Tag: Priyanka Timmesh

  • ಪ್ರಿಯಾಂಕಾಗೆ ಅಶ್ಲೀಲ ಸನ್ನೆ – ಚಕ್ರವರ್ತಿ ವಿರುದ್ಧ ವೀಕ್ಷಕರು ಗರಂ

    ಪ್ರಿಯಾಂಕಾಗೆ ಅಶ್ಲೀಲ ಸನ್ನೆ – ಚಕ್ರವರ್ತಿ ವಿರುದ್ಧ ವೀಕ್ಷಕರು ಗರಂ

    ಬಿಗ್‍ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಲ್ಲಿ ಚಕ್ರವರ್ತಿ ಚಂದ್ರಚೂಡ್ ಕೊಂಚ ಡಿಫರೆಂಟ್ ಆಗಿದ್ದಾರೆ. ಆದರೆ ಈ ಬಾರಿ ಚಕ್ರವರ್ತಿ ಮಾಡಿರುವ ಒಂದು ಸನ್ನೆಯಿಂದ ಬಿಗ್‍ಬಾಸ್ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಬಿಗ್‍ಬಾಸ್‍ನಲ್ಲಿ ಚಕ್ರವರ್ತಿ ಚಂದ್ರಚೂಡ್ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ಅವರು ಅಶ್ಲೀಲ ಪದ ಬಳಕೆ ಮಾಡಿದ್ದರಿಂದ ಬೀಪ್ ಸೌಂಡ್ ಹಾಕಲಾಗಿತ್ತು. ಇದಕ್ಕೆ ಕಿಚ್ಚ ಸುದೀಪ್ ಅಸಮಾಧಾನ ಹೊರ ಹಾಕಿದ್ದರು. ಚಕ್ರವರ್ತಿ ಅವರೇ ನಿಮಗೆ ಇರುವ ಜ್ಞಾನಕ್ಕೆ ಇದು ಸಲ್ಲುವುದಿಲ್ಲ ಎಂದಿದ್ದರು. ಅದಾದ ನಂತರದಲ್ಲಿ ನಾನು ತಪ್ಪನ್ನು ತಿದ್ದಿಕೊಳ್ಳುತ್ತೇನೆ ಎಂದಿದ್ದರು ಚಕ್ರವರ್ತಿ. ಇದಾದ ಒಂದೇ ವಾರದಲ್ಲಿ ಅವರು ಮತ್ತೆ ಅದೇ ತಪ್ಪನ್ನು ಮಾಡಿದ್ದಾರೆ.

    ಪ್ರಿಯಾಂಕಾ ಹಾಗೂ ಚಕ್ರವರ್ತಿ ನಡುವೆ ಒಂದು ಗೆಳೆತನ ಬೆಳೆದಿತ್ತು. ಆದರೆ ಬಿಗ್‍ಬಾಸ್ ಮನೆಯಲ್ಲಿ ಅದು ದಿಕ್ಕು ಬದಲಿಸಿಕೊಂಡಿತ್ತು. ಪ್ರಿಯಾಂಕಾ, ಶಮಂತ್ ಅನ್ಯೋನ್ಯವಾಗಿದ್ದಾರೆ ಎನ್ನುವುದೇ ಚಕ್ರವರ್ತಿ ಬೇಸರಕ್ಕೆ ಕಾರಣವಾಗಿತ್ತು. ಈ ಘಟನೆ ನಂತರದಲ್ಲಿ ಇಬ್ಬರೂ ಒಬ್ಬರ ಮುಖ ಒಬ್ಬರು ನೋಡುತ್ತಿರಲಿಲ್ಲ. ಈ ಜಗಳ ವಿಚಾರ ಸುದೀಪ್ ಮುಂದೆ ಕೂಡಾ ಪ್ರಸ್ತಾಪವಾಗಿತ್ತು. ಸುದೀಪ್ ಅವರು ಇಬ್ಬರಿಗೂ ಬುದ್ಧವಾದವನ್ನು ಹೇಳಿ ರಾಜಿ ಮಾಡಿಸಿದ್ದರು. ಆದರೆ ಮತ್ತೆ ಅದೇ ಮುನಿಸು, ಜಗಳ ಮತ್ತೆ ಮಂದುವರಿದಿತ್ತು.

    ಪ್ರಿಯಾಂಕಾ ತಿಮ್ಮೇಶ್ ಔಟ್ ಆಗಿದ್ದು ದೊಡ್ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಅವರಿಗೆ ಬಿಗ್‍ಬಾಸ್ ವಿಶೇಷ ಅಧಿಕಾರ ಒಂದನ್ನು ನೀಡಿದ್ದರು. ಅದರನ್ವಯ ಒಬ್ಬರನ್ನು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಮಾಡಬೇಕು. ಆಗ ಪ್ರಿಯಾಂಕಾ ತೆಗೆದುಕೊಂಡ ಹೆಸರು ಚಕ್ರವರ್ತಿ ಚಂದ್ರಚೂಡ್ ಅವರದ್ದು. ಇದು ಚಕ್ರವರ್ತಿ ಚಂದ್ರಚೂಡ್‍ಗೆ ಅಸಮಾಧಾನ ತರಿಸಿದೆ. ಹೀಗಾಗಿ ಪ್ರಿಯಾಂಕಾಗೆ ಅವರು ಮಧ್ಯದ ಬೆರಳು ತೋರಿಸಿ ಅಶ್ಲೀಲ ಸನ್ನೆ ಮಾಡಿದ್ದಾರೆ.

    ಚಕ್ರವರ್ತಿ ಚಂದ್ರಚೂಡ್ ಎಷ್ಟೇ ಹೇಳಿದರೂ ತಮ್ಮ ತಪ್ಪನ್ನು ತಿದ್ದಿಕೊಳ್ಳುವಂತೆ ಕಾಣುತ್ತಿಲ್ಲ. ಪದೇ ಪದೇ ಬಿಗ್‍ಬಾಸ್ ಚೌಕಟ್ಟನ್ನು ಮೀರಿ ನಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದಾರೆ. ಆದರೆ ಅವರು ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಈ ಬಾರಿ ಬಿಗ್‍ಬಾಸ್ ನಿಯಮವನ್ನು ಮತ್ತೆ ಮೀರಿದ್ದಾರೆ. ಅಷ್ಟೇ ಅಲ್ಲ ವೀಕ್ಷಕರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಈ ವಾರದ ವೀಕೆಂಡ್‍ನಲ್ಲಿ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳೋದು ಪಕ್ಕಾ.

  • ಮುಂದಿನ ವಾರವೇ ಹೊರಗೆ ಹೋಗು ನೀನು- ಪ್ರಿಯಾಂಕಾ

    ಮುಂದಿನ ವಾರವೇ ಹೊರಗೆ ಹೋಗು ನೀನು- ಪ್ರಿಯಾಂಕಾ

    ಪ್ರಿಯಾಂಕಾ ಮನೆಯೊಳಗೆ ಹೋದ ಮೇಲೆ ಯಾರೊಂದಿಗೆ ಅಷ್ಟಾಗಿ ಬೆರೆಯುತ್ತಿಲ್ಲ ಎಂಬ ಆರೋಪವನ್ನು ಮನೆಮಂದಿ ಆಗಾಗ ಹೇಳುತ್ತಿರುತ್ತಾರೆ. ಈ ವಾರ ಇದೀಗ ಕಳಪೆ ಪಟ್ಟಿಯನ್ನು ನೀಡಿ ಜೈಲಿಗೆ ಕಳುಹಿಸಿದ್ದಾರೆ.

    ಪ್ರಿಯಾಂಕಾ ತಿಮ್ಮೇಶ್ ಬಿಗ್‍ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕಾಲಿಟ್ಟಿದ್ದಾರೆ. ಮನೆಗೆ ಬಂದು ಮೂರು ವಾರ ಕಳೆಯುವುದರೊಳಗೆ ಸಾಕಷ್ಟು ಕಿರಿಕ್, ಜಗಳಗಳು, ಮನಸ್ತಾಪಗಳು ನಡೆದಿವೆ. ಗೇಮ್‍ನಲ್ಲಿ ಸರಿಯಾದ ತೀರ್ಪು ಸಿಗದೇ ಇದ್ದಾಗ, ತೀರ್ಪುಗಾರರ ವಿರುದ್ಧವೇ ಗರಂ ಆಗಿದ್ದಾರೆ. ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ಶಮಂತ್ ಜೊತೆಗೆ ಒಂಚೂರು ಕ್ಲೋಸ್ ಆಗಿ ಇರ್ತಾರೆ. ಆದರೆ ಇವಾಗ ಶಮಂತ್‍ಗೆ, ನಿಂಗೆ ನಾಚಿಕೆ ಆಗ್ಬೇಕು, ಮುಂದಿನ ವಾರವೇ ಹೊರಗೆ ಹೋಗು ನೀನು ಅಂತ ಶಾಪ ಹಾಕಿದ್ದಾರೆ.

     ಶಮಂತ್ ಜೈಲಿನಲ್ಲಿರುವ ಪ್ರಿಯಾಂಕಳ ಜೊತೆಗೆ ಮಾತನಾಡಲು ಬಂದಿದ್ದಾರೆ. ಆಗ ಪ್ರಿಯಾಂಕ ನಾನಿಲ್ಲಿಂದ ಹೊರಗೆ ಬಂದಮೇಲೆ ನಿನ್ನ ಜೊತೆ ನಯಾಪೈಸೆಯೂ ಸೇರುವುದಿಲ್ಲ. ಯಾಕೆಂದರೆ ನನಗೆ ಇಷ್ಟಬಂದವರ ಜೊತೆಗೆ ನಾನು ಸೇರುತ್ತೇನೆ. ನಾನಿಲ್ಲಿಗೆ ಸಂಬಂಧಗಳನ್ನು ಹುಟ್ಟುಹಾಕೋಕೆ, ಎಲ್ಲರೊಂದಿಗೆ ಬೆರೆಯುವುದಕ್ಕೆ ಬಂದಿಲ್ಲ. ನಾನು ಆಟ ಆಡಬೇಕು, ನಾನೇನೂ ಅಂತ ಸಾಬೀತು ಮಾಡಬೇಕು ಎಂದು ಸಿಟ್ಟಿನಿಂದ ಶಮಂತ್ ಬಳಿ ಹೇಳಿದ್ದಾರೆ.

     ಹಾಗಾದರೆ ಯಾರು ಜೊತೆ ಮಾತಾಡಲ್ವಾ? ಎಂದು ಶಮಂತ್ ಪ್ರಿಯಾಂಕಾಗೆ ಪ್ರಶ್ನಿಸಿದ್ದಾರೆ. ನಾನಾಗಿಯೇ ಮಾತನಾಡಲ್ಲ. ಮಾತಾಡಿದ್ರೆ, ಮಾತಾಡಿಸ್ತೀನಿ. ಅವರಿಗೂ ನನ್ನ ಜೊತೆ ಮಾತನಾಡಬೇಕು ಅಂತ ಇರಬೇಕಪ್ಪ. ಇಲ್ಲಿಂದ ಹೊರಗೆ ಹೋದಮೇಲೆಯೂ ನೀನೊಬ್ಬ ಬೆಸ್ಟ್ ಫ್ರೆಂಡ್ ಆಗ್ತೀಯಾ ಅಂತ ನಾನು ಅಂದ್ಕೊಂಡಿದ್ದೆ. ಇನ್ನೊಬ್ಬರ ಜೊತೆ ಇನ್ವಾಲ್ಮೆಂಟ್ ಇಲ್ಲ ನೀನು ಯಾಕ್ ಯೋಚನೆ ಮಾಡ್ತೀಯಾ. ನಿನ್ನ ಜೊತೆ ನಾನು ಮಾತಾಡಲ್ವಾ? ಹೇಳು ಎಂದು ಪ್ರಿಯಾಂಕ ಶಮಂತ್‍ಗೆ ಹೇಳಿದ್ದಾರೆ. ಬಿಗ್‍ಬಾಸ್ ಹತ್ರ ನನಗೆ ಅನ್ನಿಸಿದ್ದನ್ನು ನಾನು ಹೇಳಿದ್ದೇನೆ ಎಂದು ಶಮಂತ್ ಹೇಳಿದ್ದಾರೆ.

    ಮುಂದಿನ ವಾರವೇ ಈ ಮನೆಯಿಂದ ಹೊರಗೆ ಹೋಗು ನೀನು. ನಂದೇ ಶಾಪ. ನಾಚಿಕೆ ಆಗ್ಬೇಕು. ಕಳಪೆ ಅಂತ ಹೇಳಿಬಿಟ್ಟು, ಕಳಪೆ ಜಾಗದಲ್ಲಿ ಬಂದು ಮಾತಾಡ್ತಾ ಇದಿಯಲ್ಲ. ನೀನು ಬಂದು ಹತ್ತು ವಾರ ಆಗಿದೆ. ಈಗ ಇನ್ನೊಬ್ಬರ ಬಾಯಲ್ಲಿ ಇವಾಗ ಚೆನ್ನಾಗಿ ಆಡ್ತಾ ಇದ್ದಾನೆ ಪರವಾಗಿಲ್ಲ ಅಂತ ಅನ್ನಿಸ್ಕೋತಿಯಲ್ಲ ಎಂದು ಪ್ರಿಯಾಂಕ ಹೇಳಿದ್ದಾರೆ. ಅಂದ್ರೆ ಇವಾಗಲೇ ಬಿಗ್ ಬಾಸ್ ಕಪ್ ಕೊಟ್ಟು ಕಳಿಸಬೇಕಾಗಿತ್ತಾ? ಎಂದು ಶಮಂತ್ ಹೇಳಿದ್ದಾರೆ. ಮೂರು ವಾರದಲ್ಲೇ ನಿನ್ನನ್ನ ನೀನು ಸಾಬೀತು ಮಾಡ್ಕೋಬೇಕಿತ್ತು. 10 ವಾರದವರೆಗೂ ಕಾಯಬೇಕಿತ್ತಾ? ಅದೇನು ಮಾಡುತ್ತೀಯಾ ನಾನು ನೋಡುತ್ತೇನೆ ಎಂದು ಶಮಂತ್ ಎಂದು ಪ್ರಿಯಾಂಕ ಹೇಳಿದ್ದಾರೆ.

    ಮನೆಮಂದಿ ಪ್ರಿಯಾಂಕಾಗೆ ಜೈಲಿಗೆ ಹಾಕಿರುವುದು ಕೋಪಕ್ಕೆ ಕಾರಣವಾಗಿದೆ. ಮನೆಮಂದಿ ಮೇಲೆ ಇರುವ ಸಿಟ್ಟನ್ನು ಪ್ರಿಯಾಂಕಾ ಅಮಾಯಕ ಶಮಂತ್ ಮೇಲೆ ಹಾಕಿದ್ದಾರೆ. ಶಮಂತ್ ಮಾತ್ರ ಏನೂ ಮಾತನಾಡದೆ ಸುಮ್ನೆ ಆಗಿದ್ದಾರೆ.