ಹೊಸ ಗಿಡಗಳನ್ನು ಬೆಳೆಸುವ ಅಗತ್ಯತೆಯಿದೆ. ಬರಗಾಲದ ಹೆಸರಲ್ಲಿ ಶ್ರೀತಾಳೆ ಮರದ ಮಾರಣಹೋಮ ನಿಲ್ಲಿಸಬೇಕಾಗಿದೆ.