Tag: priyanka

  • ಎಲ್ಲರೆದುರು ಸಿಟ್ಟಿನಿಂದ ಬೈಯ್ಯೋದು ಎಷ್ಟು ಸರಿ – ಮಂಜು ವಿರುದ್ಧ ದಿವ್ಯಾ ಅಸಮಾಧಾನ

    ಎಲ್ಲರೆದುರು ಸಿಟ್ಟಿನಿಂದ ಬೈಯ್ಯೋದು ಎಷ್ಟು ಸರಿ – ಮಂಜು ವಿರುದ್ಧ ದಿವ್ಯಾ ಅಸಮಾಧಾನ

    ವಾರ ಬಿಗ್‍ಬಾಸ್ ಮನೆಯ ಸ್ಪರ್ಧಿಗಳಿಗೆ ಬಹಳ ಡಿಫರೆಂಟ್ ಟಾಸ್ಕ್‌ಗಳನ್ನು ನೀಡಿದ್ದಾರೆ. ಟಾಸ್ಕ್ ಆರಂಭಕ್ಕೂ ಮುನ್ನ ಮ್ಯೂಸಿಕ್ ವೊಂದನ್ನು ಪ್ಲೇ ಮಾಡಿದಾಗ ಎರಡು ತಂಡದ ಕ್ಯಾಪ್ಟನ್‍ಗಳು ಕನ್ಫೆಕ್ಷನ್ ರೂಮ್‍ಗೆ ಹೋಗಬೇಕಾಗುತ್ತದೆ.

    ಈ ಮಧ್ಯೆ ಮಂಜು ತಮ್ಮ ತಂಡದ ಸದಸ್ಯರೊಂದಿಗೆ ಚರ್ಚೆ ನಡೆಸುತ್ತಿದ್ದ ವೇಳೆ ಮ್ಯೂಸಿಕ್ ಪ್ಲೇ ಆಗುತ್ತದೆ. ಆಗ ದಿವ್ಯಾ ಸುರೇಶ್ ನಿಧಾನವಾಗಿ ಡ್ಯಾನ್ಸ್ ಮಾಡುತ್ತಾ ಬರುತ್ತಾರೆ. ಇದನ್ನು ಕಂಡ ಮಂಜು ದಿವ್ಯಾ ಸುರೇಶ್‍ಗೆ ಬೇಗ ಬಾ ಎಂದು ರೇಗುತ್ತಾರೆ. ಇದರಿಂದ ಬೇಸರಗೊಂಡ ದಿವ್ಯಾ ಸುರೇಶ್ ಪ್ರಿಯಾಂಕ ಬಳಿ, ನಾನು ನಡೆದುಕೊಂಡು ಬರಬೇಕಾದರೆ ಮ್ಯೂಸಿಕ್ ಪ್ಲೇ ಆಯಿತು. ಅದಕ್ಕೆ ನಾನು ಡ್ಯಾನ್ಸ್ ಮಾಡಿಕೊಂಡು ಬರುತ್ತಿದ್ದೆ. ಅದಕ್ಕೆ ಬೇಗ ಬಾ ಏನು ಮಾಡುತ್ತಿದ್ಯಾ ಎಂದು ರೇಗುತ್ತಾರೆ. ನನ್ನ ಮೇಲೆ ರೇಗುವ ಅವಶ್ಯಕತೆ ಏನಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ನಾವು ಫಸ್ಟ್ ಇನ್ನಿಂಗ್ಸ್‌ನಲ್ಲಿ ಹೇಗಿದ್ವಿ ಹಾಗೇ ಇರಲು ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಆಗುವುದಿಲ್ಲ ಎಂದು ಹೇಳಿದ್ದೆ ಅವನು, ಅವನು ಇರಲು ಆಗುವುದಿಲ್ಲ ಎಂದರೆ ನಾನು ಹಾಗೆಯೇ ಇರುವುದಕ್ಕೆ ಆಗುವುದಿಲ್ಲ. ನಾನು ಸುಮ್ಮನೆ ಒಬ್ಬಳೇ ಕುಳಿತುಕೊಳ್ಳಲು ಆಗುವುದಿಲ್ಲ, ನಾನು ಎಲ್ಲರ ಜೊತೆಯಲ್ಲಿ ಕೂಡ ಮಾತನಾಡಬೇಕಾಗುತ್ತದೆ, ಎಲ್ಲರ ಜೊತೆ ಬೆರೆಯಬೇಕಾಗುತ್ತದೆ. ಕೊಟ್ಟಿರುವ ಟಾಸ್ಕ್‌ಗಳನ್ನು ಮಾಡಬೇಕಾಗುತ್ತದೆ. ಸುದೀಪ್ ಸರ್ ಹೇಳಿದ್ರು, ನಾನು ಚೆನ್ನಾಗಿ ಆಟ ಆಡುತ್ತಿದ್ದೇನೆ ಅಂತ, ನಾನು ಕೂಡ ಅದನ್ನೇ ಮಾಡಬೇಕಾಗುತ್ತದೆ. ಸುಮ್ಮನೆ ನನ್ನ ಮೇಲೆ ರೇಗಾಡಿದ, ಅದರ ಅವಶ್ಯತೆ ಇರಲಿಲ್ಲ ಎಂದು ಹೇಳುತ್ತಾರೆ.

    ಅವನು ಶುಭಾ ಜೊತೆ ಬಹಳ ಕ್ಲೋಸ್ ಆಗಿದ್ದಾನೆ. ಅವನು ಕುಳಿತು ಹೋದ ಬಿನ್ ಬ್ಯಾಗ್ ಮೇಲೆ ಕುಳಿತುಕೊಳ್ಳಲು ನಾನು ಎಷ್ಟು ಯೋಚಿಸುತ್ತೇನೆ ಗೊತ್ತಾ. ನಾನು ನೀನು ಯಾಕೆ ಅಷ್ಟು ಕ್ಲೋಸ್ ಆಗಿದ್ಯಾ ಅಂತ ಒಂದು ಕಂಪ್ಲೇಟ್ ಕೂಡ ಮಾಡಿಲ್ಲ, ನಿನ್ನ ಲೈಫ್, ನೀನು ಏನು ಬೇಕಾದರೂ ಮಾಡಬಹುದು, ಹಾಗೆಯೇ ನನ್ನ ಲೈಫ್ ನಾನು ಏನು ಬೇಕಾದರೂ ಮಾಡಬಹುದು. ನಾನು ಏನು ಮಾಡಿಲ್ಲ ಆದರೂ ಎಲ್ಲರೆದುರು ಸಿಟ್ಟಿನಿಂದ ಬೈಯುವುದು ಎಷ್ಟು ಸರಿ ನಿನ್ನೆ ಕೂಡ ಹೀಗೆ ಮಾಡಿದ ಕಣ್ಣೀರಾಕಿದ್ದಾರೆ. ಇದನ್ನೂ ಓದಿ: ಶಮಂತ್ ಒಂದು ದಾರಿಯಲ್ಲಿ ನಡೆದು ಬಿಟ್ರೆ, ನಾನು ಚಾಲೆಂಜ್ ಮಾಡ್ತೇನೆ: ಚಕ್ರವರ್ತಿ

  • ಶಮಂತ್ ಮೇಲೆ ಚಪ್ಪಲಿ ಎಸೆದ ಪ್ರಶಾಂತ್ ಸಂಬರ್ಗಿ

    ಶಮಂತ್ ಮೇಲೆ ಚಪ್ಪಲಿ ಎಸೆದ ಪ್ರಶಾಂತ್ ಸಂಬರ್ಗಿ

    ಬಿಗ್ ಬಾಸ್ ನೀಡಿದ್ದ ಚಿನ್ನದ ಮೊಟ್ಟೆ ಟಾಸ್ಕ್ ವೇಳೆ ಪ್ರಿಯಾಂಕ ತಿಮ್ಮೇಶ್ ತಲೆಯ ಮೇಲೆ ದಿವ್ಯಾ ಸುರೇಶ್ ಮೊಟ್ಟೆ ಒಡೆದು ಗೆಲ್ಲುತ್ತಾರೆ. ಇದರಿಂದ ತಮ್ಮ ಬಳಿ ಇದ್ದ ಸಂಪೂರ್ಣ ಹಣ ಕಳೆದುಕೊಂಡ ಪ್ರಿಯಾಂಕ ತಿಮ್ಮೇಶ್, ಶಮಂತ್‍ರಿಂದಾಗಿ ದಿವ್ಯಾ ಸುರೇಶ್ ಗೆದ್ದರು ಎಂಬ ಕಾರಣಕ್ಕೆ ಶಮಂತ್ ಲಾಕರ್‌ನಲ್ಲಿದ್ದ ಹಣವನ್ನು ಕದಿಯಲು ಮುಂದಾಗುತ್ತಾರೆ.

    ಈ ವೇಳೆ ಲಾಕರ್‍ನಲ್ಲಿದ್ದ ಹಣವನ್ನು ಕಾಪಾಡಿಕೊಳ್ಳಲು ಶಮಂತ್, ಪ್ರಿಯಾಂಕ ತಿಮ್ಮೇಶ್ ಜೊತೆ ಡೀಲ್ ಮಾಡಿಕೊಳ್ಳುತ್ತಾರೆ. ನಾನು ಈಗ ನಿನಗೆ 14 ಸಾವಿರ ರೂ. ನೀಡುತ್ತೇನೆ. ಆದರೆ ಮುಂದಿನ ಟಾಸ್ಕ್‌ನಲ್ಲಿ ನೀನು ಎಷ್ಟೇ ಗೆದ್ದರೂ 25 ಸಾವಿರ ಮೇಲೆ ದಾಟುವುದಿಲ್ಲ. ಆಗ ನಿನ್ನ ಬಳಿ ಇರುವ ಹಣದಲ್ಲಿ ನನಗೆ ಪಾಲು ನೀಡುವುದಾಗಿ ಪ್ರಾಮಿಸ್ ಮಾಡಿದರೆ ಕೊಡುತ್ತೇನೆ ಎನ್ನುತ್ತಾರೆ. ಅದರಂತೆ ಡೀಲ್ ಓಕೆ ಮಾಡಿಕೊಂಡು ಪ್ರಿಯಾಂಕಗೆ ಶಮಂತ್ ಹಣ ನೀಡುತ್ತಾರೆ.

    ನಂತರ ರಾತ್ರಿ ಗಾರ್ಡನ್ ಏರಿಯಾದಲ್ಲಿ ಶಮಂತ್, ಪ್ರಶಾಂತ್, ಚಕ್ರವರ್ತಿ ಕುಳಿತು ಮಾತನಾಡುತ್ತಿರುತ್ತಾರೆ. ಈ ವೇಳೆ ಪ್ರಿಯಾಂಕ ಬಳಿ 14,800ರೂ ಇತ್ತು. ಸದ್ಯ ಅವರ ಲಾಕರ್‌ನಲ್ಲಿ 14,800 ರೂ ಇಟ್ಟಿದ್ದೇನೆ ಅದು ನನಗೆ ಆಮೇಲೆ ವಾಪಸ್ ಬರುತ್ತದೆ ಎಂದು ಹೇಳಿದ್ದಾರೆ. ಆಗ ಚಕ್ರವರ್ತಿಯವರು ನಿನ್ನ ಬಳಿ ಪ್ರಿಯಾಂಕ ಹಣವನ್ನು ಕಿತ್ತುಕೊಂಡು ಹೋಗಿದ್ದಾರಾ ಎಂದಾಗ, ಲಾಕರ್‌ನಲ್ಲಿದ್ದ ಎಲ್ಲವನ್ನು ಎತ್ತಿಕೊಂಡು ಹೋಗಿ ಬಿಟ್ಟಿದ್ದರು ಎಂದು ಶಮಂತ್ ಹೇಳುತ್ತಾರೆ. ಈ ವೇಳೆ ಚಕ್ರವರ್ತಿ ಚಂದ್ರಚೂಡ್ ಮೊಟ್ಟೆ ಒಡೆದಿರುವುದು ದಿವ್ಯಾ ಸುರೇಶ್, ಹಣ ಕೊಟ್ಟಿರುವುದು ಇವನು, ಇವನೆಷ್ಟು ಮುಟ್ಟಾಳ ಎಂದು ಪ್ರಶಾಂತ್ ಬಳಿ ಮಾತು ಒಪ್ಪಿಸುತ್ತಾ, ಹೊಸ ಚಾಪ್ಟರ್ ಎಂದು ಅಣುಕಿಸುತ್ತಾರೆ.

    ಈ ವೇಳೆ ಶಮಂತ್ ನಗುತ್ತಾ ನಿಮಗೇಕೆ, ನೋಡಿ ನಾನು ಒಂದು ಪ್ರಾಮಿಸ್ ಮೇಲಿನ ನಂಬಿಕೆಯಿಂದ ಹಣ ನೀಡಿದ್ದೇನೆ ಎನ್ನುತ್ತಾರೆ. ಅದಕ್ಕೆ ಚಕ್ರವರ್ತಿಯವರು ನಿನ್ನನ್ನು ನಾನು ಕರೆಸಿ, ನಿನ್ನ ತಲೆಯ ಮೇಲೆ ಮೊಟ್ಟೆ ಹೊಡೆಸಿ, ಇವನಿಗೆ ದುಡ್ಡು ಕೊಟ್ಟು, ಇಷ್ಟೇಲ್ಲಾ ನಾವು ಈ ಹುಡುಗನಿಗೋಸ್ಕರ ಮಾಡಿದರೆ, ಒಂದು ಹುಡುಗಿಗೆ ಹೆದರಿಕೊಂಡು ಹಣ ಕೊಟ್ಟಿದ್ದಾನೆ ಎಂದು ಚಕ್ರವರ್ತಿ ಪ್ರಶಾಂತ್‍ರವರಿಗೆ ಹೇಳುತ್ತಾರೆ.

    ಈ ಮಧ್ಯೆ ಹೆದರಿಕೊಂಡಿರುವ ಪದವನ್ನು ವಾಪಸ್ ತೆಗೆದುಕೊಳ್ಳಿ ಎಂದು ಶಮಂತ್ ಹೇಳುವ ವೇಳೆ ಪ್ರಶಾಂತ್, ಹಾಗದರೆ ಇವನು ಪ್ರಿಯಾಂಕಗೆ ದುಡ್ಡು ನೀಡಿದ್ದಾನಾ ಎಂದು ಚಕ್ರವರ್ತಿಯವರನ್ನು ಪ್ರಶ್ನಿಸುತ್ತಾರೆ. ಬಳಿಕ ಹಣ ಕೊಟ್ಟಿರುವ ವಿಚಾರ ತಿಳಿದು, ಸೋಫಾ ಮೇಲೆ ಮಲಗಿಕೊಂಡು ನಗುತ್ತಾ, ಬಳಿಕ ಎದ್ದು ತಮ್ಮ ಎರಡು ಚಪ್ಪಲಿಗಳನ್ನು ಪ್ರಶಾಂತ್, ಶಮಂತ್ ಮೇಲೆ ಎಸೆದಿದ್ದಾರೆ.

    ನಂತರ ಈಗ ನೀವು ನಗುತ್ತಿದ್ದೀರಾ ಅಲ್ವಾ, ನಾಳೆಯವರೆಗೂ ನನಗೆ ಟೈಮ್ ಕೊಡಿ ಎನ್ನುತ್ತಾರೆ. ಆಗ ಚಕ್ರವರ್ತಿಯವರು, ಮೊಟ್ಟೆ ಹೊಡೆದಿದ್ದು ಡಿಎಸ್, ಜಗಳ ಆಡಿದ್ದು ಡಿಎಸ್, ಇವನಿಗೋಸ್ಕರ ನೀನು ಅಷ್ಟೇಲ್ಲಾ ತ್ಯಾಗ ಮಾಡಿದೆ ಆದರೆ ಇವನು ಪ್ರಿಯಾಂಕಳನ್ನು ಸೇವ್ ಮಾಡುತ್ತಿದ್ದಾನೆ ಎಂದು ಪ್ರಶಾಂತ್‍ಗೆ ಹೇಳುತ್ತಾ ನಕ್ಕಿದ್ದಾರೆ. ಇದನ್ನೂ ಓದಿ:ದಿವ್ಯಾ ಸುರೇಶ್ ಮೇಲೆ ಕೈ ಮಾಡಿದ ಪ್ರಿಯಾಂಕ

  • ನಾನು ಒಳ್ಳೆಯವರಿಗೆ ತುಂಬಾ ಒಳ್ಳೆಯವನು, ಕೆಟ್ಟವರಿಗೆ ದುಷ್ಟ: ಸಂಬರಗಿ

    ನಾನು ಒಳ್ಳೆಯವರಿಗೆ ತುಂಬಾ ಒಳ್ಳೆಯವನು, ಕೆಟ್ಟವರಿಗೆ ದುಷ್ಟ: ಸಂಬರಗಿ

    ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‍ನ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯ ವೇಳೆ ದಿವ್ಯಾ ಸುರೇಶ್ ಹೇಳಿದ ಒಂದು ಹೇಳಿಕೆಯಿಂದ ಪ್ರಶಾಂತ್ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ್ ಆಕ್ರೋಶಗೊಂಡಿದ್ದಾರೆ.

    ಭಾನುವಾರ ನಡೆದ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್‍ರವರನ್ನು ಬಹುಶಃ ನಿನ್ನನ್ನು ಸೆಕ್ಯೂರಿಟಿ ಗಾರ್ಡ್ ಆಗಿ ಕರೆಸಿರಬಹುದು. ಯಾವಾಗಲೂ ಹಿಂದೆ ಮಾತನಾಡುತ್ತಿದ್ದರು ಎಂದು ನಮ್ಮ ಮನೆಯಲ್ಲಿ ಹೇಳುತ್ತಿದ್ದರು ಎಂದು ದಿವ್ಯಾ ಸುರೇಶ್ ಸುದೀಪ್ ಎದುರಲ್ಲಿ ಹೇಳಿದ್ದರು.

    ವಾರದ ಕೊನೆಯಲ್ಲಿ ಪ್ರಶಾಂತ್ ಅವರನ್ನು ಎಲಿಮಿನೆಟ್‍ಗೊಳಿಸಿ ನಂತರ ಮನೆಯ ಸ್ಪರ್ಧಿಗಳಿಗೆ, ಪ್ರಶಾಂತ್ ಅವರು ಸೇವ್ ಆಗಿದ್ದು, ಬಿಗ್‍ಬಾಸ್ ಮುಂದಿನ ಆದೇಶದವರೆಗೂ ಮನೆಯಲ್ಲಿ ಪ್ರಶಾಂತ್ ಕಂಡರೂ ಕಾಣದಂತೆ ವರ್ತಿಸಬೇಕು ಎಂದು ಬಿಗ್‍ಬಾಸ್ ಸೂಚಿಸಿದ್ದರು. ನಂತರ ಮನೆ ಮಂದಿಯನ್ನೆಲ್ಲಾ ಮಾತನಡಿಸಲು ಸರ್ಕಸ್ ಮಾಡಿದ ಪ್ರಶಾಂತ್ ಜೊತೆಗೆ ಯಾರು ಕೂಡ ಮಾತನಾಡಲಿಲ್ಲ.

    ಈ ವೇಳೆ ದಿವ್ಯಾ ಸುರೇಶ್‍ರನ್ನು ಬಿಡದೇ ಪ್ರಶಾಂತ್ ಸಂಬರ್ಗಿ ಕೆದಕುವ ಪ್ರಯತ್ನ ಮಾಡಿದ್ದಾರೆ. ಡೈನಿಂಗ್ ಹಾಲ್ ಕುಳಿತು ದಿವ್ಯಾ ಸುರೇಶ್ ಟಿಫಿನ್ ಮಾಡುತ್ತಿರುತ್ತಾರೆ. ಆಗ ಪ್ರಶಾಂತ್, ಪ್ರಿಯಾಂಕ ಆಚೆ ಹೋದಾಗ ನನ್ನ ಟಿವಿ ಸಂದರ್ಶನಗಳನ್ನು ನೋಡಿದ್ಯಾ? ಫೇಕ್ ಲವ್ ಸ್ಟೋರಿ ಬಗ್ಗೆ ಹೇಳಿದ್ದೇನೆ. ಅದನ್ನು ಇಲ್ಲಿಯೂ ಒಪ್ಪಿಕೊಂಡಿದ್ದಾರೆ. ಪ್ರಿಯಾಂಕ ಫೇಕ್ ಲವ್ ಸ್ಟೋರಿ ಬಗ್ಗೆ ಕೇಳಿದ್ಯಾ? ಕೃತಕವಾದ ಮೆಕನಿಕಲ್ ಲವ್ ಸ್ಟೋರಿ ಬಗ್ಗೆ ನಾನು ಆಚೆ ಹೇಳಿದ್ದೇನೆ. ಕರ್ನಾಟಕ ಜನತೆ ಮುಂದೆ ಆಡಿರುವ ನಾಟಕ ಒಪ್ಪಿಕೊಂಡಿದ್ದಾರೆ. ಇರುವುದನ್ನು ಹಾಗೇ ನಾನು ಆಚೆ ನೇರವಾಗಿ ಹೇಳಿದರೆ ನಿಷ್ಠುರವಾಗಿ ಕೋಪ ಬರುತ್ತದೆ. ಪ್ರಿಯಾಂಕ ನಮ್ಮ ಮನೆಯ ಸೆಕ್ಯೂರಿಟಿ ಗಾರ್ಡ್‍ಗೆ ಎಷ್ಟು ಕೆಲಸ ಗೊತ್ತಾ? ನಮ್ಮ ಮನೆಯ ಸೆಕ್ಯೂರಿಟಿ ಗಾರ್ಡ್‍ಗೆ 30 ಸಾವಿರ ಸಂಬಳ ಜೊತೆಗೆ ಮನೆ ಕೂಡ ನೀಡಿದ್ದೇನೆ ಎಂದು ಅಣುಕಿಸಿದ್ದಾರೆ.

    ನಂತರ ಶಮಂತ್ ಕಿವಿಯ ಬಳಿ ಬಂದು ನಾನು ಒಳ್ಳೆಯವರಿಗೆ ತುಂಬಾ ಒಳ್ಳೆಯವನು ಕೆಟ್ಟವರಿಗೆ ದುಷ್ಟ ಎಂದು ನನಗೆ ಶತ್ರುಗಳಿಗಿಂತ ಮಿತ್ರರು ಜಾಸ್ತಿ ಇದ್ದಾರೆ. ಆದರೆ ಶತ್ರುಗಳೇ ರಿಯಲ್ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಕ್ಕಿ ಬಿಕ್ಕಿ ಅತ್ತ ಪ್ರಶಾಂತ್ ಸಂಬರಗಿ

  • ಕ್ಯಾಪ್ಟನ್ ರೂಮ್‍ನಲ್ಲಿ ಪಾಸ್ ಆಗಿದ್ದೇನು ಶಮಂತ್ ಬಿಚ್ಚಿಟ್ರು ಸತ್ಯ..!

    ಕ್ಯಾಪ್ಟನ್ ರೂಮ್‍ನಲ್ಲಿ ಪಾಸ್ ಆಗಿದ್ದೇನು ಶಮಂತ್ ಬಿಚ್ಚಿಟ್ರು ಸತ್ಯ..!

    ಹಲವು ದಿನಗಳ ನಂತರ ಶಮಂತ್ ಬಿಗ್‍ಬಾಸ್ ಮನೆಯ ಕ್ಯಾಪ್ಟನ್ ರೂಂನಲ್ಲಿ ತಮಗಾದ ಅನುಭವವನ್ನು ಬಾಯ್ಬಿಟ್ಟಿದ್ದಾರೆ.

    ಪ್ರಿಯಾಂಕ ತಿಮ್ಮೇಶ್‍ರನ್ನು ಬಾತ್ ರೂಮ್ ಏರಿಯಾಗೆ ಕರೆದುಕೊಂಡು ಹೋಗಿ ವೈಷ್ಣವಿ ಒಮ್ಮೆ ಕುಳಿತುಕೊಂಡಿದ್ದರು, ಬೆಡ್ ರೂಮ್ ಒಳಗೆ ಹೋದಾಗ ಡಿಎಸ್ ಮಲಗುವ ಜಾಗದಲ್ಲಿ ಡಿಯು ಮಲದ್ದಳು. ನಾನು ಪ್ರಶಾಂತ್‍ರವರ ಬೆಡ್ ಮೇಲೆ ಕುಳಿತುಕೊಂಡಿದ್ದೆ, ರಘು ಭೂತ ಕೋಲ ಎಂದು ಮಾತನಾಡುತ್ತಿದ್ದರು. ಆಗ ಕ್ಯಾಪ್ಟನ್ ರೂಮ್‍ನಲ್ಲಿ ಬ್ಲಾಕ್ ಕಲರ್ ಮಾದರಿ ಹೋಯಿತು. ಅದನ್ನು ನೋಡಿ 5 ನಿಮಿಷ ನಾನು ತಲೆ ಕೆಡಿಸಿಕೊಂಡು ಬಿಟ್ಟೆ ಎಂದಿದ್ದಾರೆ.

    ಇದಕ್ಕೆ ಪ್ರಿಯಾಂಕ ಇದನ್ನು ನೀವು ಯಾರ ಬಳಿಯು ಹೇಳಲಿಲ್ಲವಾ ಎಂದು ಕೇಳಿದಾಗ, ಇಲ್ಲಿಯವರೆಗೂ ಇದನ್ನು ನಾನು ಯಾರಿಗೂ ಹೇಳಿಲ್ಲ. ನಿನಗೆ ಮೊದಲ ಬಾರಿಗೆ ಬಂದು ಹೇಳುತ್ತಿದ್ದೇನೆ. ಪ್ರಶಾಂತ್‍ರವರ ಬೆಡ್ ಮೇಲೆ ಕುಳಿತುಕೊಂಡು ವೈಷ್ಣವಿ, ಡಿಯುರನ್ನು ನೋಡುತ್ತಾ, ಬಾಟಲ್ ಇದ್ಯಾ ಎಂದು ನೋಡುತ್ತೇನೆ. ಆಗ ಕ್ಯಾಪ್ಟನ್ ರೂಮ್‍ನಿಂದ ಬ್ಲಾಕ್ ಕಲರ್‍ನಲ್ಲಿ ಹೀಗೆ ಏನೋ ಹೋಯಿತು ಇದನ್ನು ನಾನು ಯಾರಿಗೂ ಕೂಡ ಹೇಳಿಲ್ಲ ಎಂದು ಹೇಳಿದ್ದಾರೆ.

    ನಂತರ ಪ್ರಿಯಾಂಕ ಹಾಗಾದರೆ ಇದನ್ನು ನನಗೆ ಯಾಕೆ ಹೇಳಿದ್ರಿ, ನಿಜವಾಗಲೂ ಹಾಗೆ ಹೋಯಿತಾ? ಹೆಂಗಿತ್ತು, ರೌಂಡ್ ಹಾಕಿಕೊಂಡು ಹೋಯಿತಾ ಎಂದು ಕೂತೂಹಲದಿಂದ ಕೇಳುತ್ತಾರೆ. ಆಗ ಶಮಂತ್ ರೌಂಡ್ ಅಲ್ಲ. ಏನೋ ಬ್ಲಾಕ್ ಕಲರ್ ಒಂದಿಷ್ಟು ನನ್ನ ಭುಜದಷ್ಟು ಎತ್ತರ ಇತ್ತು, ಒಳಗಡೆ ಪಾಸ್ ಆಯಿತು ಎನ್ನುತ್ತಾರೆ. ಇದು ಫ್ರ್ಯಾಂಕ್ ಅಲ್ಲ ತಾನೇ ದೇವರಾಣೆ ನಿನಗೆ ಹಾಗೆ ಅನಿಸಿತಾ ಎಂದು ಪ್ರಶ್ನಿಸಿದಾಗ, ಅನಿಸಿತಾ ಅಲ್ಲ, ನೋಡ್ದೆ ಎಂದು ಸತ್ಯ ಬಾಯ್ಬಿಟ್ಟಿದ್ದಾರೆ.

    ಇದಕ್ಕೆ ಹೆದರಿ ಪ್ರಿಯಾಂಕ ಅಯ್ಯೋ ನಾನು ಸ್ನಾನ ಮಾಡಲು ಅಲ್ಲಿಗೆ ಹೋಗಿದ್ದೆ, ನನ್ನ ಪ್ರಕಾರ ಅಲ್ಲಿ ಇರುವ ಮೀರರ್‍ರನ್ನು ಯಾರೋ ಸರಿಸಿರಬಹುದು ಎಂದಾಗ ಶಮಂತ್ ಮೀರರ್ ಎಲ್ಲೋ ಇದೆ. ಆದರೆ ಒಂದು ಗ್ಲಾಸ್ ಡೋರ್ ಮುಚ್ಚಿತ್ತು, ಇನ್ನೊಂದು ಡೋರ್‍ನಿಂದ ಏನೋ ಬಾತ್ ರೂಂ ಕಡೆಗೆ ಪಾಸ್ ಆಯ್ತು. ನಾನು ಕ್ಯಾಪ್ಟನ್ ಆಗಿದ್ದಾಗಲು ಅಲ್ಲಿ ಮಲಗಿಕೊಂಡಾಗ ನಿದ್ದೆ ಬರುತ್ತಿರಲಿಲ್ಲ ಅಂದಾಗ, ಪ್ರಿಯಾಂಕ ತಿಮ್ಮೇಶ್ ಕೂಡ ಕ್ಯಾಪ್ಟನ್ ರೂಮ್‍ನಲ್ಲಿ ಯಾರಿಗೂ ನಿದ್ದೆ ಬರಲ್ಲ ಎನ್ನುತ್ತಾರೆ.

    ಅದಕ್ಕೆ ಮಾತು ಜೋಡಿಸಿದ ಶಮಂತ್, ಹೌದು ಹಾಗಾದರೆ ಪಕ್ಕಾ ಎಂದು ಹೇಳುತ್ತಾ, ಈ ಬಗ್ಗೆ ಹೆಚ್ಚು ಮಾತನಾಡುವುದು ಬೇಡ ಎಂದು ಪ್ರಿಯಾಂಕರನ್ನು ಗಾರ್ಡನ್ ಏರಿಯಾಗೆ ಕರೆದುಕೊಂಡು ಹೋಗುತ್ತಾರೆ.

  • ಹೊರಗಡೆ ತುಂಬಾ ಜನ ‘ಬೇಕಾದವರಿದ್ದಾರೆ’, ಅದಕ್ಕಾಗಿ ಬಂದಿಲ್ಲ

    ಹೊರಗಡೆ ತುಂಬಾ ಜನ ‘ಬೇಕಾದವರಿದ್ದಾರೆ’, ಅದಕ್ಕಾಗಿ ಬಂದಿಲ್ಲ

    ಳೆದ ಕೆಲ ದಿನಗಳಿಂದ ಪ್ರಿಯಾಂಕಾ ಹಾಗೂ ಶಮಂತ್ ಜೋಡಿ ಕುರಿತು ಸಖತ್ ಚರ್ಚೆಯಾಗುತ್ತಿದ್ದು, ಚಕ್ರವರ್ತಿ ಇವರಿಬ್ಬರನ್ನು ಸೇರಿಸಲು ಹರಸಾಹಸಪಡುತ್ತಿದ್ದಾರೆ. ಆದರೆ ಪ್ರಿಯಾಂಕಾ ಮಾತ್ರ ನಾಚುತ್ತಲೇ ತಿರಸ್ಕರಿಸುತ್ತಿದ್ದಾರೆ. ಇಬ್ಬರೂ ಪರೋಕ್ಷವಾಗಿ ಮಾತನಾಡುವ ಮೂಲಕ ಗಮನಸೆಳೆಯುತ್ತಿದ್ದಾರೆ. ಈ ಮಧ್ಯೆ ಕನ್ವಿನ್ಸ್ ಮಾಡಲು ಬಂದ ಚಕ್ರವರ್ತಿ ಅವರಿಗೆ ನಗುತ್ತಲೇ ತಕ್ಕ ಉತ್ತರ ನೀಡಿದ್ದಾರೆ.

    ನಿನ್ನೆ ನಾನು ಹೇಳಿದ್ದಕ್ಕೆ ಶಮಂತ್ ತುಂಬಾ ಡಿಸ್ಟರ್ಬ್ ಆಗಿಬಿಟ್ಟಿದ್ದಾನೆ, ಹಾಗೆ ಹೇಳಬೇಡಿ ಸರ್ ಎಂದು ಜಗಳ ಮಾಡಿದ. ನನಗೆ ಇಂಟರೆಸ್ಟ್ ಇಲ್ಲ, ಹೋಗಿ ನೇರವಾಗಿ ಹೇಳುತ್ತೇನೆ ಅವರಿಗೆ ಎಂದು ರೇಗಾಡಿದ ಎಂದು ಚಕ್ರವರ್ತಿ ಪ್ರಿಯಾಂಕಾಗೆ ಹೇಳಿದ್ದಾರೆ. ಇದಕ್ಕೆ ಕೋಪದಿಂದಲೇ ಉತ್ತರಿಸಿದ ಪ್ರಿಯಾಂಕಾ, ನೀವು ನಿನ್ನೆ ತುಂಬಾ ಅತಿಯಾಗಿ ಮಾತನಾಡಿದಿರಿ ಎಂದು ಹೇಳಿದ್ದಾರೆ. ಇದಕ್ಕೆ ಚಕ್ರವರ್ತಿ ಉತ್ತರಿಸಿ ನನಗೇನು ಗೊತ್ತು, ನೀನು ಲವ್ ಸಿಂಬಲ್ ಮಾಡಿದ್ದಕ್ಕೆ ಆ ರೀತಿ ಅಫೆಕ್ಷನ್ ಇರಬಹುದು ಎಂದುಕೊಂಡೆ ಎಂದಿದ್ದಾರೆ. ತಕ್ಷಣವೇ ಉತ್ತರಿಸಿದ ಪ್ರಿಯಾಂಕಾ, ನನಗೆ ಹೊರಗಡೆ ತುಂಬಾ ಜನ ಬೇಕಾದವರಿದ್ದಾರೆ, ಈ ಮನೆಗೆ ಅದಕ್ಕೋಸ್ಕರ ಬಂದಿಲ್ಲ. ಆ ರೀತಿ ಯೋಚನೆಗಳೂ ಬರಲ್ಲ ಎಂದು ಖಾರವಾಗಿ ಪ್ರತಿಕ್ರಿಸಿದ್ದಾರೆ.

    ಇದಕ್ಕಾಗಿಯೇ ಬರಲ್ಲ, ಆ ರೀತಿ ಸಂಭವಿಸಬಹುದು ಎಂದು ಚಕ್ರವರ್ತಿ ಸಮರ್ಥಿಸಿಕೊಳ್ಳಲು ಹೋಗಿದ್ದಾರೆ. ನಿಮಗೆ ನೀವೇ ಹೇಗೆ ಯೋಚನೆ ಮಾಡುತ್ತೀರಿ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ. ಹಾಗೆ ಅನ್ನಿಸಿದ್ದಕ್ಕೆ ಬಂದು ನಿನ್ನನ್ನು ಕೇಳಿದೆ, ಹಾಗೆ ಅನ್ನಿಸಿಲ್ಲ ಎಂದು ಗೊತ್ತಾದ ಮೇಲೆ ಬಿಟ್ಟಾಕಿದೆ ಎಂದು ಚಕ್ರವರ್ತಿ ಹೇಳಿದ್ದಾರೆ. ನೀವು ಅಷ್ಟು ಬುದ್ಧಿವಂತರಾಗಿ ಹೀಗೆ ಮಾಡಿದರೆ ಹೇಗೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ಈ ಬಗ್ಗೆ ಶಮಂತ್ ಸಹ ಬೇಡ ಸರ್ ನಂಗೆ ಇಂಟರೆಸ್ಟ್ ಇಲ್ಲ ಅಂದ, ಸರಿ ಫ್ರೆಂಡ್ ಆಗಿರಿ ಎಂದು ಹೇಳಿದೆ ಎಂದು ಚಕ್ರವರ್ತಿ ಹೇಳುತ್ತಾರೆ.

    ಹಾಗಾದರೆ ನಮಗೆ ಇಂಟರೆಸ್ಟ್ ಇದೆ ಅಂತಾನಾ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ. ಆಗ ನನಗೆ ಮೂರ್ನಾಲ್ಕು ದಿನದಿಂದ ಹಾಗೆ ಅನ್ನಿಸುತ್ತಿತ್ತು, ನಿಮ್ಮಿಬ್ಬರ ನಡುವೆ ಅಫೆಕ್ಷನ್ ಇದೆ ಎಂದು ಭಾಸವಾಗಿತ್ತು ಎಂದು ಚಕ್ರವರ್ತಿ ಹೇಳಿದ್ದಾರೆ. ಅಲ್ಲದೆ ನೀನು ಬಿಗ್ ಬಾಸ್‍ನಲ್ಲಿ ಅಥವಾ ಎಲ್ಲಿ ಪರಿಚಯವಾಗಿದ್ದಿಯಾ ಗೊತ್ತಿಲ್ಲ, ಒಟ್ನಲ್ಲಿ ನೀನು ಚೆನ್ನಾಗಿರಬೇಕು ಅಷ್ಟೇ. ಇದಕ್ಕಾಗಿ ನಮ್ಮ ಕೈಲಾಗಿದ್ದನ್ನು ನಾವು ಮಾಡುತ್ತೇವೆ, ನಮಗೆ ದೇವರು ಶಕ್ತಿ, ಅಸ್ಥಿತ್ವ ಕೊಟ್ಟಿದ್ದಾನೆ ಎಂದು ಚಕ್ರವರ್ತಿ ಹೇಳುತ್ತಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರಿಯಾಂಕಾ ಅದನ್ನು ಇಂತಹ ಕೆಲಸಗಳಿಗೆ ಉಪಯೋಗಿಸಬೇಡಿ, ಬೇರೆ ಕೆಲಸಗಳಿವೆ ಅವುಗಳನ್ನು ಮಾಡಿ, ನಾವು ಯಾರನ್ನು ಮದುವೆ ಆಗಬೇಕು ಎಂಬುದು ನಮಗೆ ಗೊತ್ತಿದೆ ಎಂದು ತಕ್ಕ ಉತ್ತರ ನೀಡಿದ್ದಾರೆ.

  • ನಿನ್ ಮೇಲೆ ಆ ಹುಡುಗಿಗೆ ಲವ್ ಇದೆ ಕಣೋ

    ನಿನ್ ಮೇಲೆ ಆ ಹುಡುಗಿಗೆ ಲವ್ ಇದೆ ಕಣೋ

    ಬಿಗ್ ಬಾಸ್ ಮನೆಯಲ್ಲಿ ಬರೀ ಜೋಡಿಯದ್ದೇ ಮಾತು. ಅರವಿಂದ್ ಹಾಗೂ ದಿವ್ಯಾ ಉರುಡುಗ ಒಂದು ಕಡೆಯಾದರೆ, ಮಂಜು ಹಾಗೂ ದಿವ್ಯಾ ಸುರೇಶ್ ಅವರದ್ದೇ ಮತ್ತೊಂದು ಜೋಡಿ. ಇದನ್ನು ಕಂಡು ಶಮಂತ್‍ಗೆ ಮಾತ್ರ ಸಖತ್ ಹೊಟ್ಟೆ ಉರಿ. ನನಗೂ ಯಾರೂ ಜೋಡಿ ಆಗುತ್ತಿಲ್ಲವಲ್ಲ ಎಂಬ ಕೊರಗು. ಇದನ್ನು ಹಲವು ಬಾರಿ ದಿವ್ಯಾ ಉರುಡುಗ ಬಳಿ ಹೇಳಿಕೊಂಡಿದ್ದಾರೆ ಸಹ. ಆದರೆ ಇದೀಗ ಜೋಡಿಯಾಗುವ ಸೂಚನೆಯನ್ನು ನೀಡಿದ್ದಾರೆ, ಇದಕ್ಕೆ ಸ್ವತಃ ಚಕ್ರವರ್ತಿ ಅವರು ಆರಂಭ ಹಾಡಿದ್ದಾರೆ.

    ಹೌದು ಶಮಂತ್ ಹಾಗೂ ಪ್ರಿಯಾಂಕಾ ವಿಚಾರದಲ್ಲಿ ಚಕ್ರವರ್ತಿ ಮಾತನಾಡಿದ್ದು, ಇಬ್ಬರ ನಡುವಿನ ಕುರಿತು ವಿರಸದ ಬಗ್ಗೆ ಮಾತನಾಡುವಾಗ ಲವ್ ವಿಷಯವನ್ನೂ ತಿಳಿಸಿದ್ದಾರೆ. ಆಟವಾಡಿಕೊಂಡು, ತಿನ್ಕೊಂಡು ಇದ್ರೆ ಬಿಗ್ ಬಾಸ್ ಬೇಗ ಮನೆಯಿಂದ ಆಚೆ ಕಳುಹಿಸುತ್ತಾರೆ ಎಂದೆ ಅದ್ಕೆ ಪ್ರಿಯಾಂಕಾ ಬೇಜಾರಾಗಿದ್ದಾರೆ ಎಂದು ಶಮಂತ್ ಹೇಳುತ್ತಾರೆ. ಇದಕ್ಕೆ ಉತ್ತರಿಸಿದ ಚಕ್ರವರ್ತಿ ಅವರು, ನೀನು ಆಟವಾಡಿಕೊಂಡು, ತಿನ್ಕೊಂದು ಇರೋದು ನೀನು, ಆ ಹಡುಗಿಗೆ ಯಾಕೆ ಹೇಳ್ತಿಯಾ ಎಂದು ಕೇಳಿದ್ದಾರೆ.

    ಇಷ್ಟೆಲ್ಲಾ ಆದ್ರೂ ನಗ್ತಿದಾರೆ ಅಂದ್ರೆ ಪ್ರಿಯಾಂಕಾಗೆ ನಿನ್ನ ಮೇಲೆ ಲವ್ ಇದೆ ಎಂದು ಚಕ್ರವರ್ತಿ ಹೇಳಿದ್ದು, ಇದಕ್ಕೆ ಪ್ರಶಾಂತ್ ಸಂಬರಗಿ ಸಹ ಸಾಥ್ ನೀಡಿ, ಪ್ರೀತಿ ಇದೆ ಇಬ್ಬರೂ ಹಂಚಿಕೊಳ್ಳಲು ಆಗುತ್ತಿಲ್ಲ ಎಂದಿದ್ದಾರೆ. ಪ್ರಿಯಾಂಕಾಗೆ ಶಮಂತ್ ಬಗ್ಗೆ ಅಫೆಕ್ಷನ್ ಇದೆ, ಅವರ ಬಾಡಿ ಲಾಂಗ್ವೇಜ್, ನಗೆ, ಮಾತನಾಡುವುದು, ಕಾಮಿಡಿ ಮಾಡುವುದು ಎಲ್ಲವನ್ನೂ ನೋಡಿದರೆ ಇವರಿಬ್ಬರ ಮಧ್ಯೆ ಲವ್ ಇದೆ ಅನ್ನಿಸುತ್ತಿದೆ ಎಂದು ಮಾತನಾಡಿಕೊಂಡಿದ್ದಾರೆ.

    ಅಲ್ಲದೆ ನಿನಗೆ ಅವನ ಬಗ್ಗೆ ಅಫೆಕ್ಷನ್ ಇಲ್ವೇನಮ್ಮ ನಿಜ ಹೇಳು ಎಂದು ಚಕ್ರವರ್ತಿ ನೇರವಾಗಿ ಪ್ರಿಯಾಂಕಾಗೆ ಕೇಳುತ್ತಾರೆ. ನಾನು ಮನೋಶಾಸ್ತ್ರಜ್ಞ, ಬಾಡಿ ಲಾಂಗ್ವೇಜ್, ಕಣ್ಣುಗಳನ್ನು ನೋಡಿದರೆ ಗೊತ್ತಾಗಿ ಬಿಡುತ್ತೆ. ಒಂದೇ ಟೀಮ್‍ನಲ್ಲಿದ್ದು ನಮ್ಮನ್ನು ಯಾಕೆ ಹೀಗೆ ಸಾಯಿಸುತ್ತೀರಿ, ನಿರ್ಧಾರ ಮಾಡಿ ಎಂದಿದ್ದಾರೆ. ಅಲ್ಲದೆ ಪ್ರಿಯಾಂಕಾ ಹಾರ್ಟ್ ಸಿಂಬಾಲ್ ಮಾಡಿದ್ದಕ್ಕೆ ಅದು ನಿನಗೇ ಮಾಡಿದ್ದು ಎಂದು ಚಕ್ರವರ್ತಿ ಶಮಂತ್‍ಗೆ ಹೇಳುತ್ತಾರೆ.

    ಅದೇನು ಸಮಾಧಾನ ಮಾಡಿಕೊಂಡು ಮನವೊಲಿಸಿಕೊಳ್ಳಿ ಎನ್ನುತ್ತಾರೆ, ಆಗ ಶಮಂತ್ ಬೈಯಿಸಿಕೊಂಡು ನಾನೇ ಸಮಾಧಾನ ಮಾಡಲೇ ಎಂದು ಪ್ರಶ್ನಿಸುತ್ತಾರೆ. ಒಂದು ಹುಡುಗಿ ನಿನಗಾಗಿ ಲವ್ ಸಿಂಬಲ್ ಮಾಡಿದೆ ಎಂದರೆ ಇದಕ್ಕಿಂತ ಹಿಂಟ್ ಕೊಡಲು ಸಾಧ್ಯವಿಲ್ಲ. ನಾನು, ಪ್ರಶಾಂತ್ ಸೇರಿ ಮದುವೆ ಮಾಡಿಸುತ್ತೇವೆ ತಲೆ ಕೆಡಿಸಿಕೊಳ್ಳಬೇಡಿ. ನಿನ್ನ ಮೇಲೆ ಆ ಹುಡುಗಿಗೆ ಲವ್ ಇದೆ ಕಣೋ ಎಂದು ಶಮಂತ್‍ಗೆ ಚಕ್ರವರ್ತಿ ಹೇಳುತ್ತಾರೆ.

    ಇಷ್ಟಕ್ಕೆ ಸುಮ್ಮನಾಗದ ಚಕ್ರವರ್ತಿ ಅವರು, ಪ್ರಿಯಾಂಕಾಗೆ ಕಂಗ್ರಾಟ್ಸ್ ಹೇಳುತ್ತಾರೆ, ಆಗ ಪ್ರಿಯಾಂಕಾ ಯಾವ ಖುಷಿಗೆ ಎನ್ನುತ್ತಾರೆ. ತೀರ್ಮಾನ ಮಾಡಿದೆಯಲ್ಲ ಅದ್ಕೆ ಎಂದು ಚಕ್ರವರ್ತಿ ಹೇಳುತ್ತಾರೆ. ಆಗ ನಾಚಿದ ಪ್ರಿಯಾಂಕ ತಗ್ದು ಬಿಟ್ಟಾ ಅಂದ್ರೆ, ಹುಚ್ಚಾ ನಿಮಗೆ, ಕಾಮನ್ ಸೆನ್ಸ್ ಇಲ್ವಾ ಎಂದು ಕಾರವಾಗಿ ಪ್ರತಿಕ್ರಿಯಿಸಿದ್ದಾರೆ. ಶಮಂತ್ ಒಳ್ಳೆ ಹುಡುಗ ಕಣಮ್ಮ ಎಂದು ಪ್ರಿಯಾಂಕಾಗೆ ಹೇಳುತ್ತಾರೆ ಚಕ್ರವರ್ತಿ, ನಾನು ಅವನಿಗೆ ಕನ್ವೆನ್ಸ್ ಮಾಡುತ್ತೇನೆ ನೀನು ಮುಂದುವರಿ ಎಂದು ಮತ್ತೆ ಪ್ರಿಯಾಂಕಾಗೆ ಹೇಳುತ್ತಾರೆ.

    ಯಾಕೆ ನಾವು ಹೊರಗಡೆ ಹೋಗೋಕೆ ಆಸೆನಾ ನಿಮಗೆ, ನಾವಿಬ್ರೂ ಹೊಡೆದಾಡಿಕೊಂಡು ರಕ್ತ ಬರಿಸಿಕೊಂಡ್ರೆ ಹೊರಗಡೆ ಕಳುಹಿಸುತ್ತಾರೆ ಎಂದು ಪ್ರಿಯಾಂಕಾ ಸಿಟ್ಟಾಗುತ್ತಾರೆ. ಸೆನ್ಸ್ ಇಲ್ವಾ ನಿಮಗೆ, ಏನ್ ತಮಾಷೆ ನಿಮಗೆ ಮಾಡೋಕೆ ಬೇರೆ ಕೆಲಸ ಇಲ್ವಾ? ಚೆನ್ನಾಗಿ ಆಟ ಆಡ್ತಿಲ್ಲ, 500 ರೂ. ಕಳೆದುಕೊಂಡಿದ್ದೀರಿ ಎಂದು ಚಕ್ರವರ್ತಿ ವಿರುದ್ಧ ಪ್ರಿಯಾಂಕಾ ರೇಗಾಡುತ್ತಾರೆ. ಆದರೂ ನಿನ್ ಜೀವನ ಅಲ್ವೇನಮ್ಮ ಎಂದು ಚಕ್ರವರ್ತಿ ಹೇಳುತ್ತಾರೆ, ನನ್ನ ಜೀವನ ಹಾಳಾಗಿ ಹೋಗಲಿ, ನೀವ್ಯಾರು ನನಗೆ ಕೇರ್ ಮಾಡೋಕೆ, ನನಗೆ ನಮ್ಮ ಮನೆಯಲ್ಲಿ ಇದ್ದಾರೆ. ಈ ತರ ಕೇರ್ ಮಾಡೋಕೆ ನೀವ್ಯಾರು, ಎಷ್ಟು ತಾಕತ್ ನಿಮಗೆ? ಎಂದು ರೇಗಾಡುತ್ತಾರೆ. ಇಲ್ವಾ, ತಮಾಷೆ ಮಾಡಿದ್ದಾ? ನಾನು ಸೀರಿಯಸ್ಸಾಗಿ ತಿಳಿದುಕೊಂಡೆ ಎಂದು ಚಕ್ರವರ್ತಿ ಹೇಳುತ್ತಾರೆ. ಇದನ್ನೇ ಶುಭ ಪೂಂಜಾ ಅಣಗಿಸಿ, ರಂಜಿಸಿದ್ದಾರೆ.

    ಬಳಿಕ ಶಮಂತ್ ಬಳಿ ಬಂದು, ನಾನ್ ಮಾತಾಡಿದಿನಿ ಬಾ ಮಗ ಫುಲ್ ಸೆಟ್ಲ್ ಮೆಂಟ್ ಮಾಡಿದಿನಿ. ಎಲ್ಲಾ ಸರಿ ಮಾಡಿದೆ, ಒಕೆ ಅಂತೆ ಬಾ, 735 ಮದುವೆ ಮಾಡಿಸಿದ್ದೇನೆ ಇದು 736ನೇಯದ್ದು. ಲವ್ ಮ್ಯಾರೇಜ್, ಓಡೋಗಿರೋ ಮ್ಯಾರೇಜ್ 735 ಮಾಡ್ಸಿದಿನಿ, ಇವನದ್ದು 736ನೇಯದ್ದು. ವಧುವಿನ ಕಡೆಯಿಂದ ಒಕೆ ಆಗಿದೆ, ವರನದ್ದೇ ಸಮಸ್ಯೆ ಎಂದು ಹೇಳುತ್ತಾರೆ. ಬೆಳಗ್ಗೆ ನಾನು ರಿಸಲ್ಟ್ ಹೇಳಬೇಕು ಬಾರಪ್ಪ ಸಪರೇಟ್ ಆಗಿ ಮಾತನಾಡೋಣ, ನೀನು ನನ್ನ ಪುಟ್ಟ ತಮ್ಮ ಬಾರೋ ಎಂದು ಶಮಂತ್‍ಗೆ ಚಕ್ರವರ್ತಿ ಕರೆದಿದ್ದಾರೆ. ನಾನು ಈ ರೂಟಲ್ಲಿ ಹೋಗಬೇಕಾ ಬೇಡವೇ ಎಂಬ ಕನ್ಫ್ಯೂಶನ್‍ನಲ್ಲೇ ಇದ್ದೇ, ಈಗ ರೂಟ್ ಕ್ಲಿಯರ್ ಆಯ್ತು ಎಂದು ಕೊನೆಯದಾಗಿ ಮನೆ ಮಂದಿಗೆ ಚಕ್ರವರ್ತಿ ಹೇಳಿದ್ದಾರೆ.

     

  • ವೈಷ್ಣವಿ ಧ್ಯಾನ ನೋಡಿ ಕೈ ಮುಗಿದು ನಕ್ಕ ಮನೆಮಂದಿ!

    ವೈಷ್ಣವಿ ಧ್ಯಾನ ನೋಡಿ ಕೈ ಮುಗಿದು ನಕ್ಕ ಮನೆಮಂದಿ!

    – ವೈಶು ಕಾಲಿಗೆ ನಮಸ್ಕರಿಸಿದ ರಾಜೀವ್

    ಬೆಂಗಳೂರು: ಪ್ರತಿದಿನ ಬೆಳಗ್ಗೆ ಆಗುತ್ತಿದ್ದಂತೆಯೇ ದೊಡ್ಮನೆ ಮಂದಿ ವಾಕಿಂಗ್, ಜಾಗಿಂಗ್ ಅಂತಾ ಬ್ಯುಸಿಯಾಗುತ್ತಾರೆ. ಅದರಲ್ಲೂ ವೈಷ್ಣವಿ ಡಿಫರೆಂಟ್ ಆಗಿ ಯೋಗ, ಧ್ಯಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

    ಆದ್ರೆ ಇಷ್ಟು ದಿನ ವೈಷ್ಣವಿ ಪ್ರತಿನಿತ್ಯ ಧ್ಯಾನ ಮಾಡುತ್ತಿದ್ದಾರೆ ಎಂದು ತಿಳಿದುಕೊಂಡಿದ್ದ ಮನೆಮಂದಿಗೆ ವೈಷ್ಣವಿಯ ಕಳ್ಳಾಟ ಬಹಿರಂಗಗೊಂಡಿದೆ.

    ಹೌದು ನಿನ್ನೆ ಲಿವಿಂಗ್ ಏರಿಯಾದ ಬಳಿ ಕುಳಿತುಕೊಂಡಿದ್ದ ವೈಷ್ಣವಿ ಇದ್ದಕ್ಕಿದಂತೆ ಧ್ಯಾನ ಮಾಡಲು ಶುರುಮಾಡುತ್ತಾರೆ. ಇದನ್ನು ನೋಡಿ ಪ್ರಿಯಾಂಕ, ಶಮಂತ್‍ಗೆ ಈ ರೀತಿಯ ಜಗಳ, ಗದ್ದಲದ ಮಧ್ಯೆ ಇವರು ಹೇಗೆ ಧ್ಯಾನ ಮಾಡುತ್ತಾರೆ ಎಂದು ಕೇಳುತ್ತಾರೆ. ಆಗ ಶಮಂತ್ ಮೊದಲಿಗೆ ಅವರು ಎಷ್ಟೇ ಗಲಾಟೆ ಇದ್ದರೂ ಏಕಾಗ್ರತೆ ಹೊಂದಿರುತ್ತಾರೆ. ಆದ್ರೆ ನಿಜವಾಗಿಯೂ ಅವರು ನಿದ್ದೆಯೇ ಮಾಡುತ್ತಾರೋ ಧ್ಯಾನವೇ ಮಾಡುತ್ತಾರೋ ಗೊತ್ತಿಲ್ಲ. ಮುಖ ಯಾವಗಲೂ ಹಸನ್ಮುಖಿಯಾಗಿಯೇ ಇರುತ್ತದೆ ಎನ್ನುತ್ತಾರೆ.

    ಬಳಿಕ ಬಿಗ್‍ಬಾಸ್ ಈ ವೈಷ್ಣವಿಯವರು ಧ್ಯಾನದ ಹೆಸರಿನಲ್ಲಿ ನಿದ್ದೆ ಮಾಡುತ್ತಿದ್ದಾರೆ. ಬೇಕಾದರೆ ಅವರ ಮುಖದ ಹಾವ-ಭಾವ ನೋಡಿ ಬಿಗ್‍ಬಾಸ್, ತೂಗಡಿಸುತ್ತಿದ್ದಾರೆ ಎಂದು ಹೇಳುತ್ತಾರೆ.

    ನಂತರ ವೈಷ್ಣವಿ ನಿದ್ದೆ ಮಾಡುತ್ತಿರುವುದನ್ನು ಕಂಡು ಎಂತಾ ನಾಟಕ ಎಂದು ಮನೆಮಂದಿಯೆಲ್ಲಾ ರೇಗಿಸುತ್ತಾರೆ. ಈ ವೇಳೆ ಶಮಂತ್, ರಾಜೀವ್ ಎದ್ದು ಬಂದು ವೈಷ್ಣವಿಗೆ ನಮಸ್ಕಾರ ಮಾಡಿ, ನಮಗೂ ಹೇಳಿದ್ದರೆ ಇಷ್ಟು ದಿನ ನಾವು ಹೀಗೆ ಮಾಡುತ್ತಿದ್ವಿ ಎಂದರೆ, ರಾಜೀವ್ ದೇವರೇ ಈ ರೀತಿಯ ಮೆಡಿಟೇಷನ್ ನಮಗೂ ಕಲಿಸಪ್ಪಾ ಎಂದಿದ್ದಾರೆ.

    ಈ ವೇಳೆ ಮಂಜು ಬಿಗ್‍ಬಾಸ್ ಈ ಯಮ್ಮ ಮೋಸ ಮಾಡ್ತಿದ್ದಾಳೆ. ರಾತ್ರಿಯೆಲ್ಲಾ ಈ ಯಮ್ಮಾ ಅದೇ ಮಾಡುವುದು, ಬೆಳಗ್ಗೆ ಎದ್ದು ಯೋಗದ ಹೆಸರಿನಲ್ಲಿ ಮತ್ತೆ ನಿದ್ದೆ ಮಾಡಿ ನಿಮಗೆ ಯಾಮಾರಿಸುತ್ತಿದ್ದಾಳೆ ನೋಡಿಕೊಳ್ಳಿ ಅಂತಾರೆ. ಈ ವೇಳೆ ವೈಷ್ಣವಿ ಮನೆಯವರ ಮಾತನ್ನು ಕೇಳಿ ನಗುತ್ತಾರೆ.

  • ಮಂಜು, ದಿವ್ಯಾ ಸುರೇಶ್ ಸಂಬಂಧದ ಬಗ್ಗೆ ಪ್ರಿಯಾಂಕ ಹೇಳಿದ್ದೇನು ಗೊತ್ತಾ?

    ಮಂಜು, ದಿವ್ಯಾ ಸುರೇಶ್ ಸಂಬಂಧದ ಬಗ್ಗೆ ಪ್ರಿಯಾಂಕ ಹೇಳಿದ್ದೇನು ಗೊತ್ತಾ?

    ಬಿಗ್‍ಬಾಸ್ ಮನೆಯ ಸದಸ್ಯರಿಗೆ ಪ್ರತಿ ನಿತ್ಯ ಒಂದಲ್ಲಾ ಒಂದು ಚುಟುವಟಿಕೆ ನೀಡುತ್ತಿರುತ್ತಾರೆ. ಸದ್ಯ ಹೊರಗಿನಿಂದ ಬಂದ ಸ್ಪರ್ಧಿಗಳು ಮನೆ ಒಳಗಿರುವ ಸದಸ್ಯರನ್ನು ಎಷ್ಟು ಅರ್ಥಮಾಡಿಕೊಂಡಿದ್ದಾರೆ ಎಂಬುದನ್ನು ತಿಳಿಯಲು, ಪೆಟ್ಟಿಗೆಯೊಂದರಲ್ಲಿ ಕೆಲವು ವಸ್ತುಗಳಿದ್ದು, ಅವುಗಳನ್ನು ಸೂಕ್ತ ಕಾರಣಗಳೊಂದಿಗೆ ಮನೆಯ ಸದಸ್ಯರಿಗೆ ನೀಡುವಂತೆ ಸೂಚಿಸಿದ್ದರು.

    ಅದರಂತೆ ಈ ಚಟುವಟಿಕೆ ವೇಳೆ ಪ್ರಿಯಾಂಕ ತಿಮ್ಮೇಶ್, ಯಾವಾಗಲೂ ದಿವ್ಯಾ ಸುರೇಶ್, ಮಂಜು ಜೊತೆಗೆ ಇರುತ್ತಾರೆ. ಇದು ಒಬ್ಬರಿಗೆ ಮೀಸಲಾಗಿರುವಂತೆ ಕಾಣಿಸುತ್ತದೆ. ಹಾಗಾಗಿ ನೀವು ಎಲ್ಲರ ಜೊತೆಗೂ ಬೆರೆಯಬೇಕು ಎಂದು ಬಕೆಟ್ ನೀಡಿದರು. ಇದಾದ ನಂತರ ದಿವ್ಯಾ ಸುರೇಶ್, ಪ್ರಿಯಾಂಕ ಬಳಿ ಹೋಗಿ, ನಾನು ಮಂಜು ಜೊತೆಗೆ ಇರುತ್ತೇನೆ ಎಂದು ಹೇಳಿದ್ರಲ್ಲಾ, ನಿಮಗೆ ಯಾಕೆ ಹಾಗೆ ಅನಿಸಿತು? ನೀವು ಯಾವ ರೀತಿ ನೋಡುತ್ತಿದ್ದೀರಾ ಎಂಬುವುದನ್ನು ಹೇಳುತ್ತೀರಾ ಎಂದು ಕೇಳುತ್ತಾರೆ.

    ಆಗ ಪ್ರಿಯಾಂಕ ನಾನು ನಿಮ್ಮೆಲ್ಲರನ್ನು ಹೊರಗಿನಿಂದಲೇ ಪರಿಚಯ ಮಾಡಿಕೊಂಡಿದ್ದೇನೆ. ನೀವು ಯಾವಾಗಲೂ ಮಂಜು ಜೊತೆಯಲ್ಲಿಯೇ ಇರುತ್ತೀರಾ ಅದು ತಪ್ಪೋ, ಸರಿಯೋ ನನಗೆ ಗೊತ್ತಿಲ್ಲ. ನೀವು ಬೇರೆಯವರೊಂದಿಗೆ ಬೆರೆಯದೇ ಇರುವುದು ಕಾಣಿಸುತ್ತಿದೆ.

    ನಿಮಗೆ ಅವರ ಜೊತೆಯಲ್ಲಿಯೇ ಮಾತನಾಡಲು, ಕಂಫರ್ಟ್ ಎಂದು ಅನಿಸಿದರೆ, ಪ್ರೀತಿ, ವಿಶ್ವಾಸವಿದ್ದರೆ ಅವರೊಂದಿಗೆಯೇ ಇರಿ ತೊಂದರೆ ಏನು ಇಲ್ಲ. ನಾವು ಸಾವಿರ ತರ ನೋಡಿಕೊಳ್ಳುತ್ತೇವೆ. ಎಲ್ಲರ ದೃಷ್ಟಿ ಒಂದೇ ರೀತಿ ಇರುವುದಿಲ್ಲ. ನಾನು ನನ್ನ ವೀವ್‍ನಲ್ಲಿ ಹೇಳುತ್ತೇನೆ. ನೀವು ನಿಮ್ಮ ವೀವ್‍ನಲ್ಲಿ ಯೋಚನೆ ಮಾಡಿಕೊಳ್ಳಿ ಅಷ್ಟೇ ಎಂದು ಹೇಳುತ್ತಾರೆ.

    ನಂತರ ದಿವ್ಯಾ ಸುರೇಶ್ ಬೇರೆ ರೀತಿ ಏನಾದರೂ ಹೊರಗಡೆ ಬಿಂಬಿಸುತ್ತಿದ್ದಿಯಾ ಎಂದು ಕೇಳಿದಾಗ, ಪ್ರಿಯಾಂಕ ಹಾಗೇ ಏನೆಲ್ಲ. ನೀವಿಬ್ಬರು ಒಳ್ಳೆಯ ಫ್ರೆಂಡ್ಸ್, ಮಂಜು ಅವರು ಕೂಡ ಯಾವತ್ತು ಕೆಟ್ಟ ರೀತಿ ನಡೆದುಕೊಂಡಿಲ್ಲ. ನೀವು ಕೂಡ ಯಾವತ್ತು ಹಾಗೇ ನಡೆದುಕೊಂಡಿಲ್ಲ. ನನಗೆ ನೀವಿಬ್ಬರು ಕಪಲ್ ರೀತಿ ಕಾಣಿಸಿಲ್ಲ. ನೀವಿಬ್ಬರು ಬೆಸ್ಟ್ ಫ್ರೆಂಡ್ಸ್ ರೀತಿ ಇದ್ದೀರಾ ಎಂದು ಪ್ರಿಯಾಂಕ ಅಭಿಪ್ರಾಯ ತಿಳಿಸಿದ್ದಾರೆ.

  • ಪ್ರಿಯಾಂಕ ಎಂಟ್ರಿಯಾಗ್ತಿದ್ದಂತೆ ಪಂಚಿಂಗ್ ಡೈಲಾಗ್ ಹೊಡೆದ ಶಮಂತ್!

    ಪ್ರಿಯಾಂಕ ಎಂಟ್ರಿಯಾಗ್ತಿದ್ದಂತೆ ಪಂಚಿಂಗ್ ಡೈಲಾಗ್ ಹೊಡೆದ ಶಮಂತ್!

    ಬಿಗ್‍ಬಾಸ್ ಶೋನಲ್ಲಿ ದಿನೇ ದಿನೆ ಕಾಂಪಿಟೇಷನ್ ಹೆಚ್ಚಾಗುತ್ತಿದೆ. ಕಳೆದ ವಾರ ಬಿಗ್‍ಬಾಸ್ ಮನೆಗೆ ವೈಲ್ಡ್‍ಕಾರ್ಡ್ ಮೂಲಕ ಚಕ್ರವರ್ತಿ ಚಂದ್ರಚೂಡರವರು ಆಗಮಿಸಿದ್ದರು. ಇದೀಗ ದೊಡ್ಮನೆ ಸ್ಪರ್ಧಿಗಳಿಗೆ ಕಾಂಪಿಟೇಷನ್ ನೀಡಲು ಮತ್ತೋರ್ವ ಹೊಸ ಸ್ಪರ್ಧಿ ಎಂಟ್ರಿ ಕೊಟ್ಟಿದ್ದಾರೆ.

    ಇಷ್ಟು ದಿನ ಎಷ್ಟೇ ಟ್ರೈ ಮಾಡಿದರೂ ಒಂದು ಹುಡುಗಿಯೂ ಬೀಳದ ಶಮಂತ್ ಇನ್ನೂ ಸೈಲೆಂಟ್ ಆಗಿದ್ದರೆ ನಡೆಯುವುದಿಲ್ಲ ಎಂದು ನಿನ್ನೆ ಪಂಚಿಂಗ್ ಡೈಲಾಗ್ ಹೊಡೆಯುವ ಮೂಲಕ ವಾಯ್ಸ್ ರೈಸ್ ಮಾಡಿದ್ದಾರೆ. ಹೌದು ಶಮಂತ್, ನಿನ್ನೆ ಮನೆಗೆ ಬಂದ ಪ್ರಿಯಾಂಕಗೆ ಎಲ್ಲರ ಮುಂದೆ ನಿಮ್ಮ ಊಟ ಆಯಿತಾ? ಎಂದು ಕೇಳುತ್ತಾರೆ. ಆಗ ಇಲ್ಲ ಎಂದು ಪ್ರಿಯಾಂಕ ಹೇಳಿದಾಗ, ಡಿಫರೆಂಟ್ ಅಂದರೆ ‘ಚಿಕ್ಕು ಚಿಕನ್’ ಎರಡು ಮನೆಗೆ ಬಂದಿದ್ದಾರೆ ಎಂದು ಡೈಲಾಗ್ ಹೊಡೆದಿದ್ದಾರೆ.

    ಆನ್ ದಿ ಸ್ಪಾರ್ಟ್ ಶಮಂತ್ ಹೊಡೆದ ಪಂಚಿಂಗ್ ಡೈಲಾಗ್ ಕೇಳಿ ಅಚ್ಚರಿಗೊಂಡ ಮನೆಯ ಮಂದಿ ಕಮಾನ್ ಶಮಂತ್, ಕಮಾನ್ ಶಮಂತ್ ಎಂದು ಎದ್ದು ನಿಂತು ಜೋರಾಗಿ ಚಪ್ಪಾಳೆ ಹೊಡೆಯುತ್ತಾ ಹಾಸ್ಯ ಮಾಡಿದ್ದಾರೆ.

    ನಿನ್ನೆ ಬಿಗ್‍ಬಾಸ್ ಮನೆಗೆ ಚಿಕನ್ ಹಿಡಿದುಕೊಂಡು ವೈಲ್ಡ್ ಕಾರ್ಡ್ ಮೂಲಕ ಪ್ರಿಯಾಂಕ ತಿಮ್ಮೇಶ್ ಎಂಟ್ರಿ ನೀಡಿದ್ದಾರೆ. ಮೊದಲಿಗೆ ಬಂದ ಕೂಡಲೇ, ನನ್ನ ಹೆಸರು ಪ್ರಿಯಾಂಕ ತಿಮ್ಮೇಶ್, ನಾನು ಭದ್ರಾವತಿ ಹುಡುಗಿ. ನನ್ನ ವೃತ್ತಿ ಜೀವನ ಆರಂಭವಾಗಿದ್ದು ಪ್ರೀತಿಯಿಂದ ಸಿರಿಯಲ್‍ನಿಂದ ಬಳಿಕ ನಾನು ಮೊದಲ ಬಾರಿಗೆ ಗಣಪ ಸಿನಿಮಾದಲ್ಲಿ ಅಭಿನಯಿಸಿದೆ. ನಂತರ ಪಟಾಕಿ, ಭೀಮ ಸೇನಾ ನಳ ಮಹಾರಾಜ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಶುಗರ್ ಲೇಸ್ ಹಾಗೂ ಅರ್ಜುನ್ ಗೌಡ ನನ್ನ ಮುಂದಿನ ಸಿನಿಮಾ ಬಿಡುಗಡೆಗೆ ತಯಾರಾಗುತ್ತಿದೆ ಎಂದು ಮನೆಯ ಸದಸ್ಯರೊಂದಿಗೆ ತಮ್ಮ ಪರಿಚಯ ಮಾಡಿಕೊಂಡರು.

    ನಿಮ್ಮೆಲ್ಲರನ್ನು ಇಷ್ಟು ದಿನ ನಾನು ಟಿವಿಯಲ್ಲಿ ನೋಡುತ್ತಿದ್ದೆ. ಇದೀಗ ಏಕ್ಸೈಟ್ ಆಗಿದ್ದೇನೆ. ಮುಂದೆ ಏನು ಎಂಬುವುದು ನನಗೆ ಗೊತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

     

  • ಪ್ರಿಯಾಂಕಾ ಔಟ್- ಬಿಗ್ ಮನೆಗೆ ಹೋದ, ಬಂದ ದಿನಕ್ಕಿದೆ ಸಾಮ್ಯತೆ

    ಪ್ರಿಯಾಂಕಾ ಔಟ್- ಬಿಗ್ ಮನೆಗೆ ಹೋದ, ಬಂದ ದಿನಕ್ಕಿದೆ ಸಾಮ್ಯತೆ

    – ಎರಡು ದಿನಗಳ ಬಗ್ಗೆ ಹೇಳಿ ಪ್ರಿಯಾಂಕಾ ತಾಯಿ ಕಣ್ಣೀರು

    ಬೆಂಗಳೂರು: ಬಿಗ್‍ಬಾಸ್ ರಿಯಾಲಿಟಿ ಶೋ ಫಿನಾಲೆಗೆ ಒಂದೇ ವಾರ ಉಳಿದಿದೆ. ಈ ವಾರ ಪ್ರಿಯಾಂಕಾ ಬಿಗ್‍ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಪ್ರಿಯಾಂಕಾ ಬಿಗ್‍ಬಾಸ್ ಮನೆಗೆ ಎಂಟ್ರಿ ಪಡೆದ ದಿನ ಮತ್ತು ಹೊರ ಬಂದ ದಿನಕ್ಕಿರುವ ಸಾಮ್ಯತೆಯನ್ನು ಹೇಳಿ ಅವರ ತಾಯಿ ಕಣ್ಣೀರು ಹಾಕಿದ್ದಾರೆ.

    ಪ್ರಿಯಾಂಕಾ ಮನೆಯಿಂದ ಹೊರ ಬಂದು ನಟ ಸುದೀಪ್ ಅವರ ಜೊತೆ ವೇದಿಕೆ ಹಂಚಿಕೊಂಡರು. ಮಗಳು ವೇದಿಕೆಯತ್ತ ಬರುತ್ತಿದ್ದಂತೆ ಪ್ರಿಯಾಂಕಾರ ತಾಯಿ ಕಣ್ಣೀರು ಹಾಕಲಾರಂಭಿಸಿದರು. ಈ ವೇಳೆ ಸುದೀಪ್, ಮಗಳು ಮನೆಯಿಂದ ಹೊರ ಬಂದಿದ್ದಕ್ಕೆ ನೋವಾಯ್ತಾ ಅಥವಾ ಬಹಳ ದಿನಗಳ ನಂತರ ನೋಡಿ ಖುಷಿಗೆ ಕಣ್ಣೀರು ಹಾಕುತ್ತಿದ್ದೀರಾ ಎಂದು ಪ್ರಶ್ನಿಸಿದರು.

    ಸುದೀಪ್ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ ತಾಯಿ, ಬಿಗ್‍ಬಾಸ್ ಮನಗೆ ಹೋದ ದಿನವೇ ಅವರ ತಂದೆಯ ಪೂಜೆ ಇತ್ತು. ಇಂದು ಸಹ ತಂದೆಯ ಪೂಜೆಯ ದಿನವೇ ಹೊರ ಬಂದಿದ್ದಾಳೆ ಎಂದು ಹೇಳಿ ಭಾವುಕರಾದರು. ಅಮ್ಮನ ಮಾತು ಕೇಳಿದ ಕೂಡಲೇ ಭಾವುಕರಾದ ಪ್ರಿಯಾಂಕಾ ತಾಯಿ ಬಳಿ ತೆರಳಿ ಸಮಾಧಾನಪಡಿಸಿದರು.

    ಈ ಹಿಂದೆಯೂ ಪ್ರಿಯಾಂಕಾ ಹಲವು ಬಾರಿ ತಮ್ಮ ತಂದೆಯನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದ್ದರು. ಬಿಗ್‍ಬಾಸ್ ಮನೆಗೂ ಹೋಗುವ ಮೊದಲು ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸುವ ವೇಳೆಯೂ ಪ್ರಿಯಾಂಕಾ ತಮ್ಮ ತಂದೆಯನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದ್ದರು.

    ಸದ್ಯ ಮನೆಯಲ್ಲಿ ದೀಪಿಕಾ ದಾಸ್, ಭೂಮಿ ಶೆಟ್ಟಿ, ಶೈನ್ ಶೆಟ್ಟಿ, ಹರೀಶ್ ರಾಜ್, ಕುರಿ ಪ್ರತಾಪ್ ಮತ್ತು ವಾಸುಕಿ ವೈಭವ್ ಉಳಿದುಕೊಂಡಿದ್ದರು. ಈ ವಾರದ ಮಧ್ಯೆದಲ್ಲಿ ಒಬ್ಬ ಸ್ಪರ್ಧಿ ಮನೆಯಿಂದ ಹೊರ ಬರಲಿದ್ದಾರೆ ಎಂಬುದನ್ನು ಸುದೀಪ್ ಶನಿವಾರದ ಸಂಚಿಕೆಯಲ್ಲಿ ಖಚಿತಪಡಿಸಿದ್ದಾರೆ. ಇತ್ತ ಪ್ರಿಯಾಂಕಾ ಮನೆಯಿಂದ ಹೊರ ಹೋಗುತ್ತಿದ್ದಂತೆ ಎಲ್ಲ ಸದಸ್ಯರು ಭಾವುಕರಾದರು.